ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಏಕಾಂತದ ನಿರೀಕ್ಷೆಯಲ್ಲಿ

ಕವಿತೆ ಏಕಾಂತದ ನಿರೀಕ್ಷೆಯಲ್ಲಿ ತೇಜಾವತಿ.ಹೆಚ್.ಡಿ. ಬಹಳ ಖುಷಿಯಾಗಿದ್ದೆ ನಾನುಹರೆಯದ ವಯಸ್ಸಿನಲ್ಲಿ ಮೂಡಿದಅಸ್ಪಷ್ಟ ಕನಸುಗಳಿಗೆ ರೆಕ್ಕೆಪುಕ್ಕ ಕಟ್ಟಿಕೊಂಡುನನ್ನದೇ ಕಲ್ಪನಾ ಲೋಕದಲ್ಲಿ ತಾರೆಯಾಗಿ ಪ್ರಜ್ವಲಿಸಿದ್ದೆ ದಿಂಬಿಕೆ ತಲೆಗೊಡುವುದೇ ತಡನಿದ್ರಾದೇವಿಗೆ ಶರಣಾಗುತ್ತಿದ್ದೆಗುಡಿಸಿಲಿನ ಅಂಗಳದಿ ಕುಳಿತುಅರಮನೆಯ ರಾಣಿಯಾಗಿದ್ದೆಅತೀ ಸೂಕ್ಷ್ಮ ಸಂವೇಗಗಳಿಗೂ ಪ್ರತಿಕ್ರಿಯಿಸುತ್ತಾಚಳಿಗೆ ಬೆಂಕಿ ಕಾಯಿಸುವಾಗಮಾರು ದೂರವಿರುವಾಗಲೇನೆಗೆದು ಹೌಹಾರಿ ಬೀಳುತ್ತಿದ್ದೆ ಎಡವಿದ ಕಲ್ಲಿಗೂ ಕಂಬನಿಗರೆದುಮಳೆಯಲ್ಲಿ ತೋಯುತ್ತಿದ್ದೆಪುಟ್ಟ ಪುಟ್ಟ ಕಂಗಳಲಿ ದೊಡ್ಡ ದೊಡ್ಡ ಖುಷಿಯ ಕ್ಷಣಗಳನ್ನು ಸೆರೆಹಿಡಿಯುತ್ತಿದ್ದೆ ಪ್ರತಿ ವೀಕೆಂಡ್ ಬಂತೆಂದರೆ ಸಾಕುಕಾಲಿಗೆ ಚಕ್ರ ಕಟ್ಟಿದವಳಂತೆ ಗರಗರ ಗಿರಕಿ ಹೊಡೆಯುತ್ತಿದ್ದೆ ಬರುಬರುತ್ತಾ….ಕಾಯ ಗಟ್ಟಿಗೊಂಡುಮನಸ್ಸು ಪಕ್ವವಾಗಿಚರ್ಮ ಸುಕ್ಕುಗಟ್ಟಿಅಂತರಂಗ ಬಹಿರಂಗಗಳೆರಡರ ಆದ್ಯತೆಗಳೊಂದಿಗೆಕಾಲ ಬದಲಾಯಿತುಪರಿಸ್ಥಿತಿ ಬದಲಾಯಿತುಈಗ ನಾನೂ ಕೂಡ.. ಬದಲಾವಣೆ ಜಗದ ನಿಯಮಕೆಂಡ ಮುಟ್ಟಿದರೂ ಕೈ ಸುಡುತ್ತಿಲ್ಲ ಈಗಅಕ್ಷಿಗಳ ಸನಿಹವೇ ಸ್ವರ್ಗ ತೋರಿಸಿದರೂ ತೇಲಾಡುವ ಮರ್ಜಿಯಿಲ್ಲಮನೆ -ರಸ್ತೆಗಳ ತುಂಬೆಲ್ಲಾ ವಾಹನಗಳ ಕಾರುಬಾರಿದ್ದರೂ ತಿರುಗಾಡಬೇಕೆನಿಸುತ್ತಿಲ್ಲ ಪಟ್ಟದರಸಿಯಾಗಿರುವೆ…ಆದರೀಗ ಭವದ ಭೋಗಗಳನ್ನೇ ತೊರೆದಿರುವೆಸದ್ಯಕ್ಕೆ ಮನಸ್ಸು ಮತ್ತೇನನ್ನೋ ಬಯಸುತ್ತಿದೆದೂರದ ಬೆಳಕನೊಂದ ಅರಸಿ ಹೊರಟಂತಿದೆಗತಿಸಿದ ಖುಷಿಯನ್ನು ಮತ್ತೆ ಪಡೆಯಲು ಏಕಾಂತದಿ…. *****************************

ಏಕಾಂತದ ನಿರೀಕ್ಷೆಯಲ್ಲಿ Read Post »

ಕಾವ್ಯಯಾನ

ಕಾವ್ಯಯಾನ

ಮತ್ತೆ ಮಳೆಯಾಗಲಿ ಸುನೀಲ್ ಹೆಚ್ ಸಿ ಎದೆಯಲ್ಲಿ ಹಾಗೆ ಕುಳಿತಿರುವ ನೋವುಗಳೆಲ್ಲಾಅಳಿಸಿ ಹೋಗುವ ಹಾಗೆಮನಸಲ್ಲಿ ಬೆಂದು ಬೆಂಡಾಗಿರುವ ದುಃಖ ಗಳೆಲ್ಲಾತೊಳೆದು ಹೋಗುವ ಹಾಗೆಕಳೆದು ಹೋಗಿರುವ ಕಣ್ಣೀರ ಕ್ಷಣಗಳು ಮತ್ತೆನೆನಪಾಗದ ಹಾಗೆಒಣಗಿ ಬಣ ಗುಟ್ಟಿದ್ದ ಕಣ್ಣುಗಳು ಆನಂದದಲ್ಲಿ ತುಂಬಿ ತುಳುಕುವ ಹಾಗೆಹೃದಯದ ಕಿಟಕಿ ಬಳಿ ಮತ್ತದೇ ಶಬ್ದಇಂಪಾಗಿ ಕೇಳುವ ಹಾಗೆಹೆಜ್ಜೆ ಇಡಲು ಹೆದರುತ್ತಿದ್ದ ಕಾಲುಗಳಿಗೆ ಶಕ್ತಿಸಿಂಪಡಿಸುವ ಹಾಗೆಬರಹಗಳೇ ಅಳಿಸಿ ಹೋಗಿದ್ದ ಹಣೆಯಲ್ಲಿ ಕೇಸರಿ ತಿಲಕ ಸದಾ ನಗುವ ಹಾಗೆಎಲ್ಲಾ ಕಳೆದು ಹೃದಯದಲ್ಲಿ ಪ್ರೀತಿ ಎಂಬ ಹಸಿರುಮತ್ತೆ ಚಿಗುರುವ ಹಾಗೆನಮ್ಮ ಪ್ರೀತಿಯಲ್ಲಿ ನಮಗೆ ಅರಿವಿಲ್ಲದೆಯೇ ಪವಾಡಗಳೆ ನಡೆದು ಹೋಗುವ ಹಾಗೆ *********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬಿಡುಗಡೆ ರುಕ್ಮಿಣಿ ನಾಗಣ್ಣವರ ನಂಬಿಗಸ್ಥ ಕುನ್ನಿಯಂತೆ ಪಾಲಿದತಲೆತಲೆಮಾರಿನ ಮೌನವನ್ನುಮತ್ತೊಮ್ಮೆ ಮುರಿದುದವಡೆಯಲ್ಲಿ ಒತ್ತಿ ಹಿಡಿದಸಿಟ್ಟು ಬಳಸಿ ಹೊಟ್ಟೆಬಾಕರಹುಟ್ಟಡಗಿಸಬೇಕಿದೆ ತುತ್ತು ಅನ್ನಕ್ಕೆ, ತುಂಡು ಭೂಮಿಗೆಕೈ ಕಟ್ಟಿ, ಬಾಯಿ ಮುಚ್ಚಿ,ಟೊಂಕದಲ್ಲಿರಿಸಿದಸ್ವಾಭಿಮಾನ ಗಾಳಿಗೆ ತೂರಿಜೀತದಾಳಾಗಿ ದುಡಿಯುವಕಾಲ ದೂರಿಲ್ಲಅರಿಯಬೇಕಿದೆ ಅಗೋ…ಉರುಳಿಹೋದ ದಿನಗಳುಮರುಕಳಿಸುವ ಕರಾಳಕ್ರೌರ್ಯದ ಕೂಗುಇತ್ತಲೇ ಹೆಜ್ಜೆ ಇರಿಸಿದೆ ನರಳಾಟದ ಕೆಂಡದಲಿಅಂಡು ಸುಡುವ ಮೊದಲುಎಚ್ಚೆತ್ತುಕೊಳ್ಳಬೇಕಿದೆಕ್ರಾಂತಿಯ ಕಹಳೆ ಮೊಳಗಿಸಿನಮ್ಮವರಿಂದಲೇ ನಾವುಬಿಡುಗಡೆ ಹೊಂದಬೇಕಿದೆ.. *****************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ದೇಶಪ್ರೇಮ ಗೋಪಾಲತ್ರಾಸಿ ದೇಶಎಂದರೆಸೀಮೆಯೊಳಗಿನಬರೇಭೂಭಾಗವಲ್ಲ ದೇಶಪ್ರೇಮಕೋಟೆಯೇರಿಊದುವತುತ್ತೂರಿಯೇನಲ್ಲ ದೇಶಪ್ರೇಮ,ವ್ವವಹಾರ, ರಾಜಕೀಯಧರ್ಮ-ರೀತಿ-ರಿವಾಜುಪೊರೆಕಳಚುವಸಹಜಮಾನವಪಥ ನಮ್ಮಷ್ಟೇ, ನಮ್ಮಂತಹಸಹಜೀವದಕುರಿತಷ್ಟುಕಾಳಜಿ ಸಕಲಜೀವಜಂತುಗಳತೆಕ್ಕೆಯೊಳಗೆಆಹ್ವಾನಿಸಿಕೊಳ್ಳುವಕಾರುಣ್ಯ ದೇಶಪ್ರೇಮಎಂದರೆದೇಶದಕೊನೇಯನಿರ್ಗತಿಕನಯೋಗಕ್ಷೇಮ. ******************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಭಾರತ ದರ್ಶನ ಅರುಣಾ ರಾವ್ ದೇಗುಲ ದರ್ಶನ ಮಾಡುವ| ನಾವ್ ದೇಗುಲ ದರ್ಶನ ಮಾಡುವ|ವಿಶ್ವ ಭೂಪಟದೆ ಭಾರತವೆಂಬ| ದೇಗುಲ ದರ್ಶನ ಮಾಡುವ|| ಭವ್ಯ ಹಿಮಾಲಯ ಶಿಖರವೆ ನಿನ್ನ| ಮಂದಿರ ಗೋಪುರವು|ಅರಬ್ಬಿ ಹಿಂದೂ ಬಂಗಾಳ ಕೊಲ್ಲಿ| ಗುಡಿಯ ಪರಿಧಿಗಳು|ಹಿಂದೂ ಮುಸ್ಲಿಂ ಜೈನ ಕೈಸ್ತ| ಆಧಾರ ಸ್ಥಂಭಗಳುಜಯ ಜಯ ಭಾರತ ಎಂಬುದೇ| ಇಲ್ಲಿಯ ಮಂತ್ರದ ಘೋಷಗಳು|| ಭಿತ್ತಿ ಬಿತ್ತಿಗಳು ಸಾರುವವಿಲ್ಲಿ| ಸಾಹಸ ಕಥೆಗಳನು|ಕಲ್ಲು ಕಲ್ಲುಗಳು ಹೇಳುವವಿಲ್ಲಿ| ನಡೆದಿಹ ಹಾದಿಯನು|ಗರ್ಭ ಗುಡಿಯು ನಮ್ಮಯ ಮನಗಳು| ಬಿಡು ಸಂದೇಹವನು|ಜಯ ಜಯ ಭಾರತ ಎನ್ನುತ| ತಾಯಿ ಪಾದಕೆ ಮಣಿಯುವೆನು|| ಹೆಜ್ಜೆ ಹೆಜ್ಜೆಗೂ ಕಣ್ಮನ ಸೆಳೆಯುವ| ಶಿಲ್ಪ ಕಲೆಗಳು ಇವೆಯಿಲ್ಲಿ|ಹಂತ ಹಂತಕೂ ಸಂಸ್ಕೃತಿ ಸೌರಭ| ಸೂಸುವ ಕೊಳಗಳು ಇವೆಯಿಲ್ಲಿ|ಭಾರತೀಯರೇ ಭಕ್ತರೆಲ್ಲರೂ| ಒಂದೇ ನಾಮದ ಜಪವಿಲ್ಲಿ|ಜಯ ಜಯ ಭಾರತ ಎಂಬುದೆ ತುಂಬಿದೆ ಎಮ್ಮಯ ಮನಗಳಲಿ|| ************************

ಕಾವ್ಯಯಾನ Read Post »

ಕಾವ್ಯಯಾನ

ಹೀಗೊಂದು ವಿರಹ ಗೀತೆ

ಕವಿತೆ ಹೀಗೊಂದು ವಿರಹ ಗೀತೆ ಒತ್ತಿ ಉಕ್ಕುವ ಮನಕೆ ತಂಪೆರೆವ ಬಿಸುಪಿಲ್ಲಎಲ್ಲಿಂದ ಬರಬೇಕು, ನಾನು ಬಡವಿ…..ಬಿಸುಪಿಲ್ಲದಾ ಭಯಕೆ ತೆರೆಯದಾತನ ತೋಳುಅದನರಿತ ಮೇಲೂ.. ಆತ ಬಡವ… ಹರೆಯದಲಿ ಹೀಗಿರಲಿಲ್ಲ, ಚೆನ್ನಿತ್ತು ಚೆಲುವಿತ್ತುಒಲವಿತ್ತು ನಾ -ನೀನು ಬೇಧವಿರದೇನಿನ್ನೊಳಗೆ ನಾನು, ನನ್ನೊಳಗೆ ನೀನೆಂಬುವುದುಮುದವಿತ್ತು ಸಂಗೀತ ಲೋಪವಿರದೇ ಈಗ ನಿಶ್ಶಬ್ದದಲಿ ಈಟಿಯಂತೆಯೆ ಇರಿವನಿನ ಮೌನ ಸಹಿಸುವುದು ಕಷ್ಟ ಎನಗೆಇಷ್ಟ ಇರದಿದ್ದರೂ ನನ ಮಾತು ಜೋರಾಗಿಗುಡುಗು ಸಿಡಿಲುಗಳಂತೆ ಶಬ್ದ ಕೊನೆಗೆ ಕೊಟ್ಟರೆ ಕಳೆದುಬಿಡುವಂತೆಂಬ ನಿನ ಪ್ರೀತಿಇಟ್ಟರೆ ಹಳಸಿಬಿಡುವಂತೆ ನಾನೂಇಟಿಗೆ ಗಾರೆಯ ಹಾಕಿ ಕಟ್ಟುವುದೆ ಗೋಡೆಯನುಈಚೆ ನಾ ಮರುಗುತಿಹೆ, ಆಚೆ ನೀನು ಒಡೆದ ಗೊಂಬೆಯ ಕೆಡವಿ ಸರಿಮಾಡಬಹುದೆಂತುಕೆತ್ತನೆಯು ನಮಗೊಲಿದ ವಿದ್ಯೆಯೆಂದುಮರೆತುಹೋಯಿತೆ ಪ್ರೀತಿ ಅಂಟೆಂದು ಜೋಡಿಸಲುಚೂರಾದ ಹೃದಯಗಳ ಮಾಡಲೊಂದು ಮೆಚ್ಚಿ ಆಡುವ ಮಾತು ಚುಚ್ಚುವಂತಾಯಿತು ಏಕೆಬೆಚ್ಚಿಹೆನು, ಬೆದರಿಹೆನು ಏಕಾಂತದಿಅಚ್ಚುಮೆಚ್ಚಿನ ಸೊಡರು ಕೊಚ್ಚಿ ಹೋಗುತಲಿಹಿದುಇಚ್ಛೆಯಿದ್ದರೂ ಉಳಿಸಿಕೊಳದ ಹಠದಿ… *********************

ಹೀಗೊಂದು ವಿರಹ ಗೀತೆ Read Post »

ಕಾವ್ಯಯಾನ

ಕವಿಗಿನ್ನೇನು ಬೇಕು?

ಕವಿತೆ ಕವಿಗಿನ್ನೇನು ಬೇಕು? ಮಾಲತಿ ಶಶಿಧರ್ ಕವಿತೆಯೊಳಗೊಂದು ಭಾವಬೆರೆತು ಹಾಲಿನಲ್ಲಿ ಲೀನವಾದಜೇನಿನಂತೆ ಸವಿಯಾಗಿರಲುಕವಿಗಿನ್ನೇನು ಬೇಕು? ಭಾವ ಭಾಷೆಗಳ ಮಿಲನಪ್ರಸವವಾಗಲು ಕವಿತೆಮಡಿಲಲ್ಲಿ ಕಣ್ದೆರೆಡುನಗುವ ಹಾಲುಗಲ್ಲದಕೂಸಿನಂತೆಕವಿಗಿನ್ನೇನು ಬೇಕು? ಮನ ಭಾವಗಳ ಬಂಧವದುಅರಿವಿನೊಳಗಿಟ್ಟ ಗಂಧದ ಕೊರಡುಸುಗಂಧ ಎಲ್ಲೆಡೆ ಹಬ್ಬಿಮುದವ ಹಂಚುತಿರಲುಕವಿಗಿನ್ನೇನು ಬೇಕು? ಎದೆಯೊಳಗಿನ ತದ್ಭವಗಳೆಲ್ಲಾಹೆಣೆದುಕೊಂಡು ತತ್ಸಮಗಳಪಂಕ್ತಿಗಳಾಗಿ ಅರಳಿದರೆಮೊಗ್ಗೊಂದು ಬಿರಿದು ಮುಗುಳುನಗುವಂತೆಕವಿಗಿನ್ನೇನು ಬೇಕು?? ಕವಿತೆ ಲೋಕದ ಕನ್ನಡಿಎಡಬಲಗಳಾಚೆ ಚಂದ ತೋರುವಪದ ಲಾಸ್ಯ ಮೃದು ಹಾಸ್ಯಜೀವ ಭಾವಗಳ ಜಲದೋಟನಿಲದೆ ಓಡುತ ಲೋಕವ ಶುದ್ಧಿಮಾಡಲುಕವಿಗಿನ್ನೇನು ಬೇಕು??ಕವಿತೆ ಇದ್ದರೆ ಸಾಕು… ***********************

ಕವಿಗಿನ್ನೇನು ಬೇಕು? Read Post »

ಕಾವ್ಯಯಾನ

ಗಾಳಿ ಪಟ

ಕವಿತೆ ಗಾಳಿ ಪಟ ರೇಷ್ಮಾ ಕಂದಕೂರ. ಕೆಲವೊಮ್ಮೆ ಏರುಇನ್ನೊಮ್ಮೆ ಇಳಿತಹರಿಯ ಬಿಡದಿರುಸಮತೋಲನದ ಬಾಲಂಗೋಚಿ ಗಾಳಿ ಬಂದ ಕಡೆ ಮುಖ ಮಾಡಿಘಾಸಿಗೊಳಿಸುವೆ ಮನವಅತ್ತಿಂದಿತ್ತ ಸುಳಿಯುತಬಾನ ಚಿತ್ತಾರದಿ ತೇಲುತಿದೆ ಬಾನಂಚಿಗೆ ಸಾಗುವ ಕನಸಿಗೆಬಣ್ಣ ಹಚ್ಚುತ ಸಾಗಿದೆಮಕ್ಕಳ ಮನ ತಣಿಸುತಕುಣಿದಿದೆ ಎಲ್ಲ ಮರೆತು ತಾಗದಿರಲಿ ಕುಗ್ಗುವ ಮಾತುಸಿಗದಿರಲಿ ಆಡಿಕೊಳ್ಳುವವರಿಗೆಮೇಲೇರುವ ಧಾವಂತಕೆನೂರೆಂಟು ವಿಘ್ನಸಾವರಿಸಿ ಮೇಲೇರುತಲಿರು ಬೇಕಾ ಬಿಟ್ಟಿತನ ಬೇಡಸಾಕೆಂದು ಕುರದೇಗುರಿಯ ಸಾಕಾರಕೇಗುರುತರ ಜವಾಬ್ದಾರಿಯಲಿ ಏರಿದವ ಕೆಳಗಿಳಿಯಲೇ ಬೇಕುಸೂರೆ ಮಾಡಿದವ ಸೆರೆಯಾಗುವಎಲ್ಲವನು ಸುಸ್ಥಿತಿಯಲಿ ನೋಡುಬಾಳ ಬೆಳಗುವೆ ನಿರಾತಂಕದಿ. **************************************

ಗಾಳಿ ಪಟ Read Post »

ಕಾವ್ಯಯಾನ

ರಾಹತ್ ಇಂದೋರಿ

ಅನುವಾದಿತ ಕವಿತೆ ಮೂಲ: ರಾಹತ್ಇಂದೋರಿ ಕನ್ನಡಕ್ಕೆ:ರುಕ್ಮಿಣಿ ನಾಗಣ್ಣವರ ಕಂಗಳಲ್ಲಿ ನೀರು ತುಟಿಗಳಲ್ಲಿ ಕಿಡಿಯನ್ನು ಇರಿಸಿಬದುಕ ಮಾಡಬೇಕೆಂದರೆ ಯೋಜನೆಗಳು ಹಲವು ಇರಿಸಿ ಕಲ್ಲುಮುಳ್ಳುಗಳದೇ ದಾರಿಯಲಿ ಗುರಿ ಏನೂ ದೊಡ್ಡದಲ್ಲಕೂಗಿ ಕರೆಯುತಿದೆ ದಾರಿ ಪಯಣ ಜಾರಿ ಇರಿಸಿ ಒಂದೇ ನದಿಗೆ ಎರಡು ದಡಗಳು ಸ್ನೇಹಿತರೆಬದುಕಿನೊಂದಿಗೆ ಸ್ನೇಹ ಸಾವಿನೊಂದಿಗೆ ಸಖ್ಯ ಇರಿಸಿ ಬಂದು ಹೋಗುವ ಕ್ಷಣಗಳು ಉಸುರುತಿವೆ ಕಿವಿಯಲ್ಲಿಏನೋ ಘಟಿಸುವುದಿದೆ ಎಲ್ಲ ತಯಾರಿ ಇರಿಸಿ ಜರೂರಿ ಇದೆ ಕಣ್ಣುಗಳಲಿ ಕಲ್ಪನೆ ಇರಿಸುವುದುನಿದ್ದೆ ಇರಿಸದಿದ್ದರೂ ಕನಸೊಂದಿಗೆ ಗೆಳೆತನ ಇರಿಸಿ ಬೀಸುವ ಗಾಳಿ ಹೊತ್ತಯ್ಯದಿರಲಿ ಹಗೂರ ದೇಹವನುಸ್ನೇಹಿತರೇ ಮೇಲೆ ಒಂದಿನಿತು ಭಾರದ ಕಲ್ಲು ಇರಿಸಿ ಹೊತ್ತು ತಂದಿರುವಿ ಶಾಯರಿ ಬಾಜಾರಿನಲಿ ‘ರಾಹತ್’ ಮಿಯಾಅವಶ್ಯಕತೆ ಏನಿತ್ತು ಭಾವಗಳನು ಬಾಜಾರಿನಲಿ ಬಿಕರಿಗೆ ಇರಿಸಿ *****************

ರಾಹತ್ ಇಂದೋರಿ Read Post »

ಕಾವ್ಯಯಾನ

ನ್ಯಾಯಕ್ಕಾಗಿ ಕೂಗು

ಕವಿತೆ ನ್ಯಾಯಕ್ಕಾಗಿ ಕೂಗು ನೂತನ ದೋಶೆಟ್ಟಿ ಕೈ ಎತ್ತಿ ಜೈಕಾರ ಹಾಕಿದಾಗಎಲ್ಲರೂ ಒಂದೆಂಬ ಅನುಭವಬಾಯಿಸೋತ ಬಿಡುವಿನಲ್ಲಿಸಣ್ಣ ಗುಸುಗುಸು ಪತ್ರಿಕೆಯವರೆದುರುಪೋಸು ಕೊಟ್ಟವರುಬಾರದ ಭಾಷೆಯಲ್ಲಿ ತೊದಲಿದವರುಮತ್ತೆ ಚುರುಕು ಕ್ಯಾಮರಾಕ್ಕಾಗಿಕಾಲರ್ ಎಳೆದುಕೊಂಡರುನೆರಿಗೆ ಸರಿ ಮಾಡಿಕೊಂಡರುಮಿಂಚಿನ ಸಂಚಾರ ಬೇಡಿಕೆಗಳು ಉರುಹೊಡೆಯಲುಅಲ್ಲಲ್ಲಿ ಚದುರಿದವರುಹಣುಕಿದರುಒಂದಾದರು ದಂಡು, ಮೆರವಣಿಗೆಗಳೆಲ್ಲಮುಗಿದಾಗಜಾತಿ- ಮಾತು, ಊರು- ಕೇರಿಗಳಗುಂಪು ಒಡೆದು ಒಂದಾಗಿ ಬಾಳಿದಇತಿಹಾಸದ ಪುಟಗಳಲಿಪುನರಾವರ್ತನೆಯ ಮಂತ್ರಅನಿವಾರ್ಯ ವರ್ಷಗಳ ಹೊಸ್ತಿಲಲ್ಲಿಮೊರೆಯಿಡುತ್ತಿರುವ ನ್ಯಾಯ. ( 2009ರಲ್ಲಿ ಬರೆದದ್ದು. 73 ನೇ ಸ್ವಾತಂತ್ರ್ಯ ದಿನದ ಹೊಸ್ತಿಲಲ್ಲಿ ನಿಂತು ನೋಡಿದಾಗ ಕಾಲ ಅಲ್ಲಿಯೇ ನಿಂತಿದೆಯೇ ಎಂಬ ಅನುಮಾನ.) ***********************************

ನ್ಯಾಯಕ್ಕಾಗಿ ಕೂಗು Read Post »

You cannot copy content of this page

Scroll to Top