ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ನಿಮ್ಮ ಹಾಗೆ ಬರೆಯಲಾಗುವುದಿಲ್ಲ ವಿ.ಎಸ್.ಶಾನಬಾಗ್ ನನಗೆ ನಿಮ್ಮ ಹಾಗೆ ಬರೆಯಲಾಗುದಿಲ್ಲನಿಮ್ಮ ಬಗ್ಗೆ ನೀವು ಬರೆದ ಹಾಗೆನನ್ನ ಬಗ್ಗೆ ನನಗೆ ಬರೆಯಲಾಗುವುದಿಲ್ಲನೀವು ಹೇಳಿದಹಾಗೆನಿಮ್ಮ ಸ್ನೇಹಕ್ಕೆ ಬರೆದಿದ್ದನೆಲ್ಲಒರೆಸಿ ಹಾಕಿದೆ ಎಲ್ಲ ಅವನು ಅವಳ ಹಳೆಯ ಪ್ರೀತಿಒಂದಾಗಿ ಮತ್ತೆ ಮತ್ತೆ ಬೇರೆಯಾದ ರೀತಿಎಲ್ಲ ಎಲ್ಲ ಎಲ್ಲ ಅನುರಾಗಕ್ಕೆಅವಳನ್ನು ಕೂಡಲಾಗುವುದಿಲ್ಲಅವನನ್ನು ಕಳೆಯಲಾಗುವುದಿಲ್ಲಇವರ ಬಗ್ಗೆನೀವು ಬರೆದಹಾಗೆನನಗೆ ಬರೆಯಲಾಗುವುದಿಲ್ಲಪ್ರೀತಿಗೆ ಎಲ್ಲ ಅವ ಅವಳ ನೆನೆದ ಹಾಗೆಅವಳು ಅವನು ನಡೆದಹಾಗೆಒದ್ದೆ ನಿಂತ ಅವರನ್ನು ಕವಿತೆಯಲ್ಲಿಕರೆಯಲಾಗುವುದಿಲ್ಲಆದ್ದರಿಂದ ನಿಮ್ಮ ಹಾಗೆಬರೆಯಲಾಗುವುದಿಲ್ಲಪ್ರೀತಿಗೆ ಎಲ್ಲ ಆದ್ದರಿಂದ ನಾನು ನಿಮ್ಮಗುಂಪಿನಲ್ಲಿ ಸಲ್ಲನೀವು ಬರೆದದ್ದೇ ಕವಿತೆತೆರೆದದ್ದೇ ಕಥೆತಾಳೆಯಾಗದಿದ್ದರೂ ಯೋಚನೆ, ರೂಪಕಕೂರಿಸಿ ಶಬ್ಧಗಳ ಜಾತಕಪೀತಿಯಲ್ಲಿ ಕೂಡಿದ ಕ್ಷಣಗಳಶಬ್ದಗಳಲ್ಲಿ ತುಂಬಿಸಲಾಗುವುದಿಲ್ಲಎಲ್ಲ ಅನುರಾಗಕೆ ಸಲ್ಲ ನಿಮ್ಮದೇ ಆದ ನುಡಿಕಟ್ಟುಗಳಿಂದನೀವೆಲ್ಲ ಕವಿತೆಯಬಗ್ಗೆ ಹೇಳುತ್ತಲೇ ಇರುವಾಗನಿಮ್ಮನ್ನು ಕೇಳಿದ್ದು ಹೆಚ್ಚು,ಬರೆದದ್ದು ಬರೇ ಹುಚ್ಚು ಅವನು ಅವಳ ಬಗ್ಗೆ ಸದಾ ಬರೆಯುವ ನಿಮ್ಮಕಾವ್ಯ,ಲಯ,ಉಪಮೆ ರೂಪಕ ಪ್ರತಿಮೆ ಪ್ರತಿಭೆಬೆನ್ನಲ್ಲೇ ಹೊತ್ತ ನಿಮಗೆನಿಮ್ಮದೇ ನುಡಿಕಟ್ಟು ಹೇಳಿದ್ದೆಲ್ಲ ಕವಿತೆನೀವು ಬರೆದದ್ದನ್ನೆಲ್ಲ ಪ್ರಕಟಿಸುವವು ಎಲ್ಲನಿಮ್ಮ ಹಾಗೆ ಬರೆದರೂ ಓದುವವರಿಲ್ಲಪ್ರೀತಿಗೆ ಎಲ್ಲ ನಮ್ಮಂತೆ ಕವಿತೆಯೂ ಪ್ರೀತಿಯಲ್ಲಿಪ್ರಕಟವಾಗುತ್ತವೆ ಕೆಲವರದು ಖಾಸಗಿಸಾರ್ವಜನಿಕವಾಗಲು ಸಲ್ಲಆದ್ದರಿಂದಲೇ ನಿಮ್ಮ ಹಾಗೆ ಬರೆಯುವುದಿಲ್ಲನಿಮ್ಮ ಸಲ್ಲದ ಪ್ರೀತಿಗೆ ಎಲ್ಲ ***********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಇಳೆಯ ಸ್ವಗತ ಕಲಾ ಭಾಗ್ವತ್ ಹಕ್ಕಿ ಹಾರಾಡಿಗೂಡ ಸೇರುವ ಸಂಜೆಚಿಲಿಪಿಲಿಗಳ ಸದ್ದು ಗದ್ದಲ ತಾನೇ ಗೆದ್ದೆನೆಂಬ ದಣಿವುಹಿಗ್ಗಿ ಹಿಂದಿಕ್ಕಿ ಓಡಿಹುದುಕರುಳ ಕುಡಿಗಳ ಸಿದ್ಧಿ ಸಂಭ್ರಮದಕಥೆಗಳಿಗೆ..ಮೆಲುದನಿಯಲೇ ಉತ್ತರಒಳಗೊಳಗೆ ಏರು ಎತ್ತರ! ಪಿಸುಮಾತಿನ ರಸಘಳಿಗೆ,ಕುಸುರಿ ಮಾಡಿದೆ ಕನಸ,ಪಡುವಣದ ಕೆಂಪಂಚಿನಲಿ..ಹೋಗಿಯೇ ಬಿಟ್ಟನಾಳೆ ಬರುವೆನೆಂದು!ಇಲ್ಲೀಗ ಕಗ್ಗತ್ತಲು.. ಕೈಯೊಂದು ಚಾಚಿತು ಬಾಎಂದು ಬೆಳಕ ತೋರಲು..ಆಹಾ.. ಎಂತಹ ಶುಭ್ರ !ಎಂದಿನಂತಲ್ಲ ಇಂದು.. ಮಾಸಕೊಮ್ಮೆಯಾದರೂಮರೆಯಾದರೇ ಚಂದಈ ಚಂದ್ರಮ..ಮರುದಿನ ತುಸು ಮಾತ್ರ ನೋಡಲು.ಪುಟ್ಟ ಮಗುವಿಗೆಬೇಕಲ್ಲವೇ ಊಟದಾಟಕೆ?ಕರುಣೆಯೋ, ಒಲುಮೆಯೋ..ಇಣುಕಿದರೆ ಸೆಳವೊಂದಿಹುದು ದಿನದಂತ್ಯದ ಶಾಂತ, ಹಸಿತಅವನ ಮೊಗವೊಂದೇ ಸಾಕುಹಂಚಿಕೊಳ್ಳಲು ಸಿಹಿ-ಕಹಿಯ ಬೆಳಗಾದರೆ ಬಂದೇ ಬಿಡುವನವನುಬಡಿದೆಬ್ಬಿಸಲುಮಾತಿಗೆ ತಪ್ಪದೆ,ಮೂಡಣವ ರಂಗೇರಿಸಿ..ತಿಳಿಗೊಳದಲಿ ತೋರಿ ಪ್ರತಿಬಿಂಬಹಸಿರಿಗಷ್ಟೇ ಕೇಳುವುದುಕಿವಿಯಲೂದಿದಉಸಿರಿನ ಸ್ವರ..ಯಾಕೆ ಆಯಾಸ? ಮುಸುಕ ಸರಿಸಿ, ಮುಖವರಳಿಸಿಹಸಿ ಕನಸಲಿ ಸ್ವಾಗತಿಸಲೇಮತ್ತೆ ಸಂಜೆಯ?.. ************************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೆನಪುಗಳ ಸುತ್ತ” ರಿತೇಶ್ ಕಿರಣ್ ಕಾಟುಕುಕ್ಕೆ ಅಂದು..,ನನ್ನಪ್ಪ ಸೋರುವಮುಳಿ ಮಾಡಿನೆಡೆಗೆದೃಷ್ಟಿ ನೆಟ್ಟಿದ್ದ.,ನಾವೋ…..ಅಂಗಳದ ಬದಿಯಲ್ಲೋಹರಿವ ತೊರೆಯ ಬದಿಯಲ್ಲೋಉದುರುವ ಮಳೆಹನಿಗಳ ಜೊತೆಹರಿವ ನೀರಿನ ಜೊತೆಮೈ ಮರೆಯುತ್ತಿದ್ದೆವು…… ಅಮ್ಮನೂ..,ಅಷ್ಟೇ., ನೀರು ಹೀರಿದಸೌದೆಯ ಒಲೆಗಿರಿಸಿಕಣ್ಣು ಕೆಂಪಗಾಗಿಸಿಊದಿಸಿಕೊಂಡಿದ್ದಳು..,ಮೂರು ಹೊತ್ತುಹೊಟ್ಟೆ ತಣಿಯದಿದ್ದರೂಒಂದು ಹೊತ್ತಿಗಾದರೂಪಾತ್ರೆ ಪಗಡೆಗಳಸದ್ದಾಗುತಿತ್ತುಹೊಟ್ಟೆ ಸಮಾಧಾನಿಸುತ್ತಿತ್ತು……, ಹರಿದ.,ಅರಿವೆಗೆ ತೇಪೆ ಹಾಕಿಸಿವರುಷವಿಡಿ ಕಳೆದರೂಯಾವುದೇ ಸಂಕೋಚವಿರಲಿಲ್ಲಮನೆಯ ಒಳಗೂಹೊರಗಿನ ಜಗುಲಿಗೂ..,ದಾಟಿದರೆ ಅಂಗಳಕ್ಕೆ ಮಾತ್ರನಮ್ಮ ಮಾತುಗಳು ಕೇಳಿಸುತಿತ್ತು.ನಮ್ಮ ಕನಸುಗಳೂ ಅಷ್ಟೇ..!ಅಷ್ಟಕ್ಕೇ ಸೀಮಿತವೋ..?ತಿಳಿಯೆ ನಾ………., ಅಪ್ಪ ದಿನಾ.,ಮಳೆಯಲ್ಲಿ ತೋಯುತ್ತಿದ್ದಸಂಜೆಗೆ ನಮ್ಮಆತ್ಮೀಯ ಗೆಳೆಯನಾಗುತ್ತಿದ್ದ.ಒದ್ದೆಯಾದ ವಸ್ತ್ರದಅರಿವೂ ಅವನಿಗಿಲ್ಲ.,ಚಳಿಯ ಅನುಭವವೂ ಅವನಿಗಿಲ್ಲ.,ನಮ್ಮ ಮುಖವ ನೋಡಿಎಲ್ಲವ ಮರೆಯುತ್ತಿದ್ದಮುಖವರಳಿಸಿ ನಗುತ್ತಿದ್ದ..‌.‌‌‌….., ಮನೆಯಮಾಡಿನ ಮೇಲೆಹೊಗೆ ಸುರುಳಿಯಾಡುವಾಗಇತ್ತ ನೇಸರನು ಓಡಿದ್ದ..,ಹೊರಗೆನಾಯಿ ಬೊಗಳಿದರೂಒಳಗೆಬೆಕ್ಕು ಸುತ್ತಿ ಸುತ್ತಿ ಬರುವಾಗಲೂಅಮ್ಮ ಮಾತ್ರಒಲೆಯ ಬಾಯಿಗೆ ಪಹರೆಯಾಗಿದ್ದಳು.!ಇಂದು..,ಅದೆಲ್ಲ ನೆನಪುಗಳು ಮಾತ್ರ………., ಹೊರಗೆಮೈ ಕೈಗೆ ಮಣ್ಣಮೆತ್ತಿಸಿಕೊಂಡ ಅಪ್ಪ.,ಒಳಗೆ ಬೂದಿಮೆತ್ತಿಸಿಕೊಂಡ ಅಮ್ಮ.,ಜ್ಞಾನ ದೇಗುಲದಬಾಗಿಲ ಕಾಣದಿದ್ದರೂ..,ಅನ್ನ.., ನೀರಿನಅರಿವೂ ಇತ್ತುಮಣ್ಣ ವಾಸನೆಯೂಮೈಗಂಟಿಯೇ ಇತ್ತು………. *************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೂರು ಸಂಜೆ ಫಾಲ್ಗುಣ ಗೌಡ ಅಚವೆ. ಮೋತಿ ಗುಡ್ಡದ ಬಂಡೆಗಳ ಮೇಲೆಕುಳಿತ ಮೋಡಗಳು ಎಂಥದೋಪಿಸುಮಾತನಾಡುತ್ತ ಅಲ್ಲೇ ಕೆಳಗೆಹೈಗರ ಹುಡುಗಿಯರು ಅಬ್ಬಿಯ ನೀರು ಬೆರೆಸಿ ಮೀಯುವ ಚಂದನೋಡುತ್ತಿವೆ. ಸದಾ ವಿಪ್ರಲಂಭ ಶ್ರಂಗಾರದ ಕೊಮಣೆ ಮಾಡುತ್ತಮಂಗಟ್ಟೆ ಹಕ್ಕಿಗಳು ಆಕಾಶದೆತ್ತರಕ್ಕೆ ಹಾರುತ್ತ ಹಾರುತ್ತ ಹನಿಮೂನು ಮೂಡಿನಲ್ಲಿ ಸುಖದ ಮೂರೇ ಗೇಣು ಬಾಕಿ. ಗುಮ್ಲೆಗದ್ದೆಯಿಂದಿಳಿದು ಬರುವ ವಿಭೂತಿಯಾಣದ ಭೈರವೇಶ್ವರನ ಬೂದಿ ತೊಳೆದು ರಾಶಿ ರಾಶಿ ಕಟ್ಟಿಗೆಗಳ ಮೇಲೇರಿ ಗಂಗಾವಳಿಯ ಸಮುದ್ರದಲಿಮೀಯುತ್ತದೆ. ಅಶ್ಲೇಷಾ ಮಳೆಗೆ ಹುತ್ತದಿಂದೆದ್ದಅಣಬೆಗಳ ಕೊಡೆ ಹಿಡಿದು ಇರುವೆಗಳು ಮೊಟ್ಟೆಯನ್ನು ಹೊಟ್ಟೆಯಡಿ ಹೊತ್ತು ಹೊಸ ಮನೆಗೆ ಶಿಪ್ಟಾಗುತ್ತಿವೆ. ಅಟ್ಟದ ಗೋಣಿಚೀಲದ ಮೇಲೆ ವಾರ್ಷಿಕೋತ್ಸವ ಆಚರಿಸಿಕೊಂಡ ಬೆಕ್ಕಿನ ಸಂಸಾರ ಸೀಮಂತ ಕಾರ್ಯಕ್ರಮದ ತಯಾರಿಯಲ್ಲಿವೆ. ಒಂದೇ ಸವನೆ ಹೊಯ್ಯುವ ಜಡಿಮಳೆಯ ಹೊಳೆಗೆ ತೇಲಿ ಬಂದ ಹೈಗರ ತೋಟದ ತೆಂಗಿನ ಕಾಯಿಗಳು ನೀರಕುಳಿ ಸಣಕೂಸನ ಪಾಲಾಗಿವೆ. ಮಣಕನ ಗುಂಡಿಯಲ್ಲಿ ಗಾಳ ಹಾಕುವುದುಸಂಕ ಕಟ್ಟುವುದುಹಳ್ಳ ಹಾಯುವುದುಹಾಲ್ಟಿಂಗ್ ಬಸ್ಸು ಹಳ್ಳದಚ್ಚಿಗೆ ನಿಲ್ಲುವುದರ ಜೊತೆಪುಲೋಟು ಮನೆಯಿಂದ ಒಣ ಜಬ್ಬಿನ ಸಾರಿನ ಕಮ್ಮಗಿನ ಅದಮ್ಯ ಗಂಧ ಒಂದೇ ಸವನೆಮೂಗಿಗೆ ಬಡಿಯುತ್ತಿದೆ. ಮಕ್ಕಳು ಮನೆಯ ಮೂಲೆಯಲ್ಲೆಲ್ಲೋ ಕೂಡಿಟ್ಟ ಗೇರುಬೀಜದ ಸುಟ್ಟ ಸೊನೆಯ ಘಾಟುಇಡೀ ಊರಿಗೆ ಬಿತ್ತರಿಸಿದೆ. ಮಳೆ ಮಾತ್ರ ಹೊಯ್ಯುತ್ತಲೇ ಇದೆಆಕಾಶಕ್ಕೆ ಓಝೋನಿನಂತ ತೂತು ಬಿದ್ದಹಾಗೆ! ************************************

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ರತ್ನರಾಯಮಲ್ಲ ಆ ಕಡೆ ಭಜನೆಯ ನಾದವು ಜಿನುಗುತಿದೆಈ ಕಡೆ ಆಕ್ರಂದನ ಮುಗಿಲು ಮುಟ್ಟುತಿದೆ ಕಣ್ಣೀರ ಕೋಡಿ ಹರಿಯುತಿದೆ ಸದ್ದಿಲ್ಲದೆ ಇಲ್ಲಿಅಲ್ಲಿ ಹೆಂಡದ ನಶೆ ನೆಲವು ಚುಂಬಿಸುತಿದೆ ಸಂಬಂಧಗಳು ಗೋಳಾಡುತಿವೆ ನೆನೆ ನೆನೆದುಹಲಗೆಯ ಸದ್ದಿಗೆ ಹೆಜ್ಜೆಯು ಕುಣಿಯುತಿದೆ ಗುಲಾಬಿ ಹೂ ಕಸವಾಗಿ ಬಿದ್ದಿದೆ ಬೀದಿಯಲ್ಲಿಗಡಿಯಾರದ ಮುಳ್ಳು ಹೆಣವನ್ನು ಎತ್ತುತಿದೆ ದರುಶನಕ್ಕೆಂದು ಜನ ಸಾಲುಗಟ್ಟಿಹರು ಮಲ್ಲಿಕುಣಿಯ ಮುಖ ಕಾಣದೆ ಗುಂಪು ಚದುರುತಿದೆ **********************

ಗಝಲ್ Read Post »

ಕಾವ್ಯಯಾನ

ಪ್ರಶ್ನೆಗಳು

ಪ್ರಶ್ನೆಗಳು ಭಾಗ್ಯ ಸಿ. ಕಾಣದ ವಿಧಿಯು ಸೂತ್ರದಾರನಾಗಿಹಿಡಿದಿಟ್ಟಿರುವನು ಜೀವನವನು ಎನ್ನುವರುಯೋಜನೆ ಮೇಲೊಂದು ಯೋಜನೆ ಮಾಡಿದರೂಅಣತಿಯಂತೆ ಸಾಗಿತ್ತಿಲ್ಲ ಬದುಕು ಕ್ರಮಿಸಬೇಕಾದ ಹಾದಿ ಬಹಳ ದೂರವಿದೆಏಕಾಂಗಿಯಾಗಿ ದಾರಿ ಸವಿಸಬೇಕಿದೆಕಿತ್ತೆಸೆಯಬೇಕಿದೆ ಸುತ್ತಲಿನ ಮುಳ್ಳನುಇರಿಸಬೇಕಿದೆ ಅಂತರಾಳದಲಿ ಕಲ್ಲನುನೊಯದಿರಲಿ ಅಪಹಾಸ್ಯದಿಂದಲಿ ಒಂದು ಹೆಜ್ಜೆ ಗುರಿಯಡೆಗೆಜಗ್ಗುತ್ತಿದೆ ಎರಡೆಜ್ಜೆ ಹಿಂದುಗಡೆಗೆಹಿಡಿದೆಳೆಯುತ್ತಿರುವವರ ನಾ ಅರಿಯೆವಿಧಿಯಾಟವೆನ್ನುತ್ತಿದೆ ಪ್ರಪಂಚಶಿಕ್ಷೆಯಾಗಬೇಕು ತಪ್ಪಿಗೆ ಅರಿವಿದೆತಿಳಿಯದೆ ಪ್ರತಿಕೂಲ ಪರಿಣಾಮವೇಕೆ? ಶಿಸ್ತಿನ ಯೋಜನೆಗೆ ಜಯ ಬೇಕಿದೆಪ್ರಶ್ನೆ ಎದ್ದಿದೆ ಮನಸ್ಸಿನಲಿಕಾಣದ ವಿಧಿಯೇಕೆ ಅಡ್ಡಗಾಲುಭವಿಷ್ಯ ನಿರ್ಮಾಣದಲಿ *********************

ಪ್ರಶ್ನೆಗಳು Read Post »

ಕಾವ್ಯಯಾನ

ಕಾವ್ಯಯಾನ

ಒಂದು ವೈರಸ್ ಮುಂದಿಟ್ಟು ಕೊಂಡು ನಾಗರಾಜ ಹರಪನಹಳ್ಳಿ ಅಬ್ಬಾ ಮೊನ್ನೆ ಸ್ವಾತಂತ್ರ್ಯ ಆಚರಸಿದೆವುಅದೆಷ್ಟು ಬಿಗಿ, ಅದೆಷ್ಟು ಭಯಗಳನ್ನಿಟ್ಟುಕೊಂಡುಎಲ್ಲಿಯ ಗಾಂಧೀ, ಎಲ್ಲಿಯ ಬ್ರಿಟಿಷರು, ಎಲ್ಲಿಯ ಸುಭಾಷ್ ಚಂದ್ರ …ಯಾರ ಹಂಗು ಇರಲಿಲ್ಲಒಂದು ವೈರಸ್ ಕಾರಣವಾಗಿ ನಗುವಿಲ್ಲ ಮೊಗವಿಲ್ಲ, ಮಕ್ಕಳಿಲ್ಲ, ಘೋಷಣೆಯಿಲ್ಲ, ಪೋಷಣೆಯಿಲ್ಲಎಲ್ಲವೂ ಕಳೆದುಕೊಂಡ ಭೂಮಿಮಕ್ಕಳನು ಕಳೆದು ಕೊಂಡ ತಾಯಿಏನೂ ಉಸಿರೆತ್ತುವಂತಿಲ್ಲವೈರಸ್ ಕಾರಣವಾಗಿ ಏನಿತ್ತು ಅಲ್ಲಿ , ಭಯ ಬಿಟ್ಟುಮುಖ ಗುರುತು ಸಿಗದಂತೆ ಹಾಕಿದ ಬಾಯಿಪಟ್ಟಿಉಸಿರೆತ್ತದಂತೆ ಕಾಡಿದ ವೈರಸ್ಕಾರಣವಾಗಿ ಹೌದು, ಈಗೀಗ ಎಲ್ಲೆಲ್ಲೂ ಫತ್ವಾಗಳ ಹೊರಡಿಸುವುದೇ ಆಗಿದೆ;ಮನುಷ್ಯನಿಂದ ಮನುಷ್ಯನ ಇಬ್ಬಾಗವಾದರೂಕಸಿದ ಸ್ವಾತಂತ್ರ್ಯ ಪಕ್ಕದಲ್ಲಿ ಇದ್ದವಗೆ ಗೊತ್ತಾಗದಂತೆ ಕಸಿದರೂಮಾತಾಡುವಂತಿಲ್ಲವೈರಸ್ ಕಾರಣವಾಗಿ ಭೂಮಿಯನ್ನು ಮಾತೆ ಎನ್ನುತ್ತಲೇ , ಎದೆಯ ಮೇಲೆ ಕಾಲಿಟ್ಟು ತುಳಿದವರುಅವಳ ಕಾಲಿಗೆ ಕಾಲಬಂಧಿ ಹಾಕಿದರೂ ; ಮಾತಾಡುವಂತಿಲ್ಲಕಾಣದ ವೈರಸ್ ಕಾರಣವಾಗಿ ಸ್ವಾತಂತ್ರ್ಯದ ದಿನ ಸ್ವಾತಂತ್ರ್ಯ ಕಳೆದುಕೊಂಡವರು ,ಕಸಿದುಕೊಂಡವರು, ಇನ್ನೂ ಏನೇನೋ ಬಸಿದುಕೊಂಡವರುಮಾತಾಡುವಂತಿಲ್ಲವೈರಸ್ ಕಾರಣವಾಗಿ ಕಾಣದ ಕೇಳದಕಂಡೂ ಕಾಣದ ವೈರಸ್ ಕೊಲ್ಲಲು ಹಾಗೂಜನರ ಬದುಕಿಸಲು ಕವಿದಾರಿಯಿಲ್ಲದ , ಚಾವಿಯಿಲ್ಲದಮನೆ ಮನದಲ್ಲಿ ಅವಿತಿರುವ ಔಷಧಿ ಹುಡುಕಲು ಹೋಗಿದ್ದಾನೆ ಕವಿ ದೇಶಾಂತರ ಅಲೆದಾಟಕೆ ************************

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಅಕ್ಷತಾ ಕೃಷ್ಣಮೂರ್ತಿ. ನಿನ್ನ ಮುಂಗೈ ಮೇಲೆ ನನ್ನ ಹೆಸರು ಹೇಗೆ ಬರೆಯಲಿ ನೀನೇ ಹೇಳುನಿನ್ನ ಗಲ್ಲ ಕುಕ್ಕುವ ಮುಂಗುರುಳು ಹೇಗೆ ಮುಟ್ಟಲಿ ನೀನೇ ಹೇಳು. ಆ ಒಂದು ದಿನದ ಸವಿ ನೆನಪು ಕಣ್ಣ ತುಂಬ ಹಾಗೆಯೇ ಉಳಿದಿದೆನಿನ್ನ ಕನಸಿನ ಬಾಗಿಲು ತೆರೆದೆ ಇದೆ ಹೇಗೆ ಮುಚ್ಚಲಿ ನೀನೇ ಹೇಳು. ಮನದ ಅಂಗಳದಲ್ಲಿ ನಿನ್ನ ಹೆಸರಿನ ರಂಗೋಲಿ ಹೂ ನಗುವಿನಂತೆನಿನ್ನ ಮೌನ ಧ್ಯಾನ ಇನ್ನು ಇದೆ ಹೇಗೆ ಎಬ್ಬಿಸಲಿ ನೀನೇ ಹೇಳು. ನೆರಳಿನೊಳಗಿನ ನೆರವಾಗಬೇಕು ನೆನಪಲಿ ನಾನು ನೀನು ಕೈ ಕೈ ಹಿಡಿದುನಿನ್ನ ನಗುವಿನೊಳಗೆ ಇನ್ನೂ ಸಲುಗೆ ಇದೆ ಹೇಗೆ ಮರೆಯಲಿ ನೀನೇ ಹೇಳು. ಉದುರಿದ ಎಲೆಯೊಂದು ನಗುತ ಸ್ವರ್ಗ ಸುಖ ಅನುಭವಿಸುತ್ತಿದೆ ಎನ್ನ ಮುಂದೆನಿನ್ನ ನೆನಪಿನೊಳಗೆ ನೆನಪಾಗದೇ “ಅಕ್ಷತಾ” ಹೇಗೆ ಇರಲಿ ನೀನೇ ಹೇಳು. **********************

ಗಝಲ್ Read Post »

You cannot copy content of this page

Scroll to Top