ಕವಿತೆ ಭವದ ಭಾವಸೇತು ನಾಗರೇಖಾ ಗಾಂವಕರ್ ಮನದೊಡಲ ಕಡಲಪ್ರಕ್ಷುಬ್ಧ ಸುಳಿಗಳುಮುತ್ತಿಕ್ಕುವ ಅಲೆಗಳಾಗುತ್ತವೆ,ಆ ಪ್ರೀತಿಗೆ ಯಮುನೆ ತಟದಿ ಕೂತಹೂತ ಕಾಲಿನ ಆಕೆಮುರುಳಿಯಲಿ ಬೆರೆತಉಸಿರ ತೇಕುತ್ತಾಕಣ್ಣ ಬೆಳಕನ್ನೆ ಹಾಸಿಭಾವ ಸೇತುವಿನ ನಾಡಿ ಹಿಡಿದುಭವದ ನೆರಳಿಗೆ ಹಂಬಲಿಸುತ್ತಾಳೆ. ಯಾವ ರಾಗವದು, ಬೆಸೆದದ್ದುಒಪ್ಪುತಪ್ಮ್ಪಗಳ ಭಿನ್ನಸಹಮತಗಳ ನಡುವೆಸಂಕಲಿಸಿ ಹೃದಯಗಳ ಬೆಸುಗೆ ಹೊನಲು ಬೆಳಕಿನ ಕೂಡಮಂದ್ರಸ್ಥಾಯಿಯ ನುಡಿಸಿಅಗೋಚರದ ಮಹಲಿನಲಿಮುಕ್ತಿ ಮಂಟಪವಿಟ್ಟುರಾಗದ್ವೇಷದ ಬೆಂಕಿಯನುತಣ್ಣಗಾಗಿಸಿ ಪರವತೋರುತ್ತಾನೆ ಪ್ರೀತಿಯಲಿ ಮುಳುಗುವ ಹರಿಗೋಲುತೂತುಗಳ ಹೊದ್ದ ಬರಿದುಜೀವದ ಗೋಳು.ಅಲ್ಲೂ ಪಯಣದ ಹಂಬಲದಮುಗಿಯದಾ ಬದುಕಪ್ರೀತಿಯ ಪಾಡುಹಾಡುತ್ತಾನೆ ಪ್ರೀತಿಸುವುದೆಂದರೆಆತ್ಮಕ್ಕೆ ಆತ್ಮವೇ ಆಗಿನಿಲುಕದ ನೆಲೆಯಲ್ಲೂಆಲಿಂಗನದ ಕನಸ ಹೊತ್ತುಸಾಗುವುದು,ಎಂದವನ ಪ್ರೀತಿಯರಾಧೆಯಾಗುವುದೆಂದರೆ ಅವನ ಪರವಶತೆಗೆತನ್ನೆಲ್ಲವನ್ನೂ ಮರೆತುಬಿಡುವುದು.ನಾಗರೇಖಾ ಗಾಂವಕರ *****************************