ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಅಂತಿಮಯಾತ್ರೆ ಹರೀಶ ಕೋಳಗುಂದ ಉಸಿರು ಬಿಗಿ ಹಿಡಿದಿದೆ, ಎದೆಬಡಿತ ಕ್ಷೀಣ. ಕೆಲವೇ ಸಮಯ ಬಾಕಿ. ಪಸೆಯಾರಿದ ಗಂಟಲಿಗೆ ಕಡೆಯ ಬಯಕೆ, ಗುಟುಕು ಗಂಗಾಜಲ ಮಾತ್ರ. ಮತ್ತೇನೂ ಬೇಡ. ಉರಿವ ಹಣತೆಯ ಸೊಡರು ಬೀಸುಗಾಳಿಗೆ ತುಯ್ದಾಟ….! ಕಾಲ ಮೀರುತ್ತಿದೆ, ಸಾಸಿವೆಯ ಸಾಲಕ್ಕೆ ಹೋದವಳು ಇನ್ನೂ ಮರಳಿಲ್ಲ, ದಾರಿಯಲಿ ಬುದ್ಧ ಸಿಕ್ಕಿರಬೇಕು. ಕಾಲವಶದಲ್ಲಿ ಸಾವಿತ್ರಿಯೂ ಲೀನ. ಪುರುದೇವನ ವರ್ತಮಾನವೂ ಇಲ್ಲ. ಕಣ್ಣು ಕವಿಯುತ್ತಿದೆ, ಚಾಚಿ ಮಲಗಿದ ದೇಹ ಅಸಾಧ್ಯ ಭಾರ. ಸುತ್ತ ಕತ್ತಲೆಯ ಕೂಪ, ಏಕಾಂಗಿ ಭಾವ, ಹಠಾತ್ತನೆ ಯಾರದೋ ಚೀತ್ಕಾರ, ಯಾರೋ ನಕ್ಕಂತೆ, ಅತ್ತಂತೆ, ಹೆಸರಿಡಿದು ಕರೆದಂತೆ, ಕೈಹಿಡಿದು ಜಗ್ಗಿದಂತೆ, ಭ್ರಮೆ-ವಾಸ್ತವ ಇಹ -ಪರಗಳ ನಡುವೆ ತಾಕಲಾಟ, ಅವ್ಯಕ್ತ ಆತಂಕ….! ಯಶೋಧರನ ಹಿಟ್ಟಿನ ಹುಂಜಕ್ಕೂ ಉಂಟು ಬೆಂತರನ ಕಾವಲು. ಭೀಷ್ಮ ಇಚ್ಛಾಮರಣಿ. ಅಂಗಾಧಿಪತಿಗೆ ಕವಚ-ಕುಂಡಲಗಳ ರಕ್ಷೆ. ಸುಯೋಧನನಿಗೋ ವಜ್ರಕಾಯದ ದೀಕ್ಷೆ. ನರನ ಬಾಳು.. ಕಾವ, ಕೊಲುವ, ನಗಿಸಿ ಅಳಿಸುವ, ಕುಣಿಸಿ, ನಲಿಸಿ, ಆಡಿಸಿ, ಗೆಲಿಸಿ ಸೋಲಿಸಿ, ಇದ್ದು ಇಲ್ಲವಾಗಿಸುವ, ಕಾಣದ ಕೈಗಳ ಪಗಡೆಯಾಟ…! ಇನ್ನು ನಿಮಿಷಗಳನೆಣಿಸುವುದಷ್ಟೇ ಕೆಲಸ… ಹೊಸ್ತಿಲಾಚೆಯ ಸುದೀರ್ಘ ಮೌನ ಕೈ ಬೀಸಿ ಕರೆಯುತ್ತಿದೆ. ಸಿದ್ಧನಾಗಲೇಬೇಕಿದೆ, ಬಿದಿರುಯಾನ ಕಟ್ಟಿಟ್ಟ ಬುತ್ತಿ… ಪಯಣ ಸ್ವರ್ಗಕ್ಕೋ ನರಕಕ್ಕೋ ತಿಳಿಯದು, ಈಗಲೇ ಅರ್ಜಿ ಹಾಕುವೆ. ಛೇ… ಎಲ್ಲಿಗಾದರೇನು….? ನಭಕೇರಿದ ಆಯುಷ್ಯಚಪ್ಪರದ ಮುದಿಹಣ್ಣೆಲೆ ಉದುರಿ ಮಣ್ಣಾಗಲೇಬೇಕು. ಹಸಿರು ಚಿಗುರಿಗೆ ಎಡೆಯಾಗಲೇಬೇಕು. ಪರಿವರ್ತನೆ ಜಗದ ನಿಯಮ… ಅದೋ….. ಅಲೆ ಅಲೆಯಾಗಿ ತೇಲಿ ಬರುತ್ತಿದೆ, ಅಲ್ಲಮನ ತಮಟೆಯ ಸದ್ದು ಶೂನ್ಯತ್ವದಾಳದಿಂದ. ಜತೆಗೆ ಬಸವನ ಉಕ್ತಿ ಮರಣವೇ ಮ…..ಹಾ……ನ…….ವ……..ಮಿ. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಶಾಯರಿಗಳು ಮರುಳಸಿದ್ದಪ್ಪ ದೊಡ್ಡಮನಿ (ಕೂದಲಾ)                                                                            ನಿನ್ನ ಕೂದಲ ಹಾಂಗ ಹಗೂರಕ ನಿನ್ನ ಗಲ್ಲಕ್ಕ ಹಾರಿಕೊತ ಮುತ್ತಿಡತಾವು ಅವು ಎಷ್ಟು ಪುಣ್ಯಾ ಮಾಡ್ಯಾವು. ನೀ ಬಾಚಿ ಕಟ್ಟಿದ ಮುಡಿ ಬಿಚ್ಚಿ ಜಾಡಿಸಿದರ ಹುಚ್ಚು ಬಿಡಬೇಕು ಅವನ್ನೋಡಿದ ಹರೇದ ಹುಡುಗರಿಗೆ ಹುಚ್ಚು ಹಿಡಿ ಬೇಕು.  ಕಟ್ಟಿದ ಮುಡಿ ಬಿಚ್ಚಿ ಜಾಡಿಸಿದರ ನವಿಲು ಕುಣದಂಗಕ್ಕೈತಿ ನವಿಲಿನ ಕುಣತಕ್ಕ ನನಗರ ಒಂದ್ ನಮೂನಿ ಆಕ್ಕೈತಿ. ನಿನ್ನ ಮುಂಗುರುಳು ಎಷ್ಟು ಚಂದ ಮುಖದ ಮ್ಯಾಗ ಹಾರಾಡತಾವು ಅವುಕ ಸಲಿಗಿ ಕೊಟ್ಟಿ ಅಂತ ಕಾಣತೈತಿ ಎಲ್ಲೆಂದ್ರಲ್ಲಿ ನಿನ್ನ ಗಲ್ಲಕ್ಕ ಮುತ್ತಿಡತಾವು. ********

ಕಾವ್ಯಯಾನ Read Post »

ಕಾವ್ಯಯಾನ

ಅನುವಾದ ಸಂಗಾತಿ

ಇನ್ನಿಲ್ಲ ಕ್ಲೀಷೆಗಳು ಮೂಲ: ಆಕ್ತೇವಿಯೋ ಪಾಜ಼್  ಕನ್ನಡಕ್ಕೆ: ಮೇಗರವಳ್ಳಿ ರಮೇಶ್ ಸು೦ದರ ಮುಖಸೂರ್ಯನಿಗೆ ದಳ ಬಿಚ್ಚಿ ಕೊಳ್ಳುವ ಡೈಸಿ ಹೂವಿನ ಹಾಗೆನೀನೂ ತೆರೆ ನಿನ್ನ ಮುಖವನ್ನು ನನಗೆಪುಟಗಳನು ತೆರೆದ೦ತೆ ಪತ್ರಿಕೆಯ ಒಳಗೆ. ಸಮ್ಮೋಹಕ ಮುಗುಳು ನಗೆಯಓ, ನಿಯತಕಾಲಿಕೆಯ ಸು೦ದರಿಮರುಳಾಗಿ ಬಿಡುವರು ಮ೦ದಿ ನಿನ್ನ ಮೋಡಿಗೆ. ಎಷ್ಟು ಕವನಗಳು ಹುಟ್ಟಿಕೊ೦ಡಿಹವು ನಿನಗಾಗಿ?ಎಷ್ಟು ಜನ “ಡಾ೦ಟೆ” ಗಳು ಬರೆದಿಹರು ನಿನಗಾಗಿ?ಓ, ಬಿಯಾಟ್ರಿಸ್,ಕಾಡುವ ನಿನ್ನ ಮಾಯೆಸೃಜಿಸುವುದು ಭ್ರಮೆ. ಆದರಿ೦ದು, ಮತ್ತೊ೦ದು ಕ್ಲೀಷೆಯಲಿಬರೆಯುವುದಿಲ್ಲ ಈ ಕವಿತೆ ನಿನಗಾಗಿಇಲ್ಲ, ಇನ್ನಿಲ್ಲ ಕ್ಲೀಷೆ. ಯಾರ ಸೌ೦ದರ್ಯಅವರ ಮೋಹಕತೆಯಲ್ಲಿದೆಯೋಯಾರ ಸೌ೦ದರ್ಯಅವರಬುಧ್ಧಿಮತ್ತೆಯಲ್ಲಿದೆಯೋಯಾರ ಸೌ೦ದರ್ಯಅವರ ಸದ್ಗುಣಗಳಲ್ಲಿದೆಯೋಯಾರ ಸೌ೦ದರ್ಯಕೃತಕವಲ್ಲವೊಅ೦ಥ ಹೆ೦ಗಸರಿಗೆ ಇದೋಅರ್ಪಿಸಿದ್ದೇನೆ ಈ ಕವಿತೆಯನ್ನು. ಪ್ರತಿ ದಿನ ಬೆಳಿಗ್ಗೆ ಹೊಸ ಕಥೆಯೊ೦ದಿಗೆ ಏಳುವಶಹಜಾದೆಯ೦ಥ ಹೆ೦ಗಸರೆನಿಮಗಾಗಿ ಈ ಕವಿತೆ.ಬದಲಾವಣೆಯ ಬಯಸಿ ಹಾಡುವ೦ಥ ಕಥೆಗಾಗಿಈ ಕವಿತೆಯುದ್ಧವನ್ನು ಆಶಿಸುವ ಕಥೆಗಾಗಿಈ ಕವಿತೆ. ಸಮ್ಮಿಳಿತ ದೇಹಗಳ ಪ್ರೀತಿಗಾಗಿ ಯುದ್ಧಹೊಸ ಹಗಲು ಹುಟ್ಟಿಸಿದ ಉದ್ರೇಕಕ್ಕಾಗಿ ಯುಧ್ಧನಿರ್ಲಕ್ಷಿತ ಹಕ್ಕುಗಳಿಗಾಗಿ ಯುದ್ಧಅಥವಾ ಕೇವಲ ಒ೦ದು ರಾತ್ರಿಯಉಳಿವಿಗಾಗಿ ಯುದ್ಧ. ಹೌದು, ನೋವಿನ ಲೋಕದಲ್ಲಲೆದಾಡುತ್ತಿರುವ ಹೆಣ್ಣುಗಳೆನಿಮಗಾಗಿ ಈ ಕವಿತೆಕರಗುತ್ತಲೇ ಇರುವ ಜಗದ ಹೊಳೆವ ತಾರೆಗಳೇನಿಮಗಾಗಿ ಈ ಕವಿತೆಸಾವಿರದೊ೦ದು ರಾತ್ರಿ ಹೋರಾಡಿದ ವನಿತೆಯರೇನಿಮಗಾಗಿ ಈ ಕವಿತೆನನ್ನ ಹೃದಯದ ಗೆಳತೀನಿನಗಾಗಿ ಈ ಕವಿತೆ. ನಾನಿನ್ನು ನೋಡುವುದಿಲ್ಲ ನಿಯತಕಾಲಿಕೆಗಳನ್ನಬದಲು ವೀಕ್ಷಿಸುತ್ತೇನೆ ರಾತ್ರಿಯನ್ನಮತ್ತದರ ಹೊಳೆವ ನಕ್ಷತ್ರಗಳನ್ನ. ಹಾಗಾಗಿ ಇನ್ನಿಲ್ಲ ಬಿಡಿ ಕ್ಲೀಷೆಗಳುಹಳೆ ಮದ್ಯದ ಆ ಶೀಷೆಗಳು! *******

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಎ. ಹೇಮಗಂಗಾ ಸ್ಫಟಿಕದಂತೆ ಸದಾ ನಿರ್ಮಲ ಹೃದಯದವನು ನನ್ನ ರಾಜಕುಮಾರ ಕನಕದಂತೆ ಸದಾ ಹೊಳೆಯುವ ರೂಪದವನು ನನ್ನ ರಾಜಕುಮಾರ ಸವಿಮಾತಿನಲಿ ಮೊಗ್ಗು ಮನಸ ಅರಳಿಸಿದವನು ನನ್ನ ರಾಜಕುಮಾರ ಕಿರುನಗೆಯಲಿ ಮೋಡಿ ಮಾಡುತ ಚಿತ್ತ ಕಲಕಿದವನು ನನ್ನ ರಾಜಕುಮಾರ ಬೆಂಗಾಡಾದ ಬಾಳಲಿ ಚೈತ್ರ ಮೂಡಿಸಿದವನು ನನ್ನ ರಾಜಕುಮಾರ ಒಲವಿನಾರಾಧನೆಯೇ ತಪವೆಂದು ತೋರಿದವನು ನನ್ನ ರಾಜಕುಮಾರ ಸಪ್ತಪದಿಯಲಿ ಒಂದಾಗಿ ಸಗ್ಗವನೇ ಸೃಜಿಸಿದವನು ನನ್ನ ರಾಜಕುಮಾರ ಮಧುರ ಮಿಲನದ ನಶೆಯಲಿ ಮೈ ಮರೆಸಿದವನು ನನ್ನ ರಾಜಕುಮಾರ ತೋಳಬಂಧನದಿ ಪಿಸುಮಾತುಗಳ ಉಸುರಿದವನು ನನ್ನ ರಾಜಕುಮಾರ ಕೊರಳಿಗೆ ಅಗಣಿತ ಮುತ್ತಿನ ಹಾರ ಹೆಣೆದವನು ನನ್ನ ರಾಜಕುಮಾರ ಮೌನದಿರುಳಲಿ ಕಂಗಳಲೇ ಎಲ್ಲ ಹೇಳಿದವನು ನನ್ನ ರಾಜಕುಮಾರ ಬೇಕೆಂದ ಕ್ಷಣದಿ ಅಧರ ಮಧುರಸ ಉಣಿಸಿದವನು ನನ್ನ ರಾಜಕುಮಾರ ತಾಯ್ತನದ ಅಮಿತ ಸುಖವ ನೀಡಿ ನಲಿದವನು ನನ್ನ ರಾಜಕುಮಾರ ಕಷ್ಟವಿರಲಿ ಸುಖವಿರಲಿ ಹಿಡಿದ ಕೈ ಬಿಡದವನು ನನ್ನ ರಾಜಕುಮಾರ ಮುಂದಿನ ಜನ್ಮಕೂ ಜೊತೆ ಬರುವೆನೆಂದವನು ನನ್ನ ರಾಜಕುಮಾರ ಜೇನ ಸಿಹಿಯ ಪ್ರೀತಿ ಅಕ್ಷಯಪಾತ್ರೆಯಾದವನು ನನ್ನ ರಾಜಕುಮಾರ ವಿಧಿ ಆಣತಿಯಂತೆ ಮರಳಿ ಬಾರದೂರ ಸೇರಿದವನು ನನ್ನ ರಾಜಕುಮಾರ ಜೀವಕ್ಕೆ ಜೀವವಾಗಿ ಕಾಡುವ ನೆನಪಾಗಿ ಉಳಿದವನು ನನ್ನ ರಾಜಕುಮಾರ ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಶಂಕಿತರು-ಸೊಂಕಿತರು ನಾಗರಾಜ ಮಸೂತಿ.. ಹೆಜ್ಜೆ ಗುರುತುಗಳು ಮಾಯವಾಗಿ ಕಂಗಾಲದ ರಸ್ತೆಗಳು, ಮೇಲ್ಮುಖವಾಗಿ ಮುಗಿಲನ್ನೆ ದಿಟ್ಟಿಸುವ ಗಿಡಮರಗಳು, ಗಿಜಗೂಡುವ ಸರಕಾರಿ ಕಛೇರಿಗಳ ಖಾಲಿ ಮನಸ್ಥಿತಿಯ ಗೋಡೆಗಳು, ಬೆಳಕು ಕಾಣದೆ ಕತ್ತಲಾವರಿಸಿದ ದವಾಖಾನ ಕೋಣಿಗಳು, ಫಿನಾಯಿಲ್ ವಾಸನೆ ಆವರಿಸಿಕೊಂಡು ತಳತಳ ಅನ್ನುತ್ತಿವೆ ಅಮವಾಸ್ಯೆ ಪೂಜೆಗೆ ಸಿದ್ಧವಾದಂತೆ, ಓಣಿಯ ಬೀದಿಗಳೆಲ್ಲ ಲೊಚುಗುಟ್ಟುತ್ತಿವೆ ಸಿಂಗಾರಗೊಂಡು, ಗಟಾರಗಳೆಲ್ಲ ಕಂದಮ್ಮಗಳಂತೆ ಪೌಡರ್ ಬಳಿದುಕೊಂಡು ವಧು ವರರ ವೇದಿಕೆಗೆ ಸಿದ್ಧವಾದಂತಿವೆ ಸಂಜೆ ಹೊತ್ತಿಗೆ ಕತ್ತಲೆ ಮೆತ್ತಿಕೊಂಡ ಆವರಣಕ್ಕೆಲ್ಲ ಬೀದಿ ದೀಪಗಳು ಬೆಳಕು ಹರಿಸಿ, ಕಛೇರಿ ಕಟ್ಟಡಗಳು, ಲೈಟ್ ಕಂಬಗಳು, ಗಿಡಮರಗಳು, ಗಟಾರಗಳು ಒಟ್ಟಾಗಿ ಒಂದೇ ಪ್ರಶ್ನೆ ಎತ್ತಿವೆ, ಕಿಟಕಿಯಿಂದ ಇಣುಕುವ ಮನುಷ್ಯನನ್ನು, ಇದಕ್ಕೆಲ್ಲ ಕಾರಣೀಭೂತರಾರು ? *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಯಾತ್ರಿಕ ವಿಭಾ ಪುರೋಹಿತ್ ಜಗದೆದೆಯ ತುಂಬ ಹತ್ತಿ ಉರಿಯುತ್ತಿದೆ ಬತ್ತಲಾರದ ಜ್ವಾಲೆ. ಹಾದಿ ಮುಗಿಯುವುದಿಲ್ಲ ಮುಗಿದರದು ಹಾದಿಯಲ್ಲ ! ಯಾತ್ರೆ ಮುಂದುವರೆದಿದೆ ಹೊಸ ಹೊಸ ದೇಶ ಪ್ರದೇಶವನು ತೆಕ್ಕೆಯೊಳಗೆ ನುಂಗಿದೆ. ನೂರು,ಸಾವಿರ,ಲಕ್ಷಗಳ ದಾಟುತ್ತಲಿದೆ ರಕ್ತಬೀಜಾಸುರನ ನೆತ್ತರಿನ ಹನಿಗಳಿಗಿಂತ ವಿಷಾಣು ಹರಡುತ್ತ,ಹಬ್ಬುತ್ತ ರಕ್ಕಸನಂತೆ ಮೀರಿ ಬೆಳೆಯುತ್ತಲಿದೆ ಮನುಕುಲವ ಕಂಗೆಡಿಸುತ್ತಿದೆ. ಹೊರಗಿಂದ ಬಂದವರು ಸುಮ್ಮನೆ ಬರಲಿಲ್ಲ ಇಂದಿಗೂ ಹಂಚುತ್ತಲೇ ಇರುವರು ಬೆನ್ನು ಹಿಂದೆ ನಿಂತು ಚೂರಿ ಹಾಕಿದರು ಕಾಡುಪಾಪದ ರುಚಿಗೆ ಸೋತವರು ಸಂಜೆ ಹಕ್ಕಿಯ ದನಿಗೆ ಕಿವುಡರಾದವರು ನೋವು ಕೇಕೆ ಹಾಕುತ್ತಿದ್ದರೂ, ನಲಿವು ಮರೆಯಲ್ಲಿ ನಿಂತು ಹಣಿಕೆಹಾಕುತ್ತಿರುವಂತೆ ಮನಸಿನ ಯಾವುದೋ ಒಂದು ಮೂಲೆಯಲ್ಲಿ……. ಈಗೀಗ ಕಣ್ಮುಚ್ಚಿ ದರೆ ನಿದ್ದೆ ಸುಳಿಯುವುದಿಲ್ಲ ಸುಳಿದರೂ ಆ ಸುಳಿಯಲ್ಲಿ ಇರುಳೋ,ಬೆಳಕೋ, ಒಂದೂ ತಿಳಿಯುವುದಿಲ್ಲ ತಾನಿರುದಿಲ್ಲವೆಂಬ ಸಂಶಯ ಆ ಯಾತ್ರಿಕನಿಗೆ ಯಾವಾಗ ಬರುವುದೋ ? ದೇವರೇ ಬಲ್ಲ ! ನಕ್ಕ ನಿಮಿಷಗಳೀಗ ದಿಗ್ಬಂಧನದಲಿವೆ. ಸರಪಳಿ ಸಾಗುತ್ತಲಿದೆ ಕೊನೆಯಿರದ ದಾರಿಯಲಿ ಶಂಖನಾದ ಘಂಟೆ ಜಾಗಟೆಗಳಾದವು ಚಪ್ಪಾಳೆಗಳ ತಾಳದಲ್ಲಿ ಕಾಣದ ಮೂಲಮೂರ್ತಿಗೆ ಹರಿವಾಣ ಸೇವೆಯಾಯ್ತು ಹಚ್ಚಿಟ್ಟ ಹಣತೆಗಳು ಹೋರಾಡುತ್ತಿವೆ ಇಂದಿಗೂ ಕತ್ತಲಿನ ವಿರುದ್ಧ ಯುದ್ಧದ ಅಂತ್ಯ ಅರಿಯದೇ ! ಬೆಳಗುತ್ತಿವೆ ರಕ್ಷಕರಿಗೆ ದಾರಿ ದೀಪವಾಗತ್ತ….. ಇನ್ನೂ ಯಾಕೆ ಪೀಡಿಸುವೆ ? ಭಯಾನಕತೆ ತೋರದಿರು ಸಮಾಧಿಯಾಗಿಬಿಡು ಮುಗಿಸಿ “ಮಹಾಯಾತ್ರೆ” . **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಬ್ಯಾನ್ ಮಾತು! ರುದ್ರಸ್ವಾಮಿ ಹರ್ತಿಕೋಟೆ ಮಬ್ಯಾನ್ ಮಾತು! ೧) ಧ್ಯಾನಕ್ಕೆ ಕುಳಿತವರನ್ನು ಹೆಚ್ಚು ಕಾಡುವುದು ಅವಳು ಮತ್ತು ಅವಳು ಮಾತ್ರ! ೨) ಅವಳು ಪತಿವ್ರತೆ ಎಂದು ಮಾತಾನಾಡುವವರು ಅವಳ ಬೆತ್ತಲೆ ಕನಸ ಕಾಣದೆ ಇರರು! ೩) ಅವನು ಎಷ್ಟು ರಸಿಕನೆಂಬುದು ಅವನ ಹೆಂಡತಿಗಿಂತ ಅವನ ಸೆಕ್ರೆಟರಿಗೆ ಗೊತ್ತು! ೪) ಕವಿ ಬರೆದದ್ದನ್ನು ಕವಿಯೇ ಅರ್ಥೈಸಿದರೆ ರಸಭಂಗವಾಗುತ್ತದೆ! ೫) ಇಲ್ಲಿ ಹೆಚ್ಚು ಪ್ರೀತಿಸುವವರು ಹುಚ್ಚರಾಗುತ್ತಾರೆ ಇಲ್ಲವೇ ಹುತಾತ್ಮರಾಗುತ್ತಾರೆ! ೬) ಗಂಡಿಗಿಂತ ಹೆಣ್ಣು ಮೊದಲ ರಾತ್ರಿ ಏನೂ ಗೊತ್ತಿಲ್ಲದಂತೆ ನಟಿಸುತ್ತಾಳೆ! ೭) ಅವ್ವನ ಹರಿದ ಕುಪ್ಪಸ ನೋಡಿ ನಗುತ್ತಿದ್ದವರ ಕಂಡು, ಅಪ್ಪನ ಅಂಗಿಯೊಳಗಿನ ತೂತುಬಿದ್ದ ಬನಿಯನ್ ಅಳುತ್ತಿತ್ತು! ==========

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಿವೇಧನ ಬಿ ಅರುಣ್ ಕುಮಾರ್ ಮಧುರ ಭಾವಗಳ ಸಂಕ್ರಮಣ ಪ್ರೇಮಾಮೃತದ ಹೊಂಗಿರಣ ಬಂಧು ಬಾಂಧವರ ತೋರಣ ಸಪ್ತಪದಿ ಮಾಂಗಲ್ಯಧಾರಣ ಓಲಗ ಅಕ್ಷತೆಯ ಸಂಗಮ ಭಾವ ಭಾವಮೈದುನ ಬಾಂಧವ್ಯ ಕುಟುಂಬಗಳೆರಡರ ಕಲ್ಯಾಣ ಗಟ್ಟಿಮೇಳದ ಪರಿಣಯ ರತಿ ಪತಿ ದಾಂಪತ್ಯ ಸ್ಫೂರ್ತಿ ಮಂದ ಪ್ರಕಾಶ ಅರುಂಧತಿ ದೇಹವೆರಡು ಸೀತಾರಾಮ ದಾರಿಯೊಂದು ಅರ್ಧನಾರೀಶ್ವರ ಅನುರಾಗದ ಮಧು ಚಂದ್ರ ಮಿಥುನ ಹಕ್ಕಿಗಳ ಸಮ್ಮಿಲನ ಹಸಿರುಮಲೆಗೆ ಗರ್ಭಧಾರಣ ಶುಭ ಕಾಮನೆಯ ಹೂರಣ ಸರಸ ವಿರಸಗಳ ಆಲಿಂಗನ ಸಹಬಾಳ್ವೆಯಲಿ ಸಂತಾನ ರಂಗಿನ ರಂಗೋಲಿ ಅಂಗಳ ಮನ ಮನೆಯೇ ಮಂದಿರ. ಅವಳಿಲ್ಲದ ಕ್ಷಣ ಕಳಾಹೀನ ತುಡಿತ ಮಿಡಿತಗಳ ರಿಂಗಣ ಕೋಪ ತಾಪಕೆ ಗಂಡಸುತನ ತಾಳ್ಮೆ ಹೊಂದಿಕೆ ನಿವೇದನ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬದುಕು ಎನ್. ಆರ್. ರೂಪಶ್ರೀ ಬೀಸುವ ಗಾಳಿ ಹಾರುವ ಮುಂಗುರುಳು ಮತ್ತೆ ನೀಡಬಹುದು ಹೊಸ ಸಂತೋಷ. ಬಾನ ಚುಕ್ಕಿ ಹೊಳೆಯುವ ಚಂದಿರ ಮತ್ತೆ ಬರಬಹುದು ಆನಂದ. ಹಕ್ಕಿಯ ಗಾನ ಮರಗಳ ಕಲರವ ಮತ್ತೆ ತರಬಹುದು ಚೇತನ. ತಿಳಿ ನೀರ ಅಲೆಗಳಲ್ಲಿ ತೇಲುತ್ತಾ ಸಾಗುವ ಗುಳ್ಳೆಗಳ ನಡುವೆ ಮತ್ತೊಮ್ಮೆ ಚಿಮ್ಮಬಹುದು ಚಿಲುಮೆ. ಇಂತಹ ಎಲ್ಲಾ ಆಶಾ ಭಾವನೆಗಳ ನಡುವೆ ಜೀವಿಸಲೇಬೇಕಾದ ಅನಿವಾರ್ಯತೆ. ಇದ್ಯಾವುದೂ ಆಗದಿದ್ದರೂ ಆಗುತ್ತದೆ ಎನ್ನುವ ನಂಬಿಕೆ ಬಹುಶ: ಇದೇ ಇರಬಹುದು ಬದುಕು. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬದುಕು ಬೀಸುವ ಗಾಳಿ ಹಾರುವ ಮುಂಗುರುಳು ಮತ್ತೆ ನೀಡಬಹುದು ಹೊಸ ಸಂತೋಷ. ಬಾನ ಚುಕ್ಕಿ ಹೊಳೆಯುವ ಚಂದಿರ ಮತ್ತೆ ಬರಬಹುದು ಆನಂದ. ಹಕ್ಕಿಯ ಗಾನ ಮರಗಳ ಕಲರವ ಮತ್ತೆ ತರಬಹುದು ಚೇತನ. ತಿಳಿ ನೀರ ಅಲೆಗಳಲ್ಲಿ ತೇಲುತ್ತಾ ಸಾಗುವ ಗುಳ್ಳೆಗಳ ನಡುವೆ ಮತ್ತೊಮ್ಮೆ ಚಿಮ್ಮಬಹುದು ಚಿಲುಮೆ. ಇಂತಹ ಎಲ್ಲಾ ಆಶಾ ಭಾವನೆಗಳ ನಡುವೆ ಜೀವಿಸಲೇಬೇಕಾದ ಅನಿವಾರ್ಯತೆ. ಇದ್ಯಾವುದೂ ಆಗದಿದ್ದರೂ ಆಗುತ್ತದೆ ಎನ್ನುವ ನಂಬಿಕೆ ಬಹುಶ: ಇದೇ ಇರಬಹುದು ಬದುಕು. ******

ಕಾವ್ಯಯಾನ Read Post »

You cannot copy content of this page

Scroll to Top