ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನೆತ್ತರಿನ ಮಳೆ ಬಿದ್ದು….

ನೆತ್ತರಿನ ಮಳೆ ಬಿದ್ದು…. ಅಲ್ಲಾಗಿರಿರಾಜ್ ಕನಕಗಿರಿ ನೆತ್ತರಿನ ಮಳೆ ಬಿದ್ದುಮೈ ಮನಸು ಕೆಂಪಾದವೋ. ಕಪ್ಪಾದ ಮೋಡದಲ್ಲಿಕೆಂಪಾದ ಮಿಂಚೊಂದು ಹರಿದು.ಊರು ಕೇರಿ ಕೆಂಪಾದವೋ. ಬಿಸಿಲುಂಡ ನೆಲದಾಗ ನದಿಯೊಂದುಕೆಂಪಾಗಿ ಕಾಡು ಮೇಡು ಕೆಂಪಾದವೋ. ಬರಗಾಲಕ್ಕೆ ಹುಟ್ಟಿದ ಕೂಸುಎದೆಯ ರಕುತ ಕುಡಿದುತೊಟ್ಟಿಲೊಳಗಿನ ಹಾಸಿಗೆ ಕೆಂಪಾದವೋ. ದಿಲ್ಲಿ ಗಡಿಗಳಲ್ಲಿಕೊರೆಯುವ ಚಳಿ ಬಿಸಿಯಾಗಿರೈತರ ಹೊಲಗದ್ದೆಗಳು ಕೆಂಪಾದವೋ. ಬಿಳಿ ಹಾಳೆಯ ಮೇಲೆ ಕವಿಯಅಕ್ಷರದ ಸಾಲುಗಳು ಹಸಿದವರದನಿ ಕೇಳಿ ಕೆಂಪಾದವೋಎಲ್ಲ ಕೆಂಪಾದವೋ……… **********************************

ನೆತ್ತರಿನ ಮಳೆ ಬಿದ್ದು…. Read Post »

ಕಾವ್ಯಯಾನ

ನಮ್ಮ ರೈತ

ಭಾಮಿನಿ ಷಟ್ಪದಿ ನಮ್ಮ ರೈತ ಅಭಿಜ್ಞಾ ಪಿ ಎಮ್ ಗೌಡ ಲೋಕ ಬೆಳಗುವ ದಿವ್ಯ ಮೂರ್ತಿಯುನಾಕ ಮಾಡುತ ಧರೆಯ ಮಡಿಲನುದೇಕುತಿರುತಿಹ ನಿತ್ಯ ಹೊಲದಲಿದಣಿದ ಜೀವವಿದು|ನೂಕು ನುಗ್ಗಲು ಜನರ ಗುಂಪಲುಬೇಕು ಬೇಡುವನರಿತು ಸಾಗುವಬಾಕಿಯುಳಿಸದೆ ಭುವಿಯ ಕಾರ್ಯವಮಾಡೊ ನಿಸ್ವಾರ್ಥಿ|| ಹಸಿರ ಸೇಚಿಸಿ ಚಂದ ಗೊಳಿಸುತನಸುಕು ಕಾಲದೊಳೆದ್ದು ದುಡಿಯುತಕೆಸರು ಧರಣಿಗೆ ಚೆಲುವ ಮಾಡಿನಿಂತು ನೋಡಿಹನು|ಸಸಿನೆಯಿಂದಲೆ ಹಸನು ಮಾಡಿಸಿಬೆಸೆದ ಬಂಧವ ಗಟ್ಟಿಗೊಳಿಸುತತಸಕುಗೊಳ್ಳುವ ಪಾಪ ರೈತನುನಿತ್ಯ ಮರುಗುವನು|| ಭವದ ಭಯವನು ಸಹಿಸಿಕೊಳ್ಳುತದವನ ಸೂಸುವ ಬೆಳೆಯ ಬೆಳೆಯುತಸವಿದ ಭಾವದ ದಿವ್ಯ ಹೂರಣಮೆಚ್ಚಿ ನಡೆಯುವನು|ತವಕದಿಂದಲೆ ಕುಗ್ಗಿ ಹೋಗುವಬೆವರ ಸುರಿಸುತ ಕೆಲಸ ಮಾಡುತಧವಸ ಧಾನ್ಯವ ಬೆಳೆದು ನಲಿದರುಕಷ್ಟ ಕಾರ್ಪಣ್ಯ|| ಮಳೆಯ ಮಾಟಕೆ ಕುಸಿದು ಬೀಳುತಬೆಳೆದ ಬೆಳೆಗೂ ಬೆಲೆಯು ಸಿಗದೇಕಳೆಯು ಕುಂದಿದೆ ರೈತ ಮೊಗವದುಭಾರಿ ಭಂಗದಲಿ|ತೊಳೆಯಬೇಕಿದೆ ಮನದ ಕೊಳೆಯನುಬಳಕೆ ಮಾಡದ ವಸ್ತು ವಿಷಯದಹಳತು ಹೊಸತಿನ ಭವ್ಯ ಸಂಗಮಕೂಗಿ ಕರೆದಿರಲು|| ಅನ್ನ ನೀಡುತ ಜಗವ ರಕ್ಷಿಸಿತನ್ನ ಹೆಸರಲಿ ನೋವು ಬರೆಸುತಭಿನ್ನ ರೂಪದಿ ಮನವ ಗೆದ್ದು ನೋವಪಡುತಿಹನು|ಚಿನ್ನದಂತಹ ಬೆಳೆಯ ತೆಗೆದರುಕನ್ನ ಹಾಕುವ ಮಂದಿ ಮುಂದೆಯೆಮನ್ನದಿಂದಲೆ ಬದುಕ ಸವೆಸುತದುಡಿವ ಯೋಗಿಯಿವ|| *************************************************

ನಮ್ಮ ರೈತ Read Post »

ಕಾವ್ಯಯಾನ

ಆಲದ ಮರದ ಅಳಲು

ಕವಿತೆ ಆಲದ ಮರದ ಅಳಲು ನೂತನ ದೋಶೆಟ್ಟಿ ನಾನೊಂದು ಆಲದ ಮರ ಅಜ್ಜ ನೆಟ್ಟಿದ್ದಲ್ಲಬಿಳಲ ಬಿಟ್ಟು ಬೆಳೆದೆ, ಹರಡಿದೆ ಬಯಲ ತುಂಬ ನಾನು ಬೆರಳ ಚಾಚಿ ನಿಂತಿದ್ದೇನೆಅದರ ದಿಕ್ಕು ಬಯಲಿನಾಚೆಗಿದೆ!ಆ ಬೆರಳ ತುದಿಯವರೆಗೆ ನೋಡಿದಿರಿ, ನಡೆದಿರಿಅಲ್ಲೇ ಗುಂಪಾದಿರಿಓಟವಿನ್ನೂ ಮುಗಿದಿಲ್ಲಇದು ದೂರದಾರಿ ಗೆಳೆಯರೆ ಗಡಿರೇಖೆಗಳ ಅಳಿಸಿದಾಗನಾನು ಒಬ್ಬನೇ ಇದ್ದೆಬುದ್ಧನಿಗೆ ಹತ್ತಿರವಾದೆಅವನೂ ಆಲೂ ತಾನೆ? ನಾನು , ಬುದ್ಧ ಕೇಳಬೇಕಿದೆ ನಿಮ್ಮನ್ನುನಮ್ಮ ಬಿಳಲುಗಳ ಅಂಟಿಕೊಂಡಿರಿನೀವೇಕೆ ಆಲವಾಗಲಿಲ್ಲ? ಸಂವಿಧಾನವ ಕೇಳಿ ನೋಡಿನಾನು ಹೋರಾಡಿದ್ದುಕರ್ತವ್ಯ ಮಾಡುತ್ತಕಾಯಕ ದೇವರು ನನಗೆದೇವರ ಮರೆತ ಹಕ್ಕಿಗೆ ಯಾವ ಲೆಕ್ಕ ? ಬುದ್ಧ ಬೋಧಿಸಿದಂತೆ ಬದುಕಿದಲೋಕ ಅವನ ಹಿಂದೆ ನಡೆಯಿತುಹೆಚ್ಚೇನು ಹೇಳಲಿ? ಇನ್ನೀಗ ಬಯಲಾಚೆ ಜಿಗಿಯಿರಿನಾನು, ಬುದ್ಧ ನಿಮಗಾಗಿ ಕಾಯುತ್ತೇವೆ. *****************************************

ಆಲದ ಮರದ ಅಳಲು Read Post »

ಕಾವ್ಯಯಾನ

ಉಳಿದ ಸಾರ್ಥಕತೆ!

ಕವಿತೆ ಉಳಿದ ಸಾರ್ಥಕತೆ! ಸುಮನಸ್ವಿನಿ ನೀ ಅರ್ಧ ನಕ್ಕು ಉಳಿಸಿದಸಣ್ಣನಗು ನಾನು,ಸ್ವಲ್ಪ ಓದಿ ಕಿವಿ ಮಡಚಿಟ್ಟಹಳೇ ಪುಸ್ತಕ.. ನೀ ಅಷ್ಟುದ್ದ ನಡೆದು ಮಿಗಿಸಿದಕಾಲುಹಾದಿ ನಾನು,ಚೂರೇ ಅನುಭವಿಸಿ ಎದ್ದುಹೋದಸಂಜೆ ಏಕಾಂತ.. ನೀ ತುಸು ಹೊತ್ತೇ ಕೈಯಲಿಟ್ಟುನಲಿದ ಹೂ ನಾನು,ತೃಪ್ತಿಯಾದಷ್ಟು ಸವಿದು ಇರಿಸಿದದೇವಳದ ಪ್ರಸಾದ. ನಿನ್ನೇ ಧೇನಿಸುತ್ತೇನೆ ಈ ಕ್ಷಣಕ್ಕೂದಾರಿಬದಿಯ ಮೈಗಲ್ಲಿನಂತೆಮಿಕ್ಕುಳಿದ ಸಾರ್ಥಕತೆಯತುಂಬಿಕೊಳುವ ನಿರೀಕ್ಷೆಯಲಿ! ****************

ಉಳಿದ ಸಾರ್ಥಕತೆ! Read Post »

ಕಾವ್ಯಯಾನ

ಕಾವ್ಯಯಾನ

ದುಃಖವ ನೇವರಿಸುವೆನೊಮ್ಮೆ ನಾಗರಾಜ್ ಹರಪನಹಳ್ಳಿ ನಿನ್ನ ಬೆರಳ ಹಿಡಿದು ಮಾತಾಡಿಸುವೆಅವುಗಳಿಗೆ ಅಂಟಿದ ದುಃಖವಸಂತೈಸಿ ನೇವರಿಸುವೆನೊಮ್ಮ ಉಸಿರೇ ನೀ ನನ್ನವಳು ನಿನ್ನ ಮುಂಗುರುಳ ಮೂಗಿನ ಮೇಲಿಂದ ಹಿಂದೆ ಸರಿಸಿ, ಕಿವಿಯ ಸಂದಿಯಲಿ ಸಿಕ್ಕಿಸಿ, ತಂಟೆ ತಕರಾರು ಮಾಡಬೇಡಿ ಎಂದು ವಿನಂತಿಸುವೆನಾವಿಬ್ಬರೂ ಮಾತಾಡುವಾಗ ಬೆಳಕೇ ನೀ ನನ್ನವಳು ನಿನ್ನ ಕಿವಿಯೋಲೆಯ ವೈಯ್ಯಾರವ-ನೊಮ್ಮೆ ಹಿಡಿದು ಮಾತಾಡಿಸುವೆನಮ್ಮಿಬ್ಬರ ಮಾತಿನ ಮಧ್ಯೆನೀವೇಕೆ ಇಣುಕುವುದೆಂದುಜೋರು ಮಾಡುವೆ ..ನಾವಿಬ್ಬರೂ ಪಿಸುಮಾತುನಾಡುವ ಮಧ್ಯೆಅವುಗಳ ಪ್ರಶ್ನಿಸುವೆ ಒಲವೇ ನೀ ನನ್ನವಳು ನಿನ್ನ ಕೈ ಬಳೆ ಸದ್ದಿಗೆ ಪ್ರೀತಿಯಿಂದ ಎಚ್ಚರಿಸುವೆಅಪ್ತ ಮಾತಿನ ಮಧ್ಯೆಎಂಥ ಸದ್ದು ನಿಮ್ಮದು ??ಸುಮ್ಮನಿರೆಂದು ವಿನಂತಿಸುವೆ ಮೌನವೇ ನೀ ನನ್ನವಳು ಕಾಲಗೆಜ್ಜೆಗೆ ಬೆರಳಿಟ್ಟುನಮಿಸುವೆ , ನಾವು ಗಾಢ ಚುಂಬನದಲ್ಲಿರುವಾಗಸದ್ದು ಮಾಡಿ, ಜಗಕೆ ಗುಲ್ಲು ಎಬ್ಬಿಸಬೇಡಿರೆಂದು …ಕಾರಣ ಪ್ರೀತಿಯೆಂಬುದು ಗುಟ್ಟು ಜೀವದ್ರವ್ಯವೇ ನೀ ನನ್ನವಳೆಂದು *********************************************

ಕಾವ್ಯಯಾನ Read Post »

ಕಾವ್ಯಯಾನ

ಶಾಯರಿ

ಶಾಯರಿ ಭಾರತಿ ರವೀಂದ್ರ ಕವಿತೆ ನೀನೇಕೆನಲ್ಲನ ನಯನದಿ ಕುಳಿತೆ,ದಿಟ್ಟಿಸಿ ನೋಡಲಾರೆದೃಷ್ಟಿ ತಾಕಿತು ಪಾಪ. ಅಂಗಳದಿ ಬಿಡಿಸಿದಬಣ್ಣ ಬಣ್ಣದ ಚಿತ್ತಾರದಲಿ ನಿನ್ನನ್ನೇಹುಡುಕುತಿದ್ದೆಆದ್ರೆ ಬೆರಳಿಗಂಟಿದ ರಂಗ ವಲ್ಲಿ ಯಲ್ಲಿ ನಿನಿದ್ದೆ ಅಷ್ಟ್ಯಾಕೆ ಕನಸು ಕಾಣ್ತಿ ಹುಚ್ಚಖೋಡಿ ಮನಸಾಅವ್ ನೋಡಿ ನಕ್ಕಿದ್ದುನಿನಗಲ್ಲ. ನಿನ್ನ ಪಕ್ಕ ಇರೋ ಕೆಂಪನೆ ನಿನ್ನ ಗೆಳತಿನ್ನ ನೋಡಿ. ಪಿರೂತಿ ಅನ್ನೋದುಎದ್ಯಾಗ್ ನೆಟ್ಟಿದ ಚೂರಿಹಾಂಗಹಂಗ್ ಬಿಟ್ಟರ ಚುಚ್ಚುತಾನ ಇರತೈತಿತೆಗಿದ್ರ. ಮನುಷ್ಯಾ ಸತ್ತಹೋಗ್ತಾನ

ಶಾಯರಿ Read Post »

ಕಾವ್ಯಯಾನ

ಟಂಕಾಗಳು

ಟಂಕಾಗಳು ಕೆ. ಸುನಂದಾ ಹಸಿದ ಹೊಟ್ಟೆಅರಸು ವೇಷ ; ಖಾಲಿಊಟದ ತಟ್ಟೆಜೀವನ ಸಾಗಿಸಲುಬೀದಿ ನಾಟಕದಾಟ** ನಡೆ ನುಡಿಯುಒಂದಾಗಲು ; ಜೀವನಸಾರ್ಥಕವಾಯ್ತುಕಪಟ ಮೋಸಗಳುಅಧಃಪತನ ವಾಯ್ತು** ನಾನೇ ಎಂಬುದುಅಹಂಕಾರ ; ನನ್ನದೇಎಂದರೆ ನಾಶಜೀವನ ನಡೆಸಲುಅರಿತು ಸಾಗಬೇಕು** ಜೀವನದಲ್ಲಿಸತ್ಯಕ್ಕೆ ; ಸಾವೇ ಇಲ್ಲಅಸತ್ಯ ಬೇಡಸಂಸ್ಕಾರ ವಂತರಿಗೆಜಯ ಕಟ್ಟಿಟ್ಟ ಬುತ್ತಿ** ಸಾವಿರ ಜನಸೇರಿ ಆಡುವ ಮಾತುಲೆಕ್ಕಕ್ಕೆ ಅಲ್ಲಆತ್ಮನ ನಿರ್ಧಾರವುಒಳಿತಿಗೆ ದಾರಿಯು** ಜೀವನ ಸಾರಕೆಲಸ ಮಾಡಿ ತಿನ್ನುಅನ್ಯರನೆಂದೂತಿರಸ್ಕರಿಸದಿರುಒಳಿತಿನ ಗುಟ್ಟಿದು** ಆಡದೇ ಮಾಡುಕೆಲಸ ಕೈ ಬಿಡದುಹಂಬಲವೇಕೆಫಲ ಅವನ ಇಚ್ಛೆನಿಷ್ಕಾಮ ಕರ್ಮ ಸಾಕು* ಸತ್ಯದ ನುಡಿಕೊನೆವರೆಗೆ ನಡಿಅಸತ್ಯ ಬೇಡದೇವನೇ ಬರುವನುಭಕ್ತನಿದ್ದೆಡೆ ಓಡಿ **************************************

ಟಂಕಾಗಳು Read Post »

ಕಾವ್ಯಯಾನ

ನವನವೋನ್ಮೇಶಶಾಲಿನಿ !

ಕವಿತೆ ನವನವೋನ್ಮೇಶಶಾಲಿನಿ ! ಕಾತ್ಯಾಯಿನಿ ಕುಂಜಿಬೆಟ್ಟು ಕವನ ಹುಟ್ಟುತ್ತಿಲ್ಲನವಮಾಸ ಉರುಳಿದರೂಹೆರದೆ ಹೊಟ್ಟೆಯೇ ಮೈ ಆಗಿರುವ ತುಂಬುಬಸಿರಿಯ ಹಾಗೆ ಅಂಗಾತಏದುಸಿರಲಿ ಅವಡುಗಚ್ಚಿ ಕಾಯುತ್ತಿರುವೆ ನಾಳೆ ಮೋಡಗಳ ಗಭ೯ ಸೀಳಿಕೊಂಡುನೇಸರ ಹುಟ್ಟುತ್ತಾನೆಕಾಳುಗಳು ಕಣ್ತೆರೆದುಕವಿತೆಗಳನ್ನು ಹೆರುತ್ತವೆಕಿರಣಗಳು ಆಟಿಕೆಗಳಾಗುತ್ತವೆಸುರುಳಿ ಸುಳಿವ ಕೋಮಲ ಬೆರಳುಗಳಿಗೆಇರುಳಲಿ ಹೂವುಗಳು ಬಸಿರಲಿ ಕಾಯಿಬ್ರೂಣಗಳನ್ನು ಹೆರಲುಕಾಯುತ್ತವೆಎಲ್ಲ ನಾಮ೯ಲ್ ಡೆಲಿವರಿ ನಾಳೆಗಳು ನಗುತ್ತವೆ ಕಾಲದ ಧಾವಂತದ ನಡಿಗೆ ಕಂಡುಮುಸಿಮುಸಿ ಎಂತೆಂಥ ಭಾಸ ಭವಭೂತಿ ಬೋಜಕಾಳಿದಾಸರು ಕಾಳುಗಳಲ್ಲಿ ಕಣ್ತೆರೆದು ಹಾಲತೆನೆತೆನೆಗಳನ್ನು ಉಣಿಸಿ…ಭಾಸನು ಕಾಲಕ್ಕೆ ದಾಸನಾಗಿಭವಭೂತಿಯು ಕಾಲರುದ್ರನ ಹಣೆಯ ವಿಭೂತಿಯಾಗಿಕಾಲ ತಾನು ಹೆತ್ತದ್ದನ್ನೇ ತಾನೇ ತೆತ್ತು… ಕಾಳಿದಾಸನು ಕಾಲದಾಸನಾಗಿ… ಕಾವ್ಯ ಕಾಲ ಕಾಲಕ್ಕೂ ಹೊಸ ಹೊಸತಾಗಿ ಕಾಲಾತೀತವಾಗಿ… ನವನವೋನ್ಮೇಶಶಾಲಿನಿ ! ಓಹ್! ನಾನು ಈಗಷ್ಟೇ ಹೆತ್ತ ಕವಿತೆಒಂದು ಇರುವೆಯ ಹಾಗೆ ಒಂದು ಅಕ್ಕಿಕಾಳು ಹೊತ್ತು ನಡೆಯುತ್ತಲೇ ಇದೆಕಾಲನ ತುಟಿಯ ಸಂದಿಯಲ್ಲಿ *******************************************

ನವನವೋನ್ಮೇಶಶಾಲಿನಿ ! Read Post »

ಕಾವ್ಯಯಾನ

ಒಳ್ಳೆಯ ದಿನವೆಂದರೆ…

ವಿಲಿಯಂ ಬ್ಲೇಕ್ ನ Holy Thursday ಅನುವಾದ: ವಿಠ್ಠಲ ದಳವಾಯಿ ಕಂಪಿಸುವ ದನಿಯು ಹಾಡೇ?ಅದು ಸಂತಸದ ಪದವಾಗಿ ಬದಲಾದೀತೆ?ಬಹುಪಾಲು ಮಕ್ಕಳು ಮೂಳೆ ಚಕ್ಕಳವಾದರೆಇದು ಬಡವರ ಭೂಮಿಯೇ ಹೌದು! ಅವರ ಮಗನ ಕಣ್ಣು ಎಂದೂ ಹೊಳೆಯುವದಿಲ್ಲಬರದಿಂದ ಬಣ್ಣಗೆಟ್ಟು ಒಣಗಿಯೇ ಇವೆ ಹೊಲಬದುಕು ಪೂರಾ ಕಲ್ಲು ಮುಳ್ಳಿನ ಹಾದಿಎಂದಿಗೆ ಕೊನೆ ಮಾಗಿ ಚಳಿಯ ತೇದಿ? ಒಂದು ಸಿರಿವಂತ, ಫಲವತ್ತಾದ ಭೂಮಿಯಲ್ಲಿಅತ್ತು ಅತ್ತು ಸತ್ತು ಹೋಗುವ ಕಂದಮ್ಮಗಳಿಗೆತುತ್ತು ಉಣಿಸಲೂ ಕೈಯೇಳದಿದ್ದರೆಈ ನೆಲ ಭವ್ಯ, ಪವಿತ್ರ ಎನ್ನಬಹುದೇ? ಎಲ್ಲೆಡೆಗೂ ಸೂರ್ಯನ ಬೆಳಗು ಬಂದರೆಎಲ್ಲೆಡೆಗೂ ಭೋರ್ಗರೆದು ಮಳೆ ಸುರಿದರೆಎಂದೂ ಹಸಿವಿನಿಂದ ದಿಗಿಲಾಗೋದಿಲ್ಲ ಪರಿವಾರಆಗ ಕರೆಯಬಹುದು ಅದು ಪವಿತ್ರ ಗುರುವಾರ ****************************************

ಒಳ್ಳೆಯ ದಿನವೆಂದರೆ… Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ರತ್ನರಾಯ ಮಲ್ಲ ಇಲ್ಲಿ ಚುನಾವಣೆಯ ಹಸಿವು ಹೆಚ್ಚಾಗುತಿದೆಮುಖಂಡರುಗಳ ಓಡಾಟವು ಹೆಚ್ಚಾಗುತಿದೆ ಗಲ್ಲಿ-ಗಲ್ಲಿಗಳಲ್ಲಿ ಓಟು-ನೋಟಿನದ್ದೆ ಮಾತುಮನೆ-ಮನಗಳಲ್ಲಿ ಮತ್ಸರವು ಹೆಚ್ಚಾಗುತಿದೆ ಶಾಂತಿಗಾಗಿ ಅವಿರೋಧವೆ ಚಂದ ಎನ್ನುವರುಕೋಟಿ ಕಬಳಿಸುವ ದಾಹವು ಹೆಚ್ಚಾಗುತಿದೆ ಊರು ಉದ್ಧಾರದ ಮಾತುಗಳು ಕೇಳುತಿವೆದೊಡ್ಡವರಲ್ಲಿ ತಿನ್ನುವ ಗುಣವು ಹೆಚ್ಚಾಗುತ್ತಿದೆ ಬೇಲಿಯೇ ಎದ್ದು ಹೊಲ ಮೇಯುತಿದೆ ‘ಮಲ್ಲಿ’ಜನರ ಮನಸುಗಳಲ್ಲಿ ಕ್ರೋಧವು ಹೆಚ್ಚಾಗುತಿದೆ ******************************

ಗಜಲ್ Read Post »

You cannot copy content of this page

Scroll to Top