ನವರಾತ್ರಿ ಶಕ್ತಿ
ಕವಿತೆ ನವರಾತ್ರಿ ಶಕ್ತಿ ಶಾಂತಲಾ ಮಧು ಚಿತ್ರ ಕೃಪೆ- ಶಾಂತಲಾ ಮಧು ಬಿರುಕು ಬಿಟ್ಟಗೋಡೆಗಳುಶಿಥಿಲ ಗೊಂಡಕಿಟಕಿ ಬಾಗಿಲುಮಾನವೀಯ ಮನುಷ್ಯತ್ವದಅಂತಕರಣದ ಒಂದೊಂದುಕಲ್ಲುಗಳು ಪುಡಿಪುಡಿಯಾಗಿಬಟಂಬಯಲಾಗಿಬಯಲ ನಡುವೆಚೀತ್ಕಾರ ರಕ್ತ ಬಸಿಯುವಕಣ್ಣಿನಲಿ ಅದೊಂದೆೇ ಆಸೆ ದಯತೋರಿ ದಯತೋರಿರಕ್ಷಿಸೀ ಈ ರಾಕ್ಷಸರಿಂದಅಮ್ಮಗಳಿರ ಅಕ್ಕಗಳಿರನನ್ನೀ ಸಬಲ ಅಣ್ಣ ತಮ್ಮಗಳಿರರಕ್ಷಿಸೀ ಅಬಲೆಯರಬೆಟ್ಟದಷ್ಟು ಆಕಾಶ ಭೂಮಿಯಷ್ಟುಕನಸ ಕಂಡಿಹೆ ನಾನುಬಿಟ್ಟು ಬಿಡಿ ಎನ್ನ ದಮ್ಮಯ್ಯ ಪುತ್ರಿಯಾಗಿ ತಾಯಿ ತಂಗಿಸಖಿಯಾಗಿ ಪತ್ನಿಯಾಗಿಬಂಧುಬಳಗವಾಗಿದೀಪವಾಗಿಮನ ಮನೆಗಳಬೆಳಗುವೆ ನಾಹೊಸಕಿ ಹಾಕದಿರು ಎನ್ನನಿನ್ನೀ ಕ್ಷಣಿಕ ಕಾಮತೃಷೆಗೆಅಂಗಲಾಚಿ ಬೇಡುವೆನುಬಿಟ್ಟುಬಿಡು ದಮ್ಮಯ್ಯ ಮಾನಸಿಕ ರೋಗ ಎನಲೆರಾಕ್ಷಸೀ ದ್ವೇಷ ಎನಲೆತುತ್ತಿಟ್ಟ ತಾಯಿ ತಂಗಿಮರೆತ ನೀಚ ನೀ ಎನಲೆ ಕರೆದರೀ ಪುಣ್ಯಭೂಮಿಯಭಾರತಾಂಬೇ ಎಂದುಹೆಣ್ಣೆಂದು ಸ್ತ್ರೀ ಶಕ್ತಿ ನೀನೆಂದು ನಿನ್ನಮಡಿಲಲ್ಲಿ ಉಸಿರಾಡಿಹಸಿರಾಗಿ ಭಯಭಕ್ತಿ ಸೃಷ್ಟಿಸಿದಅಷ್ಟಲಕ್ಷೀಯರುಸಂಸ್ಕೃತಿ ಸಂಸ್ಕಾರದ ತಿಲಕಸ್ತ್ರೀ ಶಕ್ತಿ ಸಂಪನ್ನತೆಗೆಅರ್ಥಗರ್ಭಿತನವರಾತ್ರಿ ಆಡಂಬರ ಹೆಮ್ಮೆ ಎನಿಸಿತ್ತೆನಗೆಪೂಜ್ಯ ಶಿವನ ಸಂವೇದನೆಸತಿಗಾಗಿಸಕಾಲದಲಿ ದೌಪಧಿಯಮಾನರಕ್ಷಿಸಿದ ಶ್ರೀ ಕೃಷ್ಣಪರಮಾತ್ಮದುಷ್ಟರ ಸಂಹಾರಈ ಪುಣ್ಯ ಭೂಮಿಯಲಿವಚನ ಶ್ರೇಷ್ಟರುಅಲ್ಲಮ ಬಸವಣ್ಣಅಕ್ಕಮಾಹಾದೇವಿನಡೆದಾಡಿದಪುಣ್ಯ ಭೂಮಿ ಇದುಮರೆಯಾಯಿತೆ…?ಕಾವ್ಯ ಪುಾರಾಣಗಳುದಾಖಲೆಯ ಪುಟಗಳಾದವೆ?ಅರ್ಥ ವಿಲ್ಲದಾಯಿತೆನವರಾತ್ರಿ?ಬಿರುಕು ಬಿಟ್ಟ ಬಾಗಿಲುಶಿಥಿಲ ಗೋಡೆಗೆ ರಕ್ಷಕರಿಲ್ಲವೆ?ಪ್ರತಿ ಶೋಧವೆ,ನೇಣುಗಂಬವೆ,ಬಿಸಿಲ ಬಯಲಲಿಬತ್ತಲಾಗಿಸಿ ಕಲ್ಲು ತೂರುವುದೆಶಿಕ್ಷಿಸುವ ಮಹನೀಯನಾರು? ಕತ್ತಲು ಬೆಳಕು ತಿಕ್ಕಾಟಗಳ ನಡುವೆಅವಿತ ನ್ಯಾಯದ ಹುಡುಕಾಟಕೆಮುಷ್ಕರ ಕಲ್ಲು ತೂರಾಟಮೌನ ಮೆರವಣಿಗೆಮೊಸಳೆ ಕಣ್ಣೀರುಕಣ್ಣು ಒರೆಸುವರಾಜಿಕೀಯ ಜೂಜಾಟ ಪಾಪಿ ಮೂಲವಹುಡುಕು ಹುಡುಕಿಹೊರಹಾಕುಅನುಜ ಅಗ್ರಜನಿರಲಿಬಂಧು ಬಳಗವೆ ಇರಲಿ ಮನಸ್ಸಿನ ಅಂಧಕಾರಪರಿವರ್ತನೆ ಇಲ್ಲದೆಅಬಲೆ ನಾನಲ್ಲಸ್ರೀ ಶಕ್ತಿನಾನುನವ ಯುಗದ ನವ ಶಕ್ತಿಭಕ್ತಿ ವಿಶ್ವಾಸ ನನ್ನಲ್ಲಿನನಗೆ ನಾನವರಾತ್ರಿಶಕ್ತಿ ***************









