ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ನಲಿವಿನ ನಾಲಗೆ (ಪ್ರಬಂಧ ಸಂಕಲನ) ನಲಿವಿನ ನಾಲಗೆ ಪುಸ್ತಕದ ಹೆಸರು:ನಲಿವಿನ ನಾಲಗೆ(ಪ್ರಬಂಧ ಸಂಕಲನ)ಲೇಖಕರ ಹೆಸರು:ಸುಮಾವೀಣಾಪುಟಗಳ ಸಂಖ್ಯೆ:128–ಬೆಲೆ-120ರೂಪ್ರಕಾಶಕರ ಹೆಸರು:ಪರಶಿವಪ್ಪ,ಸ್ನೇಹ ಬುಕ್ ಹೌಸ್, ಬೆಂಗಳೂರುಪುಸ್ತಕ ದೊರೆಯುವ ಸ್ಥಳ:www.mybookadda.netಅಂಚೆಯಲ್ಲಿಪುಸ್ತಕ ತರಿಸಿಕೊಳ್ಳಲು ಹಣ ಹಾಕಬೇಕಾದ ಬ್ಯಾಂಕ್ ಖಾತೆ ವಿವರ;Ac No3211142353,IFSC code SBIN0011259

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಮೌನ ಮಂದಾರ ಮೌನ ಮಂದಾರ ಕರ್ತೃ_ ವಾಣಿಮಹೇಶ್ಪ್ರಕಾಶಕರು_ ಜ್ಞಾನಮುದ್ರ ಪ್ರಕಾಶನಲಿಂಗರಾಜು ಬಿ.ಎಲ್.ಹೊಳಲುಮಂಡ್ಯ_571402 ಪುಸ್ತಕದಬೆಲೆ-85ರೂಪಾಯಿ ಸ್ವ ವಿಳಾಸ_ವಾಣಿಮಹೇಶ್w/oಮಹೇಶ್ ಹೆಚ್. ಆರ್.ನಂ. ಎ.ಆರ್.613 ಮೊದಲನೇ ಮುಖ್ಯ ರಸ್ತೆ ನಾಲ್ಕನೇ ಅಡ್ಡ ರಸ್ತೆ ಸಾಲಗಾಮೆ ಗೇಟ್ ಸರಸ್ವತಿ ಪುರಂ ಹಾಸನ_573201 PH: 7975353693 ಬ್ಯಾಂಕ್ ಖಾತೆ ನಂ_37614898049IFSC_SBIN0040956 ಇದು ಸಾಧನೆಯ ಸಂಗಮದ ಅನವರತ. ಬೇಕಾದ್ದವು ಭಾವನೆಯಾಗಿ , ಸೋತು ನಿಂತ ನೆನಪುಗಳು ಮೌನ ಮಂದಾರವಾಗಿದೆ. ಕವಯತ್ರಿ ವಾಣಿಮಹೇಶ್ ಅವರ ಬರಹಗಳನ್ನು ಅಧ್ಯಯನ ಮಾಡಿದಾಗ ಸರಳ ಅಕ್ಷರಗಳಿಂದ ಜನನಾಡಿಗೆ ಸರಾಗವಾಗಿ ಹಂಚುವುದರ ಮೂಲಕ ಹೊಸ ಅನುಭವವೂ ಆಯ್ತು. ಹೇಗೆಂದರೆ ಸರಳ ಅನ್ನುವುದನ್ನು ಸರಿಸಿ ಆಳವಾಗಿ ಹೋದಂತೆ ಹಲವಾರು ಕವಲೊಡೆಯಲು ಶುರುವಾಯಿತು. ನಾ ಕಂಡೆ ಆ ಮನವ , ಮಿಡಿವ ಹೂವಂತೆ , ನಾ ಕಂಡೆ ಆ ಮನವ ಆಳದ ಕಡಲಂತೆ. ನಲಿವ ಸ್ಪರ್ಷದಿಂದ ಹೊಸ ಅನುಭವ ಯಾನದಲ್ಲಿ ಮುಳುಗಿ ಹೋದೆ. ಸಾಹಿತ್ಯ ಜಗತ್ತನ್ನು ಸರಳವಾಗಿ ಪರಿಚಯಿಸುವ ಮೂಲಕ ಹೊಸ ಸಂಶೋಧನೆ ಮಾಡಿದ್ದಾರೆ. ಆಳವಾಗಿ ಮುಳುಗಿ ನೋಡಿದಾಗ ಸರಳ ಭಾವನೆಯಲ್ಲೂ ಸಾವಿರ ಸಾರ ತುಂಬಿದ ಅನುಭವ ಸಂದೇಶ ಉಕ್ಕಿ ಬಂತು. ಅವರ ಕವನಗಳಿಂದ ಕಣ್ತುಂಬಿ ಬಂದದ್ದಂತೂ ನಿಜ. ಬದುಕಿನ ತ್ಯಾಗ ವೈರಾಗ್ಯ ಮರೆಯಲು ಮನಸ್ಸು ಮೂಕ ಪ್ರಶ್ನೆಯಾದಾಗ ಮಿಡಿದ ಹೂವೇ ಮೌನ ಮಂದಾರ. ಓದುಗರಿಗೆ ಉತ್ತಮ ಅಭಿರುಚಿಕರವಾಗಿದೆ ಎಂದು ಮನದಾಳದ ಭಾವನೆಯನ್ನು ವ್ಯಕ್ತಪಡಿಸಿದ್ದೇನೆ. ——————————————————–

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಪುಸ್ತಕಸಂಗಾತಿ

ಹೋಗಿ ಬಾ ಮಗಳೆ. ಹೋಗಿ ಬಾ ಮಗಳೇ ಲೇಖಕರು: ಡಾ||ವಿರೂಪಾಕ್ಷ ದೇವರಮನೆಪ್ರಕಾಶಕರು: ಸಾವಣ್ಣ ಎಂಟರ್ಪ್ರೈಸಸ್ಪುಸ್ತಕದ ಬೆಲೆ: ೧೫೦.೦೦ರೂ ಡಾ||ವಿರೂಪಾಕ್ಷ ದೇವರಮನೆಯವರಿಂದ ರಚಿತವಾದ “ಹೋಗಿ ಬಾ ಮಗಳೇ” ಜವಾಬ್ದಾರಿಯುತ ಅಪ್ಪನೊಬ್ಬ ತನ್ನ ಮಗಳಿಗೆ ವೈವಾಹಿಕ ಜೀವನದ ಅನೇಕ ಆಗು ಹೋಗುಗಳ ಬಗ್ಗೆ ಹಿತವಾಗಿ ಮುಖಾಮುಖಿ ಮಾತನಾಡಿದಂತೆ ತೋರುವ ಪುಸ್ತಕ ರೂಪದ ಕೈಗನ್ನಡಿ. ಮದುವೆ ಎನ್ನುವ ಮೂರಕ್ಷರಗಳೊಂದಿಗೆ ಆರಂಭವಾಗುವ ಎರಡು ವಿಭಿನ್ನ ಕುಟುಂಬಗಳ ನಡುವಿನ ಸೇತುವೆ. ಯಾವುದೇ ಮದುವೆಯ ಸಂದರ್ಭದಲ್ಲಿ ಎರಡೂ ಕಡೆ ಕೊಂಚವಾದರೂ ತಕರಾರಿಲ್ಲದೇ ಕಾರ್ಯಕ್ರಮ ನೆರವೇರದು. ಮದುವೆ ಗಂಡು ಹೆಣ್ಣಿನ ನಡುವೆ ಮಾತ್ರವಲ್ಲದೇ ಅವರ ಕುಟುಂಬದವರಿಗೂ ಆತಂಕದ ವಿಷಯವೇ. ಸಂಭ್ರಮದ ಜೊತೆಗೆ ಭವಿಷ್ಯದ ಕಾತರವು ಬೆರೆತಿರುತ್ತದೆ. ಪ್ರಸ್ತುತ ಪುಸ್ತಕದ ಲೇಖಕರು ತಮ್ಮ ಬಳಿ ಬರುವ ಬಹಳಷ್ಟು ಪಾತ್ರಗಳ ಮೂಲಕ ಜೀವನದ ವಿವಿಧ ಮಜಲುಗಳಲ್ಲಿ ಎದುರಾಗಬಹುದಾದ ಘಟನೆಗಳ ಸವಿಸ್ತಾರ ವಿವರಣೆ ಹಾಗೂ ಸೂಕ್ತ ಪರಿಹಾರವನ್ನು ನೀಡಿದ್ದಾರೆ. ಹೆಣ್ಣಾಗಿ ನಾನೂ ಕೂಡಾ ಮತ್ತೊಂದು ಮನೆಗೆ ಬಂದವಳು ಹಾಗೂ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ಸಾಕಷ್ಟು ಪರದಾಡಿದವಳು. ಅಪ್ಪ -ಅಮ್ಮನ ಮನೆಗೆ ವಿಭಿನ್ನವಾದ ವಾತಾವರಣ , ಒಂದು ರೀತಿಯ ಅಳುಕು . ಸಾಮಾನ್ಯವಾಗಿ ಎಲ್ಲಾ ಹೆಣ್ಣು ಮಕ್ಕಳಿಗೂ ಇದೇ ರೀತಿ. ಸೊಸೆ ಗಂಡನ ಮನೆಯಲ್ಲಿ  ಮದುವೆಯ ಮೊದಲಿನಿಂದಲೂ ಸೊಸೆಯೇ ಆಗಿರುತ್ತಾಳೆ. ಆದರೆ ಅಳಿಯನೆಂದರೆ ಹೆಂಡತಿಯ ಮನೆಯಲ್ಲಿ ವಿಶೇಷ ಗೌರವ, ಆದರಾತಿಥ್ಯ. ಬೇರೊಂದು ಮನೆಗೆ ಹೊಂದಿಕೊಳ್ಳುವಾಗ ಸಾಕಷ್ಟು ಸಮಸ್ಯೆಗಳಿರುತ್ತವೆ. ಆದರೆ ಯಾರೂ ಸಮಯದ ಅವಕಾಶವೇ ಕೊಡುವುದಿಲ್ಲ.  ಲೇಖಕರು ಈಗಿನ ಸಮಾಜದಲ್ಲಿ ಮುರಿದುಬೀಳುವ ಅನೇಕ ವಿವಾಹ ಹಾಗೂ ಅವುಗಳ ತೊಳಲಾಟಗಳ ಮೂಲಕ ಮದುವೆ ಎಂದರೆ ಸಮಸ್ಯೆಯಲ್ಲ,‌ ಅದನ್ನು ನಿಭಾಯಿಸಲು ಒಂದಷ್ಟು ತಯಾರಿ ಮಾಡಿಸುವುದು ಹೆತ್ತವರಿಗೂ, ಗಂಡಿನ ಕಡೆಯವರಿಗೂ ಸೇರಿರುತ್ತದೆ. ಲೇಖಕರು ತಮ್ಮ ಈ ಪುಸ್ತಕ ರೂಪದ ದಾರಿದೀಪವನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ೨೫ ಘಟಕಗಳು ಇದರಲ್ಲಿ ಸೇರಿದ್ದು , ನಮ್ಮನ್ನು ಓದಿಸಿಕೊಂಡು ಹೋಗುವ ಮಾರ್ಗದಲ್ಲಿ ಸ್ವ ಅನುಭವಗಳು , ಬೇಸರಿಕೆಗಳು, ಸಂಕಟಗಳು ಇಣುಕುತ್ತವೆ. ಮದುವೆಯ ವಯಸ್ಸಿನ ಕನಸಿನಿಂದ ಹಿಡಿದು ಮಕ್ಕಳ ಜವಾಬ್ದಾರಿ, ಮನೆಯವರೊಂದಿಗೆ ಹೊಂದಾಣಿಕೆ ಹೀಗೆ ಎಲ್ಲವನ್ನೂ ಸಾದೃಶ್ಯಗೊಳಿಸಿದ್ದಾರೆ. ಪತಿ ಹಾಗೂ ಪತ್ನಿ ಯಾರೂ ಹೆಚ್ಚು ಕಡಿಮೆ ಎಂಬ ತರ್ಕ ಕ್ಕೆ ಹೋಗಲೇಬಾರದೆಂಬ ಕಿವಿಮಾತು, ದಂಪತಿಗಳ ನಡುವೆ ಅನ್ಯರ ಪ್ರವೇಶ ಎಂದಿಗೂ ನಿಷಿದ್ಧ , ಅಪಾರ್ಥ ತರುವ ಮೌನಗಳಿಗಿಂತ ಅರ್ಥ ವಿರದ ಜಗಳಗಳೇ ವಾಸಿ, ಕ್ಷಮಿಸುವ ಮರೆಯುವ ಗುಣಗಳನ್ನು ಹೊಂದುವ ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಬದುಕು ಕಟ್ಟಲು ಅಪ್ಪನಂಥ ಗೆಳೆಯನಿಂದ ಸಲಹೆ ಈ ಪುಸ್ತಕ ಎನಿಸಿತು. ಇಂಥ ಘಟನೆಗಳು ಸಾಮಾನ್ಯವಾಗಿ ಎನಿಸಿದರೂ ನಮಗೆ ಕಲಿಯುವ ಪಾಠ ಇದರಲ್ಲಿ ಅಡಗಿದೆ. ಅವಳಿಗೆ… ಅವನಿಗಿರದ ಪ್ರಾಕೃತಿಕ ಸವಾಲುಗಳು! ಅವನಿಗೆ .. ಅವಳಿಗಿರದ ಜವಾಬ್ದಾರಿಗಳು! ಎಂಥಾ ಅದ್ಭುತ ಅಲ್ಲವೇ  ಡಾಕ್ಟರ್ ಅವರ ಈ ನುಡಿಗಳು. ಹೆಣ್ಣು ಹಾಗೂ ಗಂಡು ವಿಭಿನ್ನ ದೈಹಿಕ, ಮಾನಸಿಕ ಕ್ಷಮತೆಯನ್ನು ಪಡೆದವರು. ಅವಳಿರಲಿ, ಅವನಿರಲಿ ಇಬ್ಬರೂ ಒಂದೇ ಆದರೂ ಭಿನ್ನ. ಆರೋಪಗಳ ಸರಮಾಲೆಯ ಮತ್ತೊಬ್ಬರಿಗೆ ಹಾಕುವ ಮುನ್ನ ಸ್ವ ವಿಮರ್ಶೆಗೆ ಅವಕಾಶ ನೀಡುತ್ತದೆ. ಈ ನಿಟ್ಟಿನಲ್ಲಿ ಮನವ ತಟ್ಟಿದ ಪುಸ್ತಕ. ಥ್ಯಾಂಕ್ಯೂ ಡಾಕ್ಟರ್. ****************************************** ಸರಿತಾ ಮಧು

ಪುಸ್ತಕಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಚರಿತ್ರೆಯ ಪುಟಗಳ ಕಟ್ಟ ಹೊತ್ತ ಪರಿಸರದ ಕಥಾ ಮಾಲೆ. ಮಧ್ಯಘಟ್ಟ – ಕಾದಂಬರಿಶಿವಾನಂದ ಕಳವೆಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ. ಪರಿಸರದ ಬಗೆಗಿನ ಕಾಳಜಿ ಮತ್ತು ಜ್ಞಾನ, ಅಪಾರ ತಿರುಗಾಟ, ಗ್ರಾಮೀಣರ ಒಡನಾಟ ಮತ್ತು ಅಧ್ಯಯನಪೂರ್ಣ ಬರಹಗಳ ಮೂಲಕ ಹೆಸರಾದವರು ಪತ್ರಕರ್ತ ಶಿವಾನಂದ ಕಳವೆ. ಶಿರಸಿಯ ಬಳಿಯ ಕಳವೆಯಲ್ಲಿ ಅವರ ನೇತೃತ್ವದ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ, ಕಾನ್ಮನೆ – ಪರಿಸರಾಸಕ್ತರ, ಪತ್ರಿಕೋದ್ಯಮ ವಿದ್ಯಾರ್ಥಿಗಳ ಆಸಕ್ತಿಯ ಕೇಂದ್ರವಾಗಿದೆ. ಅವರು ಈ ಹೊತ್ತಿಗೆಯಲ್ಲಿ ಮತ್ತಿಘಟ್ಟ ಎಂಬ ಕಾನನದ ನಡುವಿನ ಪ್ರದೇಶದ ಕಥನವನ್ನು ಹೇಳಿದ್ದಾರೆ. ಜನಪದ ಸಂಸ್ಕೃತಿ ಮತ್ತು ಪ್ರಕೃತಿಯ ಜೊತೆ ಸಂವಾದಿಯಾದ ವ್ಯಕ್ತಿಯು ಮಾತ್ರ ಇಂತಹದೊಂದು ವಿಶಿಷ್ಟವಾದ ಕೃತಿಯನ್ನು ರಚಿಸಬಲ್ಲರು. ಅವರ ಸ್ಮೃತಿಪಟಲದಲ್ಲಿ ಇದರಿಂದ ಮೂಡಿರುವ ಘಟನೆಗಳು, ಪಾತ್ರಗಳೊಂದಿಗೆ ಸಮ್ಮಿಳಿತಗೊಂಡು ಚೆಂದನೆಯ ಕೊಲಾಜ್ ಇಲ್ಲಿ ನಿರ್ಮಾಣಗೊಂಡಿದೆ. ಈ ಪುಸ್ತಕದ ತಮ್ಮ ಮನದ ಮಾತಿನಲ್ಲಿ, ಹೋಮ್ ಸಿಕ್ನೆಸ್ ಅನ್ನು ‘ಹುಟ್ಟೂರಿನ ಹಂಬಲ’ ಎಂದು ಅನುವಾದಿಸುವಲ್ಲೇ ಶಿವಾನಂದರ ಸಕಾರಾತ್ಮಕ ನೋಟದ ನಿಲುವು, ಒಲವು ಓದುಗನಿಗೆ ದಕ್ಕುತ್ತದೆ. ‌ಕಳವೆಯವರ ಜೇನಿನ ಕುರಿತು ಆಸಕ್ತಿ, ನಾಟಿ ವೈದ್ಯರ ಸಮೀಕ್ಷೆ, ಕಾಡಿನ ಪ್ರೀತಿ, ಪ್ರಾಣಿಗಳೆಡೆಗಿನ ಪ್ರೇಮ ( ಗೌರಿ ಜಿಂಕೆಯ ಆತ್ಮಕಥೆ ಕೃತಿ), ಜೀವಲೋಕದ ಸಸ್ಯಗಳ ಖಜಾನೆಯ ಕುತೂಹಲ ಮತ್ತು ಭಾಷೆಯೆಡೆಗಿನ ಮಮತೆಗಳ ಒಟ್ಟೂ ಮೊತ್ತವೇ ಕಾದಂಬರಿಯಾಗಿರಬಹುದು. ಸ್ಥಳೀಯ ಭಾಷೆ, ನಿರೂಪಣೆ ಮತ್ತು ಕಥೆಯ ಬಂಧ ಈ ಕಾದಂಬರಿಯ ಶಕ್ತಿಯಾಗಿದೆ. ಇಲ್ಲಿನ ನಾಣ್ಣುಡಿಗಳು, ತಮಾಷೆಗಳು, ಆರ್ದ್ರ ಘಟನೆಗಳು ಗಮನ ಸೆಳೆಯುತ್ತವೆ. ‘ಪರೂರ ಹೊಳೆ ಮತ್ತು ಊರ ಸ್ಮಶಾನ ಹೆದರಿಸುತ್ತದೆ’ ಎಂದು ಹೇಳುತ್ತಾ, ಕಥನ ಮಾರ್ಗದ ‘ದಾಟುಸಾಲು’ ಹುಡುಕುತ್ತಿದ್ದೇನೆ ಎಂಬ ವಿನಮ್ರತೆಯಿಂದ ಕಳವೆಯವರು, ಕೇರಳದ ಕೊಟ್ಟಾಯಂ ಕೋಶಾಂಬುಲಿಯಿಂದ ನೂರಾರು ಮೈಲಿ ದೂರವನ್ನು ಹತ್ತು ದಿನಗಳ ಪರ್ಯಂತ ಒಂಬತ್ತು ನದಿ ದಾಟಿ ಕಾಲ್ನಡಿಗೆಯಲ್ಲಿ ಶಿರಸಿ ಸಮೀಪದ ಮಧ್ಯಘಟ್ಟಕ್ಕೆ, ಮಗಳು ಶ್ರೀದೇವಿಯನ್ನು ಕಾಣಲು ಬರುವ ಭೂದೇವಿಯ ಪ್ರಯಾಣದಿಂದ ಕಾದಂಬರಿಯನ್ನು ಆರಂಭಿಸುತ್ತಾರೆ. ಶಿರಸಿ ಭಾಗದಲ್ಲಿ ಈಗ ಮತ್ತೆ ಶುರುವಾಗಿರುವಂತೆ, ಎಪ್ಪತ್ತು ಎಂಬತ್ತು ವರ್ಷಗಳ ಹಿಂದೆ ‘ತಿರಾ’ ( ವಧುದಕ್ಷಿಣೆ) ತೆತ್ತು ಲಗ್ನವಾಗುವ ಪ್ರಸಂಗ ಇದ್ದಾಗ ಗೋಪಯ್ಯ ಹೆಗಡೆ ಕುಂಬಳದ ಹೆಣ್ಣು ಶ್ರೀದೇವಿಯನ್ನು ವರಿಸುತ್ತಾರೆ. ಮದುವೆಯಾಗುವ ಹಂಬಲಕ್ಕೆ ಬಿದ್ದು ಸಾಲಮಾಡಿ ಜಮೀನು ಕಳೆದುಕೊಂಡವರ ಉಲ್ಲೇಖ ಕೂಡ ಇಲ್ಲಿ ಬರುತ್ತದೆ. ಒಂದು ಕೊಳಗ ಗೋಟಡಿಕೆಗೆ ಮಗುವನ್ನು ನೀಡುವ ತಾಯಿಯ ಚಿತ್ರಣ ಆ ಕಾಲದ ಪರಿಸ್ಥಿತಿಯ ಭೀಕರತೆಯನ್ನು ಸೂಚ್ಯವಾಗಿ ಹೇಳುತ್ತದೆ. ತಿರಸಿ (ಶಿರಸಿ) ಯಲ್ಲಿ ಮನುಷ್ಯರ ತಿಂಬುವ ಜನ ಇದ್ವಡ ಎಂಬ ಮಾತು ಕೇಳಿ ಹೊರಟ ಭೂದೇವಿಯ ಪ್ರಯಾಣದ ಜೊತೆಗೆ ಪುಡಿಯಮ್ಮ ಎಂಬ ನಸ್ಯ ಸೇದುವ ಕುಂಬಳೆ ಕಡೆಯ ಮತ್ತೊಂದು ಹೆಂಗಸಿನ ಕಥೆ ಸಾಥ್ ಪಡೆದು ಸಾಗುತ್ತದೆ. ಮಧ್ಯಘಟ್ಟದಲ್ಲಿ ಭತ್ತದ ಗದ್ದೆಗಳಿಲ್ಲದೇ ಅಕ್ಕಿ ದುಬಾರಿ. ಹಾಗಾಗಿ ಅವರು ಹಲಸು ಮತ್ತು ಬಾಳೆಯನ್ನು ಅವಲಂಬಿಸಿದ್ದ ಸನ್ನಿವೇಶದ ಚಿತ್ರಣ ಕಾಡುತ್ತದೆ. ಕೇಮು ಮರಾಠಿ ಭೂದೇವಿಗೆ ಮಗಳ ಮನೆಗೆ ದಾರಿ ತೋರಿಸುವವ ಮಾತ್ರವಾಗದೇ, ಮಗುವಾಗದ ಶ್ರೀದೇವಿ ಮತ್ತು ಗೋಪಯ್ಯ ಹೆಗಡೆ ದಂಪತಿಗೆ ನಾಟಿ ಮದ್ದು ನೀಡುವ ಆಪತ್ಬಾಂಧವನೂ ಆಗುತ್ತಾನೆ. ಹೀಗೆ ಈ ಕೃತಿ ಹವ್ಯಕರ ಬದುಕಿನ ಕಥನವಾಗದೇ ಗೌಳಿ, ಸಿದ್ಧಿ, ಕುಣಬಿ,ಕರೆವೊಕ್ಕಲಿಗ, ಕುಮರಿ ಮರಾಠಿಗರ ಜೀವನಗಾಥೆಯೂ ಆಗಿ ಗಮನ ಸೆಳೆಯುತ್ತದೆ. ದೇವಕಾನಿನ ನೀರ ನಡಿಗೆಯ ಜೊತೆಗೆ ಹೊಸಕಟ್ಟಿನ ಹೆರಿಗಮನೆಯ ದೃಶ್ಯವನ್ನು ನೋಡುವುದೇ ಇಲ್ಲಿಯ ಸೊಗಸಾಗಿದೆ. ಅಮಟೆ ಮರವನ್ನು ಮನುಷ್ಯನ ಬದುಕಿಗೆ ಹೋಲಿಸಿ ಮಾತನಾಡುವ ರೀತಿಯೇ ಕಾಡುನೆಲೆಯ ಮಧ್ಯಘಟ್ಟದ ಅದ್ಭುತವೆಂದು ಕೃತಿಕಾರ ಪಾತ್ರದ ಮೂಲಕ ಹೇಳುವುದು ಸತ್ಯವೂ ಹೌದು. ಅದಕ್ಕೆ ಕೆಂಪೆತ್ತಿನ ಕಾಯಿಯಂತಹ ಹೆಸರುಗಳು ಸಾಕ್ಷಿ. ಮನೆಗೆ ಸೋಗೆ ಹೊಚ್ಚುವ ಕಂಬಳ, ಅಡಿಕೆ ಮರದಲ್ಲಿ ಕೊನೆಗೆ ಕೊಟ್ಟೆ ಕಟ್ಟುವ ಕಂಬಳ, ಆಲೆಮನೆ ಹಬ್ಬ; ಇವೆಲ್ಲ ಇಂದಿನ ದಿನಗಳಲ್ಲಿ ಇಲ್ಲವೇ ಆಗಿಹೋಗಿದ್ದರೂ, ಈ ಅಧ್ಯಾಯಗಳನ್ನು ಓದುವಾಗ ಕೃತಿಯ ಕಾಲದ ಸ್ತಂಭನ ಮಾಡುವುದು ಕಾದಂಬರಿಯ ಪರಿಣಾಮಕ್ಕೆ ಸಾಕ್ಷಿ!ಇದರಲ್ಲಿ ಬರುವ ಗಂಜಿ ಕುಳಿ ಪ್ರಸಂಗದಂತವು ಸಂಕಟವನ್ನುಂಟು ಮಾಡುತ್ತವೆ. ಗಮಯನ ಗಿಣ್ಣು, ಚಾಂದ್ ಷಾ ಶಿಕಾರಿ, ಹುಲಿಯಜ್ಜನ ಅವತಾರ, ನಳಿನಮನೆ ಬೆಟ್ಟದ ಹುಲಿ ಬೇಟೆ ಅಧ್ಯಾಯಗಳು ಬೆರಗನ್ನು ಮೂಡಿಸುತ್ತವೆ. ಗಿಡ್ಡೂ ಮರಾಠಿಯ ಸಾವು ಅಧಿಕಾರಶಾಹಿ ವ್ಯವಸ್ಥೆಯ ಕರಾಳ ಮುಖವನ್ನು ಬಯಲಿಗೆ ಎಳೆಯುತ್ತದೆ. ಚಾಂದ್ ಷಾ ತಾವೇ ಗುಂಡು ಹಾರಿಸಿಕೊಂಡು ಸಾಯುವ ಸನ್ನಿವೇಶದಲ್ಲಿ ಎದೆ ಝಲ್ ಎನ್ನುತ್ತದೆ. ಉಗ್ರಾಣಿ ಧರ್ಮನ ರಹಸ್ಯ ಶೋಧ ಮತ್ತು ಡೊಳ್ಳು ಹೊಟ್ಟೆಯ ಭಟ್ಟರ ಹಾವು ಅಧ್ಯಾಯಗಳು, ಹಾಸ್ಯದ ಧಾಟಿಯಲ್ಲಿ ಮನುಷ್ಯನ ಕ್ರೂರತೆಯನ್ನು ಬಿಚ್ಚಿಡುತ್ತವೆ.ತಾಂಮ್ರ ಕಲ್ಲಂಟೆಯ ಕುಂಟಭೂತ, ಗುಂಡಟ್ಲಕಾನಿನ ಗಿರಿಜಮ್ಮನ ಕಥೆ ಮತ್ತು ಆಲೆ ಬಯಲಿನ ದೆವ್ವಗಳು ನಮ್ಮನ್ನು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯುತ್ತವೆ. ಒಕ್ಕಲಿಗರ – ಮತ್ತಿಮರದ ಸಂಬಂಧ, ಕುಮರಿ ಮರಾಠಿಗರ – ತಾಳೆ ಮರ ಸಂಬಂಧ, ಕನ್ನೆಕುಡಿ, ಹಲಸು, ಅಪ್ಪೆ ಮಾವಿನ ಜೊತೆ ಹವ್ಯಕರ ಸಂಬಂಧ ಈ ಹೊತ್ತಿಗೆಯಲ್ಲಿ ಅಪರೂಪದ ಹೊಳಹನ್ನು ನೀಡುತ್ತದೆ. ‘ಕಾಡಲ್ಲಿ ಕಂಡಿದ್ದೆಲ್ಲ ಮುಟ್ಟಲಾಗ, ನೋಡಿದ್ದೆಲ್ಲ ಕೆದಕಲಾಗ’ ಎಂಬ ವರದಪ್ಪಣ್ಣನ ಮಾತು ಕೃತಿಯ ಆಶಯವೂ ಆಗಿದೆ. ಪಟಾನ್ಸ್ ರಾಮ, ವಾಚು ತಂದ ವೈದ್ಯರು, ಎತ್ತಿನ ಗಾಡಿಯ ಕಾಲಚಕ್ರ, ಕಲ್ಲಂಟೆಯ ಕಳ್ಳರ ಮಾಳ ಅಧ್ಯಾಯಗಳು ಮಧ್ಯಘಟ್ಟ ಪ್ರಗತಿಯ ದಾರಿಗೆ ತೆರೆದುಕೊಳ್ಳುತ್ತಾ ಹೋಗುವುದನ್ನು ಸೂಕ್ಷ್ಮವಾಗಿ ಹೇಳುತ್ತವೆ. ಕಾದಂಬರಿಯ ಕೊನೆಯಲ್ಲಿರುವ ಆಯ್ದ ಪದಗಳ ಅರ್ಥ, ಜೀವಲೋಕದ ಖಜಾನೆ, ಕೃಷಿ ಮೂಲದ ಸಸ್ಯಗಳು, ಕಾದಂಬರಿಯಲ್ಲಿ ಪ್ರಸ್ತಾಪಿಸಿದ ಪ್ರಾಣಿಗಳ ಪಟ್ಟಿ ಓದುಗನಿಗೆ ಅನುಕೂಲವಾಗುವಂತಿದೆ.ನೆನಪಿನ ಜೇನಿನ ರೊಟ್ಟಿನಿಂದ ಮಧುರವಾದ ತುಪ್ಪವನ್ನು ಆಸ್ವಾದಿಸಲು, ಪರಿಸರದ ಅಧ್ಯಯನ, ಜಾನಪದದ ಮಾಹಿತಿ ಕುರಿತು, ಅದೆಲ್ಲಕ್ಕಿಂತ ಮುಖ್ಯವಾಗಿ ರಸ ಸ್ಪುರಣೆಯ ದೃಷ್ಟಿಯಿಂದ ಓದಲೇಬೇಕಾದ ಮಹತ್ವದ ಕೃತಿ ‘ ಮಧ್ಯಘಟ್ಟ’ ಎಂದು ನಿಶ್ಚಿತವಾಗಿ ಹೇಳಬಹುದು.********************** ಡಾ. ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಕವಿ ಶಿವಪ್ರಕಾಶ ಅವರ ಚೈತನ್ಯದ ಚಿಲುಮೆಯಾದ ಅಕ್ಕರೆಯ ಮಗಳು “ನೇರಿಶಾ”ಳ ಬಗೆಗೆ ಹೊಂದಿದ ಅಪಾರ ನಿರೀಕ್ಷೆ, ಭರವಸೆ, ವಾತ್ಸಲ್ಯ ಇಲ್ಲಿ ಕಾಣಬಹುದು.

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಹಸಿರಿನೆಡೆಗೆ ನಮ್ಮನ್ನು ನಡೆಸುವ ‘ಹೂ ಹಸಿರಿನ ಮಾತು’ ಹೂ ಹಸಿರಿನ ಮಾತುಲೇಖಕಿ : ಡಾ.ಎಲ್.ಸಿ.ಸುಮಿತ್ರಾಪ್ರಕಾಶಕರು : ಅಂಕಿತ ಪುಸ್ತಕ, ಬೆಂಗಳೂರುಪ್ರಕಟಣಾ ವರ್ಷ :೨೦೧೨ಪುಟಗಳು : ೯೬ ಬೆಲೆ : ರೂ.೧೨೦ ಹಿರಿಯ ಲೇಖಕಿ ಡಾ.ಎಲ್.ಸಿ.ಸುಮಿತ್ರಾ ಅವರ ‘ಹೂ ಹಸಿರಿನ ಮಾತು’ ಸಾರ್ವಕಾಲಿಕ ಪ್ರಸ್ತುತಿಯುಳ್ಳ ಒಂದು ಕೃತಿ.  ಎಲ್ಲೆಲ್ಲೂ ಕಾಡು ಕಡಿದು, ಗುಡ್ಡಗಳನ್ನು  ಅಗೆದು, ಗದ್ದೆಗಳನ್ನು ಮುಚ್ಚಿ ಕಾಂಕ್ರೀಟು ಕಾಡುಗಳನ್ನಾಗಿ ಪರಿವರ್ತಿಸಿ ನಾವು ಪ್ರಕೃತಿಯ ಮುನಿಸಿಗೆ  ತುತ್ತಾಗುತ್ತಿರುವ ಇಂದು ಎಚ್ಚೆತ್ತುಕೊಳ್ಳಬೇಕಾದ ಕಾಲ. ಬಂದಿರುವ ಇಂದಿನ ಸಂಧರ್ಭದಲ್ಲಿ ಪರಿಸರದ ಬಗ್ಗೆ ಕಾಳಜಿಯಿರುವ ಪ್ರತಿಯೊಬ್ಬರೂ ಓದಬೇಕಾದ ಕೃತಿಯಿದು. ಸಾಹಿತ್ಯದೊಂದಿಗೆ ಉದ್ಯಾನ ಕಲೆ ಮತ್ತು ಹಸಿರುಪ್ರಿಯತೆಗಳನ್ನೂ ಮೈಗೂಡಿಸಿಕೊಂಡಿರುವ ಮಲೆನಾಡಿನ ತೀರ್ಥಹಳ್ಳಿಯ ಸುಮಿತ್ರಾ ಅವರು ಸ್ವತಃ ಕಾಡುಮೇಡುಗಳನ್ನು ಸುತ್ತಿ ಅಳಿವಿನಂಚಿನಲ್ಲಿರುವ ಅಪರೂಪದ ಗಿಡಗಳ ಸುಂದರ ಚಿತ್ರಗಳನ್ನು ಕ್ಲಿಕ್ಕಿಸಿ ಸಸ್ಯಶಾಸ್ತ್ರಜ್ಞರೊಂದಿಗೆ ಚರ್ಚಿಸಿ ಪುಸ್ತಕಗಳನ್ನು ಪರಾಮರ್ಶಿಸಿ ಚಿಂತನೆ ನಡೆಸಿ  ಈ ಪುಸ್ತಕವನ್ನು ಬರೆದಿದ್ದಾರೆ. ಅವರ ನಿರೂಪಣೆಯಲ್ಲಿ ವೈಜ್ಞಾನಿಕ ವಿವರಗಳೊಂದಿಗೆ ಸಾಹಿತ್ಯದ ಸೊಗಡೂ ಇರುವುದರಿಂದ  ಬಹಳ ಖುಷಿಯಿಂದ ಓದಿಸಿಕೊಂಡು ಹೋಗುತ್ತದೆ. ‘ಹೂ ಹಸಿರಿನ ಮಾತಿ’ನಲ್ಲಿ ೨೩ ಜಾತಿಯ ಅಪರೂಪದ, ಪರಂಪರಾಗತ ಹಿನ್ನೆಲೆಯ ಸಸ್ಯಗಳ ಕುರಿತಾದ ವಿವರಗಳಿವೆ. ಹಲವು ಸಸ್ಯಗಳ ಉಪಪ್ರಭೇದಗಳನ್ನೂ ಅವರು ಇಲ್ಲಿ ಉಲ್ಲೇಖಿಸುತ್ತಾರೆ. ಪ್ರತಿಯೊಂದು ಗಿಡ-ಮರ-ಬಳ್ಳಿಗಳ ಮೂಲ, ಅವುಗಳ ಬೇರು-ಕಾಂಡ-ಕೊಂಬೆ-ರೆಂಬೆಗಳು, ಎಲೆ, ಹೂವು, ಹಣ್ಣು, ಕಾಯಿ, ಬೀಜಗಳ ಬಾಹ್ಯ ಸ್ವರೂಪದ ವಿವರಣೆಗಳಿಂದ ಆರಂಭಿಸಿ ಅವುಗಳ ಸಸ್ಯಶಾಸ್ತ್ರೀಯ ಹೆಸರುಗಳು,  ಕನ್ನಡದಲ್ಲಿ ವಾಡಿಕೆಯಲ್ಲಿರುವ ಹೆಸರುಗಳನ್ನು ನಮೂದಿಸುತ್ತ ಮುಂದೆ ಅವುಗಳ ಸಾಮಾನ್ಯ ಉಪಯೋಗಗಳು, ಅವುಗಳ ಔಷಧೀಯ ಗುಣಗಳು, ಬೀಜಗಳ ಲಭ್ಯತೆ, ಪರಾಗಸ್ಪರ್ಷ, ಯಾವುದರ ಹೂಗಳ ಮೇಲೆ ಜೇನು ಹುಳಗಳು ಕುಳಿತು ಜೇನು ಉತ್ಪಾದನೆ ಮಾಡಲು ಸಹಾಯಕವಾಗುವ ಅಪಾರ ಪ್ರಮಾಣದ ಸಿಹಿಯಿದೆ, ಯಾವುವು ನಿತ್ಯಹರಿದ್ವರ್ಣದ ಸಸ್ಯಗಳು ಎಂದು ಮುಂತಾದ  ಮಾಹಿತಿಗಳನ್ನು ಕೊಡುತ್ತಾರೆ. ಅಲ್ಲದೆ  ಬೇರೆ ಬೇರೆ ಗಿಡಗಳನ್ನು ಪುನರುತ್ಪಾದನೆ ಮಾಡುವುದು ಹೇಗೆ, ಬೀಜಗಳ ಮೂಲಕವೋ, ಬೇರುಗಳ ಮೂಲಕವೋ, ಗೆಲ್ಲುಗಳನ್ನು ನೆಡುವುದರ ಮೂಲಕವೋ ಎಂಬುದನ್ನೂ ತಿಳಿಸುತ್ತಾರೆ.   ಮತ್ತು ಹೆಚ್ಚು ಉಪಯುಕ್ತ ಗಿಡಗಳು ಹೇಗೆ ಅತಿಯಾದ ಬಳಕೆಯಿಂದಾಗಿ ಅಳಿವಿನಂಚಿಗೆ ಬಂದದ್ದರಿಂದ ಅವುಗಳನ್ನು ತಂದು ಪುನಃ ನೆಟ್ಟು ಬೆಳೆಸುವ ಅನಿವಾರ‍್ಯತೆಯಿದೆ ಎಂಬುದನ್ನೂ ಹೇಳುತ್ತಾರೆ. ಲೇಖಕಿ ತಮ್ಮಮುನ್ನುಡಿಯಲ್ಲಿ ಹೇಳುವಂತೆ ಈ ಕೃತಿಯಲ್ಲಿ ಅವರು ನೀಡುತ್ತಿರುವ ವಿವರಗಳು ಇಂದು ತೀರಾ ಅಪರೂಪವಾಗಿರುವ, ಇವತ್ತಿನ ತಲೆಮಾರಿನ ಯುವಕ-ಯುವತಿಯರಿಗೆ ಕೇಳಿಯೂ ಗೊತ್ತಿಲ್ಲದ ಸಸ್ಯಗಳ ಕುರಿತು ಮಾತ್ರ.  ಸುರಗಿ, ಅಶೋಕ, ರಂಜ, ಹೊಳೆ ದಾಸವಾಳ, ಹಾಲಿವಾಣ, ಕೇದಿಗೆ, ಮಾಧವಿಲತೆ, ಪಾರಿಜಾತ ಮೊದಲಾದ, ಹಿಂದೆ ನಾಡಿನ ಎಲ್ಲರ ಮನೆಗಳ ತೋಟ, ಹಿತ್ತಲು-ಬಯಲು-ಹೊಳೆಬದಿಗಳಲ್ಲಿ ಕಾಣಸಿಗುತ್ತಿದ್ದು ಪರಿಮಳ ಬೀರುತ್ತಿದ್ದ ಹೂಗಿಡಗಳು, ಸೀತಾಳೆ, ನಾಗಸಂಪಿಗೆ, ಕುರಿಂಜಿ ಹೂ, ನರ‍್ವಾಲ, ಕಾಡಿನ ದೀಪ, ಕಂಚುವಾಳ ಕಕ್ಕೆ, ಮೊದಲಾದ ಕಾಡು ಹೂಗಳು, ಶಾಲ್ಮಲಿ, ಇಪ್ಪೆಮರ,ಬೂರುಗ, ಮುತ್ತುಗ ಮೊದಲಾದ ಬೃಹತ್ ವೃಕ್ಷಗಳನ್ನು  ಲೇಖಕಿ ಓದುಗರಿಗೆ ಸಮೃದ್ಧ ವಿವರಗಳೊಂದಿಗೆ ಪರಿಚಯಿಸುತ್ತಾರೆ. ವಿದೇಶಿ ಮೂಲದವಾಗಿದ್ದು ಇಲ್ಲಿ ನೆಲೆಯೂರಿರುವ ಹೂಬಾಳೆ, ಆಲ್ಪೀನಿಯಾ,ಬ್ಲೀಡಿಂಗ್ ಹರ‍್ಭ್  ಮೊದಲಾದ ಕೆಲವು ಸಸ್ಯಗಳೂ ಇಲ್ಲಿ ಜಾಗ ಪಡೆದಿವೆ. ಹಲವಾರು ಗಿಡಮರಗಳ ಬಗ್ಗೆ ಮಾತನಾಡುವಾಗ ಲೇಖಕಿ ತಮ್ಮ ಬಾಲ್ಯದಲ್ಲಿ ಅವುಗಳ ಅಂದ ಚೆಂದ ಪರಿಮಳಗಳನ್ನು ಆಸ್ವಾದಿಸಿದ ಬಗ್ಗೆ , ಹೂಗಳನ್ನು ಮುಡಿಗೇರಿಸಿಕೊಂಡು ಖುಷಿಪಟ್ಟಿದ್ದರ ಬಗ್ಗೆ , ಹಬ್ಬ ಹರಿದಿನಗಳಂದು ಆಚರಣೆಯ ವಿಧಿಗಳಲ್ಲಿ ಅವುಗಳ ಹೂವು-ಹಣ್ಣು-ಎಲೆಗಳನ್ನು ಬಳಸಿಕೊಂಡದ್ದರ ಬಗ್ಗೆ,  ಸಮಾರಂಭಗಳಲ್ಲಿ ಅಲಂಕಾರಕ್ಕಾಗಿ ತೋರಣ ಕಟ್ಟುತ್ತಿದ್ದುದರ ಬಗ್ಗೆ ಸಂಭ್ರಮದಿಂದ ನೆನಪಿಸಿಕೊಳ್ಳುತ್ತ ನಿರೂಪಣೆಯ ನಡುನಡುವೆ ವೈಯಕ್ತಿಕ ಸ್ಪರ್ಶ ಕೊಡುತ್ತಾರೆ.  ಸಾಹಿತ್ಯದ ಪ್ರಾಧ್ಯಾಪಕಿಯಾದ್ದರಿಂದ ಸಹಜವಾಗಿ  ಅವರಿಗೆ ಪಂಪ, ರನ್ನ, ಜನ್ನ, ಬೇಂದ್ರೆ, ಕುವೆಂಪು, ಶಿವರುದ್ರಪ್ಪ ಮೊದಲಾದ ಕವಿಗಳ ಕವಿತೆಗಳಲ್ಲಿ ಆ ಗಿಡ-ಮರ-ಹೂವುಗಳ ಹೆಸರು ಬರುವುದು ಸಾಂಧರ್ಭಿಕವಾಗಿ  ನೆನಪಾಗುತ್ತದೆ. ರಾಮಾಯಣ, ಮಹಾಭಾರತ, ತಮಿಳಿನ ಸಂಘಂ ಕಾವ್ಯಗಳನ್ನೂ ಅವರು ಉದ್ಧರಿಸುತ್ತಾರೆ. ಒಟ್ಟಿನಲ್ಲಿ ಲೇಖಕಿಯ ಓದಿನ ವಿಸ್ತಾರಕ್ಕೆ ಈ ಎಲ್ಲ ಉದಾಹರಣೆಗಳು ಸಾಕ್ಷಿಯಾಗುತ್ತವೆ. ‘ಹೂ ಹಸಿರಿನ ಮಾತು’ ಅನೇಕ ವೈಶಿಷ್ಟ್ಯಗಳುಳ್ಳ ಕೃತಿ.  ಮೊತ್ತ ಮೊದಲಾಗಿ ಇದು ಸಾಹಿತ್ಯ-ವಿಜ್ಞಾನಗಳ ಸಂಗಮ. ಪರಂಪರಾಗತವಾಗಿ ನಮ್ಮಲ್ಲಿ ಬೆಳೆದುಕೊಂಡು ಬಂದ ಗಿಡಮರಗಳು ಅಳಿದು ಹೋಗಲು ಬಿಡಬಾರದೆಂಬ  ಕಾಳಜಿ ಇದರ ಹಿಂದೆ ಇದೆ. ನಮ್ಮ ಪರಿಸರವು ಗಿಡಮರಗಳನ್ನು ಕಳೆದುಕೊಂಡು ಬೋಳಾಗಿ  ಮನುಷ್ಯನ ಆಧುನಿಕತೆಯ ಹುಚ್ಚಿಗೆ ಬಲಿಯಾಗಬಾರದು ಎಂಬ ಕಾಳಜಿ ಇಲ್ಲಿದೆ.  ನಿಸರ್ಗದ ಮಕ್ಕಳಾದ ನಾವು ನಿಸರ್ಗವನ್ನು ಉಳಿಸಿಕೊಂಡು ಹೂ ಹಸಿರುಗಳ ಜತೆಗೆ ಸದಾ ಮಾತುಕತೆ ನಡೆಸುವುದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ  ಒಳ್ಳೆಯದೆನ್ನುವ ಪರೋಕ್ಷವಾದ ಸಂದೇಶವೂ ಇದರೊಳಗಿದೆ. ಈ ಕೃತಿ ಗಾತ್ರದಲ್ಲಿ ಚಿಕ್ಕದಾದರೂ ಇದರ ಹಿಂದೆ ಲೇಖಕಿಯ ಅಪಾರ ಪರಿಶ್ರಮವಿದೆ. ಯಾಕೆಂದರೆ ಇದು ಒಂದೆಡೆ ಅಲುಗಾಡದೆ ಕುಳಿತು ಬರೆದದ್ದಲ್ಲ. ಆಗಲೇ ಹೇಳಿದಂತೆ ಇದರ ಹಿಂದೆ ಬಹಳಷ್ಟು ಕ್ಷೇತ್ರಕಾರ‍್ಯ ಮತ್ತು ಸಂಶೋಧನೆಗಳಿವೆ. ಸಸ್ಯಶಾಸ್ತ್ರವನ್ನು ಒಂದು ಪಠ್ಯ ವಿಷಯವನ್ನಾಗಿ ತೆಗೆದುಕೊಂಡವರಿಗೆ ಮಾತ್ರವಲ್ಲದೆ ಸಾಮಾನ್ಯ ಓದುಗರಿಗೂ ಖುಷಿ ಕೊಡಬಲ್ಲ ,ಉಪಯುಕ್ತವಾಗ ಬಲ್ಲ ಮತ್ತು ಅರಿವು ಮೂಡಿಸಬಲ್ಲ ಒಂದು ಕೃತಿಯಿದು. ಅಂಕಿತ ಪುಸ್ತಕವು ೨೦೧೨ರಲ್ಲಿ ಮುದ್ರಿಸಿ ಪ್ರಕಟಿಸಿದ  ಕೃತಿಗೆ ಕಥೆಗಾರ್ತಿ ಉಷಾ ಪಿ.ರೈಯವರು ಬರೆದು ಅಪಾರ ಅವರು ವಿನ್ಯಾಸ ಮಾಡಿದ ಸುಂದರವಾದ ಮುಖಪುಟ ಚಿತ್ರವು ಪುಸ್ತಕದ ಅಂದವನ್ನು ಹೆಚ್ಚಿಸಿದೆ.         ********************************* ಡಾ.ಪಾರ್ವತಿ ಜಿ.ಐತಾಳ್        

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ ಅಲೆಮಾರಿಯ ದಿನದ ಮಾತುಗಳು  ಪುಸ್ತಕ : ಅಲೆಮಾರಿಯ ದಿನದ ಮಾತುಗಳು  ( ಪದ್ಯ – ಗದ್ಯಗಂಧಿ ಚಿಂತನ ಬರಹಗಳು ) ಲೇಖಕ: ಗಂಗಾಧರ ಅವಟೇರ ಪ್ರಕಾಶನ: ಪ್ರತೀ(ಕ)ಕ್ಷಾ ಪ್ರಕಾಶನ, ಕುಕನೂರ ಜಿ|| ಕೊಪ್ಪಳ ಪುಟಗಳು: 96 ಬೆಲೆ: 100/- ಪ್ರಕಟಿತ ವರ್ಷ: 2019 ಲೇಖಕರ ದೂರವಾಣಿ: 9449416270          ಮಾನವ ಸಮಾಜಜೀವಿ. ಅವನು ಸಮಾಜವನ್ನು ಬಿಟ್ಟು ಬಾಳಲಾರ-ಬದುಕಲಾರ. ಅರಿಸ್ಟಾಟಲ್ ಹೇಳುವಂತೆ ‘ಸಮಾಜವನ್ನು ಬಿಟ್ಟು ಬದುಕುವ ಮಾನವ ದೇವರು ಇಲ್ಲವೇ ಪಶು ಆಗಿರುತ್ತಾನೆ’. ಮಾನವ ಭಾಗಶಃ ಸಹಕಾರಿಯಾದಂತೆ ಭಾಗಶಃ ಸಂಘರ್ಷಮಯಿ. ಸಂಘರ್ಷದ ಫಲವಾಗಿ ದಂಗೆ, ಬಂಡಾಯ, ಯುದ್ಧ ಸಂಭವಿಸಿದರೆ ಸಹಕಾರದ ಫಲವಾಗಿ ಕುಟುಂಬ, ಸಮಾಜ, ಸಂಘ-ಸಂಸ್ಥೆಗಳು ಹುಟ್ಟಿಕೊಂಡವು. ಕುಟುಂಬವೊಂದರಲ್ಲಿ ಜನಿಸಿ ಸಮಾಜದಲ್ಲಿ ತನ್ನ ವಿಕಾಸ ಕಂಡುಕೊಳ್ಳುವ ವ್ಯಕ್ತಿಯು ಸಾಮಾಜಿಕ ರೂಢಿ-ಸಂಪ್ರದಾಯ, ಕಟ್ಟುಪಾಡು, ನೀತಿ-ನಿಯಮಗಳಿಗೆ ಬದ್ಧನಾಗಿ ನಡೆದುಕೊಳ್ಳಬೇಕಾಗುತ್ತದೆ. ನಮ್ಮ ಜೀವನವನ್ನು ಸುಂದರವಾಗಿಸಲು ಹಲವು ಅನುಭಾವಿಗಳು, ಶರಣರು-ಸಂತರು, ದಾರ್ಶನಿಕರು ತಮ್ಮ ಜೀವನಾನುಭವದ ಸತ್ಯಗಳನ್ನು ನುಡಿಮುತ್ತುಗಳಲ್ಲಿ, ಅನುಭವಾಮೃತಗಳಲ್ಲಿ ಕಟ್ಟಿಕೊಟ್ಟಿದ್ದಾರೆ‌. ಈ ನುಡಿಮುತ್ತುಗಳು ನಮ್ಮ ಅಜ್ಞಾನ, ಅಂಧಕಾರದ ಬದುಕಿಗೆ ಬೆಳಕು ತೋರಲು ಹಚ್ಚಿಟ್ಟ ಸಾಲು ಹಣತೆಗಳಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬೆಳಗಿನ ಶುಭೋದಯದಲ್ಲಿ ‘ದಿನಕ್ಕೊಂದು ಮಾತು’ ಎನ್ನುವ ಚಿಂತನಶೀಲ ಬರಹಗಳನ್ನು ಬರೆಯುವ ಮೂಲಕ ತಮ್ಮ ಜೀವನಾನುಭವದ ಸಂಗತಿಗಳನ್ನು, ಜೀವನ ಮೌಲ್ಯಗಳನ್ನು ಕೆಲವೇ ಸಾಲುಗಳಲ್ಲಿ ಹೆಣೆದು ಅರ್ಥಪೂರ್ಣವಾದ ಪದ್ಯ-ಗದ್ಯಗಂಧಿಯಾದ ಚಿಂತನ ಬರಹಗಳನ್ನು ಬರೆಯುವುದರಲ್ಲಿ ಕವಿ, ಲೇಖಕ ಗಂಗಾಧರ ಅವಟೇರ ಅವರು ಪರೀಣತರು. ವೃತ್ತಿಯಿಂದ ಕನ್ನಡ ಉಪನ್ಯಾಸಕರಾಗಿ ಪ್ರವೃತ್ತಿಯಿಂದ ಸಾಹಿತಿಯಾಗಿರುವ ಗಂಗಾಧರ ಅವರು ಮೂಲತಃ ನಂದವಾಡಗಿಯವರು. ಈಗಾಗಲೇ “ನನ್ನೊಳಗಿನ ಪ್ರೀತಿ” ಹಾಗೂ “ನಿಬ್ಬಣ” ಎನ್ನುವ ಎರಡು ಕವನ ಸಂಕಲನಗಳನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಿತರಾಗಿದ್ದಾರೆ. “ಅಲೆಮಾರಿಯ ದಿನದ ಮಾತುಗಳು” ಕೃತಿಗೆ ಪತ್ರಿಕೊದ್ಯಮಿ ಮಹೇಶ್ ಮನ್ನಯ್ಯನವರಮಠ ಅವರ ಮಾರ್ಮಿಕ ಮುನ್ನುಡಿ ಹಾಗೂ ಹಿರಿಯ ಕವಿ ಡಾ‌|| ಗುಂಡಣ್ಣ ಕಲಬುರಗಿಯವರ ಸ್ನೇಹಪರ ಬೆನ್ನುಡಿ ಇದೆ. “ಅಲೆಮಾರಿಯ ದಿನದ ಮಾತುಗಳು” ಕೃತಿಯಲ್ಲಿ ಒಟ್ಟು 125ಕ್ಕೂ ಹೆಚ್ಚು ಚಿಂತನಶೀಲ ಬರಹಗಳಿವೆ. ಇವು ಗಾತ್ರದಲ್ಲಿ ಚಿಕ್ಕದಾದರೂ ಅವುಗಳ ಹರವು ವ್ಯಾಪಕವಾಗಿದೆ. ಜೀವನದಲ್ಲಿ ಎದುರಾಗುವ ಸೋಲು-ಗೆಲುವು, ನೋವು-ನಲಿವು‌, ಅಡ್ಡಿ-ಆತಂಕಗಳನ್ನು ಸಮಚಿತ್ತದಿಂದ ಎದುರಿಸಿ ಜೀವನದ ಆಟವನ್ನು ಗೆಲ್ಲಲು ಲೇಖಕರ ವಿಚಾರಗಳು ಇಲ್ಲಿ ಮಾರ್ಗದರ್ಶಿಯಾಗಿವೆ.  “ಗೆಲುವು ಹೂವಿನ ಹಾಸಿಗೆಯಲ್ಲ, ಅದು ಕೆಸರುಗದ್ದೆಯ ಓಟ. ಯಾರು ಕೊಸರಿಕೊಂಡು ಹೋಗಿ ದಡ ಮುಟ್ಟುತ್ತಾರೊ ಅವರು ಗೆಲ್ಲುತ್ತಾರೆ” ಎನ್ನುವ ಮಾತು ನಮ್ಮ ಸತತ ಪರಿಶ್ರಮ ಹಾಗೂ ಪ್ರಯತ್ನಶೀಲತೆಯ ಸಂಕೇತವಾಗಿದೆ. ‘ನಮಗೆ ದ್ವೇಷ ಮಾಡಲು ಆಯುಷ್ಯ ಬಹಳಷ್ಟು ಇಲ್ಲ. ಇರುವಷ್ಟು ಕಾಲ ಎಲ್ಲರನ್ನು ಪ್ರೀತಿಸೋಣ’ ಎನ್ನುವ ಮಾತು ಓದುಗರಿಗೆ ಜೀವನದ ಸತ್ಯ ದರ್ಶನ ಮಾಡಿಸುತ್ತದೆ. ‘ಮಾತು ಮೌನವಾದಾಗ ಅಂತರಂಗದಲ್ಲಿ ಅರಿವಿನ ಗುರು ಕಾಣಿಸಿಕೊಳ್ಳುತ್ತಾನೆ’ ಎನ್ನುವ ಮಾತು ಅರಿವೇ ಗುರುವಾಗಿ, ನುಡಿ ಜ್ಯೋತಿರ್ಲಿಂಗವಾಗಿ ಗೋಚರಿಸುತ್ತದೆ. ‘ಪುಸ್ತಕದ ಓದು ಮಸ್ತಕದಲ್ಲಿರಬೇಕು. ಜೀವನದ ಅನುಭವ ಅನುಭಾವವಾಗಬೇಕು. ‍ಓದು ಅನುಭವ ಒಂದಾದಾಗ ವ್ಯಕ್ತಿತ್ವಕ್ಕೊಂದು ಘನತೆ ಬರುತ್ತದೆ’ ಎನ್ನುವ ವಿಚಾರ ಮನೋಜ್ಞವಾಗಿದೆ. ‘ದಾರಿ ಇಲ್ಲವೆಂದು ನಡೆಯುವುದನ್ನು ನಿಲ್ಲಿಸಬಾರದು. ನಾವು ನಡೆದದ್ದೇ ದಾರಿ ಆಗಬೇಕು ಆ ದಾರಿ ನಾಲ್ಕು ಜನರಿಗೆ ಸ್ಪೂರ್ತಿಯಾಗಬೇಕು’ ಎಂಬ ಲೇಖಕರ ಆಶಯ ಶ್ಲಾಘನೀಯ. ‘ಯಾರು ನಿಮ್ಮ ಬಗ್ಗೆ ಹಗುರವಾಗಿ ಮಾತನಾಡುವರು ಅಂತವರನ್ನು ನಿರ್ಲಕ್ಷಿಸಬೇಕು ಆದರೆ ದ್ವೇಷ ಮಾಡಬಾರದು’ ಎಂಬ ವಿಚಾರ ಶಕ್ತಿಶಾಲಿ ವ್ಯಕ್ತಿತ್ವದ ನಿರ್ಮಾಣಕ್ಕೆ ಕೈಗನ್ನಡಿಯಾಗಿದೆ. ಹೀಗೆ “ಅಲೆಮಾರಿಯ ದಿನದ ಮಾತುಗಳು” ಕೃತಿಯು ಮುಳುಗಿದಷ್ಟು ಮುತ್ತನ್ನು ಕೊಡುವ ಶಬ್ಧಶರಧಿಯಾಗಿದೆ. ಓದುಗರ ಅಜ್ಞಾನದ ಹಾದಿಗೆ ಬೆಳಕು ತೋರುವ ದೀವಟಿಗೆಯಾಗಿದೆ. ವಿದ್ಯಾರ್ಥಿ ಸಮುದಾಯದೊಂದಿಗೆ ನಿರಂತರ ಒಡನಾಟದಲ್ಲಿರುವ ಲೇಖಕ ಗಂಗಾಧರ ಅವಟೇರ ಅವರು ಮಕ್ಕಳಲ್ಲಿ ನೈತಿಕ, ಸಾಮಾಜಿಕ ಪ್ರಜ್ಞೆ ಬೆಳೆಸುವ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ತಮ್ಮದೆ ಆದ ಕೊಡುಗೆ ನೀಡುತ್ತಿದ್ದಾರೆ. ಪ್ರತಿಯೊಬ್ಬರು ಈ ಕೃತಿಯನ್ನು ತಮ್ಮ ಮನೆಯ ಪುಸ್ತಕ ಭಂಡಾರದಲ್ಲಿ ಸಂಗ್ರಹಿಸಿ ಇಟ್ಟುಕೊಂಡು ಓದಲು, ತಮ್ಮ ಮನೋವಿಕಾಸ ವಿಸ್ತರಿಸಿಕೊಳ್ಳಲು ಇದೊಂದು ಯೋಗ್ಯ ಕೃತಿಯಾಗಿದೆ. ****************************************** ಬಾಪು ಖಾಡೆ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಬೀಳದ ಗಡಿಯಾರ. ಕೃತಿಯ ಹೆಸರು: ಬೀಳದ ಗಡಿಯಾರ.ಪ್ರಕಟಣೆ: 2018ಬೆಲೆ: 90ರೂ.ಪ್ರಕಾಶಕರು: ಪ್ರೇಮ  ಪ್ರಕಾಶನ, ಮೈಸೂರು-570029 ಡಾ. ಬಸು ಬೇವಿನಗಿಡದ ಅವರ “ಬೀಳದ ಗಡಿಯಾರ” ಹಿಂದೆಲ್ಲ ಕೆಲವು ಮನೆಗಳಲ್ಲಿ ಎಷ್ಟು ಗಂಟೆಯಾಗಿದೆಯೋ ಅಷ್ಟುಸಲ ಢಣ್ ಢಣ್ ಎಂದು ಗಂಟೆ ಹೊಡೆಯುವ ಗಡಿಯಾರಗಳಿದ್ದವು. ಅಂತಹ ಗಡಿಯಾರ ಆಗ ಮಕ್ಕಳಾಗಿದ್ದ ನಮಗೆ ಆಕರ್ಷಣೆಯ ಕೇಂದ್ರವಾಗಿತ್ತು. ಹನ್ನೆರಡು ಗಂಟೆಯಾಗುವಾಗ ಅದು ಹನ್ನೆರಡುಸಾರಿ ಗಂಟೆ ಬಾರಿಸುವುದರಿಂದ ಅದನ್ನು ಕೇಳಲು ಗಡಿಯಾರದ ಮುಂದೆ ಕಾತುರದಿಂದ ನಿಂತಿರುತ್ತಿದ್ದುದೂ ಇದೆ. ಆದರೆ ಹಾಗೇ ಮುಂದುವರಿದು ಹದಿಮೂರು, ಹದಿನಾಲ್ಕು ಹೀಗೆ ಗಂಟೆ ಹೊಡೆಯುತ್ತ ದಿನದ ಮುಕ್ತಾಯದಲ್ಲಿ ಇಪ್ಪತ್ನಾಲ್ಕು ಗಂಟೆ ಹೊಡೆಯುವ ಗಡಿಯಾರವಿದ್ದರೆ… ಚನ್ನಾಗಿತ್ತು ಎಂದೆಲ್ಲಾ ಅನಿಸಿದ್ದಿದೆ. ಆದರೆ ನಾನು ಇಲ್ಲಿ ಹೇಳ ಹೊರಟಿರುವುದು “ಬೀಳದ ಗಡಿಯಾರದ” ಮಕ್ಕಳ ಕಥಾ ಸಂಕಲನದ ಕುರಿತು. ಬೀಳದ ಗಡಿಯಾರ ಹಾಗಂದರೇನು, ಅದು ಹೇಗೆ ಬೀಳದೇ ಇರಲು ಸಾಧ್ಯ… ಎಂದೆಲ್ಲಾ ಮಕ್ಕಳಾದವರು ಯೋಚಿಸಿಯೇ ಯೋಚಿಸುತ್ತಾರೆ. ಅಂತಹ ಕುತೂಹಲದ ಶೀರ್ಷಿಕೆಯ ಕಥಾಸಂಕಲನ ರೂಪಿಸಿದವರು ಡಾ. ಬಸು ಬೇವಿನಗಿಡದ ಅವರು. ಬಸು ಬೇವಿನಗಿಡದ ಅವರು ಈಗ ಧಾರವಾಡ ಆಕಾಶವಾಣಿಯ ಮುಖ್ಯಸ್ಥರು. ಅವರ ಮಕ್ಕಳ ಸಾಹಿತ್ಯದ ಕುರಿತಾದ ಅಧ್ಯಯನ, ಮಕ್ಕಳಿಗಾಗಿ ಅವರು ಬರೆದ “ನಾಳೆಯ ಸೂರ್ಯ” ಹಾಗೂ “ಓಡಿ ಹೋದ ಹುಡುಗ” ಮಕ್ಕಳ ಕಾದಂಬರಿಗಳು ಗಳಿಸಿದ ಜನಪ್ರಿಯತೆ, ಮಕ್ಕಳ ಮೇಲಿನ ಪ್ರೀತಿ ಇವೆಲ್ಲ ನಮಗೆ ಹೆಚ್ಚು ಆಪ್ತತೆಯನ್ನು ಉಂಟು ಮಾಡುತ್ತದೆ. ನಾಡಿನ ನಾಮಾಂಕಿತ ಕಥೆಗಾರ, ಕವಿ, ವಿಮರ್ಶಕರಾಗಿರುವ ಬಸು ಅವರು ಮಕ್ಕಳಿಗಾಗಿಯೂ ಬರೆಯುತ್ತ ಎಲ್ಲರೊಂದಿಗೆÀ ಸ್ನೇಹ ಪರತೆಯನ್ನು ವಿಸ್ತರಿಸಿಕೊಂಡಿದ್ದಾರೆ. ಹಾಂ, ನಾನು ಬೀಳದ ಗಡಿಯಾರದ ಕುರಿತು ಹೇಳುತ್ತಿದ್ದೆ. ಗಡಿಯಾರ ಬೀಳದಂತೆ ಮೊಳೆ ಜಡಿದಿದ್ದಾರಾ, ಮಕ್ಕಳು ಬೀಳಿಸಲು ಸಾಧ್ಯವಾಗದ ಹಾಗೆ ಅವರಿಗೆ ಸಿಗದಂತೆ ಮೇಲೆ ಇಟ್ಟಿದ್ದಾರಾ, ಏನದು ಎಂಬುದು ಮಕ್ಕಳ ಪ್ರಶ್ನೆ. ನಮ್ಮದೂ ಆಗಬುದು. ಮೊಬೈಲ, ನೀರಿನ ಜಗ್ಗು ಒಡೆದು ಹಾಕಿರುವ, ಪಾಟಿ ಚೀಲ ರೊಂಯ್… ಎಂದು ಎಸೆದುಬಿಡುವ ಗಂಗಾಧರ ಎನ್ನುವ ಹುಡುಗ ಬೀಳದ ಗಡಿಯಾರ ಕಥೆಯಲ್ಲಿ ಇದ್ದಾನೆ. ಅವನು ಏನೆಲ್ಲಾ ಮಾಡಿದ ಹಾಗೂ ಅವನ ಜಗತ್ತಿನ ಸುತ್ತ ಮಕ್ಕಳ ಬಾಲ್ಯ ಹಾಗೂ ಹಿರಿಯರ ಕಷ್ಟ ಮತ್ತು ಖುಷಿ ಹೇಗೆಲ್ಲಾ ಹರಡಿಕೊಂಡಿದೆ ಎಂಬುದನ್ನು ನಾವು ಕಥೆ ಓದಿಯೇ ತಿಳಿಯ ಬೇಕು. ಬಸು ಅವರು ಕಥೆಗಳ ಟೈಟಲ್ ಒಂದುರೀತಿ ಕುತೂಹಲ ಕೆರಳಿಸುವಂತೆ ಇಡುವುದರಲ್ಲಿ ಸಹಜತೆಯನ್ನು ಗಳಿಸಿದ್ದಾರೆ. ಅದು ಕಥೆಗಳಿಗೆ ಸರಿಯಾಗಿಯೇ ಇರುತ್ತದೆ. ಎರಡನೇ ಕಥೆ ‘ಮಾತಾಡದ ಮರ’. ಮರ ಮಾತಾಡದು ಎಂದು ನಮಗೆ ಗೊತ್ತು. ಆದರೆ ಆರೀತಿ ಏಕೆ ಬರೆದರು, ಮರ ಮಾತಾಡುತ್ತಿತ್ತೆ ಎಂಬೆಲ್ಲ ಪ್ರಶ್ನೆಗಳು ಏಳ ತೊಡಗುತ್ತವೆ. ಮುಗ್ಧ ಬಾಲಕನೊಬ್ಬ ಅಮ್ಮನೊಂದಿಗೆ ಜಗಳ ಮಾಡಿ ಕಾಣೆಯಾಗಿದ್ದ ತನ್ನ ಅಪ್ಪನನ್ನು ಹುಡುಕುತ್ತ ಸಾಗುವುದು ಈ ಕಥೆಯಲ್ಲಿ ಇದೆ. ಅಪ್ಪ ಕಲ್ಲಾಗಿ ಕುಳಿತಿರುವುದನ್ನು ಕಾಣುವ ಬಾಲಕನ ಮುಂದೆ ಅಪ್ಪ ಅಥವಾ ಬುಟ್ಟಿ ತುಂಬಿದ ಬಂಗಾರದ ಆಯ್ಕೆ ತೆರೆದುಕೊಳ್ಳುವ ಸಂದರ್ಭ ಇದೆ. ಆದರೆ ತನಗೆ ಅಪ್ಪ ಅಮ್ಮನೇ ಮುಖ್ಯ ಎನ್ನುವ ಶುದ್ಧ ಹೃದಯದ ಬಾಲಕ ಬಂಗಾರವನ್ನು ತಿರಸ್ಕರಿಸುತ್ತಾನೆ. ಜೀವ ಪಡೆದ ಅಪ್ಪ ಬಂಗಾರದ ಆಸೆಯಲ್ಲಿ ಮಗನನ್ನು ಕಳೆದುಕೊಳ್ಳುವ ಸಂಗತಿ ಇದೆ. ಇಲ್ಲೆಲ್ಲಾ ಮಕ್ಕಳ ಮುಗ್ಧತೆ, ಜೀವ ಪ್ರೀತಿ, ಮನದ ವಿಶಾಲತೆ ಜೊತೆಗೆ ದೊಡ್ಡವರ ಆಸೆ ಹಾಗೂ ಸ್ವಾರ್ಥಪರತೆ ಅನಾವರಣವಾಗುತ್ತದೆ. ಹಳ್ಳಿಯ ಬದುಕಿನ ಚಿತ್ರಣದೊಂದಿಗೆ ಬಂದ ‘ದನಗಳು ಮಾತಾಡಿದ್ದು’ ಕಥೆ ಆಪ್ತವಾಗುತ್ತದೆ. ಇಲ್ಲಿ ಬಾಲಕನೊಬ್ಬ ತಾದಾತ್ಮ್ಯತೆಯಿಂದ ದನಗಳನ್ನು ಕಾಯುತ್ತ, ಪ್ರೀತಿಸುತ್ತ, ಅವರ ನಡೆಗಳಿಗೆ ಪ್ರತಿಕ್ರಿಯಿಸುತ್ತ ಸಂವಹನ ನಡೆಸುದೆಲ್ಲ ಇದೆ. ಮಕ್ಕಳಿರಲಿ ದೊಡ್ಡವರಿರಲಿ ತಾವು ಪರಿಸರದೊಂದಿಗೆ ಎಷ್ಟೋ ಸಾರಿ ಸಂವಾದ ನಡೆಸುತ್ತಾರೆ. ಬೆಕ್ಕು-ನಾಯಿಗಳೊಂದಿಗೆ, ದನಗಳೊಂದಿಗೆ, ತಮ್ಮ ಹೊಲ-ತೋಟಗಳೊಂದಿಗೆ ಮಾತಾಡುತ್ತ ಅದರ ಭಾವ ಮನಸ್ಸಿಗಿಳಿಸಿಕೊಳ್ಳುದೆಲ್ಲವನ್ನು ಈ ಕಥೆ ನಮಗೆ ಪರೋಕ್ಷವಾಗಿ ಹೇಳುತ್ತ ಆಪ್ತವಾಗಿ ಬಿಡುತ್ತದೆ. ‘ಅಲ್ಲಪ್ಪ’ ಕಥೆಯಲ್ಲಿ ತನ್ನ ಹೆಸರಿನಿಂದಾಗಿ ಮುಜುಗರಕ್ಕೊಳಗಾಗುವ ಬಾಲಕನ ತುಮುಲ ವ್ಯಕ್ತವಾಗಿದೆ. ಹಳ್ಳಿಗಳಲ್ಲಿ ಇಡುವ ಗ್ರಾಮೀಣ ಸೊಗಡಿನ ಹೆಸರುಗಳಿಂದಾಗಿ ಕೆಲವೊಂದುಸಾರಿ ಮಕ್ಕಳ ಮಧ್ಯದಲ್ಲಿ ಕೀಟಲೆಗೆ, ಅಪಹಾಸ್ಯಕ್ಕೆ ಒಳಗಾಗುವ ಸಂದರ್ಭಗಳಿರುತ್ತವೆ. ಇಲ್ಲೂ ಅಲ್ಲಪ್ಪ ಎನ್ನುವ ಬಾಲಕ ಅಂತಹುದೇ ನೋವು ಅನುಭವಿಸುತ್ತಾನೆ. ಆದರೆ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದಾಗ ಅಲ್ಲಪ್ಪ ಪ್ರಸಿದ್ಧನಾಗಿ ಅವನ ಹೆಸರೂ ಎಲ್ಲರ ಪ್ರೀತಿಯ ಹೆಸರಾಗಿ ಮಾರ್ಪಡುತ್ತದೆ. ಹೆಸರಿನ ಕುರಿತು ಚಿಂತಿಸುವುದಕ್ಕಿಂತ ನಾವು ಮಾಡುವ ಕಾರ್ಯವೇ ಮುಖ್ಯವಾಗುತ್ತದೆ ಹಾಗೂ ಹೆಸರಿನ ಕುರಿತು ಚಿಂತೆಪಡುವ, ಹೆಸರನ್ನು ಬದಲಾಯಿಸುವ ಅಗತ್ಯವಿಲ್ಲ ಎಂಬುದನ್ನು ಕಥೆ ಸೊಗಸಾಗಿ ನಿರೂಪಿಸಿದೆ. ‘ಬೆಳದಿಂಗಳು ಬೇಡಿದ ಬಾಲಕ’ ಇನ್ನೊಂದು ಕಥೆ. ಇಲ್ಲಿ ಹಳ್ಳಿಯ ಬದುಕು ಅನುಭವಗಳೆಲ್ಲ ಹೇಗೆ ಮಕ್ಕಳಲ್ಲಿ ಸಕಾರಾತ್ಮಕ ಬೆಳವಣಿಗೆ ಉಂಟಾಗಲು ಕಾರಣವಾಗುತ್ತವೆ ಎನ್ನುವುದನ್ನು ಹೇಳಲಾಗಿದೆ. ಹಿಟ್ಟು ಮುಕ್ಕುವ ಹುಡುಗ, ದೊಡ್ಡವರ ಹೋಮವರ್ಕ ಕಥೆಗಳು ಕೂಡಾ ಮಕ್ಕಳ ಸುತ್ತಲಿನವೇ ಆಗಿದ್ದು ಮಕ್ಕಳ ಲೋಕ ಹೇಗೆಲ್ಲ ವಿಸ್ತರಿಸಿಕೊಂಡಿವೆ ಎಂಬುದೇ ಆಗಿವೆ. ಅಜ್ಜನೊಬ್ಬ ಬ್ಯಾಗ ರಿಪೇರಿ ಮಡುವ ಹುಡುಗನೊಂದಿಗೆ ಹೊಂದಿದ್ದ ಸಂಬಂಧ, ಆ ಬಡ ಹುಡುಗನಿಗೆ ಉಂಟಾಗುವ ತೊಂದರೆ, ಅಜ್ಜ ಅವನಿಗಾಗಿ ಪರಿತಪಿಸುವುದು, ವೃದ್ಧಾಪ್ಯದಲ್ಲಿಯ ನಮ್ಮ ನಡವಳಿಕೆಗಳು ಸುತ್ತಲಿನವರಿಗೆ ಹೇಗೆಲ್ಲಾ ಅನಿಸುತ್ತದೆ ಎಂಬುದೆಲ್ಲ ಹೇಳುವ ‘ಬ್ಯಾಗ ರಿಪೇರಿ’ ಕಥೆ ಮನಸ್ಸಿನಲ್ಲಿ ಉಳಿಯುತ್ತದೆ. ಬಸು ಅವರು ಚಿತ್ರಿಸುವ ಗ್ರಾಮೀಣ ಚಿತ್ರಣವಾಗಲಿ, ಪೇಟೆಯ ಬಡ ಮಕ್ಕಳ ಬದುಕಾಗಲಿ, ಮುದುಕರ ಸಂಕಷ್ಟಗಳಾಗಲಿ, ಮಕ್ಕಳ ಮುಗ್ಧತೆಯಾಗಲಿ ಎಲ್ಲವೂ ಸಹಜವೆಂಬಂತೆ ಹೇಳುವ ನಿರೂಪಣೆ ಬಹಳ ಆಪ್ತವಾಗುತ್ತದೆ. ಅಲ್ಲಿ ಬರುವ ಫ್ಯಾಂಟಸಿ ಕೂಡಾ ನಮ್ಮ ಮುಂದೆ ನಡೆಯುತ್ತಿರುವ ಘಟನೆಯಂತೇಯೇ ಕಾಣುತ್ತದೆ. ಪಂಚ ತಂತ್ರ, ನೀತಿ ಕಥೆ, ಜನಪದ ಕಥೆಗಳಿಂದ ಆವರಿಸಿಕೊಂಡಿದ್ದ ಕನ್ನಡ ಮಕ್ಕಳ ಕಥಾ ಲೋಕ ಹೊಸ ಹರಿವನ್ನು ಕಾಣುತ್ತಿದೆ. ಬಸು ಅವರ ಕಥೆಗಳು ಈ ಹೊಸ ಹರಿವಿನ ಬಹು ಮುಖ್ಯ ಕಥೆಗಳಾಗಿವೆ. ವಾಸ್ತವ ಹಾಗೂ ಗ್ರಾಮೀಣ ಬದುಕಿನ ಬಹು ಸುಂದರ ಮಕ್ಕಳ ಲೋಕದೊಂದಿಗೆ ಬಸು ಅವರು ಅನುಸಂಧಾನ ಹೊಂದುವುದೇ ನಮಗೆಲ್ಲ ಬಹಳ ಖುಷಿ. ಹೊಸ ಸಂವೇದನೆಯ ಈ ಕಥೆಗಳನ್ನು ತಾವೆಲ್ಲ ಓದ ಬೇಕು, ಡಾ. ಬಸು ಬೇವಿನಗಿಡದ ಅವರು ಮತ್ತಷ್ಟು ಕಥೆಗಳನ್ನು ಬಿಚ್ಚಿಕೊಳ್ಳುತ್ತ ಕನ್ನಡದ ಮಕ್ಕಳ ಕಥಾಲೋಕ ವಿಸ್ತರಿಸುವ ಪಾಲುದಾರರಾಗಿಯೇ ಇರಬೇಕು ಎನ್ನುವುದು ನಮ್ಮ ಆಶಯ. ***************************************** –ತಮ್ಮಣ್ಣ ಬೀಗಾರ.

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಹುಳುಕ ಹೂರಣದ ಹೋಳಿಗೆ ತೋರಣ ‘ರಾಯಕೊಂಡ’ ಕರಣಂ ಪವನ ಪ್ರಸಾದರ ಬಹುನಿರೀಕ್ಷಿತ ಕಾದಂಬರಿ. ಕಾನ್ಕೇವ್ ಪ್ರಕಾಶನ ಇದನ್ನು ಪ್ರಕಟಿಸಿದೆ. ನನ್ನಿ, ಗ್ರಸ್ತ, ಕರ್ಮ ಕಾದಂಬರಿಗಳನ್ನು, ಕರಣಂ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದವರು. ಅವರೇ ಹೇಳಿಕೊಂಡಂತೆ ಇದು ಡಾರ್ಕ್ ಹ್ಯೂಮರ್ ಪ್ರಕಾರಕ್ಕೆ ಸೇರುವ ಕಾದಂಬರಿ. ಈ ವಿಭಾಗವು ಸಾಮಾನ್ಯವಾಗಿ ನಿಷೇಧವೆಂದು ಭಾವಿಲ್ಪಡುವ ವಿಷಯದ ಬೆಳಕನ್ನು ಚೆಲ್ಲುತ್ತದೆ. ವಿಶೇಷವಾಗಿ ಗಂಭೀರ ಅಥವಾ ವಿಷಾದದಿಂದ ಕೂಡಿದ ವಿಷಯಗಳನ್ನು ಕಪ್ಪು ಹಾಸ್ಯದ ಮಾದರಿಯಲ್ಲಿ ಚರ್ಚಿಸುತ್ತದೆ. ಎಂ. ವ್ಯಾಸರ ಕಪ್ಪು ದರ್ಶನದ ಕಥೆಗಳೇ ಬೇರೆ, ಅದನ್ನು ಇಲ್ಲಿ ಚರ್ಚಿಸದೇ ಮುಂದಕ್ಕೆ ಹೋಗೋಣ ( ಕಾದಂಬರಿಯಲ್ಲಿಯೂ ನಿರೂಪಕರು ಇದೇ ಧಾಟಿಯಲ್ಲಿ ಸಾಗುತ್ತಾರೆ). ಈ ಕಾದಂಬರಿಯ ಕೊನೆಕೊನೆಗೆ ಸ್ವಲ್ಪ ಈ ಡಾರ್ಕ್ ಹ್ಯೂಮರ್ ನ ಫೀಲಿಂಗ್ ಆಗುತ್ತದೆ. ಅದೇನೇ ಇರಲಿ, ಒಟ್ಟು ಹತ್ತು ಅಧ್ಯಾಯಗಳಲ್ಲಿ ಈ ಕೃತಿ ಹರಡಿಕೊಂಡಿದೆ. ಕಥೆಗಳ ತೋರಣಕ್ಕೂ ಮುನ್ನ ಪಾತ್ರಗಳ ಸಂಬಂಧ ಸೂಚಿಯಿದೆ. ಗೋಪಾಲಕೃಷ್ಣ ಪೈಗಳ ಸ್ವಪ್ನ ಸಾರಸ್ವತ ಮತ್ತು ನಾ. ಮೊಗಸಾಲೆ ಅವರ ‘ ಉಲ್ಲಂಘನೆ’ ಕಾದಂಬರಿಯಲ್ಲಿ ಇದನ್ನು ನಾವು ಕಾಣಬಹುದು. ಮಿರ್ಜಿ ಅಣ್ಣಾರಾಯರ ‘ ನಿಸರ್ಗ’ , ಎಸ್. ಎಲ್ ಭೈರಪ್ಪನವರ ‘ಅನ್ವೇಷಣೆ’ ಆಗಾಗ ನೆನಪಾಗುತ್ತದೆ. ಭೈರಪ್ಪನವರು ಪರ್ವದಲ್ಲಿ ಪಾತ್ರಗಳ ಮುಖೇನ ಮಹಾಭಾರತವನ್ನು ಹೇಳುವ ಧಾಟಿಯಲ್ಲಿ ರಾಯಕೊಂಡದ ನಿರೂಪಣೆಯಿದೆ. ರಾಯಕೊಂಡದ ಮೂಲಕ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದ ಪ್ರಾದೇಶಿಕ ಸೊಗಡನ್ನು ತುಂಬಾ ಚೆನ್ನಾಗಿ ಪವನ ಪ್ರಸಾದರು ಕಟ್ಟಿಕೊಟ್ಟಿದ್ದಾರೆ. ಆದರೆ ತೆಲುಗು ಲವಲೇಶವೂ ಗೊತ್ತಿಲ್ಲದವರಿಗೆ ಸಂಭಾಷಣೆಗಳು ತೊಂದರೆಕೊಡುತ್ತವೆ. ಅಮ್ಮಿ ಅತ್ತೆ, ಕಿಟ್ಟಪ್ಪ, ಚಿರತೆ ಪದ್ದಣ್ಣ ಪಾತ್ರಗಳ ಪೋಷಣೆ ಅಚ್ಚುಕಟ್ಟಾಗಿ ಮೂಡಿಬಂದಿದೆ. ಗುಂಡ ಮತ್ತು ಸೂಜಿ ; ಅದೇ ಅದೇ ಸಲಿಂಗ ಕಾಮ ಮತ್ತು ಅನೈತಿಕ ಸಂಬಂಧಗಳ ಕಥೆಗಳು. ಮತ್ತೆ ಮಧು ಪಾತ್ರ ಅದೇ ಕೆಲಸ ಮಾಡುತ್ತದೆ. ಪಾತ್ರಗಳ ಮೂಲಕ ಹೇಳಿಸಲಾಗದ ಅಭಿಪ್ರಾಯ, ನಿಲುವನ್ನು ನಿರೂಪಕ ಮುಂದೆ ನಿಂತು ಹೇಳುವುದು ಅಭಾಸ ಎನ್ನಿಸುತ್ತದೆ. ಮದುವೆಯಾಗದ ಹೆಣ್ಣುಮಕ್ಕಳನ್ನು ಕಾದಂಬರಿಯುದ್ದಕ್ಕೂ ಚಿತ್ರಿಸಿರುವ ರೀತಿಯ ಬಗ್ಗೆ ವಿಮರ್ಶಕರೇ ಬೆಳಕು ಚೆಲ್ಲುವುದು ಉಚಿತವೇನೋ! ಹೆಣ್ಣಿನ ಕುರಿತು ಕೆಲವು ಸಾಲುಗಳು ಡಿಸ್ಟ್ರಿಕ್ಟಿವ್ ಧಾಟಿಯಲ್ಲಿವೆ ಎಂಬ ಭಾವನೆ ಮೂಡದಿರದು. ತೆಲುಗು ರಾಜಕೀಯದ ರಕ್ತಸಿಕ್ತ ಅಧ್ಯಾಯ ಕಟ್ಟಿಕೊಡುವ ಪ್ರಯತ್ನ ಕೂಡ ಗಾಢವಾಗಿಲ್ಲ ಎಂದು ಪುಸ್ತಕ ಕೆಳಗಿಟ್ಟ ಮೇಲೆ ಭಾಸವಾಗುತ್ತದೆ. ಆದರೂ ಕರಣಂ ಅವರ ಹೊಸ ಪ್ರಯತ್ನವನ್ನು ಶ್ಲಾಘಿಸಲು ಭಾಷೆಯ ಪ್ರಯೋಗ, ಪಾತ್ರ ಚಿತ್ರಣ, ಕುಟುಂಬದ ಮಜಲುಗಳನ್ನು ತೆರೆದಿಡುವ ರೀತಿ ಸಾಕು. ಒಟ್ಟಾರೆ ಕಾದಂಬರಿಯಾಗಿ ಸರಾಗವಾಗಿ ಓದಿಸಿಕೊಳ್ಳುವುದಿಲ್ಲವಾದರೂ, ಒಂದೆಡೆ ಸಿಗುವ ಕಥಾಗುಚ್ಛದ ಪರಿಣಾಮವನ್ನು ಬೀರಲು ಕಾದಂಬರಿಯು ಯಶಸ್ವಿಯಾಗುತ್ತದೆ.ಭೂಪತಿ ಶ್ರೀನಿವಾಸನ್ ಉತ್ತಮ ಮುಖಪುಟ ವಿನ್ಯಾಸ ಮಾಡಿದ್ದಾರೆ. ಪ್ರಕಾಶಕರು ಎರಡನೇ ಮುದ್ರಣಕ್ಕೆ ಮುನ್ನ ಸಾಕಷ್ಟಿರುವ ಅಕ್ಷರ ದೋಷಗಳನ್ನು ತಿದ್ದುಪಡಿ ಮಾಡಿಸುವುದು ಒಳ್ಳೆಯದು. ಕಾದಂಬರಿ ಪ್ರಕಾರವನ್ನು ಇಷ್ಟಪಡುವ, ಧಾರಾವಾಹಿಗಳನ್ನು ಮೆಚ್ಚುವ ಜನರು ಒಮ್ಮೆ ಓದಲೇಬೇಕಾದ ಪುಸ್ತಕವಿದು. *********************** – ಡಾ. ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

Anyone but the Spouse ವಾಸ್ತವ ಸಂಗತಿಗಳ ಯಥಾವತ್ ನಿರೂಪಣೆ ಪುಸ್ತಕ:Anyone but the Spouse ಸಣ್ಣ ಕಥೆಗಳು ಲೇಖಕಿ:ಪೂರ್ಣಿಮಾ ಮಾಳಗಿಮನಿ Anyone but the Spouse ಪೂರ್ಣಿಮಾ ಮಳಗಿಮನಿಯವರು ಇಂಗ್ಲಿಷ್ ನಲ್ಲಿ ಬರೆದು ಪ್ರಕಟಿಸಿರುವ ಸಣ್ಣ ಕಥಾ ಸಂಕಲನ. ಪಾಶ್ಚಾತ್ಯ ಸಂಸ್ಕೃತಿಯ ನೇರ ಪ್ರಭಾವಕ್ಕೊಳಗಾಗಿರುವ ಆಧುನಿಕ ಭಾರತೀಯ ಸಮಾಜದಲ್ಲಿ ಗಂಡು- ಹೆಣ್ಣುಗಳ ನಡುವಣ ಸಂಬಂಧ, ವೈವಾಹಿಕ ವ್ಯವಸ್ಥೆ ಮತ್ತು ಕೌಟುಂಬಿಕ ಬದುಕುಗಳಲ್ಲಿ ಆಗಿರುವ ಬದಲಾವಣೆಯ ಯುಕ್ತಾಯುಕ್ತತೆಯ ಕುರಿತು ಈ ಕಥೆಗಳು ತಣ್ಣಗೆ ಸಂಶೋಧನೆ ನಡೆಸುವಂತಿವೆ.   ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳು ೧೮೭ ಪುಟಗಳನ್ನು ಆವರಿಸಿಕೊಂಡಿವೆ. ಮೊದಲ ಕಥೆ The Travel Blogger ಮೂರು ಬಾರಿ ಪ್ರೇಮ ವಿಫಲಳಾಗಿ ನಿರಾಶಳಾದ ದೀಪಿಕಾ ಎಂಬ ಕಥಾನಾಯಕಿ ನಾಲ್ಕನೆಯ ಬಾರಿ ಪ್ರದೀಪ ಎಂಬ ಒಬ್ಬ ವಿವಾಹಿತ ವ್ಯಕ್ತಿಯನ್ನು ಆಕಸ್ಮಿಕವಾಗಿ ಭೇಟಿಯಾಗಿ ಪ್ರೀತಿಯೊಳಗೆ ಬೀಳುವುದರ ಕುರಿತಾದ  ಕಥೆ. ಅದು ಪರಸ್ಪರ ಪ್ರೀತಿಯೇ ಆದರೂ ಪ್ರದೀಪನ   ಮನಸ್ಸಿನ ತುಂಬಾ ಅಂಜಿಕೆ ಹಿಂಜರಿಕೆಗಳಿರುತ್ತವೆ. ತನ್ನ ಹೆಂಡತಿಯೊಂದಿಗೆ ಒಳ್ಳೆಯ ಸಂಬಂಧವನ್ನೇ ಇಟ್ಟುಕೊಂಡಿರುವ ಆತ ಕಥಾನಾಯಕಿಯೊಂದಿಗೆ ಕೂಡುವ ಮುಕ್ತ ಅವಕಾಶ ಸಿಕ್ಕಿದರೂ ಮುಂದೆ ಹೆಜ್ಜೆ ಇಡಲಾಗದೆ ಮಗನಿಗೆ ಹುಷಾರಿಲ್ಲವೆಂದು ಫೋನ್ ಬಂದ ಕೂಡಲೇ ಹಿಂದಿರುಗಿ ಮನೆಗೆ ಹೋಗುತ್ತಾನೆ. ಕೆಲವು ದಿನಗಳ ತನಕ ಅವನ ಸುದ್ದಿಯೇ ಇಲ್ಲದಾಗ ಕಥಾನಾಯಕಿ ಅವನ ಆಫೀಸಿಗೆ ಹೋಗಿ ವಿಚಾರಿಸಿದಾಗ ಅವನ ಗೆಳೆಯ ಅವನು ಬೈಕ್ ಅಪಘಾತದಲ್ಲಿ ಸತ್ತು ಹೋಗಿರುವ ಸುದ್ದಿ ತಿಳಿಸುತ್ತಾನೆ.ಕಥೆಯ ಕೊನೆಯ ಪಂಚ್ ಏನೆಂದರೆ ಪ್ರದೀಪನ ಗೆಳೆಯ ತಾನು ಮಾಡಿದ ತಪ್ಪಿನ ಬಗ್ಗೆ ದೀಪಿಕಾಳಲ್ಲಿ ಹೇಳಿಕೊಳ್ಳುವುದು.ಕಥಾನಾಯಕ ತಾನು ದೀಪಿಕಾಳ ಬಳಿಗೆ ಹೊಗಲೇ ಎಂದು ಕೇಳಿದಾಗ ತಾನು ಅವನನ್ನು ಒತ್ತಾಯಿಸಿ ಕಳುಹಿಸಲು ಕಾರಣ ಕಥಾನಾಯಕನ ಮಗ ತನ್ನ ಮಗನೇ ಆಗಿರುವುದು. ತನ್ನ ಅಪರಾಧಿ ಪ್ರಜ್ಞೆಯಿಂದ ಬಿಡುಗಡೆ ಹೊಂದುವುದು ಅವನ ಉದ್ದೇಶ. ಜೀವನವೆಂಬ ಯಾತ್ರೆಯಲ್ಲಿ ಇಂಥ ಬ್ಲಾಗುಗಳು ಸದಾ ಸೃಷ್ಟಿಯಾಗುತ್ತಲೇ ಇರುತ್ತವೇನೋ ಎಂಬ ಧ್ವನಿ ಇಲ್ಲಿದೆ. Take no logical love ಅನ್ನುವ ಕಥೆ ಗಂಡು ಹೆಣ್ಣುಗಳ ನಡುವಣ ಸಂಬಂಧದ ವಿಚಾರದಲ್ಲಿ ಆಧುನಿಕ ಜಗತ್ತಿನಲ್ಲಿ ಹೊಸ ತಲೆಮಾರಿನ ಹದಿಹರೆಯದವರ ಮನಸ್ಥಿತಿಯನ್ನು ಚಿತ್ರಿಸುತ್ತದೆ. ವಿವಾಹಪೂರ್ವದ ಲೈಂಗಿಕ ಸಂಬಂಧವನ್ನು ನಿಷೇಧಿಸಿರುವ ಭಾರತೀಯ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿನಿಧಿಸುವ ಕಥಾನಾಯಕಿ ಶೆಹರ್ ಒಂದೆಡೆಯಾದರೆ ನಿಸರ್ಗದ ಕೂಗನ್ನು ಸ್ವೀಕರಿಸಿ ಸರಿಯಾದ ಸಮಯದಲ್ಲಿ ಪ್ರತಿಕ್ರಿಯಿಸುವುದೇ ಆರೋಗ್ಯಕರವೆಂದು ಹೇಳುವ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿರುವ ಯುವ ವರ್ಗವನ್ನು ಪ್ರತಿನಿಧಿಸುವ ಟೀನಾ ಇನ್ನೊಂದೆಡೆ. ಬಾಯ್ ಫ್ರೆಂಡ್ಸ್‌ ಇಲ್ಲದಿರುವ ಶೆಹರಳನ್ನು ಲೈಂಗಿಕ ವಿಚಾರದಲ್ಲಿ ಏನೂ ತಿಳಿಯದ ಪೆದ್ದಿಯೆಂದು ಗೇಲಿ ಮಾಡಿ ಅವಳನ್ನು ನೋಯಿಸುವವರೇ ಇರುವ ಗುಂಪಿನಲ್ಲಿ ಇರಲಾಗದೆ ಬದಲಾಗಲು ಪ್ರಯತ್ನಿಸುವ ಶೆಹರ್ ಕೊನೆಗೂ ತಾನು ಕಂಡುಕೊಳ್ಳುವ ಬಾಯ್ ಫ್ರೆಂಡಿನಿಂದ ಬಯಸುವುದು ಲೈಂಗಿಕ ಸುಖದ ಜತೆಗೆ ಹೃದಯದ ಪ್ರೀತಿಯನ್ನು. ಆದರೆ ಆಗಲೇ ಸಾಕಷ್ಟು ಲೈಂಗಿಕ ಬಯಕೆಗಳನ್ನು ತೀರಿಸಿಕೊಂಡಿರುವ ಆ ಹುಡುಗ ಅವಳಿಗೆ ಮಾನಸಿಕವಾದ ಪ್ರೀತಿ ಕೊಡುವಲ್ಲಿ ವಿಫಲನಾಗುತ್ತಾನೆ. ವಿವಾಹಿತ ಸ್ತ್ರೀಯೊಬ್ಬಳಲ್ಲಿ ಅನುರಕ್ತನಾಗಿ ಅವಳಿಗಾಗಿ ಹಂಬಲಿಸುವ ವಿವಾಹಿತನಾದ ಒಬ್ಬ ವ್ಯಕ್ತಿಯು ಪ್ರೇಮ ನಿವೇದನೆ ಮಾಡಲು ಹೊರಟಾಗ .ತನ್ನ ಗಂಡ ಕಾಯಿಲೆಯಿಂದ ನರಳುತ್ತ ಮಲಗಿರುವುದರಿಂದ ಈತ ತನ್ನ ಮೇಲೆ ಸಹಾನುಭೂತಿ ತೋರಿಸುತ್ತಿದ್ದಾನೆಂದು ಅನುಮಾನಿಸಿ ಆಕೆ ಅವನನ್ನು ತಿರಸ್ಕರಿಸುವ ಕಥೆ Lift. ಸುಖೀಸಂಸಾರವೆಂದು ನೋಡಿದವರು ತಿಳಿದುಕೊಳ್ಳುವ ಲಾವಣ್ಯ, ರಂಜಿತರ ಬದುಕಿನಲ್ಲಿ ಬಿರುಕು ಮೂಡುವುದು ರಂಜಿತನಿಂದಾಗಿಯೇ. ಸುಂದರಿಯೂ ಪ್ರತಿಭಾವಂತೆಯೂ ಆದ ಹೆಂಡತಿಯ ಬಗ್ಗೆ ಒಳಗೊಳಗೇ ಮೆಚ್ಚುಗೆಯಿದ್ದರೂ ಅದನ್ನು ತೆರೆದ ಮನಸ್ಸಿನಿಂದ ಹೇಳಲು ಅವನ ‘ಮೇಲ್ ಈಗೋ’ ಬಿಡುವುದಿಲ್ಲ. ಹೆಂಡತಿ ಕಟ್ಟಿಕೊಟ್ಟ ಬುತ್ತಿಯಿಂದ ರುಚಿಯಾದ ಪದಾರ್ಥಗಳನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡು ತಿಂದಾಗ ಅವರು ಎಷ್ಟು ಹೊಗಳಿದರೂ ಅದನ್ನು ಹೆಂಡತಿಯಲ್ಲಿ ಹೇಳದವನು. ಆಫೀಸಿನಿಂದ ಪತ್ರಿಕೆಗೊಂದು ಜಾಹಿರಾತು ಕೊಡಲು ಸುಂದರಿಯೊಬ್ಬಳ ಚಿತ್ರ ಬೇಕೆಂದು ಹೇಳಿದಾಗ ಲಾವಣ್ಯಳಿಗೆ ಹೇಳದೆಯೇ ಅವಳ ಚಿತ್ರ ಬರೆದು ಬೇರೆ ಹೆಸರಿನಲ್ಲಿ ಪ್ರಕಟಿಸುವ ರಂಜಿತ್ ಹೆಂಡತಿಯ ಮುಂದೆ ಮಾತ್ರ ಭಾವೋನ್ಮಾದಕ ಭಂಗಿಯಲ್ಲಿರುವ ಆ ಚಿತ್ರವನ್ನು ಯಾರು ಬರೆದಿರಬಹುದು ಎಂದು ಸಂದೇಹ ವ್ಯಕ್ತ ಪಡಿಸುತ್ತಾನೆ. ಆದರೆ ಅವನು ನಿರೀಕ್ಷಿಸಿದ್ದಕ್ಕೆ ವ್ಯತಿರಿಕ್ತವಾಗಿ   ಲಾವಣ್ಯ ಆ ಚಿತ್ರಕಾರನ ಬಗ್ಗೆ ಭಾವುಕಳಾಗಿ ಕನಸು ಕಾಣುತ್ತಿರುವುದನ್ನು ಗಮನಿಸಿದ ರಂಜಿತ್ ನಿಜವನ್ನು ಹೇಳಿ ತನ್ನ ತಪ್ಪುಗಳನ್ನು ಒಪ್ಪಿಕೊಂಡಾಗ ಲಾವಣ್ಯ ಸಂತುಷ್ಟಳಾಗುತ್ತಾಳೆ.   ಹೀಗೆಯೇ ವೈವಾಹಿಕ ಬದುಕಿನಲ್ಲಿ ಗಂಡ ಹೆಂಡತಿಯರ ನಡುವೆ ಸಂಬಂದ ಸೌಹಾರ್ದಯುತವಾಗಿಯೇ ಇದ್ದರೂ ಸಣ್ಣ ಪುಟ್ಟ ಕಾರಣಗಳಿಗಾಗಿ ಅಥವಾ    ಬದುಕಿನ ಏಕತಾನತೆಯಿಂದ ಬದಲಾವಣೆಯನ್ನು ತಮಗರಿವಿಲ್ಲದೆಯೇ ಒಳಮನಸ್ಸಿನಿಂದ ಬಯಸುವುದು,ಒಂದಷ್ಟು ಕಾಲ ದೂರಾಗಿ ಅನಂತರ ಮತ್ತೆ ಒಂದಾಗುವುದು – ಇಂಥ ವಸ್ತುಗಳುಳ್ಳ ಒಟ್ಟು ಹತ್ತು ಕಥೆಗಳು ಇಲ್ಲಿವೆ.(Dull Student  ಎಂಬ ಒಂದು  ಪುಟ್ಟ   ಕತೆಯ ಹೊರತಾಗಿ).ಒಟ್ಟಿನಲ್ಲಿ ಮುಕ್ತ ಲೈಂಗಿಕತೆ, ವಿವಾಹ ಪೂರ್ವ ಮತ್ತು ವಿವಾಹ ಬಾಹಿರ ಸಂಬಂಧಗಳು ಮನುಷ್ಯ ಸಹಜವೆಂಬ ಭಾವನೆ ಇಲ್ಲಿದ್ದರೂ ಅವು ಕ್ಷಣಿಕವೆಂದೂ, ಭಾರತೀಯ ಸಮಾಜವು ಇದುವರೆಗೆ ಪಾಲಿಸಿಕೊಂಡು ಬಂದ ವೈವಾಹಿಕ ವ್ಯವಸ್ಥೆಯ ವಿರುದ್ಧ ಹೋಗದೆ ಕುಟುಂಬದೊಳಗಿನ ಪ್ರೀತಿಯ ಸಂಬಂಧಗಳನ್ನು ಗಟ್ಟಿಯಾಗಿ ಇಟ್ಟುಕೊಳ್ಳುವು  ದರಲ್ಲೇ ಬೆಚ್ಚಗಿನ ಸುರಕ್ಷೆಯಿರುವುದೆಂದೂ ಈ ಎಲ್ಲ ಕಥೆಗಳು ಧ್ವನಿಸುತ್ತವೆ. ಪೂರ್ಣಿಮಾ ಅವರು ಬಳಸುವ ಕಥನ ತಂತ್ರದಲ್ಲಿ ಹೇಳಿಕೊಳ್ಳುವಂಥ ಹೊಸತನವಿಲ್ಲದಿದ್ದರೂ ಅವರ ನಿರೂಪಣಾಶೈಲಿ ಅತ್ಯಂತ ಸೊಗಸಾಗಿದೆ. ಭಾಷೆಯು ಸರಳವೂ ಸುಂದರವೂ ಆಗಿದ್ದು ಕಥೆಗಳು ಸುಖವಾಗಿ ಓದಿಸಿಕೊಂಡು ಹೋಗುತ್ತವೆ. ಅಮೆರಿಕನ್ ಇಂಗ್ಲಿಷ್ ನ ಮೂಲಕ ಇವತ್ತಿನ ಯುವಜನತೆಯ ಶಬ್ದ ಭಂಡಾರದೊಳಗೆ ಸರ್ವೇಸಾಮಾನ್ಯವಾಗಿರುವ, ಹಳಬರಿಗೆ ಅಪರಿಚಿತವೆಂದು ಅನ್ನಿಸಬಹುದಾದ ಅನೆಕ ಪದಗಳು, ಪದಪುಂಜಗಳು, ಮತ್ತು ಸಂಕ್ಷಿಪ್ತ      ಮೊಬೈಲ್ ಮೆಸೇಜ್ ಭಾಷೆಗಳು ಇಲ್ಲಿ ಯಥೇಷ್ಟವಾಗಿವೆ. ಯಾವುದೇ ಘೋಷಿತ  ಸಿದ್ದಾಂತಗಳಿಗೆ ಅಂಟಿಕೊಳ್ಳದೆ ವಾಸ್ತವ ಸಂಗತಿಗಳನ್ನು ಯಥಾವತ್ತಾಗಿ ನಿರೂಪಿಸಿ ಕುತೂಹಲವನ್ನು ಹಿಡಿದಿಟ್ಟುಕೊಂಡೇ ಸಾಗುವ ಈ ಕಥೆಗಳು ಒಂದೇ ಓಟಕ್ಕೆ ಓದಿಸಿಕೊಂಡು ಹೋಗುತ್ತವೆ.. **************************************** ಡಾ.ಪಾರ್ವತಿ ಜಿ.ಐತಾಳ್

ಪುಸ್ತಕ ಸಂಗಾತಿ Read Post »

You cannot copy content of this page

Scroll to Top