ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಮಕ್ಕಳಪದ್ಯ ಅಪ್ಪನೇ ಪ್ರೀತಿ ನಾಗರೇಖಾ ಗಾಂವಕರ ಅಪ್ಪನದೇಕೆ ಕಂಚಿನಕಂಠ ನಿನ್ನಂತಿಲ್ಲಲ್ಲಾ ಕಣ್ಣುಗಳಂತೂ ಕೆಂಡದ ಉಂಡೆ ನೋಡಲು ಆಗೊಲ್ಲ ಅಮ್ಮ ಪುಕ್ಕಲು ನಾನಲ್ಲ. ಆದರೂಅಮ್ಮ ಅಪ್ಪನೇ ಪ್ರೀತಿ ಎದೆಯೊಳಗೊಂದು ಮೀಟುವ ತಂತಿ ಕಾರಣ ಹೇಳಮ್ಮ ಕೈಗಳ ಹಿಡಿದು ವಠಾರ ನಡೆದು ನಡೆಯಲು ಕಲಿಸಿದನು ದಾರಿಯ ಮಧ್ಯೆ ಸಿಕ್ಕವರಲ್ಲಿ’ ಮಗಳೆಂದು ಹೊಗಳಿದನು ಬೈಕಲಿ ಕೂರಿಸಿ, ಮರಗಿಡ ತೋರಿಸಿ, ಮನವನು ತಣಿಸುವನು ಅಪ್ಪನು ನಿನಗಿಂತ ಪ್ರಿಯನವನು. ಆಗೀಗೊಮ್ಮೆ ಉಪ್ಪಿನಮೂಟೆ ಮಾಡುತ ಮುದ್ದಿಸುವ ಮರುಕ್ಷಣ ನನ್ನ ಹಠವನು ಕಂಡು ಕೋಲನು ತೋರಿಸುವ ಅಮ್ಮಾ, ಕೋಲನು ತೋರಿಸುವ ಆದರೂ ಅಮ್ಮ ಅಪ್ಪನೇ ಪ್ರೀತಿ ಅಂಗಡಿಯೊಳಗಣ ಜೀಲೇಬಿ ರೀತಿ ಸಿಹಿಸಿಹಿ ಮನದವನು ಸೊಗಸಿನ ಮೊಗದವನು ಕೇಳೆ ಅಮ್ಮ, ಮುದ್ದಿನ ಅಮ್ಮ ಅಪ್ಪನ ಕೂಡ ನೀನಿರಬೇಕು ನಿಮ್ಮಿಬ್ಬರ ನಡುವೆ ನಾನೀರಬೇಕು ನಿನ್ನ ದಮ್ಮಯ್ಯ. ನನ್ನ ಮುದ್ದು ಅಮ್ಮಯ್ಯ. ****************

ಕಾವ್ಯಯಾನ Read Post »

ಕಾವ್ಯಯಾನ

ಗಝಲ್

ಗಝಲ್ ಸ್ಮಿತಾ ರಾಘವೇಂದ್ರ ನಟನೆಯೋ ನಿಜವೋ ನಂಟನ್ನು ಹುಸಿಯಾಗಿಸಬೇಡ ಬಳ್ಳಿಯ ಬೇರು ಚಿವುಟಿ ಚಿಗುರೆಲೆ ಹುಡುಕಬೇಡ ತುಪ್ಪದಂಥ ಒಲವಲ್ಲಿ ಉಪ್ಪು ಬೆರೆಸುವುದು ಸುಲಭ ಒಪ್ಪು ತಪ್ಪುಗಳ ಬರಿದೆ ಕೆದಕೆದಕಿ ಕೆಡಿಸಬೇಡ ಹೊಟ್ಟೆಯೊಳಗಿನ ಕಿಚ್ಚು ಉರಿದು ಸುಟ್ಟಿದೆ ಸೆರಗನ್ನು ಸಿಹಿ ಕೊಡುವ ನೆಪದಿ ಸವಿಯ ಸೂರೆ ಮಾಡಬೇಡ ಹಸಿರೆಲೆಯಾಗೇ ಬಹುದಿನ ಇರಲಾಗದು ನಿಜ ಹಣ್ಣಾಗುವ ಮೊದಲೇ ಹಿಸಿದು ಉದುರಿಸಬೇಡ ಹುತ್ತವ ಬಡಿಬಡಿದು ಹಾವು ಸಾಯಿಸುವ ಭ್ರಮೆಬೇಡ ಯಾವ ಹುತ್ತದಲಿ ಯಾವ ಹಾವೋ ಕೈಹಾಕಬೇಡ ಎಷ್ಟು ಅರಿತರೇನು ಸೋಗಿನ ಸ್ನೇಹಗಳ “ಸ್ಮಿತ”ವೇ ಪರಿವೆಯೇ ಇಲ್ಲದೇ ಕೈ ಕೊಡವಿ ನಡೆದಾಗ ಕೊರಗಬೇಡ *******************************************

ಗಝಲ್ Read Post »

ಕಾವ್ಯಯಾನ

ಕಾವ್ಯಯಾನ

ಮಣ್ಣಾಗುವ ಮುನ್ನ ಮರವಾಗುವೆ ಪ್ಯಾರಿಸುತ ನನ್ನೆಲ್ಲ ಪ್ರೀತಿ ಮಣ್ಣಾಗುವ ಮುನ್ನ ನೀ ಬಂದು ಬೀಜವ ನಡು ಇಂದಲ್ಲ, ನಾಳೆ ಎಂದಾದರೊಮ್ಮೆ ಮೊಳೆಕೆ ಬಿಡುವದು ನೋಡು ಹಸಿರಾಗಿ ಚಿಗುರಲಿ,ಮರವಾಗಿ ಬೆಳೆಯಲಿ ನಾ ಆರೈಕೆ ಮಾಡುವೆ ಬಿಡು ಹಿಂತಿರುಗಿ ನೋಡದೆ, ಮರು ಏನು ಹೇಳದೆ ಹೊಸದಾರಿ ಹಿಡಿದುಬಿಡು ಹೀಗೊಮ್ಮೆ ಬೈದುಬಿಡು, ನೆನಪಲ್ಲೆ ಕೊಂದುಬಿಡು ದೇಹಕ್ಕೆ ಉಸಿರೆ ಆಸರೆಯಂತೆ ಉಸಿರಂತೆ ಇದ್ದವಳು ನೀ ಹೋದ ಮೇಲೆ ಈ ದೇಹವೀಗ ಶವದಂತೆ ನೋಡು ನೀ ಬಂದು ಸುಟ್ಟರು ಇಲ್ಲವೇ, ಮಣ್ಣಲ್ಲಿ ಹೂತರು, ಅಲ್ಲಿ ಒಂದು ಬೀಜವ ನಡು ಮೊಳಕೆ ಬಿಡುವದು, ಮರವಾಗಿ ನಿಲ್ಲುವದು ನೋಡು…!! ತಾರೆಗಳೆಲ್ಲ ಮರುಗುವದು ನೋಡಲಾರೆ ಆಕಾಶ ಕೈಬೀಸಿ ಕರೆದರೂ ಹೋಗಲಾರೆ ಕಳೆಗುಂದ ಚಂದ್ರನ ಮುಖವನು ನೋಡಲಾರೆ ನೀ ನನ್ನ ಕ್ಷೇಮಿಸಿಬಿಡು, ಮರವಾಗಿ ಉಳಿಯಲು ಅವಕಾಶ ನೀಡಿಬಿಡು ನನ್ನ ಶವದ ಜೊತೆ ಬೀಜವ ಎಸಿದುಬಿಡು ಮರವಾಗಿ ನಿಲ್ಲುವದು ನೋಡು….!! ನೆರಳರಿಸಿ ಬರುವ , ಪ್ರೇಮಿಗಳಿಗೆ ತೊಟ್ಟಿಲು ಆಗುವೆ ಕಥೆಗಳನ್ನು ಕೇಳುವೆ ಹಾಡನ್ನು ಹೇಳುವೆ ಅವರಾದರು ಮನಬಿಚ್ಚಿ ಪ್ರೀತಿಸಲಿ, ಅಲ್ಲಿಯಾದರು ಪ್ರೀತಿಯು ಉಳಿಯಲಿ ನೀ ಬಂದು ಬೀಜವ ಎಸೆದು ಬಿಡು ಮರವಾಗಿಯೇ ಉಳಿಯುವೆ ನೋಡು….!! ****** ತಾರೆಗಳೆಲ್ಲ ಮರುಗುವದು ನೋಡಲಾರೆ ಆಕಾಶ ಕೈಬೀಸಿ ಕರೆದರೂ ಹೋಗಲಾರೆ ಕಳೆಗುಂದ ಚಂದ್ರನ ಮುಖವನು ನೋಡಲಾರೆ ನೀ ನನ್ನ ಕ್ಷೇಮಿಸಿಬಿಡು, ಮರವಾಗಿ ಉಳಿಯಲು ಅವಕಾಶ ನೀಡಿಬಿಡು ನನ್ನ ಶವದ ಜೊತೆ ಬೀಜವ ಎಸಿದುಬಿಡು ಮರವಾಗಿ ನಿಲ್ಲುವದು ನೋಡು….!! ನೆರಳರಿಸಿ ಬರುವ , ಪ್ರೇಮಿಗಳಿಗೆ ತೊಟ್ಟಿಲು ಆಗುವೆ ಕಥೆಗಳನ್ನು ಕೇಳುವೆ ಹಾಡನ್ನು ಹೇಳುವೆ ಅವರಾದರು ಮನಬಿಚ್ಚಿ ಪ್ರೀತಿಸಲಿ, ಅಲ್ಲಿಯಾದರು ಪ್ರೀತಿಯು ಉಳಿಯಲಿ ನೀ ಬಂದು ಬೀಜವ ಎಸೆದು ಬಿಡು ಮರವಾಗಿಯೇ ಉಳಿಯುವೆ ನೋಡು….!!

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹರೆಯದ ಹಬ್ಬ ಗೌರಿ.ಚಂದ್ರಕೇಸರಿ. ಹಣ್ಣೆಲೆಗಳೆಲ್ಲ ಉದುರಿ ಹೊಸತೊಂದು ಚಿಗುರಿಗೆ ಹಾದಿ ಮಾಡಿಕೊಟ್ಟಿವೆ ಎಳೆಯ ಹಸಿರ ಹೊದ್ದು ತೂಗಿ ತೊನೆದಾಡುವ ಪ್ರಕೃತಿಗೆ ಮತ್ತೊಂದು ಹುಟ್ಟಿನ ಸಡಗರ, ಸಂಭ್ರಮ. ದುಂಬಿ, ಚಿಟ್ಟೆಗಳ ಝೇಂಕಾರ ಬಾನಾಡಿಗಳ ಚಿಲಿಪಿಲಿ ವಾಲಗ ಸಮಷ್ಠಿಗೆಲ್ಲ ಬಿಡುವಿಲ್ಲದ ಕಾಯಕ ಮೊದಲ ಬಾರಿ ಅರಳಿ ನಿಂತ ಕುವರಿಯಂತೆ ವಧು ಧರಿಸಿದ ನಾಚಿಕೆಯಂತೆ ಇಳೆಗೆಲ್ಲ ಹರೆಯದ ಹಬ್ಬ. ಸಿಂಗಾರಗೊಂಡ ಪ್ರಕೃತಿಗೆ ಭುವಿಯೆಲ್ಲ ಹಸಿರ ತಳಿರ ತೋರಣ ಅರಳಿ ನಿಂತ ಸುಮಗಳ ಅಕ್ಷತೆ ರಂಗೇರಿದ ಕೆನ್ನೆ ತುಂಬ ಸರ‍್ಯನೆರಚಿದ ಚೈತ್ರದೋಕುಳಿ.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಇಂತಿಷ್ಟೇ ಮನವಿ. ಮಧುಸೂದನ ಮದ್ದೂರು ಕನಸಲು ನೀ ಕಾಡುವೆ ಇಪ್ಪತ್ತು ವರುಷದ ಬಳಿಕ ಬಂದ ಓಲೆಯಂತೆ… ಓಲೆಯನ್ಬು ಬಿಚ್ಚಲು ಒಲೆಯಲ್ಲಿ ಕಾದು ಕಾದಬೆಚ್ಚಗಿನ ನೆನಪುಗಳು ನೆನಪುಗಳ ಬೆನ್ನಟ್ಟಲು ಮಾಯಜಿಂಕೆ ಬೆನ್ನಟ್ಟಿದಂತೆ.. ಬೆನ್ನಟ್ಟುತ್ತ ಬೆವರುತಾ ಬೇಸರಿಸಿ ಕೂರಲು ಸೋತನೆಂಬ ಅಪಮಾನದ ಕುದಿ… ಕುದಿ ಹೃದಯವಿದು ಕಾಯಿಸದೇ ಬಂದು ಬಿಡು ನನ್ನದೆಗೆ ನಿನ್ನುಡುಗ ಗಿಡುಗ ಇನ್ನೂ ಕಾಯಲಾರ… ಕಾದು ಸಂಭ್ರಮಿಸಲು ವಯಸ್ಸು ಮೀರಿದೆ ಬೆಳ್ಳಿಗೂದಲು ಇಣುಕಿವೆ.. ಇಣುಕಿದ ಬೆಳ್ಳಿಗೂದಲಿನಲ್ಲೂ ನಿನ್ನ ಬಂಗಾರದ ನೆನಪು ಒಸರಿವೆ.. ಬಂದು ಬಿಡು ಈ ಪ್ರೇಮ ಫಕೀರನ ಎದೆಯೊಮ್ಮೊಮ್ಮೆ ಹೊಕ್ಕಿಬಿಡು ಹಳೆಯ ನೆನಪುಗಳ ತೂರಿಬಿಡು.. ಇಂತಿಷ್ಟೆ ಮನವಿ….. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಮಾಜ ಕೆ.ಸುಜಾತಾ ಗುಪ್ತ ಬಗ್ಗಿದವನ ಬೆನ್ನಿಗೊಂದು ಗುದ್ದು ಇರಲು ಹಾಗೆ ಮತ್ತೊಂದು ಗುದ್ದು ಇದಾಗಿದೆ ಪ್ರಸ್ತುತ ಸಮಾಜದ ನೀತಿ ಮೂರ್ಖತನದ ಪರಮಾವಧಿ ದಾಟಿರಲು ಶಾಂತಿಯ ತತ್ವವ- ಮಹತ್ವವ ಅರಿವ ಮನಗಳುಹೆಣಗಳಾಗಿವೆ. ಈಗೆಲ್ಲಿದೆ..ಶಾಂತಿ ಗೆ ತಾಣ!? ಎಲ್ಲಿದೆ ಶಾಂತಿಗೆ ಪ್ರಾಮುಖ್ಯತೆ.. ಬುದ್ಧನನ್ನು ನೆನೆಯೆ ಪೆದ್ದನೆನುವರು.. ‘ ಶಾಂತಿ ‘ ಅಸಹಾತೆಯಕತೆಯ ಚಿಹ್ನೆ ಎನುವರು.. ಕಲ್ಪನೆಯಲ್ಲಿ ‘ಶಾಂತಿ ಮಂತ್ರ’ ಚಂದವೋ ಚಂದ.. ವಾಸ್ತವದಲ್ಲಿ ಎಲ್ಲವೂ ಮಿಥ್ಯವೋ ಮಿಥ್ಯ… ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೊಗ್ಗುಗಳು ತುಟಿ ಬಿಚ್ಚೆ ಕೆ.ಸುಜಾತ ಗುಪ್ತ ನಾ ಪ್ರಕೃತಿ ಪ್ರೇಮಿಯಾಗಿ ಸೂಕ್ಷ್ಮವಾಗಿ ಗಮನಿಸೆ ಪ್ರಕೃತಿಯ ಸೊಬಗು ನೂರ್ಮಡಿ ಹೆಚ್ಚಿತ್ತು… ಭಾವುಕತೆಯಲಿ ಪ್ರಕೃತಿಯ ಮಡಿಲಲ್ಲಿ ಕುಳಿತು ನನ್ನ ನಾ ಮರೆತು ಲಲ್ಲಗೆರೆಯಲು ಹರುಷದಿ ಸ್ಪಂದಿಸಿ ನಸು ನಕ್ಕಿತ್ತು ಪ್ರಕೃತಿ.. ಬಿರಿದು ಪರಿಮಳವ ಸೂಸಲು ರವಿ ಕಿರಣದ ಸ್ಪರ್ಶದ ನಿರೀಕ್ಷೆಯಲ್ಲಿರಲು ಮೊಗ್ಗುಗಳು, ಮಂಜಿನ ಮುಂಜಾನೆಯಲಿ ಭೂದರನ ಮರೆಯಲಿ ರಾಜೀವ ಸಖ ಇಣುಕೆ, ಸಜ್ಜಾಗಿ ನಿಂತು ವಯ್ಯಾರದೆ ಅವನೆಡೆಗೆ ಓರೆನೋಟ ಬೀರಿದ ಮೊಗ್ಗುಗಳು ನಸು ನಾಚಿ ತುಟಿ ಬಿಚ್ಚಿ ಲಯಬದ್ದವಾಗಿ …ಹಾಯ್ …ಎಂದಾಗ, ಹರುಷದೆ ರವಿ ಅಪ್ಪಿ ಮುತ್ತಿಡಲು ರವಿ ಕರಗಳ ಆಲಿಂಗನದಿ ಬಿರಿಯುತ್ತಿದ್ದ ಮೊಗ್ಗುಗಳು ಪ್ರೇಮ ಕಾವ್ಯಕೆ ಮುನ್ನುಡಿಯ ಬರೆಯುವಂತೆ ಭಾಸವಾಯ್ತು.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಾಡು ನೀ ಪ್ರಯತ್ನ ಪ್ಯಾರಿಸುತ ಯತ್ನ,ಯತ್ನ ಮಾಡು,ಮಾಡು ನಿನ್ನ ಪ್ರಯತ್ನ ಆಗಲೇ ನನಸಾಗಿಸುವುದು ಆ ನಿನ್ನ ಸಪ್ನ ರಾತ್ರಿ ಕಂಡ ಕನಸುಗಳೆಲ್ಲ ಕನಸುಗಳೇ ಅಲ್ಲ ಮಲಗಲಾವುದು ಬಿಡೋದಿಲ್ಲವಲ್ಲ ಅದುವೇ ನಿನ್ನ ಸಪ್ನ, ಮಾಡು ನೀ ಪ್ರಯತ್ನ ಒಳ್ಳೆ ಬದುಕು ಕಾಣಲು ವಿದ್ಯೆಯೊಂದು ಸಾಲದು ಒಂದೇ ಗುರಿಯ ನಿಗದಿಸಿ ಯತ್ನ ಮಾಡು ಸಿಗುವುದು ಕಾಲ ತುಂಬಾ ಓಡುವದು ನೀನು ಯಾಕೆ ನಿಲ್ಲುವದು ಗುರಿಯ ಕಡೆ ಓಡುತಿರೇ ಸಾಧನಾಶಿಖರವೇ ನಿನ್ನದು ಬಡವ ಬಲ್ಲವ ಎಲ್ಲ ಒಂದೇ ಗುರಿಯನ್ನು ಸಾಧಿಸಲು ಕುಂಟು ನೆಪವು ಹೇಳಿದರೆ ಆಗದು ಉಚ್ಛವಾಗಿ ಬದುಕಲು ಪಡೆದು ಬಂದ ಜನುಮ ಗುರುತಾಗಿಯೇ ಉಳಿಸಲು ಹಗಲಿರುಳು ಯತ್ನಿಸು ಜಯದ ಡಮರುಗ ಬಡಿಯಲು ಗೆದ್ದು ಬಂದ ಸಾಧಕರೆಲ್ಲ ಅದೃಷ್ಟ ಮಾಡಿ ಗೆದ್ದವರಲ್ಲ ಇಟ್ಟ ಗುರಿಯನು ಆಗದೆಂದು ಬಿಟ್ಟವರಲ್ಲ ಸುಲಭವಾಗಿ ಗೆದ್ದರೆ ಸಾಧನೆಯಾಗೋದಿಲ್ಲ ಗೌರವಯುತ ಸನ್ಮಾನ ಬಿಟ್ಟಿಯಾಗಿ ಸಿಗೋದಿಲ್ಲ *******************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

 ವಿಭಿನ್ನ ರೇಶ್ಮಾ ಗುಳೇದಗುಡ್ಡಾಕರ್ ಕೋಟೆ ಕಟ್ಟುವೆ ಭಾವನೆಗಳ ನಡುವೆಎಂದವ ಹೆಣವಾಗಿ ಬಿದ್ದನುಒಡೆದ ಕನಸುಗಳ ಅವಶೇಗಳಮಧ್ಯೆ …. ಮಾನವತೆಯ ಹರಿಕಾರನೋಂದಮನಗಳ ಗುರಿಕಾರ ಎಂದುನಕಲಿ ಫೋಸು ಕೊಟ್ಟವನುಎಡಬಿಡದೆ ಭಾಷಣಗಳಸುರಿಮಳೆಗೈದವನು ಬಹಳ ದಿನಬಾಳಿಕೆ ಬರಲಿಲ್ಲ ಸತ್ಯಗಳ ಮುಂದೆ …. ಮಾತಿನಲ್ಲೆ ಬಂದೂಕು ಇಟ್ಟವನುಮುಗ್ದ ಮಂದಿಯ ಚಿತ್ತ ಕದಲಿದನುಅನಾಯಾಸವಾಗಿ ಗೆಲುವು ಪಡೆಯಲುನಿರಂತರವಾಗಿ ಹೆಣಗುತಿರುವನುಗುಂಪುಗಳ ನಡುವೆ …. ಹಿಡಿ ಮಣ್ಣಿಗೆ ಸಾರವ ಪರೀಕ್ಷಿಸುವವರುಬದುಕಿನ ಸಾರವ ಹೊತಿಟ್ಟುಮುಖವಾಡಗಳಿಗೆ ಬಣ್ಣ ಹಚ್ಚುವರು ಸರಳತೆಯೇ ಉಸಿರು ಎಂದುಆದರ್ಶಗಳೇ ಬದುಕು ಎಂದುಅಹಿಂಸೆಯೇ ದೇವರೆಂದವರುಇಂದು ಎಂದೆಂದು “ಮಹಾತ್ಮ “ನೇ ಅಗಿರುವರು …… *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನದಿಯಾಚೆ ಊರಿನಲ್ಲಿ ಕಾಯುತ್ತಿದ್ದೇನೆ ಮೂಗಪ್ಪ ಗಾಳೇರ ಅನಾಥ ಶವವಾಗಿ ಮಲಗಿರುವ ನನ್ನ ಒಂದೊಂದು ಕನಸುಗಳು ಇನ್ನೂ ಉಸಿರಾಡುತ್ತಿವೆ ಎಂದರೆ ನೀ ಬಿಟ್ಟು ಹೋದ ನೆನಪುಗಳು ಚುಕ್ಕಿ ಚಂದ್ರಮರಂತೆ ಅಜರಾಮರ ಎಂದರ್ಥ| ಉಸಿರಾಟಕ್ಕೂ ಉಸಿರಿಗು ಕನಸುಗಳಿಗು ನೆನಪುಗಳಿಗು ವ್ಯತ್ಯಾಸ ತಿಳಿಯದೆ ಶವವಾದ ಈ ಹೃದಯಕ್ಕೆ ಈ ಕವಿತೆಗಳೇ ಔಷಧಿ ಎಂದರೆ ತಪ್ಪಿಲ್ಲ ಒಮ್ಮೆ ನೀ ಹಿಂದಿರುಗಿನೋಡಿದರೆ ಗೊತ್ತಾಗುತ್ತಿತ್ತು ನಾನೆಟ್ಟ ಹೂವಿನ ಗಿಡಗಳು ನೂರಾರು ಜಾತಿಯದ್ದಾಗಿದ್ದರೂ ಅವುಗಳಿಂದ ಸೂಸುವ ಕಂಪು ಒಂದೆಂದು ಒಂದೊಮ್ಮೆ ನೀ ಮುಂದಿಟ್ಟ ಹೆಜ್ಜೆ ತಿರುಗಿಸಿ ಹಿಂದಿಟ್ಟರೆ ನನ್ನ ಹೃದಯದ ಆಕೃತಿ ಅಷ್ಟೇ ಅಲ್ಲ ನನ್ನ ಭವಿಷ್ಯದ ಚಿತ್ರಣವು ಬದಲಾಗಬಹುದು ಕೆರೆಯ ದಂಡೆಯ ಮೇಲೆ ಕೂತು ಕಂಡ ಕನಸುಗಳಿಗೆಲ್ಲಾ…… ಒಂಟಿಯಾಗಿದ್ದಾಗ ಬರೆದ ಕಾವ್ಯಗಳಿಗೆಲ್ಲಾ…… ಮತ್ತೆ ನಿನ್ನ ಬಾಚಿ ತಬ್ಬಿಕೊಳ್ಳುವ ಬಯಕೆ ಬಂದುಬಿಡು ನದಿಯಾಚೆ ಊರಿನಲ್ಲಿ ಕಾಯುತ್ತಿದ್ದೇನೆ……! ****************

ಕಾವ್ಯಯಾನ Read Post »

You cannot copy content of this page

Scroll to Top