ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮಾಲತಿ ಶಶಿಧರ್ ಕಾವ್ಯಗುಚ್ಛ

ಮಾಲತಿ ಶಶಿಧರ್ ಕಾವ್ಯಗುಚ್ಛ ಥೇಟ್ ನೀನು ಥೇಟ್ನನ್ನ ಕವಿತೆಯಂತೆಗೆಳೆಯ.ಒಮ್ಮೊಮ್ಮೆನಾನೆ ಬರೆದಿದ್ದರೂನನಗೇ ಅರ್ಥವಾಗದಹಾಗೆ.. ನೀನು ಥೇಟ್ನನ್ನ ನಗುವಿನಂತೆಗೆಳೆಯಕಿವಿಗಳೊರೆಗೂತುಟಿಯಗಲಿಸಿದರುನಕ್ಕಂತೆ ಕಾಣದಹಾಗೆ.. ನೀನು ಥೇಟ್ನನ್ನ ಮುಂಗುರುಳಂತೆಗೆಳೆಯಕಂಗಳಿಗೆ ಬಿದ್ದಾಗಲೆಲ್ಲಾಕಣ್ಣೀರು ಬರಿಸುವಹಾಗೆ.. ನೀನು ಥೇಟ್ನನ್ನ ಮೂಗು ನತ್ತಿನಂತೆಗೆಳೆಯಮುಂದೆಯೇಎಷ್ಟೇ ಅತ್ತರುಕೈಚಾಚಿ ಕಣ್ಣೀರುಮಾತ್ರ ಒರೆಸದಹಾಗೆ.. ಅಳಲು ಮುಗಿಲ ಹಿಂದೆ ಅವಿತು ಕುಳಿತಿರುವ ಬೆಳಕೇಸೀಳಿಕೊಂಡು ಬಂದು ನನ್ನನ್ನಾವರಿಸಿಬಿಡು.. ಮೋಡದಲ್ಲಿ ಮರೆಯಾಗಿರುವ ಹನಿಯೇಹೊಡೆದು ಜೇನ ಮಳೆ ಸುರಿಸಿಬಿಡು.. ಆಗಸವನೇ ಬಿಗಿದಪ್ಪಿಕೊಂಡಿರುವ ಚುಕ್ಕಿಯೇಕೈಬಿಟ್ಟು ಅಕ್ಷತೆಯಾಗಿ ಮೇಲೆ ಉದುರಿಬಿಡು… ಅಡವಿಯಲಿ ಅಡಗಿರುವ ಕಾಡ್ಗಿಚ್ಛೇಬಂದು ಚಿಂತೆಗಳ ಸುಟ್ಟುಬಿಡು… ನೀರಿನಲ್ಲಿ ಲೀನವಾಗಿರುವ ಸುನಾಮಿಯೇಬಂದು ನನ್ನಳಲ ನುಂಗಿಬಿಡು.. ಭುವಿಯ ಗರ್ಭದಲ್ಲಿರುವ ಜ್ವಾಲಾಮುಖಿಯೇಉಕ್ಕಿ ನೋವನ್ನೆಲ್ಲಾ ಕರಗಿಸಿಬಿಡು ಗಾಳಿಯಲಿ ನುಸುಳಿರುವ ತುಫಾನೇರಭಸದಲೇ ಕಣ್ಣೀರ ತೂರಿಬಿಡು…. *************** ನೋಡು ನಾ ಬರೆವ ಕವಿತೆಗಳಪಂಕ್ತಿಯ ಹೆಣಿಕೆಯನೋಡದೆ ಪದಗಳಲ್ಲಿಪರವಶವಾಗಿರುವತುಡಿತ ನೋಡು… ನಾ ಬಿಡಿಸುವ ಚಿತ್ರದಬಣ್ಣಗಳ ನೋಡದೆತಿರುವಿನಲ್ಲಿ ಮಗ್ನವಾಗಿರುವಸ್ಪಂದನವ ನೋಡು… ನಾ ಹಾಡುವ ಹಾಡಿನಹಂದರವ ನೋಡದೆಭಾವಾರ್ಥದಲಿ ಬೆರೆತಿರುವಬಂಧವ ನೋಡು.. ನಾ ಮಾಡುವ ನೃತ್ಯದನಾಜೂಕತೆ ನೋಡದೆನಾಟ್ಯದಲ್ಲಿ ಮೂಡುವಅಭಿವ್ಯಕ್ತಿ ನೋಡು… ನಾನಾಡುವ ಆಟಗಳವೀಕ್ಷಕನಾಗಿ ಕೂತು ನೋಡದೆನನ್ನೊಳಗಿನ ಚೈತನ್ಯವಾಗಿಜೊತೆಗಿದ್ದು ನೋಡು… *********************************

ಮಾಲತಿ ಶಶಿಧರ್ ಕಾವ್ಯಗುಚ್ಛ Read Post »

ಕಾವ್ಯಯಾನ

ಡಾ.ಅಜಿತ್ ಹರೀಶಿ ಕಾವ್ಯಗುಚ್ಛ

ಡಾ.ಅಜಿತ್ ಹರೀಶಿ ಕಾವ್ಯಗುಚ್ಛ ನಿರೀಕ್ಷೆ ಗೀಜಗನ‌ ಗೂಡಿನಂತಿದ್ದ ಮನಮನೆಯೇ ಮುರಿದ ದಿನಬುಗಿಲೆದ್ದ ಹಗೆಗೆ ಸತ್ತುಒಡಹುಟ್ಟಿದವರ ನೆನೆದು ಅತ್ತುತಿಳಿಯಾದ ಮನವು ಋಜುಒಡೆದದ್ದು ನಾಜೂಕು ಗಾಜುಚೂರುಗಳ ಜೋಡಿಸಲೇಹೃದಯಗಳು ಬೆಸೆಯಲೇಬೇಕು ಸಂಬಂಧ ನಾಳೆಗೊಂದು. ನಕ್ಕು ಹಗುರಾಗುತ್ತಿದ್ದ ಬಾಳುಒಣ ಜಂಭದ ರೀತಿಗೆ ಹಾಳುಮಾತು ಮಸಣವಾಗಿದೆತುಮುಲ ಸರಿಪಡಿಸಲಾಗದೆಭಾವನೆಗಳು ಹೊಂದದೆಮುನಿಸು ಸರಿಸಿಸೋತರೇನಂತೆ ನಗಿಸಿಮರಳಿ ಬಂದರೆ ಮನ್ನಿಸಿಬಾರದಿದ್ದರೆ ಕ್ಷಮಿಸಿಕಾಯ್ದರೆ ನಗು ನಾಳೆಗೊಂದು. ಮೀನಿನ ಹೆಜ್ಜೆ ಕಡಲ ದಾರಿಗುಂಟ ಸಾಗಿದೆನೆಲ ನುಂಗುವವರೆಗೂ ನಡೆದೆಕಾಲ, ನಿನ್ನ ಹೆಜ್ಜೆ ಗುರುತೊಂದೆಅಳಿಸಿ ಸಾಗಿತ್ತು, ಕಾಣಗೊಡದೆ. ಕಾಮ ಮೋಹಾದಿಗಳ ಕಡಿಯಲುಬಹುದೂರದ ದಾರಿಯು ಗೋಜಲುಪ್ರೀತಿತ್ಯಾಗಕ್ಕೂ ಮುಳ್ಳಿನ ಹಾಸುಸಿಗದ ಹಾಗೆ ಕರಗಿದೆ ಮನಸು. ಹತ್ತಾರು ವರ್ಷಗಳ ಸವೆದುಒಂದೇ ಸೂರಿನಡಿ ಬಾಳಿದ್ದುಅರೆಕ್ಷಣದಲಿ ದೂರಾದದ್ದುಆಳವಿಲ್ಲದ ನಂಬುಗೆಯೊಂದು. ಅರಿತೆನೆಂದು ಅವನ ಬೆರೆತೆಅರಿಯಗೊಡದವನ ನಡತೆಇಷ್ಟು-ಎಷ್ಟು ಅರಿತರೇನಂತೆಮರೆಯಗೊಡದವನ ಚಿಂತೆ. ದಯವಿಟ್ಟು ಗಮನಿಸಿ… ಸಂಗಾತಿಯಲ್ಲದೇ ಇನ್ಯಾರೋಸುರತವೆಂದೂ ಸುರಕ್ಷಿತವಲ್ಲಬೇಕೆಂದಾಗ ಬಂಜೆತನಬೇಡವಾದಾಗ, ಆಸೆಬಿಟ್ಟಾಗ ಕಟ್ಟುವ ಗರ್ಭಬೆನ್ನಿಗಂಟುವ ರೋಗದಯವಿಟ್ಟು ಗಮನಿಸಿ… ಅಪಘಾತಗಳೆಲ್ಲ ಆಕಸ್ಮಿಕಗಳಲ್ಲಅಲಕ್ಷ್ಯ, ಆತುರ, ಔತ್ಸುಕ್ಯಕೂಡ ಕಾರಣವಿರಬಹುದಲ್ಲಎದುರಾಗುವವನ ಅಚಾತುರ್ಯಕೂಡ ಕಲ್ಪಿಸಿಕೊಳ್ಳಬೇಕಲ್ಲದಯವಿಟ್ಟು ಗಮನಿಸಿ… ಯುಗ ಬದಲಾಗಿದೆಸ್ವರ್ಗ ನರಕಗಳೆಲ್ಲವೂಇಲ್ಲೇ ಸೃಷ್ಟಿಯಾಗಿದೆಬದುಕಿನ ಕಂದಾಯ ಕಟ್ಟುವಕೌಂಟರ್ ಇಲ್ಲಿಯೇ ಇದೆದಯವಿಟ್ಟು ಗಮನಿಸಿ… ದಿವ್ಯದೃಷ್ಟಿ ಸೂರಿಗೆ ಮಾರಿಗೆಎಲ್ಲೆಲ್ಲೂ ಟವರ್ ಲೊಕೇಷನ್ಗೆಸುಲಭದ ಬೇಟೆ ಅಪರಾಧಕ್ಕೆಅಪರಾಧಿಯಾಗದ ಸೂತ್ರಸೀದಾ ಸಾದಾ ಸುಸೂತ್ರನೆಮ್ಮದಿಗೊಂದೇ ಮಂತ್ರದಯವಿಟ್ಟು ಗಮನಿಸಿ…

ಡಾ.ಅಜಿತ್ ಹರೀಶಿ ಕಾವ್ಯಗುಚ್ಛ Read Post »

ಕಾವ್ಯಯಾನ

ಸ್ಮಿತಾ ಅಮೃತರಾಜ್ ಕಾವ್ಯಗುಚ್ಛ

ಸ್ಮಿತಾ ಅಮೃತರಾಜ್ ಕವಿತೆಗಳು ಪುರಾವೆ ಸಾಬೀತು ಪಡಿಸಲುಸೂಜಿ ಕಣ್ಣಿನಿಂದ ಹುಡುಕಿದರೂಕಿತ್ತು ಹೋದ ಒಂದು ಎಳೆನೂಲಿನ ನೇಯ್ಗೆಗೆ ಪುರಾವೆಗಳೇಸಿಗುತ್ತಿಲ್ಲ. ಎದೆಯ ತಳದಲ್ಲಿ ಸೋಸಿಉಳಿದ ಅಪ್ಪಟ ತಿಳಿ ಸತ್ಯವೊಂದುಅಗೋಚರವಾಗಿ ಕದಡಿ ಪ್ರತಿಬಿಂಬಮಸುಕು ಮಸುಕಾದುದ್ದಕ್ಕೆ ಪುರಾವೆಯಕಡತಗಳನ್ನು ಹೇಗೆ ಶೋಧಿಸುವುದು? ಬೆಳ್ಳಗೆ ಹೊಳೆದದ್ದುಕನ್ನಡಿಯಂತೆ ಪ್ರತಿಫಲಿಸಿದ್ದುಹಗಲಿನಷ್ಟು ನಿಚ್ಚಳವಾಗಿ ತೋರಿದ್ದುಎಲ್ಲವೂ ಕನಸಿನಂತೆ ಕರಗಿರುವಾಗಅರ್ಥವಿರದ ಪುರಾವೆ ಒದಗಿಸುವುದುವೃಥಾ ಶ್ರಮವಷ್ಟೆ. ಕಣ್ಣ ರೆಪ್ಪೆಯೊಳಗೆ ಅಚ್ಚೊತ್ತಿ ನಿಂತಸ್ಪಷ್ಟ ಬಿಂಬವೊಂದನ್ನು ಆಕಾರವೇ ಇಲ್ಲವೆಂದುಅಳಿಸಲು ಸಾಧ್ಯವೇ?. ಪದ್ಯ ಹೊಸೆದುರಾಗ ಕಟ್ಟಿ ತೇಲಿ ಬಂದಗಾನ ಗಾಯನದ ಇಂಪುಕವಿತೆ ಹುಟ್ಟಿದ ಕ್ಷಣಗಳಿಗೆಕಾಡಿದ ಭಾವವಷ್ಟೇ ಸಾಕ್ಷಿ. ಸಾಕ್ಷಿಯುಳಿಸದೇಹಕ್ಕಿ ಹಾರಿದ್ದುಹೂವು ನಕ್ಕಿದ್ದುಗಾಳಿಗಷ್ಟೇ ತಿಳಿದ ಸತ್ಯಸಾಬೀತು ಪಡಿಸುವುದಕ್ಕೆಪುರಾವೆ ಒದಗಿಸುವುದುಎಷ್ಟು ಕಷ್ಟ?! ಭೂಮಿ ತೂಗುವ ಹಕ್ಕಿ ಈ ಬೆಳ್ಳಾನೆ ಬೆಳಗಿನಲ್ಲಿಮುಂಬಾಗಿಲ ಅಂಗಳದಲ್ಲಿಎಳೆ ಬಿಸಿಲೊಳಗೆ ಬಾಲ ಕುಣಿಸುತ್ತಾಭೂಮಿಯನ್ನೇ ತೂಗುತ್ತಿದೆಯಲ್ಲಾಎಲಾ! ಪುಟಾಣಿ ಚುರುಕು ಹಕ್ಕಿಯಾರಿಟ್ಟರೋ ಹೆಸರು?ಭೂಮಿ ತೂಗುವ ಹಕ್ಕಿ. ಮೇಲಕ್ಕೊಮ್ಮೆ ಕೆಳಕ್ಕೊಮ್ಮೆತೂಗಿದಷ್ಟೂ ತೂಗಿದಷ್ಟೂಮೇಲಕ್ಕೂ ಏರುವುದಿಲ್ಲ;ಕೆಳಕ್ಕೂಇಳಿಯುವುದಿಲ್ಲ.ಸಮತೋಲನದ ಸಮಭಾರವಂತೂಸಧ್ಯಕ್ಕೆ ಸಾಧ್ಯವೇ ಇಲ್ಲವಾ..?ಅತ್ತೊಮ್ಮೆ ಇತ್ತೊಮ್ಮೆ ಮುಗಿಯದಶತಪಥ. ಪಾತಾಳಕ್ಕಿಳಿದ ಇಲ್ಲಿಯ ದು:ಖಮುಗಿಲು ಮುಟ್ಟಿರುವಾಗ ಅಲ್ಲಿಯ ರೋದನಕ್ಷಣಕ್ಕೊಮ್ಮೆ ಹತೋಟಿ ತಪ್ಪುವ ಬದುಕ ಸಂತೆಯಭಾರ ವಹಿವಾಟಿನ ನಡುವೆ ಪುಕ್ಕದ ಅಳತೆಗೋಲುಹಿಡಿತಕ್ಕೆ ದಕ್ಕುವುದಿಲ್ಲ. ಹಠಕಟ್ಟಿ ಉಸಿರೊತ್ತಿಬಿರುಸಿನಲ್ಲಿ ಒಯ್ದಷ್ಟೇರಭಸದಲ್ಲಿ ರಪಕ್ಕನೆ ಪ್ರತಿಭಾರಿನೆಲಕ್ಕಾತು ಹೋಗುವ ವಿಫಲ ಪ್ರಯತ್ನನೋಡುತ್ತಾ ನಿಂತ ನೆಲವೂ ನೆಟ್ಟ ಆಗಸವೂಅರೆಗಳಿಗೆ ಕಂಪಿಸಿಕೊಂಡರೂ.. ಹಕ್ಕಿ ಬಾಲ ಕುಣಿಸುತ್ತಲೇ ಇದೆಜಗದ ಭಾರವನ್ನೆಲ್ಲಾ ಹೆಕ್ಕಿ ಹೆಕ್ಕಿಪುಕ್ಕದಲ್ಲಿಟ್ಟು ತೂಗುತ್ತಲೇ ಇದೆನಿರುಕಿಸುತ್ತಾ ನಿಂತ ಅಂಗಳದೆದೆಈ ಗಳಿಗೆಯಲ್ಲಾದರೂ ಹಗುರಗೊಳ್ಳುತ್ತಿದೆ. ದಕ್ಕಿದ ನಿರಾಳತೆಗೆಅತ್ತ ಇತ್ತ ನುಲಿಯುತ್ತಾಪರ‍್ರನೆ ಹಾರಿದೆ ಹಕ್ಕಿತೂಗಿಕೊಳುವ ಕಾತರತೆಯಲ್ಲಿಮತ್ತೆ ರಚ್ಚೆ ಹಿಡಿದಿದೆ ಭೂಮಿ ಅರಿಕೆಗಳು 1.ಅರಳಿ ಸರಿದ ಹಗಲುಗಳೆಷ್ಟೋಆವರಿಸಿ ಕವಿದು ಕನಲಿದಇರುಳುಗಳೆಷ್ಟೋ..ಒಂದಂತೂ ದಿಟಕವಿತೆಯೇ..ನಿನ್ನ ಅನುಪಸ್ಥಿಯಲ್ಲಿಈ ಎರಡು ಕ್ರಿಯೆಗಳೂಸಂಭವಿಸುತ್ತಿವೆ ನಿರಂತರಹಾಗೂ ಕಾಯುವಿಕೆಯಲ್ಲೇ ನಾ ಕರಗಿಕಳೆದು ಹೋಗುತ್ತಿದ್ದೇನೆ ಸತತ. ಪ್ರಭುವೇ..ಹಗಲು ಇರುಳುಹಾಗೇ ಬಂದು ಹೋಗುತ್ತಿರಲಿಕಾಯುವಿಕೆಯ ಸುಖ ಹೀಗೇಅನಂತವಾಗಿರಲಿ. 2. ಪ್ರಭುವೇ..ನನಗೆಪೂರ್ವ ಜನ್ಮದ ಬಗ್ಗೆ ಅರಿವಿಲ್ಲಪುನರ್ಜನ್ಮದ ಬಗ್ಗೆ ನಂಬಿಕೆಯೂ ಇಲ್ಲಅತ್ತ ಇತ್ತ ಸುಳಿದಾಡಿಸತಾಯಿಸುವ ಕವಿತೆಯನ್ನೊಮ್ಮೆಇದೇ ಜನುಮದಲ್ಲಿ ನನ್ನ ಇದಿರುಎಳೆದು ತಂದು ನಿಲ್ಲಿಸಿ ಬಿಡು ಸಾಕು. 3. ಮೊದಲು ಕಣ್ಣು ಬಿಟ್ಟಾಗ ಜೋರಾಗಿಶಬ್ದ ಹೊರಡಿಸಿ ಅತ್ತ ನೆನಪುಈಗಲೂ ಹಾಳು ಅಳು ನಿಲ್ಲುವುದಿಲ್ಲಗುದ್ದಿ ಗುದ್ದಿ ಹೊರ ಬಂದರೂಶಬ್ದ ಮಾತ್ರ ಕೇಳಿಸುತ್ತಿಲ್ಲ. 4. ದಯೆ ತೋರು ಕವಿತೆಯೇ..ಎಲ್ಲಾ ಭಾರವನ್ನು ನಿನ್ನ ಹೆಗಲಿಗೇರಿಸಿರುವೆಶಬ್ದವನ್ನು ನಿಶ್ಯಬ್ದವಾಗಿ ಇಳಿಸಿಬಿಡುಶಬ್ದ ಸ್ಪೋಟದ ಅನಾಹುತಕ್ಕೆ ನೀನೂ ಕೂಡಕಾರಣವಾಗುವುದ ತಪ್ಪಿಸಿಕೋ.. ಅತ್ತಷ್ಟು ಬಾರಿ ನಗಲಿಲ್ಲಆದರೂ ಅತ್ತದ್ದು ಸುದ್ದಿಯಾಗಲೇ ಇಲ್ಲನಕ್ಕಿದ್ದು ಗುಲ್ಲೋ ಗುಲ್ಲುಕವಿತೆಯೇ..ನೀ ಎಚ್ಚರವಾಗಿರುವುದಷ್ಟೇಮುಖ್ಯ ಇಲ್ಲಿಆಗ ನಾನೂ ನಿಶ್ಚಿಂತೆಯಾಗಿರಬಲ್ಲೆ ****************************************

ಸ್ಮಿತಾ ಅಮೃತರಾಜ್ ಕಾವ್ಯಗುಚ್ಛ Read Post »

ಕಾವ್ಯಯಾನ

ಕಾವ್ಯಯಾನ

ಮಾಲತಿ ಶಶಿದರ್ ಒಂದು ಪ್ರೇಮಕವಿತೆ ಒಲವೆಕಗ್ಗತ್ತಲಲ್ಲಿ ಹೊಳೆವ ಬಂಧಕ್ಕಾಗಿ ಹಾತೊರೆದಿರುವೆಕಡಲಾದ ನಿನ್ನ ಒಂದು ಹನಿಯಾಗಿ ಸೇರಿರುವೆ ನಿನ್ನ ಚಲುವಿಗೆ ಪುರಾವೆಯಾಗಬಲ್ಲೆನೇ ನಾನು..ನಮ್ಮಿಬ್ಬರ ಮಿಲನ ಕಂಡು ಮಣ್ಣು, ಮಳೆ ಹನಿ ನಾಚದೆನು ನಿನ್ನೊಲವ ಸ್ಫೂರ್ತಿಯಲಿ ಆಗಸದಲ್ಲಿ ತೇಲಿಹೆನು,ಹೆಗಲ ಮೇಲೆ ಒರಗುವಾಸೆ ದಾಟಿ ಬಳಿಗೆ ಬಂದಿಹೆನು ನನ್ನೊಳಗೆ ಅವಿತಿರುವ ನೀನೊಂದು ಸುಂದರ ಗುಟ್ಟುಏಕಾಂತದಲ್ಲೂ ನಿನ್ನದೇ ಪರಿಮಳ, ನಿನ್ನದೇ ನೆನಪು.. ಬೇಸಿಗೆ ಆಗಸ ವಸಂತವಾಗಿದೇದೂರದ ಕಾಡು ನಿನ್ನೆಸರ ಕೂಗಿದೆ.. ಅಣುವಿನ ವಿದಳನದಂತೆ ನಮ್ಮ ಬಂಧ ದಿನೇ ದಿನೇ ಸಿಡಿದಿದೆಬೆರಳುಗಳ ಹೊಸ ಭಾಷೆಯ ಈ ಪಾಪಿ ಹೃದಯ ಅರಿವುದೆ? ಇದೊಂದು ಜನ್ಮ ಸಾಕೆ ಹುಡುಗ ನಿನ್ನ ಸೇರಿ ಬಾಳಲು..ಒಂದೇ ಒಂದು ಹೃದಯ ಸಾಕೆ ನಿನ್ನ ಪ್ರೀತಿ ಮಾಡಲು.. ***********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೂತನ ಅವರ ಹೊಸ ಕವಿತೆ ನೂತನ ದೋಶೆಟ್ಟಿ ಸಾಲುಗಟ್ಟಿದ ವಾಹನಗಳ ಸಂದಿನಲ್ಲಿಚಟಚಟನೆ ಜಿಗಿಯುವ ಪುಟ್ಟ ಕಾಲುಗಳುದೇಹವಿಡೀ ಲೋಹದ ಗೋಲದೊಳಗೆ ತೂರಿಕೈಕಾಲು ಬಿಡಿಬಿಡಿಯಾಗಿ ಹೊರಬರುವ ಆಟ ಮಿಂಚುವ ಕಣ್ಣುಗಳ ಸುತ್ತ ಕಪ್ಪು ಕಾಡಿಗೆಸೆರೆ ಹಿಡಿಯುವ ದಾಹಮಿರಮಿರನೆ ಹೊಳೆವ ಕದಪುಗಳುಬಾಲ್ಯವನ್ನು ನುಂಗಿ ಉಬ್ಬಿ ಗರಿಗರಿಯಾಗುತ್ತಿರುವವು ಒಡ್ಡಿದ ಕೈಮೇಲೆ ಬೀಳುವ ಕನಸ ಕಾಸುಗಳುಸಂಜೆಗತ್ತಲಲ್ಲಿ ಕರಗುವುದ ತಿಳಿದೂಸುಡುಬಿಸಿಲಲಿ ಮೈ ಮಣಿಸುವ ಕಸುವುಸೊಂಟಕ್ಕೆ ಬಿಗಿದ ದಾವಣಿಯುಸಡಿಲವಾಗುವುದಕ್ಕೆ ಪೂರ್ವಹಾದಿಬದಿಯ ದೊಂಬರಾಟದಲ್ಲಿ ತಯಾರಿ ಬಡಿಯುವವನ ತಮಟೆ ತಾಳಕ್ಕೆಬಾಗಿ ಬಳುಕುವ ನೋಡುಕಣ್ಸನ್ನೆ, ಕೈಸನ್ನೆ, ಬಾಯ್ಸನ್ನೆಗಳ ಪಾಠಉಣ್ಣುವ ಅನ್ನದಲಿ ಸುಖ ನೀಡಿದ ಘಾಟು ಕೆಂಪು ದೀಪ ಹತ್ತುತ್ತಲೇ ನಿಲ್ಲುವ ವಾಹನಗಳಗಾಜನ್ನು ಬಗೆವ ಕಣ್ಣುಗಳುಕ್ಷಣಕ್ಷಣದ ಬದುಕ ಹುಡುಕುವವು ಇಂತೆಷ್ಟೋ ಭಾಗ್ಯಲಕ್ಷ್ಮಿಯರುರಸ್ತೆಯಂಚಲಿ ದಿನಗಳ ಸವೆಸಿಟಾರ್ಪಾಲು ಗೂಡುಗಳಲೋಫುಟ್ ಪಾತುಗಳಲೋ ರಾತ್ರಿಗಳ ಮಾರಿ ಕಂತೆ ಕಂತೆ ನೋಟುಗಳ ನುಂಗುವಕಡತಗಳ ಶಪಿಸುವರುಕಣ್ಣ ಮಿಂಚನ್ನು ಎದೆಯಲ್ಲಿ ಉಳಿಸಿ ಹೋಗುವರುನಿಟ್ಟುಸಿರು ದಾಟಿ ಸಾಗುವರುಗಣತಿಯಲ್ಲೂ ಹೆಸರಿಲ್ಲದಾಗುವರು ***************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಆಸೆ ಪೂಜಾ ನಾಯಕ್ ಝಗಝಗಿಸುವಾ ಆಸೆನಳನಳಿಸುವಾ ಆಸೆಮೊಮ್ಮೊದಲ ವಸಂತ ಋತು,ಕೋಗಿಲೆಗೆ ಕಂಠದ ಮಾಧುರ್ಯವ ಹೊರಹೊಮ್ಮಿಸುವ ಆಸೆ.ಕವಿಗೆ ಕಾವ್ಯದಾ ರಚನೆಯಮೇಲಾಸೆಕಲಾಕಾರನಿಗೆ ಚಿತ್ರ ಬಿಡಿಸುವ ಆಸೆಶಿಲ್ಪಿಗೆ ಮೂರ್ತಿಯ ಕೆತ್ತುವುದರಲ್ಲಾಸೆನಟರಾಜನಿಗೆ ತನ್ನ ನೃತ್ಯದಾಮೇಲಾಸೆಪ್ರೇಮಿಗೆ ಪ್ರೇಯಸಿಯೊಡಗೂಡಿ ನಲಿಯುವಾ ಆಸೆ ಮಾಗಿಯ ಚಳಿಯು ಇನಿಯನಿಗೆ ಆದರೆ,ಚಂದ್ರನ ಬೆಳದಿಂಗಳು ಗೆಳತಿಗೆಹತ್ತಾರು ಬಣ್ಣದಾ ಕನಸಿನಾ ಲೋಕದೊಳು ಚಿಟ್ಟೆಯ ಹಾಗೆ ನಲಿ-ನಲಿದು,ಏಕಾಂತದಲಿ ಕುಳಿತಾಗ ಕವಿತೆಯ ಬರೆದು, ಎಲ್ಲರೊಡಗೂಡಿ ಹಾಡುವ ಆಸೆ ಎನಗೆ.ಆಸೆ ಎಂಬುದು ಬಿಡಲಿಲ್ಲ ಗೌತಮ ಬುದ್ಧನನೇಅವನಿಗೂ ಕೂಡ ಇತ್ತೊಂದು ಆಸೆ,ಆಸೆಯ ಬಿಡಬೇಕು ಎನ್ನುವ ಮಹದಾಸೆ.ಆಸೆ ಎಂಬುದು ಎಲ್ಲರಾ ಬದುಕಿನ ಬಿಡಿಸಲಾಗದ ಬಂಧಮಿತಿ ಮೀರದೇ ಇದ್ದರೆ ಬೆಲೆ ಉಂಟು ಆಸೆಗೂ ಕಂದಾ. **************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತಿರುಗಾಟ ಭಾಗ್ಯ ಸಿ ಏಕೆ ತಿರುಗುವೆ ಅತ್ತಿಂದಿತ್ತಅತ್ತ ಪ್ರಳಯ ಇತ್ತ ಕೋಲಾಹಲತಿನ್ನುವ ಕೂಳಿಗೂ ಪರದಾಟ ಅಲ್ಲಿತುಸುವೆ ಹೆಚ್ಚಾಗಿ ಕಿತ್ತಾಡುತ್ತಿರುವರಿಲ್ಲಿ ಮೌಲ್ಯಾಧಾರಿತ ಸಮಸ್ಯೆಗಳು ಸಾಕಷ್ಟಿವೆಕ್ಲಿಷ್ಟತೆಗಳು ಜೇಡರ ಬಲೆಯಂತಾಗಿವೆಹೊರಾಡಬೇಕಿದೆ ಒಳಗಿನ ಶತ್ರುವಿನೊಂದಿಗೆಸಮಾಜ ಸ್ವಾಸ್ಯ ಕಾಪಾಡುವ ಗುರಿಯೊಂದಿಗೆ ಮಣ್ಣು, ಗಾಳಿ, ಬೆಳಕು ನೀರಿನ ಮಿಶ್ರಣಹೋದರೆ ಹೋಯಿತು ಬೆಲೆ ಇಲ್ಲಆತ್ಮ ಸತ್ಯವದು ಹೊಲಸು ಮಾಡಿಕೊಳ್ಳಬೇಡಿಲೆಕ್ಕ ತೀರಿಸಲೇ ಬೇಕು ಮರೆಯಬೇಡಿ ಏಕೆ ತಿರುಗುವೆ ಅತ್ತಿಂದಿತ್ತತಿರುಗಾಟ ಪರಿಹಾರವಲ್ಲಎಣೆ ಬಲೆಯನು ಬಿಗಿಯಾಗಿಬೀಳಲಿ ಮಿಕ ತಲೆಕೆಳಗಾಗಿ *****************************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸ್ವಾತಿ ಹನಿ ಅನಿತಾ ಕೃಷ್ಣಮೂರ್ತಿ ಕಂಡಿಲ್ಲ ನೇರವಾಗಿ ನಾನೆಂದು ನಿನ್ನಕಂಡಿದ್ದು ಆ ಬಾನಿನ ಮೇಘಗಳಲಿ.ಈ ತಂಪೆರೆವ ತಂಗಾಳಿಯಲಿನಗುತಿರುವ ಗುಲಾಬಿಯ ಪಕಳೆಯಲಿ. ಕಂಡಿಲ್ಲ ನೇರವಾಗಿ ನಾನೆಂದು ನಿನ್ಜಕಂಡಿದ್ದು ಇಬ್ಬನಿಯ ಪಾರದರ್ಶಕತೆಯ ನುಣುಪಿನಲಿ,ಆ ಆಗಸದ ಬಾನಾಡಿಯ ಹಾರಾಟದಲಿಕಪ್ಪೆಚಿಪ್ಪಲಿ ಅಡಗಿ ಸ್ವಾತಿಹನಿಯ ಮುತ್ತಿನಲಿ. ಕಂಡಿಲ್ಲ ನೇರವಾಗಿ ನಾನೆಂದು ನಿನ್ನಕಂಡಿದ್ದು ನಾ ಬರೆವ ಪದಗಳ ಭಾವದಲಿ,ಮಿಂಚಾಗಿ ಮಿಂಚಿ, ಸಂಚನು ತರುವ ಆಲೋಚನೆಯಲಿ,ಎದೆಯ ಏರಿಳಿತದ ಬಡಿತದಲಿ. ************************

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ಸುಜಾತ ಲಕ್ಷ್ಮೀಪುರ ಮಾತು ಮಾತಿಗೆ ಕಿಡಿ ತಾಗಿಸಿ ಸುಡುವುದು ಸಹಜ ಧರ್ಮವಲ್ಲಸುಮ್ಮನೇ ಮೌನದ ಅಗಾಧ ಕೂಪಕೆ ದೂಡುವುದು ಸರಿಯಲ್ಲ. ಮೌನವೂ ಮಣಭಾರವಾಗಿ ಕಾಡುವುದಿಲ್ಲವೆ ಏಕಾಂತದಿಕಣ್ಣಿನಲ್ಲೇ ಒಲವನು ಸೂಸಬಹುದು ಕೊಲ್ಲುವುದು ತರವಲ್ಲ ತಪ್ಪು ಮಾಡಿ ಕ್ಷಮೆ ಕೇಳುವುದೇ ದೊಡ್ಡ ವಿಚಾರವಲ್ಲಾಪ್ರೀತಿಗೆ ಶರಣಾಗಲು ಅಹಂ‌ಕಾರ ಸರಿಸುವುದು ಸೋಲಲ್ಲ ಬೆಳಕು ಮೂಡಲು ತಮವು ಅಳಿದೂ ಜಗವೆಲ್ಲಾ ಬೆಳಗುತ್ತದೆಮೈಮನವೆಲ್ಲ ಆವರಿಸಲು ಒಲವಲ್ಲದೆ ಬೇರೆ ಪಥವಿಲ್ಲ ಶಿವೆ,ಕಾಡುವ ಬಳ್ಳಿ ಬಿಡಿಸಿಕೊಳ್ಳುವುದು ಸಾಧ್ಯವೆ ನಿನ್ನಂತೆಎರಡಳಿದು ಒಂದಾಗಲು ಸವಿ ಪ್ರೇಮವಲ್ಲದೆ ಜಗವಿಲ್ಲ *******************************.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಿನ್ನ ಸೇರೋ ತವಕ ಪ್ಯಾರಿಸುತ ನಿನ್ನೂರು ದಾರಿಯು ಸವಿದಷ್ಟುದೂರಹವೆ ತುಂಬಿದ ಗಾಲಿಗಳು ಉರುಳಿದಷ್ಟುಮತ್ತಷ್ಟು ದೂರಉರುಳಿ ಹೊರಟ ಗಾಲಿಯಲ್ಲಿ ಹವೆಯಿತ್ತುನಿನ್ನ ನೆನೆದು ಬರುತ್ತಿರುವ ನನ್ನಲ್ಲಿ ಚಲವಿತ್ತುಪ್ರಯಾಸಗೊಂಡೆ,ಅನಾಯಾಸಗೊಂಡೆಕತ್ತಲು ಆವರಿಸಿದ ಕಪ್ಪು ಹೊಲದ ನಟ್ಟ ನಡುವೆಬೆಳೆದಿದ್ದ ಒಂಟಿ ಬೇವಿನಮರದಬುಡದಲ್ಲಿ ಮಗ್ಗಲು ಭುವಿಗೆ ಹೊಂದಿಸಿಮಲಗಿಕೊಂಡುನಿನ್ನ ಸೇರೋ ಕನಸು ಕಾಣುತ್ತಿದ್ದೆಕನಸನ್ನು ಭಗ್ನ ಮಾಡಿ,ಮತ್ತೆನಿನ್ನೂರು ದಾರಿ ಹಿಡಿಯಲುಪ್ರೇರೇಪಿಸಿದ್ದು ಅದೇ ಸೊಳ್ಳೆಅದು ನೀನೋ ಅಥವಾ ನಿಜವಾಗಿಯೂ ಸೊಳ್ಳೆಯೂತರ್ಕಕ್ಕೆ ಇಳಿಯುದಿಲ್ಲಅದು ಕಚ್ಚಿ ಹೋದ ಜಾಗದಲ್ಲಿ ನೀ ಕಚ್ಚಿದ ಹೋಲಿಕೆಯಿದೆದಾರಿಯುದ್ದಕ್ಕೂ ಮೈಲುಗಲ್ಲಿನ ಮೇಲೂ ನಿನ್ನದೇಸ್ವಾಗತಗೀತೆ,ಅದೆಷ್ಟು ಚಂದ ಅನ್ನುತ್ತಿಯಾ…?ನೋಡುತ್ತಾ,ಕೇಳುತ್ತಾ ಅಲ್ಲೇ ನಿಂತುಬಿಡಬೇಕುಇಲ್ಲ,ನಿನ್ನ ನೋಡುವ ತವಕದಿ ಓಡಿ ಬರಲೇ…?ಸೂರ್ಯ ನಿನ್ನ ಹಣೆಯ ಕುಂಕುಮವನ್ನು ಹೋಲುತ್ತಿದ್ದಗಾಳಿಯು ಸುಗಂಧ ಪುಷ್ಪ ಹೊತ್ತು ತರುತ್ತಿದ್ದಹಕ್ಕಿಗಳು ಮರಳಿ ಗೂಡಿನಡಿಗೆ ಸಾಗುತ್ತಿದ್ದಗಳಿಗೆಯಲಿ ನಮ್ಮಿಬ್ಬರ ದೇಹಗಳು ಒಟ್ಟುಗೂಡುತ್ತಿದ್ದವುಅಲ್ಲೊಂದಿಷ್ಟು ಪೋಲಿ ಸಂಜ್ಞೆಗಳು ಆಟ ಆಡುತ್ತಿದ್ದವುಭಾವನೆಗಳು ಕಟ್ಟಿಗೊಂಡ ಹಗ್ಗದಿಂದ ತಪ್ಪಿಸಿಕೊಂಡುಹಿಂಡು ಹಿಂಡಾಗಿ ಬರುತ್ತಿದ್ದವುಮತ್ತದೇ ಆಸೆಯಿಂದ ಸುಗಂಧಿ ಪರಿಮಳವನ್ನು ಬೆನ್ನುಬಿದ್ದುಸೂರ್ಯ ಕೆಂಪಾಗುವ,ಹಿತವಾಗುವಸಮಯಕ್ಕೆ ನಿನ್ನೂರಿಗೆ ಕಾಲಿರುಸುವೆನಿನ್ನೆಲ್ಲ ಸಮಯವನ್ನು ಕಾಯ್ದಿರುಸುವೆಯಾ…? *********************************

ಕಾವ್ಯಯಾನ Read Post »

You cannot copy content of this page

Scroll to Top