ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ನೇಪಥ್ಯ ಎಮ್ . ಟಿ . ನಾಯ್ಕ.ಹೆಗಡೆ ಆ ನೀಲಿ ಬಾನು, ಮಿನುಗು ತಾರೆಬೆಳೆದು ಕರಗುವ ಚಂದ್ರಈ ಭೂಮಿ – ಅದರ ಕಣಿವೆಮೊರೆವ ಕಡಲು….ಆ ತಂಗಾಳಿ, ಮುಂದೆ ಬಿರುಗಾಳಿನದಿಯ ಓಟ, ಆ ನಾದದುಂಬಿ ಗಾನಗಾಳಿಗಂಟಿದ ಬದುಕಿನಎಕ್ಕೆ ಬಿತ್ತಗಳೆಲ್ಲಾಬಿತ್ತುತ್ತಾ ಹೊರಟದ್ದುಯಾವ ಕತೆ ? ಯಾರ ಕತೆ ? ಗತಿಸಿದ ಸಾಮ್ರಾಜ್ಯಕರಗಿದ ಅರಮನೆಉರುಳಿದ ಕಿರೀಟಕ್ಕೆ–ಲ್ಲ, ಹಿನ್ನೆಲೆ ಏನು ಕತೆ ? ಬಂದ ಗುರುತುಗಳಿಹುದುನಿಂದ ಗುರುತುಗಳಿಹುದುಹೋದ ಗುರುತುಗಳಿಹುದುಆದರೆ —ಬಂದವರು ಬಂದಂತೆಹೋದುದು ಯಾಕೆ ? ಆ ಬಾನು , ಈ ಭೂಮಿ ,ಅದರ ಹೊನ್ನುಮತ್ತೆ ಮುಕುಟಎಲ್ಲಾ ತೊರೆದೇಹೋದುದು ಯಾಕೆ ?ಇಲ್ಲ … ಮರೆತೇ ಹೋದರೆ ? ಈ ಬಯಲಲಿ ಬದುಕ ಹರಡಿಕತೆ ಬರೆದವರು ಯಾರು ?ಬರೆವವರು ಯಾರು …? *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ರಸಧಾರೆ, ಮತ್ತಿತರೆ ಕವನಗಳು ವಸುಂಧರಾ ಕದಲೂರು ಹಸಿರೆಲೆ ಕಾನನಹಸುರಲೆ ಮಲೆಯೋ ಹೊಸ ಬಗೆ ನರ್ತನಹರುಷದ ನೆಲೆಯೋ ಹುಮ್ಮಸಿನ ಮನವೋಹುರುಪಿನ ಚೆಲುವೋ ಹರಸುವ ಖುಷಿಗೆಹಾತೊರೆವ ಕ್ಷಣವೋ ಸಂಭ್ರಮ ಸಂತಸಮಳೆ ಹನಿ ಜೊತೆಗೆ ಸುರಿದಿದೆ ಹರಿದಿದೆಜೀವರಸಧಾರೆಚೈತನ್ಯದೆಡೆಗೆ ‘ಮತ್ತಿತರೆ’ ಅತ್ತಲೂ ಇತ್ತಲೂಸುತ್ತಲೂ ಕತ್ತಲೆ ಬತ್ತಿದ ಹೊಳೆಬಾರದ ಮಳೆಬಿತ್ತದ ಇಳೆಕಟ್ಟಿದೆ ಕೊಳೆಸುಟ್ಟಿದೆ ಕಳೆ ಕದಡಿದ ಕನಸಿಗೆಹೊಸತರ ಕನವರಿಕೆ ಬೇಸರದ ಭಾರಕೆಬರಿ ಭಾವ ನಿಸೂರ ಇತ್ತಲಾಗಿ ಹೊತ್ತೂಹೋಗದು ಅತ್ತಲಾಗಿಚಿತ್ತವೂ ಸ್ವಸ್ಥವಾಗದು ಹಾಗಾಗಿಬೇಕಿಲ್ಲ ಯಾವುವೂಇತರೆಇನ್ನಿತರೆ ಮತ್ತಿತರೆ. ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆ. ದೀಪಾ ಗೋನಾಳ ಏಷ್ಟವಸರಅದೆಷ್ಟು ಗಡಿಬಿಡಿಎಷ್ಟೇ ಬೇಗ ಎದ್ದರೂತಿಂಡಿತಿನ್ನಲೂ ಆಗುವುದೆ ಇಲ್ಲಅನುಗಾಲ ಒಳ ಹೊರಗೆ ಗುಡಿಸಿಹಸನ ಮಾಡುವುದರಲ್ಲೆಅರ್ಧಾಯುಷ್ಯ ,,,ತಿಂದರೊ ಇಲ್ಲವೊ..!?ಕಟ್ಟಿಕೊಟ್ಟ ಡಬ್ಬಿ ಇಟ್ಟುಕೊಂಡರೊ ಇಲ್ಲವೊ..!?ತೊಳೆದ ಬಾಟಲಿಗೆ ನೀರು ತುಂಬಿದ್ದೆ ಒಯ್ದರೊ ಇಲ್ಲವೊ..!?ಹಾಲಿನ ಪಾತ್ರೆಗೆ ಮುಚ್ಚಿದೆನೊ ಇಲ್ಲವೊ..!?ಮೊಸರು ಫ್ರಿಜ್ಜಿಗೆ ದಬ್ಬಿದೆನೊ ಇಲ್ಲವೊ..!?ಬದುಕೆಲ್ಲ ಉದ್ಘರಾದ ಹಾರ..ದಾರಿಯ ತುಂಬ ಹೋಯ್ದಾಟಮನಸ್ಸಿನ ಮಾತು ಕಿವಿಗೆ ಕೇಳುವಷ್ಟು ದೀರ್ಘ ಆಲೋಚನೆ ಒಳಗೊಳಗೆ..ಜೋಲಿ ಹೊಡಿಯುವ ಬಸ್ಸಿನಲ್ಲಿ ಎದುರಿಗೆ ನನ್ನಂತೆ ಅವಸರಕ್ಕೆಎದ್ದೋಡಿ ಬಂದವಳು ಹೇಳುತ್ತಾಳೆ,ಕುಂಕುಮ ಹಚ್ಚೆ ಇಲ್ಲ!!ಓಹ್! ಹೌದು ಕನ್ನಡಿ ಮುಂದೆ ನಿಲ್ಲಲೇ ಇಲ್ಲ, ನನ್ನ ನಾನು ನೋಡಿಕೊಂಡುಆಗುವುದಾದರೂ ಏನಿದೆಸೀಟು ಸಿಕ್ಕಮೇಲೆ ಬ್ಯಾಗಿನ ತುಂಬ ತಡಕಾಡಿ ಒಂದು ಬಿಂದಿಹಣೆಗೇರಿಸಬೇಕುಕಿಟಕಿ ಗಾಜಿನಲ್ಲೊಮ್ಮೆ ಮಸುಕುಮೊಗ ನೋಡಿಕೊಳ್ಳಬೇಕುಮತ್ತಿಳಿದು ಓಡಬೇಕುಮೊಳೆಹೊಡೆದ ಚಪ್ಪಲಿಗೆ ನೋವಾಗದಂತೆ ಪೂರ್ತಿ ಪಾದ ನೆಲಕ್ಕೂರದೆ ಹಕ್ಕಿಯಂತೆ ಹಾರಿಹಾರಿಕಛೇರಿ ಮೆಟ್ಟಿಲೇರಬೇಕು ಬಂದ ಕೂಡಲೆ ಮತ್ತೊಮ್ಮೆ ಸೊಂಟದ ಮೇಲಿನ ಸೀರೆ ಸರಿ ಮಾಡಿಕೊಂಡೆ ಕೂಡಬೇಕುಒಂದಿನಿತು ಮಗ್ಗಲು ಕುಳಿತವರಮತಿಭಂಗವಾಗದಂತೆ ಹೊಟ್ಟೆ ಚುರ್ ಎಂದದ್ದುನನಗೆ ಕೇಳಿಸಿಯೆ ಇಲ್ಲವೆಂಬಷ್ಟುಗಂಭೀರವಾಗಿ ಕುಳಿತಾಗಲೆಅವಳು ಎದ್ದು ಬಂದುನಾನು ಇಂದು ತಿಂಡಿ ತಿನ್ನಲಿಲ್ಲಡಬ್ಬಿಗೆ ಹಾಕಿಕೊಂಡು ಬಂದಿದ್ದೇನೆಬಾ ಎಂದು ಕೈ ಹಿಡಿದು ಜಗ್ಗಿ ಜಭರ್ದಸ್ತಿಲೆ ಹೊಟ್ಟೆಗೆ ಹಾಕುತ್ತಾಳೆ ಎರಡು ಹಿಡಿ ಎರಡು ಜಡೆ ಎಂದೂ ಕೂಡುವುದಿಲ್ಲ !ಹೆಣ್ಣಿಗೆ ಹೆಣ್ಣೆ ಶತ್ರು.. ಎಂಬುವರಮಾತು ಇಲ್ಲಿ ಶುದ್ಧ ಸುಳ್ಳುದುಡಿಮೆಗೆ ಟೊಂಕ ಕಟ್ಟುವ ಹೆಂಗಳೆಯರ ಹಸಿವುಹೆಂಗರುಳಿಗಿಲ್ಲಿ ಚೆಂದ ಅರ್ಥವಾಗುತ್ತದೆ..ನಮ್ಮ ಟೊಂಕದ ಮೇಲಿನ ಸೀರೆಜಾರಿದ್ದನ್ನಷ್ಟೆ ನೋಡುವಮೀಸೆಗಳಿಗೆ ಇದು ಅರ್ಥವಾಗದು.. ***********

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಕಾವ್ಯಸಂಗಾತಿ

ಗಝಲ್ ಬಾಗೇಪಲ್ಲಿ ಕೃಷ್ಣಮೂರ್ತಿ ಬ್ರಹ್ಮಾಂಡದಿ ನೀನು ತೃಣಅದಕೆ ನೀ ಇರುವೆ ಋಣ ಹೇಗೆ ತೀರಿಸುವೆ ಅದನುಯೋಚಿಸು ಒಂದು ಕ್ಷಣ ಸದಾ ಸಲಹಲು ನಿನ್ನಬದಲಾಗಿಸು ನಿನ್ನ ಗುಣ ಅತಿಯಾಸೆಯಿಂದ ನೀನುಮಾಡಿರುವೆ ಎಲ್ಲಾ ರಣ ಸಿಕ್ಕ ಸಿಕ್ಕಲ್ಲೆಲ್ಲಾ ಅಗೆದುಮಾಡಿರುವೆ ಅದಕೆ ವ್ರಣ ಪರಿಸರ ರಕ್ಷಣೆ ಆಗಬೇಕುಸೇರು ನೀನು ಅದರ ಬಣ ಕ್ಷಮೆ ಎನೆ ಭೂಮಿ’ಮಂಕೇ’ಸಕಲರೂ ತೊಡಬೇಕು ರಕ್ಷಣೆಗೆ ಪಣ (ಚೋಟಿ ಬೆಹರ್ ರಚಿಸುವ ಯತ್ನ) **********

ಕಾವ್ಯಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಬದುಕು ಮತ್ತು ಬಣ್ಣಗಾರ ನೂರುಲ್ಲಾ ತ್ಯಾಮಗೊಂಡ್ಲು ಬದುಕು ಮತ್ತು ಬಣ್ಣಗಾರ ಹೊರಗೆ ಎಷ್ಟೊಂದು ಗೊಂದಲ, ಗಲಭೆ, ಚೀರಾಟ ಹುಟ್ಟು ಹಾಕಿದೆಪಾರ್ಲಿಮೆಂಟ್ ನ ಕೊಣೆಗಳು ಮೌನದ ಜಪದಲ್ಲಿ ಮುಳುಗಿವೆಯೋ ?ಇಲ್ಲ , ಹಾಗೆ ಆಗಲು ಸಾಧ್ಯವಿಲ್ಲಜೀವಮಿಡಿತದ ಸದ್ದು ಅಷ್ಟು ಬೇಗ ಅಳಿದುಹೋಗದುನಾನು ನನ್ನಂಥಹ ಲಕ್ಷ ಲಕ್ಷ ಎದೆಗಳಲಿ ಜೀಕುತ್ತಿರುವ ರಕ್ತ, ದಂಗೆ ,ಕ್ರಾಂತಿ ,ಬಂಡಾಯ ದನಿ ಕಮರಿ ಹೋಗದು ಕಾಲಭೈರನ ಹಾದಿ ಮುಗಿಲು ಹರಿಯೊವರೆಗೂ ಹಾದಿದೆರಂಗದ ಮರೆಯಲಿ ನಿನ್ನ ಮುಖವಾಡದ ವ್ಯಂಗ್ಯ ನಗೆಬೋಳೆ ಶಂಕರನ ಕಥಿತ ಕಥನ !ನಾಟಕಾಂಕಕ್ಕೆ ನೂರೆಂಟು ನೆಪದ ಪಾತ್ರ ಈಗ ನಿನ್ನಿಂದ ಸಾಧ್ಯ… ದೂರಿದಷ್ಟು ದುಬಾರಿಯಾದ ಬೈಗಳುಆದರೆ ಪೆಟ್ರೋಲ್ , ಗ್ಯಾಸ್, ಈರುಳ್ಳಿಗಿಂತ ಹೆಚ್ಚೇನಲ್ಲಜನರ ಸಂಕಟ ,ತಾಳ್ಮೆ , ಸಾವು ನೋವುಗಳ ಪಾತ್ರ ನಿಜದ ರಂಗದಲ್ಲಿ ರಣ ರಣಿಸುತ್ತಿವೆನೀನು ಮಾತ್ರ ಗೋಸುಂಬೆ ಬಣ್ಣಧಾರಿ !ನಿನಗೆ ಮಣ್ಣ ಕುಲದ ಬದುಕಿನ ಪಾತ್ರ ತಿಳಿಯದುಏಕೆಂದರೆನೀನು ಬಣ್ಣ ಕಲಸಿ ವರೆಸಿ ಈಗನೀನೇ ಮೆತ್ತುಕೊಂಡವನುಬಣ್ಣಗಳ ಬಣ್ಣನಿಯ ಮಾತಷ್ಟೇ ಆಡುವ ನೀನೇನುಸೂತ್ರಧಾರನೇನಲ್ಲನಿನ್ನ ಬಣ್ಣ ಬಣ್ಣ ತರ್ಕದ ಮುಖವಾಡ ಕಳಚಿಸಾಧ್ಯವಾದರೆ ಹೊರಗೆ ಬಾಇಲ್ಲ ಬಣ್ಣ ಬಳಿದುಕೊಂಡೇ ಉಳಿ…ನಾಳೆ ಮುಂಗಾರಲಿ ಬಣ್ಣ ಕೊಚ್ಚಿಹೋಗುವವರೆಗೂಈಗ, ಬಣ್ಣಗಾರನ ನಿಜದ ಬಣ್ಣ ಬಯಲಾಗಿದೆ ***********

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ದೀಪಾಜಿ ಬದುಕು ಬಯಲಾಗಿದೆ ಬಾಳು ಹಣ್ಣಾಗಿದೆ ಬೇಕೆ ನಿನಗೀಗ ದೀಪದೇಹ ಬೆಂಡಾಗಿದೆ ಮನವೂ ಮಾಗಿಹೋಗಿದೆ ಬೇಕೆ ನಿನಗೀಗ ದೀಪ ಸುತ್ತಲು ಆವರಿಸಿ ನಿಂತ ಮಬ್ಬುಗತ್ತಲಿಗೆ ಎಷ್ಟೆಣ್ಣೆ ಸುರಿವೆಬಾಯ್ತುಂಬಿಕೊಂಡ ಗಾಳಿ ಉದುವ ದ್ವೇಷಿಗಳಿಗೆ ನಂಜಿದೆ ಬೇಕೆ ನಿನಗೀಗ ದೀಪ ಒಂದಿಷ್ಟು ಮೆಟ್ಟಿಲಾಚೆ ಬಾಗಿಲಿಲ್ಲದ ಬದುಕೊಂದಿದೆಸುತ್ತೆಲ್ಲ ಸಣ್ಣಗೆ ಮಳೆ ಇದೆ ದೀವಟಿಗೆ ಕುಡಿ ಮೇಲೆ ಅಂಗೈ ಹಿಡಿದೆ ಬೇಕೆ ನಿನಗೀಗ ದೀಪ.. ಕೂಸೆರಡು ಕೈಹಿಡಿದು ಪ್ರೇಮದಾರಿ ತೋರಿಸುತಿವೆಮುಳ್ಳ ಕಣಿವೆಯ ಮೇಲೆ ಮಮತೆಯ ಸೇತುವೆ ಕಟ್ಟಲಾಗಿದೆ ಬೇಕೆ ನಿನಗೀಗ ದೀಪ.. ಗಂವ್…ಎನ್ನುವ ಯೌವನವಿಲ್ಲ ಹುಚ್ಚೆಬ್ಬಿಸುವ ಕಾಮದ ತಹತಹಿ ಇಲ್ಲಇದ್ದುದೊಂದೆ ವಾತ್ಸಲ್ಲ ಹಿಡಿಯಷ್ಟು ಒಲವು ಇದೆ ಬೇಕೆ ನಿನಗೀಗ ದೀಪ… *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯನ

ಕಾಪಾಡಬೇಕಿದೆ ರಾಮಕೃಷ್ಣ ಸುಗತ ನೀವು ಆಯ್ಕೆ ಮಾಡಿದ್ದೀರಿ ಫಲವತ್ತಾದ ಮಣ್ಣನ್ನುಅಷ್ಟೇ ಆಸ್ಥೆಯಿಂದ ಬೆಳೆಸಿದ್ದೀರಿ ಹೂವಿನ ತೋಟವನ್ನುಕರೆಸಿದ್ದಿರೇನು ನಿಮ್ಮದೇ ದೇವಲೋಕದ ವರ್ಣಕರನ್ನುಎಷ್ಟು ಬಣ್ಣ ಬಣ್ಣದ ಹೂಗಳುತಿಳಿಯುತ್ತಿಲ್ಲ ಅವುಗಳ ವಾಸನೆನೀವು ಆಯುವಂತರು ಸ್ವಾಮಿಎಂದೋ ಕೊಯ್ದು ಬಿಟ್ಟಿದ್ದೀರಿ ನಮ್ಮ ಮೂಗನ್ನು ಮನೆಯ ಹಿಂಭಾಗದಲ್ಲಿ ಹುಲ್ಲು ಬೆಳೆದಿದ್ದಕ್ಕೆನೀವು ದೂರು ಕೊಡುತ್ತೀರಿನೀವು ಪುಣ್ಯವಂತರು ಸ್ವಾಮಿನೀವು ಕಾಲಿಟ್ಟು ಹೋದ ನಮ್ಮದೇ ಓಣಿಗಳಲ್ಲಿಎಲ್ಲೋ ಮೂಲೆಯಲ್ಲಿ ಚಿಗುರುವ ಚಿಗುರಿಗೂಅರ್ಜಿ ಹಾಕುತ್ತಿದ್ದೇವೆ ಅನ್ಯಗ್ರಹ ಜೀವಿಗಳಂತೆ ಪ್ರೀತಿಯೆಂದರೆ ಕುದಿಯುವ ನಿಮ್ಮನ್ನುಚಳಿಗಾಲದ ತಂಪು ರಾತ್ರಿಗಳು ಏನೆಂದು ಕಾಡಿಯಾವುನೀವು ಆರೋಗ್ಯವಂತರು ಸ್ವಾಮಿನಾವು ಬೆಚ್ಚಗೆ ಮಲಗಿದರೆನಿದ್ರಾಹೀನತೆಯಿಂದ ಬಳಲುತ್ತೀರಲ್ಲಾಕನಿಷ್ಠ ನಮ್ಮ ಮನೆಗೆ ಬೆಂಕಿ ಹಚ್ಚುವಾಗಲಾದರೂಬಿಸಿಲಿಗೆ ನಿಂತುಕೊಳ್ಳಿ ಸರಿ ನಾನಿನ್ನು ಬರುತ್ತೇನೆಎದೆಯಲ್ಲಿ ಉಗಿಯ ಬಂಡಿಯೊಂದು ಓಡುತ್ತಿದೆನಿತ್ಯವೂ ನೋವು ಹೊತ್ತು ಸಾಗುತ್ತಿದೆಯಾರೋ ಕಟ್ಟಿಟ್ಟ ನಿಲ್ದಾಣಕ್ಕೆನನ್ನ ಹೆಸರಿಟ್ಟಿದ್ದಾರೆಇದೀಗ ನಾನು ಇಳಿಯಲೇಬೇಕಿದೆಹಳಿಯನ್ನೇ ಕಸಿವವರ ಮಧ್ಯೆ ಸರಕನ್ನು ಕಾಪಾಡಬೇಕಿದೆ **********

ಕಾವ್ಯಯನ Read Post »

ಕಾವ್ಯಯಾನ

ಕಾವ್ಯಯಾನ

ನಿನ್ನ ನೆನಪೆಂದರೆ… ವಸುಂಧರಾ ಕದಲೂರು ಆಗ ನಿನ್ನ ನೆನಪೆಂದರೆ, ಬೇಕಾದ ಮಳೆಯಂತೆತುಂಬಿಕೊಳ್ಳಲು ಹಳ್ಳಕೊಳ್ಳಜಲಾಗರ ಸಾಗರ;ಮುತ್ತುಹವಳ ಸಂಗ್ರಹಾಗಾರ. ಅಚ್ಚಬಿಳುಪಿನ ಕಾಗದದಲಿನೆಚ್ಚಿನ ಅರ್ಥ ತುಂಬಿದ ಭಾವಕೋಶಅಚ್ಚುಕಟ್ಟಾಗಿ ಅಚ್ಚು ಮಾಡಿಸಿದಪದಕೋಶ.. ಈಗ ನಿನ್ನ ನೆನಪೆಂದರೆ, ಅಕಾಲದಲ್ಲಿ ಮಳೆಗರೆದು ಆದರಾಡಿ ರಸ್ತೆಅರ್ಥಕೋಶದಲಿ ಸೇರಿಬಿಟ್ಟಖಾಲಿ ಹಾಳೆ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಒಂದು ಕವಿತೆ ಎಂ.ಎಸ್.ರುದ್ರೇಶ್ವರ ಸ್ವಾಮಿ (he ran away from there, he preferred her. she shouted – listen, I am older than you… was he too young for her?) ನಿನ್ನೆ ಮೊನ್ನೆಯಿಂದ ಮುನಿದುದೂರವೇ ಇದ್ದಅವಳು, ಮತ್ತೆ ಬಂದು ಮಕ್ಕಳ ಆಟಆಡೋಣವಾ? ಎಂದು,ಮಗುವಿನ ಹಾಗೆ ಕೇಳಿದಳು. ಭಾಷೆ, ಮಾತಿನಅರ್ಥದ ಜಾಡು ಹಿಡಿದು ವಿಶ್ಲೇಷಣೆಗೆಸಿದ್ಧವಾಯಿತು; ಮಗುವಿನಹಾಗೆ, ಮಗುವಲ್ಲ ಅವಳು. ಮನಸ್ಸು ನದಿ-ಯ ಹಾಗೆ ಹರಿಯುತ್ತಲೇ ಹಿಂತಿರುಗಿನೋಡಬಲ್ಲದು.ಗೌರಿಶಂಕರದ ಕನಸುಕಾಣುತ್ತ ಮಳೆಯಾಗಿ ಇಳೆ ಸುತ್ತಬಲ್ಲದು. ಮಕ್ಕಳ ಆಟ ಆಡೋಣವಾ?ಮತ್ತೆ ಕೇಳಿದಳು. ಒಂದು ಮೆಟಾಫರ್-ಗಾಗಿ ಕಾಯುತ್ತಿದ್ದನನಗೆ, ಗತಿಸಿದದಿನಗಳು ಕಣ್ಣ ಮುಂದೆಥಕ ಥಕನೆಕುಣಿಯಹತ್ತಿದವು. ಅವಳು ನನಗಿಂತಒಂದು ವರ್ಷಕ್ಕೆದೊಡ್ಡವಳು, ಐದು ಇರಬಹುದು,ನನಗೆ ನಾಲ್ಕು.ನಮಗೆಲ್ಲ ಅವಳೇ ಲೀಡರ್. ಅವಳ ಜೊತೆಹುಡುಗಿಯರು; ನಾನಿದ್ದಲ್ಲಿಹುಡುಗರು. ಅದಕ್ಕೇಅವಳು ನನ್ನನ್ನೇಕೇಳಿದ್ದು. ಮದುವೆ-ಆಟ ಆಡೋಣ, ಎಂದು. ಬಟ್ಟೆಯಲ್ಲಿ ಗೊಂಬೆ-ಮಾಡಿ, ಆಟ ಶುರು…ನೀನು ಮದುವಣಿಗ,ಗೌರಿ ಮದುವಣಗಿತ್ತಿ, ಎಂದು ಹೇಳುತ್ತ,ಕೈ-ಹಿಡಿದು ನಮ್ಮಿಬ್ಬರನ್ನೂ ಕೂರಿಸಿಅರಿಸಿನದ ನೀರು-ಹಾಕುವ ಶಾಸ್ತ್ರಶುರು ಆಗುತ್ತಿದ್ದಂತೆ, ಅಲ್ಲಿಂದ ಎದ್ದು, ನೀನುಹೆಂಡತಿ ಆಗುವುದಾದರೆ,ಸರಿ. ಇಲ್ಲ, ನಾನು ಆಟಕೆಡಿಸುತ್ತೇನೆಎಂದು, ಸಿಟ್ಟಿನಿಂದ ಅವಳಿಗೆ ಹೇಳಿ ಕಾಲುಕಿತ್ತೆ. ಕಿರುಚಿ ಕೂಗಿದಳು, ನಾನು –ದೊಡ್ಡೋಳು ಕಣೋ, ನಿನ್ನ ಹೆಂಡತಿಆಗುವುದಕ್ಕೆ…. *********

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ನೆನಪು ಮರೆಯಲು ಮದಿರೆಯ ಸಂಗ ಮಾಡಿದ್ದೆ ಸಖಿವ್ಯಸನ ತೊರೆಯಲು ಸುರೆಯ ಹಂಗ ಬಿಡದಾಗಿದೆ ಸಖಿ ಮಧುವಿನ ದಾಸನಾಗಿ ದಾಸ್ಯದಿ ಬದುಕ ನೂಕುತಿರುವೆತುಟಿಯಂಚಿಗಿಟ್ಟ ಬಟ್ಟಲಿನಲ್ಲಿ ನೀನು ಕಾಣುತಿರುವೆ ಮರೆಯದಾಗಿದೆ ಸಖಿ ನೀರವ ಮೌನದ ಕತ್ತಲೆಯಲಿ ಸಿಗಬಹದೆಂದು ಹುಡುಕಿರುವೆಶರಾಬಿನ ಸಿಸೆಯೊಳಗೂ ನಿನ್ನದೆ ಬಿಂಬವ ಕಾಣುತಿದೆ ಸಖಿ ಮರೆಯಲಾಗದ ಹವ್ಯಾಸ ನನ್ನನು ಬೆಂಬಿಡದೆ ಕಾಡಿದೆಅವಳನು ಮರೆಯುವ ಮಾತಾಡಿಮಿಣುಕು ದೀಪದ ಮುಂದೆ ಕುಳಿತಿದ್ದೆ ಸಖಿ ಸುರಪಾನದ ಸುಖದಲಿ ತೇಲಾಡಿ ನೊಂದ ಮರುಳನು ಮರುಗುತಿರುವನುಆದದ್ದೇಲ್ಲ ಮರೆತು ಹೊಸಬಾಳ್ವೆಗೆ ಹೊಂದಿ ನಡೆಯ ಬೇಕೆಂದಿದ್ದೆ ಸಖಿ ***********

ಕಾವ್ಯಯಾನ Read Post »

You cannot copy content of this page

Scroll to Top