ಕಾವ್ಯಯಾನ
ನಿಸಾರ ನಮನ ಗಝಲ್ ರೇಮಾಸಂ ಹತ್ತನೇ ವಯಸ್ಸಲೇ ಮಿಂದೆದ್ದ ಕಾವ್ಯ ಕವಿ ಅಹ್ಮದ ನಿಸಾರ ನಿತ್ಯೋತ್ಸವ/ ಜಲಪಾತ ಪ್ರಥಮ ಭಾವಗೀತೆ ಪತ್ರಿಕೆಲಿ ಪ್ರಕಟಿಸಿದ ಹರಿಕಾರ ನಿತ್ಯೋತ್ಸವ// ಮೃದು ಮಾತಿನ ಭಾವುಕದ ಸಾಹಿತಿಯೇ ಮೋಡದಲೇಕೆ ಮರೆಯಾದಿರಿ/ ಬುದ್ದಿಜೀವಿ ಸಂವೇದನಾಶೀಲ ಭಾವದ ಚಿಂತನಕಾರ ನಿತ್ಯೋತ್ಸವ// ರಾಜಕೀಯ ಸಮರ್ಥ ವಿಡಂಬನೆಯಲಿ ಕುರಿಗಳು ಸಾರ್ ಕುರಿಗಳು ಎಷ್ಟು ಚಂದ/ ಬೆಣ್ಣೆ ಕದ್ದವ ಕೃಷ್ಣನೆಂದು ತೋರಿದ ಪ್ರತಿಭಾಕಾರ ನಿತ್ಯೋತ್ಸವ// ಭಾವೈಕ್ಯದ ರುವಾರಿ ಕರುನಾಡಿನ ರಾಯಭಾರಿಯು ನೀವಲ್ಲವೇ/ ಕನ್ನಡದಲ್ಲಿ ಸಾರೆ ಜಹಾಂಸೆ ಅಛ್ಛಾ ನುಡಿಸಿದ ಗೀತಕಾರ ನಿತ್ಯೋತ್ಸವ// ಬಿಗಿದು ನಿನ್ನ ನಲಿವಿನ ಕಾವ್ಯದಿ ಪಾಲುಗೊಳ್ಳು ಮನಸ್ಸದಿ ರೇಮಾಸಂ/ ಈ ಜಗವು ಬರಿದಾಗಿ ಕಾಣುತಿದೆ ನೀವಿಲ್ಲದ ಗ್ರಂಥಕಾರ ನಿತ್ಯೋತ್ಸವ// ******









