ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಪ್ರಸ್ತುತ

ಹರಪ್ಪ – ಡಿಎನ್ಎ ನುಡಿದ ಸತ್ಯ ನೂತನ ದೋಶೆಟ್ಟಿ ಈ ಶೀರ್ಷಿಕೆಯ ಕೃತಿಯನ್ನು ಲಕ್ಷ್ಮೀಪತಿ ಕೋಲಾರ ಹಾಗೂ ಸುರೇಶ್ ಭಟ್ ಬಾಕ್ರಬೈಲು  ಅವರು ಜೊತೆಯಾಗಿ ಹೊರತಂದಿದ್ದಾರೆ. ಸಾಗರ ತಾಲೂಕು ಕುಗ್ವೆಯ ಓದು ಪ್ರಕಾಶನ  2018ರಲ್ಲಿ  ಇದರ ದ್ವಿತೀಯ ಆವೃತ್ತಿ ಮಾಡಿದೆ.ಮೊದಲ ಮುದ್ರಣದ ಎಲ್ಲ ಪ್ರತಿಗಳು ಎರಡೇ ದಿನಗಳಲ್ಲಿ  ಖಾಲಿಯಾಗಿದ್ದು ಈ ಕೃತಿಯ ಮಹತ್ವವನ್ನು ಹೇಳುತ್ತದೆ. 76 ಪುಟಗಳ ಈ ಕೃತಿಯಲ್ಲಿ  ಇರುವ ಎರಡು ಲೇಖನಗಳಲ್ಲಿ  ಅತ್ಯಂತ ಕುತೂಹಲಕಾರಿ ಸಂಶೋಧನೆಗಳ ಮಾಹಿತಿ ಇದೆ. ವಂಶವಾಹಿಗಳ ಕುರಿತ ಜ್ಞಾನವನ್ನು ಮನುಕುಲದ ಇತಿಹಾಸ ಸಂಶೋಧನೆಗೆ ಬಳಸುವ ಪ್ರಕ್ರಿಯೆ ಎರಡು ದಶಕಗಳಿಂದ ಈಚೆಗೆ ಶುರುವಾದದ್ದು. ಓದು ಬಳಗ ತನ್ನ ಮುನ್ನುಡಿಯಲ್ಲಿ ಹೇಳಿದಂತೆ,                “2001ರಲ್ಲಿ ವಿಜ್ಞಾನಿಗಳು ಮಾನವ ಜಿನೋಂ ಯೋಜನೆಯ ಮೂಲಕ ಅಧ್ಯಯನ ನಡೆಸಲು ತೊಡಗಿ ನಂತರದ ಎರಡು ದಶಕಗಳಲ್ಲಿ ಅಗಾಧ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಕಳೆದ 7-8 ವರ್ಷಗಳಲ್ಲಿ  ಪ್ರಪಂಚದ ಬಹುತೇಕ ಎಲ್ಲಾ ಜನಾಂಗೀಯ ಹಾಗೂ ಪ್ರಾದೇಶಿಕ ಭಿನ್ನತೆಗಳ ಜನರ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನಕ್ಕೆ  ಒಳಪಡಿಸಿದ್ದಾರೆ. ಸದ್ಯದ ಮಟ್ಟಿಗೆ ಇಡೀ ಜಗತ್ತಿನಲ್ಲಿ ಮನುಷ್ಯನ ಚರಿತ್ರೆಯಲ್ಲಿ ನಡೆದಿರುವ ಎಲ್ಲಾ ವಲಸೆಗಳ ಇತಿಹಾಸವನ್ನು, ವಲಸೆಗಳ ಸ್ವರೂಪಗಳನ್ನು, ಜನಾಂಗೀಯ ಸಂಬಂಧಗಳನ್ನು ಸ್ಪಷ್ಟ ರೂಪದಲ್ಲಿ ಮುಂದಿಡಲು ಡಿಎನ್ಎ ಯಶಸ್ವಿಯಾಗಿದೆ ಎನ್ನಬಹುದು.” ನಾನು ಯಾರು? – ಈ ಪ್ರಶ್ನೆ ಅಧ್ಯಾತ್ಮಿಕವಾಗಿಯೂ, ಸಾಮಾಜಿಕವಾಗಿಯೂ ಸತತವಾಗಿ ಕಾಡುವಂಥದ್ದು. ಇದುವರೆಗೂ ಮನುಷ್ಯನಿಗೆ ತನ್ನ ಚರಿತ್ರೆಯ ಕುರಿತು ಇರುವ ನಂಬಿಕೆಯನ್ನು, ಅಹಂ ಅನ್ನು ಈ ಸಂಶೋಧನೆ ಬುಡಮೇಲು ಮಾಡಬಲ್ಲದು. ಜೊತೆಗೆ ವೈಜ್ಞಾನಿಕ ಆಧಾರವನ್ನೂ ಅದು ಒದಗಿಸುವುದರಿಂದ ಮಾಹಿತಿಗೆ ಅಧಿಕೃತತೆಯೂ ಬರುವುದು. ಮನುಷ್ಯನ ಚರಿತ್ರೆಯ ಸತ್ಯದ ಬಗ್ಗೆ ಕರಾರುವಾಕ್ಕಾದ ತಿಳಿವನ್ನೂ ಸಹ ಅದು ನೀಡಬಲ್ಲದು.  ಹರಪ್ಪ, ಮೊಹೆಂಜೊದಾರೊ, ಧೊಲವೀರ, ಇತ್ತೀಚೆಗೆ ಹರಿಯಾಣಾದ ರಾಖಿಗರಿಯ ಉತ್ಖನನದಲ್ಲಿ ದೊರೆತ ಮನುಷ್ಯರ ಪಳೆಯುಳಿಕೆಗಳ ಡಿಎನ್ಎ ಸಂಶೋಧನೆ ನಮ್ಮ ದೇಶದ ಚರಿತ್ರೆಯ ಕುರಿತೂ ಹೊಸ ಹೊಳಹುಗಳನ್ನು ನೀಡಬಲ್ಲದು.  ಕೃತಿಯ ಮೊದಲ ಲೇಖನ — ರಾಖಿಗರಿ ಪಳೆಯುಳಿಕೆಯ ಡಿಎನ್ಎ ನುಡಿದ ಸತ್ಯವೇನು? ಈ ಶೀರ್ಷಿಕೆಯಲ್ಲೇ ಕುತೂಹಲವಿದೆ. ಹರಪ್ಪ-ಮೊಹೆಂಜೊದಾರೋ ಉತ್ಖನನದಲ್ಲಿ ದೊರೆತ ಪಳೆಯುಳಿಕೆಗಳು ಭಾರತ ಉಪಖಂಡದ ಪ್ರಾಚೀನ ನಾಗರಿಕತೆಗೆ ತಳುಕು ಹಾಕಿಕೊಂಡಿದ್ದು ತಿಳಿದಿದೆ. ಆದರೆ ಇಲ್ಲಿಯ ನಿವಾಸಿಗಳ ಕುರಿತು ಎದ್ದ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿರಲಿಲ್ಲ. ಇದೀಗ ರಾಖಿಗರಿಯಲ್ಲಿ ಸಿಕ್ಕಿರುವ 4500ವರ್ಷಗಳ ಹಿಂದಿನ ಅಸ್ಥಿಪಂಜರ ಈ ಜನ ಯಾರು ಎಂಬುದಕ್ಕೆ ಸ್ಪಷ್ಟ ಉತ್ತರ ನೀಡಬಲ್ಲುದಾಗಿದೆ.  ಈ ಸಂಶೋಧನೆಗಳಲ್ಲಿ ಸಿಂಧೂ ನಾಗರಿಕತೆಯ ಜನ ವಿಕಾಸಗೊಂಡಿರುವುದು ಇರಾನಿನ ಬೇಸಾಯಗಾರರು ಮತ್ತು ಪ್ರಾಚೀನ ಆದಿಯ ದಕ್ಷಿಣ ಭಾರತೀಯರ ಕೂಡುವಿಕೆಯಿಂದ , ಆದಿಯ ಉತ್ತರ ಭಾರತೀಯ ಜನವರ್ಗದ ವಿಕಾಸ, ಆದಿಯ ಉತ್ತರ ಭಾರತೀಯ ಹಾಗೂ ಆದಿಯ ದಕ್ಷಿಣ ಭಾರತೀಯರ ಸಮ್ಮಿಶ್ರಣದ ಫಲವಾಗಿ ಬಹುತೇಕ ಜನವರ್ಗಗಳ ವಿಕಸನ ಮೊದಲಾದ ಅತ್ಯಂತ ರೋಚಕ ವಿಷಯಗಳನ್ನು ಹೇಳುತ್ತ ಇದುವರೆಗೆ ಪ್ರಚಲಿತದಲ್ಲಿದ್ದ ಆರ್ಯ ಸಂಸ್ಕೃತಿಯ ಮೂಲ  ಭಾರತ ಎಂಬ ವಾದವನ್ನೂ ಅಲ್ಲಗಳೆಯುತ್ತದೆ. ರಾಖಿಗರಿ ಸಂಶೋಧನೆ, ಹರಪ್ಪ/ಸಿಂಧೂ ನಾಗರಿಕತೆಯ ಜನರು ಮತ್ತು ಇಂದು ಪಶ್ಚಿಮ ಘಟ್ಟಗಳ ದಕ್ಷಿಣ ತಮಿಳು ನಾಡಿನ ನೀಲಗಿರಿ ಅರಣ್ಯ ಬೆಟ್ಟದಲ್ಲಿ ನೆಲೆಸಿರುವ ಆದಿವಾಸಿ ಇರುಳರು ಮೂಲತಃ ಒಂದೇ ವಂಶದವರು ಎಂದು ಹೇಳುತ್ತದೆ. ಆಧುನಿಕ ಭಾರತೀಯ ಒಂದು ಮಿಶ್ರಣ ತಳಿಯಾಗಿದ್ದು ಅದರಲ್ಲಿ ಗಮನಾರ್ಹ ಪ್ರಮಾಣದಲ್ಲಿ ಇರುವುದು ಹರಪ್ಪ ನಾಗರಿಕತೆಯ ಜನರು ಅಂದರೆ ಆದಿಯ ದಕ್ಷಿಣ ಭಾರತೀಯರ ವಂಶವಾಹಿಗಳು. ಇನ್ನು ವಲಸೆ ಬಗ್ಗೆ ಇವರು ಹೇಳಿರುವುದು-ಆಧುನಿಕ ಲಕ್ಷಣಗಳಿರುವ ಮಾನವರು  ಸುಮಾರು 70000 ವರ್ಷಗಳ ಹಿಂದೆ ಆಫ್ರಿಕಾದಿಂದ ವಲಸೆ ಹೊರಟು ವಿಶ್ವದ ಬೇರೆ ಬೇರೆ ಭಾಗಗಳಿಗೆ ಚದುರಿ ಹೋದರು.ಅವರಲ್ಲಿ ಒಂದು ಗುಂಪು ಸುಮಾರು 50000 ವರ್ಷಗಳ ಹಿಂದೆ ಭಾರತಕ್ಕೆ ಬಂದಿಳಿದಿದೆ.  ಡಿಎನ್ಎ ಅಧ್ಯಯನಗಳೂ ಇದನ್ನು ದೃಢಪಡಿಸಿವೆ.ಮತ್ತೊಂದು ದೊಡ್ಡ ವಲಸೆ 10000 ವರ್ಷಗಳ ಹಿಂದೆ ಪಶ್ಚಿಮ ಏಷಿಯಾದಿಂದ ಕೆಲವು ಗುಂಪು ಯುರೋಪ್ ಕಡೆಗೂ ಕೆಲವು ಇರಾನ್ ಮೂಲಕ ಭಾರತ ಹಾಗೂ ಇತರ ಭಾಗಗಳಲ್ಲೂ ನೆಲೆಸಿದವು. ಇಂಥ ಹಲವಾರು ಆಸಕ್ತಿದಾಯಕ ವಿಷಯಗಳು ಇಲ್ಲಿವೆ.  ಕೆಲವು ನಿಂದನೆಗಳಿವೆ. ಇಂಥ ಪ್ರಯತ್ನಗಳು ಕೂಡ ಇತಿಹಾಸದಲ್ಲಿ ತಮ್ಮ ಮೇಲ್ಲ್ಮೆಯನ್ನು ಸ್ಥಾಪಿಸಿಕೊಳ್ಳುವ ಭಾಗವೇ ಆಗಿರುವುದರಿಂದ ಅವುಗಳನ್ನು ಬಿಟ್ಟು ಮನುಕುಲದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಸಂಶೋಧನೆಗಳ ಬಗ್ಗೆ ಕೇಂದ್ರೀಕರಿಸಿ ಓದುವುದು ಒಳ್ಳೆಯದು. ಎರಡನೇಯ ಲೇಖನ ಲಕ್ಷ್ಮೀಪತಿಯವರದು. ಶೀರ್ಷಿಕೆ–ಸಂಸ್ಕ್ರತಿ  ಇತಿಹಾಸದ ಮಹಾಮರೆವು      ( ರಾಖಿಗರಿ ಡಿಎನ್ಎ ಫಲಿತಾಂಶದ ಜಾಡಿನಲ್ಲಿ).  ಕೆಲ ವರ್ಷಗಳ ಹಿಂದೆ ಇಂಥ ಒಂದು ಮಾಹಿತಿ ಸಂಗ್ರಹಣೆಯನ್ನು ಕಳೆದ 20 ವರ್ಷಗಳಿಂದ  ಮಾಡುತ್ತಿದ್ದೇನೆ ಎಂದು ಅವರು ನನಗೆ ಹೇಳಿದ್ದರು. ಅದರ ಬಗ್ಗೆ 3 ಚಿಂತನಗಳನ್ನು ಅವರ ಹತ್ತಿರ ಬೆಂಗಳೂರು ಆಕಾಶವಾಣಿಗೆ ಆಗ ಮಾಡಿಸಿದ್ದೆ.  8 ವರ್ಷಗಳ ಹಿಂದೆ ನಾನು ಧೊಲವಿರಾಕ್ಕೆ ಹೋದಾಗ ಅಲ್ಲಿಯ ಗೈಡುಗಳು ಬಹಳ ಅಲವತ್ತುಕೊಂಡು ಒಂದು ಮಾತು ಹೇಳಿದ್ದರು. ಒಬ್ಬ ಇತಿಹಾಸಜ್ಞ ಆ ಸ್ಥಳದ ಬಗ್ಗೆ ಸಾಕಷ್ಟು ಹೊಸ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ ಸರ್ಕಾರಕ್ಕೆ ಅದನ್ನು  ಸಲ್ಲಿಸುತ್ತಿಲ್ಲ ಎಂದು. ಆಗ ನನಗೇಕೊ ಅನುಮಾನವಾಗಿತ್ತು. ಈಗ ರಾಖಿಗರಿಯ ಸಂಶೋಧನೆಗಳು ಬಂದ ಮೇಲೆ ಅದಕ್ಕೆ ತಾಳೆಯಾಗುತ್ತಿದೆ. ಇಂದು ಭಾರತವೊಂದೇ ಅಲ್ಲ. ಇಡೀ ಜಗತ್ತೇ ಕಕೇಷಿಯನ್ ಜನಾಂಗವಾದಿಗಳ ವಸಾಹತಾಗಿ ಮಾರ್ಪಟ್ಟಿದೆ ಎಂಬ ಅಚ್ಚರಿ ಹುಟ್ಟಿಸುವ ಮಾಹಿತಿಯೊಂದಿಗೆ ಲೇಖನ ಆರಂಭವಾಗುತ್ತದೆ. ಯುರೇಷಿಯಾದ ದಕ್ಷಿಣಕ್ಕಿರುವ ಕಾಕಸಸ್ ಪರ್ವತಾವಳಿಗಳಲ್ಲಿ ವಾಸಿಸುತ್ತಿದ್ದ ಜನರು ಕಕೇಷಿಯನ್ನರು. ಇದರ ಬಗ್ಗೆ ಆಗಿರುವ ನಿಖರ ಸಂಶೋಧನೆಗಳ ಮಾಹಿತಿಯನ್ನು ಇಲ್ಲಿ ಅವರು ಕೊಡುತ್ತಾರೆ. ಮಾನವ ಕುಲದ ಪೂರ್ವಿಕ ಪಿತೃವಿನ ಬಗೆಗಿನ ಜಿಜ್ಞಾಸೆ ಹೊಸ ಹೊಸ ಸಿದ್ಧಾಂತಗಳನ್ನು ರೂಪಿಸಿದೆ. ಆಫ್ರಿಕಾದ ಮೂಲವನ್ನು ಒಪ್ಪಿಕೊಳ್ಳಲಾಗದೆ ಪ್ರತಿಷ್ಠಿತ ಯುರೋಪ್ ತನ್ನದೇ ಸಿದ್ಧಾಂತಗಳನ್ನು ರೂಪಿಸಿಕೊಂಡಿದೆ. ‘ಆರ್ಯ ‘ ಮೂಲದ ಬಗೆಗಿನ ಚರ್ಚೆಗಳನ್ನು ಇಲ್ಲಿ ನೆನಪಿಸಿಕೊಳ್ಳುತ್ತ ಹಿಟ್ಲರ್ ಕೂಡ ‘ತಾನು ಆರ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ‘ಎಂಬ ಮಾತೂ ಇಲ್ಲಿ ಸ್ಮರಣೀಯ. ಬಹುತೇಕ ಅನುವಂಶಿಕ ವಿಜ್ಞಾನಿಗಳು ತಾಯಿಯಿಂದ ಮಕ್ಕಳಿಗೆ ಹರಿದು ಬರುವ X ವರ್ಣತಂತುವಿನ ಮೂಲಕ ವಿಶ್ಲೇಷಣೆಗಳನ್ನು ನಡೆಸಿ ಮಾನವನ ಪೂರ್ವಿಕ ಪಿತೃಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸಿ ವಿಫಲರಾಗಿದ್ದರು.ಆದರೆ ಲಂಡನ್ ಮೂಲದ ವಂಶವಾಹಿ ವಿಜ್ಞಾನಿ ಡಾ. ಸ್ಪೆನ್ಸರ್ ವೆಲ್ಸ್ ತಂದೆಯಿಂದ ಗಂಡು ಮಕ್ಕಳಿಗೆ ಮಾತ್ರವೇ ಹರಿದು ಬರುವ Y ವರ್ಣತಂತುವಿನ ಡಿಎನ್ಎ ವಿಶ್ಲೇಷಣೆಯನ್ನು ನಡೆಸಿದರು. ಒಟ್ಟು22 ಭಿನ್ನ ಭೌಗೋಳಿಕ ಪ್ರದೇಶಗಳ 1062 ಪುರುಷರ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿ 8 ದೇಶಗಳ ವಿಜ್ಞಾನಿಗಳ ತಂಡದೊಂದಿಗೆ ನಡೆಸಿದ ಅಧ್ಯಯನದ ನಂತರ ಅವರು ನೀಡಿದ ವಿವರ ಅತ್ಯಂತ ಕುತೂಹಲಕಾರಿಯಾದದ್ದು. ನಮೀಬಿಯಾದ ಸ್ಯಾನ್ ಬುಷ್ ಬುಡಕಟ್ಟಿನ Y ವರ್ಣತಂತುವಿನಲ್ಲಿ ದೊರೆತ ಗುರುತು 6000೦ ವರ್ಷಗಳಿಗೂ ಹಿಂದಿನದ್ದು. ಇದೇ ಗುರುತು ಭಾರತದ ಸೌರಾಷ್ಟ್ರ, ಮಧುರೈ, ಮಲೇಷಿಯಾ, ನ್ಯೂಗಿನಿ ಹಾಗೂ ಆಸ್ಟ್ರೇಲಿಯಾ ಮೂಲದ ನಿವಾಸಿಗಳಲ್ಲೂ ಕಂಡು ಬಂದಿದ್ದರಿಂದ ಆಧುನಿಕ ಮಾನವನ ಪೂರ್ವಿಕರ ಮೊದಲ ವಲಸೆಯ ಮಾರ್ಗ ಆಫ್ರಿಕಾದಿಂದ ಭಾರತದ ಕರಾವಳಿ ಮಾರ್ಗವನ್ನೊಳಗೊಂಡಂತೆ ಇಂಡೋನೆಷಿಯಾ, ಮಲೇಷಿಯಾ, ಆಸ್ಟ್ರೇಲಿಯಾದ ವರೆಗೂ ಗುರುತಿಸಲಾಯಿತು. ಈ ಪ್ರಯಾಣದ  ಅವಧಿ 300೦ ವರ್ಷಗಳು ಎಂದು ಅವರು ಅಂದಾಜಿಸುತ್ತಾರೆ. ಎರಡನೆಯ ವಲಸೆಯಲ್ಲಿ 4500೦ ವರ್ಷಗಳ ಹಿಂದೆ ಆಫ್ರಿಕಾದಿಂದ ಹೊರಟ ತಂಡ ಮಧ್ಯಪ್ರಾಚ್ಯ, ಮಧ್ಯ ಏಷ್ಯಾ, ಚೀನಾ, ಯುರೋಪ್ ಹಾಗೂ ದಕ್ಷಿಣ ಏಷ್ಯಾಗಳಲ್ಲಿ ಸಂತತಿ ಹಬ್ಬಿಸಿತು. ಹೀಗೆ ಮೆಡಿಟರೇನಿಯನ್ ಭಾಗದಿಂದ ಭಾರತದ ವಾಯುವ್ಯವನ್ನು ತಲುಪಿದವರೇ ಭಾರತದ ಇಂದಿನ ದ್ರಾವಿಡ ಭಾಷಿಕರು. ಹಾಗೆ ಯುರೇಷಿಯಾದಲ್ಲಿ ನೆಲೆಸಿದವರೇ ಕಕೇಷಿಯನ್ನರು!  ವೆಲ್ಸ್  ನಿಷ್ಕರ್ಷಿಸಿದ ಸಮಯಕ್ಕಿಂತ ಹಿಂದೆಯೇ ಮಾನವ ವಂಶಾವಳಿಗಳು ಚೀನಾ ಹಾಗೂ ಯುರೋಪಿನಲ್ಲಿ ಇದ್ದವು. ಆದರೆ ನೈಸರ್ಗಿಕ ವಿಕೋಪಕ್ಕೆ, ಇನ್ನಿತರ ಕಾರಣಗಳಿಗೆ  ತುತ್ತಾಗಿ  ಅವರೆಲ್ಲ  ನಾಮಾವಶೇಷವಾಗಿರಬೇಕು.  ವೆಲ್ಸ್ ಅವರ ಪ್ರಕಾರ ಇವತ್ತು ಭೂಮಿಯ ಮೇಲಿರುವ ಸಂತತಿಯಲ್ಲಿ ಇನ್ನೂರು ಜನರಲ್ಲಿ ಒಬ್ಬ ನಿಸ್ಸಂಶಯವಾಗಿ ಚೆಂಗೀಸ್ ಖಾನ್ ವಂಶದವನು! ಇಂಥ ಅನೇಕ ಕೌತುಕದ ವಿಷಯಗಳು ಈ ಲೇಖನದಲ್ಲಿವೆ. ಲಕ್ಷ್ಮೀಪತಿಯವರು ರಾಖಿಗರಿಯ ಬಗ್ಗೆ, ಅಲ್ಲಿಯ ಸಂಶೋಧನೆಗಳ ಬಗ್ಗೆ ವಿಸ್ತ್ರತ ಮಾಹಿತಿ ನೀಡುತ್ತಾರೆ.  ಇಡೀ ಜಗತ್ತಿನ ಇಂದಿನ ಜನಸಮುದಾಯಗಳು ವಲಸೆ, ಪಲ್ಲಟಗಳ ಕಾರಣದಿಂದ ಹಲವಾರು ಧಾರೆಗಳ ಮಿಶ್ರಣ ಹೊಂದಿರುವುದರ ಬಗ್ಗೆಯೂ ಅಧ್ಯಯನಗಳು ದೃಢಪಡಿಸಿವೆ. ವೈಜ್ಞಾನಿಕ ತಿಳಿವಿನ ಆಧಾರದ ಮೇಲೆ ಆದಿಪೂರ್ವಿಕ ದಕ್ಷಿಣ ಭಾರತೀಯರು, ಪೂರ್ವಿಕ ದಕ್ಷಿಣ ಭಾರತೀಯರು, ಪೂರ್ವಿಕ ಉತ್ತರ ಭಾರತೀಯರು ಎಂಬ ವಿಂಗಡಣನೆಯನ್ನು ವಿದ್ವಾಂಸರು ಗುರುತಿಸಿಟ್ಟಿದ್ದಾರೆ. ಲೈಂಗಿಕ ಪಕ್ಷಪಾತದಿಂದ ಆದ ಉತ್ಪರಿವರ್ತನೆಗಳನ್ನೂ ಗುರುತಿಸಿದ್ದಾರೆ.  ಲಕ್ಷ್ಮೀಪತಿಯವರು ವೇದಕಾಲವನ್ನೂ ತರ್ಕಿಸಿದ್ದಾರೆ. ಯುರೇಷಿಯಾದ ಯುದ್ಧೋನ್ಮಾದಿಗಳು ಭಾರತಕ್ಕೆ ಬಂದು ಇಲ್ಲಿನ ಉಪ್ಪನ್ನೇ ಉಂಡು …ಛೇ! ಈ ನೆಲದ ಇತಿಹಾಸ ಏಕೆ ವಕ್ರಗತಿ  ಹಿಡಿಯಿತೋ ಎಂದು ಬೇಸರಿಸಿದ್ದಾರೆ. ಕಾಲಕಾಲಕ್ಕೆ ಜರುಗಿದ ಸಾಂಸ್ಕ್ರತಿಕ ರಾಜಕಾರಣದ ಬಗ್ಗೆಯೂ ದೀರ್ಘವಾಗಿ ಹೇಳಿದ್ದಾರೆ. ನಾನು ಕಾಕತಾಳೀಯವೆಂಬಂತೆ  ಈ ಪುಸ್ತಕ, ರವಿ ಹಂಜ್ ಅವರ ಹ್ಯೂಎನ್ ತ್ಸಾಂಗನ ಮಹಾಪಯಣ, ನೇಮಿಚಂದ್ರರ ಯಾದ್ ವಶೇಮ್ ಇವುಗಳನ್ನು ಒಂದರ ಹಿಂದೆ ಒಂದು ಓದಿದೆ. ಮೂರರಲ್ಲೂ ಅದೆಷ್ಟು ಒಂದೇ ಬಗೆಯ ಹೊಳಹುಗಳು ಕಂಡವು ನನಗೆ. ವಸುಧೈವ ಕುಟುಂಬಕಂ- ಎಂಬ ಮಾತಿದೆಯಲ್ಲ. ಇಂಥ ಸಂಶೋಧನೆಗಳು ಹೆಚ್ಚು ನಡೆದು, ಜಗವೆಲ್ಲ ಒಂದೇ ಎಂಬ ಸಿದ್ಧಾಂತ ನಮ್ಮ ಕಾಲದಲ್ಲಿ ಸಿದ್ಧವಾಗದಿದ್ದರೂ ಆ ದಿಸೆಯ ಆಲೋಚನೆ ಆರಂಭವಾಗಿ ಜಗತ್ತಿನಲ್ಲಿ ಜಾತಿ, ಮಾತು, ಪಂಥ, ಧರ್ಮಗಳ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರ, ಯುದ್ಧಗಳು ಕಡಿಮೆಯಾಗಲಿ. ಲಕ್ಷ್ಮೀಪತಿಯಾವರ  ಸತತ ಅಧ್ಯಯನ, ಸುವಿಸ್ತಾರ ಓದಿಗೆ ಶರಣು. ಇತಿಹಾಸ ಎಂದರೆ ಮೂಗು ಮುರಿಯುವವರು ತಿಳಿಯಲೇಬೇಕಾದ ಸತ್ಯವೆಂದರೆ ಅದನ್ನು ಓದದಿದ್ದರೆ ‘ ನಾನು ಯಾರು?’ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೇ ಈ ಜಗತ್ತು ಒಂದು ದಿನ ಕೊನೆಯಾಗುತ್ತದೆ ಎಂಬುದು. ಈ ಹಿನ್ನೆಲೆಯಲ್ಲಿ  ಎಲ್ಲರೂ ಓದಲೇಬೇಕಾದ ಪುಸ್ತಕ ಇದು. ( ಪ್ರಕಾಶಕರು- Harshakumar KSKugwe Post, Sagar Taluk, Shimoga District- 577401Rs 50.ಪುಸ್ತಕಗಳಿಗಾಗಿ – 7353712715, 9844252648)***** ****************************************

ಪ್ರಸ್ತುತ Read Post »

ನಿಮ್ಮೊಂದಿಗೆ

ನಿಮ್ಮೊಂದಿಗೆ….

ಮನುಷ್ಯ ಭ್ರಮೆಗಳಲ್ಲಿ ಬದುಕಬಾರದೆಂದು ನಂಬಿದವನು ನಾನು. ಹೀಗಾಗಿಯೇ ಸಂಗಾತಿಬ್ಲಾಗ್ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರವಾದುದೇನೊ ಮಾಡಿಬಿಡುತ್ತದೆ ಮತ್ತು ಅತ್ಯುತ್ತಮ ಸಾಹಿತ್ಯ ಸೃಷ್ಠಿಗೆ ಕಾರಣವಾಗುತ್ತದೆಯೆಂಬ ಹುಸಿಭ್ರಮೆನನ್ನೊಳಗಿರಲಿಲ್ಲ ಮತ್ತು ಮುಂದೆಯೂ ಇರುವುದಿಲ್ಲ

ನಿಮ್ಮೊಂದಿಗೆ…. Read Post »

ನಿಮ್ಮೊಂದಿಗೆ

ಪ್ರೇಮವೇ ಒಂದು ಧರ್ಮ.

ಪ್ರೇಮ ಅನ್ನುವುದು ಧರ್ಮವನ್ನು ನೋಡಿ ಹುಟ್ಟುವುದಿಲ್ಲ, ಹಾಗೆಯೇ ಪ್ರೇಮ ಸ್ಬತ: ಒಂದು ಧರ್ಮವಾಗಿದೆ. ಜನ ಇದನ್ನು ಅರ್ಥಮಾಡಿಕೊಳ್ಳಬೇಕು–

ಪ್ರೇಮವೇ ಒಂದು ಧರ್ಮ. Read Post »

ನಿಮ್ಮೊಂದಿಗೆ

ಕಾವ್ಯಯಾನ

ದೂರದ ಊರು ಅಪ್ಪ ರಜಿಯಾ ಕೆ.ಬಾವಿಕಟ್ಟೆ ನಡೆಯುತ್ತಾ ನಡೆಯುತ್ತಾ ಹೋರಟ ಅಪ್ಪನ ಎದೆಯ ಉಸಿರು ಜೋರಾಗಿತ್ತು. ಬೀಸುವ ಬಿರುಗಾಳಿಯ ತಂಪಿಗೆ ನನ್ನಪ್ಪನ ಹೆಗಲು ಬಿಸಿಕಾವು ನೀಡುತ್ತಿತ್ತು. ನನ್ನ ಪಾದಗಳಿಗೆ ನೋವಾಗಬಾರದೆಂದು ನನ್ನಪ್ಪ ತನ್ನ ಪಾದಗಳ ನೆತ್ತರನು ಲೆಕ್ಕಿಸಲೇ ಇಲ್ಲ. ಹಸಿವು ಎನ್ನ ಕಾಡದಿರಲೆಂದು ದಾರಿ ಮಧ್ಯ ಮಧ್ಯದಲಿ ಕೈತುತ್ತ ನೀಡುತ್ತಲೇ ಇದ್ದ . ತನಗೆ ಹಸಿವಾಗದೆಂದು ಮುಗುಳು ನಗೆ ನಕ್ಕು ಮುಂದೆ ನಡೆಯುತ್ತಲೇ ಇದ್ದ. ಊರಿನ ದಾರಿಯು ಕಂಡ ಮೇಲೆ ಅಪ್ಪ ಬಲು ಸಂತಸ ಪಟ್ಟು ನನ್ನನ್ನು ಸುರಕ್ಷಿಸಿದೆ ಎಂದು ನಿರಾಳತೆಯಲ್ಲಿ ನಿಟ್ಟುಸಿರು ಬಿಟ್ಟ. ನಾ ಮತ್ತೊಮ್ಮೆ ಎದೆಗವಚಿಕೊಂಡಾಗ ನನ್ನಪ್ಪನ ಬಿಗಿ ಉಸಿರು ತಂಪಾಗೆ ಇತ್ತು. ಎಂದೂ ಬಿಸಿ ಉಸಿರಿನ ಅಪ್ಪುಗೆ‌ ನನಗೆ‌ ಸಿಗಲೇ‌ ಇಲ್ಲ. ಕಾರಣ ಅಪ್ಪ ನನ್ನ ಬಿಟ್ಟು ಬಹು ದೂರ ಹೋದನಲ್ಲ. ತನ್ನ ಉಸಿರಂತೆ ಇದ್ದ ನನ್ನ ತಬ್ಬಲಿ ಗೈದನಲ್ಲ. ( ಕೋರಾನಾ ಮಹಾಮಾರಿಯು ತಂದ ದಾರುಣ ಕಥೆಯ ವ್ಯಥೆ ಇದು.)

ಕಾವ್ಯಯಾನ Read Post »

ನಿಮ್ಮೊಂದಿಗೆ

ನಿಮ್ಮೊಂದಿಗೆ

ಪ್ರಿಯ ಬರಹಗಾರರೆ- ಪ್ರಿಯ ಬರಹಗಾರರೆ,ಸಂಗಾತಿ ಬ್ಲಾಗಿಗೆ ನೀವು ಬರೆಯುತ್ತಿರುವುದು ನಮಗೆಸಂತಸದ ವಿಚಾರ. ಅಕ್ಷರದ ಮೇಲಿನ ನಿಮ್ಮ ಪ್ರೀತಿ ದೊಡ್ಡದು. ಇಷ್ಟು ದಿನಗಳ ನಿಮ್ಮ ಸಹಕಾರಕ್ಕೆ ಸಂಗಾತಿ ಋಣಿಯಾಗಿರುತ್ತದೆ ಓದುಗರಿಗೆ ಒಳ್ಳೆಯ ಸಾಹಿತ್ಯಕ ಬರಹಗಳನ್ನು ನೀಡುವ ಉದ್ದೇಶದಿಂದ ಕೆಲವೊಂದು ನಿಯಮಗಳನ್ನು ನಾವು ರೂಪಿಸಿದ್ದು ಅವನ್ನು ತಮಗೆ ತಿಳಿಸಲು ಇಚ್ಚಿಸುತ್ತೇವೆ. ಮೊದಲನೆಯದಾಗಿ ನಮ್ಮ  ಓದುಗರಿಗೆ ಹೊಸ ಬರಹಗಳನ್ನು ನೀಡಲಿಚ್ಚಿಸಿದ್ದು ಬೇರೆ ಕಡೆ ಪ್ರಕಟವಾದ ಬರಹಗಳನ್ನು ಪ್ರಕಟಿಸಲಾಗುವುದಿಲ್ಲ. ಎರಡನನೆಯದಾಗಿ ಈಗಾಗಲೇ ಫೇಸ್ ಬುಕ್ಕಿನಲ್ಲಿ ಹಾಕಿ ಹಳತಾದ ಬರಹಗಳನ್ನು ಪ್ರಕಟಿಸಲಾಗುವುದಿಲ್ಲ. ಮೂರನೆಯದಾಗಿ ಬ್ಲಾಗಿನ ಗುಣ ಮಟ್ಟ ಕಾಯ್ದುಕೊಳ್ಳಲು ಆಯ್ದ ಬರಹಗಳನ್ನುಮಾತ್ರ ಪ್ರಕಟಿಸಲಾಗುವುದು. ನಾಲ್ಕನೆಯದಾಗಿ ಹಿಂದೆಯೇಹೇಳಿದಂತೆ ರಾಜಕೀಯಮತ್ತು ದಾರ್ಮಿಕ ವಿಚಾರಗಳಬರಹಗಳನ್ನು ಪ್ರಕಟಿಸಲಾಗುವುದಿಲ್ಲ. ಕಳಿಸಿದ  ಎರಡು ದಿನದ ಒಳಗೆ ನಿಮ್ಮ ಬರಹ ಪ್ರಕಟವಾಗದಿದ್ದರೆ ಬರಹ ಸ್ವೀಕೃತವಾಗಿಲ್ಲವೆಂದು ತಾವು ತಿಳಿಯಬೇಕು. ಈಬಗ್ಗೆ ಹೆಚ್ಚಿನ ಚರ್ಚೆ ಅನಗತ್ಯ. ಸಾಹಿತ್ಯಕ್ಕೆ ಮೀಸಲಾದ ಒಂದು ಬ್ಲಾಗಿಗು-ಬೇರೆ ಜಾಲತಾಣಗಳಿಗು ಗುಣಾತ್ಮಕ ವ್ಯತ್ಯಾಸವಿರಬೇಕೆಂದು ನಾವು ಬಯಸುತ್ತೇವೆ. ಹಾಗಾಗಿ ಈ ನಿಯಮಗಳನ್ನು ರೂಪಿಸಿದ್ದೇವೆ ಮತ್ತು ನಿಮ್ಮ ಸಲಹೆ ಸಹಕಾರಗಳನ್ನು ಕೋರುತ್ತಿದ್ದೇವೆ ಕನ್ನಡ ಸಾಹಿತ್ಯಲೋಕದಲ್ಲಿ ನಮ್ಮ ಬ್ಲಾಗಿಗೊಂದು ಉತ್ತಮ ಹೆಸರು ತಂದು ಕೊಡುವ ನಿಟ್ಟಿನಲ್ಲಿ ನಿಮ್ಮ ಬರಹಗಳು ಇರಲಿ ಎಂದಿನಂತೆ ನಿಮ್ಮ ಉತ್ತಮ ಬರಹಗಳನ್ನು ನಾವು ನಿರೀಕ್ಷಿಸುತ್ತೇವೆ.  ಸಂಪಾದಕರು,ಸಂಗಾತಿ ಸಾಹಿತ್ಯ ಪತ್ರಿಕೆ

ನಿಮ್ಮೊಂದಿಗೆ Read Post »

ನಿಮ್ಮೊಂದಿಗೆ

ನಿಮ್ಮೊಂದಿಗೆ

ಪ್ರಿಯ ಬರಹಗಾರರಿಗೆ ಪ್ರಿಯರೆ ಆರಂಭದ ಅಡಚಣೆಗಳನ್ನು ದಾಟಿಸಂಗಾತಿ ಬ್ಲಾಗ್ ಐದನೆ ತಿಂಗಳನ್ನು ಪೂರೈಸುತ್ತಿದೆ.ಈ ನಿಟ್ಟಿನಲ್ಲಿ ಬರಹಗಾರರಿಗೆ ಕೆಲವು ಮಾತುಗಳನ್ನುಹೇಳಲೇ ಬೇಕಿದೆ.ಮೊದಲನೆಯದಾಗಿ ಇದುವರೆಗಿನ ನಿಮ್ಮಸಹಕಾರಕ್ಕೆ ದನ್ಯವಾದಗಳು. ಮುಂದೆಯೂತಮ್ಮ ಸಲಹೆ-ಸಹಕಾರಗಳು ಹೀಗೆ ಮುಂದುವರೆಯಲೆಂದು ಬಯಸುತ್ತೇನೆ ದಯಮಾಡಿ ನಿಮ್ಮಬರಹಗಳನ್ನುತಪ್ಪಿರದೆ ಟೈಪ್ ಮಾಡಿ ಕಳಿಸಿ,ಇನ್ನು ಬರಹಗಳಪಿಡಿಎಫ್ ಮತ್ತು ಪೋಟೊಪ್ರತಿಗಳನ್ನು ಕಳಿಸಬೇಡಿ. ಈಗಾಗಲೇ ಫೇಸ್ಬುಕ್ಕಿನಲ್ಲಿ ಹಾಕಿದಬರಹಗಳನ್ನು ಕಳಿಸದೆ,ನಿಮ್ಮಹೊಸ ಬರಹಗಳನ್ನು ಕಳಿಸಿ,ಆದಷ್ಟು ಗುಣ ಮಟ್ಟದ ಬರಹಗಳನ್ನು ಕಳಿಸಿಒಂದು ಬರಹಕ್ಕು ಮತ್ತೊಂದು ಬರಹಕ್ಕು ಕನಿಷ್ಠ  ಒಂದುವಾರ ಅಂತರವಿರಲಿ.ಬರಹದ ಗುಣಮಟ್ಟದ ಬಗ್ಗೆ ನೀವೇ ಮೌಲ್ಯಮಾಪನ ಮಾಡಿಕೊಂಡು  ಪ್ರಕಟಿಸಬಹುದಾದದ್ದು ಅನಿಸಿದರೆ ಮಾತ್ರ ಕಳಿಸಿ.ಇನ್ನು ಮುಂದೆ ಪತ್ರಿಕೆ ಅನಿವಾರ್ಯ ಸಂದರ್ಭದ ಹೊರತು ಪ್ರತಿ ಸೋಮವಾರ ಮತ್ತು ಶುಕ್ರವಾರ ಪ್ರಕಟವಾಗಲಿದೆನಿಮ್ಮಿಂದ ಮೌಲಿಖವಾದ ಜನಪರವಾದ ಬರಹಳನ್ನು ಇನ್ನು ಮುಂದೆ ನಿರೀಕ್ಷಿಸುತ್ತೇನೆ.ಈ ಮಾತುಗಳನ್ನು ಹೇಳಬೇಕಾಗಿಬಂದನನ್ನ ಅನಿವಾರ್ಯತೆ ನಿಮಗರ್ಥವಾಗಿದೆಯೆಂದು ನಂಬುತ್ತೇನೆ.ನಿಮ್ಮಸಹಕಾರವಿರಲಿ,ಸಂಪಾದಕ

ನಿಮ್ಮೊಂದಿಗೆ Read Post »

ನಿಮ್ಮೊಂದಿಗೆ

ನಿಮ್ಮೊಂದಿಗೆ

ಕವಿ-ಕವಿತೆ ಕುರಿತು ವಿಜಯಶ್ರೀ ಹಾಲಾಡಿ ಗೆಳೆಯರೆ, ಕವಿತೆಗಳಿಗಿದು ಕಾಲವಲ್ಲವೆಂದು ಹೇಳುತ್ತಲೇ ತಮ್ಮ ಕವಿಪಟ್ಟಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿರುವ ಪ್ರಭಾವಿಗಳ ಕಾಲದಲ್ಲಿಯೂ ನಮ್ಮ ಹೊಸ ಕವಿಗಳು ಇನ್ನಿರದ ಉತ್ಸಾಹದಿಂದ ಕವಿತೆಗಳನ್ನುಬರೆಯುತ್ತಲೇ ಇದ್ದಾರೆ. ಬಹುಶ: ಮೂರು ವರ್ಷಗಳ ಹಿಂದೆ ನೆಚ್ಚಿನ ಕವಿಯಿತ್ರಿ ವಿಜಯಶ್ರೀ ಹಾಲಾಡಿಯವರು ಬರೆದ ಈ ಪುಟ್ಟ ಟಿಪ್ಪಣಿ ಇವತ್ತಿಗೂ ಪ್ರಸ್ತುತವಾಗಿದೆ ಹೊಸ ಕವಿಗಳು ಯಾವ ಗೊಂದಲವೂ ಇರದೆ ಬರೆಯಲು ಈ ಮಾತುಗಳು ಸ್ಪೂರ್ತಿಯಾಗಬಹುದೆಂದು ನಾನು ನಂಬಿದ್ದೇನೆ.ಅದಕ್ಕಾಗಿ ಹಾಲಾಡಿಯವರ ಈ ಬರಹ ನಿಮ್ಮ ಓದಿಗಾಗಿ. ಕು.ಸ.ಮದುಸೂದನ ಬರೆಹಗಾರರಲ್ಲಿ ೩ ವರ್ಗ. ೧.ಪ್ರತಿಭಾವಂತರು-ಹಲವು ವರ್ಷಗಳಿಂದ ತಪಸ್ಸಿನಂತೆ ಸಾಮಾಜಿಕ ಕಾಳಜಿಯಿಂದ ಬರೆಯುತ್ತ ತಮ್ಮದೇ ಛಾಪು ಒತ್ತಿ ಗುರುತಿಸಿಕೊಂಡವರು (ಇವರ ಕುರಿತು ಒಂದು ಸಣ್ಣ ಶಬ್ದ ಮಾತಾಡಲೂ ನಾನು ಅನರ್ಹಳು. ನಿಮಗೆ ನನ್ನ ಗೌರವ) ೨.ಪ್ರಭಾವಿಗಳು ೩.ಸಾಮಾನ್ಯರು. ಪ್ರಭಾವಿಗಳನ್ನು ‘ಕವಿ ‘ಗಳೆಂದು ಎಲ್ಲರೂ ಕರೆಯುತ್ತಾರೆ, ಸಾಮಾನ್ಯ ರು ಪಾಪ ಏನು ಬರೆದರೂ, ಎಷ್ಟು ಬರೆದರೂ ಅಷ್ಟೇ. ಅವರ ಅಸ್ತಿತ್ವವೇ ಸಾಹಿತ್ಯಲೋಕಕ್ಕೆ ಹೊರೆ, ಇರಲಿ. ‘ಕವಿತೆ ‘ಗಳ ವಿಷಯಕ್ಕೆ ಬರುವ. “ಪದ್ಯ ಬೇಡ ಗದ್ಯ ಇದ್ರೆ ಕೊಡಿ ಚೆನ್ನಾಗಿದ್ರೆ ಪ್ರಕಟಿಸುವ “ಎಂಬ ಮಾತು ಹಲವರನ್ನು ಕಕ್ಕಾಬಿಕ್ಕಿಯಾಗಿಸುತ್ತದೆ. ಬಾಲ್ಯದಿಂದ ಈವರೆಗೆ ಪದ್ಯಗಳನ್ನೇ ಬರೆದವರು ಹಲವರು. ಅವನ್ನೇ ಮಗುವಿನಂತೆ ಕಾಪಾಡಿಕೊಂಡು ಬಂದವರು. ಈಗ ಏಕಾಏಕಿ ಅವುಗಳಿಗೆ ಬೆಲೆಯೇ ಇಲ್ಲವಾಗಿದೆ! ! ಜಾಳು ಜಾಳು ಪದ್ಯ ಬರೆದೂ ತಮಗಿರುವ ಪ್ರಭಾವದ ಪ್ರಭಾವಳಿಯಿಂದ ಮೆರೆಯುತ್ತಿರುವ ಕೆಲವರ ಪೆನ್ನು ಸದ್ಯ ಮೊಂಡಾಗಿದ್ದರೂ ಇವತ್ತಿಗೂ ಅವರು “ಕವಿಗಳು! “. ಆದರೆ ಬರೆದೂ ಬರೆದೂ ಇನ್ನೂ ಬರೆಯುತ್ತಲೇ ಇರುವ ಹಲವರು ತಲೆಕೂದಲು ಹಣ್ಣಾದರೂ ಅವರನ್ನು ತಿರುಗಿ ನೋಡುವವರೂ ಇಲ್ಲ! ಸೌಜನ್ಯ, ಸಂಕೋಚ, ನಾಚಿಕೆ …ಮುಂತಾದುವನ್ನೆಲ್ಲ ಬದಿಗಿಟ್ಟು ಇನ್ನಾದರೂ ಇದನ್ನೆಲ್ಲ ಒಂಚೂರು ಪ್ರಶ್ನಿಸುವ ಸ್ನೇಹಿತರೆ …ನಮನಮಗೆ ನಾವು ನಾವೇ ;ಇಲ್ಲಿ ಯಾರಿಗೆ ಯಾರೂ ಇಲ್ಲ. ಚಂದದ ಸಮಾನತೆಯ ಮಾತುಗಳೆಲ್ಲ ವೇದಿಕೆಗೆ ಮಾತ್ರ ಸೀಮಿತ. ಕವಿತೆಗೆ “ಬೆಲೆಯಿಲ್ಲದ ” ಈ ಕಾಲದಲ್ಲಿ ನಿಮ್ಮ ಅನುಭವ, ಅಭಿಪ್ರಾಯ,ನೋವುಗಳನ್ನು ಇಲ್ಲಿ ದಯಮಾಡಿ ದಾಖಲಿಸಿ. ‘ಹಾಡೆ ಹಾದಿಯ ತೋರಿತು ..’ ಎಂಬ ಸಾರ್ವಕಾಲಿಕ ಸತ್ಯದ ಕವಿನುಡಿಯಂತೆ ದಾರಿ ತಾನಾಗೇ ತೋಚುತ್ತದೆ.ಇಲ್ಲವಾದರೆ ಮನಸ್ಸಿನ ಬೇಗುದಿಯಾದರೂ ಕಳೆಯುತ್ತದೆ .**********ವಿಜಯಶ್ರೀ ಹಾಲಾಡಿ

ನಿಮ್ಮೊಂದಿಗೆ Read Post »

ನಿಮ್ಮೊಂದಿಗೆ

ಸೂಚನೆ

ಪ್ರಿಯರೆ, ನಮಸ್ಕಾರಗಳು.ಹೊಸ ವರ್ಷದಿಂದ (2020)ಸಂಗಾತಿ ಪತ್ರಿಕೆಯನ್ನು  ಪ್ರತಿ ಬುದವಾರ ಪ್ರಕಟಿಸಲಾಗುವುದು. ಆರಂಭದ ದಿನಗಳ ಅನಿಶ್ಚಿತತೆ ಈಗ ಮುಗಿದಿದ್ದು, ವಿಶೇಷ ಮತ್ತು ಅನಿವಾರ್ಯ ಸಂದರ್ಭ ಹೊರತು ಪಡಿಸಿದಂತೆ, ವಾರಕ್ಕೊಮ್ಮೆ ಪ್ರಕಟಿಸುವ ನಿರ್ದಾರ ಕೈಗೊಳ್ಳಲಾಗಿದೆ. ಪ್ರತಿ ಗುರುವಾರದಿಂದ ಮುಂಗಳವಾರದವರೆಗು ನಮಗೆ ತಲುಪಿದ ಬರಹಗಳನ್ನು ಬುದವಾರ  ಮುಂಜಾನೆ ಪ್ರಕಟಿಸಲಾಗುವುದು-ಅಂಕಣಗಳಿಗು ಇದು ಅನ್ವಯಿಸಲಿದೆ. ಎಂದಿನಂತೆ ಬರಹಗಾರರು ಮತ್ತು ಓದುಗರು ಸಹಕರಿಸಬೇಕಾಗಿ ಕೋರುತ್ತೇವೆ,ಸಂಪಾದಕರು. ಸಂಗಾತಿ ಪತ್ರಿಕೆ

ಸೂಚನೆ Read Post »

ನಿಮ್ಮೊಂದಿಗೆ

ನಿಮ್ಮೊಂದಿಗೆ

ಸಂಗಾತಿ (ಸಾಹಿತ್ಯದ ಅಂತರ್ಜಾಲ ಬ್ಲಾಗ್) ಶುರು ಮಾಡಿ ಎರಡು ತಿಂಗಳು-ಇವತ್ತಿಗೆ ಅರವತ್ತಾರು ದಿನಗಳಾದವು. ಅಂದಾಜು 40ರಿಂದ 50 ಲೇಖಕರ ಸುಮಾರು238 ಬರಹಗಳನ್ನು ಪ್ರಕಟಿಸಲಾಗಿದೆ. 16 ಸಾವಿರ ಜನ ಈ ದಿನದವರೆಗು ಪತ್ರಿಕೆಯ ಸೈಟಿಗೆ ಬೇಟಿ ನೀಡಿದ್ದಾರೆ. ಪತ್ರಿಕೆಯ ಉದ್ದೇಶ ಈಡೇರುತ್ತಿದೆಯಾ ಇನ್ನೂ ನನಗೆ ಅರ್ಥವಾಗಿಲ್ಲ.ಪತ್ರಿಕೆಯ ಗುಣಮಟ್ಟದ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕಿದೆ, ಕೆಲವು ಹಿರಿಯ ಬರಹಗಾರರ ಜೊತೆ ಹಲವು ಹೊಸಬರಹಗಾರರೂ ಬರೆಯುತ್ತಿರುವುದರಿಂದ ಪ್ರಕಟವಾದದ್ದೆಲ್ಲ ಶ್ರೇಷ್ಠವೆಂದೊ ಇಲ್ಲ ಕಳಪೆಯೆಂದು ಜನರಲೈಸ್ ಮಾಡಿ ಬಿಡಲಾಗುವುದಿಲ್ಲ. ಇನ್ನು ಈಗಾಗಲೇಬರೆದು ಹೆಸರು ಮಾಡಿರುವ ಬರಹಗಾರರಿಗೆಹೊಸ ಪತ್ರಿಕೆಯೊಂದಕ್ಕೆ ಬರೆಯುವ ಮನಸಿದ್ದಂತಿಲ್ಲ, ಅವರದೇನಿದ್ದರೂ ಈಗಾಗಲೇ ಎಸ್ಟಾಬ್ಲಿಶ್ ಆಗಿರುವ ಜನಪ್ರಿಯ ಪತ್ರಿಕೆಗಳಿಗೆ ಮಾತ್ರ ಬರೆಯುವ ಉದ್ದೇಶವಿದ್ದಂತಿದೆ. ಹಿರಿಯ ಬರಹಗಾರರ ಶ್ರೇಷ್ಠತೆಯ ವ್ಯಸನಕ್ಕೆಮದ್ದಿಲ್ಲ. ಆದರೆ ತಾವು ಬರೆಯದೇ ದೂರ ಉಳಿದು,ಸಂಗಾತಿಯ ಗುಣಮಟ್ಟದ ಬಗ್ಗೆ ಟೀಕಿಸುವುದನ್ನು ನಾನು ಒಪ್ಪುವುದಿಲ್ಲ.ಸೋ ನಿಮ್ಮ ಗುಣಮಟ್ಟವಿಲ್ಲ ಎನ್ನುವ ಟೀಕೆಗಳಿಗೆ ಉತ್ತರ ಕೊಡುತ್ತ ಕೂರಲು ನಾನು ಸಿದ್ದನಿಲ್ಲ…. ಕೋಳಿ ಕೂಗದೆಯೂ ಬೆಳಗಾಗುವುದು ಎನ್ನುವುದನ್ನು ಯಾರೂ ಮರೆಯಬಾರದು… ಇದುವರೆಗು ಸಂಗಾತಿಗೆ ಬರೆದವರಿಗು ಓದಿದವರಿಗು ನಾನು ಋಣಿ ಬರಲಿರುವ ಹೊಸ ವರ್ಷದಲ್ಲಿ ಮತ್ತಷ್ಟು ಬದಲಾವಣೆಗಳೊಂದಿಗೆ ಸಂಗಾತಿ ಹೊರಬರಲಿದೆ

ನಿಮ್ಮೊಂದಿಗೆ Read Post »

ನಿಮ್ಮೊಂದಿಗೆ

ಜನರನ್ನು ತಲುಪುವ ಮಾರ್ಗ

ಕು.ಸ.ಮಧುಸೂದನ ರಂಗೇನಹಳ್ಳಿ ಸಾಹಿತ್ಯಕ ಪತ್ರಿಕೆಗಳ್ಯಾಕೆ ಜನರನ್ನುತಲುಪುತ್ತಿಲ್ಲ ಮತ್ತು  ದೀರ್ಘಕಾಲ ಬದುಕುತ್ತಿಲ್ಲ?ನನಗನಿಸಿದ್ದು- ನನ್ನ ಮುಂದೆ ಕೆಲವು ಸಾಹಿತ್ಯಕ ಪತ್ರಿಕೆಗಳಿವೆ. ಬಹುತೇಕ ಅವೆಲ್ಲವೂ ಪ್ರಗತಿಪರ ಲೇಖಕರೆನಿಸಿಕೊಂಡವರ ಬರಹಗಳಿಂದಲೇ ತುಂಬಿವೆ. ಹೆಚ್ಚೂಕಡಿಮೆ ಅವವೇ  ಲೇಖಕರೇ ಎನ್ನ ಬಹುದು.ಒಂದಿಷ್ಟಾದರು ಸಾಹಿತ್ಯ ಬಲ್ಲವರಿಗೇನೆ ಅರ್ಥವಾಗದಂತಹ    ಕಠಿಣವಾದ ತೀರಾ ಗಂಭೀರವಾದ ವೈಚಾರಿಕ ಬರಹಗಳು ಅವುಗಳಲ್ಲಿವೆ.ಹಾಗೆ ನೋಡುತ್ತಾ ಹೋದರೆ   ಆ ಸಾಹಿತ್ಯ ಪತ್ರಿಕೆಗಳು ಬರಹಗಾರರು ಮತ್ತವರ ಹಿಂಬಾಲಕರುಗಳ ನಡುವೆಯೇ ಪ್ರಸಾರಗೊಳ್ಳುತ್ತಿವೆ ಎನ್ನ ಬಹುದು. ಸಾಹಿತ್ಯಕ ವಲಯದ ಆಚೆ ಇರುವ ಸಾಮಾನ್ಯ ಓದುಗರನ್ನುಅವು ತಲುಪಿಲ್ಲ ಮತ್ತುತಲುಪಲು ಸಾದ್ಯವೂ ಇಲ್ಲ. ಯಾಕೆಂದರೆ ಸಾಮಾನ್ಯ ಓದುಗನೊಬ್ಬನಿಗೆ ನೇರವಾಗಿ ತಲುಪಬಲ್ಲಂತಹ  ಬರಹಗಳು ಅವುಗಳಲ್ಲಿ ಕಾಣಬರುವುದಿಲ್ಲ. ಹಾಗೆ ಗಂಬೀರವಾಗಿ ಬರೆಯುವುದೇ ತಮ್ಮ ಪ್ರತಿಭೆಯ ಅನಾವರಣ ಎನ್ನುವಂತಹ  ಭಾವನೆ ಬಹಳಷ್ಟು ಲೇಖಕರಿಗೆ ಇರುವಂತೆ ಕಾಣುತ್ತಿದೆ.  ಹೀಗಿರುವಾಗ ಸಾಹಿತ್ಯಕ ಪತ್ರಿಕೆಗಳು ಹೇಗೆ ಬದುಕಲು ಸಾದ್ಯ? ಸಾಹಿತ್ಯಕ ಪತ್ರಿಕೆಗಳನ್ನೂ ಸರಳವಾಗಿ, ಗಂಬೀರ ವಿಷಯವನ್ನೂ ಜನರನ್ನು ತಲುಪುವಭಾಷೆಯಲ್ಲಿ ತರದ ಹೊರತು ಯಾವ ಸಾಹಿತ್ಯ ಪತ್ರಿಕೆಯೂ ಬಹಳ ಕಾಲ ಬದುಕಲುಸಾದ್ಯವಿಲ್ಲ. ಅದರಪರಿಣಾಮವಾಗಿ ಪ್ರಗತಿಪರ ವಿಚಾರಧಾರೆಗಳು,ಕೋಮುವಾದ ಮತ್ತು ಬಂಡವಾಳಶಾಹಿ ಶಕ್ತಿಗಳಕುರೂಪಿ ಮುಖಗಳ ಪರಿಚಯ ಜನಸಾಮಾನ್ಯರಿಗೆಆಗುತ್ತಿಲ್ಲ. ಹೀಗಾಗಿಯೇ  ನಮ್ಮ ಹೋರಾಟಗಳು ಬಹುಜನರನ್ನುತಲುಪುತ್ತಿಲ್ಲಇನ್ನಾದರುನಮ್ಮ ಸಾಹಿತ್ಯ ಪತ್ರಿಕೆಗಳ ಲೇಖಕರು ತಮ್ಮ ನುಡಿಕಟ್ಟನ್ನು ಬಲಾಯಿಸಿಕೊಳ್ಳಬೇಕು.  ಸರಳವಾಗಿ ಜನರನ್ನು ತಲುಪುವಂತೆ ಬರೆಯುವುದೇ ಮಹಾಪರಾಧವೆಂದು ನಂಬಿಕೊಂಡಿರುವ ನಮ್ಮ  ಸಾಹಿತಿಗಳು ಸಹ ತಮ್ಮ ವಿಚಾರಸಂಕೀರ್ಣಗಳ, ವಿಶ್ವ ವಿದ್ಯಾನಿಲಯಗಳ ಗಾಂಭೀರ್ಯಭರಿತ ಶಬ್ದಗಳ ಹಂಗಿನಿಂದ ಹೊರಬಂದು  ಸಾಮಾನ್ಯರನ್ನು ತಲುಪಲು ಪ್ರಯತ್ನಿಸಬೇಕುಇಲ್ಲ ಜನರ  ಬಾಯಲ್ಲಿ ನಮ್ಮ ಹೆಸರು ಬಂದು ಪ್ರಚಾರ ಸಿಕ್ಕರೆ ಸಾಕು ನಮ್ಮ ಬರಹಗಳನ್ನು ಅವರು ಓದದೇ ಹೋದರೂ ನಡೆಯುತ್ತದೆ ಎಂದವರು ಬಾವಿಸಿದ್ದರೆ ನನ್ನದೇನೂ ತಕರಾರೇನಿಲ್ಲ.  ಅದೇ ನೀವು ಬಲಪಂಥೀಯ ವಿಚಾರಧಾರೆಯ ಪತ್ರಿಕೆಗಳನ್ನು  ಮತ್ತು ಪುಸ್ತಕಗಳತ್ತ ಗಮನಹರಿಸಿನೋಡಿ:   ಜನಸಾಮಾನ್ಯರಿಗೆ ಅರ್ಥವಾಗುವ ಬಾಷೆಯಲ್ಲಿ ತಮಗೇಒಗ್ಗುವ ಲೇಖಕರಿಂದ ಬರೆಸಿ ಅತ್ಯಂತಕಡಿಮೆ ಬೆಲೆಯಲ್ಲಿ ಪತ್ರಿಕೆ ಪುಸ್ತಕಗಳನ್ನು ಅವರು ಹೊರ ತರುತ್ತಿದ್ದಾರೆ. ಐದು ಹತ್ತುರೂಪಾಯಿಗಳಕಿರು ಹೊತ್ತಿಗೆಗಳನ್ನು ಮಾಡಿತಮ್ಮ ವಿಚಾರಧಾರೆಯನ್ನು ಜನರಿಗೆ ಸರಳವಾಗಿ ಅರ್ಥವಾಗುವ ಭಾಷೆಯಲ್ಲಿ ತಲುಪಿಸುತ್ತಿದ್ದಾರೆ ಹೀಗಾಗಿಯೇ ಬಲಪಂಥೀಯ ವಿಚಾರದಾರೆಗಳು ಜನಸಾಮಾನ್ಯರನ್ನು ವೇಗವಾಗಿ ತಲುಪಿ ,ಅವರು ಅದನ್ನೇ ಸತ್ಯವೆಂದು ನಂಬಿಕೊಂಡಿದ್ದಾರೆ.  ಇದರ  ನಡುವೆ ನಾವುಪ್ರಗತಿಪರ ವಿಷಯಗಳನ್ನು ಗಂಬೀರವಾಗಿ ಅವರಿಗೆ ಅರ್ಥವಾಗದ ಬಾಷೆಯಲ್ಲಿ ಹೇಳಿದರೆ ಅವರಿಗೆ ಸತ್ಯ ಸುಳ್ಳಿನ ನಡುವೆ  ವ್ಯತ್ಯಾಸಹೇಗೆ ತಿಳಿಯುತ್ತದೆ. ಹಾಗಾಗಿಯೇ ನಮ್ಮ    ವಿಚಾರಗಳೇನಿದ್ದರೂ ಸೆಮಿನಾರುಗಳಲ್ಲಿ ಕಮ್ಮಟಗಳಲ್ಲಿಯೇ ಕೊಳೆತು ಹೋಗುತ್ತಿವೆ. ಇದರಬಗ್ಗೆ ನಮ್ಮ ವಿಚಾರವಂತರು ಯೋಚಿಸಬೇಕಿದೆ ಕು.ಸ.ಮಧುಸೂದನ ರಂಗೇನಹಳ್ಳಿ

ಜನರನ್ನು ತಲುಪುವ ಮಾರ್ಗ Read Post »

You cannot copy content of this page

Scroll to Top