ನೀಳ್ಗೆರೆ
ಕವಿತೆ ನೀಳ್ಗೆರೆ ಅಕ್ಷತಾ ರಾಜ್ ಯಾಕೆ ಹೀಗೆ ನಮ್ಮ ನಡುವೆ ಕಾಣದಿಹ ತೆಳ್ಗೊಡೆನಾನೋ !ನೀನೋ! ಉಸುರುತಿಹುದು ನೀಳ್ಗೆರೆ || ಊರು ಕೇರಿ ಸುತ್ತಿ ಸವೆದ ಪಾದ ತಿರುಗಿ ಸೋಲಲುಅಲ್ಲೇ ಮಂಡಿಯೊಳಗೆ ನಿಂತ ಕಾಲ್ಗಳವು ನಕ್ಕವುಮುಸುಕಿನೊಳಗೆ ಜಟ್ಟಿಗುದ್ದು ಕಂಡವನಾರೋ ಅರಿಯರುಮೊದಲು ಯಾರು ಎಂಬ ಈರ್ಷ್ಯೆ ಸುತ್ತಲಿದ್ದ ಜಗದೊಳು ಹಲವು ಬಣ್ಣ ಇಹುದು ಅಲ್ಲಿ ಕಾಣದಿಹ ಕತ್ತಲುನೂರು ರುಚಿಯು ಸೇರಿ ನಡೆಯುತಿಹುದು ಹಿಮನದಿಬೀಸುಗಾಳಿಯೆಲ್ಲಿ ಒಂಟಿ? ಸುತ್ತಲಿಹರು ಬೇಡರುಆದರೊಂದು ಪ್ರಶ್ನೆಯಿಹುದು ಯಾರು ಮುಂದೆ ನಡೆಯೊಳು ಅರಳಿ ನಿಂತ ಕಿರಣದೆದುರು ‘ನಾನು’ ಮಂಜುಬಿಂದುಕರಗಲೇನೋ! ಉಳಿಯಲೇನೋ! ಪ್ರಶ್ನೆಯಿಹುದೇ ಅಲ್ಲಿ?ನಡೆದು ನಡೆವ ಕಾಲುಹಾದಿ ತಿರುವು ಹಲವು ಇಲ್ಲಿಗೆರೆಯ ದಾಟಿ ನಡೆದರದುವೆ ಮಂದೆ ತೊರೆದ ಹಾದಿ ಯಾಕೆ ಹೀಗೆ ನಮ್ಮ ನಡುವೆ ಕಾಣದಿಹ ತೆಳ್ಗೊಡೆನಾನೋ ! ನೀನೋ ! ಉಸುರುತಿಹುದು ನೀಳ್ಗೆರೆ || ******************************************









