ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನದ ಹನಿಗಳು

ಅನಿತ ಕೃಷ್ಣಮೂರ್ತಿ

ಸಿದ್ದವಾದ ಸೆಳೆತದ ಹೊಸ್ತಿಲು

ಸದ್ದಿರದೆ ಸುಳಿದಾಡಿದೆ ಸ್ನೇಹ ಸೇತುವೆ

ಹತ್ತಲು

ಸಾಧಿಸಲು ಗುರಿ ಮುಂದಿನ ಹಾದಿ ನೂರಾರು

ಬಾಧಿಸಲು ಕಾಯಬಹುದು ಆಲೋಚನೆಯ

ಕರಾರು

ಮನಸಲಿ ಕತ್ತಲಿರುವಾಗ

ಕಣ್ಣಿನ ಹೊಳಪು ಬೆಳಕಾಗಿ

ಸುತ್ತಲಾಗಲಿಲ್ಲ

ನಾನೇಕೆ ಹುಡಕಲಿ ನಿನ್ನ ಅಲ್ಲಿ ಇಲ್ಲಿ

ಮಾಸದಂತೆ ಉಳಿದಿದೆ ನಿನ್ನದೇ ಚಿತ್ರ

ಮನದ ಭಿತ್ತಿಯಲಿ

ಹಟದ ಬೇಲಿಯನ್ನೇ

ಸುತ್ತಿಕೊಂಡಿದ್ದ ಮನಸು

ದಾಟಿ ಬಂದಿತ್ತು ಕಂಡು

ನಿನ್ನ ಮಂದಸ್ಮಿತದ ಸೊಗಸು

ಕಾದಿದೆ ತೆಪ್ಪವೊಂದು ಸೇರಿಸಲು

ದೂರ ತೀರವನು

ಕಾಡಿದೆ ನೆನಪೊಂದು ಹೊರಲಾರದೆ

ದೂರಿನ ಭಾರವನು

ನಾನೇಕೆ ಸ್ಪರ್ಧಿಸಲಿ ನಿನ್ನೊಂದಿಗೆ ಹೂವೇ

ನಮ್ಮಿಬ್ಬರ ಗುರಿ ಒಂದೇ… ಒಲವೇ…

ಅಲ್ಲವೆ!

ಬೊಗಸೆಯಲ್ಲಿ ಹಿಡಿದ ಪ್ರೀತಿಗೂ

ಕಣ್ಣ ರೆಪ್ಪೆಯಂತೆ ಕಾಪಾಡುವ ಮಮತೆಗೂ

ಪೈಪೋಟಿಯೇ?

 ಎಷ್ಟು ಮಾತನಾಡಿದೆನೋ ಹೊರಗೆ

ಅಷ್ಟು ಮುಚ್ಚಿಟ್ಟಿರುವೆನು ಮೌನದೊಳಗೆ

About The Author

Leave a Reply

You cannot copy content of this page

Scroll to Top