ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅಂದುಕೊಳ್ಳುತ್ತಾಳೆ

ಕವಿತೆ ಅಂದುಕೊಳ್ಳುತ್ತಾಳೆ ಪ್ರೇಮಾ ಟಿ.ಎಂ.ಆರ್. ಏನೆಲ್ಲ ಮಾಡಬೇಕೆಂದುಕೊಳ್ಳುತ್ತಾಳೆ ಅವಳು ನಗಿಸಬೇಕು ನಗಬೇಕುನೋವುಗಳಿಗೆಲ್ಲ ಸಾಂತ್ವನವಾಗಬೇಕುಕಲ್ಲೆದೆಗಳ ಮೇಲೆ ನಿತ್ಯನೀರೆರೆದು ಮೆತ್ಗಾಗಿಸಿ ನಾದಬೇಕು ತನ್ನೊಳಗಿನ ಕೊರತೆಗಳನ್ನೆಲ್ಲಪಟ್ಟಿಮಾಡಿ ಒಪ್ಪಿಕೊಂಡುಬಿಡಬೇಕೆಂದುಕೊಳ್ಳುತ್ತಾಳೆನೀರವ ಇರುಳಲ್ಲಿ ತಾರೆಗಳಎಣಿಸುತ್ತ ಹೊಳೆದಂಡೆಮರದಡಿಗೆ ಕೂತಲ್ಲೇ ಅಡ್ಡಾಗಿನಿದ್ದೆಹೋಗಬೇಕು ಕಪ್ಪು ಕಲ್ಲರೆಮೇಲೆ ಬೆಳ್ನೊರೆಯಕಡಲಾಗೋ ಮಳೆಹನಿಯಜೊತೆಗೊಮ್ಮೆ ಜಾರಬೇಕುಹಿಂದೆಹಿಂದಕೆ ಹಿಂತಿರುಗುವಂತಿದ್ದರೆಕುಂಟಾಬಿಲ್ಲೆ ಕಣ್ಣಾಕಟ್ಟೆಮತ್ತೊಮ್ಮೆ ಆಡಬೇಕುಬಿಸಿಲುಕೋಲುಗಳೆಲ್ಲ ಸಾರ್ಕೆಹೊರೆಮಾಡಿ ಹೊರಬೇಕುಮರದಡಿಯ ನೆರಳುಗಳಬರಗಿ ಬುತ್ತಿಯ ಕಟ್ಟಿತಲೆಮೇಲೆ ಹೊತ್ತು ಬಿಸಿಲಡಿಯಜೀವಗಳಿಗೆ ಹೊದೆಸಬೇಕುಅದೆಷ್ಟು ಸಾಲಗಳಿವೆ ತೀರುವದಕ್ಕೆಬಿಡಿಸಿಕೊಳ್ಳಬೇಕಿತ್ತುಗೋಜಲುಗಳ ಗಂಟುಗಳಅಂದುಕೊಳ್ಳುತ್ತಾಳೆಸದ್ದಿಲ್ಲದೇ ನಿದ್ದೆಹೋದ ಹಾದಿಯಮೇಲೆ ಒಬ್ಬಂಟಿಯಾಗಿ ನಡೆಯುತ್ತಲೇಇರಬೇಕು ಯಾರೂಅತಿಕ್ರಮಿಸದ ಗ್ರಹವೊಂದಕ್ಕೆಒಮ್ಮೆ ಗುಳೆಹೋಗಬೇಕು ತನ್ನಉಸಿರನ್ನೊಮ್ಮೆ ತಾನೇ ಕೇಳಿಸಿಕೊಳ್ಳಬೇಕುಅಂದುಕೊಳ್ಳುತ್ತಾಳೆ ***************************

ಅಂದುಕೊಳ್ಳುತ್ತಾಳೆ Read Post »

ಕಾವ್ಯಯಾನ

ಅಬಾಬಿ ಕಾವ್ಯ

ಕವಿತೆ ಅಬಾಬಿ ಕಾವ್ಯ ಹುಳಿಯಾರ್ ಷಬ್ಬೀರ್ 01 ತಸ್ಬಿ ಮುಟ್ಟಿದ ಕೈಹಳೆಯ ಕೋವಿಯನಳಿಕೆಯಲ್ಲಿನ ಗೂಡು ಬಿಚ್ಚಿತುಷಬ್ಬೀರ್…!ಆತ್ಮ ರಕ್ಷಣೆಗಾಗಿ. 02 ಸಾಮರಸ್ಯದ ಹೆಸರೇಳಿರಾಮ ರಹೀಮರನ್ನುದ್ವೇಷಿಗಳಾಗಿಸಿರುವರುಷಬ್ಬೀರ್…!ಖಾದಿ ಖಾವಿಯ ಮುಖವಾಡ. 03 ಜಾನಿಮಾಜ಼್ ನ ಮೇಲೆಜಾನ್ ಇಟ್ಟು ನಮಾಜ಼್ಆವಾಹಿಸಿಕೊಂಡವರುಷಬ್ಬೀರ್…!ಭಗವಂತನಿಗೆ ಶರಣಾದವರು. 04 ಪುಡಿಗಾಸಿನಲ್ಲೇಇಡೀ ಬದುಕ ಬಿಡಿ ಬಿಡಿಯಾಗಿಅಂದೇ ದರ್ಬಾರ್ ಮಾಡುವರುಷಬ್ಬೀರ್…!ನನ್ನ ಜನ ನನ್ನವರು. 05 ಯಾ..! ಅಲ್ಲಾ…ಎಲ್ಲಾ ಯೋಜನೆಗಳಂತೆನನ್ನ ಕನಸುಗಳಿಗೂಷಬ್ಬೀರ್…!ಸಬ್ಸಿಡಿ ಕೊಡಿಸುವೆಯಾ..? *************************

ಅಬಾಬಿ ಕಾವ್ಯ Read Post »

ಕಾವ್ಯಯಾನ

ಕವಿತೆ ಕಮಲೆ ಮಾಂತೇಶ ಬಂಜೇನಹಳ್ಳಿ ಕೆರೆಯ ಏರಿ ಮೇಲೆನಿನ್ನ ಕನಸುಗಳ ಬೆನ್ನೇರಿಕುಳಿತ ನಾ… ಅಲ್ಲೇ ಸನಿಹತಣ್ಣಗೆ ಸುಳಿದೋಗುವಾಗಕಾಣಲಿಲ್ಲವೇ? ಕೆರೆ ದಿಣ್ಣೇಲಿ ಆಜಾನುಬಾಹುಆಲದ ಬಿಳಲು, ನಾ ಜೀಕುವಜೋಕಾಲಿ, ನೀನೇ ಹರಿದದ್ದು..ತಿಳಿದೂ ಬೇಸರಿಸದೆಮರೆತುಬಿಟ್ಟಿರುವೆ… ರವಿ ಪಡುವಣಕ್ಕಿಳಿದ,ಕಣ್ಣುಗಳೋ ಮಬ್ಬಾಗುತಿವೆ..ನನ್ನವೇ ಕನಸುಗಳಪುಕ್ಕಟೆ ಬಿಕರಿಗಿಟ್ಟಿದ್ದೇನೆ‌‌..ಚೌಕಾಸಿಯಿನ್ನೇಕೆ?!..ನೀಡಿಬಿಡುವೆ ನಿನಗೆ,ಕಾಣಬಾರದೇ?.. ಇಳಿ ಹೊನ್ನ ಸಂಜೇಲಿ,ನಿರ್ಜನ ನೀರವ ಮೌನದಿ,ನಿರೀಕ್ಷೆಯ ಕಂಗಳಲಿ,ಸುತ್ತಲೂ ಹುಡುಕುತಲೇ..ನೆನಪುಗಳ ಅಡಕುತಿರುವೆ,ಬರಬಾರದೇ?.. ಕೆರೆಯೊಳಗೆದ್ದು ತಾಕಿಯೂ..ಅಂಟದ ತೇವ ಬಿಂದುಗಳ್ಹೊತ್ತಪಂಕಜೆಯ ಪತ್ರಗಳಂತೆ,ನನ್ನ ಕನಸುಗಳಕೊಳ್ಳಲೊಪ್ಪದ, ಅಪ್ಪದಓ ಕಮಲೇ..ಒಮ್ಮೆ ಒಪ್ಪು ಬಾರೆ… **********************

Read Post »

ಕಾವ್ಯಯಾನ

ಹೊರಗಿನವ

ಕವಿತೆ ಹೊರಗಿನವ ಡಾ. ಅರಕಲಗೂಡು ನೀಲಕಂಠ ಮೂರ್ತಿ. ನಾನೀಗ ಹೊರಗಿನವಇದ್ದ ಹಾಗೆ.ಒಳಗೂ ಇಲ್ಲದವನುಹೊರಗೂ ಹೋಗದವನು–ಪೂರ್ತಿಆದರೂ…ನಾನೀಗ ಹೊರಗಿನವಇದ್ದಂತೆ. ಎಷ್ಟರಮಟ್ಟಿಗೆ ಹೊರಗಿನವನುಅಥವ ಎಷ್ಟು ಇನ್ನೂ ಒಳಗಿನವನುಈ ಅಂದಾಜು ನನಗೇ ಸಿಗದವನು! ಹೆಜ್ಜೆಯೊಂದ ಹೊಸ್ತಿಲಾಚೆಇಟ್ಟವನಿರಬಹುದುಆದರೆ ವಾಸ್ತವವೆಲ್ಲಒಳಗೇ ಇನ್ನೂ… ಊರಿಗೆ ಹೊರಟಂತೆರೆಡಿಯಾಗಿ ಕೂತವನಂತೆ–ಅಂತೂ…ಯಾವ ಗಳಿಗೆಯಲ್ಲೂ ಗಾಡಿಬಂದು ನಿಲ್ಲಬಹುದು… ಹೌದು–ಸಂಜೆಯ ಮಬ್ಬು ಗಾಢವಾಗುವ ಹಾಗೆಕಣ್ಣ ಹರಿತ ಮೊಂಡಾದಹೊತ್ತು…ನಾನೀಗ ಹೊರಗಿನವಇದ್ದಹಾಗೆ…ಇನ್ನೆಷ್ಟು ಹೊತ್ತು–ಹೊರಗಿನವನೇ ಪೂರ್ತಿಆಗಲು ಅನಾಮತ್ತು…! ***************************************

ಹೊರಗಿನವ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆ ನನ್ನ ನೋವು ಸಾತುಗೌಡ ಬಡಗೇರಿ ಕಣ್ಣೀರ ಹನಿಯೊಂದುಹೇಳುತ್ತಿದೆ ಹೊರಬಂದುನೊಂದ ಹೃದಯದ ತನ್ನ ವ್ಯಥೆಯ.ಸೂತ್ರವು ಹರಿದಂತಹಪಟದಂತೆ ಬಾಳಾಗಿಕಥೆಯಾಗಿ ಹೇಳುತ್ತಿದೆ ಬೆಂದು ಹೃದಯ. ಜೊತೆಯಾಗಿ ಉಸಿರಾಗಿನಿನಗಾಗಿ ನಾನಿರುವೆ..ಮಾತು ಕೊಟ್ಟನು ನಲ್ಲನಂದು.ಮರೆತು ಹೊರಟಿಹನುತಬ್ಬಲಿಯ ನನಮಾಡಿಕಂಬನಿ ಮಿಡಿಯುತ್ತಿದೆ ಕೇಳಿಯಿಂದು. ನಿನಬಾಳು ಬೆಳಕಾಗಿನಗುತಲಿರು ಓ ಗೆಳೆಯಾ…ನಿನ್ನಮೊಗ ತೋರದಿರು ಮುಂದೆ ಎಂದು.ಕಹಿ ನೆನಪ ನಾಹೊತ್ತುಬಾಳುವೆ ನಾನಿಲ್ಲಿಕಣ್ಣೀರಧಾರೆ ಸುರಿಸುತ್ತಾ ಮುಂದು ****************************

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಎ.ಹೇಮಗಂಗಾ ಮಧುಶಾಲೆಗಿನ್ನು ಮರಳಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲುನೆನಪ ಗೋರಿಯನಿನ್ನು ಅಗೆಯಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಏಕಾಂಗಿ ಜೀವದ ತಾಪ ತಣಿಸಲೆಂದೇ ಏಕಾಂತದಿ ಮೈ ಮರೆತವನುನೋವ ಕುಲುಮೆಯಲ್ಲಿನ್ನು ಬೀಳಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಸಾವಿರ ಟೀಕೆಗಳ ಕತ್ತಿ ಇರಿತಕೆ ಬಲಿಯಾಗಿಸಿದರು ಕುಹಕಿ ಗೆಳೆಯರುನಾಲಿಗೆಗಿನ್ನು ಆಹಾರವಾಗಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಮಂದ ಬೆಳಕಿನ ನಿಶೆಯ ನಶೆ ಲೋಕ ಬಲೆಯಾಗಿ ಉಸಿರುಗಟ್ಟಿಸಿದೆಬೇಡುತ ಮದಿರೆಗಿನ್ನು ದಾಸನಾಗಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಬದುಕಿನ ಗಮ್ಯ ಸಾರ್ಥಕತೆಯತ್ತ ಸೆಳೆಯಲು ಕೈ ಬೀಸಿ ಕರೆಯುತ್ತಿದೆಅವನತಿ ಹಾದಿಯನಿನ್ನು ತುಳಿಯಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ***********************************

ಗಝಲ್ Read Post »

ಕಾವ್ಯಯಾನ

ಕಾಂಕ್ರೀಟ್ ಬೋಧಿ

ಕವಿತೆ ಕಾಂಕ್ರೀಟ್ ಬೋಧಿ ಪೂಜಾ ನಾರಾಯಣ ನಾಯಕ ಯಾವ ಹಕ್ಕಿ ಎಸೆಯಿತೋ, ನನ್ನ ಬೀಜವನಿಲ್ಲಿಅದರ ಪರಿಣಾಮವೇ ಬೆಳೆದೆನಾಯಿಲ್ಲಿಸಿಮೆಂಟ್ ಗಾರೆಯ ಬಿರುಕಿನಾ ಕಿಂಡಿಅದುವೇ ನನ್ನ ಬದುಕಿನಾ ಮೊದಲನೆಯ ಬಂಡಿಗೆದ್ದುಬರುತ್ತಿದ್ದೆ ಆ ಬಿರುಕ ಇನ್ನೂ ಸರಿಸಿಆದರೆ ನೀ ಬರದೇ ಇರಲಾರೆ, ಕೀಳಲು ನನ್ನರಸಿ ಕರವೊಡ್ಡಿ ಬೇಡುವೇ, ಕೀಳಬೇಡವೋ ಮನುಜಕೀಳದಿದ್ದರೆ ನಾ ನೀಡುವೆ, ಔಷಧೀಯ ಕಣಜನಿನಗಷ್ಟೇ ಎಂದು ತಿಳಿಬೇಡವೋ ಅಣ್ಣಾಖಗಗಳಿಗೂ ನೀಡುವೆನೋ ತಿನ್ನಲು ಹಣ್ಣಾನಿಮ್ಮಿಬ್ಬರಿಗೆ ಎಂದು ತಿಳಿಯದಿರು ಮತ್ತಣ್ಣಮೃಗಗಳಿಗೂ ನೀಡುವೆನೋ ನನ್ನ ಮೇವಣ್ಣ ನೀನಾಗಿಹೆ ಇಂದು ಕ್ರೋಧದಾ ಬಂಧನಕೇಳಿಸುತ್ತಿಲ್ಲವೇನೋ ನಿನಗೆ, ನನ್ನ ಮನದ ಆಕ್ರಂದನಹಿಡಿದು ನಿಂತಿರುವೆ ನೀನಿಂದು, ಖಡ್ಗ ಮಹಾರಾಜನಕೆಳಗಿಳಿಸೋ ಮಾರಾಯಾ, ಕೊಡುವೆ ನಾನಿಂಧನನನ್ನ ನೆರಳಿನಲಿ ಕುಳಿತಿದ್ದು, ಮರೆತೋಯ್ತೋ ಏನೋ?ನೀ ಮರೆತೆಯೆಂದು, ನಾ ಮರೆವೆನೇನೋ? ನೀ ಕೂರದೇ ಇರಬಹುದು, ನೆರಳಿನಾ ಕೆಳಗೆಯಾಕೆಂದರೆ ನೀನಿರುವೆ ಕಾಂಕ್ರೀಟ್ನ ಒಳಗೆನೀ ಬಯಸಲಾರೆ, ಎಸಿಯಲಿ ಉಳಿದುಬಯಸುವನು ರೈತ, ಬಿಸಿಲಿನಲಿ ಬಸವಳಿದುಕೇಳಿಸಿಕೋ, ಕೇಳಿಸಿಕೋ ಮನದಾಳದ ಕೂಗವಾಸಿಮಾಡುವೆನು ನಿನ್ನ ಧೀರ್ಘಕಾಲದ ರೋಗ ಬುದ್ಧನಿಗೆ ನೀಡಿದೆ ಜ್ಞಾನವನಾನಂದುನೀನಾಗಬೇಡವೋ ಕೊಲೆಗಡುಕನಿಂದುಸುಡು ಬಿಸಿಲ ಸಹಿಸಿ,ಪರ ಹಿತವ ಬಯಸಿನಾ ಬಾಳುವ ಪರಿಅದುವೇ ನಿನಗೆ ಆದರ್ಶದ ಗರಿ. ******************************************************

ಕಾಂಕ್ರೀಟ್ ಬೋಧಿ Read Post »

ಕಾವ್ಯಯಾನ

ಹೇಗೆ ಉಸಿರಾಗಲಿ

ಕವಿತೆ ಹೇಗೆ ಉಸಿರಾಗಲಿ ಲಕ್ಷ್ಮೀ ಪಾಟೀಲ್ ಹಾಡಿಗೆ ನಿಲುಕದ ಕವಿತೆಗಳಿವುಭಾವ ರಾಗದ ಕೊಂಡಿ ಎಲ್ಲಿ ಜೋಡಿಸಲಿಸತ್ತಂತೆ ಸುಪ್ತಬಿದ್ದಭಾವಗಳಿವುತಾಳ ಮೇಳ ಲಯಗಳಹೇಗೆ ಮೀಟಲಿ ಗಂಡಿನ ಅಟ್ಟಹಾಸ ಹಿಸುಕುವಕವಿತೆಗಳಿವುಹೆಣ್ಣಿನ ಕೋಮಲ ಎಲ್ಲಿ ಚಿತ್ರಿಸಲಿಕಾವ್ಯದ ಮಾಧುರ್ಯ ನಲುಗಿಸುವಕವಿತೆಗಳಿವುಮುದದ ನಂದನವನ ಎಲ್ಲಿ ತೋರಿಸಲಿ ಅಂತೆ ಕಂತೆಗಳಲಿ ನಿತ್ಯ ರೋದಿಸುವಳೀಕವಿತೆಭಾವ ಬದಲಿಸಿಭಾವವೀಣೆಎಲ್ಲಿ ನುಡಿಸಲಿಆಕ್ಸಿಜನ್ನಳಿಕೆ ಕಟ್ಟಿಕೊಂಡು ತೀವ್ರನಿಗಾಘಟಕದಲ್ಲಿ ನನ್ನ ಕವಿತೆಗಳುನಾನೇ ಹಾಡಾದಹಾಡಿಗೆ ಹೇಗೆ ಉಸಿರಾಗಲಿ ***************************************

ಹೇಗೆ ಉಸಿರಾಗಲಿ Read Post »

ಕಾವ್ಯಯಾನ

ವರ್ತಮಾನ

ಕವಿತೆ ವರ್ತಮಾನ ರೇಶ್ಮಾಗುಳೇದಗುಡ್ಡಾಕರ್ ಮನದ ಉದ್ವೇಗ ಕ್ಕೆ ಬೇಕುಒಲವು ,ಛಲವುಇವುಗಳಸೆಳವಿಗೆ ಖುಷಿ ಇರುವದುಅಶ್ರುತರ್ಪಣಧರೆಗುರುಳುವದು ಯಾವ ಸಾಗರಕೂ ಹೊಲಿಕೆಯಾಗದಬದುಕಿನ ಅಲೆಗಳ ಓಟ …..ಮೆಲ್ಲನೆ ದಡಕ್ಕೆ ಮುತ್ತಿಡುವವುಕೆಲವೊಮ್ಮೆ ಕೊಚ್ವಿಕೊಂಡ್ಯೊಯುವವುದಡವನ್ನೇ …. ಏನು ಆಟವಿದು ?ಕಾಣದ ಕೈ ಸೂತ್ರವದುತಲ್ಲಣ ತಂಪಾಗಿ ,ಸುಧೆ ವಿಷವಾಗಿ ಕೆರಳಿಮುರಿದು ಬೀಳುವುದುಕನಸಿನ ಮನೆ ವರವೊ,ಬರವೂ ತಿಳಿಯದಕಾಲವಿದುಮತ್ತೆ ಸಿಲುಕುವದುಉದ್ವೇಗದಚಕ್ರ ವೇಗ ಪಡೆದು ಓಡುವುದುಸ್ವಾರ್ಥ ಸೆಳವಿಗೆ ಸೆರೆಯಾಗಿ ದಿನಗಳು ಉರುಳಿದಂತೆಮಣ್ಣಲ್ಲಿ ಮಣ್ಣಾಗಿನಿರ್ಮಿಸಿದ ಮೂಕಅವಶೇಷಗಳು ಹುಡುಕುವವುಸ್ನೇಹ ,ಪ್ರೀತಿಗಾಗಿ ಹಂಬಲಿಸುತ ***************************************

ವರ್ತಮಾನ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಸಹದೇವ ಯರಗೊಪ್ಪ ಪ್ರೇಮದ ಹೂ ಬಾಣ ಹೃದಯದಲಿ ರುಜು ಹಾಕುವಾಗ ನಾನೇ ಇಲ್ಲದಾದೆಹದವರಿತ ಎದೆಹೊಲದಿ ಬಿತ್ತಿದ ಪ್ರೀತಿ ಫಲ ನೀಡುವಾಗ ನಾನೇ ಇಲ್ಲದಾದೆ ಅಂಗಗಳ ಸಂಗ ಬಯಸಿದ ಮನಸು ನಿದಿರೆ ಬತ್ತಿಸಿ ಕಂಗಳ ವಿಶ್ರಾಂತಿ ಕದ್ದಿದೆತುಂಬಿದ ರೂಪದ ಬಟ್ಟಲು ಕಂಡು ಗುಲಾಬಿ ರಂಗೇರಿದಾಗ ನಾನೇ ಇಲ್ಲದಾದೆ ಫಕೀರನಂತೆ ತಂಬೂರಿ ಮೀಟುತ ಅವಳ ಹಿಮ್ಮಡಿಯ ಹುಡಿಬೆಳಕಲಿ ಅಲೆದೆಬದುಕಿನ ತಿರುವಿನಲ್ಲಿ ಕಣ್ಣ ಪ್ರಣತಿ ಹೊತ್ತಿಸಿ ಕಾಯುವಾಗ ನಾನೇ ಇಲ್ಲದಾದೆ ಮೋಹ ತೃಷೆಯಲಿ ತೇಲಾಡುವ ಅಮಲಿಗೆ ಬಿಸಿಯುಸಿರ ಗುಟುಕಿಸಿದೆಒಲವ ಮಳೆಗೆ ಹರಕೆ ಹೊತ್ತು ಇಳೆ ಸ್ನಾನ ಮಾಡುವಾಗ ನಾನೇ ಇಲ್ಲದಾದೆ ಕಸಿ ಮಾಡಿದ ಹೂ ಬಳ್ಳಿ ತೆಕ್ಕೆಯಲಿ ಬಿಗಿದಪ್ಪಿ ಮುತ್ತಿಡಲು ಸಿದ್ದವಾಗಿದೆಶ್ರಮ ಹರಿಸಿ ನೆಟ್ಟ ಗಿಡ ಹಸಿರನುಟ್ಟು ನೆರಳು ಹಾಸುವಾಗ ನಾನೇ ಇಲ್ಲದಾದೆ ಒಡಲು ಕುಡಿಯೊಡೆಯಲು ಊರ ದೇವರಿಗೆ ನಡೆಮಡಿ ಹಾಸಿರುವೆಹೆತ್ತು ಹೊತ್ತು ಬೆಳೆಸಿದ ಮಗ ಎದೆ ಎತ್ತರ ಬೆಳೆದಾಗ ನಾನೇ ಇಲ್ಲದಾದೆ ಪಾಪಿ ‘ಸಾಚಿಗೆ’ ವಿಧಿ ಆಟದಲಿ ಕೈಗೆ ಬಂದ ತುತ್ತು ಬಾಯಿಗೆ ನಿಲುಕದಾಗಿದೆಬೆವರನ್ನ ಉಂಡು ಒಕ್ಕಿದ ಫಸಲಿಗೆ ತಕ್ಕ ಬೆಲೆ ದಕ್ಕಿದಾಗ ನಾನೇ ಇಲ್ಲದಾದೆ ********************************

ಗಝಲ್ Read Post »

You cannot copy content of this page

Scroll to Top