ಅರ್ಪಣಾ ಮೂರ್ತಿ ಕಾವ್ಯಗುಚ್ಛ
ಅರ್ಪಣಾ ಮೂರ್ತಿ ಕಾವ್ಯಗುಚ್ಛ ಕವಿತೆ-ಒಂದು ಸದ್ದುಗದ್ದಲದಬೀದಿಯ ಬದಿಯಬೇಲಿಯ ಹೂಅರಳುವ ಸದ್ದಿಗೆಕಿವಿಯಾಗುವಉತ್ಸುಕತೆ,ಹೂ ಬಾಡಿದಷ್ಟೂಚಿಗುರುತಿದೆ, ಹರಿವನದಿಗಳೆಲ್ಲದರ ಗಮ್ಯಸಾಗರವೇ ಆಗಬೇಕಿಲ್ಲ,ಸಮುದ್ರ ಸೇರುವಮೊದಲೇಭುವಿಯೊಳಗೆ ಇಂಗಿದಅದೆಷ್ಟೋ ನದಿಗಳಆರ್ದ್ರತೆಯ ಗುರುತುಗಳುಕಾಲ್ಮೆತ್ತಿವೆ, ಮೈಸುತ್ತಿದ ನೂಲುತೆರಣಿಯ ಹುಳವನುಂಗಲೇಬೇಕಿಲ್ಲ,ರೇಷಿಮೆಯರೆಕ್ಕೆಯಂಟಿಸಿಕೊಂಡಚಿಟ್ಟೆಹೂವಿನ ತೆಕ್ಕೆಯಲಿನಾಚಿದ ಬಣ್ಣಹೂದಳದ ಮೈಗಂಟಿದೆ, ಕತ್ತಲಿಗಂಟಿದಕನಸುಗಳೆಲ್ಲಕಣ್ಣೊಳಗುಳಿಯುವುದಿಲ್ಲ,ಕನಸು ನುಂಗಿದಅದೆಷ್ಟೋ ಹಗಲುಗಳುನನಸಿಗೆ ಮುಖ ಮಾಡಿನಿಂತಿವೆ…. ಕವಿತೆ-ಎರಡು ನದಿ ತುಂಬಿ ಹರಿದರೆಬಯಲಿಗೆ ನೆಲೆಯೆಲ್ಲಿ,ಬತ್ತಬೇಕುಬರಿದಾಗಬೇಕುಬಯಲಾಗಬೇಕು,ಬರದ ಬದುಕಿನ ಒಳಗೂಇಳಿಯಬೇಕು, ಧರೆ ಕಾದು ಕರಗದೆಮಳೆಯ ಸೊಗಸೆಲ್ಲಿ,ಕಾಯಬೇಕುಕಾದು ಕರಗಬೇಕು,ಮುಗಿಲೇರಿ ಹನಿಕಟ್ಟಿಹನಿಯಬೇಕುಇಳೆ ತಣಿಯಬೇಕು, ಇರುಳು ಕವಿಯದೆಹುಣ್ಣಿಮೆಗೆ ಹೊಳಪೆಲ್ಲಿ,ಕಪ್ಪು ಕತ್ತಲ ನೆಪವುಕಣ್ಣ ಕಟ್ಟಬೇಕು,ರೆಪ್ಪೆ ಮುಟ್ಟಬೇಕುಕನಸು ಹುಟ್ಟಬೇಕು… ಕವಿತೆ-ಮೂರು ಉಸಿರುಗಟ್ಟಿದಮರುಭೂಮಿಯಲಿಬಿರುಗಾಳಿಯಹುಡುಕುವಬರಡುಮರಳ ಹಾಸುಚಿಲುಮೆ ನೀರನುಗುಟುಕಿಸಿಉಸಿರ ಹಿಡಿದುತಂಪು ಗಾಳಿಯಕಾಯುವುದೂಒಲವೇ, ಹಾಯಿದೋಣಿಹಾಯಲಿಲ್ಲನಿಂತ ನೀರ ಕಡಲಲಿ,ಅಲೆಗಳ ನೆಪವೊಡ್ಡಿಸೆಳೆದೊಯ್ಯುವಕಡಲ ಸಂಚಿಗೆನಿಂತುಮುನಿಯುವುದೂಒಲವೇ, ಬೆಳಕು ಮಲಗುವಾಗಎಚ್ಚರಾದ ಇರುಳು,ಚುಕ್ಕಿಗಳ ಬದಿಗಿರಿಸಿಚಂದಿರನ ಹುಡುಕುವಕತ್ತಲ ಮೌನದನೀರವತೆಯೂಒಲವೇ……. *********************************
ಅರ್ಪಣಾ ಮೂರ್ತಿ ಕಾವ್ಯಗುಚ್ಛ Read Post »









