ಕಾವ್ಯಯಾನ
ವೈದ್ಯರ ಚುಟುಕುಗಳು ಡಾ ಅರುಣಾ ಯಡಿಯಾಳ್ 1. ಅದೇನು ವೈದ್ಯರ ಫೀಸು ಈ ಪಾಟಿ ದುಬಾರಿ!ಹಣ ಮಾಡುತ್ತಾರೆ ರೋಗಿಯ ರಕ್ತ ಹೀರಿ ಹೀರಿ!”“ ಅಲ್ರೀ,ನಮ್ಮ ಜೀವನುದ್ದಕ್ಕೂ ಇರುವುದು ಬವಣೆಯೇ!ರಕ್ತ ಹೀರಿ ಬದುಕ ಸಾಗಿಸಲು ನಾವೇನು ತಿಗಣೆಯೇ??!?” 2. ಡಾಕ್ಟರನ ಕಾರು ಡಾಕ್ಟರಿನಂತೆಯೇ ಇದ್ದರೆ ಒಳ್ಳೇದು!ಆರಕ್ಕೆ ಏರಬಾರದು;ಮೂರಕ್ಕೆ ಇಳೀಬಾರದು!ಭಾರೀ ಶೋಕಿಯಾದರೆ ಕಾಯುತ್ತದೆ ಜನರ ಕಣ್ಣು..ತೀರಾ ಕಳಪೆಯಾದರೆ ತಿನ್ನಬೇಕಾದೀತು ತಿರಸ್ಕಾರದ ಹಣ್ಣು 3. ಐಷಾರಾಮಿ ಕಾರು ,ಜೀವನ ಬೇಕೇ??ಹಾಗಾದರೆ ವೈದ್ಯರೊಂದಾಗದಿರಿ ಜೋಕೆ!!ಈ ವೃತ್ತಿಯಲ್ಲೂ ಗಳಿಸಬಹುದು ಹೇರಳ ಹಣ…ಎದುರಿಸಬೇಕಾದೀತು ಸಮಾಜದ ಉರಿಗಣ್ಣು;ಗೊಣಗೊಣ!! 4. ರೋಗ ,ರೋಗಿಯ ಶ್ರುಶ್ರೂಷೆಗೆ ಬೇಕು ವ್ಯದ್ಯಕೀಯ ಚಾಕರಿ ..ಆದಾಗ್ಯೂ ಸೇವೆಗೆಯ್ಯುವವರ ಜೇಬಿಗೇ ಕತ್ತರಿ !“ ಇದು ನ್ಯಾಯವೇ ?ಧರ್ಮವೇ ?” ಎಂದು ಹಲುಬದಿರಿ..ಅಸಮತೆ , ಅನ್ಯಾಯ ಜಗದ ರೀತಿಯೆಂದರಿತು ತೆಪ್ಪಗಿರಿ! 5. ನಾವೆಲ್ಲಾ ಹೇಳಲು ತಯಾರು “ ವೈದ್ಯೊ ನಾರಾಯಣ ಹರಿ …ಆದ್ರೂ ಡಾಕ್ಟ್ರು ಫೀಸ್ ಕೇಳುವುದು ಹೇಗೆ ಸರಿ ???”ಯಮನೆಂದ ನಕ್ಕು -“ಹೌದೌದು ,ಆರೋಗ್ಯಕ್ಕಿಂತ ಮುಖ್ಯ ಕಾಸು …ಅಲ್ಲಿರುವುದು ಸುಮ್ಮನೆ ..ಇಲ್ಲಿದೆ ನಿಮ್ಮನೆ ..ಬಂದುಬಿಡಿ..ಬೇಡ ಪಾಸು! ********









