ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅರಿವೇ ಗುರು

ಕವಿತೆ  ಅರಿವೇ ಗುರು ವಸುಂಧರಾ ಕದಲೂರು ದೀಪ ಆರಿಸಿಬಿಟ್ಟೆ; ಸೂರ್ಯನೂಮುಳುಗಿದ. ಕತ್ತಲೆಂದರೆ- ಕತ್ತಲೀಗಒಳಹೊರಗೂ.. ಮೌನಕ್ಕೆ ಶರಣಾದೆ, ಕಿವುಡುತನದಲಿ.ಶಾಂತಿಯೆಂದರೆ ಶಾಂತಿಯೀಗ ಒಳಹೊರಗೂ.. ಇತಿಮಿತಿಗಳ ಅರಿವಾಯ್ತು,ನನ್ನದೂ ಮತ್ತವರಿವರದು.ಜಾಗರೆಂದರೆ ಜಾಗರೂಕಳೀಗ.ಒಳಹೊರಗೂ.. ಮಮತೆಯ ಕಣ್ತೆರೆದು, ಒಲವಿನಲಿನೋಡಿ ನುಡಿದೆ. ಹರುಷವೆಂದರೆಹರುಷವೀಗ. ಒಳಹೊರಗೂ.. ದೀಪ ಹಚ್ಚಿಟ್ಟೆ, ಬೆಳಕ ಹಂಬಲದಲಿ. ಇರುಳಿನಿಂದ ಸೂರ್ಯನೆದ್ದುಬಂದ. ಬೆಳಕೆಂದರೆ ಬೆಳಕೀಗಒಳಹೊರಗೂ.. ************

ಅರಿವೇ ಗುರು Read Post »

ಕಾವ್ಯಯಾನ

ಶಿಶಿರ

ಕವಿತೆ ಶಿಶಿರ ಎಂ.ಆರ್. ಅನಸೂಯ ನೆನಪಿಸುತ್ತಿಲ್ಲಶಿಶಿರದಇಬ್ಬನಿ ಹನಿಮುತ್ತಿನ ಮಣಿಯಕಾಡುತ್ತಿದೆಯಲ್ಲಇಬ್ಬನಿಯಹಿಮ ಕೊರೆವ ಚಳಿಯಲ್ಲೇರಾಜಧಾನಿಯ ಬಯಲಲ್ಲೇಕೂತ ರೈತನ ಪಾಡು !ಜತೆಯಲ್ಲೇಕಲ್ಲು ಮನದ ರಾಜನೂ ! ನೆನಪಿಸುತ್ತವೆಶಿಶಿರದಬೋಳು ಮರಗಳುಭರವಸೆ ಕಾಣದಕೃಷಿಕನ ಬವಣೆಯ ಬದುಕುಲಾಠಿ ಎತ್ತಿದ ಕೈಗೂರೊಟ್ಟಿಯಿತ್ತ ಅನ್ನದಾತನ ಕೂಗುಕೇಳಿಸದುಜಾಣ ಕಿವುಡಿನ ದೊರೆಗೆ ************************

ಶಿಶಿರ Read Post »

ಕಾವ್ಯಯಾನ

ಸಂ ‘ಕ್ರಾಂತಿ’

ಕವಿತೆ ಸಂ ‘ಕ್ರಾಂತಿ’ ತೇಜಾವತಿ ಹೆ್ಚ್.ಡಿ. ಪುರಾಣದ ನೋಟದಲಿ,ವಿಜ್ಞಾನವು ಇಣುಕಿಸಂಪ್ರದಾಯ ಮಾತನಾಡಿ,ಕೃತಜ್ಞತೆ ಕೈಹಿಡಿದನವ ಬದುಕಿನ ಸಂ’ಕ್ರಾಂತಿ’ಎಳ್ಳು-ಬೆಲ್ಲದೊಂದಿಗೆ ಕರಣದಲಿ ಕಳೆದುಹೋದಹೊಸ ಹುರುಪಿನ ಶ್ರವಣ ಪುಷ್ಯ ವೇಷ ಧರಿಸಿ ಹೊರಬರುತಿದೆ ನವಕ್ರಾಂತಿ ಧರೆ ಪರಿಭ್ರಮಿಸುವ ಗಳಿಗೆದಿನ ರಾತ್ರಿಹಗಲು ಇರುಳುಬೆಳಗು ಕತ್ತಲುಹೀಗೆ ಮಾಸ ಅಯನಗಳ ವರ್ತನೆಉತ್ತರಾಯಣ ತಿರುಗಿ ಸಂಕ್ರಮಣ ಮೂಡಿಬೆಳೆಯ ತಲೆಯ ಇಳೆಗೆ ಬಾಗಿಸುತಸೂರ್ಯರಶ್ಮಿ ಹೊಳಪು ನವಭಾವದ ಕಂಪು ಎಲ್ಲವುಗಳಂತಲ್ಲ ಈ ಹಬ್ಬ!ವರ್ಷವಿಡೀ ತನ್ನೊಡೆಯನಿಗಾಗಿ ದುಡಿದು ದಣಿದಜಾನುವಾರುಗಳ ಅಲಂಕರಿಸಿ,ಪೂಜಿಸಿಮೆರವಣಿಗೆ ಮಾಡಿ,ಕಿಚ್ಚು ಹಾಯಿಸಿಗೋವಿಗೂ ಕೃತಜ್ಞತೆಯ ಅರ್ಪಿಸುವ ಕಾಯಕಬ್ಬ ಹಾಡು ಪಾಡುಎಳ್ಳು ಬೆಲ್ಲ ಹಂಚುವನವೀನ ಪುರಾತನ ಮೌಲ್ಯಿಕರಿಸುವ ಪೃಥ್ವಿರಾಶಿ ರಾಶಿ ಹೊಳಪುಮಿರಿಮಿರಿ ಮಿಂಚುವ ಭೂಸೆರಗುತರತರ ಹೊಳೆವ ಹಸಿರು ಬಣ್ಣದೈಸಿರಿ ಸಂಕ್ರಾಂತಿ ಮೆರಗು ಈಗೀಗಮಾರ್ಗಶಿರ ಮಾರುದ್ದ ಮರೆತುಎಳ್ಳು-ಬೆಲ್ಲ ದಾರಿಲಿ ಉಳಿದುಮಿರಿ ಮಿರಿ ಮಿಂಚುವ ಕಣ್ಣಿಗೆಕಾಡಿಗೆ ಜೋಳ ಪಿಸುನಕ್ಕುಹಸಿರು ಬಸಿರಾಗದೇಪ್ರೇಮ ಕಳೆಕಟ್ಟುತ್ತಿದೆ ಭಾವನೆಗಳ ಬರಿದಾಗಿಅವನಿಯೂ ಅಷ್ಟೇ ಹೂ ಗಂಧ ಸಾಂಬ್ರಾಣಿಗಳ ಕರಕಲು ಮೆತ್ತಿಕೊಂಡಿದೆ ಕೊನೆಗೆ ನನ್ನವನ ಆಸೆಸಂಕ್ರಾಂತಿಯ ಸಂಸ್ಕೃತಿ ಮೂಡಿಸಂಪ್ರದಾಯ ಪ್ರೀತಿಯೊಂದಿಗೆ ಹೂರಣ ಹಬ್ಬಲಿ ವಿಶ್ವಾಸ-ಕೃತಜ್ಞತೆಜೊತೆಯಾಗಿ ಸಂ’ಕ್ರಾಂತಿ’ ನಡೆದುಹೋಗಲಿಸಂಕ್ರಾಂತಿ ಅಂಥದ್ದೇ ಆಗಿರಲಿ,ಬಣ್ಣ ಹೇಗಾದರೂ ಸರಿಸೆರಗು ಹಸಿರಾಗಲಿಹಸಿರು ಉಸಿರಾಗಲಿ

ಸಂ ‘ಕ್ರಾಂತಿ’ Read Post »

ಕಾವ್ಯಯಾನ

ಏಕತಾರಿಯ ಸಂಚಾರಿ ಸ್ವರಗಳು

ಕಾತ್ಯಾಯಿನಿ ಕುಂಜಿಬೆಟ್ಟು ಬರೆಯುತ್ತಾರೆ
ಹೊರ ದಾರಿಯಲ್ಲಿ ನೀನು ನಡೆದು ದೂರ ಹೋಗಿ ಬಿಡು
ನಿನ್ನದೇ ಕನಸುಗಳ ಊರಿಗೆ
ಕಡಲಾಚೆಯ ಆ ದೇಶಕೆ

ಏಕತಾರಿಯ ಸಂಚಾರಿ ಸ್ವರಗಳು Read Post »

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಕನ್ನಡಿ ಟಿ ಎಸ್ ಶ್ರವಣ ಕುಮಾರಿ ಅಜ್ಜನ ಮನೆಯಲ್ಲಿದ್ದ ಕನ್ನಡಿ ಅವರಜ್ಜ ತಂದದ್ದಂತೆ;ಅಜ್ಜನಜ್ಜ ಆ ಮನೆಕಟ್ಟಿದಾಗ ಗೋಡೆಗೆ ಹಾಕಿದ್ದಂತೆ.  ಎರಡಡಿ ಎತ್ತರ, ಒಂದೂವರೆಯಡಿಯಗಲದ ಕನ್ನಡಿಗೆ –ಕರಿಮರದ ಕೆತ್ತನೆಯ ಚೌಕಟ್ಟು, ಹಿಂಬದಿಗೆ ಗಟ್ಟಿ ಹಲಗೆ.ಮಿರಮಿರ ಮಿಂಚುವ ಬೆಲ್ಜಿಯಂ ಗ್ಲಾಸಿನ ಕನ್ನಡಿಯಡಿಗೆ –ಮರದ ಗೂಡು, ಅದರಲ್ಲಿ ಸಾದು, ಕುಂಕುಮ, ಹಣಿಗೆ…  ಬಚ್ಚಲ ಮನೆಯಿಂದ ಬಂದರೆ ಎದುರಿಗೇ ಕಾಣುವಂತೆ,ಮುಚ್ಚಟೆಯಿಂದ ಬಾಚಿ, ಹಣೆಗಿಡಲು ಅನುವಾಗುವಂತೆ,ಮಚ್ಚಿನಿಂದ ಬೀಳುತಿದ್ದ ಬೆಳಕು ಮುಖ ತೋರುವಂತೆ,ಅಚ್ಚೆಯಿಂದಿತ್ತು ಗೋಡೆಯಲಿ ಮೌನವೇ ಮಾತಾದಂತೆ!  ಅಜ್ಜನಜ್ಜನ ಕಾಲದಿಂದದೆಷ್ಟು ಮುಖಗಳ ಕಂಡಿರಬಹುದು?ಲಜ್ಜೆಯ ಕಿರುನಗೆ, ಒಜ್ಜೆಯ ಭಾವಗಳ ಬಿಂಬಿಸಿರಬಹುದು!ಅಜ್ಜನಪ್ಪ ಹೊರಹೋಗುವಾಗ ಠೀವಿಯಿಂದ ನೋಡಿರಬಹುದು;ಅಜ್ಜನಮ್ಮ ಸಂಜೆಯಲಿ ಬಾಚಿ ಕುಂಕುಮ ತೀಡಿ ತಿದ್ದಿರಬಹುದು.  ಅಜ್ಜನ ಕಾಲಕ್ಕೊಂದು ಕಪಾಟು, ಕನ್ನಡಿ ಪಕ್ಕಕ್ಕೆ ಬಂದಿದ್ದಂತೆ –ಅಜ್ಜಿಗೊಂದು ಗೂಡು – ಕಾಡಿಗೆ, ಚೌರಿ, ಗಂಟುಪಿನ್ನುಗಳಿಗಂತೆ.ಅಜ್ಜನಿಗೆ ದಿನವೂ ನೈಸು ದಾಡಿ ಮಾಡುವ ಅಭ್ಯಾಸವಿತ್ತಂತೆ;ಅಜ್ಜಿ ಸಂಜೆ ಮುಂದೆ ಹೆರಳುಸುತ್ತಿ ಹೂ ಮುಡಿಯುತ್ತಿದ್ದಳಂತೆ.  ನಡುಮನೆಗೆ ನಡೆಯುತ್ತ ಬಂದಿತ್ತು ಕನ್ನಡಿ ಅಪ್ಪನ ಕಾಲದಲ್ಲಿ…ಅಡಿಗೊಂದು ಕಪಾಟು, ಮೂರ್ನಾಲ್ಕು ಬಿಡಿ ಖಾನೆ ಅದರಲ್ಲಿ.ಇಡಲು ಅಪ್ಪನ, ಅಮ್ಮನ, ಮಕ್ಕಳ ವಸ್ತುಗಳ ಬೇರೆಯಾಗಲ್ಲಿ.ಓಡಾಡುವಾಗೆಲ್ಲಾ ಒಮ್ಮೆ ಹಣುಕುತಿರಬಹುದಿತ್ತು ಕನ್ನಡಿಯಲ್ಲಿ.  ನನ್ನ ಕಾಲಕ್ಕನ್ನಿಸಿತು ಕನ್ನಡಿ ನಡುಮನೆಯಲಿದ್ದರೇನು ಚಂದ?ನಂನಮ್ಮ ರೂಮಿನಲ್ಲಿಡಬೇಕು ನಿಲುಗನ್ನಡಿಯನೊಂದೊಂದ.ನಂನಮ್ಮ ಮುಖಭಾವ ನಮಗಷ್ಟೆ, ಬೇರೆಯವರಿಗೇನದರಿಂದ?ಇನ್ನೊಬ್ಬರೇಕೆ ತಿಳಿಯಬೇಕು ನಮ್ಮೊಳಗು, ಲಾಭವೇನದರಿಂದ!  ಈಗ ಅಂತರ ಬೇಕಂತೆ, ಹಾಗೆ ಮಗ ಸೊಸೆಗೆ ಪ್ರತ್ಯೇಕ ಕೋಣೆ!ಈಗವರಿಗೆ ಅವರವರದೇ ಬೀರು, ಕನ್ನಡಿ, ಸ್ನಾನಶೌಚದ ಕೋಣೆ.ಆಗ ಅಜ್ಜನ ಮನೆಯಲ್ಲಿದ್ದ ಕನ್ನಡಿ ಅಲ್ಲೇ ಇರಬಹುದೇನೋ ಕಾಣೆ?ಬೇಗ ತಂದಿರಿಸಿ ಮುಖವ ನೋಡಿಕೊಳ್ಳಬೇಕೆನಿಸಿದೆ ದೇವರಾಣೆ!! ———————————————————————-

Read Post »

ಕಾವ್ಯಯಾನ

ಶಪಥ

ಸಂಕ್ರಾಂತಿಗೆ ಸುಧಾರಾಣಿಯವರ ವಿಶೇಷ ಕವಿತೆ ಶಪಥ ಹೊಸ ವರುಷಕೆ ಒಂದುಶಪಥವಿದೆ ಸಾಕಿಮತ್ತೆಂದೂ ಎದಿರುಗೊಳ್ಳುವುದಿಲ್ಲಹನಿ ಪ್ರೀತಿಗಾಗಿಅಂಗಲಾಚುವುದೂ ಇಲ್ಲನೀ ಸಾಗಿದ ದಾರಿಯಲ್ಲಿಸಾವಿರ ಬಾರಿ ತಿರುಗಿ ತಿರಿಗಿನೋಡುವುದೂ ಇಲ್ಲ ನಿನ್ನ ನೆನಪಲಿ ಕಣ್ಣಾಲಿಗಳುಒಡ್ಡು ಕಟ್ಟಿ ನಿಂತರೂ,ಥುಳುಕಿದರೂತುಟಿ ಕಂಪಿಸಿದರೂನಿನ್ನ ಸಂತೈಸುವಿಕೆಗೆಹಾತೊರೆಯುವುದೂ ಇಲ್ಲಒರಗಿದ್ದ ನಿನ್ನೆದೆಯ ನೆನೆದುಸಂತೈಸಿಕೊಳ್ಳುವುದು ಇಲ್ಲಬಿಡು, ನಿರಾಳವಾಗಲಿ ಮನಸ್ಸು, ಅದೆಷ್ಟೂ ಖಾಲಿತನಉಸಿರು ನಿಂತ ಮೇಲೆಯಾರಿಗ್ಯಾವ ಹೆಸರು?ಹೆಣವೆಂದಷ್ಟೇ ಅಲ್ಲವೇ ಸಾಕಿಈ ವರ್ಷಕೂ ಅದೇ ಶಪಥನನ್ನಲ್ಲಿ ನೀನಿರುವವರೆಗೂಬದುಕಬೇಕುಅದಮ್ಯವಾಗಿ ಪ್ರೀತಿಸಬೇಕು

ಶಪಥ Read Post »

ಕಾವ್ಯಯಾನ

ಸಂಕ್ರಾಂತಿಕಾವ್ಯ ಸುಗ್ಗಿ ಉರಿಯುವ ಬದಲು ಬೆಳಗಬೇಕು ಸಂಗೀತ ರವಿರಾಜ್ ಸಮಾಜ ಅಭಯದ ಮುಖವಾಡ ಹಾಕಿನಲುಗಿಸುತ್ತಿದೆ ಗಳಿಸಿದ ಸ್ವಾತಂತ್ರ್ಯ ವನ್ನೇ….ಜಾತಿ ವರ್ಗಗಳಿಗೆ ಕೀಳರಿಮೆ ತೊಲಗಿಂದ ಮೇಲೆಭಯ ಮುಕ್ತ ಭಾವನೆಗೆಲ್ಲಿ ಎಲ್ಲೆ ? ಮಲ ತೆಗೆಯಲು ಒಂದುಮನುಷ್ಯ ವರ್ಗವ ಸೃಷ್ಠಿಸಿಅದಕ್ಕೊಂದು ಜಾತಿಯ ಹೆಸರು ಕೊಟ್ಟಇನ್ನೊಂದು ಮನುಷ್ಯ ಜಾತಿಗೆ ನಮ್ಮ ವಿರೋಧವಿರಲಿದೇವ ಸ್ವರೂಪ ತೋಟಿಗಳಒಳತೋಟಿಯ ಅರಿವಾಗಿಒಂದು ತೊಟ್ಟು ಕಣ್ಣೀರು ಹಾಕಿದರೆಈ ಜನ್ಮ ಸಾರ್ಥಕ. ಜಗದಲ್ಲಿ ಜಲಗಾರ ಜಾಡಮಾಲಿಯಒಡಲ ಬೇಗುದಿಯ ಉರಿಗೆತ್ಯಾಜ್ಯವೆಲ್ಲ ಉರಿದು ಬೂದಿಯಾಗುತ್ತಿದೆ!ಗುಡಿಸೆತ್ತಿ ಸ್ವಚ್ಛಗೊಳಿಸುವ ಒಂದ್ವರ್ಗವಿಲ್ಲದಿದ್ದರೆಶೋಚನೀಯ ಸ್ಥಿತಿಯ ಗತಿಗಳುಶುಭ್ರತೆ ಇರಬೇಕಾದ್ದು ಮನಸ್ಸಿನಲ್ಲಿ , ವಾಸಿಸುವಲ್ಲಿಜಲಗಾರನೆ ಜ್ವಲಂತ ಉದಾಹರಣೆಯಿಲ್ಲಿ ಸೂಟುಗಳ ಜೇಬಿನಲ್ಲಿ ಇವರ ಕನಸುಗಳೆಲ್ಲ ಬಿಕರಿಗಿವೆ!ಕೊಳ್ಳುವರಿಲ್ಲ ಕೇಳುವರಿಲ್ಲಅಲ್ಲಿಗೆ ಕನಸುಗಳು ಕಮರಿವೆಈ ಕುಲದ ದೀಪಗಳ ಬೆಳಕು ಪಸರಿಸಲುನಾವೆಲ್ಲ ದೀಪದಂತೆ ಉರಿಯುವುದಲ್ಲ ಬೆಳಗಬೇಕು !ಕನಿಷ್ಠ ಸಂಪಾದನೆಯ ಕೆಲಸಗಳಿಗೆಜಾತಿ ವರ್ಗಗಳ ನಿರ್ಮಿಸಿಟ್ಟಮಗದೊಂದು ಮನುಷ್ಯ ವರ್ಗಕ್ಕೆ ಸಹಮತವಿಲ್ಲ.

Read Post »

You cannot copy content of this page

Scroll to Top