ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅವಳ ಕಣ್ಣುಗಳು

ಕವಿತೆ ಅವಳ ಕಣ್ಣುಗಳು ಡಾ. ಪ್ರೇಮಲತ ಬಿ. ಅವಳ ಕಣ್ಣುಗಳು ಅವನನ್ನುನಿರುಕಿಸುವುದೇ ಹೀಗೆನಿಧಾನವಾಗಿ ಪರೀಕ್ಷಿಸುವಂತೆಯಾರೆಂದು ಯಾವತ್ತೂ ನೋಡಿರದ ಹಾಗೆಆಳವಾಗಿ ಕತ್ತರಿಸುವ ಬಗೆ ಅವಳು ಅತ್ತಿತ್ತ ಹರಿಸುವ ನೋಟದಲ್ಲಿಇಡೀ ಜೀವಿತದಿ ಕಂಡಿರದ್ದಕ್ಕಿಂತಹೆಚ್ಚು ನೋಡಿಬಿಡುತ್ತಾನೆ ಅವನುದೀಪಗಣ್ಣುಗಳು ಆಳವಾಗಿ ಯೋಚಿಸುತ್ತನಿಷ್ಯಬ್ದವಾಗಿ ಪ್ರಕಟಿಸುತ್ತವೆತಟ್ಟನೆ ಒಂದು ಕಥೆಯನ್ನು ಬರೆಯುತ್ತಹೊಸಲೋಕದ ಕವಿತೆಯೊಂದನ್ನು ಹಾಡುತ್ತಇವನು ನಿಂತ ನೆಲ ಕಂಪಿಸುವ ಹಾಗೆ ಅವಳ ಕಣ್ಣೋಟದ ಕೊಲೆಗಡುಕನಿಗೆಇವನು ಬಲಿಯಾದ್ದು ಇದೇ ಮೊದಲಲ್ಲಕೊನೆಯೂ ಇಲ್ಲಅವಳ ನೋಟವೇ ಹಾಗೆಅವನ ಹೊರಮೈ ಭಾವಗಳ ಬಟ್ಟೆಕಳಚಿ ನಗ್ನವಾಗಿಸುವ ಹಾಗೆಒಳಮೈಯ ಬೇಗುದಿಗಳಿಗೆ ತಿದಿಯನ್ನುಒತ್ತಿ ಜ್ಯೋತಿ ಬೆಳಗಿಸುವ ಹಾಗೆ ಅವನು ಮಿಡಿಯುತ್ತಾನೆಅವಳು ರೆಪ್ಪೆ ಬಡಿದಾಗೆಲ್ಲ ಹೊಸದೊಂದುಎಪಿಸೋಡಿಗೆ ಕಾಯುವ ವೀಕ್ಷಕನಂತೆಕೊನೆಯಿರದ ಆಳಗಳಲಿ ಮುಳುಗೇಳುತ್ತದೃಷ್ಟಿಗೆ ದೃಷ್ಟಿ ಬೆರೆಸಿ ಕುಣಿಯುತ್ತಚಪ್ಪಾಳೆ ತಟ್ಟಿ ಕೆಲವೊಮ್ಮೆತಾನೇ ಅವಳಂತೆ ಮಗದೊಮ್ಮೆ! ****************************

ಅವಳ ಕಣ್ಣುಗಳು Read Post »

ಕಾವ್ಯಯಾನ

ಅಗ್ನಿಕುಂಡ

ಕವಿತೆ ಅಗ್ನಿಕುಂಡ ಲಕ್ಷ್ಮೀ ಪಾಟೀಲ್ ಅವರುನಡೆದಸ್ವರ್ಗದದಾರಿಯಲ್ಲಿಅವಳೂಹೆಜ್ಜೆಹಾಕಿಹೊರಟಿದ್ದಾಳೆಅವರುಸ್ವರ್ಗದಿಂದದಾರಿಮಾಡಿಕೊಂಡೇಹುಟ್ಟಿದವರುನಡಿಗೆಸಲೀಸುಅವಳಿಗೊಏರಿಗೆಜೋಲಿತಪ್ಪುತ್ತಿದೆಬದುಕನ್ನೆಲ್ಲಕಣ್ಣಿಟ್ಟುನಡೆದವಳಿಗೀಗಮಂಜುಕವಿದಂತೆಕಣ್ಣಿಗೆಕತ್ತಲೆಆವರಿಸಿದಂತೆನಡಿಗೆನಿಂತುಪಾದಗಳುಕುಸಿದಿವೆಬದುಕಿನಲ್ಲೇನರಕದನೋವುಉಂಡವಳುಸ್ವರ್ಗದಏರಿಗೆಬೆಚ್ಚಿಬಿದ್ದಿದ್ದಾಳೆಇಲ್ಲೇತೆರೆಯಬಾರದೇಒಂದುಕುಂಡಎಂಬಂತೆಕಣ್ಣುಗಳುನಿಸ್ತೇಜಗೊಂಡಿವೆಇವರೆಲ್ಲಸ್ವರ್ಗದಛ್ಹುಮಂತ್ರಗಾಳಿಯಿಂದಬಂದವರುಅದಕ್ಕೇಗಾಳಿಯೊಂದಿಗೆಹೊರಟಿದ್ದಾರೆಹಿಂದೆನೋಡದೆಹುಟ್ಟಿನಮೂಲಸೇರಲುಬೀದಿಗರುಗಳಂತೆಇದ್ದಸ್ವರ್ಗಕ್ಕೋಅಥವಾಇವರೇಕಟ್ಟಿಕೊಳ್ಳುವಇನ್ನೊಂದುಸ್ವರ್ಗಕ್ಕೋ ! ನನಗೂಇಲ್ಲಿನನ್ನಅಗ್ನಿಕುಂಡದಮೋಹಸ್ವರ್ಗನರಕಪಾಪಪುಣ್ಯಗಳಸ್ವತ್ತನ್ನೆಲ್ಲಯಜ್ಞಾಹುತಿಗೊಳಿಸಲುಅಗ್ನಿಕುಂಡಕಾಯುತ್ತಯಾರದೋದೇಹಬೆನ್ನಟ್ಟದಂತೆಕೆಂಡದೊಂದಿಗೆಕೆಂಡವಾಗಲುನನ್ನಾತ್ಮಿಣಿಯೂಸಿದ್ಧಳಾಗಿನಿಂತಿದ್ದಾಳೆಇವರಸ್ವರ್ಗದಲ್ಲಿಮತ್ತೆಭೂಮಿಗೆಬೀಳುವಭಯಮೂಲಪುರುಷಸ್ವರ್ಗದಲ್ಲಿಯೂಸುಖದಿಂದಿರಲಿಲ್ಲಐವರುಗಂಡಂದಿರಆದರದಲ್ಲಿಅಲ್ಲಿಯೂಸೋತರೆಛೆ ! ಪ್ರಮಾದಅಕ್ಷಮ್ಯಅಪರಾಧಶಂತನುಗಂಗೆಯಂತೆವಂಶಕ್ಕೆಮುನ್ನುಡಿಬರೆದುಮತ್ತೊಂದುಮಹಾಭಾರತಕ್ಕೆಕಿಡಿಹೊತ್ತಿಸಬೇಕುಶಾಪಗ್ರಸ್ಥಳಾಗಿಅವತರಿಸಿಗೆದ್ದಗಂಡಸರನೆರಳಾಗಿಮೀಸೆಹೊತ್ತಮುಖಗಳೆಲ್ಲಸೀರೆಯಲ್ಲಿಕವುಚಿಮುಗುಚಿಹೂವಿನಪಕಳೆಮೇಲೆಹಸಿಕಾಮದಗಾಯಬರೆಮೂಡಿಸಿವನವಾಸಯುದ್ಧಕರುಳುಗಳಿಗೆಕತ್ತರಿ.ಭೂಮಿಗೆಬಿದ್ದಸಂಕಟಕ್ಕೆಸಹಿಸುವುದು ಇವರೇಏರಲಿಸುರಲೋಕಸೋಪಾನಇಲ್ಲೊಂದುಭೂದೇವಿಯಅಗ್ನಿಕುಂಡಎದ್ದುಬಿಡಲಿಎಂದಿಗೂಬೇಡಅಪ್ಪನಸೇಡಿನಅಗ್ನಿಕುಂಡ ಓ ! ಮುಂದೆಕಾಯಿದಿರಿಸಿದಸ್ಥಳಕ್ಕೆಗಂಡಂದಿರಭರದನಡೆಸ್ವರ್ಗದಕೌತುಕಹೊತ್ತುಭೂಮೋಹದಾಚೆಭೂಭಾರದಾಚೆಗುರುತ್ವಾಕರ್ಷಣೆಕಳಚುತ್ತಿದೆಕೂಗುಕೆಳದುಆಸೆಹಿಂಗದುಎಲ್ಲೋಸ್ವರ್ಗಸ್ಥಆಕೇಶವಯುಗಪ್ರವೇಶಕ್ಕೆಯುಗಯುಗದತಯಾರಿದೀರ್ಘವಿರಾಮಯುಗಭಾರಕ್ಕೆಭೂದೇವಿ ! ನಿನ್ನಲ್ಲೇನನ್ನಸ್ವರ್ಗತೆರೆದುಬಿಡುಮತ್ತೊಂದುಅಗ್ನಿಕುಂಡಬೆತ್ತಲಾಗಿಬಿದ್ದುಒಪ್ಪಗೊಳ್ಳಲುಮನಭಾರದಸಂಕಟಗಳುಕಿಡಿಕಿಡಿಗಳಸೋಂಕಲುಹೇಗೆಮರೆತೀತುಸೀರೆಅಯ್ಯೋಸೀರೆಯಭಾರತಡೆಯಲಾಗುತ್ತಿಲ್ಲ **********************************************

ಅಗ್ನಿಕುಂಡ Read Post »

ಕಾವ್ಯಯಾನ

ಗಝಲ್

ಗಝಲ್ ರತ್ನರಾಯ ಮಲ್ಲ ಅಂದವನ್ನು ಮುಚ್ಚಿಡಲು ಬಟ್ಟೆಗಳನ್ನು ತರುತಿರುವೆಚಂದವನ್ನು ಹೆಚ್ಚಿಸಲು ಸೀರೆಯನ್ನು ಉಡಿಸುತಿರುವೆ ಅವಯವಗಳ ಇಳಿಜಾರಿನಲ್ಲಿ ಬೆರಳುಗಳು ಸೋಲುತಿವೆಸೌಂದರ್ಯದ ಕೆನೆಯಲ್ಲಿ ಪ್ರೀತಿಯಿಂದ ಅಲೆಯುತಿರುವೆ ಹೇಮವನ್ನು ನಾಚುವ ಕಿವಿಯೋಲೆಗಳನ್ನು ತಂದಿರುವೆಒರಟು ಅಧರಗಳಿಂದ ಕರ್ಣಗಳನ್ನು ಸಿಂಗರಿಸುತಿರುವೆ ಹೃದಯದ ಉದ್ಯಾನದಲ್ಲಿ ಹೂವೊಂದು ಅರಳಿ ನಿಂತಿದೆಹಿಂಬದಿಯಿಂದ ಆಲಂಗಿಸಿ ಲತೆಯನ್ನು ಮುಡಿಸುತಿರುವೆ ತೆಳುವಾದ ಮೈಯ ಕಂಡು ಅರಿವೆಗೂ ತುಸು ಮತ್ಸರ ಮಲ್ಲಿಶೂನ್ಯ ಅಂಗದ ಸೊಬಗಿನಲಿ ನಾನು ಕಳೆದು ಹೋಗುತಿರುವೆ ************************

ಗಝಲ್ Read Post »

ಕಾವ್ಯಯಾನ

ನಿಲ್ಲದಿರು ದೂರ

ಕವಿತೆ ನಿಲ್ಲದಿರು ದೂರ ಜಯಶ್ರೀ.ಭ.ಭಂಡಾರಿ ಉಸಿರ ಉಸಿರಲಿ ನಿನ್ನದೆ ಹೆಸರುನೆನಪ ಮೆರವಣಿಗೆಯದು ಹಸಿರುಅರಿತು ಬೆರೆತ ನವನೀತದ ಮೊಸರುಕನಸಕಂಗಳಲಿ ತುಂಬಿದೆ ಉಸಿರು ದೂರದಲಿ ನೀನಿದ್ದರೂ ಇಲ್ಲ ಅಂತರ..ಹುಚ್ಚು ಪ್ರೀತಿಯದು ತೀರದ ದಾಹಕಡಲ ಅಲೆಗಳಾಗಿವೆ ಆಸೆಗಳುಬಂದು ಬಿಡು ತಾಳಲಾರೆ ಈ ವಿರಹ ನೋವ ನಿನ್ನ ಸನಿಹ ಬೇಕೆನಗೆ ನಿರಂತರಬಯಕೆಗಳ ರಂಗೋಲಿಗೆ ರಂಗಾಗುಬಾ ಗೆಳೆಯನೆ ಸಹಿಸಲಾರೆ ಅಂತರಜೊನ್ನಮಳೆ ಜೇನಹೊಳೆ ನೀನಾಗು ಕತ್ತಲೆಯ ಸರಿಸು ಹರಸು ಬಾಬೆಳಕಾಗಿ ಹೃದಯ ಮೀಟು ಬಾಪ್ರೀತಿಯ ಮಹಲಿನ ಅರಸನೆ ಬಾಅಂತರ ಸಾಕು ನಿರಂತರವಾಗಿ ಬಾ ಮುದ್ದುಮಾತಿನ ಮೋಹಗಾರನೆಗೆಜ್ಜೆಸದ್ದಿಗೆ ಮರುಳ ಮಾಯಗಾರನೆಮನದ ರಿಂಗಣಕೆ ಮೆಲ್ದನಿಯಾದವನೆಎದೆಯ ತಲ್ಲಣ ಅರಿತವನೆಶಮನಮಾಡು ಬಾ ನಿರಂತರ ಈ ಹೂ ಸದಾ ನಿನ್ನ ಪೂಜೆಗೆ ಒಲುಮೆಸಿರಿಯೆಅಂತರ ಸಾಕಿನ್ನುಬಾಳದಾರಿಯಲಿ ಅನವರತ ಬೇಕಿನ್ನುನಿಲ್ಲದಿರು ಸಖನೆ ದೂರದೂರ. ****************************

ನಿಲ್ಲದಿರು ದೂರ Read Post »

ಕಾವ್ಯಯಾನ

ಸಂತೆಯಲಿ

ಕವಿತೆ ಸಂತೆಯಲಿ ವಿ.ಎಸ್.ಶಾನಬಾಗ್ ಸಂತೆಯಲಿಕೆಲವರು ಕೊಳ್ಳಲು ಬರುತ್ತಾರೆಕೆಲವರು ನೋಡಲು ಕೊಳ್ಳುತ್ತಾರೆಸಂತೆಗೆ ಗೋಡೆಗಳು ಇಲ್ಲ ಆದ್ದರಿಂದ ಎಲ್ಲಅಂಗಾಂಗಗಳ ಮಾತು ಖುಲ್ಲ ಮಹಿಳೆಯರು ಹಳೆಯಮಾತಿನಹೊಸ ಚರ್ಯೆ ಚರ್ಚೆ ಸ್ವಪಾಕಸುಕ್ಕುಗಳ ಅಡಗಿಸಿ ಮನೆಯಲಿ ಸ್ವಪಾತ್ರಗಂಡನ ಚಮತ್ಕಾರ ನೂಡಲ್‌ ನಂತಹಪರಿಹಾರಗರತಿಯರನ್ನು ತರಗತಿಗೆ ಕಳುಹಿಸಿಪಿಸುಮಾತಿನಲ್ಲಿ ದ್ವಿಪಾತ್ರಹೌಹಾರಿಸಿದ ಚಿತ್ರ ಪುರುಷರು ಸಂತೆಯಲ್ಲಿಹೆಂಡತಿ,ಬಡ್ತಿ,ಲೋನುಅನುಕಂಪಕ್ಕೆ ಕಾಯುವಶೋಷಿತರು ಪೆಗ್ ನಲ್ಲಿಮೀಟೂ ಕಥಾಸರಣಿ ಯುವಕರುಸಂಜೆ ಸಂತೆಯಲಿ ಸಂದವರು, ಪ್ರೀತಿಯಲಿ ದುಶ್ಯಂತರುಮಾತು ಬೇಡದ ಬರೀ ಸೂಚನೆವಿವರಣೆ, ಹಕ್ಕಿಯಂತೆ ಹಾರಿ ಮಾತು ಮತ್ತೇನೋ ಆದ ಬವಣೆಕೇಳದ ಕಿವಿಗೆ ಹೇಳದ ಬಾಯಿ ನೋಡದ ಕಣ್ಣುಮಾರುವವರ ಎದೆಯಿಂದ ಕೊಳ್ಳುವವರ ಕಣ್ಣ ಹೊರಗೆಯಾರದೋ ಹೊಂಡಕ್ಕೆ ಯಾರದೋ ಮಣ್ಣುಕೀ (ಎಲ್ಲಿದೆ ಹುಡುಕಿ)ಇಲ್ಲದೆ ಮರೆತ ಬಾವುಟಹಾರುತ ಪಟಪಟ ಕವಿಗಳುಸಂತೆಯಲಿ ಸಿಗುವುದು ಕವಿತೆಗೆ ಬದಲಾದ ರೂಪ,ಅನುಭವ ಕಾಡದು ಬರೆ ಅಳಲಿನ ಸ್ವಗತ ರೂಪ?ಅವೇ ಕವಿತೆಗಳು ಪುರವಣಿಗೆಗಳಲಿ ತದ್ರೂಪಮಾತಿನಲ್ಲಿ ವಿಮರ್ಶೆ ಯಾಕೋ ಮೌನ ಕವಿಗೆಕವಿಗೋಷ್ಟಿಯಲಿ ಕವಿಗಳು ಮಂಚದಲಿಸಂತೆಯಲಿ ಓದಿದ ಕವಿತೆಗಳುಹಾರಿಹೋದವುಗಂಗೆಯ ಎಂಟನೇ ಮಗುವಿನಂತೆವಾಟ್ಸಾಪ್ ಕವಿಗಳ ಗುಂಪನ್ನು ಅರಸಿ ಸಂತೆ ಅಮೂರ್ತ ನಿಂತಂತೆಸಂಜಯನ ಕಣ್ಣಂತೆ ************************

ಸಂತೆಯಲಿ Read Post »

ಕಾವ್ಯಯಾನ

ಕಾಪಿಟ್ಟು ಕಾಯುತ್ತಾಳೆ

ಕವಿತೆ ಕಾಪಿಟ್ಟು ಕಾಯುತ್ತಾಳೆ ಶ್ರೀವಲ್ಲಿ ಶೇಷಾದ್ರಿ ಋತು ಋತುವಿಗೊಂದೊಂದು ಹೊಸತುಹೆಚ್ಚುಗಾರಿಕೆಯ ಬಿಚ್ಚಿಡುತ್ತಾಳೆ,ಅಚ್ಚರಿ ಹುಟ್ಟಿಸಿಬೆಚ್ಚಿಸುವ ಈಹುಚ್ಚಿಪೆಚ್ಚಾಗಿಸುತ್ತಾಳೆ ಹುಚ್ಚುಗಳ ಹೆಚ್ಚಿಸಿಮನದಿಚ್ಚೆಗಳ ಅಚ್ಚು ಹಾಕಿಸಿಟ್ಟುರಚ್ಚೆ ಹಿಡಿದು ಅಚ್ಚು ಮೆಚ್ಚಾಗಿಕೊಚ್ಚಿ ಹೋಗದ ಹಾಗೆ ಬಚ್ಚಿಟ್ಟುಕಾಪಿಟ್ಟು ಕಾಯುತ್ತಾಳೆ ಬೆಚ್ಚಗೆ ಕಳಚಿಟ್ಟ ಪೊರೆ ಮತ್ತೆ ಹಸಿರು ಕೊನರಿಹಸಿ ಕರಗ ಮಣ ಭಾರ ಹೊತ್ತುಚೀರಿ ಹಾರಿ ಮೇಲೆರಗೊ ಹನಿಯರಭಸ ಭರಿಸಿ ಝಾಡಿಸಿ ತೂರಿಎಲ್ಲೆ ಇರದೆಡೆ ಹರಿದು ಬರಿಯರಾಡಿಯನ್ನಪ್ಪಿ ಒಪ್ಪಿ ಮುತ್ತಿಕ್ಕಿ ದಿನ ರಾತ್ರಿಯಾಟಕ್ಕೆ ಅದರಿ ಬೆದರಿಗರಿ ಕೆದರಿ ಮತ್ತೊಮ್ಮೆ ಹೂವಾಗುತ್ತಾಳೆ ಬಟ್ಟ ಬಯಲಿನಲಿ ದೃಷ್ಟಿ ತಾಗುವ ಹಾಗೆಪರಿಪರಿಯ ನಿಲುವಾಭರಣ ಪೇರಿಸಿಹೆಜ್ಜೆಗೊಂದು ಗೆಜ್ಜೆ ಎದೆ ಛಲ್ಲೆನ್ನಿಸಿಬೆಳಕು ಬೆಳದಿಂಗಳ ಕಲಕಿ ಕುಲುಕಿತಿಂಗಳ ತಿಳಿಗೊಳವ ಮುಳುಗಿ ತೇಲಿಸಿಅಳುವ ಕಡಲಿಗೆ ನಗೆ ದೋಣಿ ಹಾಯಿಸಿಏನೂ ಅರಿಯದೆ ಮಂಜು ಮುಸುಕಿನಲಿಎಲ್ಲೊ ದಿಟ್ಟೆ ನೆಟ್ಟು ನಿಲ್ಲುವ ಈ ಹುಚ್ಚಿ. *******************************

ಕಾಪಿಟ್ಟು ಕಾಯುತ್ತಾಳೆ Read Post »

ಕಾವ್ಯಯಾನ

ರುಬಾಯಿಗಳು

ರುಬಾಯಿಗಳು ಪ.ನಾ.ಹಳ್ಳಿ.ಹರೀಶ್ ಕುಮಾರ್ ೧. ಮಂಕುತಿಮ್ಮನಾಗು ಕೂಡಿಡುವುದು ಬಿಡು ಜಿಪುಣನೆಂಬ ಹೆಸರು ತಪ್ಪೀತು.ಓದಿ ಜ್ಞಾನಿಯಾಗು, ಅಜ್ಞಾನಿಯೆಂಬ ಹಣೆಪಟ್ಟಿ ತಪ್ಪೀತು.ಎಲ್ಲರೊಡನೆ ಒಂದಾಗಿ ಡಿವಿಜಿಯ ಮಂಕುತಿಮ್ಮನಾಗು,ರೌರವ ನರಕ ಲೋಕದ ದರ್ಶನವಾದರೂ ತಪ್ಪೀತು. ೨.ಕರ್ಮ ಹುಲಿಯ ಹೊಟ್ಟೆಯೊಳಗುಟ್ಟಿ ಹುಲಿಯಾದೆವುಹಸುವಿನೊಟ್ಟೆಯೊಳಗುಟ್ಟಿ ಹಸುವಾದೆವುಮನುಷ್ಯನ ಹೊಟ್ಟೆಯೊಳಗುಟ್ಟಿದಾ ಕರ್ಮಕ್ಕೆ,ಹಿಂದೂ ಕ್ರೈಸ್ತ ಜೈನ ಮುಸಲ್ಮಾನರೆಂದಾದೆವು **************************

ರುಬಾಯಿಗಳು Read Post »

ಕಾವ್ಯಯಾನ

ಕೆಂಡದ ಕೋಡಿ

ಕೆಂಡದ ಕೋಡಿ ವಿಶಾಲಾ ಆರಾಧ್ಯ ಬೆಳದಿಂಗಳಿನ ರಂಗೋಲಿಯಲೂಚಿತ್ತದಲಿ ನೆತ್ತರಿನ ಚಿತ್ರಗಳು ಮೂಡಿಕತ್ತಲ ಗರ್ಭಕ್ಕಿಳಿದು ಬಸಿರಾಗುತ್ತವೆಸೂಜಿಯ ಮೊನೆಯಲ್ಲಿ ಹುಟ್ಟಿದಮತ್ಸರದ ಕನಸುಗಳುದ್ವೇಷದ ಕೋರೆಹಲ್ಲಿನೊಡನೆಕತ್ತಿಯ ಝಳಪಿನ ತಾಳದಲಿನರ್ತಿಸಲು ಹವಣಿಸುತ್ತವೆ!! ಪಕ್ಷಗಳ ದಾಟಿ ಮಾಸದಮಾಸಗಳಲಿ ಇಣುಕಿ ಕಣ್ಣಲ್ಲೇಕೆಂಡದ ಕೊಂಡ ನಿಗಿನಿಗಿಸಿಮಿನುಗಿ ಮನದ ರಸವನುಕೊತಕೊತನೆ ಕುದಿಸಿ ನಾನುನೀನಿನಮೇಲು ಕೀಳಿನ ಧರ್ಮಾಧರ್ಮದತುಪ್ಪವ ಸುರಿಸಿ ಅಗ್ನಿಗೊಂಡವಮತ್ತೆ ಬಾನ ಕೊನೆವರೆಗೂ ಉರಿಸಿಧಗಧಗಿಸುವ ಹುಚ್ಚು ಕೋಡಿಹರಿಯುತ್ತದೆ!! ಏರಿಯ ದಾಟಿದ ಮತ್ಸರದ ಝರಿಕೊರಳ ಸೀಳೆ ಕಿರುದನಿಗೂಎಡೆಗೊಡದೆ ನೆತ್ತರು ಹರಿದಾಡುತ್ತದೆಆ ನೆತ್ತರಲೇ ಕಾರ್ಕೋಟ ಬೀಜಗಳುಮೊಳಕೆಯೊಡೆಯುತ್ತವೆ ಮತ್ತೆ ಮತ್ತೆ

ಕೆಂಡದ ಕೋಡಿ Read Post »

ಕಾವ್ಯಯಾನ

ಹೇ ರಾಮ್

ಕವಿತೆ ಹೇ ರಾಮ್ ನೂತನ ದೋಶೆಟ್ಟಿ ಸುತ್ತ ಕ್ಲಿಕ್ಕಿಸುವ ಕ್ಯಾಮರಾ ಕಣ್ಣುಗಳುಚಿತ್ರಪಟದಲ್ಲಿ ಸೆರೆಯಾದದ್ದೇನೋ ಹೌದು ಇದು ಯಾರ ಸಮಾಧಿ?ಪ್ರಶ್ನೆಗೆ ಅಪ್ಪನ ಮೆದು ಉತ್ತರಪೋಸು ಕೊಡುವವರ ಪಕ್ಕದಲ್ಲಿಹಿಡಿಯಾದ ನಾನು ಘೋಡ್ಸೆಯನು ಬಣ್ಣಿಸುವವರ ಮಾತುಎದೆ ಹಿಂಡಲಿಲ್ಲಇತಿಹಾಸ ಹೇಳಿತ್ತು ನಿನ್ನೆಗೆ ಮರುಗಬೇಡ ಗುಂಡಿಗೆ ಎದೆಯೊಡ್ಡಿದವಗೆಕಾವಲು ಬಂದೂಕುಗಳುವಿಪರ್ಯಾಸಕ್ಕೂ ಮಿತಿ ಇರಬೇಕು ತತ್ವಗಳೋ ಹೊದಿಕೆ ಹೊದ್ದ ಪುಸ್ತಕಗಳುಬಾಕ್ಸ್ ಆಫೀಸಿನಲ್ಲಿ ಗಾಂಧೀಗಿರಿಯ ಲೂಟಿಖಾದಿಯ ಫ್ಯಾಷನ್ ಮೇಳಸ್ವದೇಶಿ ಬೇಲಿಗೆ ವಿದೇಶಿ ಗೂಟನಾನೊಬ್ಬನೇ ‘ ನಗ್ನ ಫಕೀರ’ **********************************************************

ಹೇ ರಾಮ್ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಎ. ಹೇಮಗಂಗಾ ಬೆರಳುಗಳು ಯಾಂತ್ರಿಕವಾಗಿ ಹೂ ಕಟ್ಟುತ್ತಿವೆ ಮನಸೆಲ್ಲೋ ಕಳೆದುಹೋಗಿದೆಕಂಗಳು ಬರುವಿಕೆಯನ್ನೇ ನಿರೀಕ್ಷಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ಪ್ರೀತಿ, ಪ್ರೇಮದಲ್ಲಿನ ಸುಖವೇನೆಂದು ತೋರಿಸಿಕೊಟ್ಟವನು ನೀನುಸವಿನೆನಪಲಿ ಅಧರಗಳು ಬಿರಿಯುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ನಿನಗಾಗೇ ಮಿಡಿಯುವ ಹೃದಯದಲಿ ನೂರೆಂಟು ತವಕ, ತಲ್ಲಣಗಳುಧಮನಿಗಳು ನಿನ್ನ ಹೆಸರನ್ನೇ ಜಪಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ಕಣ್ರೆಪ್ಪೆಯೊಳು ಅವಿತಿಹ ಕನಸು ನನಸಾಗಲು ಕಾಯುವ ಕಾಯಕವಿದುಕಾಲದ ಘಳಿಗೆಗಳು ತಮ್ಮಂತೆ ಸರಿಯುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ವರ್ಷಗಳು ಉರುಳಿದರೇನು ಹೇಮ ಳ ಒಲವಿಗೆಂದೂ ಮುಪ್ಪು ಬಾರದುತನುವಿನ ಕಣಕಣಗಳೂ ಹಂಬಲಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ *****************************

ಗಝಲ್ Read Post »

You cannot copy content of this page

Scroll to Top