ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಗಲಲಿ ಅರಳದ ವಿರಹಿಣಿ

ಕವಿತೆ ಹಗಲಲಿ ಅರಳದ ವಿರಹಿಣಿ ಅನಿತಾ ಪಿ. ಪೂಜಾರಿ ತಾಕೋಡೆ ಅಂದು…ಹಿಂದೆಂದೂ ಮೂಡದ ಒಲವೊಂದು ಅನುವಾದಾಗಅವನ ಹಿರಿತನವನು ಮರೆತುನನ್ನ ಮಗುತನವನೇ ಪೊರೆದುಇತಿ ಮಿತಿಯ ರೇಖೆಗಳಿಂದ ಮುಕ್ತವಾಗಿಹಕ್ಕಿಹಾಡನು ಮನಬಿಚ್ಚಿ ಹಾಡಿದಾಗಲೆಲ್ಲಅವನು ಕೇಳುತ್ತಿದ್ದುದೊಂದೇ ನಿತ್ಯ ದಗದಗಿಸುತ್ತಲೇ ಊರೂರು ಸುತ್ತುವಮುಟ್ಟಿದರೆ ಮುನಿದು ಬಿಡುವಕಟು ಮನಸ್ಸಿನ ಸೂರ್ಯ ನಾನುಎಲೇ ಮುದ್ದು ಪಾರಿಜಾತವೇನಾನೆಂದರೆ ನಿನಗ್ಯಾಕೆ ಇಷ್ಟೊಂದು ಪ್ರೀತಿ ಆಗ…ನನ್ನಾಲಯದಲ್ಲಿ ಅವನು ಇನ್ನಷ್ಟು ಪ್ರಕಾಶವಾಗುತ್ತಿದ್ದಬೆಳ್ಳನೆ ಹೊಳಪು ಕೇಸರಿ ಕದಪಿನಲಿ ರಂಗು ಮೂಡಿಅವನಿರುವಿನಲಿ ಇನಿತಿನಿತಾಗಿ ಕರಗುತ್ತಲೇನಾನೆಂದಿಗೂ ನಿನ್ನವಳೆನ್ನುತಿದ್ದೆ ಅವನೂ ಸುಮ್ಮನಿರುತಿರಲಿಲ್ಲನನ್ನ ಇತಿಹಾಸವನೇ ಬಯಲಿಗೆಳೆಯುತಿದ್ದಸುರಭಿ ವಾರಿಣಿಯರ ಸಾಲಿನವಳುಕ್ಷೀರ ಸಮುದ್ರದೊಳವಿರ್ಭವಿಸಿದಪಂಚವೃಕ್ಷಗಳಲಿ ನೀನೋರ್ವಳುಇಂದ್ರನ ನಂದನವನದಲ್ಲಿ ಪಲ್ಲವಿಸಿದವಳುಸತ್ಯಭಾಮೆಯೊಲವಿಗೆ ಕೃಷ್ಣ ನ ಜೊತೆ ಬಂದವಳುನಿನಗ್ಯಾಕೆ ನನ್ನ ಸಾಂಗತ್ಯ ಬಯಕೆ? ವಾದ ವಿವಾದಗಳ ನಡುವೆ ಪ್ರೀತಿ ನಿಜವಾಗಿದ್ದು ಸುಳ್ಳಲ್ಲನನಗೂ ಅವನಿಗೂ ಬಾನು ಭುವಿಯಷ್ಟೇ ಅಂತರವಿದ್ದರೂಕ್ಷಣಕ್ಷಣಕೂ ನನ್ನ ಸನ್ನಿಧಿಯಲ್ಲೇ ಇರುತಿದ್ದನಲ್ಲಾ… | ಕೆಲವೊಮ್ಮೆ ಕಪ್ಪು ಮೋಡ ಕವಿದುಪರಿಛಾಯೆಯ ಲವಲೇಶವಿಲ್ಲದೆಹೇಳದೇ ಕೇಳದೇ ಏಕಾಏಕಿ ಮರೆಯಾದಾಗಕಾಯುವಿಕೆ ಅಸಹನೀಯವಾಗಿಅವನ ಓರಗೆಯವರಲ್ಲಿ ವಿಚಾರ ಮಾಡಿದ್ದುಂಟುಅವನ ಕ್ಷೇಮದ ಸುದ್ದಿ ತಿಳಿಯಲು ಹುಚ್ಚಳಾಗಿದ್ದುಂಟು ನಿತ್ಯ ಹೊಸದಾಗಿ ಅರಳುವ ನಾನುಒಂದೊಂದು ನೆಪ ಹೇಳಿ ಇಲ್ಲವಾಗುವ ಅವನುಮತ್ತೆ ಬಂದು ಹೇಳುವ ಕಥೆ ವ್ಯಥೆಗಳುಬಾಗುವಿಕೆಯಿಲ್ಲದೆ ಕ್ಷೀಣವಾಗುತಿಹ ಭಾವಾನುರಾಗಗಳುಹೀಗೆಯೇ ನಡೆದಿತ್ತು ವರ್ಷಾನುವರ್ಷ ಅದೇ ವಿರಹದ ಸುಳಿಯಲ್ಲಿ ನಲುಗಿನಾನೀಗ ಹಗಲಲಿ ಎಂದೂ ಅರಳದ ವಿರಹಿಣಿ ಯಾರೂ ಸುಳಿಯದ ಕಪ್ಪಿರುಳಿನಲಿಮೊಗ್ಗು ಮನಸು ಹದವಾಗಿ ಒಡೆದುನೆಲದ ಮೇಲುರುಳಿ ಹಗುರಾಗುತ್ತೇನೆಅವ ಬರುವ ವೇಳೆಯಲಿಅದೇನೋ ನೆನೆದು ಬಿದ್ದಲ್ಲೇ ನಗುತ್ತೇನೆ.ನಮ್ಮೀರ್ವರ ಮಾತಿರದ ಮೌನಕೆಒಳಗೊಳಗೆ ಸುಡುವ ಝಳದಲಿ ತೆಳುವಾಗುತ್ತೇನೆ ಅವನೂ ಹಾಗೆಯೇ ಕಂಡೂ ಕಾಣದಂತೆಮೂಡಣದಿಂದ ಪಡುವಣಕ್ಕೆ ತಿರುಗುತ್ತಲೇ ಇರುತ್ತಾನೆನಾನೂ ನೋಡು ನೋಡುತ್ತಲೇನೆಲದ ಗುಣವನು ಒಪ್ಪಿಕೊಳ್ಳುತ್ತೇನೆಬರುವ ನಾಳೆಯಲಿ ಮತ್ತೆ ಗೆಲುವಾಗಲು ***************************.

ಹಗಲಲಿ ಅರಳದ ವಿರಹಿಣಿ Read Post »

ಕಾವ್ಯಯಾನ

ಎಲ್ಲಾ ಹೆಣ್ಣು ಹೆಣ್ಣು ಹೆಣ್ಣು

ಕವಿತೆ ಎಲ್ಲಾ ಹೆಣ್ಣು ಹೆಣ್ಣು ಹೆಣ್ಣು ಸುಧಾ ಹಡಿನಬಾಳ ಹೇ ದುರುಳ ವಿಕೃತ ಕಾಮಿಗಳೆನಿಮ್ಮ ದಾಹ, ಕ್ರೌರ್ಯಕೆ ಕೊನೆಯಿಲ್ಲವೇನು? ನೀವು ಪೂಜಿಸುವ ಜಗನ್ಮಾತೆ ಹೆಣ್ಣುನಿಮ್ಮ ಹೆತ್ತ ಜನ್ಮದಾತೆ ಹೆಣ್ಣುನಿಮ್ಮ ಪೊರೆವ ಭೂಮಿತಾಯಿ ಹೆಣ್ಣುನಿಮ್ಮ ಮನೆ ಬೆಳಗುವ ಮಡದಿ ಹೆಣ್ಣುಮನೆತುಂಬ ಕಿಲ ಕಿಲ ಗೆಜ್ಜೆನಾದ ಹೆಣ್ಣುಎಲ್ಲಾ ಹೆಣ್ಣು ಹೆಣ್ಣು ಹೆಣ್ಣುಆದರೂ ಅನ್ಯ ಹೆಣ್ಣಿನ ಮೇಲೇಕೆ ನಿಮ್ಮ ಕಣ್ಣು? ಒಮ್ಮೆ ಯೋಚಿಸಿ ಕಲ್ಪಿಸಿಕೊಳ್ಳಿನಿಮಗೂ ಒಬ್ಬ ಹೆಣ್ಣು ಮಗಳಿದ್ದುಅವಳ ಮೇಲೂ ಇಂತದೆ ಭಯಾನಕದೌರ್ಜನ್ಯ, ಕ್ರೌರ್ಯ ನಡೆದರೆಸಹಿಸಲಾದೀತೇ ಊಹಿಸಿಕೊಳ್ಳಲಾದೀತೇ? ಎಲ್ಲಾ ಹೆಣ್ಣು ಮನೆಯ ಮಕ್ಕಳಂತಲ್ಲವೆ?ಸಾಕು ನಿಲಿಸಿ ನಿಮ್ಮ ವಿಲಾಸೀ ಪೌರುಷವತಣಿಸಿಕೊಳ್ಳಿ ಮಡದಿಯಿಂದಲೇ ನಿಮ್ಮ ದಾಹವಬದುಕಲು ಬಿಡಿ ಹೆಣ್ಣು ಸಂಕುಲವಉಳಿಸಿ ಗೌರವಿಸಿ ಅವರ ಸ್ವಾತಂತ್ರ್ಯವ *****************************

ಎಲ್ಲಾ ಹೆಣ್ಣು ಹೆಣ್ಣು ಹೆಣ್ಣು Read Post »

ಕಾವ್ಯಯಾನ

ಕಳೆದವರು

ಕವಿತೆ ಕಳೆದವರು ಅಬ್ಳಿ ಹೆಗಡೆ. ಕಳೆದವರು ನಾವುಕಳೆದವರು.ಉಳಿದಿಹ ಗಳಿಕೆಯನಿತ್ಯವೂ ಎಣಿಸುತ್ತಬೆಳೆಸಲಾಗದ್ದಕ್ಕೆಅಳುವವರು.ಘಾಢಕತ್ತಲಿನಲ್ಲಿಕಪ್ಪುಪಟ್ಟಿಯು ಕಣ್ಗೆಎಲ್ಲೆಲ್ಲೊ ಗುದ್ದುತ್ತಒದ್ದಾಡುವವರು.ಚೆಲುವ ನಂದನದಲ್ಲಿಎಂದೆಂದೂ ನಿಂತಿದ್ದುಕಣ್ಣಹಸಿವಿಂಗದಲೆಸಾಯುವವರು.ಪ್ರೀತಿಯಮ್ರತದ ಕಲಶಎದೆ ನೆಲದಿ ಹೂತಿಟ್ಟುಪ್ರೀತಿಯಾ ಬರದಲ್ಲೆಬದುಕಿ ಸತ್ತವರು.ದೀಪವಾರಿದ ಕೋಣೆಕತ್ತಲಲೆ ಕುಳಿತಿದ್ದುಕಪ್ಪು ಶಾಯಲಿ ಬೆಳಕಗೆರೆಯೆಳೆವರು.ನಡೆವ ಹಾದಿಯ ಬದಿಗೆಆಲದ ನೆರಳಿದ್ದೂಬಿಸಿಲಲ್ಲೆ ಮಲಗಿದ್ದುದಣಿವ ಕಳೆವವರು.ತನ್ನೊಳಗೇ ಅನಂತಶಾಂತಿಯ ಕಡಲಿದ್ದುಶಾಂತಿಯ ಹುಡುಕುತ್ತಸಂತೆಯಾದವರು.ಕಳೆದವರು ನಾವುಕಳೆದವರು.ಎಷ್ಟುಕಳೆದರೂ ಸ್ವಲ್ಪಉಳಿದವರು. **********************

ಕಳೆದವರು Read Post »

ಕಾವ್ಯಯಾನ

ಏಕಾಂತ… ಮೌನ…

ಕವಿತೆ ಏಕಾಂತ… ಮೌನ… ಡಾ.ಕಾತ್ಯಾಯಿನಿ ಕುಂಜಿಬೆಟ್ಟು ನಿನ್ನೆ ಆಗಸದಲ್ಲಿಇರುಳಿನ ಹೊಕ್ಕುಳಲ್ಲಿಅರಳಿದ್ದ ಹೂವು ಇಂದು ಬಾಡುತ್ತಿದೆ ಅದರ ಎಸಳುಗಳನ್ನುನಾಳೆ ಭೂಮಿಯಲ್ಲಿ ಹುಡುಕಬೇಕು… ಹುಣ್ಣಿಮೆ – ಅಮಾವಾಸ್ಯೆಗಳನಡುವೆ ಮನವನ್ನು ಸವರಿಕೊಂಡುಕರಗಿ ಹೋದ ಪರಿಮಳವನ್ನುಗಾಳಿಯಲ್ಲಿ ಅರಸಬೇಕುದೀಪ ಹುಡುಕುವ ಕುರುಡನಂತೆ ನಿನ್ನೆ ಚಂದಿರ ನನ್ನ ಕೈಯಏಕತಾರಿಯಾಗಿದ್ದನಾಳೆ ನಾನೇ ಬೆಂಕಿ ಉರಿವ ಮಡಕೆಯಾಗುತ್ತೇನೆ ಅವನ ಕೈಯಲ್ಲಿ.ನಾಳಿದ್ದು…!ಉಳಿಯುವುದು ಬರೇಏಕಾಂತ… ಮೌನ… ***************************

ಏಕಾಂತ… ಮೌನ… Read Post »

ಕಾವ್ಯಯಾನ

ಜೀವನ ಜಲಧಿ

ಕವಿತೆ ಜೀವನ ಜಲಧಿ ವೃತ್ಯಾನುಪ್ರಾಸ ಕವನ ಶುಭಲಕ್ಷ್ಮಿ ಆರ್ ನಾಯಕ ಜೀವನವು ಜಂಜಡದ ಜಟಿಲ ಜಲಧಿಸಹನೆ ಸದಾಚಾರದಿ ಸಾಗು ಸಮಚಿತ್ತದಿಹೂವಂಥ ಹೊಂಗನಸ ಹೊತ್ತು ಹೃದಯದಿಮನಕೆ ಮಾಧುರ್ಯವೀವ ಮಾತೃ ಮಮತೆಯಲಿ// ಸುಖದುಃಖಗಳ ಸುಮನದಿ ಸ್ವೀಕರಿಸಿ ಸಾಗಲಿಬದುಕಿನ ಬವಣೆಗಳ ಬೇಗುದಿಯ ಬದಿಗಿಡುತನಮ್ರತೆಯಲಿ ನಗುನಗುತ ನಲುಮೆಯ ನೀಡುತಸನ್ನಡತೆಯಲಿ ಸಮಾಜಕ್ಕೆ ಸಂದೇಶ ಸಾರುತ// ಅತ್ಯಾಚಾರ ಅನಾಚಾರ ಅಂಧಕಾರವ ಅಳಿಸುವಹೆಣ್ಣುಗಳ ಹಿಂಸಿಸುವ ಹಮ್ಮೀರರ ಹತ್ತಿಕ್ಕುವಕಪಟ ಕಾಮಗಳಿಗೆ ಕಡಿವಾಣವ ಕಟ್ಟುವಮೋಸದ ಮಾಯೆಗೆ ಮದ್ದರೆದು ಮಣಿಸುವ// ನೋವು ನಲಿವುಗಳಿಗೆ ನಗುತ ನಮಿಸುವಬದುಕು ಬರಡಾದರೂ ಭರವಸೆಯಲಿ ಬದುಕುವಆತ್ಮವಿಶ್ವಾಸ ಆಶಾಭಾವದಲಿ ಆಡುತ ಆನಂದಿಸುವತಾಮಸವ ತೊಲಗಿಸಿ ತನ್ನರಿವಲಿ ತೇಲುವ// ****************************

ಜೀವನ ಜಲಧಿ Read Post »

ಕಾವ್ಯಯಾನ

ಹಚ್ಚಿಕೊಂಡರೆ

ಕವಿತೆ ಹಚ್ಚಿಕೊಂಡರೆ ನಿರ್ಮಲಾ ಶೆಟ್ಟರ ಸಾಕಿನ್ನು ಹೊರಡುಎನ್ನುವುದೆ ತಡ ಹೊರಡಲಾಗದು ಸರಿ ಇದ್ದುಬಿಡುಎಂದೊಡನೆ ಉಳಿಯಲಾಗದು ನಡೆಯುವ ಮುನ್ನ ನಿನ್ನೊಳಗಿನನನ್ನ ತೊರೆದು ನಡೆ ಎಂದೆನಲುಅದೆಷ್ಟು ಬಾರಿ ಅಂದುಕೊಂಡಿಲ್ಲತೊರೆಯಲಾಗದು ನನ್ನಒಳಗಿನ ನಿನ್ನ ಹೀಗೆ ಒಂದೊಮ್ಮೆ ಹಚ್ಚಿಕೊಂಡರೆರೆಕ್ಕೆ ಮೂಡಿ ನಿಂತ ಹಕ್ಕಿಮುನ್ನುಡಿ ತೀಡಿದ ಮೊದಲ ಪುಟತಾಯೊಡಲು ಸೀಳಿ ಬಂದ ಮೊಳಕೆ ಸಸಿಕಂಡಿಕೆ ಪೋಣಿಸಿಕೊಂಡ ಮಗ್ಗಎಲ್ಲದರಾಚೆ ಪ್ರೀತಿ ಕಾಪಿಟ್ಟುಕೊಂಡ ಹೃದಯ ನಡೆಯುವದು ಸರಳಾತೀ ಸರಳಅಲ್ಲಲ್ಲೆ ಚಾಚಿದ ಬೇರ ಕತ್ತರಿಸಿದಲ್ಲಿಚಿಗುರು ಆವರಿಸಿಕೊಂಡಂತೆ ಮಳೆಗೆಅಳಿದುಳಿದವು ತಮ್ಮಿರುವಿನ ಗುರುತಿನಲಿ ಭೂಮಿ ಬಸಿರ ಧಿಕ್ಕರಿಸಿದರೆಅತ್ತಂತೆ ಭಾನು ಮೋಡ ಸುರಿಸಿಮತ್ತೆ ಕನಸಿಗಾಗಿ ಕತ್ತಲೆ ಹಗಲಬಚ್ಚಿಟ್ಟಂತೆ ದಿನ ದಿನವೂ ಹಚ್ಚಿಕೊಂಡೆನೆಂದು ನೆಚ್ಚಿಕೊಳದ ನೋವುಬಾಳ ಯಂತ್ರಕೆ ಕೀಲೆಣ್ಣೆ ಕೊನೆತನಕರೆಕ್ಕೆಗಳೀಗ ಹಾರಲು ಹವಣಿಸಿವೆಆಗಸದ ಹೊಸ ಹಾದಿಗೆಅಣಿಗೊಂಡ ವಿದಾಯಕೊಂದು ನಗು ಸೇರಲಿನೀರಸವಾಗದಿರಲಿನಿನ್ನ ಹಾದಿ ಮತ್ತೆ ನನ್ನದೂ ********************************

ಹಚ್ಚಿಕೊಂಡರೆ Read Post »

ಕಾವ್ಯಯಾನ

ಬೆವರು ಹಾಗೂ ಹೆಣ್ಣು

ಕವಿತೆ ಬೆವರು ಹಾಗೂ ಹೆಣ್ಣು ನೂತನ ದೋಶೆಟ್ಟಿ ಹೆಂಟೆಯೊಡೆದು ಮಡಿ ಮಾಡಿಬೆವರ ಧಾರೆ ಎರೆದೆರೆದುನೀರುಣಿಸಿದ ಪೈರೀಗಕಾಳುಕಟ್ಟಿ ನಿಂತಿದೆಎದೆಯೆತ್ತರದ ಮಗನಂತೆ ಕೈಯ ಕೆಸರುಮನದ ಕೊಸರುಹಚ್ಚಿಟ್ಟ ಕಣ್ಣ ಹಣತೆಹನಿಸಿದ್ದ ಎದೆಯಾಮೃತ ಹಿಂಡಿ ತೆಗೆದ ಕಾಳ ಹಾಲುಸೇರಿ ಸವಿದ ಪಾಯಸಾನ್ನಸಂಭ್ರಮದ ನಗೆಯ ಮೋಡಿ ಆಳೆತ್ತರ ಬೆಳೆದ ಪೈರುಎದೆಯೆತ್ತರ ಬೆಳೆದ ಮಗಹೆಣೆದ ಕನಸುಗಳ ಕೊಂಡಿಬೆವರಿಗೂ ಹೆಣ್ಣಿಗೂ ತಾಳೆಯ ಮಾಡಿ. ********************************

ಬೆವರು ಹಾಗೂ ಹೆಣ್ಣು Read Post »

ಕಾವ್ಯಯಾನ

ಹಣೆಗೆ ಹಣೆ ಹಚ್ಚಿ

ಕವಿತೆ ಹಣೆಗೆ ಹಣೆ ಹಚ್ಚಿ ನಾಗರಾಜ ಹರಪನಹಳ್ಳಿ ಹಣೆಗೆ ಹಣೆ ಹಚ್ಚಿಪಿಸುಮಾತಾನಾಡೋಣಜಗಕೆ ಪ್ರೀತಿಯ ಹಾಡ ಹಾಡೋಣ ಇರುವಷ್ಟು ದಿನಹಗಲುಜೀವ ಕಾರುಣ್ಯದ ಹಾಡ ಹಾಡಿನೆಲದ ಜನಕೆ ಬದುಕ ಹಾಡೋಣ ಸುಖವೋ ದುಃಖವೋ ಸಮನಾಗಿ ಸ್ವೀಕರಿಸಿಹಣೆ ತುಂಬ , ಮನ ತುಂಬ ಸಿಹಿಯ ಹಂಚೋಣ ಬದುಕೆಂಬುದು ಸುಖದ ಹಾಸಿಗೆಯಲ್ಲಕಡು ಕಷ್ಟವನೆ ಹೊದ್ದ ದಾರಿಯೂ ಅಲ್ಲಎಂಬುದು ಸಾರಿ ಹೇಳೋಣ ಹಗಲು ಸೂರ್ಯನ ಪಯಣಇರುಳು ಚಂದ್ರನ ಗಗನಸುಳಿವ ಗಾಳಿಗೆ ದಣಿವಿಲ್ಲದಿರುವಾಗದುಡಿಮೆ ಒಲುವೆ ಜೊತೆ ಜೊತೆಗೆ ಎಂಬ ತತ್ವ ಸಾರೋಣ ಮಗನ ಹಣೆಗೆ ಹಣೆಯಿಟ್ಟುಬದುಕ ಪ್ರೀತಿಸುವುದ ಕಲಿಸೋಣಪಿಸುಮಾತು ಎದೆಯೊಳಗೆನುಡಿಗಟ್ಟು ಕಣ್ಣೊಳಗೆಹಾಡಾಗುವ ಗುಟ್ಟನಲಿಸಿ ಕಲಿಸೋಣ ಪ್ರೀತಿ ಎಂಬುದು ಹಿಗ್ಗುಬದುಕು ಎಂಬುದು ಸುಗ್ಗಿಹೋರಾಡಿ ಪಡೆದ ಸುಖವುಕೊನೆತನಕ ಎಂಬ ಗುಟ್ಟಕಲಿಸೋಣ ಹಣೆಗೆ ಹಣೆ ಹಚ್ಚಿ ಪ್ರೀತಿಸೋಣಕೊನೆಯಿರದ ಬದುಕಿನ ಹಾಡ ಹಾಡೋಣಕೊನೆಯಿರದ ಬದುಕಿನ ಪ್ರೀತಿ ಕಲಿಸೋಣ**************************

ಹಣೆಗೆ ಹಣೆ ಹಚ್ಚಿ Read Post »

ಕಾವ್ಯಯಾನ

ಗಾಂಧಿ

ಕವಿತೆ ಗಾಂಧಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು. ಹದಿಹರೆಯದಲ್ಲಿ ಶ್ರವಣನನ್ನೂ ಹರಿಶ್ಚOದ್ರನನ್ನೂಅಡ್ಡೆಯಲ್ಲಿ ಕೂರಿಸಿ ಹೆಗಲಲ್ಲಿ ಹೊತ್ತು ನಡೆಯಲಾರಂಭಿಸಿದ ಈತಒಂದೂವರೆ ಶತಮಾನದಿಂದ ನಡೆಯುತ್ತಲೇ ಇದ್ದಾನೆಹೇ ರಾಮ್… ಹೇ ರಾಮ್… ಎನ್ನುತ್ತ…ಎಷ್ಟೋ ಬಾರಿಅಡ್ಡೆಯಲ್ಲಿ ಕುಳಿತ ಶ್ರವಣನಿಗೆ ವ್ರಣವಾಗಿದ್ದುಂಟುಹರಿಶ್ಚಂದ್ರನಿಗೆ ಭಗಂದರವಾಗಿ ನರಳಿದ್ದುಂಟುಆಗೆಲ್ಲ ತನ್ನ ಹೃದಯದಲ್ಲೇ ಹುಣ್ಣು ಆದವನಂತೆಪಶ್ಚಾತ್ತಾಪದ ಕಂಬನಿಯಲ್ಲಿ ನೆನೆಸಿದ ಮದ್ದು ಪಟ್ಟಿಯನ್ನು ಕಟ್ಟಿಹಗಲು ರಾತ್ರಿ ಶುಶ್ರೂಷೆ ಮಾಡಿಬರಿಗಾಲಲ್ಲಿ ಬಿಸಿಲು ಮಳೆ ಚಳಿ ಗಾಳಿಯೆನ್ನದೆ ನಡೆದಿದ್ದಾನೆಬಸುರಿ ಸೀತೆ ಹೊಟ್ಟೆಯೊಳಗೆ ಅವಳಿಭ್ರೂಣಗಳ ಹೊತ್ತು ತಿರುಗಿದಂತೆ ಹಾದಿಯುದ್ದಕ್ಕೂ ಕಸಾಯಿ ಮಾಂಸದಂಗಡಿಗಳಲ್ಲಿತಲೆ ಕೆಳಗಾಗಿ ನೇತಾಡುತ್ತ ಸಿಪ್ಪೆ ಸುಲಿಸಿಕೊಂಡು ಚೀರಾಡುವ ಆಡು ಕುರಿ ಕೋಳಿಗಳನಡುವೆ ಹಿಟ್ಟು ನಾದಿ ಮೊಟ್ಟೆಯಾಕಾರದಲ್ಲಿ ಲಟ್ಟಿಸಿಬೆಂಕಿಯಲ್ಲಿಅಹಿಂಸಾ… ಅಹಿಂಸಾ… ಎಂದುಚೀರುತ್ತಲೇ ಸುಟ್ಟ ರೊಟ್ಟಿಯಂತಹ ಹೃದಯ ಹೊತ್ತು ಒಣಕಲು ರೊಟ್ಟಿಯಂತಹ ದೇಹದ ದಂಟು ಕೈ ಕಾಲುಗಳಲ್ಲಿ ಹಾರು ನಡಿಗೆಯಲ್ಲಿ ಓಡುತ್ತಿದ್ದಾನೆಕಡಲ ತಡಿಯಲ್ಲಿ ಉಪ್ಪಿನ ಸತ್ಯಾಗ್ರಹಕ್ಕೆ ಕುಳಿತವನ ಹೃದಯಬಾಯ್ಬಾಯ್ ಬಿಡುತ್ತಿರುವ ಬಂಗುಡೆ ಮೀನಿನ ಮೈಗೆ ಉಪ್ಪು ಖಾರ ಹಚ್ಚಿದಂತೆ ಬೇಯುತ್ತ ಚೀರುತ್ತಿದೆ ಕೃತ ತ್ರೇತಾ ದ್ವಾಪರ ಕಲಿ ಕಾಲಗಳುಯುದ್ಧ ಕೊಲೆ ರಕ್ತಪಾತದಲ್ಲಿ ನೆಂದುಪೂವ೯ದಲ್ಲಿ ಮೂಡಿದ ಸೂಯ೯ನನ್ನೇ ನುಂಗಿ ಪಶ್ಚಿಮಕ್ಕೆ ಉಗುಳುತ್ತಿವೆನೀಲಿ ಆಗಸದಲ್ಲಿ ನೀಲಿ ಕಡಲಲ್ಲಿಕೆಂಪು ಬಟ್ಟೆಯ ಹೆಣಗಳ ರಾಶಿತೇಲುತ್ತಿವೆಕೈಗಳನ್ನು ಚಾಚುತ್ತ ಅಹಿಂಸೆ ಅಹಿಂಸೆ… ಹೇ ರಾಮ್ ಹೇ ರಾಮ್ ಎಂದು ಚೀರುತ್ತಲೇ ಇವೆ ಅಡ್ಡೆ ಹೊತ್ತ ತಾತ ನಡೆಯುತ್ತಲೇ ಇದ್ದಾನೆಅವನ ಎದೆಯೊಳಗಿನ ಅಹಿಂಸೆಯಬೆಂಕಿಯ ಬೇಗೆ ಸಹಿಸಲಾಗದೆಫರಂಗಿಗಳು ಹೊರಗೆ ಓಡಿ ಹೋಗಿದ್ದಾರೆ…ಗೋಡ್ಸೆ ಕೋವಿ ಸಹಿತ ಒಳ ನುಗ್ಗಿದ್ದಾನೆಹೇ ರಾಮ್….! ಕಣ್ಣು ಮುಚ್ಚಿದಾಗೆಲ್ಲಎವೆಗಳ ಪರದೆಯ ಒಳಗೆಬಿಳಿ ಕಚ್ಚೆಯ ಸಣಕಲು ಕಪ್ಪು ಮೈಯ ಆತ ಬೀಸ ಬೀಸಓಡು ನಡಿಗೆಯಲ್ಲಿ ನಡೆಯುತ್ತಲೇ ಇರುತ್ತಾನೆಮೆದುಳಿನಿಂದ ಹೃದಯಕ್ಕೆಹೃದಯದಿಂದ ಮೆದುಳಿಗೆಬೆಳಕು ಹೊತ್ತ ಮಿಣುಕು ಹುಳದಂತೆ ಇಡೀ ಲೋಕದ ಹೃದಯ ಹೊಕ್ಕುಅಲ್ಲಿಂದ ಮೆದುಳಿಗೇರುತ್ತ ಇಳಿಯುತ್ತ ಏರುತ್ತ ಇಳಿಯುತ್ತನಡೆಯುವ ಮೊದಲುಆತ ತನ್ನೊಳಗೆೇ ಕವುಚಿ ಬಿದ್ದು ಹೊಟ್ಟೆ ಎಳೆದು ಅಂಬೆ ಹರಿದುಕುಳಿತು ನಿಂತು ಬಿದ್ದು ಎದ್ದುನಡಿಗೆ ಕಲಿತಿದ್ದನಂತೆಅದನ್ನು ನೋಡಲೆಂದು ಅವನೊಳಗೇಸೂಯ೯ ಮೂಡಿದ್ದನಂತೆ ಬೆಳಕು ಕೋಲನು ಊರಿಕತ್ತಲ ಕೋಲ್ಮಿಂಚಂತೆಬೀಸ ಬೀಸ ನಡೆಯುವ ಈ ಅಜ್ಜಅಜ್ಜನಲ್ಲ… ಗಲ್ಲದಲ್ಲಿ ಮೊಲೆಹಾಲುಕ್ಕಿಸುತಬೊಚ್ಚು ಬಾಯಲ್ಲಿ ನಗುವ ಮಗುಎದೆ ಎದೆಗಳಲ್ಲಿ ಹರಿಯುವ ಶಾಂತಿಗೊಂದು ರೂಪ ಕೊಟ್ಟು ನೋಡಿರಿ…ಅವ ಗಾಂಧಿ ಮನೆ ಮನೆಯಲ್ಲೂ ಗಾಂಧಿಯುಹುಟ್ಟುತ್ತಲೇ ಇರುತ್ತಾನೆಬೊಚ್ಚು ಬಾಯಲ್ಲಿ ಮುದ್ದು ಮುದ್ದಾಗಿ ನಗುತ್ತಮನೆ ಮನೆಯಲ್ಲೂ ಗಾಂಧಿ ಸಾಯುತ್ತಲೇ ಇರುತ್ತಾನೆಬೊಚ್ಚು ಬಾಯಲ್ಲಿ ಹೇರಾo ಎನ್ನುತ್ತಗೋಡ್ಸೆಯ ಗೋಡೆ ಗೋಡೆಗಳ ನಡುವೆ ಹಿಂಸೆಯ ಗೋಲಿಗಳಿಗೆ ಎದೆಯೊಡ್ಡಿ… ಇವನನ್ನು ಕ್ಷಮಿಸು ಎಂದು ಯೇಸು ವಾಗುತ್ತಅಂಗುಲೀ ಮಾಲನ ಕಂಬನಿಯಲ್ಲಿ ತೊಯ್ದ ಬುದ್ಧನಾಗುತ್ತ ***********************

ಗಾಂಧಿ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ರತ್ನರಾಯ ಮಲ್ಲ ಸಿದ್ಧಾಂತಗಳು ಕಚ್ಚಾಡಿದರೆ ಮತ್ತೆಂದಿಗೂ ಹತ್ತಿರವಾಗಲಾರವುವಾಸನೆಗಳು ಬಡಿದಾಡಿದರೂ ಯಾವತ್ತೂ ದೂರವಾಗಲಾರವು ಜಗಳವು ಸಾಗುತ್ತಿದೆ ಅಲ್ಲಿ ಜೋರಾಗಿ ನಿನ್ನ ಮನ ಕಲುಕುವಂತೆನ್ಯಾಯ ಹುಡುಕುವ ಮನಗಳು ನೆಮ್ಮದಿಯಿಂದ ಬಾಳಲಾರವು ಮೂರನ್ನು ತೊರೆಯುವುದೆ ಇಂದು ಸೌಹಾರ್ದದ ರೂಪ ತಾಳಿದೆಕೈ-ಕಾಲುಗಳು ಹಿಡಿಯದ ಪ್ರತಿಭೆಗಳಿಗೆ ಪ್ರಚಾರ ಮುತ್ತಿಕ್ಕಲಾರವು ಕಸ ಗುಡಿಸುವ ಹುಚ್ಚು ಭ್ರಮೆಯಲ್ಲಿ ಕಸಬರಿಗೆ ಆಗದಿರು ನೀನುಸುಂದರ-ಉತ್ತಮ ಪೊರಕೆಗಳೂ ಸಹ ಪೂಜೆಗೆ ಒಳಗಾಗಲಾರವು ವೈಯಕ್ತಿಕ ಗಟ್ಟಿ ಹೆಜ್ಜೆಯೂರಬೇಕು ನಿಸ್ವಾರ್ಥದ ನೆಲೆಯಲ್ಲಿ ಇಲ್ಲಿಚೂರಿ ಹಾಕಿದ ಹೃದಯಗಳು ‘ಮಲ್ಲಿ’ ಎದೆಯಲ್ಲಿ ಉಳಿಯಲಾರವು ************************************

ಗಝಲ್ Read Post »

You cannot copy content of this page

Scroll to Top