ಕಾವ್ಯಯಾನ
ನತದೃಷ್ಟ ಕವಿತಾ ಸಾರಂಗಮಠ ಪಂಜರದಿ ಹಕ್ಕಿಗಳ ಬಂಧಿಸಿದೆ ಆನೆಗಳ ಗರ್ವ ಅಡಗಿಸಿ ಮದ್ದಾನೆಯಾದೆ ಆನೆ ದಂತಗಳ ಕದ್ದೆ ಹುಲಿ,ಸಿಂಹಗಳ ಬೇಟೆಯಾಡಿದೆ ಓ ಮಾನವ ಗೃಹ ಬಂಧಿಯಾದೆ! ಸ್ವಚ್ಛಂದ ಹಾರಾಡುವ ಪಕ್ಷಿಗಳ ಪಂಜರದಿ ಬಂಧಿಸಿದೆ ಪಶು,ಕೀಟಗಳ ಭೇದವೆಣಿಸದೆ ಚಪ್ಪರಿಸಿದೆ ಉಭಯ ಜೀವಿ ಸಂಕುಲದ ನಾಶಕೆ ಮುಂದಾದೆ ಎಮ್ಮೆ,ಕಾಡು ಕೋಣ,ಚಿರತೆ,ಹುಲಿಗಳ ಚರ್ಮವನೆ ಹೊದ್ದೆ ಓ ಮಾನವ ನೀನೇ ಅವುಗಳಾದೆ! ಆತಂಕವಿಲ್ಲದೆ ಅಂತರಿಕ್ಷಕೆ ಹಾರಿದೆ ಸೂರ್ಯ ಚಂದ್ರರ ಮೀರಿಸಲು ಹೋದೆ ನಿಲುಕಿದ್ದರೆ ನೀಲನಭದೆ ವಾಸಿಸುತ್ತಿದ್ದೆ ಹಣದ ದಾಹಕೆ ಮೌಲ್ಯಗಳ ಮಾರಿಕೊಂಡೆ ಓ ಮಾನವ ಗೃಹ ಬಂಧಿಯಾದೆ *********









