ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ರಾಧೆ ಹೇಳಿದ್ದು ಡಾ.ಗೋವಿಂದ ಹೆಗಡೆ 1. ಅವ ನುಡಿಸಿದ್ದು ಕೊಳಲನ್ನು ಅಲ್ಲ ಕಣೇ. ಕವಿಬೆರಳುಗಳಲ್ಲಿ – ನನ್ನನ್ನು ! 2. ರಾಧೆ ಎಂದರೆ ಶ್ಯಾಮ ಶ್ಯಾಮನೆಂದರೆ ರಾಧೆ ಹಾಲು ಮತ್ತದರ ಬಿಳುಪು ಬೇರೆ ಬೇರೆ ಹೇಗೆ ? 3. ನಾನು ಹೆಣ್ಣೇ ಅವ ಗಂಡೇ? ನಾವು ಸಂಧಿಸಿದ್ದು ಬೇರೆಯದೇ ಬಿಂದುವಿನಲ್ಲಿ ಹೆಣ್ಣು ಗಂಡುಗಳಾಗಿ ನಮ್ಮ ನೋಡುವ ಹಾಡುವ ಲೋಕದ ಕುರುಡಿಗೆ ನನ್ನ ಕನಿಕರ ! **

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನಗೀಗ ಅಟ್ಟಗಳೆಂದರೆ ಪ್ರೀತಿ ಶೀಲಾ ಭಂಡಾರ್ಕರ್ ಇವತ್ತು ಬೆಳಿಗ್ಗೆಯೇ ಘೋಷಿಸಿ ಬಿಟ್ಟೆ.. ಮನೆಯಲ್ಲಿ ಸ್ವಚ್ಛತಾ ಅಭಿಯಾನ. ತಿಂಡಿಗೆಂದು ಮಾಡಿದ್ದ ಚಿತ್ರಾನ್ನವೇ ಮದ್ಯಾಹ್ನದ ಊಟ.. ಬೇಡವಾದರೆ ಅಲ್ಲೇ ನಾಲ್ಕು ಬಾಳೆಹಣ್ಣು, ಒಂದು ಎಳನೀರಲ್ಲಿ ಹೊಟ್ಟೆ ತುಂಬಿಸಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು. ಹೂಂಕರಿಸಿದರು.. ಓದುತ್ತಿದ್ದ ಪೇಪರ್ ನಿಂದ ತಲೆ ಎತ್ತದೆ. ಅವರು ಹೋದ ಮೇಲೆ… ನಿಂತು ಒಮ್ಮೆ ಯೋಚಿಸಿದೆ.. ಎಲ್ಲಿಂದ ಶುರು ಮಾಡಲಿ..! ನಮ್ಮ ಅನುಕೂಲಕ್ಕೆ ಎಂದು ಮನೆಯ ಮೇಲೆ ಮನೆ ಕಟ್ಟಿಸಿದಾಗ ಬೇಕು ಬೇಕು ಎಂದು ಕಟ್ಟಿಸಿದ್ದ ಮುಚ್ಚಿದ್ದ ಬಾಗಿಲಿನ ಹಿಂದಿನ ಎಲ್ಲ ಅಟ್ಟಗಳೂ ಗಹಗಹಿಸಿ ನಕ್ಕಂತಾಯಿತು.. ಏಳು ವರ್ಷದ ಹಿಂದೆ ಮನೆ ಸೇರಿದಾಗ ಮೇಲೆ ಏರಿಸಿದ ಯಾವ ವಸ್ತುವನ್ನೂ ತಿರುಗಿ ನೋಡಿರಲಿಲ್ಲ… ಒಂದೆರಡು ಸಲ ದಿಢೀರ್ ನೆಂಟರು ಬರುತ್ತಾರೆಂದಾದಾಗ ಕೈಗೆ ಸಿಕ್ಕಿದ್ದನ್ನು ಎತ್ತಿ ಅಲ್ಲಿಯೇ ತುರುಕಿದ್ದು ಬಿಟ್ಟರೆ.. ಮುಚ್ಚಿದ್ದು ತೆರೆದಿರಲೇ ಇಲ್ಲ. ನಿಮಗನ್ನಿಸಬಹುದು.. ಮತ್ಯಾಕೆ ಇವತ್ತು ಇಷ್ಟು ಆಸಕ್ತಿ..!? ಏನಿಲ್ಲ.. ನನ್ನದೊಂದು ಪುಸ್ತಕ ಕಾಣಿಸುತ್ತಿಲ್ಲ.. ಯಾರಿಗೆ ಕೊಟ್ಟು ಮರೆತು ಕುಳಿತಿದ್ದೇನೊ ನೆನಪಾಗುತ್ತಿಲ್ಲ… ಹುಡುಕಿ ಹುಡುಕಿ.. ಇನ್ನು ಉಳಿದಿರುವುದು ನಾಲ್ಕು ಕೋಣೆಗಳ ನಾಲ್ಕು ಅಟ್ಟಗಳು. ನನ್ನ ಪುಸ್ತಕವೆಂದರೆ.. ಅದು ನಮ್ಮ ರೂಮಿನ ಅಟ್ಟದ ಮೇಲೆಯೇ ಇರುವ ಸಂಭವ ಹೆಚ್ಚು.. ಹೋಗಿ ..ಮಡಚುವ ಏಣಿ ತಂದಿಟ್ಟೆ. ಒಂದು ಕಡೆಯ ಬಾಗಿಲು ತೆರೆದಾಕ್ಷಣ ದೊಪ್ಪೆಂದು ತಲೆಯ ಮೇಲೊಂದು ಮೂಟೆ ಬಿತ್ತು.. ಹಾಗೇ… ನೆಲದ ಮೇಲೆ ಬಿದ್ದಿರಲಿ. ಆಮೇಲೆ ನೋಡಿದರಾಯಿತು … ಉಳಿದ ಸಾಮಾನುಗಳ ಮೇಲೆ ದೃಷ್ಟಿ ಹಾಯಿಸಿದರೆ.. ಬರಿಯ ಹಾಸಿಗೆ ದಿಂಬುಗಳು.. ಅದರಲ್ಲೊಂದು ಮದುವೆಯಾದಾಗ ತವರಿನಿಂದ ಕೊಟ್ಟ ಹಾಸಿಗೆ.. ನೆನಪಿಗಿರಲಿ ಎಂದು ಇಟ್ಟು ಮರೆತು ಹೋಗಿ ವರುಷಗಳಾಗಿವೆ ಏಳು. ತವರು ಮನೆಯ ನೆನಪಿನ ಅಕ್ಕರೆಯಿಂದ ಕೈಯಾಡಿಸಿದೆ ಮೆತ್ತಗೆ. ಹಳೆಯ ಬಟ್ಟೆ ಮುಚ್ಚಿಟ್ಟು ಕುಂಬಾಗಿ ಬಂತೊಂದು ಚೂರು ಕೈಗೆ. ಮನಸ್ಸು ಹೋಯ್ತು ಇಪ್ಪತ್ನಾಲ್ಕು ವರ್ಷಗಳ ಹಿಂದೆ.. ಇನ್ನಿವತ್ತು ಇಲ್ಲ ಹುಡುಕುವ ಕೆಲಸ ಆಗುವ ಸೂಚನೆ ಎಂದು ಅಟ್ಟದ ಬಾಗಿಲು ಮುಚ್ಚಿ ಏಣಿಯಿಂದ ಇಳಿದೆ ಮೆಲ್ಲನೆ. ಕೆಳಗೆ ಬಿದ್ದ ಮೂಟೆಯನ್ನು ಬಿಚ್ಚಿ ನೋಡಿದರೆ.. ಯಪ್ಪಾ…….. ನಾಲ್ಕು ವರ್ಷದಿಂದ ಹುಡುಕಿ ಆಸೆ ಬಿಟ್ಟು ಬಿಟ್ಟಿದ್ದ ನನ್ನದೊಂದು ಇನ್ನೂ ಉಡದ ಸೀರೆ… ನಾಡಿದ್ದು ಸತ್ಯನಾರಾಯಣ ಪೂಜೆಗೆ ಹೋಗುವಾಗ ಉಡಲೊಂದು ಹೊಸ ಸೀರೆಯಾಯ್ತು.. ಒಂದು ಚಿಂತೆ ಕಳೆಯಿತು.. ಒಂದೊಂದಾಗಿ ಸಿಕ್ಕಿದವು.. ಒಂದರ ಹಿಂದೆ ಒಂದು ಕಳೆದು ಹೋಗಿತ್ತು ಎಂದುಕೊಂಡಿದ್ದ ಎಷ್ಟೊಂದು ಅಮೂಲ್ಯ ವಸ್ತುಗಳು ಜತೆಗೆ ಅದರ ಜತೆಗಿನ ನೆನಪುಗಳು… ಅಡಿಯಲ್ಲಿತ್ತು ನನ್ನ ಆ ಪುಸ್ತಕ.. ದಿನ ಭವಿಷ್ಯದ ಅನಿರೀಕ್ಷಿತ ಲಾಭ ಅಂದರೆ ಇದೇ ಏನೊ ಅಂದ ಹಾಗಾಯಿತು ನನಗೀಗ. ಮನೆಗಳಲ್ಲಿ ಸರಂಜಾಮುಗಳು ಜಾಸ್ತಿಯಾಗಲು ಕಾರಣ.. ಆಲಸ್ಯವಲ್ಲ… ಅದರ ಜತೆಗೆ ಜೋಡಿಸಲ್ಪಟ್ಟಿರುವ ಅನೇಕ ಸವಿ ನೆನಪುಗಳು, ನವಿರಾದ ಭಾವನೆಗಳು. ನಮ್ಮನ್ನು ಆ ವಸ್ತುವಿನ ಆ ಕಾಲಕ್ಕೆ ಕೊಂಡೊಯ್ಯುವ ಕಾಲ ಯಂತ್ರಗಳು. ಎಸೆಯಲು ಬಿಡದೆ ನಮ್ಮನ್ನು ಕಟ್ಟಿಹಾಕಿ ತುಂಬಿಕೊಳ್ಳುತ್ತವೆ ಮನೆ ತುಂಬ. ಇನ್ನೂ ಇವೆ ಬಾಕಿ.. ಮೂರು ಅಟ್ಟಗಳು .. ಮುಂದಿನ ಜೀವನಕ್ಕಾದೀತು.. ದಿನ ಕಳೆಯುವ ಸಾಧನ. ನೆನಪುಗಳ ದಾಸ್ತಾನು. ನನಗೀಗ ಅಟ್ಟಗಳೆಂದರೆ ಬಲು ಪ್ರೀತಿ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಆ ಕವಿತೆ ಇದಲ್ಲ. ಪೂರ್ಣಿಮ ಸುರೇಶ್ ಆ ಕವಿತೆ ಇದಲ್ಲ ‌‌‌ ನೀನು ಹಕ್ಕಿಯ ಬಗ್ಗೆ, ನದಿಯ ಬಗ್ಗೆ , ಚಿಟ್ಟೆ ಮರ,ಎಲೆಯ ಬಗ್ಗೆ ಕವಿತೆ ಹೊಸೆಯುವಿಯಲ್ಲ.. ಪ್ರಣಯ ಕಾಡಲಾರದೇ? ನೇರ ಪ್ರಶ್ನೆ.,. ಬಿಡಿ ನನಗೂ ಪ್ರಶ್ನೆ ಆಗುವುದು ಇಷ್ಟ. ನಡು ವಯಸ್ಸಿಗೆ ಅದೆಂತಹ ಪ್ರಣಯ ಎಂದೆ ನಿನಗೆ ಗೊತ್ತಾ ನಿನ್ನ ನಡು ಚೆಂದ ಒಮ್ಮೆ ಪುಟ್ಟ ಉನ್ಮಾದ ಬೇಕಿದ್ದರೆ ನಾ ಕ್ಲಿಕ್ಕಿಸಲೇ ಆ ಚಿತ್ರ ನೋಡು, ನಾಚಿದೆಯಾ.. ಬಿಡು, ಕಾಡುವ ಭಾವ ನೀನು ಹೆಕ್ಕಲಾರೆ ಛೇಡಿಸಿದ: ಎಲ್ಲೋ ಗರ್ಭದೊಳಗಿನ ನಗೆ ಕಿವಿಯ ಸುತ್ತ ಕಚಕುಳಿ ಇಟ್ಟಿತು ಊರು ಉರುಳೀತು ನಿಲ್ಲಿಸೋ ನಗೆ ಗೋಗೆರೆದೆ ಮುತ್ತಿನ ಸರಪಳಿ ಎಲ್ಲಿಗೆ ತೊಡಿಸಲಿ? ಮತ್ತೆ ಮತ್ತೆ ನಗು.. ಕರುವಿನ ಕಿವಿಗೆ ಗಾಳಿ ಊದಿದರೆ.,. ಪೋಲಿ ನಗು ತಾವರೆಯ ಕೆಂಪಾಗಿಸಿ ಬೊಗಸೆಯಲ್ಲಿ ತುಂಬಿ ಕವಿತೆ ಎಂದರೇನೇ.. ಜುಂ ಎನಿಸುತ್ತಾನೆ ಕವಿತೆಯ ಎಸಳು ಎಸಳು ತೆರೆದು ಘಮ ನೇವರಿಸುತ್ತಾನೆ ತಾವರೆ ದಂಟು ಬೆನ್ನ ಹುರಿಗೆ ಕಸಿ ಮಾಡುತ್ತಾನೆ ಮುತ್ತು ಮತ್ತು,.. ತೆರೆದುಕೋ ಕವಿತೆ ಗುಂಗಿನ ಗುನುಗು ಬೇಡ, ನನ್ನ ಅವನ ಪ್ರಣಯವನ್ನು ಕವಿತೆಯಲ್ಲಿ ಜಾಲಾಡದಿರಿ ನಾನು ಆ ಕವಿತೆ ಹೆಣೆಯಲಾರೆ ****** .

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕಾಲ ಅರುಣ್ ಕೊಪ್ಪ ಮಳೆ ,ಚಳಿ ,ಬಿಸಿಲೂ ಮೀರಿ ಏನು ಈ ಬಾಳ ರಹದಾರಿ ಹೋಯಿತು ಕೈ ಮೀರಿ ಗ್ರಹ ಬಂಧನ, ಮೈ ಕೈ ಪರಚಿ ಚೀರಿ ಎಲ್ಲಿಗೆ ನಿನ್ನ ಸವಾರಿ ಕೊರೊನಾ ಕವಿದೆ ನೀ ಅಂಧಕಾರಿ! ಅವಳು ನಾನಿಲ್ಲದ ಅವಳಲ್ಲ ಇಂದು ಇವಳು ಪಡುತಿಲ್ಲ ಗೋಳು ಇಲ್ಲ ಕಣ್ಣೀರ ಕೂಳು ಬಿದ್ದಯ್ತಿ ಎಣ್ಣೆ ಅಂಗಡಿ ಪಾಳು ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ನೀನೆತ್ತಿ ಮುಡಿದ ಹೂವಿನ ಎಸಳಾಗಿಸು ನನ್ನ ನಿನ್ನ ಬಿಡುಗಣ್ಣ ಕರೆಯಲ್ಲಿ ಹರಳಾಗಿಸು ನನ್ನ ಎದ್ದೆದ್ದು ಬೀಳುತ್ತ ಮೊರೆಯುತ್ತಿದೆ ಕಡಲು ಸತತ ನಿನ್ನ ಎದೆಯಲ್ಲೊಂದು ಮೃದು ಅಲೆಯಾಗಿಸು ನನ್ನ ನಿನ್ನ ಗುಲಾಬಿ ಪಾದಗಳು ರಸ್ತೆಯನಿಡೀ ತುಳಿದಿವೆ ದಣಿದ ಕಾಲುಗಳನ್ನು ಒತ್ತುವ ಬೆರಳಾಗಿಸು ನನ್ನ ಕತ್ತಲ ರಾತ್ರಿಯಲ್ಲಿ ಚುಕ್ಕಿಗಳ ಎಣಿಸುತ್ತಿರುವೆ ನಿನ್ನ ಕಣ್ಣು ಚುಚ್ಚದಂತೆ ಹಗೂರ ಮಿನುಗಿಸು ನನ್ನ ದುಗುಡ ಮೋಡಗಳು ಆವರಿಸಿ ಮನಸಾಗಿದೆ ಕ್ಷುಬ್ಧ ಚದುರಿಸಿ ಮುದ ತರುವ ತಂಗಾಳಿಯಾಗಿಸು ನನ್ನ ಎಷ್ಟೊಂದು ಮಾತುಗಳ ಎಡಬಿಡದೆ ಎರಚಿರುವೆ ‘ಜಂಗಮ’ ನಿನ್ನ ತುಟಿಗಳಲಿ ಅರೆ ಚಣದ ಮೌನವಾಗಿಸು ನನ್ನ *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹಬ್ಬ ಗೌರಿ.ಚಂದ್ರಕೇಸರಿ ನಾವು ಸಾಬೀತುಪಡಿಸಿದ್ದೇವೆ. ಪ್ರಾಣಕ್ಕಿಂತ ದೊಡ್ಡದು ಆಚರಣೆಗಳೆಂದು. ನೆತ್ತಿಯ ಮೇಲೆ ತೂಗುತ್ತಿದ್ದರೂ ಕತ್ತಿ ಬಾರಿಸುತ್ತಿದ್ದರೂ ಎಚ್ಚರಿಕೆಯ ಗಂಟೆ ನಡೆದು ಬಿಡುತ್ತೇವೆ ಚೀಲ ಹಿಡಿದು ಸಾವಿನ ಮನೆಯ ಕಡೆಗೆ ಮುಗಿ ಬೀಳುತ್ತೇವೆ ಹೂ ಕಾಯಿ ಹಣ್ಣುಗಳಿಗೆ ತುಂಬಿಕೊಳ್ಳತ್ತೇವೆ ಭವಿಷ್ಯವನ್ನೆಲ್ಲ ಭೂತವೆಂಬ ಚೀಲಗಳಿಗೆ ಹೊತ್ತು ನಡೆಯುತ್ತೇವೆ ತಪ್ಪಿಸಿ ಪೋಲೀಸರ ಕಣ್ಗಾವಲನ್ನು ಬಂದು ಸೇರಿ ಮನೆ ಬೀಗುತ್ತೇವೆ ಚಪ್ಪನ್ನೈವತ್ತಾರು ಕೋಟೆಗಳ ಗೆದ್ದಂತೆ ತಳಿರು ತೋರಣವಿಲ್ಲದ ಸಿಹಿಯಡುಗೆ ಮಾಡದ ನೆರೆಹೊರೆಯವರನ್ನು ನೋಡಿ ನಗುತ್ತೇವೆ ಜೀವವಿದ್ದಲ್ಲಿ ಮಾಡೇವು ನೂರು ಹಬ್ಬ ಹರಿದಿನ ಅವಿವೇಕಿಗಳು ನಾವು ಹಬ್ಬ ಮಾಡುವ ಹವಣಿಕೆಯಲ್ಲಿ ಆಗದಿರಲಿ ನಮ್ಮದೇ ಹಬ್ಬ ಆಗ ನಮ್ಮವರೇ ಬಾರದೆ ದೂರದಿ ನಿಂತು ನೋಡುವರು ನಮ್ಮ ದಿಬ್ಬಣ ಹಿಡಿ ಮಣ್ಣೂ ಹಾಕಿಸಿಕೊಳ್ಳದೆ ಭಾವನೆಗಳೇ ಇಲ್ಲದ ಯಂತ್ರ ತೋಡಿದ ಗುಂಡಿಯೊಳಗೆ ಹೂತು ಹೋಗಬೇಕಾದೀತು ಅನಾಥ ಶವದಂತೆ *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಸಹದೇವ ಯರಗೊಪ್ಪ ಗದಗ ಹೊಲದ ಇಳಿಜಾರಿಗೆ ಅಡ್ಡ ನೇಗಿಲ ಸಾಲುಗಳ ತೆರೆದ ಮಣ್ಣಿನ ಮಗ| ಅಂಬರದ ಎದೆ ಸೀಳಿ ಮುಗಿಲ್ವನಿಗಳ ಗೂಡು ಕಟ್ಟಿದ ಮಣ್ಣಿನ ಮಗ|| ಒಕ್ಕಲುತನ ಕಲೆ ವಿಜ್ಞಾನ ವಾಣಿಜ್ಯಗಳ ಸಂಗಮ ಎಂದು ತೋರಿಸಿದ ಜಂಗಮ| ನೆಲದ ಜ್ವರದ ಪರಿಗೆ ವಲಸೆ ಹೋಗುವ ತಥಿಗಳಿಗೆ ಲಗಾಮ ಜಡಿದ ಮಣ್ಣಿನ ಮಗ|| ಆಗಮೆ ಮಾಡಿದರೂ ಬೀಯಕ್ಕೆ ಭತ್ತವಿಲ್ಲದೆ ಅಗುಳು ಅನ್ನಕ್ಕಾಗಿ ಚೀರಾಟ| ಮೋಡಗಳ ಮೈಥುನವನ್ನು ಕೆರೆ ಕಟ್ಟೆ ಬಾವಿಗಳಲ್ಲಿ ಸಂಗ್ರಹಿಸಿದ ಮಣ್ಣಿನ ಮಗ|| ಗಡಿಯಾರದಂತೆ ತಿರುಗುವ ಋತುಗಳ ಹಿಂದೆ ಮೇಟಿ ಹಿಡಿದು ತಿರುಗಿದವನು| ಕುದಿವ ಬರಡು ನೆಲಕೆ ಹಸಿರು ಕುಸುರಿ ಸೀರೆ ಉಡಿಸಿದ ಮಣ್ಣಿನ ಮಗ|| ಹಂಗಾಮುಗಳ ಜೂಜಾಟಕ್ಕೆ ಬೇಸತ್ತು ಹಳ್ಳಿಗಳಿಗೆ ಬೆನ್ನು ಮಾಡಿ ಅಲೆದವನು| ಆಧುನಿಕ ಕೃಷಿಯ ಕವಲುದಾರಿಗಳನ್ನು ಬೇಧಿಸಿ ಸಾಧಿಸಿದ ಮಣ್ಣಿನ ಮಗ|| ಬೆನ್ನಿಗೆ ಬೆನ್ನು ಹಚ್ಚಿ ಹಗಲಿರುಳು ದುಡಿದು ಮಣ್ಣಿಗೆ ಬೆವರು ಹನಿಗಳ ಹಿಂಡಿದವನು| ಬರ ನೆರೆಗೆ ತಾನೇ ತುತ್ತಾದರೂ ಜಗದ ತುತ್ತಿನ ಚೀಲ ತುಂಬಿದ ಮಣ್ಣಿನ ಮಗ|| ಮಣ್ಣಿಗೆ ವಿಷ ಬೆರೆಸಿ ಜಗಕೆಲ್ಲ ವಿಷವುಣಿಸುವ ಸಾಚಿ ಕೃಷಿಗೆ ದಿಕ್ಕಾರವಿರಲಿ| ಬಂಡಿ ಬಂಡಿ ಕುಂಡಿ ಗೊಬ್ಬರವ ಉಣಿಸಿ ಖಂಡುಗದ ರಾಶಿ ಬೆಳೆದ ಮಣ್ಣಿನ ಮಗ|| ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಋಜುವಾತು ಮಾಡಬೇಕಿದೆ ರೇಶ್ಮಾಗುಳೇದಗುಡ್ಡಾಕರ್ ನನ್ನೊಳಗಿನ ನಾನುಋಜುವಾತು ಮಾಡಬೇಕಿದೆ ನನ್ನೊಳಗಿನ ನಾನು ಋಜುವಾತುಮಾಡಬೇಕಿದೆಎದೆಗೆ ಇಟ್ಟ ಕೊಳ್ಳಿಅರುವ ಮುನ್ನಹರಳುಗಟ್ಟಿದ ನೆನಪುಗಳುಹನಿಯಾಗಿ ಹರಿಯುವ ಮುನ್ನಸೋಗಿನ ಕಡಲಲ್ಲಿ ಅಲೆಯಾಗುವ ಮುನ್ನನನ್ನೊಳಗಿನ ನಾನುಋಜುವಾತು ಮಾಡಬೇಕಿದೆ ….. ಬಣ್ಣ ಬಣ್ಣದ ನೋಟಗಳುಮನದ ಹಂದರ ಸೇರುವ ಮುನ್ನಮೋಹ ಸಲೆಗೆ ಅಡಿಯಾಳಾಗುವ ಮುನ್ನವಾಸ್ತವದ ತಳಹದಿಯ ಮರೆಮಾಚಿಭ್ರಮರ ಲೋಕಕೆ ಕಾಲಿಡುವ ಮುನ್ನಬಾಂಧವ್ಯ ದ ಆಚೆಗೊಸ್ನೇಹದ ಸೆಳೆತದಾಚೆಗೊ ನನ್ನ ನಾಋಜುವಾತು ಮಾಡಬೇಕಿದೆ …. ಏಳಿಗೆಯ ಬೇರುಗಳ ಕತ್ತರಿಸಿಹಿಂದೆ ಮುಂದೆ ನಿಂದನೆಗೆ ಆಹಾರಮಾಡಿ ನಾಜೂಕು ಮಾತುಗಳಾಡುತನಮ್ಮೊಳಗೆ ಬೇರೆತು ದೂರ ಇರುವವರುಕತ್ತಿಮಸೆಯುವ ಮುನ್ನ ನನ್ನೊಳಗಿನನಾನು ಋಜುವಾತು ಮಾಡಬೇಕಿದೆನನ್ನೂಳಗಿನ ನಾನು ಋಜುವಾತು ಮಾಡಬೇಕಿದೆ ***********                  

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಬಾಳಿನೆಲ್ಲ ಏಳುಬೀಳುಗಳ ದಾಟಿದ್ದೇನೆ ಕಾಲವೇ ಮುನ್ನಡೆಸು ನನ್ನ ಗೋಳಿನೆಲ್ಲ ಸರಮಾಲೆಗಳ ಬಿಸುಟಿದ್ದೇನೆ ಕಾಲವೇ ಮುನ್ನಡೆಸು ನನ್ನ ನಂಜಾದ ಅವನ ಕಹಿನೆನಪುಗಳು ಅಸ್ತಿತ್ವವನ್ನೇ ಬಲಿಪಡೆಯುತ್ತಿವೆ ಅಂತರಾಳದಿ ನೋವನ್ನೆಲ್ಲ ಹೂಳಿದ್ದೇನೆ ಕಾಲವೇ ಮುನ್ನಡೆಸು ನನ್ನ ಹೂವಿಂದ ಹೂವಿಗೆ ಹಾರುವ ದುಂಬಿ ಅವನೆಂದು ತಿಳಿಯಲಿಲ್ಲ ತಪ್ಪಿನ ಅರಿವಾಗಿ ಎಚ್ಚೆತ್ತುಕೊಂಡಿದ್ದೇನೆ ಕಾಲವೇ ಮುನ್ನಡೆಸು ನನ್ನ ವಂಚನೆಯ ಕತ್ತಿಯೇಟಿಗೆ ಹೃದಯದ ಗಾಯವಿನ್ನೂ ಮಾಯಬೇಕಿದೆ ಸತ್ತ ಕನಸಿಗೆ ಜೀವ ತುಂಬಬೇಕೆಂದಿದ್ದೇನೆ ಕಾಲವೇ ಮುನ್ನಡೆಸು ನನ್ನ ಜೀವನಕ್ಕೆ ಬೆನ್ನು ತಿರುಗಿಸಿ ಹೇಡಿಯಂತೆ ಸಾವ ಬಯಸದಿರು ಹೇಮ ನನಗೆಂದೇ ನಾನಿನ್ನು ಬದುಕಬೇಕೆಂದಿದ್ದೇನೆ ಕಾಲವೇ ಮುನ್ನಡೆಸು ನನ್ನ ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಇವನೊಂದಿಗೆ ಅವನನ್ನೂ ಧಾಮಿನಿ ಸತ್ತಂತಿದ್ದೆನು ನಾನುಅದಕೆ ಕಾರಣ ನೀನು ಏನೊಂದೂ ಅರಿವಾಗಲಿಲ್ಲತಿಳಿಯುವಷ್ಟರಲ್ಲಿ ಮುಗಿದಿತ್ತೆಲ್ಲ ಮೈ ತುಂಬಾ ಚೇಳುಅದಕಿಂತ ಸಾವೇ ಮೇಲು ಮೈಯೋ ಬೆಣ್ಣೆಯಂತೆ ಮೃದುಮನಸೋ ಕಲ್ಲಿನಂತೆ ಕಠಿಣ ತಾನಾಗಿ ಚಲಿಸಲಿಲ್ಲ ಒಂದೂ ಬೆರಳುಬಲವಂತಕ್ಕಾಗಿ ಚೀರಿದವುಎಲ್ಲಾ ನರಳು ಸತ್ತಂತಿದ್ದೆನು ನಾನುಅದಕೆ ಕಾರಣ ನೀನು. ಹುಚ್ಚಿಇವನನ್ನು ಅವನೆಂದು ತಿಳಿಯಬಾರದಿತ್ತೇಹಬ್ಬವೇ ಆಗಿಹೋಗುತಿತ್ತಲ್ಲೆ! ಬರೀ ಗಂಡಸರಷ್ಟೇ ಇವಳೊಂದಿಗೆ ಅವಳನ್ನುಹೋಲಿಸಿಕೊಳ್ಳುವುದೇ? ನಮಗೇನು ಹಕ್ಕಿಲ್ಲವೇಇವನೊಂದಿಗೆ ಅವನನ್ನೂ ಮುಡಿದುಕೊಳ್ಳುವುದು. ********

ಕಾವ್ಯಯಾನ Read Post »

You cannot copy content of this page

Scroll to Top