ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನೀಳ್ಗೆರೆ

ಕವಿತೆ ನೀಳ್ಗೆರೆ ಅಕ್ಷತಾ ರಾಜ್ ಯಾಕೆ ಹೀಗೆ ನಮ್ಮ ನಡುವೆ ಕಾಣದಿಹ ತೆಳ್ಗೊಡೆನಾನೋ !ನೀನೋ! ಉಸುರುತಿಹುದು ನೀಳ್ಗೆರೆ || ಊರು ಕೇರಿ ಸುತ್ತಿ ಸವೆದ ಪಾದ ತಿರುಗಿ ಸೋಲಲುಅಲ್ಲೇ ಮಂಡಿಯೊಳಗೆ ನಿಂತ ಕಾಲ್ಗಳವು ನಕ್ಕವುಮುಸುಕಿನೊಳಗೆ ಜಟ್ಟಿಗುದ್ದು ಕಂಡವನಾರೋ ಅರಿಯರುಮೊದಲು ಯಾರು ಎಂಬ ಈರ್ಷ್ಯೆ ಸುತ್ತಲಿದ್ದ ಜಗದೊಳು ಹಲವು ಬಣ್ಣ ಇಹುದು ಅಲ್ಲಿ ಕಾಣದಿಹ ಕತ್ತಲುನೂರು ರುಚಿಯು ಸೇರಿ ನಡೆಯುತಿಹುದು ಹಿಮನದಿಬೀಸುಗಾಳಿಯೆಲ್ಲಿ ಒಂಟಿ? ಸುತ್ತಲಿಹರು ಬೇಡರುಆದರೊಂದು ಪ್ರಶ್ನೆಯಿಹುದು ಯಾರು ಮುಂದೆ ನಡೆಯೊಳು ಅರಳಿ ನಿಂತ ಕಿರಣದೆದುರು ‘ನಾನು’ ಮಂಜುಬಿಂದುಕರಗಲೇನೋ! ಉಳಿಯಲೇನೋ! ಪ್ರಶ್ನೆಯಿಹುದೇ ಅಲ್ಲಿ?ನಡೆದು ನಡೆವ ಕಾಲುಹಾದಿ ತಿರುವು ಹಲವು ಇಲ್ಲಿಗೆರೆಯ ದಾಟಿ ನಡೆದರದುವೆ ಮಂದೆ ತೊರೆದ ಹಾದಿ ಯಾಕೆ ಹೀಗೆ ನಮ್ಮ ನಡುವೆ ಕಾಣದಿಹ ತೆಳ್ಗೊಡೆನಾನೋ ! ನೀನೋ ! ಉಸುರುತಿಹುದು ನೀಳ್ಗೆರೆ || ******************************************

ನೀಳ್ಗೆರೆ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ವಿನುತಾ ಹಂಚಿನಮನಿ ಹುಟ್ಟಿನಿಂದ ಚಟ್ಟದ ವರೆಗೆ ಹೆಣ್ಣಿಗೆ ಅಸ್ತಿತ್ವಕ್ಕಾಗಿ ಹೋರಾಟಸಿಕ್ಕ ಬದುಕ ಭವಸಾಗರದಲಿ ಈಜಿ ದಾಟುವದಕ್ಕಾಗಿ ಹೋರಾಟ ತಾಯಿಯ ಗರ್ಭದಲ್ಲಿರುವ ಹೆಣ್ಣುಭ್ರೂಣ ನೇಣು ತಪ್ಪಿಸಲು ಸೆಣಸಾಟಪುರುಷಪ್ರಧಾನ ಲೋಕದಲಿ ಪ್ರಾಣಸಹಿತ ಬರುವದಕ್ಕಾಗಿ ಹೋರಾಟ ಒಡಹುಟ್ಟಿರುವ ಅಣ್ಣ ತಮ್ಮಂದಿರೊಂದಿಗೆ ಹಕ್ಕಿಗಾಗಿ ಪರದಾಟಕನಿಷ್ಠ ವಿದ್ಯೆ ಅನ್ನ ಬಟ್ಟೆಯ ಪಾಲು ಪಡೆಯುವದಕಾಗಿ ಹೋರಾಟ ಯೌವನಾವಸ್ಥೆಯಲ್ಲಿ ಕಾಮುಕರಿಂದ ಅತ್ಯಾಚಾರದ ಕೆಣಕಾಟಕನ್ಯೆಗೆ ಬಹುಮೂಲ್ಯ ಶೀಲ ಕಾಯ್ದುಕೊಳ್ಳುವದಕ್ಕಾಗಿ ಹೋರಾಟ ಪತ್ನಿಯ ಬೇಕು ಬೇಡಗಳ ಹತ್ತಿಕ್ಕುತ ಬಾಳ ಬಂಡಿಯ ಎಳೆದಾಟಅವಲಂಬಿತರ ಅವಶ್ಯಕತೆಗಳ ಪೂರೈಸುವದಕ್ಕಾಗಿ ಹೋರಾಟ ಇಳಿವಯಸ್ಸಿನಲಿ ಪರಾಧೀನತೆ ತಂದ ಅವಮಾನದಿಂದ ಸಂಕಟವಿನುತಳ ಜೀವನ ಸಂಜೆಯಲಿ ಪತಿಸುತರ ಆಸರೆಗಾಗಿ ಹೋರಾಟ *********************************

ಗಜಲ್ Read Post »

ಕಾವ್ಯಯಾನ

ಪ್ರೇಮವ್ಯೋಮಯಾನ…!

ಕವಿತೆ ಪ್ರೇಮವ್ಯೋಮಯಾನ…! ಡಾ. ಅರಕಲಗೂಡು ನೀಲಕಂಠ ಮೂರ್ತಿ. ಡಾ. ಅರಕಲಗೂಡು ನೀಲ ಚಂದ್ರನ ಗುರುತು ಹಿಡಿಯುವುದೇ ಹಾಗೆಗುರುತ್ವ ಹಗುರುಮೇಲ್ಮೈ ಭೂಮಿಗಿಂತ ನವುರುಮೇಲೆ ಬಿದ್ದುದೆಲ್ಲದರ ಅಲ್ಪ ಜಿಗಿತಹಾಗಿದ್ದೂ ನಮ್ಮ ಜನ ನೂರಾರುನಗರಿ ನಿರ್ಮಿಸಿ ಚಂದಿರನೀಗನಿರ್ಭರ ಭರ್ತಿ ಭಾರ! ಚಂದ್ರನಾಗರಿಕ ಸೂರ್ಯಕುವರತಾನಲ್ಲಿಂದಲೆ ಇಣುಕಿಅವನಿಯತ್ತ ಕಣ್ಣಲ್ಲೆ ಕುಟುಕಿಭುವನಸುಂದರಿ ವಸುಕಾಂತೆಗೆಗಂಟು ಮೂರನುಅಂಘ್ರಿ ಏಳನುಅಂಗೀಕರಿಸಿ ಪೂರ್ಣಚಂದ್ರನ ಕಡೆರಾಕೆಟ್ಟು ಬಿಟ್ಟನು! ದಿಗ್ಭ್ರಾಂತಳಾದಳು ವಸುಕಾಂತೆಕೇಳರಿಯದೆ ಕಂಡ ಆ ಚಂದ್ರಸಂತೆ!ಭುವಿಯಲ್ಲಿ ಬರಿ ಬಸ್ಸು, ಈಗೀಗಸೂಪರ್ ಸ್ಪೀಡ್ ರೈಲು, ವಿಮಾನಮಾನವರಹಿತ ಅಥವಾಅವನನ್ನೂ ಹೊತ್ತ ರಾಕೆಟ್ಟುಆಗೊಮ್ಮೆ ಈಗೊಮ್ಮೆ ವಿರಳವಾಗಿ! ಇಲ್ಲಿ, ವ್ಯೋಮದ ಉತ್ತುಂಗಕ್ಕೇಅಂತರಂಗಕ್ಕೇ ಪಯಣತಾಸುತಾಸಿಗೂ ಹತ್ತಿಪ್ಪತ್ತುಝೇಂಕರಿಸಿ ಹಾರಾಡುವದೈತ್ಯಾಕಾರ ರಾಕೆಟ್ಟು!ನಭೋನಿಲ್ದಾಣಗಳಲಿ ಎಲ್ಲೆಲ್ಲೂಕಂಡರಿಯದ ಸೌಲಭ್ಯ ಸಂಪತ್ತು…ಕ್ಷೀರಪಥದ ಎಲ್ಲ ಗ್ರಹಕ್ಕೂಕ್ಷುದ್ರಗ್ರಹ ಒಂದೊದಕ್ಕೂಸಂಪರ್ಕದೊತ್ತಡಹಾಗೆಯೇ ವ್ಯೋಮಗರ್ಭದಅನಂತದಲ್ಲಿ ಅವಿತಕಂಡು ಕಾಣದೆಲ್ಲ ದೈತ್ಯ ಕಾಯಕ್ಕೂಕ್ಷಣಾರ್ಧದಲಿ ಚಿಮ್ಮಿ ಮಿಂಚಂತೆಭುಸುಗುಟ್ಟು ಹರಿದೋಡಿ ಮಾಯಸುರಿಮಳೆ ರಾಕೆಟ್ಟು…! ಸೂರ್ಯಕುವರ ವಸುಕಾಂತೆಇಬ್ಬರೂ ವೈವಾಹಿಕ ಮಧುಸ್ಪರ್ಷಕೆಹಾರಿದಲೆಲ್ಲ ವಿನೂತನ ಚಂದ್ರರೂಪಕಣ್ಣು ತುಂಬಿ ಚಲ್ಲುವ ಬೆಳದಿಂಗಳುಅಮರಾಮೃತ ಮೀರಿದಮೃದು ಮಧುರ ಮಧುಪಾತದಓಕುಳಿಯಲಿ ಈಜು ಈಜಾಟ… ***************************** ಕಂಠ ಮೂರ್ತಿ.

ಪ್ರೇಮವ್ಯೋಮಯಾನ…! Read Post »

ಕಾವ್ಯಯಾನ, ಗಝಲ್

ಗಜಲ್‌

ಗಜಲ್ ಪ್ರಭಾವತಿ ಎಸ್ ದೇಸಾಯಿ ಬಳ್ಳಿಯಂತೆ ಬಳಕುತ ಗೆಜ್ಜೆ ಸದ್ದಲಿ ಜಗ ಗೆಲ್ಲುವ ಆಸೆಕಣ್ಣ ನೋಟದಲಿ ಹೂ ಬಾಣ ಹೂಡಿ ಹೃದಯ ಕೊಲ್ಲುವ ಆಸೆ ಎದೆ ಹೊಲದಲಿ ಗೆಜ್ಜೆ ಹೆಜ್ಜೆ ಮೂಡಿಸುತ ಹೊಸ ಹಾದಿ ಮಾಡಿದೆಒಲವಿನ ಅಮಲೇರಿಸುವ ಹನಿ ಹನಿ ಶರಾಬು ಚೆಲ್ಲುವ ಆಸೆ ಪ್ರೀತಿಯ ಬನದಲಿ ಚಿಗುರಿದ ಹೂ ಕಾಯಿ ಹಣ್ಣು ಮನ ಸೆಳೆಯುತಿವೆಅನುರಾಗದ ತೋಟದಲ್ಲಿನ ಮಾಗಿದ ಮಾವು ಮೆಲ್ಲುವ ಆಸೆ ಮನದಂಗಳದಲಿ ಗರಿಬಿಚ್ಚಿದ ನಾಟ್ಯ ಮಯೂರಾಗಿ ಕುಣಿದೆಬೆರಗು ಮೂಡಿಸುವ ಚೆಲುವ ಶಿಲಾ ಬಾಲೆಯಾಗಿ ನಿಲ್ಲುವ ಆಸೆಗೆ ಮೃದಂಗದ ನಾದ ತಾಳಕ್ಕೆ ತುಂಡಾಯಿತು ನೂಪುರ ಮಾಲೆಅವನ ಧ್ಯಾನ “ಪ್ರಭೆ”ಯಲಿ ತಲೀನಳಾಗಿ ಸೋಲುವ ಆಸೆ ************************************

ಗಜಲ್‌ Read Post »

ಕಾವ್ಯಯಾನ

ಹೊಸ‌ ದಿಗಂತ

ಕವಿತೆ ಹೊಸ‌ ದಿಗಂತ ಅಕ್ಷತಾ ಜಗದೀಶ ಚುಮ್ಮು ಚುಮ್ಮು‌ ನಸುಕಿನಲಿಮುಂಜಾನೆಯ ನಡಿಗೆ..ತಾ ಬರುವ ಸೂಚನೆ ನೀಡುತದಿನಕರ ಮೂಡುವ ಘಳಿಗೆ..ಹಕ್ಕಿಗಳ ಮಧುರ ಇಂಚರ ನಾದತಲೆ ತೂಗುತ ನಿಂತಿವೆನಡೆವ ದಾರಿಯ ಇಕ್ಕೆಲಗಳಲ್ಲಿಹೂ ಗಿಡ ಬಳ್ಳಿಗಳು….. ಅದೇಕೋ ಏನೋ..ಕಾಣದಾಗಿದೆ ಇಂದುಆ ಸುಂದರ ಕ್ಷಣಗಳು..ಮುಂಜಾನೆ ನಡಿಗೆ ಇದೆ…ಮೈ ಕೊರೆಯುವ ಚಳಿಯು ಇದೆದಿನಕರನ ಆಗಮನವು ಆಗುತಿದೆ..ಆದರೇನು…?ಹಕ್ಕಿಗಳ ನಾದವಿಲ್ಲದಾರಿಯ ಇಕ್ಕೆಲಗಳಲ್ಲಿಸ್ವಾಗತ ಕೋರುತ ನಿಂತಮರಗಿಡಗಳು ಕಾಣದಾಗಿದೆ… ಹಾ! ಈಗ ಅರಿವಾಯಿತೆನಗೆನಾ ನಡೆದ ದಾರಿ ಈಗಮರ ಗಿಡಗಳ‌ ನುಂಗಿ ನಗರವಾಗಿದೆಕೆರೆಗಳಿಲ್ಲ ಮರ ಗಿಡಗಳಿಲ್ಲಚಿಲಿಪಿಲಿ ಹಾಡುವ ಹಕ್ಕಿಗಳಿಲ್ಲ ವಿಪರ್ಯಾಸವೆಂದರೆ …..ಅದರ ಆಲೋಚನೆ ನಮಗಿಲ್ಲ‌‌..ಹೊಸ ದಿಗಂತದ ಹಾದಿಯಲಿಬಾಡಿಹೋಗಿವೆ ಹೂ ಗಿಡ ಬಳ್ಳಿ.. ಮತ್ತೆ ಮೂಡಣದಲಿ ರವಿ ಮೂಡುತಲಿರುವ…ಮುಂಜಾನೆಯ ನಡಿಗೆ ಮತ್ತೆನಿರಂತರವಾಗಿ ಸಾಗಿದೆಹೊಸ ದಿಗಂತದೆಡೆಗೆ….. *********************************

ಹೊಸ‌ ದಿಗಂತ Read Post »

ಕಾವ್ಯಯಾನ, ಗಝಲ್

ಗಜಲ್‌

ಗಜಲ್ ರತ್ನರಾಯಮಲ್ಲ ಮಕ್ಕಳಾಡುವ ಅದಲು-ಬದಲು ದೊಡ್ಡವರು ಆಡುತಿದ್ದಾರೆ ಇಂದುದಡ್ಡತನದಿಂದ ಸಮಾಜದ ನೆಮ್ಮದಿಗೆ ವಿಷ ಹಾಕುತಿದ್ದಾರೆ ಇಂದು ತಲೆ ಹಿಡಿಯುವವರ ದಂಡು ಕೌರವರನ್ನೂ ಮೀರಿಸುತ್ತಿದೆ ಇಂದುಸಾಕ್ಷರರೆ ಮೌಲ್ಯಗಳನು ರಣಹದ್ದುಗಳಂತೆ ತಿನ್ನುತಿದ್ದಾರೆ ಇಂದು ಶೀಲವು ಹಣದ ನಶೆಯಲ್ಲಿ ಶಿಥಿಲವಾಗುತಿರುವುದೆ ಹೆಚ್ಚು ಇಂದುವಾಸನೆಯಲ್ಲಿ ಪರಿಚಿತರೆ ಅಪರಿಚಿತರಾಗಿ ಕೊಲ್ಲುತಿದ್ದಾರೆ ಇಂದು ಮಾಂಸ ಮಾರುವ ಸಂತೆಯಲ್ಲಿ ಮನಸ್ಸು ಅನಾಥವಾಗಿ ನರಳುತಿದೆನಮ್ಮವರೇ ನಮ್ಮ ಮಾನ ಹರಾಜು ಮಾಡಲು ಕಾಯುತಿದ್ದಾರೆ ಇಂದು ಕಲಬೆರಕೆಯ ತಾಂಡವ ಪ್ರೀತಿಯಲ್ಲಿ ಸಹಿಸಲು ಆಗುತಿಲ್ಲ ‘ಮಲ್ಲಿ’ಯಾರನ್ನೂ ದೂರಲಾಗದೆ ಜನರು ದಿನಾಲೂ ಸಾಯುತಿದ್ದಾರೆ ಇಂದು ***************************

ಗಜಲ್‌ Read Post »

ಕಾವ್ಯಯಾನ

ಮಣ್ಣಿಗೆ ವಿದಾಯ ಹೇಳುತ್ತೇವೆ!

ಕವಿತೆ ಮಣ್ಣಿಗೆ ವಿದಾಯ ಹೇಳುತ್ತೇವೆ! ಅಲ್ಲಾಗಿರಿರಾಜ್ ಕನಕಗಿರಿ ಗುಟ್ಕಾ- ತಂಬಾಕು ಬೀರ್ – ಬ್ರಾಂಡಿಮಾರುವವರು ದೇಶವಾಳುತ್ತಿದ್ದಾರೆ.ಅವರ ವಸ್ತುವಿಗೆ ಅವರೇ ಬೆಲೆ ನಿಗದಿ ಮಾಡಿಕೊಂಡು. ಆದರೆ ನಾವು ಇಡೀ ದೇಶಕ್ಕೆ ಅನ್ನ ಕೊಡುತ್ತೇವೆ.ಬೆಳೆಗೂ ಬದುಕಿಗೂ ಬೆಲೆ ಇಲ್ಲದೆ ಬೀದಿ ಪಾಲಾಗಿದ್ದೇವೆ. ಅನ್ನ ಉಂಡವರು ಒಂದು ಸಲ ಯೋಚಿಸಿ ನೋಡಿ.ಅನ್ನದಾತನ ನೋವು ಸಾವು ಸಂಕಟ ಏನೆಂದು. ಇಲ್ಲವೆಂದರೆ ನಾವೇ ಮಣ್ಣಿಗೆ ವಿದಾಯ ಹೇಳುತ್ತೇವೆ.ಮಕ್ಕಳ ಹೆಗಲ ಮೇಲೆ ಇಡಬೇಕೆಂದ ನೇಗಿಲು,ನಿಮ್ಮ ಮ್ಯೂಸಿಯಂನಲ್ಲಿ ಇಟ್ಟು ಸಲಾಂ ಹೊಡೆಯುತ್ತೇವೆ ***************************

ಮಣ್ಣಿಗೆ ವಿದಾಯ ಹೇಳುತ್ತೇವೆ! Read Post »

ಕಾವ್ಯಯಾನ

ಎದೆಯಲ್ಲಿ ಅಡಗಿದ ಬೆಳಕು

ಕವಿತೆ ಎದೆಯಲ್ಲಿ ಅಡಗಿದ ಬೆಳಕು ಡಾ ರೇಣುಕಾ ಅರುಣ ಕಠಾರಿ ನನಗೆ ನಾನಾಗುವಾಸೆನಿನ್ನನೂ ಒಳಗೊಂಡು ನೋವಿನ ನಡುವೆಯೂನನ್ನೆದೆಯಲಿ ಹೂವರಳಿಸಿನಕ್ಷತ್ರ ಪುಂಜಗಳ ಕಣ್ತಂಬಿಸಿಆ ಆಕಾಶದಲ್ಲಿ ದಾರಿ ಕಾಣುವಾಸೆ ಹೆಚ್ಚಾಗಿದೆ. ನನ್ನ ಪ್ರೀತಿ-ನೀತಿದುಃಖ-ದುಮ್ಮಾನಗಳ ನಡುವೆಆಸೆ ನಿರಾಸೆಗಳ ಕೇಂದ್ರದ ಸಾಗರದಲ್ಲಿಯುಬದುಕಿನ ಸಾಂದ್ರ ನೀನೇ. ಪುಟಿದೇಳುವುದು ಒಮ್ಮೊಮ್ಮೆ ನಿನ್ನಲೂಆರ್ಭಟ ದುರಂಕಾರಎದೆಯಲ್ಲಿ ಅಡಗಿದಶ್ರೇಷ್ಠತೆಯ ಹಾವ ಭಾವದಲ್ಲಿಅಲ್ಲಗಳಿದಾಗಲೆಲ್ಲ ನಾನುಅನುದಿನವು ಸಾಯುತಲಿರುವೆ. ಆಗಾಗಸಂಜೆಯ ತಂಗಾಳಿಯ ಬೊಗಸೆಯಲಿಕೆನ್ನೆಗಳ ತುಂಬಿಸಿಎದೆಗೇರಿಸಿಕೊAಡಾಗನಿನ್ನೆದೆಯ ಬಡಿತದ ಸದ್ದುಗಳಲೆಕ್ಕ ಹಾಕುವೆನು. ಪ್ರತಿ ಮಿಡಿತವೂಬದುಕಿನಜಮಾ ಖರ್ಚಿನ ಪುಟಗಳೇ.ಪುಟಗಳ ಲೆಕ್ಕವೆ ಮೀರಿ ನಿಂತಿರುವಚಿಲುಮೆಯ ಸಾಕ್ಷತ್ಕಾರ ನೀನು. ಇದಕ್ಕೆಎಲ್ಲವುಗಳ ನಡುವೆನಿನ್ನನೂ ಒಳಗೊಂಡುನನಗೆ ನಾನಾಗುವಾಸೆ. *******************************

ಎದೆಯಲ್ಲಿ ಅಡಗಿದ ಬೆಳಕು Read Post »

ಕಾವ್ಯಯಾನ

ಪಾತ್ರೆಗಳು ಪಾತ್ರವಾದಾಗ

ಕವಿತೆ ಪಾತ್ರೆಗಳು ಪಾತ್ರವಾದಾಗ ಶಾಲಿನಿ ಆರ್. ಬೇಳೆ ಬೇಯಿಸೋಕೆಪಾತ್ರೆ ಬೇಕೆ ಬೇಕು!ಹೊಟ್ಟೆ ತುಂಬಿಸೋಕೆಮನದ ಅಗಣಿತಭಾವಗಳತಣಿಸೋಕೆ? ಹುಟ್ಟಿದ ಹಸಿವಿಗೆತಿನುವ ಹಂಬಲಕೆರುಚಿ ನೋಡೋಕೆಕಾದ ಮನಗಳಿಗೆಉಣ ಬಡಿಸೋಕೆಹೇಗಾದರೂ ಸರಿ! ಹದವಾದ ರುಚಿತರಿಸಬೇಕು,ಬೆಂದ ಬೇಳೆಗಳಬತ್ತಿಸಿ,ಕರಗಿಸಿಗುರಾಡಿ ,ಬಾಡಿಸಿಮತ್ತಷ್ಟು ನೀರುಣಿಸಿನೆಪಕ್ಕೊಂದು ಪಾತ್ರೆಯಿರಿಸಿ! ಹಸಿದವರಿದ್ದರೆಹೇಳಿ?ಬೆಂದ ಬೇಳೆಗಳ ರುಚಿಗೆ!ಹಸಿವಿಲ್ಲದವರನ್ನುಕರೆತನ್ನಿ ,ಹಸಿವ ಇಂಗಿಸಲೋ?ಇಲ್ಲವಾದರೆ,ರುಚಿ ಸವಿಯಲು! ಸ್ವಲ್ಪ ಹುಳಿ,ಖಾರಒಗ್ಗರಣೆ ಸಾಕು!ಇನ್ನಿತರ ಮಸಾಲಪದಾರ್ಥಗಳುಬೇಕಿದ್ದರೆಪಾತ್ರಕ್ಕೊಪ್ಪುವಂತೆ!ರುಚಿಗೆ ಇಂತಿಷ್ಟೇ ಉಪ್ಪು,ಮುಖ ಕಿವುಚದಂತೆ ಮತ್ತೆ! ಹಿತ ಮಿತವಾದಪದಾರ್ಥಗಳುಪಾತ್ರಗಳ ಸೋಕಿನಾಲಿಗೆಯ ರುಚಿ!ಮನಕಿಳಿದ ಗೆಲುವೋ?ಬೆಂದ ಬೇಳೆಯದೋಮನದಗಲದಪಾ(ತ್ರೆ)ತ್ರ ದೋ??? ****************************************************

ಪಾತ್ರೆಗಳು ಪಾತ್ರವಾದಾಗ Read Post »

You cannot copy content of this page

Scroll to Top