ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಚಂದ ಕಣೆ ನೀನು ಅವ್ಯಕ್ತ ಕಣ್ಣಿನಲ್ಲೇ ಅರ್ಥವಾಗಿಯೂ ಆಗದಂತೆ  ಆಡುವ ಮಾತುಗಳ ಸವಿ ಚೆಂದ.. ತುಟಿಯಂಚಿನಲಿ ಹಿಡಿದಿಟ್ಟಿರುವ ಒಲವಿನ  ರಸಗವಳದ ಕೆನ್ನೀರ ಪರಿ ಚೆಂದ.. ಕೇಳಿಯೂ ಕೇಳದಂತೆ ಆಡುವ  ಹೆಜ್ಜೆ ಗೆಜ್ಜೆಗಳ ನಲಿವು ಚೆಂದ,. ಚಂದ ಕಣೆ ನೀನು ಹೇಗಿದಿಯೋ ಹಾಗೆ ಚಂದ… ಸೊಂಟದ ಬಳುಕಿನಲ್ಲಿ ಲೋಕವನ್ನೇ ಆಡಿಸುತ ತಾನೇ ಆಡುವ ಪರಿ ಚೆಂದ.. ಏರಿಳಿತಗಳ ಲೆಕ್ಕವಿಡದೆ ,ರಸಿಕತೆಯ ಸವಿಯುಣಿಸಿ ನಾನಲ್ಲ ನನ್ನದಲ್ಲ ಎಂಬ ಸುಳ್ಳೇ ಚೆಂದ.. ಪ್ರೀತಿಯ ತುಂತುರು ಮಳೆಯಲಿ ನೀರಾಗಿ  ಸಮುದ್ರದಾಳದ ಮುತ್ತಾಗ ಬಯಕೆಯೇ ಚೆಂದ… ಚಂದ ಕಣೆ ನೀನು ಹೇಗಿದಿಯೋ ಹಾಗೆ ಚಂದ… ಮೋಹದ ಮಿಶ್ರಪಾಕದಲಿ ಶೀತಲದುರಿಯ ಮೋಸ ಬೀಸಿರುವ ಸಾತ್ವಿಕತೆಯೇ ಚೆಂದ.. ಪ್ರೇಮಾಂಕುರಕೆ ಅಂಕುಶ ಹಾಕಿದಂತೆ ಮಾಡಿ ಶಿಲೆಯ ಮಿಡಿತವ ಕದರುವುದೇ ಚೆಂದ.. ಕಾಮಾಂಕುಷಗಳ ಹೂವು ಎಳೆಯಂತೆ ಹಿಡಿದು ಸರಿಸಿ  ಗಾಳಿ ಸೋಕದಂತೆ ತೇಲಿಯ ಹೋಗುವ ಗರಿಯೇ ಚೆಂದ ಚಂದ ಕಣೆ ನೀನು ಹೇಗಿದಿಯೋ ಹಾಗೆ ಚಂದ… ನಿಂದಿಸಲಿ, ಛೇಡಿಸಲಿ, ನಗಲಿ ಯಾರೇನೇ ಹೇಳಲಿ ಇರಲಿ ಬಿಡು, ಅಷ್ಟೇ.. XX ವರ್ಣತಂತು ಇರುವ ಸಾಮಾನ್ಯ ಜೀವಿಯೆಂದರೆ ಇರಲಿ ಬಿಡು, ಅಷ್ಟೇ.. ಕಾಲ್ಗೆಜ್ಜೆ ಕೈಬಳೆ ಬೊಟ್ಟು ಸೀರೆ ಹಳೆಕಾಲ ಎಂದರೆ ಇರಲಿ ಬಿಡು, ಅಷ್ಟೇ.. ಬಿಗಿದ ಬಟ್ಟೆ ಎತ್ತರದ ಸ್ಯಾಂಡಲ್ ದಾರಿತಪ್ಪಿದಳೆಂದರೆ ಇರಲಿ ಬಿಡು, ಅಷ್ಟೇ.. ಮೋಹಗಾರ್ತಿ ಮೋಜುಗಾರ್ತಿ ಜಂಬಗಾರ್ತಿ ಎಂದರೆ ಇರಲಿ ಬಿಡು, ಅಷ್ಟೇ.. ಅಮ್ಮ ಅಕ್ಕ ತಂಗಿ ಮಗಳು ಅಜ್ಜಿ ಗೆಳತಿ ಒಡತಿ ಪ್ರೇಯಸಿ ಮನದರಸಿ ಎಲ್ಲಾ ನೀನೆ….  ನಿನ್ನೊಳಗಿನ ಭಾವ ಅದರ ಮರ್ಮ ಆರಿತವಳು ನೀನೊಬ್ಬಳೇ ಸಖಿ… ಚಂದ ಕಣೆ ನೀನು ಹೇಗಿದಿಯೋ ಹಾಗೆ ಚಂದ… ***********************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆ ರಾಮಸ್ನಾಮಿ ಡಿ.ಎಸ್ ಸಂಗೀತಕಛೇರಿಯತಂಬೂರಿಶೃತಿಹೆಣ್ಣು. ಬಿಗಿತ ಹೆಚ್ಚಾದರೆತುಂಡಾಗುವ ತಂತಿಸಡಿಲಾದರೆ ಹೊಮ್ಮದು ನಾದ ತನ್ನ ಕಂಠಸಿರಿಗೆತಕ್ಕಂತೆ ಶೃತಿಹೊಂದಿಸಿಕೊಳ್ಳುವುದುಗಾಯಕನ ಜವಾಬ್ದಾರಿ. ವೀಣೆ ಸಿತಾರು ಸರೋದುಗಳನ್ನುಬೆರಳಿನಿಂದಲೇ ನುಡಿಸಬಹುದಾದರೂರಕ್ಷಣೆಗೆ ಕವಚ ಇರುವಂತೆಯೇಪಿಟೀಲು ನುಡಿಯುವುದು ಕಮಾನಿಗೆ ಶೃತಿ ತಪ್ಪದೇ ಇದ್ದರೆಕಛೇರಿ ಕಳೆಗಟ್ಟುವುದಕ್ಕೆಇದ್ದೇ ಇವೆ ಪಕ್ಕ ವಾದ್ಯದಸಹಕಾರ, ತನಿ ಆವರ್ತನ. ಸಂಸಾರದ ಕಛೇರಿಯೂಥೇಟು ಸಂಗೀತದ ಹಾಗೇ ಶೃತಿ ತಪ್ಪದ ಹಾಗೆತಾಳ ಮರೆಯದ ಹಾಗೆಪರಸ್ಪರರ ಗೌರವಕ್ಕೆ ಹಾನಿ ಮಾಡದ ಹಾಗೆ ಬದುಕ ಹಾಡು ಹಾಡಬೇಕುಇಹದ ಇರವ ಮರೆಯಬೇಕು. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಶಶಿಕಾಂತೆ ಇಂದು ನಿನ್ನೆಯದಲ್ಲ ನನ್ನ ನಿನ್ನ ಪ್ರೇಮ ಯಾವ ಜನ್ಮದ ಮೈತ್ರಿಯೋ ನಾಕಾಣೆ.. ಇನ್ನೆಂದಿಗೂ ನನ್ನನು ಬಿಟ್ಟು ದೂರ ಹೋಗಬೇಡಾ,ನಮ್ಮ ಪ್ರೀತಿ ಮೇಲಾಣೆ.. ತಿಳಿನೀರ ಕೊಳದಂತಿದ್ದ ಮನಸಲಿ ಒಲವೆಂಬ ಕಲ್ಲೆಸೆದು ಹೋದೆಯಲ್ಲಾ.. ಕೂತರೂ ನಿಂತರೂ ,ಮಲಗಿದರೂ ನಿನ್ನದೇ ಧ್ಯಾನ ,ತಾಳಲಾರೆ ಈ ಭವಣೆ.. ಕುಡಿನೋಟ ನೀ ಬೀರಿದಾಗಿ ನಾಚಿನಾಚಿ ಕೆಂಪುಕೆಂಪು ಸೇಬಾಯ್ತು ನನ್ನ ಕೆನ್ನೆ.. ಯಾರನ್ನೂ ಒಪ್ಪದ ಮನಸು ನಿನಗೊಲಿ ಯಲು ಕಾರಣ ನಿನ್ನ ಸ್ನೇಹ ಸಂಭಾಷಣೆ.. ಕಣ್ಣಿಗೆ ಕಾಣ್ಣದ್ದು ಹೃದಯಕ್ಕೆ ತಿಳಿಯಲು ತಡವಿಲ್ಲ. ನಿನ್ನ ಪ್ರೀತಿ ನನಗರಿವಾಯ್ತು.. ನಿನ್ನ ನೆನಪಲ್ಲಿ ,ಭವಿಷ್ಯದ ನೆಪದಲ್ಲಿ ನನಗಾಯ್ತು ರಾತ್ರಿಯೆಲ್ಲಾ ಜಾಗರಣೆ.. ಹೆದರುವಂತಹುದೇನೂ ಇಲ್ಲ ನಿನ್ನ ಬೆಂಬಲ ಸದಾ ನನ್ನ ಜೊತೆಗಿರುವಾಗ.. ನನ್ನ ಕಂಡರೆ ನಗುವ ಆ ಶಶಿಗೆ ನಾನೇಕೆ ಕೊಡಬೇಕು ನಮ್ಮ ಪ್ರೀತಿಯ ವಿವರಣೆ.. ********

ಕಾವ್ಯಯಾನ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ದ್ವೇಷ.. ಶ್ವೇತಾ. ಎಂ.ಯು. ದ್ವೇಷವಿಲ್ಲ ಸುಡಲು ಬೆಂಕಿ ಮಾತ್ರ ಇದೆ ನಿಮ್ಮ ಊರಿನ ಉಲ್ಕಾಪಾತಗಳ ಉಸಿರುಗಟ್ಟಿಸೋಣವೆಂದರೆ ಪ್ರಾಣವಾಯು ಹೊರತು ಮತ್ತೇನೂ ಉಳಿದಿಲ್ಲ; ಆಸೆಗಣ್ಣುಗಳಲಿ ನೀವು ತುಂಬಿಕೊಂಡರೆ ನನ್ನ ನಗಬೇಕು ಎನಿಸುತ್ತದೆ, ಸುಮ್ಮನಾಗುತ್ತೇನೆ ರಂಜಕ ಹಾಕಿ ಸುಡುವ ಮನಸಾದರು ಕಣ್ಣುಗಳು ನೋಡಿಕೊಳ್ಳಲಿ ಒಮ್ಮೆ ನಿಮ್ಮನ್ನೇ ಎಂಬ ಆಸೆಯಿಂದ.. ಬಾಯಾರಿದರೆ ಕುಡಿಯ ಬೇಕು ನೀರು; ಕೊಳದಲ್ಲಿ ಈಜುವುದು ಕೊಳಕಾದವರು ಮಾತ್ರವೇ ? ಇಲ್ಲದಿರಬಹುದು ನಾಲಗೆಗೆ ಎಲುಬು ಹೃದಯಕ್ಕೆ ದಾರಿಗಳಿವೆ ಸಂಯಮವೇ ಸಂಬಂಧ ಗುಣಗಳೇ ಬೆಳಕು ನಗುವಿಗೆ ಹಲವು ಮುಖ ಬದಲಿ ಇಲ್ಲ ಜೀವಕ್ಕೆ ಕತ್ತರಿಸಿದರೆ ಕರುಳ ಬಳ್ಳಿ ಬಳ್ಳಿಯೊಳಗಣ ಬಳ್ಳಿ ನಿನ್ನ ಹೂ ಬಳ್ಳಿ ನೀನೂ ಹಾಗೆ ನಾನು ಎಲ್ಲರೊಳಗೊಂದು ಜೀವ ಅದಕೆ ಹೆಸರು ಬೇರೆ ಬೇರೆ ಒಂದೇ ಅರ್ಥ ಅದು ಹೆಣ್ಣು ! *******

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ಒಂದು ಹೆಣ್ಣಿನ ಸ್ವಗತ. ಜ್ಯೋತಿ ಡಿ.ಬೊಮ್ಮಾ ನನಗಾರ ಭಯ..! ನಾನು ಜನ್ಮ ಕೊಡುವ ಹೆಣ್ಣು ಮಗುವನ್ನು ಈ ಲೋಕದಿ ತರಲು ನನಗಾರ ಭಯ.. ಇಲ್ಲ.. ಭಯ ಲೋಕದ್ದಲ್ಲ..ನನ್ನಂತರಂಗದ್ದು.. ಮತ್ತೊಂದು ಹೆಣ್ಣನ್ನು ಈ ಲೋಕಕ್ಕೆ ತರುವ ಧೈರ್ಯ ನನಗಿಲ್ಲದಿರುವದು.. ಬೇಡ ಎಂದವರಿಗೆ ನಾನೇಕೆ ವೀರೋಧಿಸಲಿಲ್ಲ..! ನನಗೂ ಎಲ್ಲೊ ಬೇಡವೇ ಆಗಿತ್ತಲ್ಲ.. ಗಂಡು ಮಗುವಿನ ಮೋಹವೇ ಅಧಿಕವಾಗಿತ್ತಲ್ಲ.. ಸ್ತ್ರೀ ಸಬಲಿಕರಣಕ್ಕಾಗಿ ಹೋರಾಡುವ ನನಗೂ ಹೆಣ್ಣು ಮಗು ಬೇಕಾಗಿಲ್ಲ.. ಏಕೆ.. ನಾನನುಭವಿಸಿದ ತವಕ ತಲ್ಲಣಗಳು ಅವಳು ಅನುಭವಿಸುವದು ಬೇಡವೆಂದೇ… ಕೆಟ್ಟ ಕಾಮುಕರಿಗೆ ಬಲಿಯಾದೀತೆಂದು ದಿಗಿಲುಗೊಂಡೇ… ವರದಕ್ಷಿಣೆಗಾಗಿ ಸುಟ್ಟು ಬಿಟ್ಟಾರೆಂದು ಭಯಗೊಂಡೆ… ಅಸಹಾಯಕತೆ ಯನ್ನು ಉಪಯೋಗಿಸಿಕೊಳ್ಳುವರ ದುರುಳುತನಕ್ಕಂಜಿಯೇ… ಸರಿ ಬಿಡು..ಹೆಣ್ಣನ್ನು ಹೇರದಿದ್ದರೇನಾಯಿತು.. ಭ್ರೂಣದಲ್ಲೆ ಹತ್ಯೆ ಮಾಡಿದರಾಯಿತು. ಹೆಣ್ಣು ಗಳಿಲ್ಲದೆ ಬರೀ ಗಂಡಸರೇನು ಮಾಡುವರು..! ಸೃಷ್ಟಿಯನ್ನು ಮುಂದುವರೆಸುವರಾ ಅವರೋಬ್ಬರೆ.. ಹೆದರದಿರು ಮನವೇ.. ಹೆಣ್ಣನ್ನು ಅಷ್ಟೊಂದು ಅಸಹಾಯಕಳೆಂದು ತಿಳಿದಿರು.. ಅಕ್ಕನಂಥ ವಿರಾಗೀನಿಯರು ಹಾಕಿಕೊಟ್ಟ ದಾರಿ ಇದೆ.. ಸೀತೆ ಸಾವಿತ್ರಿಯಂಥವರ ದಿಟ್ಟ ನಿಲುವುಗಳಿವೆ.. ಮಲ್ಲವ್ವ ಓಬವ್ವರ ಸಾಹಸ ಗಾಥೆಗಳಿವೆ.. ಹೆಣ್ಣು ಹೆಣ್ಣೆಂದು ಜರೆಯಬೇಡ.. ಹೆಣ್ಣು ಹೇರಲು ಅಂಜಬೇಡ.. ಹೆಣ್ಣು ‌ಬಾಳಿನ ಕಣ್ಣೆಂಬುದು ಮರೆಯಬೇಡ. ************

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ಅಹಂಕಾರ ಅಣ್ಣೇಶಿ ದೇವನಗರಿ ಹೆಣ್ಣೆಂದು ಜರಿದರು ಹಣ್ಣಂತೆ ಹರಿದು ಮುಕ್ಕಿದರು, ಭುವಿಗೆ ಹೋಲಿಸಿದರು ಒಡಲ ಬಗೆದರು , ಪ್ರಕೃತಿ ಎಂದರು ವಿಕೃತಿ ಮೆರೆದರು , ಭುವಿಗೆ ಹೋಲಿಸಿದ್ದೂ ಪ್ರಕೃತಿಯೆಂದು ವರ್ಣಿಸಿದ್ದು ಮುಂದೊಂದು ದಿನ ತಾನು ಗೈಯ್ಯಲಿರುವ ಕ್ರೌರ್ಯ ಕಾರ್ಯವ ಮೂಕಳಾಗಿ ಸಹಿಸಿಕೊಳ್ಳಲೆಂಬ ದೂ(ಧು)ರಾಲೋಚನೆಯಿದೆಂಬಂತೆ ನಿರಂತರ ಸುಲಿಗೆ ಮಾಡಿದರೂ , ಅವಳದು ಮೌನ ಆಕ್ರಂದನ , ಅರಣ್ಯರೋದನ . ಈ ಅತ್ಯಾಚಾರ ತಡೆಯಲು ಮತ್ತೆ ಅವಳೇ ಎತ್ತಬೇಕಿದೆ ದುರ್ಗೆಯ ಅವತಾರ , ಮುರಿಯ ಬೇಕಿದೆ ಅತ್ಯಾಚಾರಿಗಳ ಅಹಂಕಾರ..! **************************

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ಇಲ್ಲಿ ಕೇಳಿ… ದಾಕ್ಷಾಯಿಣಿ ವಿ ಹುಡೇದ. ಅದಾಗಲೇ ಒಂದು ದೋಣಿಯನೇರಿ ಹರಿವ ನದಿಯ ಮುಕ್ಕಾಲು ದೂರ ದಾಟಿ ದಡ ಮುಟ್ಟಲಿರುವವನನ್ನು ಹಚ್ಚಿಕೊಳ್ಳುವುದೂ ನೆಚ್ಚಿಕೊಳ್ಳುವುದೂ ಸಣ್ಣ ಮಾತೇ? ಇಲ್ಲಿ ಹೇಳುವೆ ಕೇಳಿ ; ಹಾಗೆ ಹೊರಟವನ ಮೊಗ ನೋಡಿ ಮುಗುಳ್ನಗೆ ಬೀರಿ ನನಗೆ ನಾನೇ ಭರವಸೆಯ ಚಿಮಣಿ ದೀಪ ಕಡ ತಂದುಕೊಳ್ಳುವುದು ಸಣ್ಣ ಮಾತೇ? ವಾರದಲ್ಲೆರಡು ಸಲ ಒಮ್ಮೊಮ್ಮೆ ತಿಂಗಳಿಗೊಂದು ಸಲ ಹುಡುಕಿಕೊಂಡು ಬಂದು ಮೊಳ ಮಲ್ಲಿಗೆ ತುಂಡು ಬ್ರೆಡ್ಡು ತಂದು “ನಾ ನಿನ್ನವನೇ” ಎಂದುಲಿವವನ ನಂಬುವುದು ಸಣ್ಣ ಮಾತೇ? ಇಲ್ಲಿ ಹೇಳುವೆ ಕೇಳಿ ; ನೀತಿ ಅನೀತಿಯ ಖಾತೆ ಕಿರ್ದಿಯಲ್ಲಿ ಗುಣಾಕಾರ ಭಾಗಾಕಾರ ಮಾಡಿ ಎದುರಿನವರೆದೆಗೆ ಬಾಣ ಹೂಡುವವರ ಮಾತುಗಳಿಗೆ ಉತ್ತರ ನನ್ನಲ್ಲೂ ಇವೆ. ಆದರೆ.. ಆದರೆ… ಇದ್ದುದನ್ನು ಇದ್ದಂತೆ ಹೇಳಿ ನಿಮ್ಮ ಮನಸು ಮುರಿವ ಇರಾದೆ ನನ್ನೆದೆಯಲ್ಲಿ ಹುಟ್ಟಲಿಲ್ಲ, ಪ್ರೀತಿ ಬಯಸಿ ಬಂದವನ ಎದೆಗೆ ಮಳೆ ಸುರಿಸಿದ ಒಂಟಿ ಹೆಣ್ಣು ನಾನು, ನೀವಾಡಿದ ಮಾತುಗಳು ನನ್ನ ಸೆರಗ ಚುಂಗಿನಲ್ಲಿ ಹಾಕಿಕೊಂಡಿರುವೆ ಗಂಟು, ಬಿಡುವಾದಾಗ ಬಿಚ್ಚಿ ನೋಡಿ ನಿಮಗೂ ಅಲ್ಲಿ ಪ್ರೀತಿ ಉಂಟು. ಒಡೆದ ಮನೆಯ ಬಿದ್ದ ಗೋಡೆಯ ಮುಗಿದ ಯುದ್ಧದ ಸೂತಕ ಏನೆಂದು ಬಲ್ಲವಳು ನಾನು, ನನ್ನೊಲವ ಪ್ರಶ್ನಿಸುವ ಮೊದಲೊಮ್ಮೆ ನಿಮ್ಮನ್ನು ನೀವು ಓದಿ, ಉತ್ತರ ಸಿಕ್ಕ ದಿನ ಪಂಚಾಯ್ತಿಗೆ ಚಂದ್ರನನ್ನು ಕರೆಯೋಣ. **********

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ನಿಜರೂಪದ ಶಕ್ತಿಯರು ಪಾರ್ವತಿ ಸಪ್ನ ಬೀದಿ ಬೀದಿಗಳಲ್ಲಿ ಪಾಳು ಬಿದ್ದ ಮನೆಮಠಗಳಲ್ಲಿ…. ಹಾದಿ ಬದಿಯ ಪೊದೆಗಳಲ್ಲಿ ಬಂಜರು ನೆಲದ ಬಿರುಕುಗಳಲ್ಲಿ ಹಸಿರುಮರದ ನೆರಳುಗಳಲ್ಲಿ ಶಾಲೆಯ ಪವಿತ್ರ ಕೊಠಡಿಗಳಲ್ಲಿ ಕೇಕೆಗಳ ಸದ್ದು ಮುಗಿಲು ಮುಟ್ಟುವ ಉದ್ಯಾನವನಗಳಲ್ಲಿ ಕಗ್ಗತ್ತಲ ಭೀಕರ ರಾತ್ರಿಗಳಲ್ಲಿ ತಂಪೆರೆದ ಮುಸ್ಸಂಜೆಯ ಇರುಳಲ್ಲಿ ನೇಸರನ ಎದುರಲ್ಲಿ….. ಬೆಳದಿಂಗಳ ಬೆಳಕಲ್ಲಿ…. ಇಂದಿಗೂ ಹುಟ್ಟುತ್ತಿಹರು…. ಅದೆಷ್ಟೋ ನರರಾಕ್ಷಸರು…. ರಾವಣ, ದುರ್ಯೋಧನ, ದುಶ್ಯಾಸನರ ವಂಶಾವಳಿಗಳು ನೂರ ಎಂಟು ತಲೆಗಳಲ್ಲಿ…. ಹುಟ್ಟಿಗೂ ಹೆಸರಿಲ್ಲದೇ…. ಸಾವಿಗೂ ಬಿಡುವಿಲ್ಲದೇ…. ಕರುಳಬಳ್ಳಿಯ ಹೂವ ಅರಳುವ ಮುನ್ನ ಹಿಚುಕುವ ಕ್ರೂರ ಮನದ ಪಾತಕಿಗಳು ಹುಟ್ಟುತ್ತಲೇ….ಇದೆ… ರಾಕ್ಷಸ ಸಂತತಿಗಳು…. ಹುಟ್ಟುತ್ತಲೇ…..ಇದೆ ವಿಷಜಂತುಗಳು…… ಎಂದಾದರೂ ಹುಟ್ಟುವರೇ..? ರಾಕ್ಷಸನ ಮುಂಡವ ಚೆಂಡಾಡುವ ದುರ್ಗೆಯರು?? ವಿಷ ಜಂತುಗಳ ಎದೆ ಬಗೆಯುವ…ಕಾಳಿಯರು?? ಇನ್ನಾದರೂ ಹುಟ್ಟಲೀ ನಿಜರೂಪದ ಶಕ್ತಿಯರು…!! ********

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ಪ್ರಭಾವಿತ ಮಹಿಳೆ ಸಿಂಧು ಭಾರ್ಗವ್ ಕಷ್ಟಗಳ ಎದುರಿಸುತ ನಿಷ್ಠೆಯಲಿ ಜೀವನವ ಕಳೆಯುವ ಹೆತ್ತವ್ವ ನನಗೆ ಪ್ರಭಾವ ಬೀರಿದಳು ಹಿಡಿದ ಗುರಿಯ ಸಾಧಿಸಲು ಹಟದಿಂದ ಸಾಧನೆ ಮಾಡಿದ ಹಿರಿಯಕ್ಕ ನನಗೆ ಪ್ರಭಾವ ಬೀರಿದಳು ಗುರುಗಳ ಮಾರ್ಗದರ್ಶನದಲ್ಲಿ ವಿನಯದಿಂದ ವಿದ್ಯೆ ಕಲಿತು ಹಿರಿಯರ ಮೆಚ್ಚುಗೆ ಪಡೆದ ತಂಗಿ ನನಗೆ ಪ್ರಭಾವ ಬೀರಿದಳು ಇನ್ಫೋಸಿಸ್ ಸಂಸ್ಥೆಯ ಹುಟ್ಟುಹಾಕಿ ಸರಳ ಸಜ್ಜನಿಕೆಯಿಂದ ಸಂಸ್ಕೃತಿ, ಸೇವೆಯಲೇ ಬಾಳುವ ಸುಧಾ ಅಮ್ಮ ನನಗೆ ಪ್ರಭಾವ ಬೀರಿದರು ಹೆಣ್ಣು ಜಗಕೆ ಕಣ್ಣಾಗುವಳು ಒಳ ಕಂಗಳಿಂದ ನೋಡಿರಣ್ಣ ಅಹಂ ಇರುವ ಹೆಣ್ಣು ಎಂದಿಗೂ ಬೆಳಕಾಗಳಣ್ಣ, ಬಾಳು ಹೈರಾಣಾಗಿಸಲು ಹೆಣ್ಣೇ ಕಾರಣ ಬದುಕು ಬೆಳಗಿಸಲು ಅವಳೇ ಭೂಷಣ ತ್ಯಾಗ ಸಹನೆ ಹೊಳೆಯೋ ಎರಡು ಮುತ್ತುಗಳು ಅವಳ ಮನದ ಮುಕುಟದಲ್ಲಿ ಅರಳಿ ನಿಲ್ಲುತಿರುವುವು ಹೆಣ್ಣು ಮಗುವ ಹೊನ್ನಿನಂತೆ ಜೋಪಾನ ಮಾಡಿರಿ ತನ್ನತನವ ಮೆರೆದು ಬದುಕೋ ಅವಳಿಗೆ ಕೈಯ ಮುಗಿಯಿರಿ!! *****

ಮಹಿಳಾದಿನದ ವಿಶೇಷ Read Post »

ಕಾವ್ಯಯಾನ

ಮಹಿಳಾದಿನದ ವಿಶೇಷ

ನಾನೆಂದೂ ಓಡುವುದಿಲ್ಲ. ಚೈತ್ರ ಶಿವಯೋಗಿಮಠ ಒಂದ್ಹತ್ತು ಚಪಾತಿಯನು ತೀಡಿ ಕಾದ ಎಣ್ಣೆಯಲಿ ಸಾಸಿವೆ ಜೀರಿಗೆ ಚಟ ಪಟ ಎನಿಸಿ ಕರಿಬೇವು ಚೊರ್ ಎನಿಸಿ ಒಂದು ಪಲ್ಯ ಮಾಡಿ, ದೌಡಾಯಿಸಬೇಕಿದೆ ನನ್ನ ಕನಸುಗಳ ಬೆಂಬತ್ತಲು! ನಿಮ್ಮ ಉದರಕಾಗಿಯೇ ಮಾಡುವೀ ಮಹತ್ಕಾರ್ಯದಲಿ ಕೊಂಚ ಕೈ ಜೋಡಿಸಿ ತಪ್ಪೇನಿಲ್ಲ! ವಯಸ್ಸು ದೇಹಕ್ಕೆ ಹೊರತು ಮನಸ್ಸಿಗಲ್ಲ! ಒಂದೆರಡು ಸವಿಮಾತು ಒಂದು ಮುಗುಳುನಗೆ ಇವಿಷ್ಟೇ! ಬೀಳ್ಕೊಡಿ ನನ್ನನ್ನೂ ಒಂದು ದೊಡ್ಡ ದಿನ ನನ್ನ ಮುಂದಿದೆ! ಆಗೊಮ್ಮೆ ಈಗೊಮ್ಮೆ ಜೀನ್ಸ್ ಧರಿಸುವೆ! ತುಸು ತುಟಿಗೆ ಬಣ್ಣ ಹಚ್ಚಿ ಮುಂಗುರುಳ ತೀಡುವೆ ಅದಕ್ಕೂ ಗೊಣಗಬೇಡಿ “ಮಾರ್ಡರ್ನ್ ಮಾರಿ”ಎಂದು ಯಾಕೆಂದರೆ ನನಗೆ ಸೀರೆಯೇ ಇನ್ನೂ ಅಚ್ಚು ಮೆಚ್ಚು ನನಗೆ ಮಕ್ಕಳ ನೋಡಿಕೊಳ್ಳಲು ಕಿಂಚಿತ್ ಬೇಸರವಿಲ್ಲ! ಒಮ್ಮೊಮ್ಮೆ ನನಗಾಗಿ ಒಂದು ತಾಸು, ಒಂದೇ ಒಂದು ತಾಸು ಸಂಭಾಳಿಸಿ ಅವುಗಳನ್ನ ನನ್ನ ನೆಚ್ಚಿನ ಪುಸ್ತಕ ಹಿಡಿದು ಕಾಫೀ ಹೀರುವೆ! ಆಗೊಮ್ಮೆ ಈಗೊಮ್ಮೆ ಗೋಷ್ಠಿಗಳಿಗೆ ಹೋಗುವೆ, ಹೊಸ ವಿಚಾರಧಾರೆ ನನಗೂ ಹಿಡಿಸುವುದು. ಅನಾಯಾಸ ಮಹಿಳಾವಾದಿ, ಆ ವಾದಿ ಈ ವಾದಿಯೆಂದು ಮೂಲವ್ಯಾಧಿ ತರಿಸಿಕೊಳ್ಳಬೇಡಿ! ನನ್ನ ಬೇರುಗಳು ಗಟ್ಟಿಯಾಗೇ ಇವೆ! ಎಲ್ಲವನೂ ಸಂಭಾಳಿಸುವ ಶಕ್ತಿಯಿರುವ ನನ್ನ ಒಂದೇ ಕಡೆ ಸೀಮಿತಗೊಳಿಸಿ ಅಲ್ಲಿಗೆ ಅಂಟಿಸಲು ಪ್ರಯತ್ನಿಸದಿರಿ!! ಹಾಗಂತ ನನ್ನ ಜವಾಬ್ದಾರಿಗಳಿಂದ ನಾನೆಂದೂ ಓಡುವುದಿಲ್ಲ!! *********

ಮಹಿಳಾದಿನದ ವಿಶೇಷ Read Post »

You cannot copy content of this page

Scroll to Top