ಕವಿತೆ ಜೋಳದ ಹೂವು ಪೂಜಾ ನಾರಾಯಣ ನಾಯಕ್ ಬಿಕ್ಕಳಿಸಿ ಬಿಕ್ಕಳಿಸಿ ಅಳುತಿದೆಜೋಳದ ಹೂವೊಂದು ಮಗುವಂತೆಮನದಿಂಗಿತವ ಕೇಳುವವರಾರೆಂದುನರಳುತಿದೆ ತನ್ನೆದೆಯ ಗೂಡಲ್ಲಿರಾತ್ರಿ-ಹಗಲೆನ್ನದೆ. ಯಾರಬಳಿ ನನ್ನ ಮನದಿಂಗಿತವನರುಹಲಿ?ಯಾರ ಬಳಿ ತೋಡಿಕೊಳ್ಳಲಿ ನನ್ನಳಲ?ಗೆಳೆತನದ ಸಲುವಾಗಿ ಯಾರ್ಯಾರ ಬೇಡಲಿ?ನನ್ನೆಡಗೆ ಸುಳಿಯರಾರೂಅಯ್ಯೋ, ಇದು ನನ್ನ ವಿಧಿಯೆ? ಪಾತರಗಿತ್ತಿಗೆ ಹೇಳಲೆ?ಛೇ, ತಗುಲಿದೆ ಮಲ್ಲಿಗೆಯ ಹುಚ್ಚು!ಭ್ರಮರಕ್ಕೆ ತಟ್ಟಿದೆಸೂರ್ಯಕಾಂತಿಯ ಮೋಹ!ಕಣಜವನು ಕೈಬೀಸಿ ಕರೆವೆನೆಂದರೆಛೇ, ಅದಕೂ ಸೋಕಿದೆ ತಾವರೆಯ ಪ್ರೇಮ!ಯಾರ ಬಳಿ ಹೇಳಲಿ ಅಡಗಿದಗುಹೆಯೊಳಗಿನ ಮರ್ಮ ಕಣ್ಣೀರಿನದ್ದೆಂದು,ಗೋಗರೆಯುತಿಹೆ ಸುಯ್ಲು ಸೋರದ ಹಾಗೆನುಂಗುತಿಹೆ ಒಳಗೊಳಗೆ… ಎತ್ತಲಿಂದಲೂ ಬರರ್ಯಾಕೆ ಇತ್ತ?ಕುಸುಮ-ವಾಸನೆಯ ಕಂಪಿಲ್ಲವೆಂದೆ?ಇದ್ದರೂ ಇರಬಹುದೆ ನನ್ನೊಳಗಿನಮಧುವಿಗೆ ರುಚಿಯಿಲ್ಲವೆಂದು?ಮರುಗುತಿಹ ಹೂವು ಸೇರುವುದುಹೇಗೋ ಕೊನೆಗೆ ಮೌನದಾ ಒಡಲಸಮಾಧಾನಿಸಿಕೊಂಡು ತನ್ನೆದೆಯ ಕಡಲ… ಹೋದರೇನಂತೆ, ಹೋಗಲಿ ಬಿಡಿವಯ್ಯಾರದ ಹೂವಿನೆಡೆಗೆ ಮಧು-ಕಂಪನರಸಿನಾನರಿಯದಿಹೆನೆ, ಈ ಗೆಳೆತನದ ಗುಟ್ಟ?ಹೂವು-ದುಂಬಿಯ ಆಟವಾಮಕರಂದ ಇರುವನಕಪಾತರಗಿತ್ತಿಯ ಹುಚ್ಚು,ವಯ್ಯಾರವಿರುವನಕಭ್ರಮರದಾ ಪ್ರೇಮ,ಘಮ ಘಮಿಸುತಿರುವನಕಕಣಜದಾ ಸ್ನೇಹ!ಎಲ್ಲ ತೀರಿದ ಮೇಲೆ ಉಳಿಯುವುದೆ ಮೋಹ?ಬೇರೆ ದಾರಿಯ ಹುಡುಕಲೆಲ್ಲಸನ್ನಾಹ!! ************************************