ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಅವನಾಗದಿರಲಿ. ಪ್ರಮೀಳಾ. ಎಸ್.ಪಿ.ಜಯಾನಂದ. ಸದ್ದು ನಿಲ್ಲಿಸಿದ್ದ ನಾಯಿಮತ್ತೇಕೆ ಸದ್ದು ಮಾಡುತ್ತಿದೆ…?ಇಷ್ಟು ದಿನ ಮೌನವಾಗಿದ್ದ ಶುನಕ…ಇಂದೇಕೆ ಸದ್ದು..?? ಅದೊ..ಅವನು ಬಂದಿರುವನೆ..ಚಪ್ಪರದ ಸಂಭ್ರಮ..ವಾಲಗದ ಸದ್ದು ಕೇಳಿಸಿತೆ ಅವನಿಗೆ ಹೂಹುಂ…ಇಲ್ಲ,ಇಲ್ಲ.. ಆ ಹೊತ್ತುಸದ್ದು ಮಾಡದೇ ಎದ್ದು ಹೋದನಲ್ಲ… ಆ ರಾಜ..ಜಗದ ಉದ್ದಾರ ಕ್ಕೆಂದು ನಂಬಿತು ಜಗತ್ತು ಆದರವಳ ಮಗ…ಏನೆಂದು ದುಃಖಿಸಿದನೋ ಇವನುಮಗ್ಗಲು ಬದಲಿಸುವುದರೊಳಗೆ ಎದ್ದು ಹೋಗಿದ್ದು ಯಾಕೆಂದು ತಿಳಿಯಬಲ್ಲದೆ ನನ್ನ ಹಸುಗೂಸು..?? ಗಟ್ಟಿಯಾಗದಿದ್ದರೂ ಮನಸ್ಸುಕಲ್ಲಾದ ದೇಹದುಡಿಯಿತುಮಗಳ ಸಾಕುವುದು ಸುಲಭದ ಮಾತೇನು.. ಅದು ಬರೆಯಲಾಗದ ಕವಿತೆ,ಹಾಡಲು ಬರದ ಹಾಡು.. ಅಳುವ ಕೂಸಿಗೆ ಹಾಲುಣಿಸಿಕಂಬನಿ ಒರೆಸುವ ಕೈ ಅರಸಿಅವನ ಹುಡುಕುವ ವ್ಯರ್ಥಪ್ರಯತ್ನ ಮಾಡಬಾರದಿತ್ತು ನಾನು ನಾಳೆ ಮಗಳು ಹಸೆ ಮಣೆ ಏರಲಿದ್ದಾಳೆ ಬಂದವರೆಲ್ಲಾ.. ಅವಳ ಅಪ್ಪನೆಂಬುವನ ಗುರುತಿಸಿಕೈ ಕುಲುಕಲು ಕಣ್ಣಾಡಿಸುತ್ತಿದ್ದಾರೆ.. ಅವನದ್ದು ಬರೀ ಹುಟ್ಟಿಸುವ ಚಟ..!? ನೀರು-ನೆರಳಿದ್ದಲ್ಲಿ ಮೇದು-ಮಲಗುವ ದನದಂತೆಹೆಣ್ಣು ಶ್ವಾನವೊಂದ ಕಂಡರೆಓಡುವ ಗಂಡು ನಾಯಿಗಳದಂಡಿನಂತೆ ಅದೆಷ್ಟೋ ದೇಹಗಳ ಹಿಂದೆ ಇವನು ಓಡಿದ್ದಾನೆ..ಸುಖ ಪಿಪಾಸಿಕೈಯಲ್ಲಿನ ಕಾಸುತೊಡೆಯೊಳಗಿನ ಕಸುವುಸೋರಿಹೋಗುವಷ್ಟು ದಿನ. ನಾಳೆ ಮಗಳ ಬದುಕಿನಲಿಕಾಲಿಟ್ಟವನಾದರೂಇವನಂತೆ ಆಗದಿರಲಿ…. ಬೊಗಳುತ್ತಿದ್ದ ನಾಯಿಮತ್ತೆ ಮುದುಡಿ ಮಲಗಿತು. ಹೆಂಗಳೆಯರ ಬಳೆಗಳ ಸದ್ದುಕೇಳುತ್ತಿದೆ..ಗಂಗೆ ತರಲು ಹೊರಟಿರಬೇಕು..

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಮ್ಮನಿಗೀಗ ೬೬ ನಾಗರಾಜ ಮಸೂತಿ ದುಡಿಯುವ ದೇಹಕ್ಕೆ ವಾಕಿಂಗ್ ಅನಗತ್ಯ ಎಂದವಳುಮೆಲ್ಲ ಹೆಜ್ಜೆ ಇರಿಸುತ್ತಿದ್ದಾಳೆ ಆರು ಹೆರಿಗೆಗೆ ನಲುಗದವಳುಮಂಡೆ ನೋವಿಗೆ ಕುಸಿದಿದ್ದಾಳೆ ಬಿಸಿ ರೊಟ್ಟಿ ಉಣಬಡಿಸಿದವಳುಊಟಕ್ಕೆ ಮೆತ್ತನೆ ರೊಟ್ಟಿಯನ್ನು ಕೇಳಲು ಮುಜುಗರಕ್ಕೊಳಗಾಗುತ್ತಾಳೆ ಮೈಲು ದಾರಿ ಸವೆಸಿ ಬಿಸಿಯೂಟ ಬಡಿಸಿದಅವಳ ಪ್ರತಿ ಹೆಜ್ಜೆನನ್ನೆದೆಗೆ ಭಾರ ಅನಿಸುತ್ತಿವೆ ತಿಂಡಿ ತಿನಿಸು, ಧಿರಿಸು ತಂದಿಡುವಎನಗೆ ಆರೋಗ್ಯ ಮರುಕಳಿಸಲಾಗುತ್ತಿಲ್ಲಅವಳಿಗೀಗ ಅರವತ್ತಾರರ ಹರೆಯ ಅಮ್ಮನಿಗೆ ವಯಸ್ಸಾಗ್ತಿದೆಅದೇ ಬೇಸರವಾಗ್ತಿದೆ… **************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕಿಟಕಿ ದೀಪ್ತಿ ಭದ್ರಾವತಿ ನೀನು ನನ್ನಿಂದ ದೂರ ಸರಿದಿದ್ದೀಯೆಆದರೂ ಮೋಡದಅಂಚುಗಳಲಿನಾನು ನಿನ್ನನ್ನು ಕಾಣುತ್ತೇನೆ ಮುಸ್ಸಂಜೆ ಕೆಂಬಣ್ಣದಲಿ ನೆನಪ ಅಲೆಗಳುಓಕುಳಿಯಾಡುವಾಗಲೆಲ್ಲನಿನ್ನ ಮುಂಗುರುಳು ನನ್ನಕಣ್ಣಿನಲಿಇಣುಕಿದಂತೆ ಭಾಸವಾಗುತ್ತದೆ ವ್ಯಾಖ್ಯಾನಿಸುತ್ತೇನೆನಾನು ನಿನ್ನನ್ನು ಮರೆತಿದ್ದೇನೆ ಎಂತಲೇ..ಆದರೆಬಿಟ್ಟು ಹೋದ ಹೆಜ್ಜೆ ಗುರುತುಗಳಹಾದಿ ಮಳೆಗಾಲದಲಿ ಮಿದುವಾಗಿಬೇಸಿಗೆಯಲಿ ಒರಟಾಗಿಬೆರಳಿಗಂಟುವಾಗಅರ್ಧ ಬರೆದಿಟ್ಟ ಕವಿತೆಯೊಂದುಎದೆಯಲ್ಲಿ ಗೂಡುಕಟ್ಟುತ್ತದೆ ಮತ್ತೆ ಇನ್ನೆಂದು ನಿನ್ನ ಭೇಟಿಯಾಗುವುದಿಲ್ಲಎಂದೆ ನಂಬುತ್ತೇನೆ.ಮುಚ್ಚಿ ಎದ್ದು ಹೋದ ಕಿಟಕಿಯಲಿಬೆಳಕ ಗೀರೊಂದು ತಡತಡಕಿ ಬರುವಾಗನಿನ್ನ ಕಣ್ಣ ಮಿಂಚುಇರುಳ ಸರಳುಗಳತೂರಿ ನನ್ನೆಡೆಗೆ ಬಂದಂತೆ ಅನ್ನಿಸುತ್ತದೆ ಮತ್ತೆ ಮತ್ತೆ ನಿನ್ನ ನೆನಪುಗಳಬೇಕೆಂದೆ ದೂರ ಅಟ್ಟುತ್ತೇನೆಅವು ಜಾತ್ರೆಯಲಿ ಕೈ ಬಿಟ್ಟ ಕೂಸಿನಂತೆಬಿಕ್ಕುವಾಗಲೆಲ್ಲಹೆಕ್ಕಿ ಎದೆಯ ಕಪಾಟಿನಲಿ ಬಚ್ಚಿಟ್ಟುಕೊಳ್ಳುತ್ತೇನೆಮತ್ತವು ನಿನಗೆ ಕಾಣದೆದಿಕ್ಕು ತಪ್ಪಿಸುವಾಗನಗುವಿನ ಸವಕಲು ನಾವೆಯೊಂದುತಣ್ಣಗೆ ನನ್ನತ್ತ ತೇಲಿ ಬರುವುದುಕಾಣತೊಡಗುತ್ತದೆ *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಆಪ್ತ ಗೆಳೆಯನ ಸಾವು ವೆಂಕಟೇಶ್ ಚಾಗಿ ಅವನು ನನ್ನೊಂದಿಗೆ ಪ್ರತಿದಿನವೂಶಾಲೆಗೆ ಬರುತ್ತಿದ್ದನನ್ನ ಆಟ ಪಾಠ ಕೀಟಲೆಗಳಿಗೆಅವನು ಸಾಕ್ಷಿಯಾಗಿದ್ದಪಾಪ, ಅವನು ಮೂಗನನ್ನೊಂದಿಗೆ ಮಾತನಾಡದಿದ್ದರೂಭಾವನೆಗಳನ್ನುಅರ್ಥಮಾಡಿಕೊಳ್ಳುವಆತ್ಮಬಾಂಧವನನ್ನಿಂದ ಬಯಸುವುದುನನ್ನ ತುಳಿತವಷ್ಟೇಪ್ರತಿದಿನವೂ ತುಳಿತಕ್ಕೊಳಗಾದರೂಅವನು ಬದುಕಿದ್ದು ನನಗಾಗಿಯೇಅವನ ಕಾಲುಗಳಿಗೆನೋವುಗಳು ಚುಚ್ಚಿದಾಗಅವನೇ ಉಸಿರೇ ಹೋಗುತ್ತಿತ್ತುಆಗಾಗ ಉಸಿರು ನೀಡಿದಾಗಮತ್ತೆ ಬದುಕುತ್ತಿದ್ದಪ್ರತಿದಿನದ ನನ್ನ ಸೇವೆಗಾಗಿ;ನನ್ನ ಭಾರವನ್ನೆಲ್ಲ ಅವನುನಿರಾಕರಿಸದೇ ಹೊರುತ್ತಿದ್ದಮತ್ತೆ ನನ್ನ ಭಾರವನ್ನೂ ಸಹ.ಅವನೊಂದಿಗೆ ನಾನು ಹಂಚಿಕೊಂಡಮಾತುಗಳು ಸಾವಿರಾರುನೀಡಿದ ಮುತ್ತುಗಳೂ ಸಾವಿರಾರುತಾನು ಕಷ್ಟಗಳ ಅಪ್ಪಿದರೂಕ್ಷಣಕ್ಷಣವೂ ನೋವನ್ನುಂಡರೂನನ್ನ ಗಾಳಿಯಲ್ಲಿ ತೇಲಿಸುತ್ತಿದ್ದನಾನೇ ಮಾಡಿದ ಗಾಳಿಪಟದಂತೆ.ಅವನುಂಡ ಬಿಸಿಲುಆ ರೈತನಿಗೂ ದಕ್ಕಿಲ್ಲಮಳೆಯ ಹನಿಗಳ ಸುಖವನ್ನುಪ್ರತಿಭಾರಿಯೂಅನುಭವಿಸುವವನು ಅವನೇಚಂದ್ರ ರಜೆ ಹಾಕಿದಾಗಗೆಳೆಯನ ಹಣೆಯ ಮೇಲೆಅಲ್ಲಲ್ಲಿ ಮೈಮೇಲೆಬಂದು ಕುಳಿತುಕೊಳ್ಳುತ್ತಿದ್ದಸತ್ತ ಹೂವುಗಳುಅವನ ಮುಡಿ ಏರಿದರೂಮಣ್ಣಿಗೆ ಕೆಡವಿ ಮತ್ತೆಬದುಕಿಸುವ ಸಾಹಸ ಅವನದುಅವನು ಉದಾರಿ ನಿಸ್ವಾರ್ಥಿಸ್ವಾಭಿಮಾನಿ ಮತ್ತೆ ಆತ್ಮೀಯ ಸೇವಕದಿನಗಳು ಕಳೆದಂತೆನಾನು ಮಾತ್ರ ಬದಲಾದೆ ಅವನಲ್ಲಆ ವಿರಹವೇದನೆಯೇನೋಅವನನ್ನು ಮಣ್ಣಾಗಿಸಿತು ಆಗುಜರಿ ಅಂಗಡಿಅವನನ್ನು ಸೈಕಲ್ ಎನ್ನಲಾದೀತೇಅದು ನನ್ನ ಗೆಳೆಯನ ಸಾವು ಅಷ್ಟೇ. => ವೆಂಕಟೇಶ ಚಾಗಿ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬೋಧಿ ಭಾವ ರೇಮಾಸಂ ಕರವ ಕೊಡವಿ ಕುಳಿತ ಮನಕೆಹಸಿರು ಹಾಸುವ ತವಕದಲಿಮುಗಿಲಿಗೆ ನೋಟವ ಚೆಲ್ಲಿಕೆಚ್ಚನು ತೋರಿದಿ ನೀನಲ್ಲಿ // ಬೊಗಸೆ ಬೆಳಕು ಹಿಡಿದುಕಲ್ಲ ಮುಳ್ಳ ಬೇಲಿಯ ಹಾರಿಭರವಸೆಯ ಬಂಡೆ ಹೊದ್ದುಸಂದಿನಲಿ ಬಿತ್ತು ಬೀಜ ಹಾರಿ// ವಜ್ರದೇಹಿ ಕಲ್ಲೆದೆಯ ಸೀಳಿಮೆದು ಮೇಣವಾಗಿಸಿ ಅರಳಿಪ್ರಯತ್ನಿಸಿದೆ ಮರಳಿ ಮರಳಿನೋಡುವಂತಾದೆಲ್ಲ ಹೊರಳಿ// ಬುದ್ಧನ ಬೋಧಿ ಭಾವವಾಗಿತಪವ ಗೈಯುತ ಮರೆಯಲಿಸರಿದಾರಿ ದೋರಿದೆ ಸರೀಕರಿಗೆಗೆಲುವಿದೆ ಛಲದ ಬಲದಲಿ// ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

“ನಲಿಯೋಣ ಬನ್ನಿ ಸಾತುಗೌಡ ಬಡಗೇರಿ ನಲಿವಾ ಎಲ್ಲರೂ ಸರಸದಿ ಬೆರೆತುವಿರಸವ ಮರೆತು ಒಂದಾಗಿ.ಈ ಧರೆ ಸ್ವರ್ಗದಿ ಹಾಡಿ ಕುಣಿಯುವಾಐಕ್ಯದಿ ನಲಿದು ಚೆಂದಾಗಿ. ದ್ವೇಷ,ಅಸೂಯೆ, ಸೇಡಿನ ಬೆಂಕಿಮನುಜನ ನೆಮ್ಮದಿ ಕೆಡಿಸುವದು.ಅಶಾಂತಿ ಮನದಲಿ ನೆಲೆಸಿ ದೇಹವರೋಗದ ಭಾದೆಗೆ ತಳ್ಳುವುದು. ಏತಕೆ ಸುಮ್ಮನೆ ಚಿಂತೆಯ ಬಾಳುಮರೆತು ಬಾಳುವ ಚಿಂತೆಯನು.ಈ ಇಳೆ ಸೊಬಗು ಸವಿದು ಉಳಿಸುತಸ್ವಾಗತ ಮಾಡುವ ನಾಳೆಯನು. ವೈರಿಯ ಸ್ನೇಹದ ಮಾತಿನ ಒಳಗಡೆಅಡಗಿದೆ ಬೇರೆಯ ಮಸಲತ್ತು.ಎಚ್ಚರ ನಡೆಯ ಇಡಲು ನಮಗೆಬಾರದು ಕೇಡು ಯಾವತ್ತೂ. ಬನ್ನಿ!ಗೆಳೆಯರೇ ಸಂತಸದಿ ತೇಲುವಾಪ್ರತಿಕ್ಷಣ ಹರುಷದ ಹೊಳೆಯಲ್ಲಿ.ಒಂದೇ ಕುಟುಂಬದ ಸದಸ್ಯರಾಗಿನಲಿವಾ ಭಾರತಮಾತೆ ಮಡಿಲಲ್ಲಿ. *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಭಾವನೆಗಳು ತೇಜಾವತಿ ಹೆಚ್.ಡಿ. ಭಾವನೆಗಳೇ ಹಾಗೆತುಸು ಆಸರೆ ಸಿಕ್ಕರೆ ಸಾಕುಲತೆಯಾಗಿ ಹಬ್ಬಲುಚೂರು ಸ್ಫೂರ್ತಿ ಸಾಕುವಾಹಿನಿಯಾಗಿ ಶರಧಿಯ ಸೇರಲುಹನಿಜಲದ ಸೆಲೆ ಸಾಕುಬೀಜ ಮೊಳೆತು ಅಂಕುರಿಸಲು ನಿಖರ ಸ್ಥಳ ವೇಳೆಯ ಹಂಗಿಲ್ಲಆದಿ ಅಂತ್ಯಗಳಿಲ್ಲಬಣ್ಣ ರೂಪಗಳಿಲ್ಲಲಿಂಗ ಭೇದಗಳಿಲ್ಲ… ಮನಸು ಭಾವಗಡಲುಹೃದಯ ಮಿಡಿತದೊಡಲುಒರತೆ ಉಕ್ಕೇರಲುಹೊಂಗನಸ ಸಿಹಿಹೊನಲು.. ನಿಗ್ರಹಿಸಿದರೆ ಸತ್ತೇ ಹೋಗುವವುರೆಕ್ಕೆಬಂದರೆ ಹಾರಿ ಹೋಗುವವುಬಂದಷ್ಟು ಸಲೀಸಲ್ಲ ಹೋಗಲುಜನಿಸಿ ಮರಣಿಸುವವು ನಗಲು ಅಳಲು ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸ್ವಯಂ ದೀಪ ವಿದ್ಯಾ ಶ್ರೀ ಎಸ್ ಅಡೂರ್ ಏನಾದರೂ ಬರೆಯಬೇಕೆಂಬ ಅಮಲು,ಮತ್ತುಸ್ವಂತಕ್ಕೆ ಸಮಯವೇ ಉಳಿಯದ ಗೃಹಸ್ತಿಕೆಯ ಭಾರ ಹೊತ್ತು,ಇತ್ತ ಪೂರ್ಣ ಗೃಹಿಣಿಯಾಗಿಯೂ ಉಳಿಯದೆ…ಅತ್ತ ಕವಿಯಾಗುವ ಆಸೆಯೂ ಅಳಿಯದೆ…. ಸಾಗಿದೆ ಜೀವನ ರಥ..ಹಲವಾರು ಸವಾಲುಗಳೆಂಬಕುದುರೆಗಳ ಲಗಾಮು ಹಿಡಿದು ….. ಪಳ್ಳನೆ ಮಿಂಚಿ ಮರೆಯಾಗುವ ಕೋಲ್ಮಿಂಚಿನಂತೆಸ್ಪುರಿಸುವ ಒಂದೆರಡು ಸಾಲು ಕವನ ,ಮರೆಯಾಗುವುದು,ಹಿಡಿಯಲಾಗದ ಚಿಟ್ಟೆಯಂತೆಬೆನ್ನಟ್ಟಲಾಗದೆ….ಆ ಕ್ಷಣ ನಿತ್ಯವೂ ಇದೇ ಕಥೆ…ಸಾಗಿದೆ ಗರ್ಭಪಾತನನ್ನ ಭಾವಗಳ ಬಸಿರು ಹರಿದು…… ಹನಿ ಸೇರಿ ಹಳ್ಳ,ಆವಿ ಘನೀಕರಿಸಿ ಮೋಡ ಆದಂತೆಬದುಕು ಉಣಿಸಿದ ಹದವಾದ ಭಾವಗಳ ಪಾಕಕಟ್ಟಿತ್ತುಬಿಸಿಯುಂಡ ಹಾಲಿನ ಮೇಲೆ ಮೃದುವಾದ ಕೆನೆ ತೇಲುವಂತೆ,ಮೈತುಂಬ ಮುಳ್ಳು ತುಂಬಿಕೊಂಡ ಗಿಡದಲ್ಲೂ ಹೂವು ಬಿಟ್ಟಿತ್ತು. ಸಾಕಿನ್ನು ವೃಥಾ ಪ್ರಲಾಪ..ಬೆಳಕಿಗಾಗಿ ಅನ್ಯರ ಕಾಯದೇನಿಂತಿರುವೆ ಕೈಯಲ್ಲೊಂದು ಪುಟ್ಟ ಹಣತೆ ಹಿಡಿದು… **************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬರಿ ಮಣ್ಣಲ್ಲ ನಾನು….! ಶಿವಲೀಲಾ ಹುಣಸಗಿ ಬಯಕೆಯೊಂದು ಮನದಲವಿತು ಕಾಡುತ್ತಿತ್ತು…ಮದ ತುಂಬಿದೆದೆಯಲಿ ಹದವಾಗಿ ನಾಟಿ ಮೀಟುತ್ತಿತ್ತುಹೃದಯ ಬಡಿತದ ಗೀಳೊಂದು ಸಂಕೋಲೆಯತೊಡರಾಗಿ,ನಿನ್ನರಸುವ ಗಾಳಿಗುಂಟ ದಿಕ್ಕಾಪಾಲುನುಸುಳಿದಾಗೆಗಲೆಲ್ಲ ಸದ್ದಿಲ್ಲದೆ ಮುಳ್ಳುಗಳು ಚುಚ್ಚಿಪರಚಿದ ಗಾಯಕ್ಕೊಂದು ಮುಲಾಮುಹಿತವಾಗಿ ಅಪ್ಪಿದ ಗಳಿಗೆಗಳು,ತೀವ್ರತೆಗೆ ಸಾಣೆ ಹಿಡಿದು ತನುವಿನೊಳಗೆ ಭಾವೋದ್ರೇಕದ ಸುಳಿಗಾಳಿಮುತ್ತಿನ ಹನಿಗಳಿಗೆ,ಬಯಲಾಗಿ ಮೈದೆಳೆದಿದೆಹೊನಲು ಬೆಳಕಿನಾರ್ಭಟದಲಿ ಪ್ರೇಮೋತ್ಸವವಿದೆಸಂಭ್ರಮಕ್ಕೊಂದು ಮಿತಿಯಿದೆ ನಿಧಾನಿಸು,ಬಿಕರಿಯಾಗದಿರಲಿ ಸೆಳೆತದಾ ಬಿಗಿ ನಂಟುಬರೀ ಮಣ್ಣಲ್ಲ ನಾನು,ನೀ ಬಿತ್ತುವ ಬೀಜಕೆಕಾಪಿಡುವ ಜೀವದುಸಿರಿನ ಆಸರೆಒಡಲೊಳು ಬಂಧಿಸಿ ನಿನ್ನ ಮರುಸೃಷ್ಟಿಗೆಎನ್ನೆದೆಯು ಯುಗಗಳಿಗೆ ಸಾಕ್ಷಿಯಾಗಿದೆನಿನಗಾಗಿ ಹಂಬಲಿಸದ ದಿನಗಳಿಲ್ಲನೀನಿಲ್ಲದೆ ಹೂ ಅರಳಿಲ್ಲ,ಗುಬ್ಬಿ ಗೂಡು ಕಟ್ಟಿಲ್ಲ,ಜಗವೆಲ್ಲ ಮಂಕಾಗಿಹುದು ನೀ ಅರಿತಿಲ್ಲಮುಂಗಾರಿನ ಅಭಿಷೇಕಕೆ ಹಾತೊರೆದುಅಮೃತ ಧಾರೆಯ ಮೊದಲ ಸ್ಪರ್ಶದಾ ಸಿಹಿಗರಿ ಬಿಚ್ಚಿ ಕುಣಿವ ಮನದಿಂಗಿತ ಚಿಗುರಿಒಂದು ಹನಿಯು ಕೈ ಜಾರದಂತೆಗುಟ್ಟಾಗಿ ಬಚ್ಚಿಡಲು ಸಿದ್ದವಿದೆ ತನುವಿಂದುಪ್ರಳಯವಾಗಲಿ,ಪ್ರವಾಹ ಬರಲಿ,ಸಾಗರವುಕ್ಕಲಿಸಂಗಮದ ಪರಮಾವಧಿಗೆ ದಿಕ್ಕೊಂದಾಗಲಿಇಂಚಿಂಚು ಭರ್ತಿಯಾಗಲಿ ಒಲವಿನ ಆಗರನನಗೊಂದು ಬಯಕೆಯ ಮಹಾಪೂರಸೀಮಂತಕೆ ಸಜ್ಜಾಗುವ ಕಾತುರದ ಗಾನಹಸಿರ ತೋರಣ ಕಟ್ಟಿ ಇಳೆಯ ಆಲಿಂಗನನಾಚಿ ನೀರಾಗಲಿ ಭವದ ಸುಖವೆಲ್ಲಭೂಮಿ ಆಕಾಶಗಳ ಮಿಲನದಾ ಅಂತ್ಯದಲ್ಲಿಮೇಘಗಳ ಸರಮಾಲೆಗೆ ಕೊರಳೊಡ್ಡಿಹೊತ್ತಿಗೊಂದು ಮುತ್ತಿನ ಸೆರಗೊಡ್ಡಿ *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಿರ್ವಾಣದೆಡೆಗೆ ಎಮ್.ಟಿ. ನಾಯ್ಕ. ಹೆಗಡೆ ಹೋಗಿ ಬಂದವನು ನಾನುನಿರ್ವಾಣದೆಡೆಗೆಸರ್ವ ಚೈತನ್ಯ ಶೂನ್ಯದಂಚಿಗೆ ಕೋಟೆ, ಕಿರೀಟ, ಕೀರ್ತಿಗಳನೆಲ್ಲಾತೊರೆದು ಸಾಗುವ ದಾರಿಅರಸು ಆಳುಗಳನೆಲ್ಲಾ ಕೊನೆಗೆಕೂಡಿಸುವ ಕೂಡುದಾರಿ ….! ನಡೆದ ಬಸವಣ್ಣಕಲ್ಯಾಣ ಕ್ರಾಂತಿಯ ನಡುವೆ ,ತನ್ನ ಶಿಲುಬೆ ತಾ —ಹೊತ್ತು ನಡೆದ ಯೇಸುನಿರ್ವಾಣದೆಡೆಗೆ . ಕಾಲಪುರುಷನಾಣತಿಯಂತೆಲ್ಲಾತೊರೆದು ಹೊರಟಲೋಕದ ‘ ಶ್ರೀ ರಾಮ ‘ ,ಜಗನ್ನಾಟಕ ಸೂತ್ರಧಾರಿಯಗರಿಮೆ ಹೊತ್ತವ —ಕಾನನದ ನಡುವೆ ವ್ಯಾಧನ‘ ಶರಕೆ ‘ ಹೊರಟನಲ್ಲಿಂದಲೇನಿರ್ವಾಣದೆಡೆಗೆ ಕ್ಷಣಭಂಗುರದ ಬದುಕಿನಕತೆಯ ತೆರೆದಿಡುವ ಗಳಿಗೆಜೀವ ಜಗದಗಡಿಯಾರದ ಗುರುತುನಿರ್ವಾಣದ ಗಳಿಗೆ ದಾಟಿ ಉಳಿದವರಿಲ್ಲ ಆ ಗಳಿಗೆ..! **********

ಕಾವ್ಯಯಾನ Read Post »

You cannot copy content of this page

Scroll to Top