ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಜಿ. ಉಮಾಮಹೇಶ್ವರ್ ಅವರ ತೆಲುಗು ಕಥೆ “ಶ್ರೀಶೈಲಂ – ಶಿವರಾತ್ರಿ”ಕನ್ನಡಾನುವಾದ ರಂಗನಾಥ ರಾಮಚಂದ್ರರಾವು

ಅನುವಾದ ಸಂಗಾತಿ ಶ್ರೀಶೈಲಂ -ಶಿವರಾತ್ರಿ ತೆಲುಗು ಮೂಲ –ಜಿ. ಉಮಾಮಹೇಶ್ವರ್ಕನ್ನಡಕ್ಕೆ-ರಂಗನಾಥ ರಾಮಚಂದ್ರರಾವು ನಾವು ಸುನ್ನಿಪೆಂಟದಲ್ಲಿ  ಆಚರಿಸಿದ ಮೂರು ಶಿವರಾತ್ರಿಗಳಲ್ಲಿ ನನ್ನ ಏಳನೇ ತರಗತಿಯ ಶಿವರಾತ್ರಿಗೆ ಒಂದು ವಿಶೇಷವಿದೆ. ಅದು ನಾನು ಮೊಟ್ಟಮೊದಲಬಾರಿಗೆ ಗೆಳೆಯರೊಂದಿಗೆ ಶ್ರೀಶೈಲಕ್ಕೆ ನಡೆದುಕೊಂಡು ಹೋಗಿರುವ ಶಿವರಾತ್ರಿ. ಪ್ರತಿಬಾರೀ ಕುಟುಂಬವೆಲ್ಲಾ ಯಾವುದಾದರೂ ಒಂದು  ಜೀಪುನಲ್ಲಿ ಹೊರಟು ಸದಾಶಿವ ಛತ್ರದಲ್ಲಿ ಉಳಿದುಕೊಂಡು, ಅಲ್ಲೇ ನಮ್ಮ ಲಗೆಜುಗಳನ್ನು  ಮಡಗಿ ದೇವರ ದರ್ಶನಕ್ಕೆ ಹೋಗುತ್ತಿದ್ದೆವು. ಆದರೆ ಪ್ರತಿಬಾರೀ ಎಲ್ಲರೂ ಆಸೆ ತೋರಿಸುವ ಕಾಲುದಾರಿ ಯಲ್ಲಿ ಹೋಗಬೇಕೆಂದು ಬಹಳ ಕಾಲದಿಂದ ಒಂದು ಆಸೆ ಯಿತ್ತು. ಅದಕ್ಕಾಗಿ  ಆ ಆ ಬಾರಿ ಹಿರಿಯರನ್ನು ಒಪ್ಪಿಸಿ ಗೆಳೆಯರೊಂದಿಗೆ ಹೊರಟೆ. ನಮ್ಮ ಮನೆಯಲ್ಲಿ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುತ್ತಾರೆಂದು ನಾನು ಊಹಿಸಲಿಲ್ಲ.  ಆದರೆ ಅವರು ಒಂದು  ಕಂಡಿಷನ್ ಮೇಲೆ ಓಕೆ ಅಂದರು. ಹೋಗುವಾಗ ಗೆಳೆಯರೊಂದಿಗೆ ಹೋದರೂ ಅಲ್ಲಿ ಸದಾಶಿವ ಸತ್ರದ ಬಳಿ ಮತ್ತೆ ತಮ್ಮನ್ನು ಭೇಟಿಯಾಗಬೇಕು ಎಂಬ ಷರತ್ತು ಹಾಕಿ ಕಳುಹಿಸಿದರು.ಶಿವರಾತ್ರಿಯ ಹಿಂದಿನ ದಿನ ಮಲ್ಲಿ, ರಮಣ, ಜೀ. ಶೀನು, ಸತ್ತಾರು, ಎಂ. ಪ್ರಸಾದ್, ಇನ್ನೂ  ಕೆಲವು ಸ್ನೇಹಿತರು  ಶಾಲೆಯ ಬಳಿ ಭೇಟಿಯಾಗಲು ನಿರ್ಧರಿಸಿದವು. ಎಲ್ಲರೂ ಬಂದಾಗ,ಅಲ್ಲಿಂದ ಒಟ್ಟಿಗೆ ಕೇಕೆಹಾಕುತ್ತಾ ಶಿಳ್ಳೆ ಹೊಡೆಯುತ್ತಾ  ಐ.ಟಿ.ಐ. ದಾಟಿ ಮುಂದಕ್ಕೆ ಹೋಗುತ್ತಿದ್ದೆವು. ನನಗೆ ಈ ದಾರಿಯಲ್ಲಿ ಬರುತ್ತಿರುವುದು ಇದೇ ಮೊದಲು. ಅವರಂತೆ ವೇಗವಾಗಿ ಹೆಜ್ಜೆಗಳು ಹಾಕಲು ಸಾಧ್ಯವಾಗುತ್ತ ಇಲ್ಲ. ಸತ್ತಾರು,ರಮಣ,ನನ್ನೊಂದಿಗೆ ನಿಧಾನವಾಗಿ ನಡೆಯುತ್ತಿದ್ದಾರೆ. ಸ್ವಲ್ಪ ದೂರ ಸಾಗಿದಮೇಲೆ ‘ಸಾಕಲಿ ಸೆಲ/ಹಳ್ಳ’ ತಲುಪಿದೆವು. ಅಲ್ಲೊಂದು ಪುಟ್ಟ ಹಳ್ಳ ಹರಿಯುತ್ತಿದೆ. ಅಲ್ಲೇ ನಾವು  ಬೇಕಾದಷ್ಟುನೀರು ಕುಡಿದು, ಸ್ವಲ್ಪ ನೀರಿನಲ್ಲಿ ಪಾದಗಳನ್ನು ಒದ್ದೆಮಾಡಿಕೊಂಡು, ಒಬ್ಬರಮೇಲೊಬ್ಬರು ನೀರು ಸುರಿದುಕೊಳ್ಳುತ್ತಾ, ತಮಾಷೆಮಾಡುತ್ತಾ ನಡೆಯುತ್ತಿದ್ದೇವು. ನಮ್ಮ ಜಾತ್ರೆ ಕೋಲಾಹಲದಿಂದ ನಡೆಯುತ್ತಿದೆ.ಅಲ್ಲಿಂದ ಹಾಗೆ ನಡೆಯುತ್ತಾ ಮುಂದಕ್ಕೆ ಹೋದರೆ ‘ಮಾವಿನ ಹಳ್ಳ ಸಿಗುತ್ತದೆ. ಅಲ್ಲಿ ಮಾವಿನ ತೋಪುಗಳಿದ್ದವು. ಅದಕ್ಕಾಗಿ ಆ ಹೆಸರು ಬಂದಿರಬಹುದೆಂದು ರಮಣ ಹೇಳಿದ. ಹಾಗೆ ಮುಂದೆ ಸಾಗಿದಂತೆ ಕಾಡು ದಟ್ಟವಾಗುತ್ತದೆ. ದಾರಿಯಲ್ಲಿ ಮರ, ಕೊಂಬೆಗಳಿಂದ ಹಣ್ಣು, ಹಾಲಿನಹಣ್ಣು, ಚಿಟಿಮಿಟಿಹಣ್ಣು, ಬಚ್ಚಲಿ ಹಣ್ಣುಗಳನ್ನು  ಯಾರಿಗೆ ಬೇಕಾದನ್ನು  ಅವರು ಹಾಗೆ ಮರಗಳಿಂದ, ಗಿಡಗಳಿಂದ ಕಿತ್ತುಕೊಂಡು ತಿನ್ನುತ್ತಿದ್ದರು. ಮರಗಳಲ್ಲಿ ಇದ್ದ ಹಣ್ಣನ್ನು ಕೊಯ್ದುಕೊಂಡು ತಿನ್ನುವ ಆನಂದವೇ ಬೇರೆ. ಯಾರೋ ಕುಯ್ದು ತಂದು  ಮಾರಿದ ಹಣ್ಣಿನಲ್ಲಿನ  ಸಿಹಿಗಿಂತ, ಆಗಿಂದಾಗಲೆ ಕಿತ್ತುಕೊಂಡು ತಿಂದ ಕಾಡಿನ ಹಣ್ಣುಗಳ ರುಚಿ ತುಂಬಾ ಚೆನ್ನಾಗಿತ್ತು.  ಸುತ್ತಲೂ ಕತ್ತಲಾದಂತಹ ಕಾಡು. ಮರಗಳ ಸಂದುಗಳಿಂದ ಬೀಳುವ ಸೂರ್ಯನ ಕಿರಣಗಳು ಯಾರೋ  ಲಕ್ಷ ವಾಟ್ ಬಲ್ಬು ನಿಂದ ಬೆಳಕು ಚೆಲ್ಲುತ್ತಿರುವಂತೆ, ಕತ್ತಲೆಯ ಪರದೆಗಳನ್ನು ತೆಗೆದುಹಾಕುತ್ತಿವೆ. ಎಂದೂ ಕೇಳದ ಹಕ್ಕಿಗಳ ಕಲರಾವಗಳು, ಅವು ಅರ್ಥವಾದಂತೆ  ಮೂಲೆಮೂಲೆಗಳಿಂದ ಬಂದಿರುವ  ಪ್ರತಿಕ್ರಿಯೆಗಳು, ಅಗಾಗ್ಗ ಜೋರಾಗಿ ನಮ್ಮ ಕೂಗುಗಳು, ಆತಂಕದಿಂದ, ಕಂಪಿಸಿದಂತೆ, ಕಲ್ಲೋಲ ಶಬ್ದಗಳಿಂದ ಬೆಚ್ಚಿಬೀಳಿದಂತೆ ಶಬ್ದಗಳು.  ಅಲ್ಲಲ್ಲಿ ಓತಿಕೇತಗಳೋ , ಅಳಿಲುಗಳೋ, ಮೊಲೆಗಳೋ, ‘ಸರ್ ಸರ್’ ಎಂದು  ಓಡಾಡುತ್ತಿರುವ  ಸದ್ದುಗಳು,  ಹಾವುಗಳಂತಹ ಸರೀಸೃಪಗಳು ವೇಗವಾಗಿ ಹರಿದಾಡುವ  ಶಬ್ದಗಳು, ಎಲ್ಲೋ  ಮೇಲಿಂದ ಧುಮುಕುವ ಜಲಪಾತಗಳ  ಸದ್ದುಗಳು .. ಕಾಡಿನಲ್ಲಿ ನಡೆದುಕೊಂಡು ಹೋಗುವ ಪ್ರಯಾಣ  ಒಂದು ಅದ್ಭುತ.ಹೀಗೆ ಒಂದು ಗಂಟೆ ಪ್ರಯಾಣಮಾಡಿ ಹಠಕೇಶ್ವರ ತಲುಪಿದೆವು. ಇದು ಅತ್ಯಂತ ಶಾಂತಿಯುತ ಸ್ಥಳವಾಗಿದೆ. ಮೂರು ತಿಂಗಳ ಹಿಂದೆ ಕಾರ್ತಿಕ ಮಾಸದಲ್ಲಿ ವನಭೋಜನಕ್ಕೆಂದು ಇಲ್ಲಿಗೆ ಬಂದಿದ್ದೆವು. ಕೆಲವು ಕುಟುಂಬಗಳು ಸೇರಿ ಬೆಳಗಿನಿಂದ  ಸಂಜೆಯವರೆಗೆ ಒಂದು ಇಡೀ ದಿನವನ್ನು ಸಂತೋಷದಿಂದ ಕಳೆಯುವ ಅಪರೂಪದ ತಾಣವಿದು. ನಾವು ಮೇಲಿಂದ ಬಂದಿದ್ದರಿಂದ ಅಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿ, ಮಂಗಗಳೊಂದಿಗೆ ಮರಗಳ ಮೇಲೆ ಹಾರುತ್ತಾ , ಬಾಳೆತೋಟಗಳಲ್ಲಿ ಹಣ್ಣಾಗಿದ್ದ  ಬಾಳೆ ಹಣ್ಣುಗಳನ್ನು  ಹುಡುಕುತ್ತಾ, ಅಲ್ಲಿ ರಾಶಿಯಾಗಿರುವ  ಅಂಜೂರು ಹಣ್ಣುಗಳನ್ನು ಹೊಟ್ಟೆ ಬಿಚ್ಚಿ ನೋಡಿ, ಹುಳಗಳು ಇಲ್ಲವೆಂದು ಖಚಿತಪಡಿಸಿಕೊಂಡೆವು. ಅನಂತರ ಬೇಕಾದಷ್ಟು ತಿಂದು, ನೀರು ಕುಡಿದು ಮತ್ತೆ ನಡೆಯ ತೊಡಗಿದೆವು. ಎದುರುಗೆ  ‘ಪಾಲಧಾರ-ಪಂಚಧಾರ’ದಲ್ಲಿ ಮೆಟ್ಟಿಲು ಇಳಿಯುವ ಸ್ಪರ್ಧೆ  ನಡೆದಿತ್ತು.  ಧಾರಾಕಾರವಾಗಿ ಸುರಿಯುವ ನೀರಿನ ಕೆಳಗೆ ಕೈ ಸಾಚಿ ಆ  ಶುದ್ಧವಾದ ನೀರನ್ನು ಕುಡಿದು, ಸ್ವಲ್ಪ ತಲೆಯ ಮೇಲೆ ಸುರಿದುಕೊಂಡು ಅಲ್ಲಿಂದ ಕಣಿವೆಯತ್ತ ನೋಡಿದರೆ  ಉಂಟಾಗುವ ಭಯವನ್ನು ಕಲ್ಪಿಸಿಕೊಂಡು ಮತ್ತೆ ನೇರವಾಗಿ  ಕಾಡಿನತ್ತ ಪ್ರಯಾಣಿಸಿದೆವು. ಈದಾರಿ ನನಗೆ ಹೊಸದಾದರೂ ಅನೇಕ ಗೆಳೆಯರಿಗೆ ಇದು  ಚೆನ್ನಾಗಿ ಗೊತ್ತಿರುವ ದಾರಿ. ಈ ದಾರಿಯಲ್ಲಿ ಸಾಗುವಾಗ ಅನೇಕರು ತಮ್ಮ ಅನುಭವಗಳನ್ನು ಹೇಳತೊಡಗಿದರು. ಒಂದುಸಲ ಸೈಕಲ್  ಮೇಲೆ ಬರುತ್ತಿರುವಾಗ  ಹತ್ತಿರದಲ್ಲೇ, ಈ ಪ್ರಾಂತದಲ್ಲೇ ಒಂದು ಕರಡಿ  ಅವರ ಹಿಂದೆ ಬಂತೆಂದು , ಆ ಭಯದಲ್ಲಿ ವೇಗ ಹೆಚ್ಚಿಸಬೇಕೆಂದರೆ ಅದು ಏರುದಾರಿ ಆಗಿರುವುದರಿಂದ, ಸೈಕಲ್ ಗಿಂತಲೂ ಓಡುವುದೇ  ಬೆಟರ್ ಎಂದು ಸೈಕಲ್ ಬಿಟ್ಟು ಓಡಿಹೋದೆನೆಂದು ಅಚ್ಚಯ್ಯ  ಹೇಳಿದರಿಂದ, ಇನ್ನೂ ಸ್ವಲ್ಪ ಹತ್ತಿರದಲ್ಲಿನ ಮಗ್ಗುಲಲ್ಲಿ  ತಾನೊಂದು ಹುಲಿಯನ್ನು ನೋಡಿದೆನೆಂದು ಪ್ರಸಾದ್ ಹೇಳಿದ.   ಅಲ್ಲಿರುವ ಚಿಕ್ಕ ಹಳ್ಳದಲ್ಲಿ ದಿನವೂ ನೀರು ಕುಡಿಯಲು ಹುಲಿಗಳು ಬರುತ್ತವೆಯಂತೆ. ಆದರೆ ಈ ಸಮಯದಲ್ಲಿ ಬರುವುದಿಲ್ಲ, ಅದರಿಂದ ಏನೂ ಪರವಾಯಿಲ್ಲ ಎಂದು ಧೈರ್ಯ ಹೇಳಿದರು. ಅಲ್ಲಿಂದ ಸಾರ್ವಜನಿಕರ ಒತ್ತಡ ಹೆಚ್ಚಾಯಿತು. ಇವರೆಲ್ಲಾ ಎಲ್ಲಿಂದ ಬರುತಿದ್ದಾರೆಂದು ತಿಳಿಯಲಿಲ್ಲ . ಆಗ ಮಲ್ಲಿ ‘ಶ್ರೀಶೈಲಕ್ಕೆ ಸೇರಲು  ವೆಂಕಟಾಪುರದಿಂದ ಭೀಮನ ಕೊಳದ ಮೂಲಕ ರಸ್ತೆಯಿರುವುದೆಂದು, ಪ್ರತಿ ವರ್ಷ್ ಆ ರಸ್ತೆಯಲ್ಲಿ  ದೊಡ್ಡ  ಸಂಖ್ಯೆಯಲ್ಲಿ ಭಕ್ತರು ಶ್ರೀಶೈಲವನ್ನು ಸೇರುತ್ತಾರೆ’  ಎಂದು ಹೇಳಿದ.ಅಲ್ಲಿಂದ ಸ್ವಲ್ಪ ದೂರದಲ್ಲಿ ರಸ್ತೆಯಲ್ಲಿ ಸಾಕ್ಷಿ ಗಣಪತಿ ದೇವಸ್ಥಾನ ಕಾಣಿಸುತ್ತದೆ. ಶ್ರೀಶೈಲ ದರ್ಶನಕ್ಕೆ ತೆರಳುವ ಭಕ್ತರೆಲ್ಲರೂ ಇಲ್ಲಿಯೇ ನಿಂತು ಈ ಗಣಪತಿಗೆ ನಮಸ್ಕಾರ ಮಾಡಿ ಹೋಗುವುದು ರೂಢಿ.  ನಾವು ಹೋಗಿದ್ದೇವೆ ಎಂದು ಅವರು ತಮ್ಮದಾಖಲೆಗಳಲ್ಲಿ ನಮೂದಿಸುತ್ತಾರೆ ಎಂದು ಪ್ರಸಿದ್ಧಿ.  ಅದಕ್ಕೆ ಸಂಕೇತವಾಗಿ ಗಣಪತಿಮೂರ್ತಿಯ ಕೈಯಲ್ಲಿ ಘಂಟಾವೂ, ಮತ್ತು ತಾಳೆ ಪತ್ರ ಗ್ರಂಥವೂ ಇರುತ್ತದೆ.  ನಾವೆಲ್ಲವೂ ಹೋಗಿ ಹಾಜರಾತಿ ಹಾಕಿಸಿಕೊಂಡೆವು. ಖುಷಿ ಯಿಂದ ತಮಾಷಾ ಮಾಡುತ್ತಾ ಶಾಲೆ ಯಲ್ಲಿ ಹಾಜರಿ ಹಾಕುವಗ ನಮ್ಮ ಸಾರ್ ಹೇಗೆ ಕರೇಯುತ್ತಾರೋ  ಹಾಗೇ ಅನುಕರಣೆ ಮಾಡುತ್ತಾ ಸಂತೋಷದಿಂದ ನಲಿದವು./ಕುಣಿದಾಡಿದವು.  ಅಲ್ಲಿಂದ  ಖುಷಿಯಿಂದ ಹೋಗುವು ಸಮಯಕ್ಕೆ ಶ್ರೀಶೈಲವು ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸಿದೆ. ಸಾಮಾನ್ಯವಾಗಿ ಶಾಂತಿಯುತ ಮತ್ತು  ವಿಶಾಲವಾದ ಪಥಗಳೊಂದಿಗೆ, ಪ್ರಶ್ನವಾಗಿ, ಆಹ್ಲಾದಕರವಾಗಿ ಇರುವ ಶ್ರೀಶೈಲ ಜನರಿಂದ ತುಂಬಿಹೋಗಿದೆ. ಎಲ್ಲಿ ನೋಡಿದರೂ ಜನರೇ. ರಸ್ತೆಗಳೆಲ್ಲಾ ಕಿರಿದಾಗಿ ಹೋಗಿವೆ. ಛತ್ರಗಳಿಗಾಗಿ ಕಾಯುವ ಜನ, ಛತ್ರ ಗಳು ಸಿಗದಿದ್ದಾಗ ರಸ್ತೆಬದಿಯಲ್ಲೇ ಸಂಸಾರ ಹೂಡುತ್ತಿದ್ದವರು, ಎಲ್ಲೆಲ್ಲಿಂದಲೋ ಬಂದು ಹೊಸದಾಗಿ ಅಟಿಕೆಗಳು, ತಿನಿಸುಗಳು ಮಾರುವವರು, ರಂಕರಾಟ್ಣ, ಬೊಂಬಾಯಿ ಮಿಠಾಯಿಗಳನ್ನು ಮಾರುವವರು, ಜಡೆ ಬಿಚ್ಚಿಕೊಂಡಿರುವ ಸಾಧುಗಳು, ಮಕ್ಕಳುಮರಿ ಮೂಟೆಗಳನ್ನು ತಲೆಮೇಲೆ ಹೊತ್ತುಕೊಂಡು, ಅವಸರದಿಂದ ನಡೆಯುವವರು,  ವಿಚಿತ್ರ ಆಕಾರದೊಂದಿಗೆ, ವೇಷಗಳೊಂದಿಗೆ  ವೀರಾವೇಶ ಮಾಡುವವರು, ಅಲ್ಲಲ್ಲಿ ಭಜನೆಮಾಡುವ ಕಲಾವಿದರು, ತತ್ವಪದಗಳನ್ನು ಹಾಡುವ ಸಾಧುಗಳು… ನಾವು ರಜಾ ದಿನಗಳಲ್ಲಿ ಕಾಣುವ ಶ್ರೀಶೈಲಕ್ಕೂ, ಇವತ್ತಿಗೂ ಎಷ್ಟೊಂದು ವ್ಯತ್ಯಾಸ!ಗೆಳೆಯರೆಲ್ಲರನ್ನು  ಬೀಳ್ಕೊಟ್ಟು ನಾನು  ಬಸ್ ಸ್ಟಾಂಡ್  ಹಿಂಬದಿಯಿಂದ ಷಾರ್ಟ್  ಕಟ್ ನಲ್ಲಿ ನಾವೂ ಯಾವಾಗಲೂ ತಂಗುವ ಸದಾಶಿವ  ಛತ್ರಕ್ಕೆ  ಸೇರುಕೊಂಡೆ. ಅಲ್ಲಿಗೆ ಆಗಾಗಲೇ  ನಮ್ಮ ಮನೆಯವರು, ಮಹದೇವಪ್ಪನವರ ಕುಟುಂಬ ಮತ್ತು ತಿಪ್ಪೇಸ್ವಾಮಿಯವರ ಕುಟುಂಬಗಳು ಈಗಾಗಲೇ ಬೀಡುಬಿಟ್ಟಿವೆ. ಎಲ್ಲರೂ ಊಟಕ್ಕೆ ಹೊರಡುತ್ತಿದ್ದಾರೆ. ನಾನು ಕೂಡಾ ನನ್ನ ಅನುಭವಗಳನ್ನು ನನ್ನ ತಂಗಿಯೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆನಂತರ  ಮಹದೇವಪ್ಪನವರ ಪುತ್ರ ಪ್ರಸಾದ್  ಭೇಟಿಮಾಡಿದ. ಅವನು ಒಂದು ವರ್ಷ ಚಿಕ್ಕವನು.  ಇಂತಹ ಸಮಯದಲ್ಲಿ ಇಬ್ಬರೂ ಜೋಡಿಯಾಗಿ ಒಟ್ಟಿಗೆ ಪ್ರಯಾಣಿಸುತ್ತಿದ್ದೆವು.ಅಂದು ಸಂಜೆ ದೇವರ ದರ್ಶನ ಮಾಡಿ ಆ ರಾತ್ರಿ ವಿಶ್ರಮಿಸಿದೆವು.ಮರುದಿನ ಶಿವರಾತ್ರಿ. ತಲೆ ಸ್ನಾನ ಮಾಡಿ ನಾವು ಕೂಡಾ ಉಪವಾಸವು ಇರುತ್ತೇವೆಂದು ಹೇಳಿ ಕೇವಲ ಬಾಳೆಹಣ್ಣು ತಿಂದು , ಪಾನಕ ಕುಡಿದು, ಆ ದಿನವೆಲ್ಲಾ ಕಳೆದವು. ಮಹಾದೇವಪ್ಪನವರ ಶಿಫಾರಾಸ್ ನಿಂದ  ಇನ್ನೊಂದುಸಲ ಮಲ್ಲನ್ನನ  ದರ್ಶನ ಮಾಡಿಕೊಂಡೆವು. ಸಾಯಂಕಾಲ, ಛತ್ರ ದವರು ಬಿಸಿಬಿಸಿ ಉಪ್ಪಿಟ್ಟು ಮಾಡಿದರು. ಕಡ್ಲೆ ಮತ್ತು  ಉಪ್ಪಿಟ್ಟು  ಹೊಟ್ಟೆ ತುಂಬಾ ತಿಂದು ಇಬ್ಬರೂ ಹೊರಗೆ ಹೋದೆವು.  ನಮ್ಮನ್ನು ಆ ಎರಡು ದಿನ ಹಚ್ಚಿಕೊಂಡವರೇ ಇಲ್ಲ.ರಾತ್ರಿ ಶ್ರೀಶೈಲವನ್ನು ಬಣ್ಣಬಣ್ಣದ ದೀಪಗಳಿಂದ  ಅಲಂಕರಿಸಿದರಿಂದ, ಆ ಪ್ರದೇಶ   ದೇದೀಪ್ಯಮಾನವಾಗಿ ಬೆಳಗುತ್ತಾಯಿದೆ. ಎಲ್ಲಾ ಸತ್ರಗಳು/ಛತ್ರಗಳು/ಧರ್ಮಶಾಲೆಗಳು  ಜನರಿಂದ ಕಿಕ್ಕಿರಿಸುತ್ತಿದ್ದವು.  ಸುಣ್ಣ ಬಣ್ಣ ಹಾಕಿಸಿ, ತಮ್ಮ ಕೈಲಾದಷ್ಟು  ಅಲಂಕರಿಸಿದ ಛತ್ರಗಳು /ಸತ್ರಗಳು ಹಬ್ಬಕ್ಕೆ ತಮ್ಮದೇ ಆದ  ಸೊಬಗನ್ನು ನೀಡುತ್ತಿದ್ದವು. ಸ್ಪೀಕರ್ ಗಳಿಂದ ಮಂತ್ರೋಂಚ್ಛಾರಣೆಗಳು ನಿರಂತರವಾಗಿ ನಡೆಯುತ್ತಿವೆ. ದರ್ಶನಕ್ಕಾಗಿ ಜನರು ದೊಡ್ಡ ದೊಡ್ಡ ಸಾಲುಗಳಲ್ಲಿ ನಿಂತಿದ್ದರು. ಶ್ರೀಶೈಲ ಮಲ್ಲಣ್ಣ, ಶರಣು ಶರಣು ಎನ್ನುತ್ತಾ, ಓಂ ನಮಶ್ಶಿವಾಯ ಎಂದು ಶಿವನಾಮ ಸ್ಮರಣದಿಂದ ದೇವಸ್ಥಾನದ ಪ್ರಾಂಗಣವೆಲ್ಲಾ ಪ್ರತಿಧ್ವನಿಸುತ್ತದೆ.  ಅಭಿಷೇಕ ಮತ್ತು ಅರ್ಚನೆಗಳಿಂದ ಆವರಣದೊಳಗಿನ ಎಲ್ಲಾ ಮಂಟಪಗಳು ಕಿಕ್ಕಿರಿಸಿದ್ದವು. ದೇವಾಲಯದ ಸುತ್ತಲೂ ಕೋಲಾಟ, ಭಜನೆ, ಭಾಗವತ, ವೀರರಸ ಪ್ರಧಾನವಾದ ಪ್ರದರ್ಶನೆಗಳು, ವಾದ್ಯಗಳು, ಗಜ್ಜೆಗಳ ಎಲ್ಲೂ ಸಂಭ್ರಮವಾಗಿ ಇವೆ.ಶ್ರೀಶೈಲದಲ್ಲಿ ಶಿವರಾತ್ರಿಗೆ  ಒಂದು ವಿಶೇಷತೆ ಇದೆ. ಅದೇ ಪಾಗಾ ಸುತ್ತುವುದು. ರಾತ್ರಿ ಹನ್ನೆರಡು ಗಂಟೆಗೆ ಸರಿಯಾಗಿ ಲಿಂಗೋದ್ಭವದ ಸಮಯದಲ್ಲಿ ದೇವಾಲಯದ ಸುತ್ತಲೂ ಕತ್ತಲೆಮಯವಾಗುತ್ತದೆ.  ಲೈಟ್ಸ್  ಆಫ್ ಮಾಡಿಬಿಡುತ್ತಾರೆ.  ಕಣ್ಣು ಬಿಟ್ಟಾರೂ ಕಾಣದ ಕತ್ತಲು.  ಆಗ ಪ್ರಾರಂಭವಾಗುತ್ತದೆ ಆ ಘಟ್ಟ. ಅನೇಕ ತಲೆಮಾರುಗಳಿಂದ ಒಂದು  ಕೈಮಗ್ಗದ ಕುಟುಂಬವು ಪ್ರತಿದಿನವೂ , ಒಂದೊಂದು ಮೊಳೆ  ಬಿಳಿಬಟ್ಟೆಯನ್ನು ಮಲ್ಲಿಕಾರ್ಜುನ ಸ್ವಾಮಿಯವರಿಗಾಗಿ ನೇಯುತ್ತಾರೆ. ವರ್ಷ ಮುಗಿದನಂತರ,  ಆ  ವಸ್ತ್ರವನ್ನು ತೆಗೆದುಕೊಂಡು ಆ ಕುಟುಂಬದಿಂದ ಯಾರದರೊಬ್ಬರು ಶ್ರೀಶೈಲವನ್ನು ತಲುಪುತ್ತಾರೆ. ಶಿವರಾತ್ರಿಯ ದಿನ ಸರಿಯಾಗಿ ಮಧ್ಯರಾತ್ರಿ ಹನ್ನೆರಡು ಗಂಟೆಗೆ  ಬಟ್ಟೆಯನ್ನೆಲ್ಲ ಕಳಚಿ,  ನಗ್ನವಾಗಿ, ತಾನು ಸ್ವಾಮಿಗಾಗಿ ತಂದಿರುವ  ವಸ್ತ್ರವನ್ನು  ಕಲಶಕ್ಕೆ ನಾಲ್ಕು ಮೂಲೆಗಳಲ್ಲಿ  ಇರುವ  ಬಸವನ್ನರಿಗೆ ಸೇರಿಸಿ ಸುತ್ತುತ್ತಾರೆ.  ಈ ಘಟ್ಟವನ್ನು  ಕೆಲವು ತಲೆಮಾರುಗಳಿಂದ  ನಡೆಯುತ್ತಾ ಬಂದಿದೆ. ಇಡೀ  ವಸ್ತ್ರಧಾರಣೆ ಮುಗಿದನಂತರ ತಿರುಗಿ ಬಟ್ಟೆ ಹಾಕಿಕೊಂಡು  ಕೆಳಗೆ ಇಳಿಯುವ ವರೆಗೂ  ಕರೆಂಟ್  ಬೆಳಕುಗಳು  ಪಸರಿಸುವುದಲ್ಲ.‘ಪಾಗಾ ಘಟ್ಟ ಮುಗಿದನಂತರ ಸರ್ವ ದರ್ಶನವಿರುತ್ತದೆ.  ಆಗ ಮತ್ತೊಮ್ಮೆ ಸ್ವಾಮಿಯನ್ನು ಸ್ಪರ್ಶ ದರ್ಶನ ಮಾಡಿಕೊಂಡು ತಿರುಗಿ ಸತ್ರಕ್ಕೆ ಬಂದರೆ  ರಾತ್ರಿ ನಿದ್ದೆ ಹೋಗದೆ ಇರಲಿಕ್ಕೆ ಜಾಗರಣೆಯ  ವ್ಯವಸ್ಥೆ ಮಾಡಲಾಗಿತ್ತು. ಹಾಡುಗಳು, ಶ್ಲೋಕ ಮತ್ತು ಭಜನೆಗಳು. ಆಗಾಗ  ನಡುವೆ ನಡುವೆ ಬೇಯಿಸಿದ ಗೆಣಸು ಗೆಡ್ಡೆಯೋ, ಬೇಯಿಸಿದ ಕಡ್ಲೆಯೋ  ನೀಡುತ್ತಿದ್ದರು.  ಹಾಗೆ ಅವರೊಂದಿಗೆ ಕುಳಿತು, ತೂಗುತ್ತಾ ತೂಗುತ್ತಾ  ಎಂದೋ ನಿದ್ದೆ ಹತ್ತಿತು .ಮರುದಿನ ಬೆಳಿಗ್ಗೆ ಸರಿಯಾಗಿ ಹನ್ನೊಂದುಗಂಟೆಗೆ ಸತ್ರದಲ್ಲಿ ಊಟ ಸಿದ್ಧವಾಯಿತು. ಎಲ್ಲರೂ  ಜಬರ್ದಸ್ತಾಗಿ  ಊಟ ಮಾಡಿ  ಮತ್ತೆ ಮಧ್ಯಾಹ್ನಕ್ಕೆ  ಸುನ್ನಿಪೆಂಟ ತಲುಪಿದೆವು. ಆನಂತರ ಎಷ್ಟು ಶಿವರಾತ್ರಿಗಳನ್ನು ಆಚರಿಸಿದರೂ ಅಂದಿನ  ಶಿವರಾತ್ರಿಯೇ ಇಂದಿಗೂ ಸಂತೃಪ್ತಿಯಾಗಿ ತೋರುತ್ತದೆ. ತೆಲುಗು ಮೂಲ –ಜಿ. ಉಮಾಮಹೇಶ್ವರ್ಕನ್ನಡಕ್ಕೆ-ರಂಗನಾಥ ರಾಮಚಂದ್ರರಾವು*

ಜಿ. ಉಮಾಮಹೇಶ್ವರ್ ಅವರ ತೆಲುಗು ಕಥೆ “ಶ್ರೀಶೈಲಂ – ಶಿವರಾತ್ರಿ”ಕನ್ನಡಾನುವಾದ ರಂಗನಾಥ ರಾಮಚಂದ್ರರಾವು Read Post »

ಅನುವಾದ

ಅಶ್ವಥಿಯವರಮಲಯಾಳಂ ಕವಿತೆ “ಮನಸ್ಸು!” ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ.

ಅನುವಾದ ಸಂಗಾತಿ ಮನಸ್ಸು ಮಲಯಾಳಂ ಮೂಲ: ಅಶ್ವಥಿಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.   ಮನ——ಯಾವುದೇ ಸಮಯದಲ್ಲಿಯೂ… ಜೇಡರ ಬಲೆ ಕಟ್ಟಿರುವಒಂದು ‘ಮನಸ್ಸು’ನನಗೆ ಉಂಟು…! ನೀನು ನನ್ನ ಬಾಳಿನಿಂದಹೋದ ಮೇಲೆತೆರೆದು ನೋಡಲುಉದಾಸಿನ ಮಾಡಿರುವ ಮನಸ್ಸು..! ಒಮ್ಮೆ ತೆರೆದುನೋಡಬೇಕು ಎಂದು‘ಆಸೆ’ ಹೊಂದಿದಾಗ ಎಲ್ಲಾನೀನು ಕೊನೆದಾಗಿ ಹೇಳಿದನುಡಿಯು ನೆನಪಿಗೆಬರುತ್ತದೆ…! ‘ಎಲ್ಲಾ ಮರೆಯಬೇಕು…’..! ಸರಿ…..,ನೀನೇ ಇಲ್ಲಾದೇಇರುವಾಗ ನನಗೆಯಾವ‘ ನೆನಪು’ಗಳು……?!! ಮಲಯಾಳಂ ಮೂಲ: ಅಶ್ವಥಿಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.

ಅಶ್ವಥಿಯವರಮಲಯಾಳಂ ಕವಿತೆ “ಮನಸ್ಸು!” ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ. Read Post »

ಅನುವಾದ

ಪ್ರಸಾದ ಮೂರ್ತಿಯವರ ತೆಲುಗು ಕವಿತೆ “ಗಾಳಿಗಾಗಿ ಹೋರಾಟ”ದ‌ ಕನ್ನಡಾನುವಾದ ಕೋಡಿಹಳ್ಳಿಮುರಳೀ ಮೋಹನ್

ಅನುವಾದ ಸಂಗಾತಿ ಗಾಳಿಗಾಗಿ ಹೋರಾಟ ತೆಲುಗು ಮೂಲ : ಪ್ರಸಾದ ಮೂರ್ತಿಕನ್ನಡ ಅನುವಾದ : ಕೋಡೀಹಳ್ಳಿ  ಮುರಳೀ ಮೋಹನ್ ಗಾಳಿಗೆ ಗಾಳಾಡುವ ಜಾಗವೇ ಇಲ್ಲವಂತೆಒಂದು ಸುಳಿಗಾಳಿ ಸುದ್ದಿ ತಂದುಕೊಟ್ಟಿತು—ಉಸಿರಾಟವೇ ಸಿಗದಂತೆ ಎದೆಗೆ ಅಪ್ಪಳಿಸಿಸ್ಕೂಲಿನಲ್ಲಿ ಇರುವ ಮೊಮ್ಮಗಳು ನೆನಪಾಯಿತು—ಅವಳಿಗೆ ಹೇಳಬೇಕುಅನ್ನದ ಡಬ್ಬಿಯ ಜೊತೆಗೆಒಂದು ಆಕ್ಸಿಜನ್ ಡಬ್ಬಿಯನ್ನೂ ಹಾಕಿಕೊಡಲು,ಒಂದು ಮಾಸ್ಕ್ ಕೊಂಡು ಕೊಡಲು.ರಾಜಧಾನಿ ನಗರಸಂಸತ್ತಿನ ಮುಂದೆ ಮೊಣಕಾಲೂರಿದೆ ಎನ್ನುವವಾರ್ತೆಯನ್ನು ಹೊತ್ತು ತಂದ ಪತ್ರಿಕೆನಮ್ಮ ಮನೆಯ ಗೇಟಿನ ಬಳಿಹಾವಿನಂತೆ ಸರಿದು ಕಾಣಿಸಿತು—ಸಂಸತ್ತನ್ನೇ ತಮ್ಮ ಸುರಕ್ಷತೆಗೆಅಂತರಿಕ್ಷದಲ್ಲಿ ಕಟ್ಟಿಕೊಳ್ಳಲುಎಂಜಿನಿಯರ್‌ಗಳು, ವಿಜ್ಞಾನಿಗಳ ಜೊತೆಸಭೆಯಲ್ಲಿ ಆಡಳಿತಗಾರರುಬ್ಯುಸಿ ಯಾಗಿದ್ದಾರೆ ಅಂತೆ—ತಮ್ಮ ಬ್ಯಾಂಕ್ ಖಾತೆಗಳಲ್ಲಿಮೊಟ್ಟೆಗಳನ್ನು ಉಳಿಸಿಕೊಂಡುಕಾರ್ಪೊರೇಟ್ ಅನಾಕೊಂಡಾಗಳುನಿದ್ರೆಗೆ ಜಾರಿರುವ ದೃಶ್ಯಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಂತೆಮತ್ತೊಂದು ಸುದ್ದಿ.ಐದು ವರ್ಷಕ್ಕೊಮ್ಮೆಸಾರ್ವತ್ರಿಕ ಶವಪರೀಕ್ಷೆಗಳು—ಜೀವಂತ–ನಿರ್ಜೀವದೇಹಗಳ ಜಾತ್ರೆಪರಿಸರದ ಪಾಡೆಯ ಮೇಲೆಪ್ರಜಾಸತ್ತಾತ್ಮಕ ಮೆರವಣಿಗೆಹಳದಿ ಬಳಿದಿದ್ದ  ಕೊರಡಗಳಿಂದಮಹಾ ನಾಯಕರ ಪ್ರದರ್ಶನ—ಅಧಿನಾಯಕನನಾನ್–ಬೈಯಾಲಾಜಿಕಲ್ ಅಹಂಕಾರಕ್ಕೆಸಾಷ್ಟಾಂಗ ವಂದನೆ ಸಲ್ಲಿಸುವಶಲ್ಯಾವಶೇಷವಾದ ಸ್ವಾತಂತ್ರ್ಯ.ನಗರಗಳಿಂದ ಮನುಷ್ಯರಂತೆಮನುಷ್ಯರಿಂದ ನಗರಗಳಂತೆಯಾರು ಮೊದಲು ಓಡಬೇಕು ಅನ್ನೋದು ತಿಳಿಯದೆಒಂದು ಸಂಧಿಗ್ಧ ಕ್ಷಣದಲ್ಲಿನಲಿದು ಹೋಗುತ್ತಿರುವ ಕಾಲಕ್ಕೆಮತ್ತೊಂದು ಅಕಾಲದ ಗರ್ಭಧಾರಣೆದೇಶವಿಡೀಮಾಲಿನ್ಯದ ಪ್ರಸವ ವಾಸನೆ!ಅಪ್ಪಂದಿರೇ!ನೀವು ಮಕ್ಕಳಿಗಾಗಿ ಆಸ್ತಿಗಳನ್ನು ಸೇರಿಸುತ್ತೀರಾ—ಸರಿ, ಆದರೆ ಸ್ವಲ್ಪ ಆಕ್ಸಿಜನ್ ಕೂಡ ಸಂಗ್ರಹಿಸಿ.ಇನ್ನು ನಿಮ್ಮ ಆತುರಗಳನ್ನು ಬದಿಗಿಟ್ಟುಗಾಳಿಗಾಗಿ ಹೋರಾಟಗಳನ್ನು ಆರಂಭಿಸಿ! ಮಂಜಿನ ಮುಖವಾಡ …ಬೆಳದಿಂಗಳ ನಗು…ಗಾಳಿಯಲ್ಲಿ ಕಾವಲು ಕಾಸುತ್ತಿರುವಮೃತ್ಯುವನ್ನುಗುರುತಿಸಲಾಗುವುದೇ ಇಲ್ಲ ತೆಲುಗು ಮೂಲ : ಪ್ರಸಾದ ಮೂರ್ತಿಕನ್ನಡ ಅನುವಾದ : ಕೋಡೀಹಳ್ಳಿ  ಮುರಳೀ ಮೋಹನ್

ಪ್ರಸಾದ ಮೂರ್ತಿಯವರ ತೆಲುಗು ಕವಿತೆ “ಗಾಳಿಗಾಗಿ ಹೋರಾಟ”ದ‌ ಕನ್ನಡಾನುವಾದ ಕೋಡಿಹಳ್ಳಿಮುರಳೀ ಮೋಹನ್ Read Post »

ಅನುವಾದ

ಮಲಯಾಳಂ ಕವಿತೆ “ಮರಣದ ನಂತರ” ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ.

ಅನುವಾದ ಸಂಗಾತಿ ಮರಣದ ನಂತರ ಮಲಯಾಳಂ ಮೂಲ: ಸೋಮನ್ ಕಡಲೂರು.ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ. ನೀವು ಅಪಿ೯ಸುವಪ್ರೀತಿಯ ‘ಹೂವು’ಗಳುಬಾಡಿ ಹೋಗಿರಬಹುದು…..! ನುಡಿಯುವ ಮಾತುಗಳುಹಳೆಯದ್ದು ಆಗಿರಬಹುದು… ! ಹಿಡಿದುಕೊಳ್ಳುವ ”ಕೈ’ತಂಪಾಗಿರಬಹುದು…! ನೀವು ತೋರಿಸುತ್ತಿರುವು ನ್ಯಾಯವುಅನ್ಯಾಯಕ್ಕಿಂತ ಹೆಚ್ಚುಕೊಳೆದು ಸಹ ಹೋಗಿರಬಹುದು….!! ನೀವು ಬದುಕಿರುವಾಗನೀಡದೇ ಅವಿತು ಇಟ್ಟು,…..ಮರಣದ ನಂತರನೀಡುವ ಯಾವುದೇವಸ್ತುಗಳಿಗೂ……,ಸಾವಿನ ವಾಸನೆ…ಅಪರಾಧ ಭಾವನೆಯಸಂಕಟವು ಮಾತ್ರ ಇರುತ್ತದೆ…!!!. ಮಲಯಾಳಂ ಮೂಲ: ಸೋಮನ್ ಕಡಲೂರು.ಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.

ಮಲಯಾಳಂ ಕವಿತೆ “ಮರಣದ ನಂತರ” ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ. Read Post »

ಅನುವಾದ

ಅಕ್ಕ ಮಹಾದೇವಿಯ ವಚನ ತಮಿಳಿಗೆ ಅನುವಾದ : ಶಶಿಕಲಾ ಪಿ

ಅನುವಾದ ಸಂಗಾತಿ ಅಕ್ಕ ಮಹಾದೇವಿಯ ವಚನ ತಮಿಳಿಗೆ ಅನುವಾದ : ಶಶಿಕಲಾ ಪಿ ಕಾಯಕ್ಕೆ ನೆರಳಾಗಿ ಕಾಡಿತ್ತು ಮಾಯೆಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆಮನಕ್ಕೆ ನೆನಹಾಗಿ ಕಾಡಿತ್ತು ಮಾಯೆನೆನಹಿಗೆ ಅರಿವಾಗಿ ಕಾಡಿತ್ತು ಮಾಯೆಅರಿವಿಗೆ ಮರೆವಾಗಿ ಕಾಡಿತ್ತು ಮಾಯೆಜಗದ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆಚೆನ್ನಮಲ್ಲಿಕಾರ್ಜುನಾ, ನೀನೊಡ್ಡಿದ ಮಾಯೆಯನಾರಿಗೂ ಗೆಲಬಾರದು. Illusion had haunted the body as shadowIllusion had haunted the life as mindIllusion had haunted the mind as memoryIllusion had haunted the memory as knowledgeIllusion had haunted the knowledge as oblivionIllusion had haunted the masses of the world rasing the fire stickChennamallikarjuna, no-one should win the illusion that you build. உடலுக்கு நிழலாய் இடற்படுத்தது மாயைஉயிருக்கு மணமாய் இடர்படுத்தது மாயைமனசுக்கு நினைவாய் இடற்படுத்தது மாயைநினைவுக்கு அறிவாய் இடற்படுத்தது மாயைஅறிவுக்கு மரதியாய் இடற்படுத்தது மாயைஉலகத்தின் திரளுக்கு தீவட்டியாய் எடுத்துஇடற்படுத்தது மாயைசெண்ணமல்லிகார்ஜுனா, நீ தந்த மாயேயை யாருக்கும் வெற்றிக்கொள்ளக்கூடாது ಉಡಲುಕ್ಕು ನಿಳಲಾಯ್ ಇಡರ್ಪಡುತ್ತದು ಮಾಯೈಉಯಿರುಕ್ಕು ಮನಮಾಯ್ ಇಡರ್ಪಡುತ್ತದು ಮಾಯೈಮನಸುಕ್ಕು ನಿನೈವಾಯ್ ಇಡರ್ಪಡುತ್ತದು ಮಾಯೈನಿನೈವುಕ್ಕು ಅರಿವಾಯ್ ಇಡರ್ಪಡುತ್ತದು ಮಾಯೈಅರಿವುಕ್ಕು ಮರತಿಯಾಯ್ ಇಡರ್ಪಡುತ್ತದು ಮಾಯೈಉಲಗತ್ತಿನ್ ತಿರಳುಕ್ಕು ತೀವಟ್ಟಿಯಾಯ್ ಎಡುತ್ತು ಇಡರ್ಪಡುತ್ತದು ಮಾಯೈಚೆನ್ನಲ್ಲಿಕಾರ್ಜುನಾ, ನೀ ತಂದ ಮಾಯೆಯೈ ಯಾರುಕ್ಕುಂ ವೆಟ್ರಿಕ್ಕೊಳ್ಳಕ್ಕೂಡಾದು ಅಕ್ಕ ಮಹಾದೇವಿಯ ವಚನಅನುವಾದ : ಶಶಿಕಲಾ ಪಿ

ಅಕ್ಕ ಮಹಾದೇವಿಯ ವಚನ ತಮಿಳಿಗೆ ಅನುವಾದ : ಶಶಿಕಲಾ ಪಿ Read Post »

ಅನುವಾದ

“ದೇಹದ ಬೀಜ”ಕೆ.ಎ. ಮುನಿಸುರೇಶ್ ಪಿಳ್ಳೆ ಅವರ ತೆಲುಗು ಕವಿತೆಯ ಕನ್ನಡಾನುವಾದ ರಂಗನಾಥ ರಾಮಚಂದ್ರರಾವು

ಅನುವಾದ ಸಂಗಾತಿ ದೇಹದ ಬೀಜ ತೆಲುಗು ಮೂಲ : ಕೆ.ಎ. ಮುನಿಸುರೇಶ್ ಪಿಳ್ಳೆಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು ಬೀಜವು ಮಹಿಮೆ ತಿಳಿದಿರುವ ಮನೆಯಲ್ಲಿಯೇ  ಅಲ್ಲವೇ?ಅವಳು ಮೊಳಕೆಯೊಡೆದಿದ್ದು! ಬೀಜದಲ್ಲಿ..ಬಿತ್ತವಿಕೆಯಲ್ಲಿ..ಬದುಕು ಇರುವುದೆಂಬ  ಪಾಠವನ್ನು ತಿಳಿದ ಅಮ್ಮ! ಅಮ್ಮ  ಬಿತ್ತಿದ ಪ್ರತಿಯೊಂದು ಬೀಜವೂ..ಮೊಳಕೆಯೊಡೆದ ಪ್ರತಿಯೊಂದು ಮೊಳಕೆಯೂ ..ದೃಷ್ಟಿಗೆ ಬರುತ್ತವೆ ನನಗೆ! ನನ್ನ ಬಾಲ್ಯದಿಂದಲೂ,ನನ್ನನ್ನು ಅನಾಥನನ್ನಾಗಿ ಮಾಡುವವರೆಗೂ..ಬಿತ್ತಿದ ಪ್ರತಿ ಬೀಜವೂ! ಅಮ್ಮ ಬಿತ್ತಿದ ಅಕ್ಷರಗಳುನನ್ನಅಧ್ಯಯನಗಳಾಗಿ ಮೊಳಕೆಯೊಡೆದವು!ಅಮ್ಮ ಬಿತ್ತಿದ ಆಲೋಚನೆಗಳುನನ್ನ ಬುದ್ಧಿಯಲ್ಲಿ  ಪರಿಣತಿಯಾಗಿ  ಮೊಗ್ಗು ಬಿಟ್ಟಿವೆ!ನನ್ನ ಮೇಲೆ ಬಿತ್ತಿದ ಆಶೆಗಳುಮೊಳಕೆಯೊಡೆದು ನನ್ನ ಜೀವನವಾಗಿ ಅರಳಿದವು!ನನ್ನ ಬೆನ್ನಿನ ಮೇಲೆ ಬೆತ್ತದಿಂದ  ಬಿತ್ತಿದ ಬೀಜಗಳುನನಗೆ  ಒದಿಗಿದ  ಶಿಸ್ತಾಗಿ ಫಲಿಸಿದವು! ಅಮ್ಮ ಒಳ್ಳೆಯ ಬೇಸಾಯಗಾರ್ತಿಬಿತ್ತುವುದು ಅಮ್ಮನ ಲಕ್ಷಣ!ಭೂಮಿತಾಯಿ ಯಿಂದ ಚೊಚ್ಚಿ ಬಂದ ಮೊಳಕೆಎರಡು ಎಲೆ ತೊಟ್ಟಂದಿನಿಂದಲೂ …ಆ ಮೊಳಕೆಗೆ ರಕ್ಷಣೆಯ ತೊಡಿಗೆಯೂ   ಅಮ್ಮನೇ!ಸಸ್ಯಕ್ಕೆ ದಾಹವನ್ನು ತೀರಿಸುವ  ಬೊಗಸೆಯ   –ನೀರೂ ಅಮ್ಮನೇ!ಬೆಳಕಿನಿಂದ ಜೀವನೀಡುವ ಏಳು ಕುದುರೆಗಳ ರಾಜನೂ ಅಮ್ಮನೇ ! ಆಕಾಶವನ್ನು ಲಕ್ಷ್ಯವನ್ನಾಗಿಸಿಕೊಂಡು …ನೇರವಾಗಿ ಬೆಳೆಯುವುದನ್ನು  ಕಲಿಸಿರುವುದು   ಅಮ್ಮನೇ !ತಲೆಯನ್ನು ಕೊರೆಯುವ  ಹುಳುಗಳು  ಸೇರಿದಾಗಲೆಲ್ಲಾ…ಔಷಧದ ಪಿಚಕಾರಿಯಿಂದ  ಕಾಪಾಡಿದ್ದು ಅಮ್ಮನೇ !ವ್ಯರ್ಥವಾದ  ಟೊಂಗೆಗಳನ್ನು ಪ್ರೂನಿಂಗ್ ಮಾಡುತ್ತಾದೃಢವಾಗಿ ಬೆಳೆಯುವಂತೆ  ನೋಡಿದವಳು ಅಮ್ಮನೇ! ಕಸಿಕಟ್ಟಿ, ಸಸಿ ಬೆಳುಯುವ  ವರೆಗೂಕಾಯ್ದು , ಆ ಬೇಸಾಯದ ಕನ್ನಡಿಯಲ್ಲಿತನ್ನನ್ನೂ, ತನ್ನ ಕಷ್ಟವನ್ನೂ  ತೃಪ್ತಿಯಾಗಿ  ನೋಡಿಕೊಂಡವಳು ಅಮ್ಮನೇ! ಆ ಗಿಡ ಮರವಾದಾಗ…ಆ ಫಲಗಳನ್ನು ಸಂಪೂರ್ಣವಾಗಿ ಆಸ್ವಾದಿಸದೆಯೇಆ ನೆರಳಿನಲ್ಲಿ   ತುಂಬಾ ದಣಿವು ತೀರಿಸಿಕೊಳ್ಳದೆಯೇ  ಜಾರಿಹೋದವಲೇ  ಅಮ್ಮ!ಆ ನೆರಳು ತನಗೆ ಸಾಕೆಂದುಕೊಂಡಳೇ?ತನ್ನ ಜಾಡ  ಆ ಮರಕ್ಕೆ ಸಾಕೆಂದುಕೊಂಡಳೇ? ಆ ನೆರಳಲ್ಲಿ ತನ್ನ ಪಾದದ ತಡನೆಯ  ಸದ್ದುಗಳೆಆ ಮರದ  ಬೇರುಗಳ ಎದೆ ಬಡಿತೆಗಳೆಂದು ಅಮ್ಮಗೆ ತಿಳಿಯದೆ?ನೆರಳನ್ನು ಏಮಾರಿಸಿ ತನು  ಸರಿದುಹೋದರೆಆ ಎದೆ ನಿಶ್ಶಬ್ದ  ವಾಗುವುದೆಂದೂ  …ಆ ಮರ ನಿಶ್ಶಕ್ತ ವಾಗುವುದೆಂದೂ  ಅಮ್ಮನಿಗೆ ತಿಳಿವು ಇಲ್ಲವೇ?—- ಅಮ್ಮ ತನ್ನನ್ನು ತಾನೇ ಬಿತ್ತಿಕೊಂಡಳುತನ್ನ ದೇಹವನ್ನು ಬಿತ್ತಿಕೊಂಡಳು!ಅನಾಟಮಿ ಲ್ಯಾಬ್ ನಲ್ಲಿ ಮೊಳಕೆಯೊಡುತ್ತಾಳೆ!ನಾಳೆಯ ವೈದ್ಯರ  ಜ್ಞಾನದಲ್ಲಿ  ಪುಷ್ಪಿಸಿ, ಫಲಿಸಿ ವೃದ್ಧಿಹೊಂದುತ್ತಳೆ!ಮರದ ನೆರಳಿನಲ್ಲಿ ದಣಿವಾರಿಸಿ ಕೊಳ್ಳುವವಳಲ್ಲ  ಅಮ್ಮತಾನೇ  ಶಾಖೋಪಶಾಖಗಳಾಗಿ  ಮಹಾವೃಕ್ಷವಾಗಿ ವಿಸ್ತರಿಸುವವಳು ! (ನನ್ನ ತಾಯಿಯ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದನಂತರ.. ಅಮ್ಮ  ನೆನೆಪಿನಲ್ಲಿ -: ಕೆ.ಎ. ಮುನಿಸುರೇಶ್ ಪಿಳ್ಳೆ, 99594 8808 ತೆಲುಗು ಮೂಲ : ಕೆ.ಎ. ಮುನಿಸುರೇಶ್ ಪಿಳ್ಳೆಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು

“ದೇಹದ ಬೀಜ”ಕೆ.ಎ. ಮುನಿಸುರೇಶ್ ಪಿಳ್ಳೆ ಅವರ ತೆಲುಗು ಕವಿತೆಯ ಕನ್ನಡಾನುವಾದ ರಂಗನಾಥ ರಾಮಚಂದ್ರರಾವು Read Post »

ಅನುವಾದ

ಜಿ.ಉಮಾ ಮಹೇಶ್ವರ್‌ ಅವರ ತೆಲುಗು ಕಥೆ “ಒಂದು ಆಧುನಿಕ ದೇವಾಲಯದ ಕಥೆ”ಕನ್ನಡಾನುವಾದ ರಂಗನಾಥ ರಾಮಚಂದ್ರ ರಾವು

ಅನುವಾದ ಸಂಗಾತಿ “ಒಂದು ಆಧುನಿಕ ದೇವಾಲಯದ ಕಥೆ” ಜಿ.ಉಮಾ ಮಹೇಶ್ವರ್‌ ಅವರ ತೆಲುಗು ಕಥೆ ಕನ್ನಡಾನುವಾದ ರಂಗನಾಥ ರಾಮಚಂದ್ರ ರಾವು ಅಕ್ಟೋಬರ್ 2, 2009. ರಾತ್ರಿ ಹನ್ನೊಂದುಗಂಟೆ. ರಿಟೈರ್ಡ್  ಚೀಫ್ ಇಂಜಿನಿಯಾರ್  ಗೋವಿಂದರೆಡ್ಡಿ, ಹೈದರಾಬಾದ್‌ನಲ್ಲಿರುವ ತಮ್ಮ ಮನೆಯಲ್ಲಿ ಟಿವಿ ಮುಂದೆ ಕುಳಿತು ಪ್ರವಾಹದ ಭೀಕರ ದೃಶ್ಯಗಳನ್ನು ನೋಡುತ್ತಿದ್ದಾರೆ. ಕೃಷ್ಣಾನದಿಗೆ ಬಂದಿರುವ ಪ್ರವಾಹದ ನೀರು ಯಾರ ಮಾತನ್ನೂ ಕೇಳದ ಹಠಮಾರಿ ಮಗುವಿನಂತೆ, ಸಿಟ್ಟಿಗೆದ್ದ ಯುವಕನ ಅಗ್ರಹದಂತೆ ತುಂಬಿ ಉಕ್ಕುತ್ತಾ, ಹೊಮ್ಮಿ ಬರುತ್ತಾ ನೀರಿನ ಮಟ್ಟವನ್ನು ಹೆಚ್ಚಿಸುತ್ತಿದೆ. ಆಗಲೇ ಟಿವಿಯಲ್ಲಿ ಹೇಳುತ್ತಿದ್ದರು – “ಶ್ರೀಶೈಲಂ ಡ್ಯಾಮ್   ಎತ್ತರ 884 ಅಡಿ. ಈಗ ನೀರಿನ ಮಟ್ಟ 880 ಅಡಿಗೆ ತಲುಪಿದೆ. ಇಡೀ ಹನ್ನೆರಡು ಗೇಟ್‌ಗಳನ್ನು ಎತ್ತಿದ ನಂತರವೂ ಪ್ರವಾಹದ ವೇಗ ಕಡಿಮೆಯಾಗಲಿಲ್ಲ. ಇನ್  ಫ್ಲೋ , ಅವುಟ್ ಫ್ಲೋ ಗಿಂತಲೂ ತುಂಬಾ ಜಾಸ್ತಿ ಇದ್ದುದರಿಂದ ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ಸಂಪೂರ್ಣ ವಾಗಿ ಡ್ಯಾಮ್  ನೀರಿನ ಹರಿವಿನಲ್ಲಿ ಮುಳುಗಿಹೋಗ ಬಹುದೆಂದು, ಒಟ್ಟು ನೀರಿನ ಪ್ರವಾಹ ಡ್ಯಾಮ್ ತುಂಬಿ ಅದರ ಮೆಲಿಂದ  ಹರಿಯುವ ಸಾಧ್ಯತೆ ಇರುವುದೆಂದು ನಿಪುಣರ ವರ್ಗ  ಹೇಳುತ್ತಿತ್ತು. ಎಲ್ಲಾ ಗೇಟುಗಳನ್ನು ಎತ್ತಿದ ಸರ್ಕಾರಿ ಅಧಿಕಾರಿಗಳೂ ಏನೂ ಮಾಡಲಾಗದೇ ದೇವರಮೇಲೆ ಭಾರಹಾಕಿ, ಅವನೇ ಕಾಪಾಡಬೇಕೆಂದು ಹೇಳಿದರು’’ ಟಿವಿಯಲ್ಲಿ ಚರ್ಚೆನಡೆಯುತ್ತಿದೆ. “ಮೇಲಿಂದ ಬರುತ್ತಿರುವ ಪ್ರವಾಹವನ್ನು ಅಂದಾಜು ಹಾಕಿ ಮೊದಲೇ ಏಕೆ ಗೇಟ್‌ಗಳನ್ನು ತೆರೆಯಲಿಲ್ಲ”  ಎಂದು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. “ಇಷ್ಟೊಂದು ಪ್ರವಾಹ ಬರುತ್ತದೆಂದು  ಊಹಿಸಲಿಲ್ಲವೆಂದು,  ಜಲಾಶಯ ಭರ್ತಿಯಾದರೆ ನಾಲೆಗಳ ಮೂಲಕ ಹೊಲಗಳಿಗೆ ನೀರುಣಿಸ ಬಹುದು ಎಂದುನಿಲ್ಲಿಸಸಿದರೆಂದು” ಸರ್ಕಾರದ ಅನುಕೂಲರು ವಾದಿಸುತ್ತಿದ್ದಾರೆ. “ಇದು ಉದ್ದೇಶ ಪೂರ್ವಕವಾಗಿ ಮಾಡಿರುವುದೆಂದು, ಮಾನವ ತಪ್ಪಿದವೆಂದು” ಆಕ್ಷೇಪಣಗಳು. “ಸೀಮೆಗೆ ನೀರು ಕೂಡಿಡುವುದು ಹೇಗೆ ಸ್ವಾರ್ಥವಾಗುತ್ತದೆ ”   ಬೇಸಾಯಕ್ಕೆ ಬೇಕಾದ  ನೀರಿನ ಸಾಧನಾ ಸಮಿತಿ ಅವರ ಸಮರ್ಥನೆಗಳು , ಒಬ್ಬರಿಮೇಲೆ ಇನ್ನೊಬ್ಬರು, ಆರೋಪ –ಪ್ರತ್ಯಾರೋಪಗಳನ್ನು ಮುಂದುವರಿಯುಸುತ್ತಿದ್ದಾರೆ .    ಗೋವಿಂದರೆಡ್ಡಿ ಹಾಗೆ ನೋಡುತ್ತಾ ನೋಡುತ್ತಾ ನಲವತ್ತು ವರ್ಷ ಹಿಂದಕ್ಕೆ ಹೋದ. ಆಗಲೇ ಅನಂತಪೂರ್  ಇಂಜಿನಿಯರಿಂಗ್  ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿಕೊಂಡು ಪಬ್ಲಿಕ್ ಸರ್ವೀಸ್ ಕಮಿಷನ್   ಎಕ್ಸಾಮ್ ಬರೆದಮೇಲೆ   ಜೂನಿಯರ್ ಇಂಜನೀರಿಂಗ್ ಯಾಗಿ ಜಾಬ್ ಸಿಕ್ಕಿತು. ಮೊದಲೇನೆಯ ಪೋಸ್ಟಿಂಗ್ ಶ್ರೀಶೈಲಮ್  ಪ್ರಾಜೆಕ್ಟ್. ಶಿವರಾಮಿರೆಡ್ಡಿ ಅವರು  ಎಗ್ಜಿಕ್ಯುಟಿವ್ ಇಂಜನೀರ್ ಯಾಗಿ , ಸುಬ್ರಹ್ಮಣ್ಯಂ  ಸೂಪೆರಿಂಡೆಂಟ್ ಇಂಜನೀರ್ ಯಾಗಿ ಇದ್ದರು.  ಪ್ರಾಜೆಕ್ಟ್ ಕೆಲಸಗಲೆಲ್ಲಾ  ಕನ್ಸ್ಟ್ರಕ್ಷನ್  ಕಾರ್ಪೊರೇಷನ್  ಲಿಮಿಟೆಡ್ ಮೂಲಕ ನಡೆಯುತ್ತಿದ್ದವು. ಶಿವರಮಿರೆಡ್ಡಿ  ಅವರು ತನಗಿಂತಲೂ ಹದಿನೈದು ವರ್ಷ ದೊಡ್ಡವರು. ಆಗ ತನಗೆ ಇಪ್ಪತ್ತೈದುವರ್ಷ. ಯಾವ ಅನುಭವ ಜ್ಞಾನವೂ ಇಲ್ಲ. ಎಲ್ಲವೂ ಪುಸ್ತಕ ಜ್ಞಾನ. ಶಿವರಾಮಿರೆಡ್ಡಿ ಅವರಿಗೆ ತಾಳ್ಮೆಜಾಸ್ತಿ. ತನ್ನನ್ನು ಚೆನ್ನಾಗಿ ಗೈಡ್ ಮಾಡುತ್ತಿದ್ದರವರು. ಎಲ್ಲರನ್ನೂ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.  ಆಗಲೇ ಅಲ್ಲಿರುವ ಎಲ್ಲಾ ಇಂಜಿನಿಯರ್ಗಳಲ್ಲಿ ತಾನೇ ಕಿರಿಯವನು. ಅನೇಕರು ಡಿಪ್ಲೊಮಾ ಮೂಲಕ ಸೇರಿ, ಪ್ರಮೋಷನ್ ಮೇಲೆ ಆ ಮಟ್ಟಕ್ಕೆ  ಬಂದರು.   ಶಿವರಾಮಿರೆಡ್ಡಿ ಅವರು ನಾಗಾರ್ಜುನ ಸಾಗರ್   ಪ್ರಾಜೆಕ್ಟ್ ನಲ್ಲಿ ಕೆಲಸಮಾಡಿದ ಅನುಭವದಿಂದ  ಇಲ್ಲಿಗೆ ಬಂದಿದ್ದರು. ಪ್ರಾಜೆಕ್ಟ್ ಕೆಲಸಗಳೆಲ್ಲಾ ಎಸ್‌ಸಿ ಅವರ ಅಧೀನಯಲ್ಲಿ  ನಡೆಯುತ್ತಿದ್ದವು. ಸಂದರ್ಭಗಳನ್ನು ತಮಗೆ  ಅನುಕೂಲವಾಗಿ ಪರಿವರ್ತಿಸುವಲ್ಲಿ  ಎಸ್ ಇ ಅವರು ಬಹಳ ಪ್ರವೀಣರು. ಒಳ್ಳೆಯ ಚಾಕಚಕ್ಯತೆಯ ವ್ಯಕ್ತಿ. ಆಗ ಸಿ ಇ ಹೈದರಾಬಾದ್‌ನಲ್ಲಿ ಇರುತ್ತಿದ್ದರು.  ಹಲವು ಸಂದರ್ಭಗಳಲ್ಲಿ ಸುಬ್ರಹ್ಮಣ್ಯಂ ಅವರಜೊತೆ ಹೋಗಿ ಸಿ.ಇ. ಅವರನ್ನು  ಭೇಟಿಯಾದರು. ಒಮ್ಮೆ  ಡ್ಯಾಮ್ ಕೆಲಸಗಳಲ್ಲಿ  ಕಲ್ಲುಗಳನ್ನು ಹೊತ್ತುಕೊಂಡು ಹೋಗುವ ಕಾರ್ಮಿಕನು  ಕಾಲುಜಾರಿ ಕೆಳಗೆ ಬಿದ್ದಿದ್ದಾನೆ. ಆಗ ಸಪೋರ್ಟ್ ಯಾವುದೂ ಇಲ್ಲದರಿಂದ ಹಾಗೆ ಜಾರುತ್ತಾ ಬಹಳ ಅಳಕ್ಕೆ  ಬಿದ್ದು ಬಿಟ್ಟನು. ಪೆಟ್ಟುಗಳು ಬಲವಾಗಿ ತಾಕಿದವು. ರಕ್ತ ಸೋರುತ್ತಿದೆ.. ಮನುಷ್ಯನಿಗೆ ಪ್ರಜ್ಞೆಯೂ ಇಲ್ಲ. ತಕ್ಷಣ ಅಲ್ಲಿಯೇ ಪ್ರಥಮ ಚಿಕಿತ್ಸೆ ಮಾಡಿಸಿ ಪ್ರಾಜೆಕ್ಟ್ ಆಸ್ಪತ್ರೆಗೆ ಕರೆದೊಯ್ದರು. ಚೇತರಿಸಿಕೊಳ್ಳಲು ಹಲವು ದಿನಗಳು ಬೇಕೆಂದು ಹೇಳಿದರು. ಎಲ್ಲಾ ಕೆಲಸಗಾರರು ಜಮಾಯಿಸಿ ಕೆಲಸ ಮಾಡುವುದು ನಿಲ್ಲಿಸಿದರು. ಕೆಲಸ ನಿಂತುಹೋಯಿತು. ದೊಡ್ಡ ಜಗಳವೇ ನಡೆಯಿತು. ಕೆಲಸ  ಸ್ಥಗಿತಗೊಂಡಿತು. ಮೇಸ್ತ್ರಿಗಳು ಕೈಬಿಟ್ಟರು. ಯೂನಿಯನ್  ಮುಖಂಡರು ಎಸ್‌.ಸಿ. ಅವರನ್ನು ಭೇಟಿಮಾಡಿದರು. ಅವರು ಅವರನ್ನು ಸಮಾಧಾನಪಡಿಸಿ ಯಾವುದಾದರೂ ಕಾಂಪೆನ್ ಸೇಷನ್  ಕೊಡುತ್ತೇವಿ ಎಂದು ಒಪ್ಪಿಸಿದರು. ಆದರೆ ಇದು ಈ ಒಂದು ಸಲಕ್ಕೆ ನಿಂತುಹೋಗದು. ಇಷ್ಟು  ಪ್ರಾಜೆಕ್ಟ್ ಯಲ್ಲಿ  ಈ ರೀತಿಯ  ವಿಷಯಗಳು ನಡೆಯುತ್ತಲೇ ಇರುತ್ತವೆ.  ನಾಗಾರ್ಜುನ ಸಾಗರದಲ್ಲಿ ಸಾಕಷ್ಟು ಪ್ರಾಣಹಾನಿ ಸಂಭವಿಸಿದೆ. ಹಾಗಾಗಬಾರದೆಂದು ಕೊಂಡರೆ  ಅಪಾಯಕಾರಿಯ ಕೆಲಸಗಳು ಯಂತ್ರಗಳ ಸಹಾಯದಿಂದ ಮಾಡಿಸಬೇಕು.  ಯಂತ್ರಗಳನ್ನು  ಹೆಚ್ಚಾಗಿ  ಬಳಸಬೇಕು. ಇದೆ ವಿಷಯವನ್ನು ಕುರಿತು ಸಿ .ಇ. ಅವರೊಂದಿಗೆ ಚರ್ಚಿಸಿದರೆ, ‘‘ನಿಜವೇ ಆದರೂ , ಈ ಪ್ರಾಜೆಕ್ಟ್  ಮೂಲಕ ಜನರಿಗೆ ಒಂದಿಷ್ಟು ಜೀವನೋಪಾಧಿ ಸಿಗುತ್ತದಲ್ಲ. ಯಂತ್ರಗಳ ಬಳಕೆ ಯಾದರೆ  ಜನರ  ಉಪಾಧಿಗೆ ಧಕ್ಕೆ ಬೀಳುತ್ತದೆಂದು , ಅದಕ್ಕಾಗಿಯೇ ಸರ್ಕಾರು ಈ ಪ್ರತಿಪಾದನೆಗೆ ಅಂಗೀಕರಿಸುವುದಿಲ್ಲ ಎಂದು ಹೇಳುತ್ತಾ ಸಮಯಕ್ಕಾಗಿ ಕಾಯೋಣ” ಎಂದು ಸೂಚಿಸಿದರು. ಒಂದು ರಿವ್ಯೂ  ಮೀಟಿಂಗ್ ನಲ್ಲಿ ಮಂತ್ರಿ ಅವರು ಪ್ರಾಜೆಕ್ಟ್  ಕೆಲಸವನ್ನು ಪರಿಶೀಲಿಸಿ ಕೆಲಸ /ಕಾಮಗಾರಿ ವಿಳಂಬವಾಗುತ್ತಿದೆ  ಎಂದು ದೂರಿದರು. ರಾಜ್ಯದಲ್ಲಿ ವಿದ್ಯುತ್ತಿನ ಕೊರತೆ  ತೀವ್ರವಾಗಿದೆ ಎಂದು, ನಾವು ಇನ್ನೂ ಡ್ಯಾಮ್ ನಿರ್ಮಿಸುವ   ಕೆಲಸದಲ್ಲೇ ಇದ್ದೇವೆಂದು,  ವಿದ್ಯುತ್ ಯಾವಾಗಾ ಉತ್ಪಾದನೆ  ಮಾಡುತ್ತೇವೆ ಎಂದು ಸಿಟ್ಟಗೆದ್ದರು.  ಆಗ       ಎಸ್ . ಇ. ಅವರು ಆ ಅವಕಾಶವನ್ನು  ಸದುಪಯೋಗಪಡಿಸಿಕೊಂಡರು – ಯಂತ್ರಗಳ ಸಂಖ್ಯೆಯನ್ನು ಹೆಚ್ಚಿಸೋಣ ಎಂದು,  ಮತ್ತು ಜನರು ಹೊತ್ತುಕೊಂಡು ಹೋಗುವ ಅಗತ್ಯವಿಲ್ಲದೆ ರೋಪ್‌ ವೇ ಮೂಲಕ ಕೆಲವು  ಟನ್‌ಗಳಷ್ಟು  ಮೆಟೀರಿಯಲ್  ಎಲ್ಲಿಗೆ ಬೇಕಾದರೆ ಅಲ್ಲಿಗೆ ತೆಗೆದುಕೊಂಡು ಹೊಗ ಬಹುದೆಂದು ಅದರಿಂದ ಕೆಲಸಗಳನ್ನು ಬೇಗೆ ಬೇಗೆ ಮಾಡಬಹುದೆಂದು ಮಂತ್ರಿ ಅವರನ್ನು ಸಮಾಧಾನ ಮಾಡಿದರು.  ಕೂಡಲೇ ಮಂತ್ರಿ ಅವರು ಆದೇಶ ಹೊರಡಿಸಿದರು. ಅವರು ಯೋಚಿಸಿದಂತೆಯೇ, ಸಮಯಾನು ಕೂಲವಾಗಿ  ತನ್ನ ಆಲೋಚನೆಯನ್ನು ಸಮಯಕ್ಕೆ ಪೂರೈಸಿದನು.  ಅದರಿಂದ ಬಹುತೇಕ ಯಂತ್ರಗಳ ಸಹಾಯದಿಂದ ರೋಪ್ ವೇ ಬಳಸಿದ್ದರಿಂದ ನಿರ್ಮಾಣ ಹಂತದಲ್ಲಿಯೇ ಈ ಯೋಜನೆಯಲ್ಲಿ ಕನಿಷ್ಠ ಪ್ರಾಣಹಾನಿ ಸಂಭವಿಸಿದೆ. ಇಂತಹ ನಿರ್ಧಾರಗಳನ್ನು  ಸಮಯಸ್ಪೂರ್ತಿ ಯಿಂದ ತೆಗೆದುಕೊಳ್ಳುವಲ್ಲಿ ಅವರು ದಿಟ್ಟರು. “ನೀವು ಇನ್ನೂ ಏಕೆ ಮಲಗಲಿಲ್ಲ? ಒಂದು ಗಂಟೆ ಮೀರಿದೆ? ನಾವೇನು ಮಾಡಬಲ್ಲೆವು? ಹೀಗೆ ಬೆಳಗಾವ ವರೆಗೆ ಕೂತಿದ್ದರೂ  ಉಪಯೋಗವೇನು? ನಿದ್ದೆ ಕಾದದ್ದುದರಿಂದ ಉಯೋಗವೇನು? ಏನಾದರೂ ಮಾಡಬೇಕಾದರೆ, ನಾವಿಲ್ಲಿ, ಅವರು ಅಲ್ಲಿ ” ಎನ್ನುತ್ತಾ ಮಾಧವಿ ಪಡಶಾಲೆಗೆ ಬಂದಳು. ಅಲ್ಲಿ ಸೇರಿದ ಎರಡುವರ್ಷಗಳ ನಂತರ ಮಾಧವಿ  ತನ್ನ ಬದುಕನ್ನು ಪ್ರವೇಶಿಸಿದಳು. ಕರ್ನೂಲ್  ಟೌನ್ ನಲ್ಲಿ ಹುಟ್ಟಿ ಬೆಳೆದಳು ಅವಳು. ಎಲ್ಲಿಯೋ ನಲ್ಲಮಲ ಗುಡ್ಡಗಳಲ್ಲಿ, ಒಂದು ಚಿಕ್ಕ ಊರಲ್ಲಿ  ಇರುವುದಕ್ಕೆ ಅವಳು ಇಷ್ಟಪಡಲಿಲ್ಲ. ಆದರೆ ಅನಿವಾರ್ಯದ  ಪರಿಸ್ಥಿತಿಯಲ್ಲಿ ಕಾಲನೀಗೆ ಬಂದ ಅವಳು ಅವಳು ಅಲ್ಲಿನ  ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಂಡಳು. ಆನಂತರ ಮೂವರು ಮಕ್ಕಳು ಅಲ್ಲೇ ಪ್ರಾಜೆಕ್ಟ್  ಹೈಸ್ಕೂಲಿನಲ್ಲಿ ಓದಿದರು. ಇಪ್ಪತ್ತುವರ್ಷಗಳ ಸುದೀರ್ಘ ಅವಧಿಯ ನಂತರ ಅನಂಪೂರ್ ಗೆ ಟ್ರಾನ್ಸಫರ್  ಆಯಿತು. “ಯಾವುದೂ ಶಾಶ್ವತವಲ್ಲ, ಅಲ್ಲವೇ.. ಯಾಕಿಷ್ಟು ವ್ಯಾಮೋಹ ಆ ಡ್ಯಾಮ್ ಅಂದರೆ? ” ಎಂದು ನಿರ್ಲಿಪ್ತ ಭಾವದಿಂದ ಕೇಳಿದಳು. ಅವಳನ್ನು  ತಡೆಯಲಿಲ್ಲ, ವಾದಿಸಲಿಲ್ಲ.  ಏನನ್ನೂ ಮಾತನಾಡದೇ ಕೂತಿದ್ದರಿಂದ  ಅವಳಿಗೆ ಬೇಸರವಾಗಿ ಮತ್ತೆ ಬೆಡ್ರೂಮಿಗೆ ಹೋದಳು. ನನಗೆ  ಇದ್ದಕ್ಕಿದ್ದಂತೆ  ಅಬ್ದುಲ್  ಬಷೀರ್‌ ಗೆ  ಫೋನ್ ಮಾಡಬೇಕೆಂದು ಅನಿಸಿತು. ಅವನು ಸದ್ಯಕ್ಕೆ ಚೀಫ್. ಇಂಜಿನಿಯರ್ ಆಗಿ ಇದ್ದಾನೆ. ಫೋನ್ ಮಾಡಿದ. “ಪರಿಸ್ಥಿತಿ ತುಂಬಾ ಕ್ರಿಟಿಕಲ್ ಆಗಿ ಇದೆ ಎಂದು,  ಬೆಳಗಾದರೇ ಹೊರೆತು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು, ಸದ್ಯಕ್ಕೆ ನಮ್ಮ ಕೈಯಲ್ಲಿ ಏನೂಇಲ್ಲವೆಂದು, ತನಗೆ ಹತ್ತುನಿಮಿಷಕ್ಕೊಮ್ಮೆ ಸಿ.ಎಂ. ಕಚೇರಿಯಿಂದ ಕರೆಗಳು ಬರುತ್ತಿವೆ ಎಂದು, ಇವಲ್ಲದೆ  ಮಾಧ್ಯಮಗಳು  ತನ್ನನ್ನು ಉಸಿರುಗಟ್ಟಿಸುತ್ತಿವೆ ಎಂದು, ನಾಳೆ , ಇಲ್ಲದಿದ್ದರೆ ನಾಡೆದ್ದೋ  ಮತ್ತೆ ಬಿಡುವು  ಮಾಡಿಕೊಂಡು ಫೋನ್ ಮಾಡುತ್ತೇನೆ” ಎಂದು  ಗೌರವ ಪೂರ್ವಕವಾಗಿ ಹೇಳಿ ಫೋನ್ ಕಟ್ ಮಾಡಿದ. “ಇನ್ನು ಸ್ವಲ್ಪ ಹೊತ್ತಿನಲ್ಲಿ  ಡ್ಯಾಮ್ ಪೂರ್ತಿಯಾಗಿ ಮುಳುಗಲಿದೆ. ಮತ್ತು ಈ ಕಾಂಕ್ರೀ ಟ್ ಕಲ್ಲಿನ ಕಟ್ಟಡ, ಈ ಆಧುನಿಕ ದೇವಾಲಯವು  ಎಷ್ಟರ ಮಟ್ಟಕ್ಕೆ   ಪ್ರಕೃತಿಯ ದಾಳಿಯನ್ನು ತಡೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕು. ಪ್ರಕೃತಿಯ ನಿಯಮಗಳಿಗೆ ವಿರುದ್ಧವಾಗಿ ನೀರನ್ನು ಸಂಗ್ರಹಿಸಿ, ನೀರಿನ  ದಾರಿಯನ್ನು  ಬದಿಲಿಸಿ  ಮನುಷ್ಯ ಮಾಡಿತ್ತಿರುವ  ಈ ಅಪುರೂಪದ  ಪ್ರಯೋಗಗಳು ಪ್ರಕೃತಿಯ ನಿಯಮಗಳನ್ನು ಉಲ್ಲಂಘಿಸಿದಂತೆ  ಅಥವಾ ಪ್ರಕೃತಿಯನ್ನು   ಮನುಷ್ಯನು ಆಕ್ರಮಿಸಿದಂತೆಯೇ? … ಈ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತವೆ.   ಟಿವಿಯಲ್ಲಿ  ಯಾಂಕರ್  ಸುಮ್ಮನೆ ಬಡಬಡಾಯಿಸುತ್ತಿದ್ದಾನೆ .ಅವನಿಗೆ ಡ್ಯಾಮ್ ನಿಲ್ಲಬೇಕೆಂದು ಇದೆಯೋ ಅಥವಾ ಕೊಚ್ಚಿಕೊಂಡು ಹೋಗಬೇಕೆಂದಿದಿಯೋ, ಇಲ್ಲವೋ  ಅರ್ಥವಾಗುತ್ತಿಲ್ಲ.  ಕರೆಕ್ಟ್.  ರಿಪೋರ್ಟರ್ಸ್ ಗೆ ಆ ಡ್ಯಾಮ್ ಕೊಚ್ಚಿಕೊಂಡು ಹೋದರೂ ಸುದ್ದಿ, ನಿಂತರೂ ದೊಡ್ಡ ಸುದ್ದಿಯೇ . ಆದರೆ ಅವನಿಗೆ ತಿಳಿಯದ  ವಿಷಯ  ಆ ಡ್ಯಾಮ್  ಬಾಲಾರಿಷ್ಟದಿಂದ  ಆಲ್ರೆಡೀ  ಕೆಲವು ಸಲ ಕೊಚ್ಚಿಕೊಂಡು ಹೋಗಿದೆ ಎಂದು, ಈ ವಿಷಯವನ್ನು ಶಿವರಾಮಿರೆಡ್ಡಿ ಯವರೇ ಹೇಳಿದ್ದಾರೆ “. “ಅರವತ್ತಾರೋ, ಅರವತ್ತೇಳೋ, ನೆನಪಿಲ್ಲ,  ನವೆಂಬಾರ್ ನಲ್ಲಿ  ಕೆಲಸ ಶುರುಮಾಡಿ ಏಪ್ರಿಯಲ್ ವರೆಗೂ   ಮುಂದುವರೆಸೋಣ ಅಂದುಕೊಂಡೆವು. ನಾವು ದೊಡ್ಡ  ಸಂಖ್ಯಯಲ್ಲಿ  ಕೂಲೀಗಳನ್ನು, ಕಂಟ್ರಾಕ್ಟರ್ ಗಳನ್ನು ನಿಯೋಜಿಸಿದ್ದೇವೆ. ಈಗಾಗಲೇ ಕಾಫ ರ್ ಡ್ಯಾಮ್  ನಿರ್ಮಾಣ ಪೂರ್ಣಗೊಂಡಿದ್ದು, ನೀರನ್ನು ಹರಿಸುವ ಬಲಕಾಲುವೆ ನಿರ್ಮಾಣವೂ ಮುಗಿಸಿದ್ದರಿಂದ ಮಳೆ ಕಾಲವೆಲ್ಲಾ  ಸುರಿಯುವ ಮಳೆಯ ನೀರನ್ನೆಲ್ಲ ಬೇರೆಡೆಗೆ ತಿರುಗಿಸಿ  ಬೇಸಿನ್ ಖಾಳೀ ಮಾಡಿದೆವು. ಅಗೆಯುವ ಕೆಲಸ ನಡೆಯುತ್ತದೆ.  ಮರಳಿನ ಅಭಾವದಿಂದ ಸ್ವಲ್ಪ ತಡವಾದರೂ  ಬುನಾದಿ ಅಗೆದ ಮೇಲೆ  ಸುಮಾರು ನೂರು ಅಡಿಗಳ ವರೆಗೆ ಕಲ್ಲುಗಳನ್ನುಹಾಕಿ  ಕಟ್ಟೆಯನ್ನು ನಿರ್ಮಿಸಿದರು.   ಅದೇ ಉತ್ಸಾಹದಿಂದ , ಮತ್ತೆ ಮಳೆ ಬೀಳುವ ಮೊದಲೇ ನಾಲ್ಕು ನೂರು ಅಡಿಗಳು ನಿರ್ಮಾಣ ಮಾಡಬಹುದು.  ಸರಿಯಾಗಿ ಆಗಲೇ ಮಹಾ ಮುನಿಗಳ ಯಜ್ಞ-ಯಾಗಗಳನ್ನು  ವಿನಾಶ ಮಾಡಲು  ರಾಕ್ಷಸರು ಮಡಿಕೆಗಳಿಂದ  ನೀರನ್ನು ಹಾಕಿದಂತೆ…ದೊಡ್ಡ ಪ್ರಮಾಣದಲ್ಲಿ ..ರಭಸವಾಗಿ ಹರಿಯುವ ಪ್ರವಾಹ..ಎಲ್ಲೋ  ಬೇರೆ ಎಲ್ಲೋ  ಸುರಿಯುವ ಮಳೆಯಿಂದ  ಮುರಿದಿದ್ದ  ಕೆರೆಗಳು,  ಹರಿಯುವ ಹಳ್ಳಗಳು, ಆಶಿಸದ, ಊಹಿಸದ  ಎಡೆಬಿಡದಮಳೆ….ಆಗಾಗ ಅನ್ನಿಸುತ್ತದೆ – ಮಳೆ ಎಂದೂ ಹರ್ಷವನ್ನು ಕೊಡುತ್ತದೆಂದು ಹೇಳಲಾಗುವುದಿಲ್ಲ ಎಂದು. ಏನಾಗಿದೆ, ಎರಡೇ ಎರಡು ದಿನಗಳಲ್ಲಿ ನೂರು ಅಡಿಗಳ ಕಟ್ಟೆ ಬೇಸ್ ಮಟ್ಟಕ್ಕೆ  ಕುಸಿದುಕೊಂಡಿದೆ.  ಈಗಾಗಲೇ ಒಂದು ಸಲ ಎಲಿಮೆಂಟರಿ   ದಶಯಲ್ಲಿ ಹೀಗಾಯಿತು. ಅಶಗಳು ನಿರಾಶೆ ಯಾಗಿವೆ. ಅಂತ್ಯವಿಲ್ಲದ ಶ್ರಮ ವ್ಯರ್ಥವಾಯಿತು. ಆಗ ತಿಳಿಯಿತು – ಅಲ್ಲಿದ್ದ ಕಲ್ಲಿನ ಸ್ವರೂಪ. ಅದು ಮೇಲೆಕ್ಕೆ ಗಟ್ಟಿಯಾಗಿ ಕಾಣುತ್ತದೆ  ಆದರೆ, ಒಳ ಭಾಗ ದಲ್ಲಿ ಸ್ವಲ್ಪ ಟೊಳ್ಳಾಗಿದೆ. ಸೀಮೆಸುಣ್ಣದ ಶೇಕಡಾ ಹೆಚ್ಚು ಇರುತ್ತದೆ. ಇದನ್ನು ತಿಳಿದುಕೊಂಡನಂತರ, ಸಂಪೂರ್ಣ ಕಲ್ಲಿನ ನಿರ್ಮಾಣವು  ಒಳ್ಳೆಯದಲ್ಲ ಎಂದು,  ಎಂದಾದರೂ ಅಪಾಯಾಕಾರಿಯೇ ಎಂದು ಗ್ರಹಿಸಿ, ತಕ್ಷಣವೇ ಕಾಂಕ್ರೀಟ್  ನಿರ್ಮಾಣನಕ್ಕೆ ಬದಲಿಸಿದರು.   ಆಗಿನ ಅಧಿಕಾರಿಗಳಿಗೆ ಎಷ್ಟು ಮೇಲ್ವಿಚಾರ ಇರುತ್ತದೋ ಅಷ್ಟು ಜವಾಬ್ದಾರಿಯೂ ಇರುತ್ತಿತ್ತು. ಎಪ್ಪತ್ತರ  ದಶಕಗಳ ಕೊನೆಗೆ ಬರುವ ಸಮಯಕ್ಕೆ, ಕೆಲಸಗಳನ್ನು ವೇಗಗೊಳಿಸಬೇಕಾಗಿತ್ತು. ಬೆಳಗ್ಗೆ ಆರು ಅಥವಾ ಏಳು ಗಂಟಕ್ಕೆ ಶುರುವಾದ ಕೆಲಸಗಳು ಸಂಜೆಯ ಹೊತ್ತಿಗೆ ಮುಗಿಯುತ್ತಿದ್ದವು.  ಆಗಾಗಲೇ

ಜಿ.ಉಮಾ ಮಹೇಶ್ವರ್‌ ಅವರ ತೆಲುಗು ಕಥೆ “ಒಂದು ಆಧುನಿಕ ದೇವಾಲಯದ ಕಥೆ”ಕನ್ನಡಾನುವಾದ ರಂಗನಾಥ ರಾಮಚಂದ್ರ ರಾವು Read Post »

ಅನುವಾದ

ತೆಲುಗು ಕವಿತೆ “ಬದುಕು ಮೂಟೆ”ಯ ಕನ್ನಡಾನುವಾದ ಕೋಡಿಹಳ್ಳಿ‌ ಮುರಳಿ ಮೋಹನ್

ಅನುವಾದ ಸಂಗಾತಿ ಬದುಕು ಮೂಟೆ ತೆಲುಗು ಮೂಲ: ಗಜ್ಜೆಲ ರಾಮಕೃಷ್ಣ ಕನ್ನಡಕ್ಕೆ: ಕೋಡಿಹಳ್ಳಿ ಮುರಳಿಮೋಹನ್ ಯಾವುದೋ ಜಾತ್ರೆ ಶುರುವಾದಂತೆ,ದೇವ್ರ ಆಭರಣ ಹೊತ್ತು ತಂದಂತೆ,ಬೀದಿಲಿ ಸುತ್ತೋ ಮೆರವಣಿಗೆ. ನೋಡೋಕೆ ಚಿಕ್ಕದೇ, ಆದ್ರೆಮೂಟೆ ಬಿಚ್ಚಿದ್ರೆ,ಮ್ಯಾಜಿಕ್ ಶೋ ನೋಡಿದಂಗೆ,ರಾಜ-ರಾಣಿ ಡ್ರೆಸ್‌ಗಳನ್ನೇನೋ ಪ್ರದರ್ಶನಕ್ಕಿಟ್ಟಂಗೆ.ಬಾಗಿಲ ತುಂಬಾ ಹರಡಿಕೊಳ್ಳೋ ಬಟ್ಟೆ ಅಂಗಡಿ. ” ಚಿನರಾಯುಡು ಪೆದರಾಯುಡು ಲುಂಗಿ” ಅಂದ್ಬಿಟ್ಟು,“ರಂಭಾ, ರಮ್ಯಾಕೃಷ್ಣ ಸೀರೆ” ಅಂತಾ ಹೇಳ್ತಾನಲ್ಲ,ಅವನೆಷ್ಟು ಕನಸುಗಳನ್ನ ಗಂಟಿಗ್ ತುಂಬ್ಕೊಂಡು ಬಂದಿರ್ತಾನೋ! ಒಂದು ರೇಟ್ ಹೇಳ್ತಾನೆ.ನಾವು ‘ಬೇಡ’ ಅಂತೀವಿ.ಅವನೊಂದು ಮಾತು ಹೇಳ್ತಾನೆ.ನಾವು ಇನ್ನೊಂದು ಮಾತು ಹೇಳ್ತೀವಿ.ಅವನೊಂದು ಸ್ಟೆಪ್ ಕೆಳಗಿಳಿದು,ಕೂಲಿ ಸಿಕ್ತು, ವ್ಯಾಪಾರ ಸೆಟ್ ಆಯ್ತು ಅಂದ್ಕೊಂಡು,ಕಣ್ಣಲ್ಲಿ ನಗ್ತಾನೆ. ಉದ್ರಿ (ಕಂತು)ಗೂ ಒಪ್ಕೋತಾನೆ.ಎಷ್ಟು ಹೊತ್ತು ಚೌಕಾಸಿ ಮಾಡಿದ್ರೂ,ನೆತ್ತಿ ಮೇಲೆ ಬೇಜಾರಿನ ಗೆರೆ ಮೂಡದಂತೆ ನೋಡ್ಕೋತಾನೆ. ಸೂರ್ಯಕಾಂತಿ ಹೂವಿನ ಹಾಗೆ,ಈ ಕೇರಿ ಆ ಕೇರಿ ತಿರುಗಿ ಸಾಯಂಕಾಲಕ್ಕೆ,ಮೂಟೆ ಕೊಡವಿ, ಜೇಬು ತುಂಬಿದ ಖುಷಿನಜೊತೆಗಿಟ್ಕೊಂಡು ಮನೆಗೆ ಹೋಗ್ತಾನೆ. ಕಾಲ ಸುಮ್ನೆ ಇರೋದಿಲ್ಲ ತಾನೇ?ಬಲಗೈಲಿ ತಳ್ಳಿದ್ದ ಗಾಳಿನಎಡಗೈಲಿ ವಾಪಸ್ ಕಳ್ಸ್ತಿದೆ. ಇವನ ಐಡಿಯಾನ ಕಾಪಿ ಮಾಡಿ,ಬೀದಿ ಮಧ್ಯೆ ತಲೆ ಎತ್ತಿದ ಶಾಪಿಂಗ್ ಮಾಲ್,ಅವನ ಹೊಟ್ಟೆಗೆ ಹೊಡೀತಾ,ಬದುಕಿನ ಮೇಲೆ ಪ್ರಳಯ ಡಾನ್ಸ್ ಮಾಡ್ತಿದೆ. ಆಲಿಕಲ್ಲಿಗೆ ಉದುರಿ ಹೋದ ಭತ್ತದ ಕಾಳಿನ ಹಾಗೆ,ಎಲ್ಲೋ…ಕುತ್ತಿಗೆ ಕಟ್ ಆಗ್ತಿದೆ

ತೆಲುಗು ಕವಿತೆ “ಬದುಕು ಮೂಟೆ”ಯ ಕನ್ನಡಾನುವಾದ ಕೋಡಿಹಳ್ಳಿ‌ ಮುರಳಿ ಮೋಹನ್ Read Post »

ಅನುವಾದ

ಜೂಕಂಟಿ ಜಗನ್ನಾಥಂ ಅವರ ತೆಲುಗು ಕವಿತೆ “ನೀನು ಶಿಲೆಯಾದರೆ” ಕನ್ನಡಾನುವಾದ ಕೊಡೀಹಳ್ಳಿ ಮುರಳೀ ಮೋಹನ್

ಜೂಕಂಟಿ ಜಗನ್ನಾಥಂ ಅವರ ತೆಲುಗು ಕವಿತೆ “ನೀನು ಶಿಲೆಯಾದರೆ” ಕನ್ನಡಾನುವಾದ ಕೊಡೀಹಳ್ಳಿ ಮುರಳೀ ಮೋಹನ್

ಆದರೆ ಅವನ ಪಾದದ ಧೂಳಿನಿಂದ
ಶವದ ಆಕಾರವೇ ಹೊರತು
ನವಜೀವನದ ರೂಪ ವಿಮೋಚನೆ

ಜೂಕಂಟಿ ಜಗನ್ನಾಥಂ ಅವರ ತೆಲುಗು ಕವಿತೆ “ನೀನು ಶಿಲೆಯಾದರೆ” ಕನ್ನಡಾನುವಾದ ಕೊಡೀಹಳ್ಳಿ ಮುರಳೀ ಮೋಹನ್ Read Post »

ಅನುವಾದ

“ನೀನು ಮತ್ತು ಕವಿತೆಯೂ…..!!” ರಾಧಕೃಷ್ಣನ್ ಅವರಮಲಯಾಳಂ ಕವಿತೆಯ ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ.

“ನೀನು ಮತ್ತು ಕವಿತೆಯೂ…..!!”
ಮಲಯಾಳಂ ಮೂಲ: ರಾಧಕೃಷ್ಣನ್
ಕನ್ನಡಾನುವಾದ: ಐಗೂರು ಮೋಹನ್ ದಾಸ್ ಜಿ.

“ನೀನು ಮತ್ತು ಕವಿತೆಯೂ…..!!” ರಾಧಕೃಷ್ಣನ್ ಅವರಮಲಯಾಳಂ ಕವಿತೆಯ ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ. Read Post »

You cannot copy content of this page

Scroll to Top