ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಾಯ್ಕು

ಹಾಯ್ಚಳಿ! ಶಾಲಿನಿ ಆರ್. ೧)ಚಳಿ ಸುಳಿಗೆ    ಶಿಲೆಯಾದಳವಳು    ಕರಗದಂತೆ ೨)ಬೆಚ್ಚಿಸದಿರು    ಬೆಚ್ಚಗಿಡು ನೆನಪಾ    ಕೊನೆ ಚಳಿಗೆ ೩)ಮಂಜಿನ ಹನಿ    ಕರಗಲರಿಯದು    ಬೆಚ್ಚಗಾದರೂ, ೪)ಬಿರಿದ ತುಟಿ    ನೆನಪಿಸುತಿದೆಯೋ,    ವಸಂತ ಋತು, ೫)ಬಿಸಿ ಬಿಸಿ ಚಾ    ಮುಂಜಾನೆಯ ಚಳಿಗೆ    ನೀ ನೆನಪಾದೆ, ೬)ಹಗಲು ಮಾಯ    ಇರುಳ ಹಾಸಿನ ಮೇಲೆ    ಚಳಿ ಗಾಳಿಗೆ ೭)ನಮ್ಮೀ ಪ್ರೀತಿಗೆ    ಮರೆಯಾಯಿತೇನು    ಹಗಲು ನಾಚಿ, ೮)ತೇವಗೊಂಡಿದೆ    ಮತ್ತೆ ಆರುವ ಮುನ್ನ    ಹೇಮಂತ ಋತು, ೯)ಮುಗಿಯದಿದು    ಮಾಗಿ ಮುಗಿವ ಮುನ್ನ    ಮಬ್ಬಿನ್ಹಗಲು ೧೦)ಹಗಲು ನುಂಗಿ       ಬಿಗಿಯಾದವು ಇರುಳು       ಬಿಗುಮಾನದಿ ******************    

ಹಾಯ್ಕು Read Post »

ಕಾವ್ಯಯಾನ

ಯುಗ ಯುಗದ ಸೀತೆಯರು

ಯುಗ ಯುಗದ ಸೀತೆಯರು ರೇಶ್ಮಾಗುಳೇದಗುಡ್ಡಾಕರ್ ಇದು ಚರಿತ್ರೆಯ ಅವತಾರವಲ್ಲನಿತ್ಯವು ಉದ್ಭವಿಸುವಉದ್ವೇಗಗಳಿಗೆ ಇತಿಹಾಸಮರುಕಳಿಸುತ್ತಲೇತನ್ನ ಇರವ ಸಾಧಿಸುತ್ತದೆಯಲ್ಲ … ರಾಮನಿಲ್ಲದ ಸೀತೆಯರಿಗೆಕಮ್ಮಿ ಇಲ್ಲ ಈ ಜಗದಲ್ಲಿಒಡಲ ಕುಡಿಗಾಗಿ ಬದುಕಸವೆಸುವಳು ಕಂಡವರಸೆರಗಲ್ಲಿ ಗಂಡ ಬಿದ್ದರು ತನ್ನಬೆವರ ಹನಿಯ ದೀಪವಾಗಿಸಿಮನೆಯ ಬೆಳಗುವಳು …. ನೊರೆಂಟು ಮಾತುಗಳುಹಾದಿ – ಬೀದಿಯ ರಂಪಗಳುಎಷ್ಟಿದ್ದರು ಮನವದು ಗಟ್ಟಿಯಾಗುತ್ತಲೆಸಾಗುವದು ಕಲ್ಲು ಬಂಡೆಯನ್ನು ಮೀರಿಸಿಬದುಕಿನ ದಾರಿಯ ಹಿಡಿಯುವುದು ಸಮಯದೊಂದಿಗೆ ಓಡಿತಿಂಗಳ ಪಗಾರವನು ಕಾಪಿಟ್ಟುಪುಟ್ಟ ಪುಟ್ಟ ಕನಸ ನೇರವೇರಿಸಿತನ್ನ ಒಡಲ ಸಿರಿಗಾಗಿ ನಗುವ ಕಾಣುವಳುಎಲ್ಲ‌ ನೋವ ಮರೆತು ….. ತ್ರೇತಾಯುಗದ ಸೀತೆಗೆ ಕಾಡಾದರೂ ಇತ್ತು ;ನವಯುಗದ ಹೆಣ್ಣುಗಳಿಗೆಕಾಂಕ್ರೀಟ್ ಕೋಣೆಯು ದಹಿಸುವದುಅಂತರಾತ್ಮವ ಬಡಿದು ಹಿಡಿದುಹಿಪ್ಪೆಮಾಡಿ ಸಂತಸ ಪಡುವದು ..! ಸೀತೆಯ ಯುಗವು ಅಳಿಯದೆನವನವೀನ ಸಮಸ್ಯೆಗಳ ಸರಮಾಲೆಯಲ್ಲಿರೂಪಾಂತರಗೊಂಡು ಹೊಸಮನ್ವಂತರ ವಾದರೊ,ಅವಳ ನೋವಿನ ಛಾಯೇ ಉಳಿಸಿಕೊಂಡುಮತ್ತೆ ಮತ್ತೆ ಅವತರಿಸುತಿಹುದು …. *************************************

ಯುಗ ಯುಗದ ಸೀತೆಯರು Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಮರುಳಸಿದ್ದಪ್ಪ ದೊಡ್ಡಮನಿ ಹಸಿದ ಕೂಸಿಗೆ ಹಾಲಿಲ್ಲದೆ ಅಳುತಿದೆ ಸಖಿಸೊಸಿದ ಹಾಲಿಗೆ ವಿಷವು ಬೆರೆತಿದೆ ಸಖಿ ದುಡಿವ ಕೈಗೆ ಕೆಲಸವಿಲ್ಲದೆ ನೊಂದಿದೆ ಬದುಕುಗಗನಕ್ಕೆರಿದ ಬೆಲೆ ಕಂಡು ಮನ ಒದ್ದಾಡುತಿದೆ ಸಖಿ ಉಳ್ಳವರ ಉಡಿ ತುಂಬಿ ತುಳುಕ್ಯಾಡಿ ಹೋಗಿವೆಬಡವರ ಮನೆ ದೀಪಕೆ ಎಣ್ಣೆಇಲ್ಲದೆ ಆರುತಿದೆ ಸಖಿ ಎಲ್ಲಿಯ ತನಕ ಹುಚ್ಚಾಟ ಕಚ್ಚಾಟ ತಿಳಿಯದುಮನು ಕುಲಕೆ ಹೊಸೆದು ಬತ್ತಿ ಇಡುತಿದೆ ಸಖಿ ಮರುಳ ನಮ್ಮನಾಳುವ ದೊರೆಗೆ ಸಿರಿವಂತರ ಚಿಂತಿನಾಡು ಹಾಳಾಗುತ ನಾಳೆ ಹತ್ತಿರ ಬರುತಿದೆ ಸಖಿ ******************************************

ಗಜಲ್ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ನೂರುಲ್ಲಾ ತ್ಯಾಮಗೊಂಡ್ಲು ನಿನ್ನ ಶಹರಿನಲಿ ಬೆಳಕಿಗೆ ಕಾಲು ಮೂಡಿದಾಗ ನೀನಿದ್ದೆಆ ಬೃಂದಾವನದಲಿ ದುಂಬಿ ಮಕರಂದ ಹುಡುಕುವಾಗ ನೀನಿದ್ದೆ ಕಣ್ಣ ಕೊಂಬೆಯ ಮೇಲೆ ನಕ್ಷತ್ರ ಮಿನುಗುವ ಹೊತ್ತುಭರವಸೆಯ ಕಿರಣವೊಂದು ರೆಪ್ಪೆ ಮೇಲೆ ಹರಿದಾಗ ನೀನಿದ್ದೆ ಯಾವುದೊ ವಿಳಾಸವಿಲ್ಲದ ದಾರಿಯಲಿ ಕಾಲುಗಳು ಎಡವಿದವು ನಿಜಆದರೆ ನೀ ಹೊರಳಿ ಹೋಗಿದ್ದ ದಾರಿಯಲಿ ಅತ್ತರು ಘಮಿಸಿದಾಗ ನೀನಿದ್ದೆ ಯಾವುದದು ಮರೆಮಾಚುವ ವಚನ ಕಾಡಿತ್ತೊ ಅರಿಯೆಆದರೂ ನಿನ್ನ ಆ ಮರೆಮಾಚಿಕೆ ವಿಫಲವಾದಾಗ ನೀನಿದ್ದೆ ಗೊತ್ತು ನಿರೀಕ್ಷೆಗಳೆಲ್ಲ ಹುಸಿಯಾಗದು ಎಂದೂ ‘ಸಾಘರ್’ಕಾಡುವಿಕೆಗೂ ಒಂದು ಮಿತಿಯಿದೆ ಅದು ಖಚಿತವಾದಾಗ ನೀನಿದ್ದೆ *******************************************

ಗಝಲ್ Read Post »

ಕಾವ್ಯಯಾನ

ಇಬ್ಬನಿಯ ಹನಿಗಳು

ಇಬ್ಬನಿಯ ಹನಿಗಳು ನಾಗರಾಜ ಹರಪನಹಳ್ಳಿ. -1-ರಂಗೇರಿತು ಕೆನ್ನೆನೀ ಬಂದಸುಳಿವು ಸಿಕ್ಕಿರಬೇಕುಒಲವಿಗೆ -2-ಎಲೆ ಅಲುಗುತ್ತಿಲ್ಲಕತ್ತಲ ಆವರಣಭೂಮಿಒಬ್ಬಂಟಿಯಾಗಿದೆ -3-ಹೆಜ್ಜೆಗಳಿಗೆಎದೆಗೊಟ್ಟಿದೆದಾರಿಒಲವಿಲ್ಲದ ಬದುಕುಮೌನ ಇರುಳು -4-ಹಕ್ಕಿಗಳ ಕೊರಳಒಲವುಂಡಮರ ಧನ್ಯತೆಅನುಭವಿಸಿತುಒಲವ ಗಾಳಿತಲೆದೂಗಿತು -5- ಉಸಿರು ಕದ್ದವಳೇಎಲ್ಲಿಹೋದೆಉಸಿರುಬೆಸೆಯಬೇಕಿದೆಇಲ್ಲಿಇಲ್ಲೇ ಪಕ್ಕದಲ್ಲಿಪಾರಿವಾಳಗಳುಚಳಿಗೆ ಗುಟುರುಹಾಕಿಬೆಸೆದುಕೊಂಡಿವೆ -6-ಚಳಿಗೆದಾರಿ ಸಹಮುದುಡಿಕೊಂಡಿದೆಉರಿವ ಒಲೆಯಮುಂದೆಹೊಸೆವ ಕೈಗಳುವಿರಹಗೊಂಡಿವೆ -7-ಕೆನ್ನೆಯಮೇಲಿನ ಕೈ ಬೆರಳುಬಿಸಿ ಉಸಿರನೆನೆದುಪಿಸು ಮಾತಬಯಸಿತು… -8-ಬೆಳಗ್ಗೆ ಕೆನ್ನೆಗೆತಾಗಿದ ತಣ್ಣೀರುಎಳೆ ಬಿಸಿಲಸ್ಪರ್ಶಆಕೆಯನೆನಪಿಸಿದವು -9- ಕಪ್ಪು ಆಗಸದಿಬೆಳುದಿಂಗಳಹಾಸಿಗೆಆಕೆಯ ಸೆರಗು -10- ಬಿಸಿ ಬಿಸಿಚಹಾ ದೊಂದಿಗೆಎದೆಗೆ ಬಿತ್ತುಸಾಂಸ್ಕೃತಿಕ ಕಣ್ಣು ***********************

ಇಬ್ಬನಿಯ ಹನಿಗಳು Read Post »

ಕಾವ್ಯಯಾನ

ನಿರಾಕಾರ ಶಕ್ತಿ

ನಿರಾಕಾರ ಶಕ್ತಿ ಮಾಲಾ.ಮ.ಅಕ್ಕಿಶೆಟ್ಟಿ. ವಿಘ್ನಗಳ ನಾಶ,ಸುಖ ದುಃಖ ಕೊಡುವಪರೀಕ್ಷೆ ನಡೆಸುವ, ಸಕಲ ಪೊರೆವಶ್ರೇಷ್ಠ ದೇವ ದೇವತೆಗಳು ಅನಂತದಲಿ ಹುಲುಮಾನವನ ಬುದ್ಧಿ ನಿನ್ನ ಸೃಷ್ಟಿಕೈಚಳಕ ನಿಮಗೊಂದು ಆಕಾರದ ಕೊಡುಗೆಬಿಂಕದಲಿ ಬೀಗುವ ನಿಮ್ಮನ್ನು ನೋಡಿ ಅಭಯ ಹಸ್ತ ಸದಾ ನಮಗೆಹಣೆ ಪಟ್ಟಿ ಮೂರ್ಖರುಬಟ್ಟೆ ಬರೆಗಳಿಂದ,ಬಂ‌ಗಾರ ಬೆಳ್ಳಿಯಿಂದವಿಶಾಲ ಎಕರೆಯಲ್ಲಿ ದೊಡ್ಡ ಗುಡಿ ಕಟ್ಟಿಸಿಭಾರೀ ವಜ್ಜನಿನ ಕೀಲಿ ಹಾಕಿ, ಕಾವಲುಗಾರ ನೇಮಿಸಿನಾವೇ ನಿನ್ನನ್ನು ರಕ್ಷಿಸಿದ್ದೇವೆಂದರೆ ದೇವರು ದಿನ್ನರುಗಳು ಕಪೋಲಕಲ್ಪಿತವಾದಗಳು ಹೆಚ್ಚುಇರಲಿ, ಕಾಣದ ಶಕ್ತಿ ಜಗತ್ತಿನಲ್ಲಿನಿನ್ನ ರೂಪದಲ್ಲಿ ಇರಬಾರದೇಕೆ? ರಕ್ಷಿಸುಸದಾ ನಮ್ಮನ್ನು ಹೀಗೆಯೇನಿರಾಕಾರ ಶಕ್ತಿಗೆ ಆಕಾರವುಂಟೆ?

ನಿರಾಕಾರ ಶಕ್ತಿ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅರುಣಾ ನರೇಂದ್ರ ನೀ ಹಚ್ಚಿಕೊಳ್ಳುವ ಅತ್ತರಿನದೆ ವಾಸನೆ ಬರುತಿದೆ ಎಲ್ಲಿರುವಿಮೋಹಬ್ಬತ್ತಿನ ಈ ಹಾಡಲ್ಲಿ ನಿನ್ನದೇ ಧ್ವನಿ ಕೇಳುತಿದೆ ಎಲ್ಲಿರುವಿ ಮುಂಜಾನೆಯ ಮಂಜಿನ ಹನಿಗೂ ಕಣ್ಣ ಕನಸುಗಳಿವೆಆಗಸದ ಹಾಳೆಯಲಿ ನೀ ಬರೆದ ಚಿತ್ರ ಕಾಣುತಿದೆ ಎಲ್ಲಿರುವಿ ಮುಂಗುರುಳ ತೀಡುವ ತಂಗಾಳಿ ಇಂದೇಕೋ ಹಠ ಮಾಡುತಿದೆಇಲ್ಲಿ ನೀ ನಡೆದಾಡಿದ ಹೆಜ್ಜೆಗಳ ಗುರುತಿದೆ ಎಲ್ಲಿರುವಿ ಧುಮ್ಮಿಕ್ಕುವ ಪ್ರವಾಹಕ್ಕೆ ಗೋಡೆ ಕಟ್ಟಲಾಗುತ್ತಿಲ್ಲನಿನ್ನ ನಗೆಯ ಅಲೆ ಎದೆಗೆ ಅಪ್ಪುತಿದೆ ಎಲ್ಲಿರುವಿ ಎದುರಿನಲಿ ಸಿಕ್ಕು ಬಿಡು ಒಮ್ಮೆ ಹೀಗೇಕೆ ಹಿಂಬಾಲಿಸುತ್ತಿಅರುಣಾಳ ಅಂತರಾತ್ಮ ನಿನ್ನನ್ನೇ ಧ್ಯಾನಿಸುತಿದೆ ಎಲ್ಲಿರುವಿ ********************************

ಗಜಲ್ Read Post »

ಕಾವ್ಯಯಾನ

ಗ್ರಾಮಾಯಣದ ಪಂಚಾಯಿತಿ ಹಾಗೂ ನಾವು

ಗ್ರಾಮಾಯಣದ ಪಂಚಾಯಿತಿ ಹಾಗೂ ನಾವು ಸರಿತಾ ಮಧು ಚುನಾವಣೆಗಳೆಂದರೆ ಹಬ್ಬಪ್ರಜಾಪ್ರಭುತ್ವದ್ದೂ , ಜನಗಳದ್ದೂಪ್ರತಿವರ್ಷವೂ ಆಚರಣೆಯೇಗ್ರಾಮ, ತಾಲ್ಲೂಕು, ಜಿಲ್ಲೆಗಳೂಹೊರತಲ್ಲ ಒಂದಾಗಿದ್ದ ಊರೊಳಗೆ ಜಾತಿಯ ತಂದಿಟ್ಟುಭಿನ್ನತೆಯ ಪ್ರತೀಕವಾದರು ನಮ್ಮವರು , ನಮ್ಮ ಜನಗಳು ಹೆಂಡ ಹಣದ ಹೊಳೆಯಲಿಮುಳುಗೆದ್ದರು , ಮೈಮರೆತರುಹಗಲು ಇರುಳುಗಳ ಲೆಕ್ಕಿಸದೆನಮ್ಮವರು , ನಮ್ಮ ಜನಗಳು ಆಮಿಷವೋ, ಮತ್ತೊಂದೋಮತಗಳು ಬಿಕರಿ ಮಾಡಿಯೇ ಬಿಟ್ಟರುಚುನಾವಣಾ ಸಂತೆಯಲ್ಲಿನಮ್ಮವರು, ನಮ್ಮ ಜನಗಳು ಯಾವುದಕ್ಕಾಗಿ ಹೋರಾಟಈ ಹಾರಾಟ, ಮಾರಾಟತಮ್ಮತನವ ಅಡವಿಟ್ಟು ನಿಂತರಲ್ಲನಮ್ಮವರು, ನಮ್ಮ ಜನಗಳು ಮುಸುಕಿನೊಳಗಿನ ಗುದ್ದಾಟನಗೆಯ ಮರೆಯಲ್ಲಿ ಹಗೆಯಹೊಗೆಯಾಟಮನದೊಳಗೆ ಮತ್ಸರದ ಅಗ್ನಿಪರ್ವತದ ಪ್ರತೀಕವಾದರುನಮ್ಮವರು, ನಮ್ಮ ಜನಗಳು ಎಲ್ಲಿಂದ ಪಯಣವೋ ಮುಕ್ತಾಯವೂ ಅನೂಹ್ಯಸಮೂಹದೊಳಗೆ ಗೆದ್ದವರು ಇಲ್ಲ ,ಸೋತವರೂ ಇಲ್ಲಗೆದ್ದೆನೆಂದು ಬೀಗಿದವರಿಗೆಸೋಲಿನ ಅರಿವಿಲ್ಲಸೋಲು – ಗೆಲುವಿನ ಪಂದ್ಯದಲ್ಲಿನರಳುವರು ನಮ್ಮವರುನಮ್ಮ ಜನಗಳು *******************************

ಗ್ರಾಮಾಯಣದ ಪಂಚಾಯಿತಿ ಹಾಗೂ ನಾವು Read Post »

ಕಾವ್ಯಯಾನ

ನೆತ್ತರಿನ ಮಳೆ ಬಿದ್ದು….

ನೆತ್ತರಿನ ಮಳೆ ಬಿದ್ದು…. ಅಲ್ಲಾಗಿರಿರಾಜ್ ಕನಕಗಿರಿ ನೆತ್ತರಿನ ಮಳೆ ಬಿದ್ದುಮೈ ಮನಸು ಕೆಂಪಾದವೋ. ಕಪ್ಪಾದ ಮೋಡದಲ್ಲಿಕೆಂಪಾದ ಮಿಂಚೊಂದು ಹರಿದು.ಊರು ಕೇರಿ ಕೆಂಪಾದವೋ. ಬಿಸಿಲುಂಡ ನೆಲದಾಗ ನದಿಯೊಂದುಕೆಂಪಾಗಿ ಕಾಡು ಮೇಡು ಕೆಂಪಾದವೋ. ಬರಗಾಲಕ್ಕೆ ಹುಟ್ಟಿದ ಕೂಸುಎದೆಯ ರಕುತ ಕುಡಿದುತೊಟ್ಟಿಲೊಳಗಿನ ಹಾಸಿಗೆ ಕೆಂಪಾದವೋ. ದಿಲ್ಲಿ ಗಡಿಗಳಲ್ಲಿಕೊರೆಯುವ ಚಳಿ ಬಿಸಿಯಾಗಿರೈತರ ಹೊಲಗದ್ದೆಗಳು ಕೆಂಪಾದವೋ. ಬಿಳಿ ಹಾಳೆಯ ಮೇಲೆ ಕವಿಯಅಕ್ಷರದ ಸಾಲುಗಳು ಹಸಿದವರದನಿ ಕೇಳಿ ಕೆಂಪಾದವೋಎಲ್ಲ ಕೆಂಪಾದವೋ……… **********************************

ನೆತ್ತರಿನ ಮಳೆ ಬಿದ್ದು…. Read Post »

ಕಾವ್ಯಯಾನ

ನಮ್ಮ ರೈತ

ಭಾಮಿನಿ ಷಟ್ಪದಿ ನಮ್ಮ ರೈತ ಅಭಿಜ್ಞಾ ಪಿ ಎಮ್ ಗೌಡ ಲೋಕ ಬೆಳಗುವ ದಿವ್ಯ ಮೂರ್ತಿಯುನಾಕ ಮಾಡುತ ಧರೆಯ ಮಡಿಲನುದೇಕುತಿರುತಿಹ ನಿತ್ಯ ಹೊಲದಲಿದಣಿದ ಜೀವವಿದು|ನೂಕು ನುಗ್ಗಲು ಜನರ ಗುಂಪಲುಬೇಕು ಬೇಡುವನರಿತು ಸಾಗುವಬಾಕಿಯುಳಿಸದೆ ಭುವಿಯ ಕಾರ್ಯವಮಾಡೊ ನಿಸ್ವಾರ್ಥಿ|| ಹಸಿರ ಸೇಚಿಸಿ ಚಂದ ಗೊಳಿಸುತನಸುಕು ಕಾಲದೊಳೆದ್ದು ದುಡಿಯುತಕೆಸರು ಧರಣಿಗೆ ಚೆಲುವ ಮಾಡಿನಿಂತು ನೋಡಿಹನು|ಸಸಿನೆಯಿಂದಲೆ ಹಸನು ಮಾಡಿಸಿಬೆಸೆದ ಬಂಧವ ಗಟ್ಟಿಗೊಳಿಸುತತಸಕುಗೊಳ್ಳುವ ಪಾಪ ರೈತನುನಿತ್ಯ ಮರುಗುವನು|| ಭವದ ಭಯವನು ಸಹಿಸಿಕೊಳ್ಳುತದವನ ಸೂಸುವ ಬೆಳೆಯ ಬೆಳೆಯುತಸವಿದ ಭಾವದ ದಿವ್ಯ ಹೂರಣಮೆಚ್ಚಿ ನಡೆಯುವನು|ತವಕದಿಂದಲೆ ಕುಗ್ಗಿ ಹೋಗುವಬೆವರ ಸುರಿಸುತ ಕೆಲಸ ಮಾಡುತಧವಸ ಧಾನ್ಯವ ಬೆಳೆದು ನಲಿದರುಕಷ್ಟ ಕಾರ್ಪಣ್ಯ|| ಮಳೆಯ ಮಾಟಕೆ ಕುಸಿದು ಬೀಳುತಬೆಳೆದ ಬೆಳೆಗೂ ಬೆಲೆಯು ಸಿಗದೇಕಳೆಯು ಕುಂದಿದೆ ರೈತ ಮೊಗವದುಭಾರಿ ಭಂಗದಲಿ|ತೊಳೆಯಬೇಕಿದೆ ಮನದ ಕೊಳೆಯನುಬಳಕೆ ಮಾಡದ ವಸ್ತು ವಿಷಯದಹಳತು ಹೊಸತಿನ ಭವ್ಯ ಸಂಗಮಕೂಗಿ ಕರೆದಿರಲು|| ಅನ್ನ ನೀಡುತ ಜಗವ ರಕ್ಷಿಸಿತನ್ನ ಹೆಸರಲಿ ನೋವು ಬರೆಸುತಭಿನ್ನ ರೂಪದಿ ಮನವ ಗೆದ್ದು ನೋವಪಡುತಿಹನು|ಚಿನ್ನದಂತಹ ಬೆಳೆಯ ತೆಗೆದರುಕನ್ನ ಹಾಕುವ ಮಂದಿ ಮುಂದೆಯೆಮನ್ನದಿಂದಲೆ ಬದುಕ ಸವೆಸುತದುಡಿವ ಯೋಗಿಯಿವ|| *************************************************

ನಮ್ಮ ರೈತ Read Post »

You cannot copy content of this page

Scroll to Top