ಕವಿತೆ ಮರ್ದಿನಿ ಆಗಲಿಲ್ಲ ಡಾ.ಶಿವಕುಮಾರ್ ಮಾಲಿಪಾಟೀಲ ನಾಲ್ಕಾರು ಜನರು ಅತ್ಯಾಚಾರಕ್ಕೆ ಮುಂದಾದಾಗಮನಿಷಾ,ಮಹಿಷಾಸುರ ಮರ್ದಿನಿ ಆಗಲಿಲ್ಲ ನಿನ್ನ ಗರ್ಭದಲ್ಲಿ ಹುಟ್ಟಿದರೂನಿನ್ನನ್ನು ಗರ್ಭಗುಡಿಗೆ ನಿಷೇಧಿಸಿದಾಗ ಹೆಣ್ಣುಕಾಳಿಯಾಗಲಿಲ್ಲ ವರದಕ್ಷಿಣೆಗಾಗಿ ಅವಮಾನಿಸಿಹಿಂಸೆ ಕೊಟ್ಟುಕೊಲೆ ಮಾಡುವಾಗ ಹೆಣ್ಣುದುರ್ಗೆ ಆಗಲಿಲ್ಲ ಹೆಣ್ಣು ಬೇಡವೆಂದುಭ್ರೂಣವನ್ನು ಗರ್ಭದಲ್ಲೇಕತ್ತರಿಸಲು ಬಂದಾಗ ಹೆಣ್ಣು ಚಾಮುಂಡಿ ಆಗಲಿಲ್ಲ ಮಹಾ ಗ್ರಂಥಗಳಲ್ಲಿ ಮರುಳಾಗಿಕಲೆ ,ಶಿಲೆಗಳಲ್ಲಿ ಗೊಂಬೆಯಾಗಿಗುಡಿ ಗುಂಡಾರದಲ್ಲಿ ಕುಂಕುಮ ಭಂಡಾರವಾಗಿ ಹೆಸರಿಗೆಅರ್ಧ ನಾರೇಶ್ವರಿ…ಆಗಿದ್ದು ಮಾತ್ರ ದೇವದಾಸಿ. ಕಾಡು ಮೇಡುಗಳಲ್ಲಿಚೆಲ್ಲಿದ ಹೆಣ್ಣಿನ ರಕ್ತದ ಕಲೆಗಳನ್ನು ನೋಡಿಭೂ ತಾಯಿ ಬಿರುಕೊಡೆಯಲಿಲ್ಲಗಂಗೆ,ತುಂಗೆ,ಕಾವೇರಿ,ಗೋದಾವರಿ ಎಲ್ಲಾ ಹೆಣ್ಣುಹೆಸರಿನ ನದಿಗಳು ಬರಿದಾಗಲಿಲ್ಲ ಸಾಕ್ಷಿಗಳಿದ್ದರೂಅಪರಾಧಿಗಳಿಗೆ ಶಿಕ್ಷೆ ಇಲ್ಲ..ನಿರಪರಾಧಿಯಾಗಿ ಬಂದವರನ್ನುನೋಡಿ ಓಡುತ್ತಿವೆ ಪ್ರಾಣಿಗಳುಮೃಗಗಳು ಬಂದವೆಂದು… ಮಹಾಭಾರತದಲ್ಲಿ ಅವಮಾನರಾಮಾಯಣದಲ್ಲಿ ಅನುಮಾನನವಭಾರತದಲ್ಲಿ ಅತ್ಯಾಚಾರದ ಬಹುಮಾನ ? ನಾಗರೀಕರಾಗದೆಎಷ್ಟು ಮುಂದುವರಿದರೇನು?ಮನುಷ್ಯತ್ವ ಇರದಯಾವ ರಾಜ್ಯ ಕಟ್ಟಿದರೇನು? ಹೆಣ್ಣು ನಿಜ ದುರ್ಗೆ,ಚಾಮುಂಡಿ,ಕಾಳಿ,ಮರ್ದಿನಿಯಾಗದೆಶತ ಶತಮಾನದ ಈ ಅನ್ಯಾಯ ತಪ್ಪಿದ್ದಲ್ಲ.. **********************************