ಕನಸಿನ ಕೊನೆ
ಕವಿತೆ ಕನಸಿನ ಕೊನೆ ನೀ.ಶ್ರೀಶೈಲ ಹುಲ್ಲೂರು ಬೇಗುದಿಯ ಬೆಂಗೊಡದಕರಿಕಾಯದೀ ಕಥೆಗೆನೂರೆಂಟು ಕನಸು…ಅವಳ ಮುಡಿಗೆ ಚಿನ್ನದ ಹೂಕೊರಳಿಗೆ ಮುತ್ತಿನ ಹಾರಮೈಗೆ ಅಂದದ ರೇಷ್ಮೆ ಸೀರೆಬತ್ತಿದೆದೆಗೊಂದು ಚೆಂದದ ರವಿಕೆ! ಮಕ್ಕಳಾಟಕೆ ಬುಗುರಿ ಪೀಪಿತೂಗುಕುದುರೆ ಓಡಲೊಂದುಕಬ್ಬಿಣದ ಗಾಲಿಪಡೆವಾತುರಕೋ ಒಡಲ ತುಂಬಆಸೆಗಳ ನೂರು ಕಟ್ಟು!ಅಂದವಾದ ಈ ಮೈಕಟ್ಟಿನೊಡೆಯನ ತುಡಿತಕೆಯಾವಾಗಲೂ ಚಿಗುರು! ಧಣಿಯ ದಪ್ಪ ಚರ್ಮದಮೇಲೂ ಅದೆಂಥದೋ ಮಮತೆಬಿಡಿಗಾಸು ನೀಡದವನಅಡಿದಾಸನಾಗಿ ಹರೆಯಸವೆಸುವ ಅಪೂರ್ವ ಸಂತಸಅವಳಿತ್ತ ಬೇಡಿಕೆಯಅಕ್ಷಯಾಂಬರಕೆ ಬೆನ್ನು ತಿರುಗಿಸಿದುಡಿಯುವ ನಗ್ನ ಸತ್ಯ! ಸಂಜೆ ಮನೆಯ ದಾರಿಯಲಿಕಸುವು ಕಳೆದುಕೊಂಡ ದೇಹದಜೊತೆಗೆ ಅದೇ ಖಾಲಿ ಕೈಜೋಮುಗೊಂಡ ಕಾಲಿಗೆ ಬುದ್ಧಿಹೇಳಿ ಹೊಡೆಯುತ್ತಾನೆ ಜೋಲಿಓಣಿಯ ತುಂಬಾ ಕೊಳೆತುಸೀತು ಹೋದ ಚರ್ಮದ ದುರ್ನಾತತಿಪ್ಪೆಗುಂಡಿಯ ಸಂಗ ಮಾಡಿದನೀರು ನಿಂತು ಮಲೆತ ಕೆಸರ ಕುಂಡ! ಎಲುಬೆಣಿಸುವ ತನ್ನ ಪ್ರೀತಿ ನಾಯಿಯಮೈತುಂಬಾ ಕಜ್ಜಿ ಗಾಯ ಕೀವುಅರಿಷಿಣ ಸವರಲು ಬಿಡದ ಅದರರೋಷಕೆ ಇವನು ತಬ್ಬಿಬ್ಬುಮಕ್ಕಳ ರೆಪ್ಪೆ ತುಂಬಾ ಪಿಚ್ಚುಸೋರುತಿಹ ಕಟಬಾಯಿ ಜೊಲ್ಲುಗುಂಡು ಹಾಕಲು ಅಂಗಡಿಯವನಜೊತೆ ಮಾಡಿದ ಗಿಲೀಟು ಠುಸ್! ಝಗಮಗಿಸುವ ಈ ಕಾಲದಲೂಮನೆ ಕತ್ತಲೆಯ ಕೂಪಎಣ್ಣೆಯನ್ನು ಬಿಡದೆ ಬಾಟಲಿಯಚಿಮಣಿಯನ್ನೂ ನುಂಗಿದ ಬೆಂಕಿ ಬತ್ತಿಇಲ್ಲಗಳನೆಲ್ಲ ಎದೆಯ ಮೇಲೇಹೇರಿಕೊಂಡು ನಡೆದವನ ಹಿಂದೆಹೊರಟರು ಕೇರಿಯ ಜನ ಅನ್ನುತ್ತಿದ್ದರುಏನೋ ಮಣಮಣ!ಉಳಿದ ಅವಳೆದೆ ಮಾತ್ರಈಗಲೂ ಭಣಭಣ!! *******************************************









