ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನನ್ನೊಳಗಿನ ನೀನು.

ಕವಿತೆ ಶೀಲಾಭಂಡಾರ್ಕರ್ ಹುಡುಕುತ್ತೇನೆ ನಿನ್ನನ್ನು ಲೆಕ್ಕವಿಲ್ಲದನಕ್ಷತ್ರಗಳ ಮಿಣುಕು ಮಿಣುಕುನಾಟ್ಯದೊಳಗೆ.ಆತುರಗಾರ ಚಂದ್ರನೂನಿನ್ನ ನೆನಪಿಸುತ್ತಾನೆ..ಅವಸರದಿ ಅವಿತುಕೊಳ್ಳುವಾಗಮೋಡದ ಸೆರಗಿನೊಳಗೆ ಬೀಸಿ ಬರುವ ತಂಗಾಳಿಯೊಂದುಸದ್ದಿಲ್ಲದೆ ತುಟಿಗಳಿಗೆಮುತ್ತಾಗಿ ಬಿಸಿಯಾಗುವತುಂಟ ಸಮಯದಿನೀನೇ ಇರುವೆ ಆ ಇರುವಿನೊಳಗೆ. ಹಿತ್ತಲ ಮೂಲೆಯ ಗಿಡದಲ್ಲೀಗಅಬ್ಬಲಿಗೆಯ ಶ್ರಾಯ.ಹೂ ಅರಳುವ ಮೃದು ಮಧುರಪರಿಮಳವಾಗಿ ನೀನಿರುವೆ.ಗಂಧ ಸುಗಂಧದೊಳಗೆ. ಸಂಜೆಗಳಲಿ ಕೆಂಪಾಗಿಸೂರ್ಯ ಮುಳುಗುವಾಗಕಾಡುವ ನೆನಪಾಗುವೆ..ಅಂಗಳದಲ್ಲಿ ಆಟವಾಡುವಬುಲ್‍ಬುಲ್ ಜೋಡಿ ಹಕ್ಕಿಗಳಲಲ್ಲೆ ಸಲ್ಲಾಪಗಳ ಸದ್ದು ಗದ್ದಲದೊಳಗೆ. ನಿಶ್ಶಬ್ದವಾಗಿ ಪಿಸುನುಡಿಯೊಂದುಒಳಗಿನಿಂದ ಉಸುರಿದಾಗಯುಗಗಳಿಂದ ಹುಡುಕುತಿದ್ದನನ್ನನ್ನೇ ಎಲ್ಲೆಡೆ.. ಕಂಡುಕೊಂಡೆ.,ನಿನ್ನ ಕಂಡಾಗ ನನ್ನೊಳಗೆ. **************************

ನನ್ನೊಳಗಿನ ನೀನು. Read Post »

ಕಾವ್ಯಯಾನ

ಎರಡು ಕವಿತೆಗಳು

ಶೋಭಾ ನಾಯ್ಕ ಹಿರೇಕೈ ಅವರ ಎರಡು ಕವಿತೆಗಳು ಶೋಭಾ ನಾಯ್ಕ ಹಿರೇಕೈ ಕವಿತೆ – ೧…ಹೆಚ್ಚೆಂದರೇನು ಮಾಡಿಯೇನು? ಅವರಂತೆ ತಣ್ಣೀರಲ್ಲಿ ಮಿಂದುನಲವತ್ತೆಂಟನೆಯ ದಿನದವ್ರತ ಮುಗಿಸಿ,ಆ ಕೋಟೆ ಕೊತ್ತಲಗಳ ದಾಟಿಬೆಟ್ಟವೇರಿ ಗುಡ್ಡವಿಳಿದು, ಕಣ್ಗಾವಲ ತಪ್ಪಿಸಿನಿನ್ನ ಬಳಿ ನಡೆದೇ….ಬಂದೆನೆಂದು ಇಟ್ಟುಕೋಹೆಚ್ಚೆಂದರೆ ನಾನಲ್ಲಿಏನು ಮಾಡಿಯೇನು? ‘ಬಾಲಕನಾಗಿಹೆ ಅಯ್ಯಪ್ಪ’ ಈಹಾಡು ಹಾಡು ಕೇಳಿ ಕೇಳಿಇತ್ತೀಚೆಗೆ ನಿನ್ನ ಹಳೆಯದೊಂದುಪಟ ನೋಡಿದ ಮೇಲೆನನ್ನ ಮಗನಿಗೂ..ನಿನಗೂ..ಯಾವ ಪರಕ್ಕೂ ..ಉಳಿದಿಲ್ಲ ನೋಡು ಎಷ್ಟೋ ವರ್ಷ ನಿಂತೇ ಇರುವೆಬಾ ಮಲಗಿಕೋ ಎಂದುಮಡಿಲ ಚೆಲ್ಲಿನನ್ನ ಮುಟ್ಟಿನ ಕಥೆಯನಡೆಯುತ್ತಿರುವ ಒಳ ಯುದ್ಧಗಳ ವ್ಯಥೆಯನಿನಗೆ ಹೇಳಿಯೇನು ಹುಲಿ ಹಾಲನುಂಡ ನಿನಗೆತಾಯ ಹಾಲ ರುಚಿ ನೋಡುಹುಳಿಯಾಗಿದೆಯೇನೋ ..ಎನ್ನುತ್ತಲೇತೇಗಿಸಲು ಬೆನ್ನ ನೀವಿಯೇನು ದೃಷ್ಟಿ ತೆಗೆದು ನಟಿಗೆ ಮುರಿದುಎದೆಗೊತ್ತಿಕೊಂಡು,ಹಣೆಗೊಂದು ಮುತ್ತಿಕ್ಕಿಥೇಟ್ ನನ್ನ ಮಗನಂತೆ ಎನ್ನುತ್ತಹದಿನೆಂಟನೆಯ ಕೊನೆಯ ಮೆಟ್ಟಿಲ ಕೆಳಗಿಳಿದ ಮೇಲೂ….ಮತ್ತೊಮ್ಮೆ ಮುಗುದೊಮ್ಮೆ ನಿನ್ನತಿರುತಿರುಗಿ ನೋಡಿಯೇನು ಈಗ ಹೇಳುನನ್ನ ಮುಟ್ಟು ನಿನಗೆ ಮೈಲಿಗೆಯೇನು?…………….. ಕವಿತೆ -೨ ಗುರ್ ಮೆಹರ್ ಅಂತರಂಗ ಅವರಿವರ ಬಂದೂಕ ತುದಿಯಲ್ಲಿಹೂವಿನ ಮೊನಚಿತ್ತೇ?ಇಲ್ಲವಲ್ಲಮತ್ತೇಯುದ್ಧವನ್ನು ಯುದ್ಧವಲ್ಲದೆಇನ್ನೇನನ್ನಲಿ? ಯಾವ ಕಣಿವೆ ಬದುಕಿಸುವುದುನಾ ಕಳಕೊಂಡವಾತ್ಸಲ್ಯವನ್ನು ?ಯಾವ ಕುರ್ಚಿಯ ಬಳಿಕೇಳಲಿ ನ್ಯಾಯ? ಬೇಕೇ?ನಮ್ಮ ಬಿಸಿ ರಕ್ತಕೂಕೊಳಚೆಯ ಗಬ್ಬುಕಪ್ಪು -ಕೇಸರಿಗಳ ಜಿದ್ದಾ ಜಿದ್ದು ಬಣ್ಣದ ಮೇಲೂ ರಾಡಿಯಎರಚುತಿರುವವರಾರೋ?ಈಚೆಗಿರುವುದೇ ಅಚೆಆಚೆಗಿರುವುದೇ ಈಚೆಈಚೆ ಅಚೆಗಳಾಚೆಅದೇ ಮಣ್ಣು ,ಅದೇ ನೀರುಅದೇ ಗಂಧ, ಅದೇ ಗಾಳಿರಕ್ತ ಬೇರೆಯೇ ಮತ್ತೆ? ಬೇಕೆ ಯುದ್ಧ?ನನ್ನಂಥ ತಬ್ಬಲಿಗಳ ಕೇಳಿ ಹೇಳು ಅಶೋಕ‘ಕಳಿಂಗ’ ನಿನ್ನ ಕಾಡಿದಂತೆ‘ಕಾರ್ಗಿಲ್ ‘ ನನ್ನ ಕಾಡುತ್ತಿದೆಯುದ್ಧವನ್ನು ಯುದ್ಧವೆನ್ನದೆಇನ್ನೇನನ್ನಲಿ?…….(ಗುರ್ ಮೆಹರ್: ಕಾರ್ಗಿಲ್ ಯುದ್ಧದಲ್ಲಿ ತಂದೆಯನ್ನು ಕಳೆದುಕೊಂಡು ಅನಾಥಳಾದ ಮಗಳು) ****************

ಎರಡು ಕವಿತೆಗಳು Read Post »

ಕಾವ್ಯಯಾನ

ಕೊಡುವುದಾದರೂ ಯಾರಿಗೆ ?

ಚಿತ್ರ ಮತ್ತು ಕವಿತೆ : ವಿಜಯಶ್ರೀ ಹಾಲಾಡಿ. ಹೌದುಈ ಪ್ರೀತಿಯನ್ನುಮೊಗೆಮೊಗೆದುಕೊಡುವುದಾದರೂ ಯಾರಿಗೆ ? ನೇರಳೆಮರಕ್ಕೆ ಅಳಿಲಿಗೆಬೆಚ್ಚನೆ ಗೂಡಿನ ಹಕ್ಕಿಗೆ ? ಹೆಣ್ತನದ ಪರಿಧಿಗೆ ಎಂದೂ ದಕ್ಕದಮುಖ –ಮುಖವಾಡಗಳು …ರಾತ್ರಿ -ಹಗಲುಗಳನ್ನುಗೆಜ್ಜೆಕಾಲಿನಲ್ಲಿ ನೋಯಿಸಲೆ …ಯಾತನೆಯನ್ನು ನುಂಗುತ್ತಿರುವೆಸಂಜೆಯ ಏಕಾಂತಗಳಲ್ಲಿಹೆಪ್ಪುಗಟ್ಟಿದ ಇರುಳುಗಳಲ್ಲಿ .. ಬೊಗಸೆಯೊಡ್ಡಿದ್ದೇನೆಮಂಡಿಯೂರಿದ್ದೇನೆಹಟಮಾರಿ ಕಡಲಾಗಿದ್ದೇನೆ..ತರ್ಕಕ್ಕೆ ನಿಲುಕದ ಗಳಿಗೆ-ಗಳಲ್ಲಿ ಒಂಟಿಹೂವಂತೆನಿಂತುಬಿಟ್ಟಿದ್ದೇನೆ .. ಲೆಕ್ಕವಿಟ್ಟಿಲ್ಲ ಕೋಗಿಲೆಹಾಡಿದ ಹಾಡುಗಳನ್ನು… ಉದುರಿಬಿದ್ದ ಗರಿಗಳನ್ನುಮತ್ತೆ ಹುಟ್ಟಿಸಿಕೊಳ್ಳಲುಸಾಧ್ಯವಾಗುವುದಾದರೆಪ್ರೀತಿಯಿಂದ ಆರ್ತಳಾಗಿದ್ದೇನೆ.

ಕೊಡುವುದಾದರೂ ಯಾರಿಗೆ ? Read Post »

ಕಾವ್ಯಯಾನ

ನಾವೀಗ ಹೊರಟಿದ್ದೇವೆ

ಕವಿತೆ ಶೀಲಾ ಭಂಡಾರ್ಕರ್ ನಾವೀಗ ಹೊರಟಿದ್ದೇವೆಒಂದೊಮ್ಮೆ ನಮ್ಮದಾಗಿದ್ದನಮ್ಮ ಊರಿಗೆ. ಯಾರೊಬ್ಬರಾದರೂತಡೆಯುವವರಿಲ್ಲವೇ!! ನಮ್ಮನ್ನುಹೋಗಬೇಡಿರೆಂದು ಕೈ ಹಿಡಿದು.ಈ ಪಟ್ಟಣ ನಿಮ್ಮದೂ ಕೂಡ ಎಂದು. ಇಟ್ಟಿಗೆ ಮರಳು ಹೊತ್ತ ತೋಳುಗಳುಸುತ್ತಿಗೆ ಉಳಿ ಹಿಡಿದ ಕೈಗಳುಗಂಟು ಮೂಟೆಗಳನ್ನುಹೊತ್ತು ಕೊಂಡು ಹೊರಟಿವೆ,ಭಾರವಾದ ಮನಸ್ಸನ್ನುಎದೆಯೊಳಗೆ ಮುಚ್ಚಿಟ್ಟು. ಯಾರಿಗೂ ನೆನಪಾಗಲಿಲ್ಲವೇ..ತಮ್ಮ ಮನೆಗಳಿಗೆಗಾರೆ ಮೆತ್ತಿದ, ಬಣ್ಣ ಹಚ್ಚಿದಕೈಗಳ ಹಿಂದೆ ಒಂದು ಉಸಿರುಹೊತ್ತ ಜೀವವಿದೆ.ನಮಗಾಗಿ ದುಡಿದ ಚೇತನವಿದೆ.ಅನಿಸಲಿಲ್ಲವೇ ಒಮ್ಮೆಯೂ. ಕಾಲೆಳೆದು ನಡೆದಿದ್ದೇವೆ.ದೇಹಕ್ಕಿಂತ ಭಾರವಾದಉಸಿರನ್ನು ಹೊತ್ತುಕೊಂಡು.ಊರು ತಲುಪುವ ಆಸೆಯಿಂದ.ನಮ್ಮದೇನಾದರೂ ಜಾಗ,ಒಂದಾದರೂ ಕುರುಹು..ಅಲ್ಲಿಯಾದರೂ..ಉಳಿದಿರಬಹುದೆಂಬ ನಿರೀಕ್ಷೆಯಿಂದ. ಹೊರಟಿದ್ದೇವೆ ಒಂದೊಮ್ಮೆನಮ್ಮದಾಗಿದ್ದ ನಮ್ಮ ಊರಿಗೆ. *******************

ನಾವೀಗ ಹೊರಟಿದ್ದೇವೆ Read Post »

ಕಾವ್ಯಯಾನ

ಮಗಳು ಹುಟ್ಟಿದ್ದಾಳೆ

ಕವಿತೆ ನಿನ್ನೆ ಯಾವನೋ ಪಾಪಿ ತ್ರಿಪುರದಲ್ಲಿ ಹೆಣ್ಣು ಹುಟ್ಟಿದೆ ಅಂತ ತಾನು ಆತ್ಮಹತ್ಯೆ ಮಾಡಿಕೊಂಡನಂತೆ ಮತ್ತು ಅವನ ಮಡದಿ ಹೃದಯಾಘಾತವಾಗಿ ಸತ್ತಳು.ಅದಕ್ಕೆ ಇದನ್ನು ನಿಮಗೆ ಒಪ್ಪಿಸಬೇಕು ಅನಿಸಿತು. ಪ್ಯಾರಿಸುತ ಮಗಳು ಹುಟ್ಟಿದ್ದಾಳೆ…ಪದಗಳಿಗೆ ಸಿಗದ ದನಿಯೊಂದುಕಿವಿಗೆ ಬಿದ್ದು ನನ್ನ ಮನವು ಹಿಗ್ಗಿದೆಮುದ್ದು ಮುದ್ದು ಮುಖವ ಹೊತ್ತುಬೆಳಗು ಮುಂಜಾನೆ ಬೆಳಕು ಚಿಮ್ಮಿಸಿಬೆಚ್ಚನೆ ಹಾಸಿಗೆಯಲ್ಲಿ ಗೊಂಬೆಯಂತೆ ಮಲಗಿದ್ದಾಳೆಅವಳ ಮುಷ್ಟಿಯಲ್ಲಿ ಅನ್ನದ,ಆಯುಷ್ಯದ,ವಿದ್ಯಾರೇಖೆಗಳುಅಡ್ಡವಾಗಿ ನದಿಯು ಹರಿಯುವ ದಾರಿಯಂತೆಗುರುತು ಮಾಡಿಕೊಂಡಿವೆಬೆಳ್ಳಿ ಮುಖದಲ್ಲಿ ಹೊಮ್ಮುವ ಪ್ರಕಾಶತೆಗೆಸುತ್ತಲೂ ಎಲ್ಲರಿಗೂ ನಗುವು ಹಂಚಿ ಹೋಗಿದೆಅವಳು ಗೊಂಬೆ,ಹೆಮ್ಮರದ ಕೊಂಬೆ ಮಗಳು ಹುಟ್ಟಿದ್ದಾಳೆ….ನನಗೂ ನನ್ನವಳಿಗೂ ಅವಳೇ ಅಧಿನಾಯಕಿಯಿನ್ನುತಡವಾಗಿ ಬರಲಾರೆ,ಸುಳ್ಳೆಂದು ಹೇಳಲಾರೆಅವಳಿರುವ ಭಯಕ್ಕೀಗ ಬಲುಬೇಗ ನಾ ಬರುವೆಅಂಬೆಗಾಲು ಬಯಸಿದ ನಮ್ಮನೆ ಅಂಗಳವೀಗಸಂತೋಷ ತುಂಬಿಕೊಂಡಿದೆಮಿತಿಯು ನಿನಗಿಲ್ಲ ಮಗಳೇ,ಭೀತಿಯ ತರಿಸಲ್ಲಚುಕ್ಕಿ,ಬೆಳದಿಂಗಳು,ಚಂದ್ರರೆಲ್ಲರೂ ರಾತ್ರಿಯಲ್ಲಿ ನಿನ್ನ ಸ್ನೇಹಿತೆಯರುಕೈ ಮಾಡಿ ನೀ ಕರೆದರೆ ತಡಬಡಿಸಿ ಬರುವರುನಾ ನಿನ್ನ ಆನೆಯುನೀ ನನ್ನ ಅಂಬಾರಿನಿನ್ನ ಹೊತ್ತು ಮೆರೆಸುವೆನುನೀನಾಗು ಜಗವಾಳು ದೊರೆಸಾನಿ ************

ಮಗಳು ಹುಟ್ಟಿದ್ದಾಳೆ Read Post »

ಕಾವ್ಯಯಾನ

ಸಂಜೆಯಾಗುತಿದೆ

ಕವಿತೆ ಶಾಂತಲಾ ಮಧು ಸಂಜೆಯಾಗುತಿದೆಆರಾಗಲಿಲ್ಲ ಸಂಜೆಯಾಗುತಿದೆಬೆಳದಿಂಗಳಾಸೆ ಚಂದ್ರನಿಗೆಕಸ್ತೂರಿ ತಿಲಕವನಿಡುವೆನೆನುತಹಾಡಿ ಓಡಿದರೆ,ಸಂಜೆಯಾಗುತಿದೆ ಬೆಟ್ಟಗಳ ತುದಿ ಏರಿಮೋಡದಲಿ ಈಜಾಡಿ..ಹಕ್ಕಿ ಜೊತೆ ಚಿಲಿಪಿಲಿಮಾತಾಡ ಹವಣಿಸಲುಹಾರಿ ಹೋಯಿತು ಹಕ್ಕಿಸಂಜೆಯಾಗುತಿದೆ ಮೊಟ್ಟೆ ಮರಿಗಳ ಸಲಹಿರೆಕ್ಕೆ ಪುಕ್ಕಗಳು ಬಲಿತುಹಾರ ಬಯಸಲು ಮುನ್ನಸಂಜೆಯಾಗುತಿದೆ ಹುಲ್ಲು ಗರಿಕೆಯ ತಂದುಎಣಿಸಿ ಪೋಣಿಸಿ ಗೂಡು ಕಟ್ಟಿಮೆರೆಯುವ ತವಕಸಂಜೆಯಾಗುತಿದೆ ಚಲಿಸುತಿದೆ ಚಿತ್ರವದುಮನಃ ಪಟಲ ಕೆದಕುತಿದೆಕೆಂಪನೆಯ ಆಗಸದಿಮರೆಯಾಗುತಿಹನವನುಸಂಜೆಯಾಗುತಿದೆ *****

ಸಂಜೆಯಾಗುತಿದೆ Read Post »

ಕಾವ್ಯಯಾನ, ಗಝಲ್

ಗಝಲ್ ಜುಗಲ್

ಗಝಲ್ ಜುಗಲ್ ಮೊಟ್ಟಮೊದಲಬಾರಿಗೆ ಗಝಲ್ ಕವಿಗಳವಿವರಣೆಗಳೊಂದಿಗೆ ಶ್ರೀದೇವಿ ಕೆರೆಮನೆ ಗಿರೀಶ್ ಜಕಾಪುರೆ ನನ್ನ ದನಿಗೆ ನಿನ್ನ ದನಿಯು (ಶ್ರೀದೇವಿ ಕೆರೆಮನೆ) ಜಗದ ಜೀವನಾಡಿಯಲ್ಲಿ ಅಮೃತದ ಕಳಶ ಜೊತೆಯಾದಂತೆ ನನ್ನ ದನಿಗೆ ನಿನ್ನ ದನಿಯುಜೀವ ಕರುಣೆಯ ಪೊರೆವ ಜಗನ್ಮಾತೆಯ ಸುದೀರ್ಘ ಉಸಿರಂತೆ ನನ್ನ ದನಿಗೆ ನಿನ್ನ ದನಿಯು ಸೆರಗಿನ ಮರೆಯಿಂದ ಇಣುಕಿದ ಕೂಸಿನ ಹವಳದ ತುಟಿಯ ಕಟವಾಯಿಯಲ್ಲಿದೆ ನೊರೆವಾಲುಹಾಲುಗಲ್ಲದ ಮುಗ್ಧ ಮುಖದ ಮಗುವಿನ ಕಿಲಕಿಲ ನಗುವಂತೆ ನನ್ನ ದನಿಗೆ ನಿನ್ನ ದನಿಯು ಕನಸುಗಳೇ ಇರದ ಬರಡು ಎದೆಯೊಳಗೆ ಮೊಳೆತಿದೆ ನಿನ್ನ ನೆನಪಿನ ಗರಿಕೆ ಹುಲ್ಲಿನ ಚಿಗುರುಶರದೃತುವಿಗೆ ಆವರಿಸಿ ಮೈ ನಡುಗಿಸುವ ತಂಗಾಳಿಯಂತೆ ನನ್ನ ದನಿಗೆ ನನ್ನ ದನಿಯು ಸುತ್ತೆಲ್ಲ ಹರಡಿದೆ ಎದೆಕೋಟೆಯ ಬತ್ತಲಾರದ ಬಯಕೆಯಂತೆ ಸುರುಗಿಯ ಸಮ್ಮೋಹನಬದುಕಿನ ಪ್ರತಿಕ್ಷಣದಲ್ಲೂ ಜೀವದೃವ್ಯ ಚಿಮ್ಮಿದಂತೆ ನನ್ನ ದನಿಗೆ ನಿನ್ನ ದನಿಯು ಮಥುರೆಯೊಂದಿಗೆ ತೊರೆದು ಹೋದ ಕೃಷ್ಣನಿಗಾಗಿ ಜೀವಮಾನವಿಡಿ ಕಾತರಿಸಿದಳು ರಾಧೆನವಿಲುಗರಿಯ ಸಾವಿರ ಎಳೆಗಳ ನವಿರಾದ ಸ್ಪರ್ಶದಂತೆ ನನ್ನ ದನಿಗೆ ನಿನ್ನ ದನಿಯು ಸಪ್ತಸಾಗರಗಳಿದ್ದರೂ ಪಾಲ್ಗಡಲ ಬೆಳ್ನೊರೆಯೇ ಬೇಕಂತೆ ಲಕ್ಷ್ಮಿಕಾಂತ ಹರಿಗೆಶಿವನ ರುದ್ರ ಡಮರುಗದ ಅಬ್ಬರಿಸುವ ಅಲೆಯ ನಿನಾದಂತೆ ನನ್ನ ದನಿಗೆ ನಿನ್ನ ದನಿಯು ಸುರೆಯಲ್ಲೇ ಮುಳುಗಿರುವ ದೇವಲೋಕದ ಅಧಿಪತಿಗೆ ಅಮರಾವತಿಯೂ ಬೇಸರವಂತೆಗಸಗಸೆ ಪಾಯಸದ ಗೋಡಂಬಿಗೆ ನಶೆಯೇರಿದ ಅಮಲಂತೆ ನನ್ನ ದನಿಗೆ ನಿನ್ನ ದನಿಯು ಅಳುವ ಮಗುವಿನ ದನಿಗೆ ಮೈಮರೆತು ರಮಿಸಿ ಮುದ್ದಿಸುವ ನಿನ್ನ ಹಳೆಯ ಚಾಳಿ ಬಿಡು ಅಲ್ಲಮಮಗುವಿನ ಅಳುವಿನಲ್ಲಿರುವ ಸಪ್ತಸ್ವರದ ನಿನಾದದಂತೆ ನನ್ನ ದನಿಗೆ ನಿನ್ನ ದನಿಯು ಕಾತರಿಸುತಿದೆ ನಿದ್ದೆಯಿರದ ಕಮಲ ಸೂರ್ಯನಿಗೆ, ನೈದಿಲೆಯ ನೆತ್ತಿಗೀಗ ವಿರಹದ ಉರಿನಸುಕಿನ ಸೂರ್ಯನ ಎಳಸು ಕಿರಣಕೆ ನಾಚುವ ಇಬ್ಬನಿಯಂತೆ ನನ್ನ ದನಿಗೆ ನಿನ್ನ ದನಿಯು ಸಿರಿ, ಆಗದಿರುವುದಕೆ ಮರುಗುವ ಬದಲು ಪಾಲಿಗೆ ಬಂದಿದ್ದನ್ನು ಸಂತಸದಲಿ ಒಪ್ಪಿಕೊಒಮ್ಮೆಯೂ ಸೇರದ ಎಂದಿಗೂ ಅಗಲದ ರೈಲು ಹಳಿಯಂತೆ ನನ್ನ ದನಿಗೆ ನಿನ್ನ ದನಿಯು ನನ್ನ ದನಿಗೆ ನಿನ್ನ ದನಿಯು (ಗಿರೀಶ ಜಕಾಪುರೆ) ಮಧುರ ಮದಿರಿಗೆ ಅಧರ ಮಧು ಬೆರೆಸಿದಂತೆ ನನ್ನ ದನಿಗೆ ನಿನ್ನ ದನಿಯುನೆಲದ ಕುಸುಮಕೆ ಮುಗಿಲ ಘಮ ಸುರಿಸಿದಂತೆ ನನ್ನ ದನಿಗೆ ನಿನ್ನ ದನಿಯು ಜಗದ ರೀತಿ ರಿವಾಜು ಮುರಿದು ಒಲವಿಗಾಗಿ ಎಲ್ಲೆ ಮೀರಿಗೆ, ಅಪ್ಪಿದೆಕಡಲು ತಾನೇ ಹರಿದು ನದಿ ಸೇರಿದಂತೆ ನನ್ನ ದನಿಗೆ ನಿನ್ನ ದನಿಯು ನಿನ್ನ ಹೆಸರು ಕೇಳಿದೊಡನೆ ಮನಸಿನಲಿ ಹೆಜ್ಜೆ ಗೆಜ್ಜೆಯ ಘಲಿರು ನಾದಒಲವ ಮಿಡಿತ ಎದೆಯಿಂದ ಎದೆಗೆ ಹರಿಸಿದಂತೆ ನನ್ನ ದನಿಗೆ ನಿನ್ನ ದನಿಯು ತಿಳಿಯದಾಗಿದೆ ಈಗ ಯಾವ ಬಿಂಬ ನನ್ನದು ಯಾವ ಬಿಂಬ ನಿನ್ನದುನನ್ನ ದೇಹ ನಿನ್ನ ರೂಪ ಧರಿಸಿದಂತೆ ನನ್ನ ದನಿಗೆ ನಿನ್ನ ದನಿಯು ಮಗುವು ತಾಯಿಯ ಹಿಂದೆ ಬರುವಂತೆ ಬಂದೆ ಒಲವ ಸಮ್ಮೋಹಿತನಾಗಿಶಾರೀರ ಶರೀರವ ಅನುಕರಿಸಿದಂತೆ ನನ್ನ ದನಿಗೆ ನಿನ್ನ ದನಿಯು ಜೀವದಲ್ಲಿ ಬೆರೆತೆ ನೀನು ಒಲವಾಗಿ, ಉಸಿರಾಗಿ, ಉಸಿರ ಸಿರಿಯಾಗಿದೇಹ ಆತ್ಮದ ಜೊತೆಜೊತೆಗೆ ಸಂಚರಿಸಿದಂತೆ ನನ್ನ ದನಿಗೆ ನಿನ್ನ ದನಿಯು ಯಾವ ಜನ್ಮದ ಬಂಧವೂ ಚೆಂಬೆಳಕಾಗಿ ಬಂದು ಕೂಡಿದೆ ಬಾಳಿಗೆಕತ್ತಲಲಿ ನಂದಾದೀಪ ಉರಿಸಿದಂತೆ ನನ್ನ ದನಿಗೆ ನಿನ್ನ ದನಿಯು ನೀನು ಮುಟ್ಟಿದ ಶಿಲೆಗಳಿಂದ ಹೊಮ್ಮುತಿದೆ ಸುರಸಂಗೀತ ಝರಿಯಾಗಿಬರೀ ಸ್ಪರ್ಶದಿಂದ ಗಾಯ ಭರಿಸಿದಂತೆ ನನ್ನ ದನಿಗೆ ನಿನ್ನ ದನಿಯು ಯಾವ ಪ್ರಹರದಲೂ ಮರೆತಿಲ್ಲ ಮಾಯೆ ‘ಅಲ್ಲಮ’ ಒಬ್ಬರನೊಬ್ಬರುಬೇಟವು ಬೇಟೆಗಾರನ ಸ್ಮರಿಸಿದಂತೆ ನನ್ನ ದನಿಗೆ ನಿನ್ನ ದನಿಯು ಇದು ಶ್ರೀದೇವಿ ಕೆರೆಮನೆ ಹಾಗೂ ಗಿರೀಶ್ ಜಕಾಪುರೆಯವರು ಬರೆದ ಗಜಲ್ ಜುಗಲ್ ನನ್ನ ದನಿಗೆ ನಿನ್ನ ದನಿಯು ಸಂಕಲನದ ಶೀರ್ಷಿಕಾ ಗಜಲ್‌ಗಳು. ಇಲ್ಲಿ ಶ್ರೀದೇವಿ ಕೆರೆಮನೆಯವರು ೩೮ ಮಾತ್ರೆ ಬಳಸಿದ್ದರೆ, ಗಿಋಈಶ್ ಜಕಾಪುರೆಯವರು ೩೦ ಮಾತ್ರೆ ಬಳಸಿ ಬರೆದಿದ್ದಾರೆ. ಈ ಗಜಲ್‌ಗಳ ವೈಶಿಷ್ಟ್ಯತೆ ಏನೆಂದರೆ ಇಬ್ಬರೂ ಪರಸ್ಪರರ ತಕಲ್ಲೂಸ್‌ನ್ನು ತಮ್ಮ ಗಜಲ್‌ಗಳಲ್ಲಿ ಬಳಸಿಕೊಂಡಿದ್ದಾರೆ. ಅಳುವ ಮಗುವಿನ ದನಿಗೆ ಮೈಮರೆತು ರಮಿಸಿ ಮುದ್ದಿಸುವ ನಿನ್ನ ಹಳೆಯ ಚಾಳಿ ಬಿಡು ಅಲ್ಲಮಮಗುವಿನ ಅಳುವಿನಲ್ಲಿರುವ ಸಪ್ತಸ್ವರದ ನಿನಾದದಂತೆ ನನ್ನ ದನಿಗೆ ನಿನ್ನ ದನಿಯು ಎಂದು ಶ್ರೀದೇವಿಯವರು ಬರೆದಿದ್ದರೆ ಜೀವದಲ್ಲಿ ಬೆರೆತೆ ನೀನು ಒಲವಾಗಿ, ಉಸಿರಾಗಿ, ಉಸಿರ ಸಿರಿಯಾಗಿದೇಹ ಆತ್ಮದ ಜೊತೆಜೊತೆಗೆ ಸಂಚರಿಸಿದಂತೆ ನನ್ನ ದನಿಗೆ ನಿನ್ನ ದನಿಯು ಎಂದು ಗಿರೀಶ ಜಕಾಪುರೆಯವರು ಹೇಳಿದ್ದಾರೆ. ಗಜಲ್ ಪರಂಪರೆಯಲ್ಲಿಯೇ ಇಂತಹುದ್ದೊಂದು ವಿಶಿಷ್ಟ ಪ್ರಯೋಗ ಪ್ರಪ್ರಥಮ ಬಾರಿಗೆ ಬಳಕೆಯಾಗಿದೆ. ಗಜಲ್ ಬರೆಯುವವರಿಗೆ ಇವು ಅಭ್ಯಾಸಕ್ಕೆ ಯೋಗ್ಯವಾದ ಗಜಲ್‌ಗಳಾಗಿವೆ

ಗಝಲ್ ಜುಗಲ್ Read Post »

ಕಾವ್ಯಯಾನ

ನಿವೇದನೆ…

ಕವಿತೆ ಹರೀಶ ಕೋಳಗುಂದ ಹೌದು…ನನಗೆ ಗೊತ್ತುನೀ ನನ್ನ ಪಕ್ಕದಲ್ಲೇ ಕುಳಿತಿರುವೆಸುಳ್ಳು ಹೇಳುವುದಿಲ್ಲ ನಾನುಈ ಕಡುಗತ್ತಲಲ್ಲೂ ನಿನ್ನ ಮುಖತಿಳಿನೀರ ಬಾವಿಯಲ್ಲಿ ಬಿದ್ದಚಂದಿರನ ಬಿಂಬವೆಂದು ಎಡತಾಕುತ್ತಿದೆ ನನ್ನೆದೆಗೆನಿನ್ನುಸಿರ ಬಿಸಿನಿನ್ನೆದೆಬಡಿತದ ಸದ್ದುನೀ ತೊಟ್ಟ ಕೈ ಬಳೆಯ ಘಲುಗುಮುಡಿದ ಮಲ್ಲಿಗೆಯ ಘಮಲು ಹೊತ್ತು ಉರುಳುತ್ತಿದೆಅರಿವೇ ಇಲ್ಲಏನೋ ಹೇಳುವ ಬಯಕೆತುಟಿ ಎರಡಾಗಿಸುವ ಧೈರ್ಯ ಸಾಲದುಕೈ ನಡುಗುತ್ತಿವೆಮೈ ಬೆವರುತ್ತಿದೆಎದೆಯೊಳಗೆ ಅಸ್ಪಷ್ಟ ಆತಂಕ ನೆನಪಿರಬಹುದು ನಿನಗೆನಾ ನಿನ್ನ ಮೊದಮೊದಲು ಕಂಡಾಗನೀ ನನ್ನ ಕಂಡೂ ಕಾಣದಂತೆನೋಡಿಯೂ ನೋಡದಂತೆಕಣ್ಣು ಹಾಯಸಿದಷ್ಟೂದೂರ ಕಾಣುವ ಮರೀಚಿಕೆಯಂತೆಕಣ್ಣಿಗೆ ಬಿದ್ದುಕೈಗೆ ಸಿಗದ ಮಾಯಾಜಿಂಕೆಯಂತೆಮರೆಯಾದದ್ದು ಮತ್ತೆಲ್ಲೋ ನಿನ್ನ ಹುಡುಕಿದಾಗಪಿಸುಗುಡುವ ರಾತ್ರಿಗಳಲಿತೆರೆದ ಕಿಟಕಿಯಾಚೆ ಮೊರೆವ ಕನಸುಗಳಂತೆಕರಿಮಲೆಯ ಬೆನ್ನಲ್ಲಿನ ನಿಚ್ಛಳ ನೀಲಾಕಾಶದಂತೆನಿನ್ನೊಲುಮೆಯ ಕುರುಹು ಸಿಕ್ಕಿದ್ದು ಈಗೀಗ ನನ್ನ ಪಾಲಿಗೆನಿನ್ನೊಲವಿನ ಜಲಪಾತದಲ್ಲಿಎಳೆ ಮೀನಾಗಿ ಈಜುವ ತವಕನಿನ್ನ ಸಾನಿಧ್ಯದಲಿನಾ ನನ್ನ ಸಂಪೂರ್ಣ ಕಳೆದುಕೊಂಡುಮತ್ತೊಮ್ಮೆ ಪಡೆದುಕೊಂಡುನಿನ್ನರ್ಧವೇ ಆಗಿ ಪರಿಪೂರ್ಣನಾಗುವ ತಹತಹಿಕೆಜ್ವರದುರಿಯಲ್ಲಿ ಕುದಿವ ಮಗುತಾಯ್ಮೊಲೆಗೆ ಕನವರಿಸುವಂತೆನಿನ್ನ ಹೆಸರ ಕರೆವಾಸೆಹೊಸಮಳೆಗೆ ಹದಗೊಂಡ ಮಣ್ಣಿನೆದೆಯ ಮೇಲೆಬಿದ್ದು ಬೇರೂರಿದ ಈ ಉಳಿಜಾಲಿಜಡಗೊಂಡು ಮುದಿ ಕೊರಡಾಗುವವರಗೆನಿನ್ನ ಸಾಂಗತ್ಯದಲಿನಿನ್ನ ನಿಷ್ಕಲ್ಮಶ ಪ್ರೇಮದುರಿಯಲಿದಹಿಸುವ ಬಯಕೆನಿನ್ನ ಮಡಿಲ ತೆಕ್ಕೆಯಲಿ ಬೆಚ್ಚಗೆ ಒರಗಿಕಣ್ಮುಚ್ಚುವ ಹಂಬಲ ******

ನಿವೇದನೆ… Read Post »

ಕಾವ್ಯಯಾನ

ನಡುಗಡ್ಡೆಯ ಹುಡುಗಿ

ಕವಿತೆ ಎಂ.ಜಿ .ತಿಲೋತ್ತಮೆ ನಾನು ಹರವಿನ ಜಲವ ಈಜಿ,ದಾಟಿಆ ದಡವ ಸೇರುವ ಬಯಕೆಕೋಟೆಯೊಳಗೊಂದು ಕೋಟೆಕಟ್ಟಿಕೊಂಡು ಕರೆದರೂ ನೀನು ಕೇಳುತ್ತಿಲ್ಲಸೇರಲಾಗುತ್ತಿಲ್ಲ… ದಿನಕ್ಕೆ ದೃಷ್ಟಿ ತಗುಲುವಅನಂತ ಕಣ್ಣು ,ಹುಚ್ಚು ಮನಸ್ಸುಗಳಲ್ಲಿನನ್ನದು ಒಂದುಅವಳ ಮೈಸಿರಿ,ಸೊಬುಗು ವರ್ಣನೆಗೆಸುತ್ತ ಹರಿಯುವ ಉದಕಕ್ಕೂ ಎಟಕದು ಈ ದಡಕ್ಕೂ ಆ ದಡಕ್ಕೂ ಅಂತರಅಳತೆಯಮಾಪನದಲ್ಲಿ ಅಗಮ್ಯಈ ಮನಕ್ಕೂ ಆ ಮನಕ್ಕೂ ಅಂತರವಿಲ್ಲಹಾಲಿನೊಳಗೆ ಸೇರಿಕೊಂಡ ಜೇನಂತೆಅಷ್ಟೇ ಹತ್ತಿರ ಇರಬಹುದು ಯಾವ ದಾರಿ ಹಿಡಿದು ಬರಲಿದಿನ ನಿತ್ಯ ಅರಳುವ ಪ್ರೀತಿಗೆಕಟ್ಟೆ ಕಟ್ಟಿದ್ದರೆ ಜೀವ ಹೇಗೆ ಉಳಿಯುವುದು ನೀನು ನಾನಾಗಿ ನಾನು ನೀನೇ ಎಂದುಹೀಗೆ ಬರೆದಿಟ್ಟ ಪ್ರೀತಿ ಭಾಷೆಯ ನುಡಿಗಳಹಾಳೆಗಳು ತೂರಿ ಬಿಟ್ಟರೆ ಓಡೋಡಿ ಬರುವೆಯಾ? ವಿನಾಕಾರಣ ಕಾಯಿಸಿ,ಬೇಯಿಸಿ,ನಿಂದಿಸಿಕೊನೆಗೆ ಸೋಲಬೇಕೆನ್ನುವ ಹಟಬೇಕೆಮೊದಲ ಬೇಟೆಗೆ ಒಪ್ಪಬಹುದಲ್ಲವೇ ಮತ್ತೆ ಅದನ್ನೇ ಹೇಳುವೆಎಷ್ಟು ದೂರ ನಿನ್ನ ನನ್ನ ನಡುವೆಮಧ್ಯ ಮುಳುಗಿಸುವವಿರೋಧ ಭಾವ ವಿಲ್ಲವಾದರೆಅಂತದೇನು ಭಿನ್ನತೆ ಇಲ್ಲ ***************

ನಡುಗಡ್ಡೆಯ ಹುಡುಗಿ Read Post »

ಕಾವ್ಯಯಾನ

ಒಲವಿನ ಪಹರೆ

ಕವಿತೆ ರೇಶ್ಮಾಗುಳೇದಗುಡ್ಡಾಕರ್ ಅರಳುತ್ತಿದೆ ಹೃದಯದಹೂ ಬನ ನಿನ್ನನೆನೆನಾದಕ್ಷಣ ….. ಎಣಿಸಲಾಗದ ಕನಸುಗಳದಿಬ್ಬಣ ಹೊರಟಿದೆಮನದೂರಿನ ಹೆದ್ದಾರಿಯಲಿನೆನಪಿನ ಬಿಡಿ ಹೂಗಳಸ್ವಾಗತದೊಂದಿಗೆ …. ನಿನ್ನ ಎದೆಯ ಗೂಡಿನಲ್ಲಿಬಚ್ಚಿಟ್ಟ ನನ್ನ ಚಹರೆಯಪಟವ ಮತ್ತೆ ನೋಡುವಾಸೆಈ ಸಂಜೆಯ ತಂಪು ಕಂಪಿನಸುಸಮಯದಲ್ಲಿ ….. ಬಯಕೆಯ ಕುಡಿನೋಟವೊಂದುಸದ್ದಿಲ್ಲದೆ ನಿನ್ನ ಬಳಿಸಾರಿದೆಸ್ವೀಕರಿಸಿ ಒಪ್ಪಿಗೆಯ ಮುದ್ರೆಯಾರವಾನಿಸುವೆಯಾ ನಿನ್ನ ಬೊಗಸೆಕಂಗಳ ಬೆಳಕಿನಲ್ಲಿ…‌‌‌‌.. ***********

ಒಲವಿನ ಪಹರೆ Read Post »

You cannot copy content of this page

Scroll to Top