ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಬೀಜಕ್ಕೊಂದು ಮಾತು

ಕವಿತೆ ಬೀಜಕ್ಕೊಂದು ಮಾತು ರಜಿಯಾ ಬಳಬಟ್ಟಿ ಎಲೆ ಬೀಜವೇನೀ ಹೆಣ್ಣೋ ಗಂಡೋ ಹೀಗೇಕೆ ಕೇಳುವಳೀ ಅಮ್ಮಎಂದು ಆಶ್ಚರ್ಯ ವೇನು ಕಂದಾ , ಹೌದು ಕೇಳುವ ಸ್ಧಿತಿ ಈಗ. ಒಂದು ಕಾಲವಿತ್ತುಸುತ್ತೆಲ್ಲ ಗುಲಾಬಿ ತೋಟನಡುವೆ ಕೆಂಗುಲಾಬಿನನ್ನ ಮಗಳೆಂದುಖುಷಿ ಪಡುವದು. ಈಗಿಲ್ಲವಮ್ಮ. ಗುಲಾಬಿಯ ತೋಟದಲ್ಲೆಲ್ಲಹೊಂಚು ಹಾಕಿದ ಕಾಮದ ಕಂಗಳುಕ್ಷಣ ಕ್ಷಣವೂ ಅಭದ್ರತೆಕೀಚಕ – ದುಶ್ಯಾಸನರವಂಶಾವಳಿಯಲ್ಲಿಅದೆಂತು ರಕ್ಷಿಸಲಿ ಮಗಳೆ,ಭೀತಿಯ ಬಾಹುಗಳಲಿನನ್ನನ್ನೇ ನಾ ಉಳಿಸಿಕೊಂಡುಗೂಡು ಸೇರುವದೇದುಸ್ಸಾಹಸವಾಗಿರುವಾಗ,ನೀ ಮೊಳಕೆಯೊಡೆಯಬೇಡತಿಳಿ, ಈ ಅಸಹಾಯಕತೆಯ. ಅಪ್ಪಾ ಮಗಾ ರಾಜಕುಮಾರಾವಂಶಕ್ಕೆ ಹೆಸರು ತಂದುದೃಷ್ಟಿ ತುಂಬ ಸಹಾಯ ಭಾವದಿಆದರ್ಶದಿ ಬದುಕುವದಿದ್ದರೆ ಬಾ.ಇಲ್ಲದಿರೆ ಚಿಗುರೊಡೆಯಬೇಡ.ಬಂಜೆ ಎಂದು ಸಹಿಸಬಹುದು.ಆ ಕಾಮುಕನ,ಪಾಪಿಯ ತಾಯಿಇವಳೆಂದು ಜನ ದಿಟ್ಟಿಸಿದಾಗ,ಆ ಕೆಂಗಣ್ಣಿನಲ್ಲಿಯೇ ನಾಕರಕಾಗುವೆ ಕಂದಾತಿಳಿ ನೀ ಜವಾಬ್ದಾರಿಯ. *************************************** ರಜಿಯಾ ಬಳಬಟ್ಟಿ

ಬೀಜಕ್ಕೊಂದು ಮಾತು Read Post »

ಕಾವ್ಯಯಾನ

ಕತ್ತಲಿನಲಿ ನ್ಯಾಯ

ಕವಿತೆ ಕತ್ತಲಿನಲಿ ನ್ಯಾಯ ಸಾಯಬಣ್ಣ ಮಾದರ ಎಳೆಯ ಬಾರದೆಕ್ಕೆಅವರ ಕರಳು ಬಳ್ಳಿಗಳನ್ನುಕ್ರೀಯಗೆ ಪ್ರತಿಕ್ರೀಯೇ ?ಆಗುವದ್ಯಾವಾಗಿನ್ನುಎಷ್ಟು ದಿನವಂತೆಕೂಗುವಿರಿ ದಿಕ್ಕಾರಮೇಲಿನವರ ಕುರ್ಚಿಗಳಿಗೆಕಿವಿ ಕುರುಡಮನಿಷಾಗೆ ಸಿಗುವುದೇಕತ್ತಲಿನಲ್ಲಿರುವನ್ಯಾಯ ಬೆಳಕು !! ಜೋಳದ ಹೊಲದ ದಂಟುಗಳೆಕಣ್ಣೀರುಗೈದವುಯೋನಿಯಿಂದರಿದ ರಕ್ತಮಡುಗಟ್ಟಿತ್ತಲಕೂಗಲು ಬಾರದಂತೆನಾಲಿಗೆ ಸೀಳಿಅಟ್ಟಹಾಸ ಗೈದರಲ್ಲಸಬಲರುಆಗಬೇಕಲ್ಲವೇ ಅವರಿಗೂಆ ನೋವು ಜಾತಿ ಬಲವಿದ್ದರೆಮಾಡುವರು ಎನ್ಕೌಂಟರ್ಸುಡುವರು ದಮನಿತರನ್ನುನಡುರಾತ್ರೀ ಹಗಲು !! ನಾಟ್ಯದವರು ಬಸಿರಾದರುದೇಶದ ದೊರೆಕುಣಿದಾಡುವನು ಹಿರಿ ಹಿರಿ ಹಿಗ್ಗಿಬೆನ್ನು ಮೂಳೆ ಮುರಿದುಯೋನಿ ಹರಿದರುಇವರಿಗೆಕನಿಕರಿಸದವನು !! ಭಯಭರವಸೆ ಕಳೆದುಕೊಂಡರೆಹಾವೇ ಹಗ್ಗಭಯ ಬುಗ್ಗೆಯಚಿಲುಮೆ ಹುಟ್ಟಿಸಿನ್ಯಾಯ ದೀಪಕ್ಕೆಬತ್ತಿ ಹತ್ತಿಸಿಕಣ್ಣಿಗೆ ಕಣ್ಣು ಕಳೆಯಲುಸಿದ್ದರಾಗ ಬೇಕಲ್ಲವೆನಾವು !! *********************************

ಕತ್ತಲಿನಲಿ ನ್ಯಾಯ Read Post »

ಕಾವ್ಯಯಾನ, ಗಝಲ್

ಮನಿಷಾಗೊಂದು ಗಝಲ್

ಮನಿಷಾಗೊಂದು ಗಝಲ್ ಅರುಣಾ ನರೇಂದ್ರ ನಾನಿಲ್ಲಿ ಮೂಕಳಾಗಿರಬೇಕು ಮಾತನಾಡಿದರೆ ನಾಲಿಗೆ ಕತ್ತರಿಸುತ್ತಾರೆನೀನಿಲ್ಲಿ ಜೀವಂತ ಶವವಾಗಿರಬೇಕು ಪ್ರತಿಭಟಿಸಿದರೆ ಗುಂಡಿ ತೋಡಿಸುತ್ತಾರೆ ರಾಮನಾಳಿದ ಈ ನೆಲದಲ್ಲಿ ನಾನು ಮತ್ತೆ ಹೆಣ್ಣಾಗಿ ಹುಟ್ಟಿದ್ದೇನೆ ಗೆಳತಿಹೊಸಿಲು ದಾಟಿ ಲಕ್ಷ್ಮಣ ರೇಖೆಯನ್ನೂ ದಾಟುತ್ತೇನೆಂದರೆ ವನವಾಸ ಕಳಿಸುತ್ತಾರೆ ನಿರ್ಭಯಾ ಮಧು ದಿಶಾ ಮತ್ತೆಲ್ಲರ ಆರ್ತನಾದ ಇನ್ನೂ ಕೇಳಿಸಿದರೂ ಮತ್ತೆ ಎಂಥ ನಿರ್ಲಕ್ಷ್ಯಇಂದು ಮನಿಶಾ ನಾಳೆ ನನ್ನ ಸರದಿ ಬೇಡವೆಂದರೆ ಮಸಣದ ಮನೆ ತೋರಿಸುತ್ತಾರೆ ಯುಗ ಯುಗಗಳು ಅಳಿದರೂ ಇನ್ನೆಷ್ಟು ಹೆಣ್ಣು ಬಲಿಯಾಗಬೇಕು ಇವರ ಕಾಮದ ತೀಟೆಗೆಅಂಗಾಂಗಗಳ ಹರಿದು ತಿನ್ನುವ ಹೃದಯ ಹೀನರು ಪ್ರಶ್ನಿಸಿದರೆ ಪ್ರಾಣ ತಗೆಯುತ್ತಾರೆ ಭದ್ರತೆ ಬೇಡಿದರೆ ಹೇಗೆ ಸಿಕ್ಕೀತು ಅರುಣಾಗೆ ಕಡತದಲ್ಲೇ ಕಾನೂನಿಗೆ ಕೈ ಕಾಲು ಕಟ್ಟಿದ್ದಾರೆಬೇಲಿ ಇಲ್ಲದ ಹೊಲವ ಗೂಳಿಯಂತೆ ತಿಂದು ಹೆಣ ಮಾಡಿ ಸುಟ್ಟು ಕತೆ ಮುಗಿಸುತ್ತಾರೆ ******************************

ಮನಿಷಾಗೊಂದು ಗಝಲ್ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಸುಜಾತಾ ರವೀಶ್ ಬಾಳಿನ ಪಥದಲಿ ಬೀಸಿದ ತಂಗಾಳಿ ನೆನಪುಗಳ ಹಸಿಯಾಗಿಸಿತು ನಾಳಿನ ಕನಸಿನ  ಕಲ್ಪನೆ ಹಾದಿಯು ಮೆಲುಕುಗಳ ಬಿಸಿಯಾಗಿಸಿತು  ಧುತ್ತನೆ ಕವಿದಿಹ ಕಾರ್ಮೋಡ ಬಾನನು ಮಂಕಾಗಿಸಿತು ಒಮ್ಮೆಲೆಯೇ ಮೆತ್ತನೆ ಬರುತಿಹ ಹೊಂಗಿರಣ ನಗುವಿನ ಹೂಬಿಸಿಲಲಿ ಸೊಗಸಾಗಿಸಿತು ಮಾರ್ದವ  ಭಾವವ ಮುಳ್ಳಿನ ಮೊನೆಯೊಲು ಚುಚ್ಚ ತೊಡಗಿತು ಚಿಂತೆಯು ಹಾರ್ದಿಕ ಆಶಯ ಹೃದಯವ ಮುಟ್ಟುತ ಶಂಕೆಗಳನು ಮರೆಯಾಗಿಸಿತು ಜೀವನ ನೌಕೆಯು ಸಿಲುಕಿ ಬಿರುಗಾಳಿಗೆ ಹೊಯ್ದಾಡುತಿದೆ ಹೀಗೇಕೆ? ದೇವನ ಒಲುಮೆ ಭದ್ರತೆ ನೀಡುತ ಭರವಸೆಯಲಿ ಖುಷಿಯಾಗಿಸಿತು ಹಂಬಲ ಕಾಮನೆ ಮನುಜನ ಬದುಕಲಿ ನನಸಾದರೆನಿತು ಒಳಿತು ನಂಬಿದ ದೈವದ ಸನ್ನಿಧಿ ಸುಜಿಯ ಅಂತರಂಗದಲಿ ಮೊರೆಯಾಗಿಸಿತು   *******************************************

ಗಝಲ್ Read Post »

ಕಾವ್ಯಯಾನ

ಮರಕುಟಿಕ

ಕವಿತೆ ಮರಕುಟಿಕ ಡಾ. ಅರಕಲಗೂಡು ನೀಲಕಂಠ ಮೂರ್ತಿ ಒಂದು ಮರಕುಟಿಕ ಕುಕ್ಕುತ್ತಿದೆಕಾಯಕದಂತೆ ಕಾಯದೆಯಾರಿಗೂ ಎಡೆಬಿಡದೆಗುಕ್ಕು ಗುಕ್ಕು ಚಕ್ಕೆಯಷ್ಟೇಎಬ್ಬುತ್ತಿದೆ ಲೆಕ್ಕವಿಡದೆಮರದ ಕಾಂಡ-ಕೊಂಬೆಗಡುಸಾಗಿದೆ ವೀರ ಎದೆಯ ಹಾಗೆ! ಎಷ್ಟೊಂದು ಮರಕುಟಿಕಗಳುಬಂದು ಬಂದು ಕುಟಿಕಿ ಹೋಗಿದ್ದಾಗಿದೆಅರಿವು ಮಂಕಾಗುವಷ್ಟು ದಿನಗಳಿಂದಬರುತ್ತಲೇ ಇವೆ ಇಂದಿಗೂಸರದಿಯಲ್ಲೋಜಾತ್ರೆಯ ಜಂಗುಳಿಯಲ್ಲೋ… ಬಂದೇ ಬರುತ್ತವೆ ತಪ್ಪದೆ ಮುಂದೂ–ಮರವಿರುವಷ್ಟು ದಿನಅದರ ತಿರುಳು ತೊನೆವಷ್ಟು ದಿನಬಂದೇ ಬರುತ್ತವೆ… ಮರಕ್ಕೆ ನೋವಾಗುವುದೋ ಬಿಡುವುದೋಕುಟುಕುವ ಕೊಕ್ಕಿಗೇಕೆ ಉಸಾಬರಿ!ಕೆಲವೊಮ್ಮೆ ಮರ ಒಂದೇ…ಮರಕುಟಿಕಗಳನೇಕನೋವು ಮಾತ್ರ ನಿಶಬ್ದ ತದೇಕ!ಚಿಂತೆ ಕಂಬನಿ ಯಾರಿಗೆ…ಏಕೆ! ಮರ ಉರುಳಿ ಅಳಿದಮೇಲೆಎಲ್ಲಿಯ ಮರಕುಟಿಕಎಲ್ಲಿಯ ಕುಕ್ಕುವಿಕೆ…!

ಮರಕುಟಿಕ Read Post »

ಕಾವ್ಯಯಾನ

ಗಜಲ್

ಗಜಲ್ (ಗಾಂಧಿ:ಇನ್ನೊಂದು ನೋಟ) ಡಾ. ಗೋವಿಂದ ಹೆಗಡೆ ಚರಕ ನೂಲು ಕೋಲುಗಳಲ್ಲೇ ಅವನ ಕಂಡಿದ್ದೇವೆಕನ್ನಡಕವನ್ನು ಮರೆಯದೇ ಜೇಬಿಗೆ ಇಳಿಸಿದ್ದೇವೆ ಸ್ವರಾಜ್ಯ ಸತ್ಯಾಗ್ರಹ ಸ್ವದೇಶಿ- ದುಡಿಯುತ್ತ ಹೋದ ಅವನುನಾವು ಪುರಸೊತ್ತಾಗಿ ಕೂತು ಅವನ ಟೀಕಿಸುತ್ತೇವೆ ಒಂದೇ ಮಗ್ಗುಲ ಚಿತ್ರಗಳೆಂದರೆ ನಮಗೆ ಬಹಳ ಪ್ರೀತಿಒಂದು ಕಣ್ಣು ಮುಚ್ಚಿಯೇ ಎಲ್ಲವನ್ನೂ ಅಳೆಯುತ್ತೇವೆ ಕಪ್ಪು-ಬಿಳುಪುಗಳ ಆಚೆ ಲೋಕವೆಷ್ಟು ಸಂಕೀರ್ಣವಿದೆಕರಿಯ ಕನ್ನಡಕದಲ್ಲಿ ಕಂಡದ್ದು ಮಾತ್ರ ನಿಜವೆನ್ನುತ್ತೇವೆ ತಪ್ಪು ತೊಡರು ನೆರಳುಗಳನ್ನು ನೋಡುತ್ತ ನೀಡಿ ತೀರ್ಪುಬೆಳಕಿನೊಡನೆಯ ಮುಖಾಮುಖಿಗಳ ಬೇಕೆಂದೇ ಮರೆಯುತ್ತೇವೆ ಸಂಕೇತ-ಸಂಗತಿ, ಭಜನೆ-ಭಂಜನೆಗಳಲ್ಲಿ ನಮ್ಮ ನಡೆ ‘ಜಂಗಮ’ನಮ್ಮ ನಮ್ಮ ಅಳತೆಗೋಲುಗಳಲ್ಲೇ ಅವನ ಮಥಿಸುತ್ತೇವೆ *********************************

ಗಜಲ್ Read Post »

ಕಾವ್ಯಯಾನ

ದ್ವಿಪದಿಗಳು

ದ್ವಿಪದಿಗಳು ವಿ.ಹರಿನಾಥ ಬಾಬು ಯಾರನ್ನಾದರೂ ಏನ ಕೇಳುವುದಿದೆ?ಕೇಳಲು ಉಳಿದಿರುವುದಾದರೂ ಏನು ನೀನೇ ಇಲ್ಲದ ಮೇಲೆ! ಹತ್ತು ದಿಕ್ಕಿಗೂ ಹುಡುಕಾಡಿದೆ ಹುಚ್ಚನಂತೆಹಿಡಿದ ಹುಚ್ಚು ಮತ್ತಷ್ಟು ಗಟ್ಟಿಯಾಯಿತು ನೀ ಕಾಣದೆ ಎದುರಾದವರೆಲ್ಲಾ ದಿಟ್ಟಿಸಿ ನೋಡಿ ಹೋಗುತ್ತಿದ್ದಾರೆನೀನು ನನ್ನ ಕಣ್ಣೊಳಗೇನಾದರೂ ಅವಿತುಕೊಂಡಿರುವೆಯಾ?? ರೆಪ್ಪೆ ಮುಚ್ಚಿದರೆ ಕಡಲು ಉಕ್ಕಿ ಹರಿವುದುಹಾಯಿ ದೋಣಿಯ ಬಟ್ಟೆ ಆಕಾಶವ ಹೊದ್ದಿದೆ ಮರಗಿಡಗಳೂ ಮೌನ ತಾಳಿವೆಜೀವವಿರದ ಈ ದೇಹ ದಿಗಿಲುಗೊಂಡಿದೆ ಬೆಳ್ಳಕ್ಕಿ ಯಾಕೋ ಮುಗಿಲಕಡೆ ನೋಡುತಿದೆಈಗತಾನೇ ನೀನು ನಭಕೆ ಹಾರಿಕೊಂಡಂತೆ ಕಾಣುತಿದೆ ಒಂಟಿತನಕೆ ಯಾಕಿಷ್ಟು ಆತಂಕ?ನೀನು ಕೊಟ್ಟ ಪ್ರೀತಿಯ ಸವಿಮುತ್ತು ಇದ್ದ ಕಾಲಕ್ಕ ಹಗಲನೇಗೋ ಕಳೆದುಬಿಡುವೆ ಬೆಳಕಿನ ಜೊತೆಗೂಡಿಇರುಳು ನಿನ್ನ ನೆನಪ ಹೆಣವ ತಂದು ಸುರಿಯುತಿದೆ ಅಂಗಳಕೆ ನೀನಲ್ಲದೆ ಚಂದಿರ ಉರಿವ ಸೂರ್ಯನಿಗೂ ಮಿಗಿಲಾಗಿರುವಅವನ ಬೆಳದಿಂಗಳ ಬೆಂಕಿ ಕನಸುಗಳ ಸುಟ್ಟು ಕೇಕೆ ಹಾಕಿದೆ **********************************

ದ್ವಿಪದಿಗಳು Read Post »

ಕಾವ್ಯಯಾನ

ಪ್ರತಿಷ್ಠೆ ಬದಿಗಿಟ್ಟರೆ ಬಾಳು

ಕವಿತೆ ಪ್ರತಿಷ್ಠೆ ಬದಿಗಿಟ್ಟರೆ ಬಾಳು ಲಕ್ಷ್ಮೀದೇವಿ ಕಮ್ಮಾರ ಮನೆ ಮಿಡಿದರೂ ಪ್ರತಿಷ್ಟೆ ಗಡಿಅಡ್ಡಿಯಾಗಿದೆ ನನಗೂ ನಿನಗೂ ಅಕ್ಕಪಕ್ಕದ ಲ್ಲಿದ್ದರೂ ಅಹಂನ ಅಡ್ಡಗೋಡೆ ಅರಿಯಲಾರೆ ನನ್ನ ನೀನು ,ನಿನ್ನ ನಾನು ಬೇಕು ಬೇಕೆನಿಸಿರೂ ಸಾಕು ಮಾಡಿದ್ದೆವೆ ಮಾತುಕುಹಕಿಗಳಿಂದಾಗಿದೆ ಬಿರುಕುಒಡೆದು ಹೋಗುತ್ತಿದೆ ಪ್ರೀತಿ ಸೇತು ಒಲವದಾರೆ ಹರಿಸಲು ಬಂದುದರ ಕುರುಹುಅರಿಯದೆ ನಮ್ಮ ಸ್ವಾರ್ಥದ ಪರದಿಯಲಿ ಬಂದಿಯಾಗುಳಿದವರು ನಾವು ***********************************

ಪ್ರತಿಷ್ಠೆ ಬದಿಗಿಟ್ಟರೆ ಬಾಳು Read Post »

ಕಾವ್ಯಯಾನ

ಪ್ರೀತಿಯ ಬಿತ್ತಿ ಬೆಳೆಯಲು

ಕವಿತೆ ಪ್ರೀತಿಯ ಬಿತ್ತಿ ಬೆಳೆಯಲು ನಾಗರಾಜ ಹರಪನಹಳ್ಳಿ ನಾನು ಹೆಣ್ಣಾಗುವೆಗಾಂಧಿಯಂತಹ ಮಗನ ಹೆರಲು ಹೌದು,ಗಾಂಧಿಯಂಥ ಮಗ ಬೇಕುಈ ನೆಲಕ ದಿಕ್ಕು ತೋರಿಸಲು ಸಹನೆ ,ಸತ್ಯ ಅಹಿಂಸೆ ಹಂಚುವಗೋಡ್ಸೆ ಮನದ ಬಂದೂಕುಕಸಿದು, ಭೂಮಿ ಮೇಲಿನ ಗಡಿರೇಖೆ ಅಳಿಸಿಮನುಷ್ಯರೆಲ್ಲಾ ಒಂದೇ ಎಂದು ಮನದಟ್ಟು ಮಾಡಲುಗಾಂಧಿಯಂಥ ಮಗನ ಹೆರಬೇಕು ಗೋಡ್ಸೆ ಮನದ ಗಡಿಗಳ ಅಳಿಸಿಅವನ ಕಣ್ಣಿಗೆ ಕರುಣೆ ತುಂಬಿಅವನ ದೇಹದ ಅಣು ಅಣುವಿನಲಿ ದಯೆಯ ಬಿತ್ತಿಬೆಳೆಯಲು ಗಾಂಧಿಯಂತಹ ಮಗ ಬೇಕು ಹರಿದ ನೋಟು ,ಬೀದಿ ಕಸದ ಸ್ವಚ್ಛತೆಗೆ ಮೀಸಲಿಟ್ಟ ನನ್ನ ದೇಶದ ಜನನಾಯಕರ “ಕ್ಷಮಿಸು ಬಿಡು ಮಗನೆ” ಎನ್ನಲು ಗಾಂಧಿಯಂತಹ ಮಗ ಬೇಕು ಈ ನೆಲದ ಬೇರುಗಳಿಗೆ ರಕ್ತದ ಕಲೆಗಳಿವೆ ; ಬೆರಳುಗಳಿಗೆ ದ್ವೇಷದ ಹಸಿ ಮಾಂಸವಿದೆಹಿಂಸೆಯ ಭೂಮಿಯಲ್ಲಿಪ್ರೀತಿಯ ಬಿತ್ತಿ ಬೆಳೆಯಲುಗಾಂಧಿಯಂತಹ ಮಗನಹೆರಬೇಕು ನಾನು ಇಲ್ಲಿ ಪ್ರಾರ್ಥನಾ ಮಂದಿರಗಳು ಉರುಳಿವೆಗಲ್ಲಿ ಗಲ್ಲಿಗಳಲ್ಲಿ ಅನುಮಾನದ ಹುತ್ತಗಳೆದ್ದಿವೆ : ಕಾಣದ ಸರ್ಪಗಳು ಎಲ್ಲೋ ಅಡಗಿವೆ ಹುತ್ತವ ಬಡಿಯದೆ ,ಸರ್ಪಗಳ ಹಿಡಿದು ವಿಷ ತೆಗೆಯಲುಗಾಂಧಿಯಂಥ ಮಗ ಬೇಕಿದೆ ಗುಂಡಿಕ್ಕುವವನನೂ ಕ್ಷಮಿಸುವ ಗಾಂಧಿಯಂತಹ ಮಗನಮತ್ತೆ ಹೆರಬೇಕಿದೆಈ ನೆಲದ ತಾಯಿಯಾಗಿ ತಾಯ್ತನವ ಹಂಚಬೇಕಿದೆ ******************************

ಪ್ರೀತಿಯ ಬಿತ್ತಿ ಬೆಳೆಯಲು Read Post »

ಕಾವ್ಯಯಾನ

ಅಷ್ಟೇನೂ ಅಂತರವಿರಲಿಲ್ಲ

ಕವಿತೆ ಅಷ್ಟೇನೂ ಅಂತರವಿರಲಿಲ್ಲ ನಾಗರಾಜ ಮಸೂತಿ ಅಷ್ಟೇನೂ ಅಂತರವಿರಲಿಲ್ಲ,ಆದರೂನೆರಳು ತಾಗುತ್ತಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂಹೋಟೆಲ್ಲಿನ ಚೆಂಬು ಲೋಟಗಳಿಗೆನಮ್ಮ ಸ್ಪರ್ಶದ ಅರಿವಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂನಮ್ಮ ಕರಗಳು ಕರ್ಪುರದ ಕಾವುಕಂಡಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂನಮ್ಮ ಆವಾಸಗಳು ಊರಂಚಿನಲ್ಲಿ ಮಿಂಚುತ್ತಿದ್ದವು ಆದರೆ ಮನಸ್ಸುಗಳುಇದೇ ಅಂತರದ ಅಗ್ನಿಯಸ್ಪರ್ಶದಿಂದ ಕರಕಲಾಗಿದ್ದವು… ************************************

ಅಷ್ಟೇನೂ ಅಂತರವಿರಲಿಲ್ಲ Read Post »

You cannot copy content of this page

Scroll to Top