ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಬದುಕುವ ರೀತಿಗೆ! ಲೋಕೇಶ್ ಮನ್ವಿತ್ ಬದುಕುವ ರೀತಿಗೆ ಬುದ್ದನನ್ನಿರಿಸಿಕೊಂಡರೆ ಬುದ್ದಿಯಲ್ಲಿ ಅಂಗುಲಿಮಾಲ ಹೆಜ್ಜೆ ಇರಿಸುವವನೇನು? ನಿನ್ನ ಹಾದಿಯಲ್ಲಿ. ದಯೆಯಿರಲು ದೀನನಲ್ಲಿ ದಿನವೆಲ್ಲಾ ಸಂತಸವಷ್ಟೇ ಮನಸ್ಸಿಗೆ ಬೇಕಾದರೊಮ್ಮೆ ಅಂಗೈಯನ್ನೊಮ್ಮೆ ತಿರುಗಿಸಿವುದು ರೂಡಿಯಾಗಿಸಿಕೋ ಜಾತಿ ಮತಗಳ ಚೂರಾಗಿಸಿ ಎದೆಯ ಗುಡಿಯಲ್ಲೊಮ್ಮೆ ದೀಪವಿರಿಸು ಬೆಳಕು ಚಿಕ್ಕದಿರಬಹುದು ಜೀವವಿರುವವರೆಗೂ ನೀನು ಕಾಣುವೆ ಪ್ರತಿ ಜೀವಕ್ಕೂ ಬೆಳಕಾಗಿ ಬದುಕುವುದು ಸುಲಭ ಬೇಲಿಗಿಡಗಳು ತಾಕಿದವೆಂದು, ರಕ್ತ ಹರಿಯಿತೆಂದು, ನಿಲ್ಲದೆ ಅಲ್ಲಿ, ನೋವನ್ನೇ ನೆಪವಾಗಿಸಿಕೊಂಡು ಸಾಗಿಬಿಡು ತಡೆದು. ಮುಂದೆ ಹೂಗಳು ಅರಳಿ ನಿಂತಿವೆ ಸ್ವಾಗತವ ಕೋರಿ . ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವಾಸ್ತವ ದೀಪಿಕಾ ಬಾಬು ವಾಸ್ತವ ಜೀವ ಇರುವ ಅವನನ್ನು ನಾನು ಪ್ರೀತಿಸಿದೆ, ಪ್ರೀತಿಯ ಮುಖವಾಡ ಧರಿಸಿದ ನನ್ನ ನಂಬಿಕಯೇ ಮೋಸವಾಯಿತು..! ಚಿಕ್ಕ ಪುಟ್ಟ ಹಕ್ಕಿ  ಪಕ್ಷಿಗಳ ತಂದು ನಾನು ಪ್ರೀತಿಸಿದೆ, ನಿನ್ನ ಸ್ವಾರ್ಥಕ್ಕೆ,ನನ್ನ ಬಂಧಿಸಿದೆಯಾ ಎಂದು ಹಾರಿ ಹೋಯಿತು..! ಬಾಲ್ಯದಲ್ಲೇ ಸಾವಿರಾರು ಕನಸನ್ನು ನಾನು ಪ್ರೀತಿಸಿದೆ, ನನಸಾಗದ ಬದುಕಿನ ನೈಜತೆಯ ಅರಿತು ಬಾಲ್ಯದಲ್ಲಿಯೇ ನುಚ್ಚು ನೂರಾಯಿತು…!! ಗುರು ಹಿರಿಯರನ್ನು, ಹೆತ್ತವರನ್ನು ನಾನು ಪ್ರೀತಿಸಿದೆ, ನೀನು ಹೆಣ್ಣು ಇಷ್ಟೇ ನಿನ್ನ ಬದುಕೆಂದು ಮದುವೆಯ ಬಂಧನದಲ್ಲಿಟ್ಟರು..!! ಗಂಡನನ್ನು, ಮಕ್ಕಳನ್ನು, ಮನೆಯನ್ನು ನಾನು ಪ್ರೀತಿಸಿದೆ, ನಮ್ಮ ಸೇವೆಯೇ ನಿನ್ನ ಕರ್ತವ್ಯ ಎಂದೆಳಿ ಸಂಸಾರದ ಜವಾಬ್ದಾರಿ ಹೊರಿಸಿದರು…!! ನಾನು ಈಗ ಯಾರನ್ನು ಪ್ರೀತಿಸಲಿ, ಆಸಕ್ತಳು ನಾನೀಗ, ಹುಟ್ಟು ಸಾವಿನ ಮಧ್ಯದಲ್ಲಿ ಸಾಗುವ ಈ ಜೀವನವನ್ನು, ನಾನು ಪ್ರೀತಿಸಲೇಬೇಕು…… ಇದೇ ಹೆಣ್ಣಿನ ವಾಸ್ತವದ ಪ್ರತಿರೂಪ….!! ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಾಲ್ಯ ವಿವಾಹ. ಜ್ಯೋತಿ ಡಿ.ಬೊಮ್ಮಾ ಬಾಲ್ಯ ವಿವಾಹ . ಮರುಗಲಾಗದೆ ಮತ್ತೆನು ಮಾಡಲಾಗದು ಮಗು ನಿನ್ನ ವಿಧಿ ಬರಹಕ್ಕೆ ಹೆತ್ತವರ ಆಶಾಢಭೂತಿತನದಿಂದ ಬಾಲ್ಯದ ಬಾಳಿಗೆ ಮದುವೆ ಬಂಧನ ವಿಧಿಸಿದ್ದಕ್ಕೆ… ಮದುವೆ ಮಾಡಿ ಜವಾಬ್ದಾರಿಯಿಂದ ಕಳಚಿಕೊಳ್ಳುವದೊಂದೆ ಅವರ ಪರಮೋದ್ದೇಶ. ಮಗಳ ಚಿಕ್ಕ ವಯಸ್ಸು ಲೆಕ್ಕಿಸದೆ ಧಾರೆ ಎರೆದು ಕೈ ತೊಳೆದುಕೊಳ್ಳುವ ಧಾವಂತ.. ಆಡುತ್ತ ಓದುತ್ತ ನಲಿಯಬೇಕಾದ ಮಗು ಹೊತ್ತುಕೊಂಡಿತು ಸಂಸಾರದ ನೋಗ ಸರೀಕರೆಲ್ಲ ನಕ್ಕು ನಲಿವಾಗ ಆಕೆ ಧರಿಸಿದಳಾಗಲೆ ಗ್ರಹಿಣಿಯ ಗಂಭಿರ ಮೊಗ.. ವಯಸ್ಸಿಗೆ ಮೀರಿದ ಜವಾಬ್ದಾರಿಯಿಂದ ನಲುಗಿತು ಬಾಲಿಕೆಯ ಶರೀರ ಇಷ್ಟರಲ್ಲೆ ಹೋರಬೇಕಾಯಿತು ಬಸಿರ ಭಾರ… ನಿರಾಕರಿಸತೊಡಗಿತು ಚಿಕ್ಕ ಗರ್ಭಾಶಯ ಪೋಷಿಸಲು ಮತ್ತೊಂದು ಜೀವ ಮಗುವಿನೊಳಗೊಂದು ಮಗು ಬೆಳೆಯುವದು ಸಹಿಸದಾಯಿತು ಇಡೀ ದೇಹ.. ಕುಗ್ಗತೊಡಗಿತು ಬಾಲಿಕೆ ತಾಳದೆ ವಯಸ್ಸಿಗೆ ಮೀರಿದ ಭಾರ ಹೊತ್ತು ಹೆತ್ತವರೇ ಈಗೇನು ಮಾಡುವಿರಿ ! ಕಂಡು ಈ ವಿಪತ್ತು.. ಪ್ರಸವ ವೇದನೆ ಸಹಿಸದಾಯಿತು ಚಿಕ್ಕ ಕೋಮಲ ಶರೀರ ದೇಹ ಬಿಟ್ಟು ಹೊರಟಿತು ಜೀವ ಬೇಡವೆಂದು ಈ ಬದುಕ ಭಾರ.. ಬಾಲ್ಯದಲ್ಲಿ ವಿವಾಹ ಮಾಡದಿರಿ ಮಗಳಿಗೆ.. ಗೊತ್ತಿದ್ದು ಪರಿಣಾಮ… ಕೈಯಾರೆ ಕೊಲ್ಲದಿರಿ ನಿಮ್ಮ ಕರುಳಿನ ಕುಡಿಗೆ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಗ್ಗದ ಬಾಗಿಲು ನಿರ್ಮಲ ಆರ್. ವಸಂತಕೆ ಹೊಸ ಚಿಗುರು,ಹೊಸ ಯೌವ್ವನ ನಿಸರ್ಗ ಸೌಂದರ್ಯಕೆ ಮನ ತಾಳಿತು ಮೌನ ನಭದಲಿ ನಗುತಿಹನು ರವಿ ಹಸಿರಿನಿಂದ ಕಂಗೊಳಿಸುತಿಹುದು ಭುವಿ ಅಲ್ಲಲ್ಲಿ ಹಕ್ಕಿಗಳ ಇಂಚರ ಸೃಷ್ಟಿಯೊಂದು ಬನದೇವಿಯ ಭವ್ಯ ಮಂದಿರ ಇರುಳಲಿ ಉಲ್ಲಸಿತನಾದ ಚಂದಿರ ತಾಯ ಕಂಕುಳಲಿರುವ ಕಂದನಿಗವನೇ ಸುಂದರ ಕಪ್ಪು ಮೋಡವ ಹೊತ್ತುತರುವ ಮಳೆರಾಯ ದುಯ್ ಎನ್ನುತ ತೊಳೆವ ಇಳೆಯ ಮೇಲಿನ ಕೊಳೆಯ ಮಳೆಯ ಜಿನುಗಿಗೆ ನವಿಲ ನರ್ತನ ಕಂಡೆಯ ಮನ ಅಚ್ಚರಿಗೊಂಡಿತು ಕಂಡು ಬನಸಿರಿಯ ಪ್ರಕೃತಿ ಸೌಂದರ್ಯ ನೋಡುತಿರೆ ಮೈ, ಮನ ವಿಹರಿಸಲು ಹೊರಟಂತೆ ಬೇರೆಡೆ ಸಗ್ಗವ ಹುಡುಕ ಹೊರಡುವುದೆಂತು ಸಗ್ಗದ ಬಾಗಿಲು ಇಲ್ಲಿಯೇ ತೆರೆದಂತೆ. ***************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಆ ಗುಡಿಗಳಲ್ಲಿ ಜ್ಯೋತಿ ಡಿ.ಬೊಮ್ಮಾ. ಆ ಗುಡಿಗಳಲ್ಲಿ.. ಪರದೆ ಹಾಕಿದ ಗರ್ಭಗುಡಿಯೊಳಗೆ ಅರ್ಚಕರು ದೇವಿಯ ಮೈ ಮುಟ್ಟಿ ಬಟ್ಟೆ ಬದಲಾಯಿಸಿ ,ಬೊಟ್ಟಿಟ್ಟು,ಸಿಂಗರಿಸಿ ಹೊರಗೆ ದರ್ಶನಕ್ಕೆ ನಿಂತ ಸ್ತ್ರೀಯರನ್ನೂ ಮುಟ್ಟಿಸಿಕೊಳ್ಳದೆ ಮೆಲಿಂದಲೆ ಎಸೆದ ಪ್ರಸಾದವನ್ನೂ ಭಕ್ತಿಯಿಂದ ಸ್ವೀಕರಿಸಿ,ಕಣ್ಣಿಗೊತ್ತಿಕೊಂಡು ಪರವಶರಾಗಿ ದೇವಿಯೆಡೆ ನೋಡಿದಾಗ.. ಮೂಕಳಾಗಿ ನಿಂತ ದೇವಿಯೂ ನಿಟ್ಟುಸಿರು ಹಾಕುತಿದ್ದಳು ಒಳಗೊಳಗೆ ಬೇಯುತ್ತ ಕೇಳುವಂತಿತ್ತು ನೋಟ ನಿಮ್ಮೊಳಗಿರದ ಅದಾವ ಶಕ್ತಿ ದೇವಾಲಯದಲ್ಲಿದೆ. ಮುಟ್ಟಾದವರೂ ದೇವರನ್ನೂ ಮುಟ್ಟಬಾರದು ಎಂಬ ಸಂಪ್ರದಾಯದಿಂದ ದೇವಿಯೂ ನಡುಗುವಳು ತನ್ನೊಳಗೂ ಸ್ರವಿಸುವ ಸ್ರಾವ ಕಾಣದಂತೆ ತಡೆಗಟ್ಟುವದು ಹೇಗೆಂದು ತಿಳಿಯದೆ.. ಹೋಗಲಿ ಬಿಡಿ ಮುಟ್ಟಬೇಡವೆಂದಮೇಲೆ ಮುಟ್ಟುವ ಹಠವೇಕೋ ಮುಟ್ಟಿದ ತಕ್ಷಣ ಸಮತೆ ಕನಸು ನನಸಾಗುವದೇ..! ಮುಟ್ಟಿನ ಮಡುವಿನಲ್ಲಿ ಈಜಾಡಿ ಧರೆಗೆ ಬಿದ್ದ ಕ್ಷಣದಿಂದಲೆ ಶ್ರೇಷ್ಠರೆನಿಸಿಕೊಂಡ ಅವರೇ ತುಂಬಿರಲಿ ದೇವಸ್ಥಾನದೋಳಗೆ. ಆ ಗುಡಿಗಳಲ್ಲಿ ಅರ್ಚಕರ ಆಟದ ಬೋಂಬೆಯಾದ ಶಿಲೆಗಳು ಸನ್ನೆ ಮಾಡುತಿವೆ ನಮಗೆ.. ಹೋಗು ಬರದಿದ್ದರೆ ನಷ್ಟವೇನಿಲ್ಲ.. ನಿನ್ನ ದೇಹವೇ ದೇಗುಲವಾಗಿಸಿಕೋ.. ನನ್ನನ್ನು ಅಲ್ಲೆ ಪ್ರತಿಸ್ಟಾಪಿಸು..ಎಂದು. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕೆಂಚಬೆಕ್ಕಿಗೆ ಏನಾಯ್ತು ವಿಜಯಶ್ರೀ ಹಾಲಾಡಿ ಕೆಂಚಬೆಕ್ಕಿಗೆ ಏನಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡಗಡ ಚಳಿಗೆ ಬಿಸಿ ಬಿಸಿ ಬೋಂಡಾ ಪಾಕಂಪಪ್ಪನು ತಿಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಇರುವೆ ಸಾಲನು ಹಾ….ರಿ ನೆಗೆದು ಪುಟ್ಟಿಯ ಮನೆಗೆ ಬಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಮೀನಿನ ಮುಳ್ಳು ದೊಂಡೆಗೆ ಸಿಕ್ಕಿ ಕೆಮ್ಮಿ ಕೆಮ್ಮಿ ಸುಸ್ತಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡವ ಬೆಕ್ಕು ಹೊಯ್ ಕಯ್ ಮಾಡಿ ಕಾಲಿನ ಮೂಳೆ ಮುರಿದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಟ್ರಾಫಿಕ್ ಜಾಮಲಿ ರಸ್ತೆಯ ಕಾದು ಬೋರೂ ಬೋರು ಹೊಡೆದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ನೆತ್ತಿಗೆ ಸಿಟ್ಟು ಸರ್ರನೆ ಏರಿ ಬಾಗಿಲು ಜಡಿದು ಮಲಗಾಯ್ತು.. ********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೆನಪಾಗಿಸು.. ಲೋಕೇಶ್ ಮನ್ವಿತ್ ನೆನಪಾಗಿಸು…. ಮುಲಾಮು ಹಚ್ಚಲಾಗದ ಜಾಗದಲ್ಲಿ ಗಾಯ. ಕಾರಣ ಹೊಸದೇನಲ್ಲ ಅರಚುತ್ತೇನೆ ಚೀರುತ್ತೇನೆ ನರಳುತ್ತೇನೆ ಕಾಣಿಸುವುದಿಲ್ಲ ಜಗದ ಕಣ್ಣುಗಳಿಗೆ ಕೇಳಿಸುವುದಿಲ್ಲ ಜಗದ ಕಿವಿಗಳಿಗೆ ನಗುವಿನ ಮುಖವಾಡ ಬದುಕು ಸಾಗಿದೆ ಕೊನೆಯ ಬಿನ್ನಹವಿಷ್ಟೇ ಗಾಯಕ್ಕಿಷ್ಟು ಮುಲಾಮು ಬೇಡ ನಂಜನ್ನಿಟ್ಟು ನೆನಪಾಗಿಸು ನನ್ನವರ ಹೃದಯದಲ್ಲಿ. **********

ಕಾವ್ಯಯಾನ Read Post »

ಕಾವ್ಯಯಾನ

ಚಲಿಸುವ ಮುಳ್ಳು

ಚಲಿಸುವ ಮುಳ್ಳು ಚಂದ್ರಪ್ರಭ ಬಿ. ಚಲಿಸುವ ಮುಳ್ಳು ಆಗಲೇ ನಿನಗೆ ಐವತ್ತಾತs ! ಅವ ತಮಾಷೆಗಿಳಿದ.. ಹ್ಞೂಂ.. ನಿನಗ ಅರವತ್ತಾಗುವಾಗ ನನಗಿನ್ನೆಷ್ಟಾಗಬೇಕು? ಹೆಚ್ಚುತ್ತಿದ್ದ ಈರುಳ್ಳಿ ಕಣ್ಣ ತೋಯಿಸಿತು ‘ಹೆರಳಿಗೆ ಹೂ ಮುಡದರೆ ನೀ ಅದೆಷ್ಟ ಚಂದ ಕಾಣತೀ ಈಗಲೂ’ ಅವ ಹೇಳಿದ ಹೆರಳೆಲ್ಲಿದೆ.. ಈಗಿರವುದು ಒಂದು ಮೋಟು ಜಡೆ ಅಷ್ಟೇ.. ಒಗ್ಗರಣೆ ಹೊತ್ತಕೊಂಡೀತೆಂದು ಉರಿ ಸಣ್ಣ ಮಾಡುತ್ತ ಹೇಳಿದೆ ‘ಆ ಲೇಖಕರು ಮುನ್ನುಡಿ ಬರೆದು ಕೊಟ್ಟರೇನು ನಿನಗೆ.. ಮತ್ತ ನಿನ್ನ ಪುಸ್ತಕ ಬಿಡುಗಡೆ ಯಾವಾಗ?’ ಮುತುವರ್ಜಿಯಿಂದ ಅವ ಕೇಳಿದ ‘ಇಲ್ಲ ನಾಡಿದ್ದು ಭೇಟಿಯಾಗಿ ವಿಚಾರಿಸುವೆ ನಾಳೆ ದೀಪು ಶಾಲೇಲಿ ಪಾಲಕರ ಸಭೆಗೆ ಹೋಗಲಿಕ್ಕುಂಟು’ ‘ಇಳಿ ಸಂಜೆ ಪೇಟೆಗೆ ಹೋಗಿ ಇದನ್ನೆಲ್ಲ ತರಲಿಕ್ಕಿದೆ ಮನೇಲಿರಿ.. ಬೈಕ್ ಮೇಲೆ ತಾಸಿನಲ್ಲಿ ಹೋಗಿ ಬಂದೇವು’ ನನ್ನ ಮಾತು.. ‘ಹಾಗೇ ಐಸ್ ಕ್ರೀಂ ಪಾರ್ಲರ್ ಗೆ ಹೋಗೋಣ ಆ ಹಸಿರು ಸೀರೇಲಿ ನೀ ಚಂದ ಕಾಣುವಿ ಅದನ್ನೇ ಉಟ್ಟುಕೊ…’ ನಾನಾಗಲೇ ಬೂದು ಬಣ್ಣದ ಚೂಡೀದಾರ ಎತ್ತಿಟ್ಟಿದ್ದೆ! ದಿನಸಿ ಅಂಗಡಿಯಲ್ಲಿ ಸಾಮಾನಿನ ಲಿಸ್ಟ್ ಕೊಟ್ಟು ಪಾರ್ಲರಿಗೆ ಹೋಗಿ ಕುಳಿತೆವು ಹುಡುಗ ಒಂದೇ ಉಸಿರಲ್ಲಿ ಐಸ್ ಕ್ರೀಂ ಲಿಸ್ಟ್ ಒಪ್ಪಿಸಿದ ಆತನ ಮುಗ್ಧತೆ ಕಂಡು ಗಲಗಲನೆ ನಕ್ಕು ಬಿಟ್ಟೆ ‘ಹೀಂಗ ನಕ್ಕರ ನೀ ಚಂದ ಕಾಣಸ್ತೀ ನೋಡು’ ಅವ ಅಕ್ಕರೆಯಿಂದ ನುಡಿದ.. ‘ಈ ಸ್ಟ್ರಾಬೆರಿ.. ಕುಲ್ಫೀ ಐಸ್ ಕ್ರೀಂ ಶಶಿದು ಫೇವರಿಟ್ ಕಡೀ ಪೇಪರ ನಾಳೆ ಮುಗೀತದಲ್ಲ.. ನಾಡದು ಬರಬಹುದು ಊರಿಗೆ..’ ನಾ ಹೇಳಿದೆ.. ಫೋನಿನ ಮೇಲೆ ಫೋನು ಬರುತ್ತಲೇ ಇತ್ತು ಅವಗೆ ‘ಯಾರು ಒಂದೇ ಸಮ ಮಾಡ್ತಿರೂದು.. ಏನಂತ?’ ‘ಏನಿಲ್ಲ, ಕಲಾಭವನದಾಗ ಸಂಗೀತ ಸಂಜೆ ಐತಲ್ಲ ಲಗೂ ಬಾ ಅಂದ ಸೋಮು’ ಸಾಮಾನು ಸಮೇತ ನನ್ನ ಮನೆ ತಲುಪಿಸಿ ಅವ ಮತ್ತೊಂದು ರೌಂಡ್ ಹೊರ ಹೊರಟ ‘ ಅವ್ವ ಈ ಲೆಕ್ಕ ನನಗ ತಿಳೀವಲ್ತು ಸ್ವಲ್ಪ ಬಾ ಇಲ್ಲೆ’ ದೀಪು ದನಿ… ‘ಬಂದೆ ಇರು ಮಗಾ.. ಅಜ್ಜಿಗೆ ಮಾತ್ರೆ ಕೊಡೂದಷ್ಟ ಬಾಕಿ’ ಮಗೂ ಲೆಕ್ಕ ಕೇಳಿದ ತಕ್ಷಣ ನೆನಪಾಯ್ತು ನಾಳಿನ ವರ್ಕಶಾಪ್ ಗೆ ನನಗೆ ಪಿಪಿಟಿ ತಯಾರಿ ಮಾಡಲಿಕ್ಕಿತ್ತು! ಜೊತೆಗೆ ಪ್ರಾತ್ಯಕ್ಷಿಕೆ ಮಾದರಿ.. ‘ಆಫೀಸಿಗೆ ಹೋಗ್ತ ಅಪ್ಪನಿಗೆ ನಿನ್ನ ಬಿಟ್ಟ ಹೋಗಾಕ ಹೇಳವ್ವಾ.. ಇವೆಲ್ಲಾ ಹೊತಕೊಂಡ ಯಾವಾಗ ಹೋಗ್ತಿ ನೀ’ ದೀಪು ಮಾತು ತನ್ನನ್ನು ಮೀರಿಸಿ ನಾ ಓಡುತ್ತಿರುವೆನೆಂದು ಮುನಿಸಿಕೊಂಡಿದೆಯೊ ಎಂಬಂತೆ ನಿಂತು ಬಿಟ್ಟಿದ್ದ ಗಡಿಯಾರಕ್ಕೆ ಸೆಲ್ಲು ಬದಲಾಯಿಸಿದೆ ಮುಳ್ಳು ಚಲಿಸತೊಡಗಿತು… ***********

ಚಲಿಸುವ ಮುಳ್ಳು Read Post »

ಕಾವ್ಯಯಾನ

ಕಣ್ಣ ಕನ್ನಡಿ

ಕಣ್ಣ ಕನ್ನಡಿ ಶಾಂತಾ ಜೆ ಅಳದಂಗಡಿ ಕಣ್ಣಕನ್ನಡಿ ಹಸಿರ ಉಸಿರು ಅದುಮಿ ಹಿಡಿದು ತಂಪು ತಂಗಾಳಿ ಏಕಿಲ್ಲ ವೆಂದರೆ ಏನಹೇಳಲಿ ಉತ್ತರ? ಗೈದತಪ್ಪಿಗೆ ಬದುಕಾಗಿದೆ ತತ್ತರ ಕೊಳಕ ಕೊಳಗವ ಚೆಲ್ಲಬಿಟ್ಟು ಶುದ್ಧಪರಿಮಳ ಇಲ್ಲವೆಂದರೆ ಯಾರು ಕೊಡುವರು ಉತ್ತರ? ಪಡೆಯಬೇಕಿದೆ ಕೆಟ್ಟ ವಾಸನೆ ನಿರಂತರ ಬದಿಗೆಕರೆದು ಕಳ್ಳತನದಲಿ ಲಂಚನೀಡಿ ಕೆಲಸ ಮಾಡಿಸಿ ದುಡ್ಡಿನಾಸೆಯ ತೋರಿ ಕೆಡಿಸಿ ರಾಜಕಾರ್ಯವ ನಿಂದಿಸಿದರೆ ಯಾರು ಕೊಡುವರು ಉತ್ತರ ಸರದಿಸಾಲಿನ ಮಧ್ಯೆತೂರಿ ಬಾಯಬಡಿದು ಬಣ್ಣಗೆಟ್ಟರೆ ಮಾನ್ಯ ನೆಂಬ ಪದವಿ ಸಿಗುವುದೆ? ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೆ ಉತ್ತರ ಕಹಿಯನೀಡಿ ಸಿಹಿಯ ಬಯಸಲು ಸಿಗದು ಎಂದಿಗು ಮಧುರತೆ ಪರರ ಹಿತವನು ಬಯಸೆ ಮನದಲಿ ಖುಶಿಯು ದೊರೆವುದು ಬಾಳಲಿ ಕಣ್ಣಕನ್ನಡಿ ಸಟೆಯನಾಡದು ದಯೆಯ ದರ್ಪಣ ಒಡೆಯಬಾರದು ಒಗ್ಗಟ್ಟಿನಬಲ ಕುಸಿಯಬಾರದು. *********

ಕಣ್ಣ ಕನ್ನಡಿ Read Post »

ಕಾವ್ಯಯಾನ

ಕಾವ್ಯಯಾನ

ತಾಮ್ರದ ಕೊಡ ಸಂಜಯ ಮಹಾಜನ ತಾಮ್ರದ ಕೊಡ ಭಾರವಾದವೋ ತಾಮ್ರದ ಕೊಡ ತಲೆಯ ಮೇಲೆ ಭಾರದಾದವೋ ತಾಮ್ರದಕೊಡ ಕಾಣದಾದವೋ ನುರು ವರುಷ ಹೊಳಪು ತಾಳಿತಾದರೂ ತಲೆಯಮೇಲೆ ಹೊತ್ತು ಭಾರ ತಾಳದಾದವೋ ತಾಮ್ರದಕೊಡ ಕಾಣದಾದವೋ ಆರೋಗ್ಯ ವೃದ್ಧಿಸಿದರೂ ತಾಂಮ್ರದ ಕೊಡ ವೃದ್ಧಿಯಾಗಲಾರವೋ ತಾಮ್ರದಕೊಡ ಕಾಣದಾದವೋ ತೂತುಬಿದ್ದ ಕರಳುಗಳಿಗೆ ಅಮೃತ ಬಿಂದು ನೀಡಿತಾದರೂ ಕೊಡದ ತಳಕೆ ಬಿದ್ದ ತೂತು ತುಂಬದಾದವೋ ತಾಮ್ರದಕೊಡ ಕಾಣದಾದವೋ ಹಳೆಯ ಕೊಡ ಅಟ್ಟದಲಿ ಉಳಿಯಿತಾದರೂ ಹೊಳಪು ಕಳೆದುಕೊಂಡು ಕಪ್ಪಾಗಿ ಮಾತನಾಡದಾದವೋ ತಾಮ್ರದಕೊಡ ಕಾಣದಾದವೋ ತವರಿನಿಂದ ಉಡುಗೊರೆಯಾಗಿ ಬಂದಿತಾದರೂ ತವರ ಸಿರಿಯ ನೆನಪು ಮಾಸದಾದವೋ ತಾಮ್ರದಕೊಡ ಕಾಣದಾದವೋ ಶುಭ ಸಮಾರಂಭದಲ್ಲಿ ಅಲ್ಪ ಬಳಕೆಯಾರೂ ಶುಭಾರಂಭಗಳಲ್ಲಿ ಮೊದಲಾದವೋ ತಾಮ್ರದಕೊಡ ಕಾಣದಾದವೋ ವರುಷಗಳ ಹಿಂದೆ ಮೌಲ್ಯ ಕಡಿಮೆಯಾಗಿದ್ದರೂ ವರುಷ ವರುಷ ಉರುಳಿದರೂ ಮೌಲ್ಯ ಕಳೆದುಕೋಳ್ಳದಾದವೋ ತಾಮ್ರದಕೊಡ ಕಾಣದಾದವೋ ***********

ಕಾವ್ಯಯಾನ Read Post »

You cannot copy content of this page

Scroll to Top