ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ತೇಜಾವತಿ ಹೆಚ್.ಡಿ. ಅಸಲಿಗೆ ನಕಲಿಯ ಲೇಪನ ಬಳಿದಿರಬಹುದು ನೋಡುಕಂಗಳಿಗೆ ಆವರಿಸಿರುವ ಪೊರೆಯ ಸರಿಸಿ ಅರಿಯಬಹುದು ನೋಡು ಭಿತ್ತಿಯ ಮೇಲೆ ಬಿದ್ದ ಛಾಯೆಯು ಮಿಥ್ಯವಿರಬಹುದು ಒಮೊಮ್ಮೆಅಂತಃಕರಣದ ಅಕ್ಷಿಯರಳಿಸಿ ದಿಟವ ತಿಳಿಯಬಹುದು ನೋಡು ತಳವಿಲ್ಲದ ಬಾವಿ ಅನಂತ ಆಳವ ತೋರಿರಬಹುದು ಅಲ್ಲಿಭ್ರಮೆಯಿಂದ ಹೊರಬಂದು ನೈಜತೆಯ ಕಾಣಬಹುದು ನೋಡು ದಿಗಂತವು ಇಳೆ ಆಗಸವು ಸಂಧಿಸಿದಂತೆ ಭಾಸವಾಗುವುದುವಿಶ್ವವನ್ನೊಮ್ಮೆ ಪರ್ಯಟಿಸಿ ಅವಲೋಕಿಸಬಹುದು ನೋಡು ಅಖಂಡ ಆಗಸವು ನೀಲವರ್ಣದಿ ಗೋಚರಿಸುವುದು ಮೇಲೆಬೆಳಕಿನ ಮೂಲದ ಸತ್ಯಾಸತ್ಯತೆಯನ್ನು ಪರಾಮರ್ಶಿಸಬಹುದು ನೋಡು ********

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ತೇಜಾವತಿ ಹೆಚ್.ಡಿ. ಕೊರೆಯುವ ಚಳಿಯಲ್ಲೂ ವಹ್ನಿಯೊಡಲು ದಹಿಸುತ್ತಿದೆ ಸಾಕಿಬಹಿರಂಗದ ತೊಗಲು ಅಂತರಂಗದ ಜ್ವಾಲೆಯಲ್ಲಿ ಮೈ ಕಾಯಿಸುತ್ತಿದೆ ಸಾಕಿ ಹೆಪ್ಪುಗಟ್ಟಿದ್ದ ಹೃದಯ ರಂಧ್ರ ಮುಚ್ಚಿದ್ದ ಕಾಯದ ಬಾಯಿ ತೆರೆದುನರನಾಡಿಯಲ್ಲೂ ಶರವೇಗದಿ ಕಾವು ಮಿಂಚಂತೆ ಸಂಚರಿಸುತ್ತಿದೆ ಸಾಕಿ ರೆಕ್ಕೆ ಮೂಡದ ಹಕ್ಕಿಯ ಕನಸೊಳಗೆ ಮೌನದ ನೀರವತೆ ಮಡುಗಟ್ಟಿದೆಹನಿವ ಮಳೆಯೊಡನೆ ಹರಿವಕಂಬನಿ ಧರೆಯಲಿ ಲೀನವಾಗುತ್ತಿದೆ ಸಾಕಿ ಸಲಿಲದಿಂದ ಬೇರ್ಪಟ್ಟ ಮತ್ಸ್ಯದ ಒದ್ದಾಟದ ಚಡಪಡಿಕೆಯಲಿಜಾತಕಪಕ್ಷಿ ಜೀವಸೆಲೆಗಾಗಿ ಕಾತರಿಸಿ ಜವವ ಕಾಯುತ್ತಿದೆ ಸಾಕಿ ಇರುಳ ತಿಂಗಳ ತೇಜಸ್ಸನ್ನು ಭ್ರಮಿಸಿ ಸ್ಮೃತಿಪಟಲದ ಅಕ್ಷಿಗಳಲ್ಲಿಜಾರಿದ ಅಶ್ರುಬಿಂದುಗಳ ಒರೆಸಿ ದಿಂಬಿನ ಮಡಿಲು ಸಂತೈಸುತ್ತಿದೆ ಸಾಕಿ ********

ಗಝಲ್ Read Post »

ಕಾವ್ಯಯಾನ

ಕಾವ್ಯಯಾನ

ಸಮುದ್ರ ಸಂಗೀತ ಫಾಲ್ಗುಣ ಗೌಡ ಅಚವೆ. ದೂರ ದಿಗಂತದಿಂದ ಓಡಿ ಬರುವಅಲೆಗಳು ದಂಡೆಗೆ ಅಪ್ಪಳಿಸುತ್ತಿವೆನಿರಾಳವಾಗುತ್ತಿವೆ.ಗುರಿಯ ಸಾಫಲ್ಯತೆಪ್ರಯತ್ನದ ಫಲವತ್ತತೆಸಾರುತ್ತಿದೆ ಕಡಲುಹಾಗೆ ಒಳಗೆ ಇಣುಕಿದರೆದಂಡೆಯ ಮೌನ ಸಂಗೀತಕೇಳುವುದು. ಸತ್ತ ಮೀನು ಸೌದೆ ಕೋಲುಎಲ್ಲವನ್ನೂ ದಂಡೆಗೆಸೆವತಾನು ಶುಭ್ರಗೊಳ್ಳುವ ಪರಿಅಚ್ಚರಿ!ಒಂದು ಕ್ಷಣ ಮನದಲ್ಲಿಣುಕಿದರೆನಿನ್ನೊಳಗಿನ ದ್ವೇಷ, ಅಸೂಯೆಕೋಪ ಸಣ್ಣತನಗಳ ಇದೇದಂಡೆಯಲ್ಲಿ ಬಿಟ್ಟು ಹೊರಡುವೆನಿಶ್ಕಲ್ಮಶ ಮನಸ ಹೊತ್ತು. ಶರಧಿಯೋಳಗಿನ ಆಳ ವಿಸ್ತಾರಭೋರ್ಗರೆತ,ಭರತ ಇಳಿತಗಳುಲಾಗಾಯ್ತಿನಿಂದಿಲ್ಲಿವರೆಗೆಸೇರುವ ಹೊಳೆಹಳ್ಳ,ನದಿಗಳುಕೂಡುತ್ತಲೇ ಇವೆ.ಎಲ್ಲ ಇದ್ದು ಇಲ್ಲದಂತಿರುವಸಮುದ್ರ ಸಮತೋಲನದ ಪಯಣನಿನ್ನೊಳಗೆ ಬಿಂದು ಸಿಂಧುವಾಗಲಿ. ಆಗಾಗ್ಗೆ ಅಥವಾ ಸಂಜೆಯಲ್ಲಿಸಣ್ಣಗೆ ಅಲೆವ ಅಲೆ ತನ್ನೊಳಗಿನಸುಪ್ತ ಸಂಗೀತ ಸೃಷ್ಟಿಸುವುದುನಿನ್ನೊಳಗಿನ ಮಂದ್ರ ಮನಸುಅದನು ಕೇಳುವುದು. ಗಿಟಾರು ಹಿಡಿದು ಹೊರಟರೆಸಂಗೀತ ಹೃದಯಕೆ ಬರೋಲ್ಲಅದರೊಳಗಿನ ತಂತಿಗಳುಮೂಡಿಸುವ ತನನನಾದಗಳು ನಿನ್ನ ಮಂತ್ರ ಮುಗ್ಧಗೊಳಿಸುವುದು.ನಿನ್ನ ನೆರಳು ನಿನ್ನ ಅಸ್ತಿತ್ವ ಹೇಳುವುದು.!! *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಪ್ಪ ವೀಣಾ ನಿರಂಜನ್ ಯಾಕೋ ನಾನುಇವತ್ತಿಗೂ ಕೂಡಬೆಳೆದು ದೊಡ್ಡವಳಾಗಲೇ ಇಲ್ಲ! ಅಪ್ಪ ಮಾತ್ರಎಂದಿನಂತೆ ನನ್ನೊಳಗೆಬೆಳೆಯುತ್ತಲೇ ಇದ್ದಾನೆಅಪ್ಪನ ಅಸ್ಪಷ್ಟ ನೆನಪುಕಾಡಿದಾಗಲೆಲ್ಲನನ್ನವನೆದುರಿಗೆ ಮಗುವಾಗಿಬಿಡುವ ನಾನುಸುಖಾಸುಮ್ಮನೆರಚ್ಚೆ ಹಿಡಿಯುತ್ತೇನೆ ಹುಸಿ ರಂಪಎರಡು ಹನಿ ಕಣ್ಣೀರುಬಾಲ್ಯದ ಸವಾರಿಮಾಡಿಬಿಡುವ ಮನಸ್ಸುಅಪ್ಪನ ಕಾಯಿಲೆಅಮ್ಮನ ಗೋಳುಸರೀಕರ ತಾತ್ಸಾರನಮ್ಮಗಳ ಅಕಾಲ ಗಾಂಭೀರ್ಯತೆಎಷ್ಟು ನೀರು ಹಿಡಿದೀತುಪುಟ್ಟ ಬೊಗಸೆ ! ಪಾಳುಬಿದ್ದ ಅಪ್ಪನ ಮಹಾಮನೆಗೋಡೆ ಮಣ್ಣ ತಾರಸಿಯಮೇಲೆಲ್ಲ ಹುಲ್ಲು ಕಳೆಸಸ್ಯಗಳದೇ ಕಾರುಬಾರುಬಿರಿದು ಚೂರಾದ ಕಂಬಗಳುಎಷ್ಟು ಕತೆಗಳ ಹೇಳಿದರೂಮುಗಿಯದು ಇತಿಹಾಸ. ಮುದಿ ಹೆಂಗಸು ಹಜರತ್ ಬಿಇಂದಿಗೂ ಸ್ಮರಿಸುತ್ತಾಳೆಅಪ್ಪ ಕೊಡಿಸಿದ ಸರ್ಕಾರಿ ಮನೆಮತ್ತು ವಿಧವಾ ಪಿಂಚಣಿಯನ್ನು ಬಿಕ್ಕುತ್ತವೆ ರಾತ್ರಿಗಳುಅಪ್ಪನ ಅಪೂರ್ಣ ಕನಸುಗಳುಗೋರಿಯೊಳಗೆಅರೆ ಬಿರಿದ ಕಣ್ಣುಗಳಲ್ಲಿಏನನ್ನೋ ಧೇನಿಸುತ್ತ…ಬೆಚ್ಚಿ ಬೀಳುವ ನಾನುನನ್ನವನ ಮುಸುಕಿನೊಳಗಿನಕೈಯನ್ನು ಅದುಮಿಗಟ್ಟಿಯಾಗಿ ಹಿಡಿದು ಕಣ್ಣೀರಾಗುತ್ತೇನೆಅಪ್ಪನ ಬುದ್ಧಅಪ್ಪನ ಅಲ್ಲಮಎಲ್ಲ ಒಂದೇ ಆಗಿಜಂಗಮ ಸ್ವರೂಪಿ ಆತ್ಮಸಂತೈಸುತ್ತದೆಅಪ್ಪ ಎಂದರೆಅಪೂರ್ಣ ಕನಸುಅರ್ಧ ಬರೆದಿಟ್ಟ ಕವಿತೆಚದುರಿದ ಹಲವು ಚಿತ್ರಗಳು… ********

ಕಾವ್ಯಯಾನ Read Post »

ಕಾವ್ಯಯಾನ

ಅನುವಾದ ಸಂಗಾತಿ

ಕಡಲೊಳಗೆ ಕಡಲಾಮೆಗಳು ಇಂಗ್ಲೀಷ್ ಮೂಲ:Melvin B Tolson ಕನ್ನಡಕ್ಕೆ: ವಿ.ಗಣೇಶ್ ವಿಚಿತ್ರ ಆದರೂ ಸತ್ಯವಿದು ಕೇಳಿ     ಕಡಲಿನಲಿರುವ ಕಡಲಾಮೆಗಳ ಕಥೆ     ಕಡಲಾದರೇನು ಒಡಲಾದರೇನು?     ಕುಣಿದು ಕುಪ್ಪಳಿಸುವುದಕೆ ಚಿಂತೆ     ಒಮ್ಮೊಮ್ಮೆ ಅನ್ನ ಆಹಾರಗಳಿಲ್ಲದೆ     ಶಾರ್ಕಗಳು ಕಡಲಲ್ಲಿ ಒದ್ದಾಡುವುವು     ಬೇಟೆಯನು ಹುಡುಕುತ್ತ ಬರುವ     ಶಾರ್ಕ್‍ಗಳಿಗೆ ಸಿಗುವುದೀಆಮೆಗಳು     ಉದರವನು ತಣಿಳಿಸಲು ಆಕ್ರಮಿಸಿ     ನುಂಗುವುವು ಇಡಿ ಕಡಲಾಮೆಗಳನು     ಬೆಣ್ಣೆಯಂತಹ  ದೇಹದೊಳಗಿಳಿಯುತ್ತ     ಜಾರುವುದು ಆಮೆಯು ಉದರದೊಳಗೆ     ಒಳಸೇರಿದೊಡೆ ನೋವು ತಡೆಯಲಾಗದೆ     ಬಿಡುಗಡೆಯ ಮಾರ್ಗಕ್ಕೆ ಚಡಪಡಿಸುವುದು     ಹರಿತ ಹಲ್ಲುಗಳ  ಆ ಕಡಲಾಮೆಯು     ಹೊರ ಮಾರ್ಗಕ್ಕಾಗಿ ಹುಡುಕಾಡುವುದು     ತಿರುಗುತ್ತ ತಿರುಗುತ್ತ ಒದ್ದಾಡುತ್ತಲೇ     ಕತ್ತರಿಸತೊಡಗವುದು ಒಳಗೊಳಗೆಯೆ     ಹಿಂಸೆ ಸಹಿಸಲಾಗದೆಲೆ ಶಾರ್ಕು ಕೂಡ     ಉರುಳುತ್ತ ನರಳುವುದು ತಳದಲ್ಲಿಯೆ     ಗರಗಸದ ಉಗುರು ಅಗಿಯುವದವಡೆ     ಬಂಡೆಯನೆ ಕತ್ತರಿಸುವ ಆ ಛಲ-ಬಲ     ಇನ್ನೇನು ಬೇಕು ಹೇಳಿ, ಕಚ್ಚುತ್ತಕಚ್ಚುತ್ತ     ಬಡಿದಾಡುವುದು ಸಾವಿಬದುಕಿನ ನಡುವೆ    ಅಗಿಯುತ್ತ ಅಗಿಯುತ್ತ ಮತ್ತೆ ಕಚ್ಚುತ್ತ    ಎಲ್ಲೆಡೆ ಹುಡುಕುತ್ತ ತಡಕಾಡತಿರುವುದು    ಮಲದ ಗುದಾಮಿನಿಂದೀಚೆಗೆ ಜಾರುತಲಿ    ಉದರದೊಳಗಿಂದ ಹೊರಕೆ ಚಿಮ್ಮುವುದು.    ಹೀಗೆ ಹೊರಬಂದ ಈ ಕಡಲಾಮೆಯು    ತನ್ನ ಗುಂಪನು ಸೇರಿ ನಲಿದಾಡುವುದು    ತನ್ನ ಬೇಟೆಯ ಕಳಕೊಂಡ ಶಾರ್ಕದು    ಮರಳಿ ಬೇಟೆಗೆ ಹುಡುಕತೊಡಗುವುದು. ***********

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಪ್ರೀತಿ ಬಡತನ ವಾಣಿ ಭಂಡಾರಿ ಅವ್ವನ ಸದ್ದಿರದ ಖಾಲಿ ಅಡಿಗೆ ಮನೆಯು,ಬಣಬಣ ಎನುತಲಿ ಮನವನು ಹಿಂಡಿದೆ.ಒಡಲೊಪ್ಪತ್ತಿಗೆ ಕೂಳು ತರಲು ಆಚೆಮನೆ,ಕಂಡ್ಲಿಲಿ ನಿಂತ ಅವ್ವನ ಬಂಗಿ ಕಾಣದಾಗಿದೆ. ಒಲೆಯೊಳು ಉರಿವ ಬೆಂಕಿಗೆ ಬೇಸರವು,ಚೆರ್ಗೆಯೊಳು ಕಾದಾರಿದ ಎಸರ್ನೀರಿತ್ತು.ತಣ್ಣಗಾಗಿ ಮತ್ತೊತ್ತುರಿಯಲು ಮನಸಿಲ್ಲದೆ, ಹೊಗೆಯುಗುಳುತಲಿ ನೋವಲಿ ಮಲಗಿತು. ಹಸಿ ಸೌದೆಯೊಳು ಉಗುಳೊ ಹೊಗೆಯಂತೆ,ಮನವು ಜಡ್ಡುಗಟ್ಟಿದಂತಹ ಮಸಿಯರಬೆ.ಇಲ್ಲಣವಿರದ ಖಾಲಿಪಾತ್ರೆ ಹೊರಳಿ ಮಲಗಿ,ಗಿಲಾವಿರದ ಗೋಡೆ ಕಥೆ ಹೇಳಿ ಮನದಲಿ ಹಬೆ. ತೊಳೆದ ಪಾತ್ರೆಯೊಳು ಪಾವಕ್ಕಿಯಿರದೆ,ಮನೆಮನದ ಮೂಲೆಯಲ್ಲಿ ರಶ್ಮಿ ಚೆಲ್ಲಿದೆ.ಬಡತನಕಿರುವ ಸಾವು ಪ್ರೀತಿಗಿರದಿಲ್ಲಿ ಎನುತ,ನೆಮ್ಮದಿ ತಾಣವೆ ಅಮ್ಮನಡಿಗೆ ಮನೆಯಾಗಿದೆ. ಸುತ್ತ ಕೂತುಂಡರೂ ಸೆಗಣಿ ನೆಲವೆ ತಂಪಲ್ಲಿ,ಮೇಜು ಮಂಚದಲಿರದ ಸುಖ ನೆಲದಲಿತ್ತು.ಹಾಸಿಗೆಲಿ ಮಮಕಾರದ ಮಡಿಲ ಸ್ವರ್ಗದಲ್ಲಿ,ಇಕ್ಕುತಲುಂಡು ತುತ್ತುನ್ನದಲಿ ಹರ್ಷವಿತ್ತು. ಮೂರು ದಿನದ ಕಹಿಸಿಹಿ ಬಾಳ ಯಾನದಲಿ,ಬೊಗಸೆ ಪ್ರೀತಿಗೂ ಬಡಿವಾರ ಬಂದಿತೀಗ.ಏಳು ಬೀಳಿನ ಭಾವನೊಗ ಹೊತ್ತ ಭಾರದಲಿ,ಪ್ರೀತಿ ಚಿಲುಮೆ ಚಿಮ್ಮುತಾ ಹರಿಯುತ್ತಿತ್ತಾಗ. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಂಗಾರದ ನೆನಪಿನ ಬೆಳ್ಳಿ ಗೆಜ್ಜೆ’ ವಸುಂಧರಾ ಕದಲೂರು ಮೊನ್ನೆ ಬಯಸೀ ಬಯಸೀಆಭರಣದಂಗಡಿಯಲಿ ಬಂಗಾರಬಣ್ಣದ ಗೆಜ್ಜೆ ಕೊಂಡೆ. ಬೆಳ್ಳಿ ಪಾದತುಳಿದು ಬಂದ ಹಾದಿ ನೆನಪುರಿಂಗಣಿಸಿ ಅನಾವರಣವಾಯಿತು ಹಣೆ ಕೆನ್ನೆ ಕೈಗಳ ಮೇಲೆ ಕಾಸಗಲಕಪ್ಪನು ದೃಷ್ಟಿ ಸೋಕದಂತೆ ಹಾಕಿಮುದ್ದು ಮಾಡಿ, ಪುಟ್ಟ ಕಾಲಿಗೆ ಹಗೂರಕಾಲ್ಮುರಿ ಕಿರುಗೆಜ್ಜೆಯನು ತೊಟ್ಟಿಲಲಿಟ್ಟುತೂಗಿದ ಸಂಭ್ರಮದ ನೆನಪಾಯಿತು.. ಗೋಡೆ ಹಿಡಿದು ತಟ್ಟಾಡಿಕೊಂಡುಹೆಜ್ಜೆಗೊಮ್ಮೆ ಝಲ್ಲೆನುವ ಪುಟ್ಚಪಾದಊರಿ ಬರುವ ಸದ್ದನು ಮುಂದುಮಾಡಿದಗೆಜ್ಜೆಯ ಸಮಾಚಾರ ನಾಕಾರು ಬೀದಿತಟ್ಟಿ ಕೇಕೆ ಹಾಕಿದ ನೆನಪಾಯಿತು.. ಅದೇನು ಗಮ್ಮತ್ತು ! ಗತ್ತು!ಮತ್ತು,ಸದ್ದು ಮಾಡದ ಗೆಜ್ಜೆ ತೊಟ್ಟಿದ್ದರೆದಾರಿ ಸವೆದಿರುತ್ತಿತ್ತೆ ಇಲ್ಲಿವರೆಗೆಯಾರಿಗೆ ಗೊತ್ತು.. ನಡೆದ ಕಾಲ್ಬೆರಳಿನುಗುರಿಗೆ ನಾನಾಬಣ್ಣಗಳ ಸಾತು. ತೊಟ್ಟ ದಪ್ಪ ಗೆಜ್ಜೆಗಳುಹೆಜ್ಜೆ ದನಿಯ ಮಾರ್ದನಿಸಿಯೌವನ ಅನುರಣಿಸಿ, ಬಯಕೆ ಅನಾವರಣಗೊಳಿಸಿದ ನೆನಪಾಯಿತು.. ಆಬಯಕೆಗೆ ಮದುವೆ, ಆ ಮದುವೆಗೆಬರೀ ಗೀಟು, ಗೀರು, ಸಾದಾ ಎಳೆಯಗೆಜ್ಜೆ ತೊಡಲು ಮನಸ್ಸು ಒಪ್ಪದೇವರನನ್ನೂ ಜೊತೆಗೆ ಬೆಳ್ಳಿ ಗೆಜ್ಜೆಗಳನೂಜಾಲಾಡಿದ ನೆನಪಾಯಿತು.. ಗಾಜಿನ ಹೊದಿಕೆ ಒಳಗೆ ಮಲಗಿದೆಲ್ಲಸುಂದರಿಯರು ಮೈಕೊಡವಿ ಮೆಲ್ಲದನಿಯಲಿ ಉಲಿಯುತಾ ನಲಿಯುತಾ ಮಕಮಲ್ಲಿನಬಟ್ಟೆಯ ಮೇಲೆ ಮೈಚಾಚಿದೊಡನೆಕುಸುರಿ ಕೆತ್ತನೆಗೆ, ಗೆಜ್ಜೆ ಸದ್ದಿಗೆ ಕಣ್ಣರಳಿಸಿದನೆನಪಾಯಿತು.. ಅವನೊಲವಿನ ಪಿಸಿಪಿಸಿಗೆ ಗೆಜ್ಜೆ ದನಿಯಗುಸುಗುಸು ಬೆರೆತು, ಬೆರಗಿನಲಿ ಮನ ಒಪ್ಪಿಅಂಗಡಿಯ ಗೆಜ್ಜೆಗಳು ಮದುವೆಗೆಕುಣಿದಕಾಲಿಗೆ ಜೊತೆಯಾದುದು ಮತ್ತೆ ನೆನಪಾಯಿತು.. ‘ಮೊದಲ ದಿನ ಮೌನ’ ವಾಗದೆ, ಇವಳಗೆಜ್ಜೆಯೊಡನೆ ಅವನ ದನಿ ಸೇರಿ, ನಾದಎದೆಗಿಳಿವಾಗ ಇರುಳು ತಾನು ನಿಶ್ಯಬ್ದದಲಿಸ್ಥಬ್ಧವಾಗಿ; ಅನುಕೂಲಿಯಾಗಿಗೆಜ್ಜೆಹೆಜ್ಜೆ ಮಿಲನವಾಗಿ, ಲಜ್ಜೆ ತುಟಿ ಮೇಲೆನಲಿದು ಕಣ್ಣು ನಾಚಿಕೆಯ ಸೆರಗುಹೊದೆದು, ಹೆಜ್ಜೆ ಸಮವಾಗಿ ಊರಿ,ಗೆಜ್ಜೆ ಸದ್ದು ಎದೆ ಬಡಿತದಲಿ ಲಯವಾದ ನೆನಪಾಯಿತು.. ಹೊಸ ನೋಟ ವಿನ್ಯಾಸಗಳದರ್ಬಾರು ಶುರುವಾಗಿ ನಿರಾಳ ನಿಡುಉಸಿರೊಡನೆ ಬೆರೆತು ನಕ್ಕಿದ ಕಿರುಗೆಜ್ಜೆ,ತೊಟ್ಟಿಲ ತೂಗುತ್ತಾ ಕೈ ಬಳೆಗೆ ಮತ್ತೆಸಹವರ್ತಿಯಾದ ನೆನಪಾಯಿತು.. ಮೊನ್ನೆ ಕೊಂಡ ಬಂಗಾರದ ಗೆಜ್ಜೆಸುತ್ತಮುತ್ತೆಲ್ಲಾ ಮತ್ತೆ ಬೆಳ್ಳಿ ನೆನಪಿನಸದ್ದನು ಹೊತ್ತು ತಂದಿತು… ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೀಗೊಂದು ಕವಿತೆ ನಾಗರಾಜ್ ಹರಪನಹಳ್ಳಿ -1-ಎರಡು ಬಾಗಿಲು ಮುಚ್ಚಿದವುಇಷ್ಟೇ ತೆರೆದ ಕಿಟಕಿಗಳುಅಲ್ಲಿ ಶಬ್ದಗಳುಮೊಳೆಯಲಿಲ್ಲ -2-ಬಾಗಿಲಿಲ್ಲದ ಊರಲ್ಲಿಬೀಗಗಳು ಕಳೆದು ಹೋಗಿವೆಶಬ್ದಗಳ ಕಳಕೊಂಡವರುದಿಕ್ಕು ದಿಶೆಯಿಲ್ಲದೇನಡೆಯುತ್ತಿದ್ದಾರೆಎಂದೂ ಸಿಗದ ಕೊನೆಗೆ -3-ಕಾಲಿಲ್ಲದವರನ್ನುಕೈಯಿಲ್ಲದವರು ಕುಣಿಸಿದರುಅನಾಥ ಬೀದಿಗಳಲ್ಲಿಮೆದುಳಿಲ್ಲದವರನ್ನುಕಣ್ಣಿಲ್ಲದವರು ಕೂಗಾಡಿಸಿದರುಹೃದಯ ಕಳೆದುಕೊಂಡದೊರೆಯ ಮಹಲಿನ ಮುಂದೆ -4-ಮುಗಿಲದುಃಖಭೂಮಿಯಬಾಯಾರಿಕೆಮುಗಿಯುವಂತಹದ್ದಲ್ಲ ಯಾಕೋ ಮನಸ್ಸು ಖಾಲಿ ಖಾಲಿಯಾಗಿದೆಆಕೆಯ ಹೆಜ್ಜೆ ಗೆಜ್ಜೆ ಸದ್ದು ಕೇಳದೇ ಹರಿವ ನದಿಗೂ ಕಳೆಯಿಲ್ಲಸಮುದ್ರ ಸೇರಿಯೂ ಸಂಭ್ರಮಿಸದ ಆಕೆಯಂತೆಮನದಲ್ಲಿ ಎದ್ದ ಭಾವಗಳ ಅಲೆ ಸದ್ದು ಅವಳ ತಟ್ಟಿದೆ**-6-ಹಿಡಿಯಷ್ಟು ಬದುಕಿನಲ್ಲಿ ಕಡಲಿನ ಪ್ರೀತಿಯ ಅರಿಯಲಾಗಲಿಲ್ಲ ದಿನವೂ ಸೂರ್ಯ ಬೆಳಗಿದರೂ ಮನುಷ್ಯ ಮನದ ಕತ್ತಲು ಅಳಿಸಲಿಲ್ಲ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಪ್ಪ ಬಿದಲೋಟಿ ರಂಗನಾಥ್ ವಾತ್ಸಲ್ಯದ ಕೆನೆಕಟ್ಟಿಅಪ್ಪನ ಕರಳು ಅರಳಿಕಿರುಬೆರಳಿಡಿದು ನಡೆದ ಸ್ಪರ್ಶದ ಸುಖಮೀಸೆ ಬಲಿತರೂ ಕಾಡುವ ನೆನಪು ಊರ ಜಾತ್ರೆಯಲಿಕನ್ನಡಕದೊಳಗಿನ ಕಣ್ಣು ಬರೆದ ಕವನಮೌನದ ಮೆದು ಭಾಷೆಯಲಿಹೃದಯ ತಟ್ಟಿ ಅವ್ವನ ನಿರರ್ಗಳ ಉಸಿರು ದುಡ್ಡಿಲ್ಲದ ಅಪ್ಪನ ಜೇಬಿನಲಿನೋವಿನ ಜೇಡರ ಬಲೆ ಕಟ್ಟಿದರೂಬಿಡಿಸುತ್ತಾನೆ ಎಳೆ ಎಳೆಯಾಗಿಕಾಲದ ನೆರಳ ಮೇಲೆ ಕುಳಿತು ಅಪ್ಪನ ಹೇಗಲ ಮೇಲೆಎರಡೂ ಕಾಲುಗಳು ಇಳಿಬಿಟ್ಟುಜಗದ ಬೆಳಕನು ಕಣ್ಣುಗಳಲ್ಲಿ ತುಂಬಿಕೊಂಡುನಡೆಯುವಾಗಿನ ದಾರಿಯ ಬದಿಯಲಿಗರಿಕೆ ಚಿಗುರುವ ಪರಿಗೆಸೂರ್ಯನಿಗೂ ಹೊಟ್ಟೆಕಿಚ್ಚು ಗುಡಿಸಲ ಕವೆಗೆ ನೇತಾಕಿದ್ದತಮಟೆಯ ಸದ್ದಿನಲಿಕತ್ತಲೆಯ ಬೆನ್ನು ಮುರಿವ ಗತ್ತುಬೀಡಿ ಹೊಗೆಯು ಬರೆಯುವ ಚಿತ್ರ ಮಗನೆಂದು ಬೀಗುವ ಎದೆಯಲಿಎಷ್ಟೊಂದು ದಾರಿದೀಪದ ಬೆಳಕುಜೀವನದುದ್ದಕ್ಕೂ ಕಾವಲುಗಾರನಾಗಿಬೆನ್ನಿಗೆ ಬಿದ್ದವನುದೇವರಿಗಿಂತಲೂ ಮಿಗಿಲು *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನ್ನಪ್ಪ ಎ ಎಸ್. ಮಕಾನದಾರ ಜೀವನದುದ್ದಕ್ಕೂ ತನ್ನ ಗುಡಸಲಿನಚಿಮಣಿಗೆ ಎಣ್ಣಿ ಹಾಕದೆ ಹಲವು ಮೆರವಣಿಗೆ ಗಳಲ್ಲಿ ಹಿಲಾಲು ಹಿಡಿಯುತ್ತಿದ್ದ ನನ್ನಪ್ಪನ ಮೈ ತುಂಬಾ ಗುಲಾಲುಕೈಯಲ್ಲಿ ಪ್ರಜ್ವಲಿಸುವ ಹಿಲಾಲುಮೆರವಣಿಗೆ ಅಡ್ಡ ಪಲ್ಲಕ್ಕಿಶವ ಸಂಸ್ಕಾರಕ್ಕೂ ಹೆಗಲು ಕೊಟ್ಟ ನನ್ನಪ್ಪ ಕಣ್ಣಲ್ಲಿ ಸೂರ್ಯ ತುಂಬಿ ಕೊಂಡುಎದೆಯ ಮೇಲೆ ಬುದ್ಧನನ್ನುಮಲಗಿಸಿ ಜೋಗುಳ ಹಾಡುವವ ನನ್ನಪ್ಪಲೆಕ್ಕವಿರದ ನಕ್ಷತ್ರಗಳು ತನ್ನ ಜೋಪಡಿಯಲ್ಲಿ ಇಣುಕಿದರೂಬಡತನವೆಂಬ ಬೇತಾಳನ ಗೆಳೆತನ ಬಿಡದ ನನ್ನಪ್ಪ ಮೆರವಣಿಗೆಯಲಿ ಹಿಲಾಲು ಹಿಡಿದುಹಿಡಿಕಾಳು ತಂದಾನುಜೋಪಡಿಯಿಂದ ಪಣತಿ ಬೆಳಗಿಸಿಯಾನು ಅಂದುಕೊಂಡು ಶಬರಿವೃತ ಹಿಡಿದಿದ್ದಳು ನನ್ನವ್ವ ಮೆರವಣಿಗೆಯಲಿ ತೂರುವಚುರುಮರಿ ಕೋಳಿ ಮರಿಗಳಂತೆ ಆರಿಸುವ ಮಕ್ಕಳುಧರ್ಮದ ಅಮಲಿನಲ್ಲಜೈಕಾರ ಹಾಕುತ ರಕ್ತ ಹರಿಸಿದವರೆಷ್ಟೋರಕ್ತದ ರಂಗೋಲಿ ಚಿತ್ತಾರವ ಕಂಡುಖುಷಿ ಪಟ್ಟವರೆಷ್ಟೋ? ಎಣಿಕೆಗೆ ಸಿಗುತ್ತಿಲ್ಲ ! *******

ಕಾವ್ಯಯಾನ Read Post »

You cannot copy content of this page

Scroll to Top