ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಗಜಲ್ ಶಮಾ. ಜಮಾದಾರ. ತರಗಲೆಯ ಅಲುಗಾಟದಲಿ ನಿನ್ನ ಕಾಲ್ಸಪ್ಪಳಕೆ ಕಾಯುತಿರುವೆಕೊರಕಲಿನ ಇಳಿಜಾರಿನಲಿ ನಿನ್ನ ದರುಶನಕೆ ಕಾಯುತಿರುವೆ ಲೋಕದ ನಾಲಿಗೆ ಹೊಸದೊಂದು ಪಟ್ಟಕಟ್ಟಿ ನಗುತಿದೆಅಮವಾಸ್ಯೆ ರಾತ್ರಿಯಲಿ ಬೆಳದಿಂಗಳಕೆ ಕಾಯುತಿರುವೆ ಯುಗಗಳಿಂದಲೂ ಪ್ರೀತಿ ನಿರೀಕ್ಷೆಯಲಿ ಪರಿತಪಿಸಿದೆನಿರ್ಭೀತ ಹೊಸಗಾಳಿಯಲಿ ಉಸಿರಾಟಕೆ ಕಾಯುತಿರುವೆ ಮನುಜ ಮಾಡಿದ ಮತಪಂಗಡಗಳು ಬೇಲಿ ಕಟ್ಟುತ್ತಲಿವೆಸೌಹಾರ್ದದ ಹೃದಯಗಳಲಿ ಸಮನ್ವಯಕೆ ಕಾಯುತಿರುವೆ ಎದೆಯ ಗೂಡುಗಳಲಿ ನಗಬೇಕು ನಿಸ್ವಾರ್ಥ ಶಮೆಗಳುಕಳಚಿದ ಬೇಡಿಗಳಲಿ ಅನುಸಂಧಾನಕೆ ಕಾಯುತಿರುವೆ **********************************

ಗಜಲ್ Read Post »

ಕಾವ್ಯಯಾನ

ಕಾವ್ಯಯಾನ

ಆಯ್ಕೆ ಪವಿತ್ರ ಎಂ. ‘ಮರ ಬೆಳೆಸಿ’ಧರೆ ಉಳಿಸಿಕೂಗುತಿದೆ ಜಾಹಿರಾತು.ಉರುಳಿಸಿ ಅಗಲಿಸಿಡಾಂಬರರಿಸಿ ಪೋಷಿಸುತಿದೆನಿಯಮದಾದೇಶ.ಅದು ಮತಿಗಾಯ್ಕೆ ಅಗ್ನಿಪರೀಕ್ಷೆಜಾಣ್ಮೆಗಾಯ್ಕೆ ವಿವೇಕಕಾಯ್ಕೆಮಗುವ ಚಿವುಟಿ ಲಾಲಿ ಹಾಡ್ವಕವಲದಾರಿ ಪಯಣ!ತೋರಿಕೆಗೇಕೆ ಧೋರಣೆ?ಜನರಾಯ್ಕೆ ನೀನುಕಾಯ್ವ ಹೊಣೆ ನಿನ್ನದೇ. ***********************

ಕಾವ್ಯಯಾನ Read Post »

ಕಾವ್ಯಯಾನ

ಪವರ್ ಲೂಮ್…!

ಪವರ್ ಲೂಮ್…!(ನೇಕಾರನ ಸ್ವಗತ) ಡಾ. ಅರಕಲಗೂಡು ನೀಲಕಂಠ ಮೂರ್ತಿ ಹೊತ್ತು ಕೂಡ ಮೂಡದ ಹೊತ್ತಿಗೆಈಜುಗಾರ ತುಂಬು ಹೊಳೆ ಧುಮಿಕಿದ ಹಾಗೆ,ಮೈಮುರಿವ ಆಯಾಸದಲುಒಂದು ದಿನ ತಪ್ಪದ ಹಾಗೆಗುಂಡಿಯೊಳು ಇಳಿದರಾಯ್ತು – ಕಾಲೊದರಿ…‘ತನ್ನ ಪುಟ್ಟ ಎಳೆಯ ಹಾಸುಹೊಕ್ಕಲಿನೂಲಿಗೇ ಅರಿವೆ ನೇಯುವ ಸಿರಿಲಾಳಿಗೋ ಮುಗಿಲಂತೆ ಗುಡುಗಿಹರಿದೋಡುವ ತವಕ!’ ನೇಯುವುದುನಮಗೆ ಅಂತರಂಗದಲಿ ಒಪ್ಪಿಅಪ್ಪಿದ ಕಸುಬುಹಗಲಿರಲಿ ಇರುಳಿರಲಿಅಥವ ನಡುರಾತ್ರಿಯೇ ಇರಲಿಬೆತ್ತಲೆ ಬೆಚ್ಚಗೆ ಮುಚ್ಚುವ ಬದುಕಲಿಮನೆಯ ಒಬ್ಬೊಬ್ಬರಿಗೂ ಕೈತುಂಬ ಕೆಲಸ!ಇಷ್ಟಾದರೂ ಒಂದೆರಡು ನವೆದ ಅಂಗಿತೇಪೆಯಾದ ಪಂಚೆ ನಮ್ಮೊಡಲ ಮುಚ್ಚಲುಒಳಗಿರದು ಒಂದು ಕಾಚ ಎಂದೂ! ದಢಕ್ಕನೆ-ನಮ್ಮ ತುತ್ತಿನ ಗಣಿಮಗ್ಗದ ಎರಡಡಿ ಗಣಿಒಮ್ಮೆಲೆ ಬಿದ್ದು ಮಣ್ಣಾದ ಮನೆ…ಎಲ್ಲ ತಟಸ್ಥ ನಿಶಬ್ದ!ಕುಟುಂಬದ ಎಲ್ಲ ಕೈಕಾಲು ಕಚ್ಚಿತುಳಿದು ಮೆರೆದ ವಿದ್ಯುತ್ ತಂತಿ!ಎಲ್ಲಿ ಯಾವ ದೇವರ ಮೊರೆಜಠರದ ನಿಲ್ಲದ ಕೊರೆತದ ಕರೆಗೆ..ಹರಿದುಹೋದ ಬಟ್ಟೆಬಡ ಬದುಕುಕ್ಷಣ ಕ್ಷಣ ಚೂರುಚೂರಾಗಿ… ದಾರ ತುಂಡಾಗಿ ಲಾಳಿ ನಿಂತ ಕ್ಷಣಹರಿದ ದಾರಕ್ಕೆ ಮತ್ತೆ ಗಂಟುಅಥವಾ ಅಂಟು –ಮತ್ತೆ ಲಾಳಿ ಪಯಣ!ಅಂದು ಒಂದೊಮ್ಮೆ…ಈಗ-ನಾನೇ ನಿಂತು ಹೋದ ಘಳಿಗೆಎಲ್ಲಿ ಹುಡುಕುವುದು ಈ ಲಾಳಿಮುಲಾಮು ಕಷಾಯ ನನಗಾಗಿಎತ್ತಿ ಕೂರಿಸಲು ನನ್ನ ಮತ್ತೆಮಗ್ಗದೊಳಗೆನೂಲಿನಲಿ ಹಚ್ಚಲು ಬೆಳಕಿನ ಹೊನಲು…! ********************************** .

ಪವರ್ ಲೂಮ್…! Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ರವಿ.ವಿಠ್ಠಲ.ಆಲಬಾಳ. ಬರೀ ಬತ್ತಿ ಬೇಕಾಗುವುದಿಲ್ಲ ದೀಪ ಬೆಳಗಲುಬರೀ ನೇಹ ಸಾಕಾಗುವುದಿಲ್ಲ ದೀಪ ಬೆಳಗಲು. ಕಡ್ಡಿ ಗೀರಿ ಸುಮ್ಮನಿರಬೇಡಿ ಒಂದು ದೀಪಕ್ಕೆನಿಮ್ಮ ಕೈಗಳಷ್ಟೇ ಆಸರೆಯಲ್ಲ ದೀಪ ಬೆಳಗಲು. ಉರಿಯುವ ದೀಪಕೂ ಗಾಳಿಯ ಅಗತ್ಯವಿದೆಶ್ವಾಸಕೋಶ ಅದಕ್ಕೂಇದೆಯಲ್ಲ ದೀಪ ಬೆಳಗಲು ಮನಸಿನ ಭಾವಗಳಲ್ಲಿ ತಮವೇ ತುಂಬದಿರಲಿಸಂಬಂಧದ ಕೊಂಡಿ ಬೇಕೇಬೇಕಲ್ಲ ದೀಪ ಬೆಳಗಲು ಸುಮ್ಮನೇ ದೀಪ ಹಚ್ಚಿ ದೀಪಾವಳಿ ಎಂದರಾಯಿತೆ?ಮನೆಮನೆಯಲಿ ಸುಖ ಇರಬೇಕಲ್ಲ ದೀಪ ಬೆಳಗಲು. ರವೀ, ಜೀವನದ ಹೆಜ್ಜೆಗುರುತನೆಂದೂ ಮರೆಯಬೇಡಒಂದಿನವಾದರೂ ನಾವು ಗೆಲ್ಲಲೇಬೇಕಲ್ಲ ದೀಪ ಬೆಳಗಲು *******************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅರುಣಾ ನರೇಂದ್ರ ಅವನು ನನ್ನದೆಯಲ್ಲಿ ದೀಪ ಹಚ್ಚಿಟ್ಟಿದ್ದಾನೆ ಸಖಿಮುಚ್ಚಿದ ಕದ ತೆರೆದು ಕತ್ತಲೆ ಬಚ್ಚಿಟ್ಟಿದ್ದಾನೆ ಸಖಿ ನಮ್ಮಿಬ್ಬರ ಪ್ರೀತಿಯನು ಮುಗಿಲೆತ್ತರಕ್ಕೆ ಹಿಡಿದಿದ್ದಾನೆತುಟಿದೆರೆಯದೆ ಒಲವಿನ ಮಾತುಗಳ ಬಿಚ್ಚಿಟ್ಟಿದ್ದಾನೆ ಸಖಿ ಮೊಗ್ಗುಗಳಿಗೆ ನಗುವ ಕಲಿಸುವ ಖಯಾಲಿ ಅವನದುಒಡಲ ಹೊದರಿನಲಿ ನೋವುಗಳ ಮುಚ್ಚಿಟ್ಟಿದ್ದಾನೆ ಸಖಿ ಅಂಗಳದ ಹಣತೆಗಳಿಗೆ ಅವನದೇ ಕಣ್ಣ ಹೊಳಪುಚುಚ್ಚುವ ಮುಳ್ಳುಗಳ ಲೆಕ್ಕಿಸದೆ ಹೂವ ಮುತ್ತಿಟ್ಡಿದ್ದಾನೆ ಸಖಿ ಬೆಳ್ಳಗಿರುವ ಬೆಳಕಿಗೂ ಬಣ್ಣ ಬಳಿಯುತ್ತಾರಲ್ಲ ಅರುಣಾಬರುವ ಬೇಸರಿಕೆಗಳನು ತಡೆದು ಅಲ್ಲಲ್ಲೇ ಹತ್ತಿಟ್ಟಿದ್ದಾನೆ ಸಖಿ **************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ವಿ.ಹುಸೇನಿ ವಲ್ಲೂರು ಜಿಂದಗಿ ತುಂಬಾ ಬರಿ ಇರುಳ ತುಂಬಿದೆ ನಿನ್ನ ಬಿಟ್ಟು ಹೇಗೆ ಇರಲಿ ಸಖಿ!ಮೊಹಬತ್ತಿನ ತುಂಬಾ ಅರಳಿದ ಇರಳು ಓಡಿಸಬೇಕು ಇಲಾಲು ಹಿಡಿದು ಬಾ ಸಖಿ!! ಹಗಲು ನಾಚಿತು ಮೈ ಬಾಚಿತು ಸೆರಗ ತುಂಬ ಗಂಟು ಕಟ್ಟಿಕೊಂಡು!ಜೀವದೊಳಗ ಜೀವ ನೀನು ಹುಡುಕುತ್ತಿದೆ ಮನಸು ಸನಿಹಕ್ಕೆ ಬಾ ಸಖಿ!! ತುಟಿ ಕಚ್ಚಿ ಹೇಳಬೇಕೆಂದ ಒಂದು ಮಾತು ನನ್ನ ಮನಸಲ್ಲೇ ಉಳಿಯಿತು!ನಾ ಹೋದರು ಮಸಣದ ಗೋರಿ ಮೇಲಿನ ಮರಕ್ಕೊಂದು ಹಾಡು ಕಲಿಸು ಬಾ ಸಖಿ!! ಎಷ್ಟೊಂದು ಆಶೆಗಳು ಹೆಪ್ಪುಗಟ್ಟಿವೆ ನಿನ್ನ ನೋಡದೆ ತಲಬಾಗಿಲ ಮುಂದೆ!ಊರ ಅಂಗಳ ತುಂಬಾ ನಿನಗಾಗಿ ರಂಗೋಲಿ ಕಾಯುತ್ತಿದೆ ಬಾ ಸಖಿ!! “ವೀರ” ಪ್ರೇಮಿಯ ಮುಂದೆ ಬತ್ತಿದ ಕೆರೆಯಂಗಳ ಆಗಬೇಡ ಸಖಿ!ಎಷ್ಟು ಸಲ ಸೋತು ಸೋತು ಮಂಡಿ ಊರಿದ್ದೇನೆ ನಿನಗಾಗಿ ಬಾ ಸಖಿ!! *************************************

ಗಜಲ್ Read Post »

ಕಾವ್ಯಯಾನ

ಬಿಕ್ಕಳಿಸಿದ ಅವ್ವ

ಕವಿತೆ ಬಿಕ್ಕಳಿಸಿದ ಅವ್ವ ಡಾ.ಸುಜಾತಾ.ಸಿ ನವ ಮಾಸ ಹೊತ್ತುರಕ್ತ ಮಾಂಸ ತುಂಬಿಆಕಾರ ಕೊಟ್ಟಗರ್ಭಕ್ಕೆ ಕಪ್ಪನೆಕಾರ್ಮೊಡ ಕವಿದುಬದುಕಿನ ಕ್ಷಣ ಕ್ಷಣವುದುರ್ರಗಮನವಾಗಿಸಂಚಾರಿಸುತ್ತಿರಲುಬೇಡಾ ತಾಯಿಸಾಕು ಮಾಡುಗರ್ಭಧರಿಸಿಧರೆಯನ್ನು ಕಾಣಿಸುವುದು ಹಾಲುಣಿಸುವಾಗಕಚ್ಚಿ ಕಚ್ಚಿ ಹೀರಿದ ಮೊಲೆ ತೊಟ್ಟುಆಕಾಶಕ್ಕೆ ಬಾಯ್‌ತೆರೆದುನಿಂತರು ಹಸಿದ ಹೊಟ್ಟೆಗೆಮಾಂಸದ ಹಾಲುಣಿಸಿನಗುವ ಹಾಗೆ ಮಾಡಿದನಿನಗೆ ಇವತ್ತು ಬೀದಿಗೆತಂದಿಕ್ಕಿದ್ದಾರೆ ಮರುಳರು ನೆತ್ತಿಯ ಬಡಿತ ಹೆಚ್ಚಸಬಾರದೆಂದುಗAಧ ಮಿಶ್ರಿತ ದ್ರವ್ಯವನ್ನುಸವರಿ ಮುದ್ದಗಿ ತಿಡಿದನಿನ್ನ ಕೊಮಲ ಬೆರಳಿಗೆಹಾದಿ ಬೀದಿ ಕಸಗುಡಿಸಲುಹಚ್ಚಿ ಮೆರೆಯುತ್ತಿದ್ದಾರೆಸಾಕು ತಾಯಿ ಧರೆಗೆಎಂದು ಕರೆಯಬೇಡ ಮೆತ್ತನೆಯ ಹಾಸಿಗೆ ಹೊದಿಕೆ ಮಾಡಿಮಲಗಲೆಂದು ಕೈಯನ್ನೆ ದಿಂಬವಾಗಿಸಿಪಕ್ಕಕ್ಕೆ ಜಾರಿ ನಿದ್ರೆ ಮಾಡಿದ ನಿನಗೆಸ್ವಾರ್ಥ ತುಂಬಿದ ಮನುಜಹುಚ್ಚಿ ಪಟ್ಟ ಕಟ್ಟಿರೈಲ್ವೆ ಬಸ್ಸಸ್ಟಾಂಡಗಳಲ್ಲಿದಿನ ನಿತ್ಯ ಮಲಗುವಂತೆಮಾಡಿ ಹೆಂಡರ ಮಕ್ಕಳ ಜೊತೆಕುರ್ಲಾನ ಹಾಸಿಗೆಯಲ್ಲಿಮೂಢತ್ವದಿಂದ ಕಾಲು ಚಾಚಿಮಲಗಿದ್ದಾನೆ ತಾಯೇ *********************************** ಹಾಲುಂಡ ಎದೆಗೆಚೂರಿ ಇರಿಸಿದ ಮನುಷ್ಯಇನ್ನೆಂದು ಬದಲಾದಾನುದಯವಿಟ್ಟು ಬಿಕ್ಕಳಿಸಬೇಡಮತ್ತೆ ಮರುಕಳಿಸುತ್ತೆಬಿಕ್ಕಳಿಕೆಯ ನಾದಹೊರ ಬರುವ ಕಾಲ ************************************

ಬಿಕ್ಕಳಿಸಿದ ಅವ್ವ Read Post »

ಕಾವ್ಯಯಾನ

ನೀನೊಂದು ಕಾವ್ಯ

ಕವಿತೆ ನೀನೊಂದು ಕಾವ್ಯ ಆನಂದ ಆರ್.ಗೌಡ ತಾಳೇಬೈಲ್ ನೀನೊಂದು ಕಾವ್ಯಭಾವ ಮನದ ಧರೆಯಲಿನಿನ್ನ ನಡಿಗೆಯೊಳಗಿನ ಮಿಲನತೆನಿಗೂಢ ಬೆಳಕು ಬೀರಿದೆ ನಗುವಿನ ಕೆನ್ನೆ ಗುಳಿ ನಕ್ಷತ್ರ ಕಡ್ಡಿಯಹೊಳಪಿನ ವದನ ಆಗಾಗ ಸಹನೆಯಿಂದಜಾರುವ ಕಣ್ಣಹನಿ ಆರಾಧನೆಯ ಹೃನ್ಮನತಬ್ಬಿಕೊಂಡಾಗಿನ ಧನ್ಯತೆನನ್ನ ತೆಕ್ಕೆಯಲ್ಲಿ ಹಾಗೇಹುದುಗುವ ಪರಿ ಎಲ್ಲವೂ ಮೊದಲಿನಂತೆ ಮಧ್ಯಾಹ್ನದ ನೆರಳಿನಂತೆನನ್ನೊಳಗೆ ನೀನಿದ್ದೆಬೆವೆತ ಎದೆ ಮೇಲಿನ ನಿನ್ನ ಮೊಗನನ್ನ ನಿದಿರೆ ಕದ್ದು ಮೆರೆಯುತ್ತಿದ್ದುಮೊದಲ ಸಲುಗೆ ಅಪ್ಪುಗೆಯ ದಾಹಎಲ್ಲವನ್ನೂ ತಣಿಸಿದ ಪರಿಒಲುಮೆಯ ಕಾವ್ಯದಂತೆ ನಿನ್ನ ಮುನಿಸಿನ ಸನಿಹದಸ್ಪರ್ಶದಲಿ ಯಾವುದೇ ಗಾಯವಿಲ್ಲಮಡಿಕೆಯಲಿ ತುಂಬಾನೇಬೇಸಿ ಉಂಡ ನೆನಪು ಎಂದಿಗೂ ಮಾಸದಿರಲಿಹಾಗೇ ಸುಮ್ಮನೆ ಒಡೆಯದಿರಲಿನನ್ನದೊಂದು ಕನಸಿನಂತೆನಿನ್ನ ಮಡಿಲು ನನ್ನ ಚಿರನಿದ್ರೆಯನೆಲೆಯಾಗಿರಲಿ ! *********************************************

ನೀನೊಂದು ಕಾವ್ಯ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅಲ್ಲಾಗಿರಿರಾಜ್ ಕನಕಗಿರಿ. ನೀವು ಒಂದು ದಿನ ನನಗೆ ಒಪ್ಪಿಗೆ ಕೊಟ್ಟರೆ ನನ್ನ ಕಬ್ರ್ ನಾನೇ ತೋಡಿಕೊಳ್ಳುತ್ತೇನೆ.ನನ್ನ ಗೋರಿ ಕಟ್ಟಲು ತಂದ ಈ ಬಂಡೆಗಲ್ಲಿನ ಮೇಲೆ ನಾ ಹಿಂದೂಸ್ತಾನಿ ಎಂದು ನಾನೇ ಕೆತ್ತಿಕೊಳ್ಳುತ್ತೇನೆ. ನೀವು ಸುಮ್ಮನಿದ್ದರೆ ನನ್ನ ಮಸಣ ನಾನೇ ನಿರ್ಮಿಸಿಕೊಳ್ಳುತ್ತೇನೆ.ನಾಳೆ ನನ್ನ ಗಜಲ್ ಓದುವಾಗ ಯಾರೂ ಧರ್ಮ ಹುಡುಕಬಾರದೆಂದು ಬೇಡಿಕೊಳ್ಳುತ್ತೇನೆ. ನೀವು ದೂರವಿದ್ದರೆ ನನ್ನ ಗೋರಿ ಮೇಲೆ ಬಿಳಿ ಹೂ ಹುಟ್ಟಲು ಕೇಳಿಕೊಳ್ಳುತ್ತೇನೆ.ನನ್ನ ಗೋರಿ ಬಳಿ ಯಾವ ಧರ್ಮದ ಝಂಡಾ ಹಾರದಿರಲಿಯೆಂದು ವಿನಂತಿಸಿಕೊಳ್ಳುತ್ತೇನೆ. ನೀವು ಬರುವುದಾದರೆ ನನ್ನ ಗೋರಿ ಬಳಿ ಗಡ್ಡ ಜುಟ್ಟ ದಾರದ ಕುರುಹು ಕೇಳಬೇಡಿ ಎಂದು ಕೈಜೋಡಿಸುತ್ತೇನೆ.ನನ್ನ ಗಜಲ್ ನಿಮ್ಮ ನಡುವೆ ಮನುಷ್ಯ ಪ್ರೀತಿ ಕಟ್ಟಲಿಯೆಂದು ದುವಾ ಮಾಡುತ್ತೇನೆ. ನೀವು ಧರ್ಮದ ಅಮಲಿನಲ್ಲಿ ಸಾವು ಬೇಡುವುದಾದರೆ ನಾನು ಗೋರಿಯಲ್ಲಿ ಮರು ಜನುಮ ಧಿಕ್ಕರಿಸುತ್ತೇನೆ.ನನ್ನ ಗೋರಿ ಸುತ್ತ ಬಿಳಿ ಪಾರಿವಳದ ದಂಡು “ಗಿರಿರಾಜ”ನ ಐಕ್ಯತೆಯ ಮಂತ್ರ ಪಠಿಸಲಿಯೆಂದು ಬೇಡಿಕೊಳ್ಳುತ್ತೇನೆ **********************************.

ಗಜಲ್ Read Post »

ಕಾವ್ಯಯಾನ

ಕಪ್ಪುಬಿಳುಪಿನ ಚಿತ್ರ

ಕವಿತೆ ಕಪ್ಪುಬಿಳುಪಿನ ಚಿತ್ರ ಬಿದಲೋಟಿ ರಂಗನಾಥ್ ಅವಳಿಗಾಗಿ ಕಾದ ಭರವಸೆಯ ದೀಪಹೊಯ್ಲಾಡುತ್ತಿರುವಾಗಲೇಇರುವೆಯೊಂದು ಕೂತು ಮೂತಿ ತೀಡಿಮುಂಗೈ ಮೇಲಿನ ಗುರುತ ನೋಡಿ ಕಣ್ಣ ಮಿಟುಕಿಸಿತು ಕಾದ ತಂಗೂದಾಣದ ಗೋಡೆಯ ತೊಡೆಗೀಚಿದ ಅಕ್ಷರಗಳ ಮೌನ ಮುರಿದುಬರುವ ಬಸ್ಸಿನ ಸೌಂಡಿಗೆಉಗುರ ಬಣ್ಣ ಕಚಗುಳಿಯಿಟ್ಟುಬೆರಳ ತುದಿಯ ಅವಳ ಸ್ಪರ್ಶದ ನಗುತುಟಿಯ ಕಚ್ಚಿ ಬೆಳಕಾಡಿತು ಆ ಸಂದಣಿಯಲ್ಲೂ ಸೂಟಿಯಿಟ್ಟ ಕಣ್ಣುಕೆನ್ನೆಕಚ್ಚಿದ ಗುರುತನು ಹುಡುಕಿಭಾವಜಾಡಿನ ಬಲೆನೇಯ್ದುಹಕ್ಕಿಮರಿಯ ಪ್ರೇಮದಂಚು ಹೊಳೆದುಚಂದ್ರಗೆರೆಯ ಕರುಣೆ ಮುದ್ದಾಡಿಕಾಲನ ಕರುಳು ಮರುಗಿನೆಲದ ಬೆವರು ಚಿಗುರಿಸಿದ ಕನಸು ಒಂಟಿ ಚಿಪ್ಪಿನಲಿ ನಿಲ್ಲದ ತೂಕದ ಬೊಟ್ಟುಸತ್ಯದ ಬೆನ್ನಿಗೆ ಬರೆದ ಕಪ್ಪುಬಿಳುಪಿನ ಚಿತ್ರಕಾವಳ ಬಂದ ದಿನ ಶಪಿಸಿದ ಮನಸುಕಾಣದ ಅವಳ ಆಕೃತಿಗೆ ಮರುಗಿಜೀವತಂತುವಿನ ಸದ್ದುಬಯಲ ಮಾರ್ದನಿಸಿಭಾವಸ್ಪರ್ಶದ ಗಿಡದ ಬೇರಿನನಾಲಿಗೆ ಒಣಗಿಎದೆ ಬಿರಿದ ಶೋಕಇನ್ನೂ ಕೇಳುತ್ತಿದೆ. **********************

ಕಪ್ಪುಬಿಳುಪಿನ ಚಿತ್ರ Read Post »

You cannot copy content of this page

Scroll to Top