ದೊರೆಯ ಕಿರೀಟದ ನೀಲ ಮಣಿಯಲ್ಲಿ….
ಕವಿತೆ ದೊರೆಯ ಕಿರೀಟದ ನೀಲ ಮಣಿಯಲ್ಲಿ…. ಶ್ರೀದೇವಿ ಕೆರೆಮನೆ ರತ್ನ ಖಚಿತ ಸಿಂಹಾಸನದಲ್ಲಿ ಆಸೀನನಾಗಿದ್ದದೊರೆಯಲ್ಲೊಂದು ಉದಾಸೀನಅನತಿ ದೂರದಲ್ಲಿ, ಕೈ ಕಟ್ಟಿವಿಧೇಯಳಾಗಿ ನಿಂತಿದ್ದಕಪ್ಪು ಬಣ್ಣದ ನಿರಾಭರಣ ಯುವತಿಯಕಡೆಗೊಂದು ದಿವ್ಯ ನಿರ್ಲಕ್ಷ ಹ್ಞೂಂಕರಿಸಿ ಎದುರಿಂದ ತೊಲಗೆಂಬಂತೆಕೈಬೀಸಿದ ದೊರೆಯಲ್ಲಿ ಅದೇನೋ ವ್ಯಂಗ್ಯಸುಂದರವಾಗಿರದ್ದು ಯಾವುದೂ ಕಣ್ಣೆದುರುಕಾಣಲೇ ಬಾರದು ಎಂಬ ಹಟಎದುರಿಗಿದ್ದ ಯುವತಿಯೋಯಾರ ಕಣ್ಣೂ ಅರಳಿಸಿದ ಸೀದಾ ಕವಿತೆ ದೊರೆಯ ಅಣತಿಯಂತೆ ತಲೆ ತಗ್ಗಿಸಿಮುಖ ತಿರುವಿ ಹೊರ ಹೊರಟಾಕೆಯಕಣ್ಣಲ್ಲೊಂದು ಅಬ್ಬರಿಸುವ ಕಡಲುಉಕ್ಕಿದ ನಗೆಯಲ್ಲೊಂದು ಕಡಲಲೆಗಳನೆನಪಿಸುವ ಭೋರ್ಗರೆತ ಅದೋ…ದೊರೆ ಓಡೋಡಿ ಬಂದಿದ್ದಾನೆಈಗ ತಾನೆ ಹೊರಗೆ ಹೋದಕಪ್ಪು ಕಣ್ಣಿನ ಕಪ್ಪು ಹುಡುಗಿಗಾಗಿಆಕೆ ಅಲ್ಲೆಲ್ಲೂ ಕಾಣುತ್ತಿಲ್ಲ…ಗಾಳಿಯಲ್ಲಿ ಉಪ್ಪು ನೀರಿನ ಘಮಲುಕಿವಿಯಲ್ಲಿ ಅಲೆಗಳ ಮೊರೆತಮುಗ್ಗರಿಸಿದ ದೊರೆಯ ಎದೆಯಲ್ಲೂಎಂದೂ ಇರದ ಕಡಲ ಸೆಳೆತಕಪ್ಪು ಹುಡುಗಿಯ ಕನವರಿಕೆ ಈಗ,ದೊರೆಯ ಕಿರೀಟದ ನಡುವಲ್ಲಿಜ್ವಲಿಸುವ ನೀಲ ಮಣಿಯಲ್ಲಿಕಪ್ಪು ಕಡಲಿನ ಆರ್ಭಟ…. ****************************
ದೊರೆಯ ಕಿರೀಟದ ನೀಲ ಮಣಿಯಲ್ಲಿ…. Read Post »









