ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹೋದಾರೆ.. ಹೋದ್ಯಾರು..!

ಕವಿತೆ ಹೋದಾರೆ.. ಹೋದ್ಯಾರು..! ಆಶಾ ಆರ್ ಸುರಿಗೇನಹಳ್ಳಿ ಹೋದಾರೆ ಹೋದ್ಯಾರುತೊರೆದು ಹೋದವರು..ಕಣ್ಮರೆಯಾಗಿ ನಲಿವವರುಮರೆಮಾಚಿ ನಿಂತವರುಕಲ್ಲಾಗಿ ಮರೆತವರು ಹೋದಾರೆ ಹೋಗಲಿ..ಅವರವರ ಅನುಕೂಲ..ನೆನಪುಗಳ ಮೂಟೆಯೊರಿಸಿಮೌನತಳೆದು ಹೋದ್ಯಾರತ್ರಾಣವಿಲ್ಲದ ಮನವುಅಂಜುತಿದೆ ದಿನವೂ.. ಹೋದಾರೆ ಹೋದ್ಯಾರುಹೆಸರಿಲ್ಲದೆ, ಉಸಿರಿನ ಹಂಗಿಲ್ಲದೆಕಿರುನಗೆಯಲಿ ಬಿದ್ಯಾರ..ಎನಗೊಂದು ವಿಷಾದದನಗೆಯ ಉಳಿಸ್ಯಾರ..ಬೆಲೆಬಾಳುವಮುಗ್ಧನಗೆಯನೇ ಕದ್ದೊಯ್ದಾರ.. ಹೋದಾರು ಹೋದ್ಯಾರುನೆನಪುಗಳ ಹೊತ್ತೊಯ್ದುಉಪಕರಿಸಬೇಕಿತ್ತು..ಕನಸುಗಳ ಚಿವುಟಿಕ್ರೂರಿಗಳಾಗಬೇಕಿತ್ತು..ಮನಸನು ಕೊಂಚಕಲ್ಲಾಗಿಸಬೇಕಿತ್ತು..ತೊರೆದು ಮತ್ತೆ ಮತ್ತೆತೆರೆದುಕೊಳ್ಳುವುದ ಕಲಿಸಬೇಕಿತ್ತು.. ಹೋದಾರ ಹೋದ್ಯಾರುಮರೆತು ಬಾಳೋದನ್ನೇಕಲಿಸದೆ ಹೋದ್ಯಾರೆ?ಕಣ್ಣಹನಿಗಳನ್ನುಉಡುಗೊರೆಯಾಗಿ ಕೊಟ್ಯಾರಾ..!ನಗೆಯ ಪೊಳ್ಳು ಭರವಸೆಯನ್ನಮೊಗೆ ಮೊಗೆದು ಕೊಟ್ಯಾರಾ.. ಹೋದಾರೆ ಹೋಗಲಿಸುಮಧುರ ಭಾವಗಳುಗೆಜ್ಜೆಕಟ್ಟಿ ಕುಣಿದಾವಪದೇ ಪದೆಹಳೆಯ ರಾಗವ ನೆನಸುತಾಹಾಡ್ತಾವಾಮೂಕ ರಾಗದಿನೊಂದ ಮನವೂ ಕುಣಿದುಅಂತರವನ್ನ ಮರೆತಾವ..ಇರುವಿಕೆಯನ್ನೇ ಅಳೆದು ತೂಗ್ಯಾವಸ್ವಾರ್ಥವಿಲ್ಲದ ಮನವು,ಹರುಷದಿಂದ ನಲಿದು,ನೆನಪುಗಳ ಬರಸೆಳೆದ್ಯಪ್ಪಾವ..ಭಾರ ಹಗುರಾಗ್ಯಾವ..ಬದುಕಿಗೆ ಸ್ಪೂರ್ತಿ ಸಿಕ್ಯಾವ..ದುಗುಡಗಳೆಲ್ಲಾ ಮರೆಯಾಗಿನಿಂತ್ಯಾವ.. ಹೋದಾರೆ ಹೋದ್ಯಾರುಹೋದನೆಂಬ ಭ್ರಮೆಯಲ್ಲಿ ಬದುಕ್ಯಾರಇದ್ದೆನೆಂಬ ನಿಜವ ಮರೆತ್ಯಾರ?ಹೊಸತೊಂದು ಬದುಕಕಲಿಸಿಕೊಟ್ಯಾರಾ..!ಉಸಿರ ಕೊನೆಯವರೆಗೂಜೊತೆಯಾಗಿ ನಿಂತ್ಯಾರ..ನೆನಪುಗಳ ಮೆರವಣಿಗೆಯಲಿಸವಿಕನಸಿನ ತೇರನ್ನ ಎಳೆದ್ಯಾರ..ಹೆಸರಿಲ್ಲದ ಬದುಕಿಗೆಹೊಸ ಮುನ್ನುಡಿ ಬರೆದ್ಯಾರ.. ನೆನಪಿನ ನಕ್ಷತ್ರಗಳ ನಡುವಲಿನನ ನೋಡಿ ನಗತ್ಯಾರ..ನಗುವ ತಂಬೆಳಕೆನ್ನಕಂಗಳಲಿ ಪ್ರತಿಫಲಿಸ್ಯಾವ..ಬೆಳಕ ಪಲುಕಿಗೆಬಾಳು ಬೆಳಗ್ಯಾವ..! *********************************

ಹೋದಾರೆ.. ಹೋದ್ಯಾರು..! Read Post »

ಕಾವ್ಯಯಾನ

“ದೇವರ ಪಾದ”

ಕವಿತೆ “ದೇವರ ಪಾದ” ಲೋಕೇಶ ಬೆಕ್ಕಳಲೆ ಅಂದು ನೀನು ಇಟ್ಟ ಪಾದಧರ್ಮ ರಕ್ಷಣೆಗೋ?ಸ್ವಜನ ಹಿತಕೋ?ಅಂತೂ ಬಲಿಯ ದೂಡಿತು ಪಾತಳಕೆ ಇಂದು ನಿನ್ನ ಸುಪರ್ದಿ ಪಡೆದವರುಊರುತ್ತಿರುವ ಪಾದಗಳುದೂಡುತ್ತಿವೆ ಸಾಮಾನ್ಯರಅಂಧಕಾರಕೆ ಎತ್ತ ನೋಡಿದರೂನಿನ್ನದೇ ಪಾದ!ಗೆಜ್ಜೆ ಕಟ್ಟಿದ ಶ್ರೀ ಪಾದಎದುರು ಯಾರೇ ಸಿಕ್ಕರೂ ಅವರತಲೆಯ ಮೇಲೇರಿ ಕೂರುವವಿಕ್ರಮ ಪಾದ ಇಲ್ಲಿ ನಿನ್ನ ಕಾಯುವಮುಖವಾಡ ತೊಟ್ಟಬಲಿಗಳಿಂದ ನಿತ್ಯಹಿಂಸೆ ಅನುಭವಿಸುವಶ್ರೀಸಾಮಾನ್ಯರ ಕಾಪಿಡಲುಮತ್ತೇ ಬರುವೆಯಾ?ವಾಮನನಾಗಿ? ಅದೇಕೊಎಷ್ಟೇ ತೊಳೆದರೂನಿನ್ನ ಪಾದಕ್ಕಂಟಿದಕಳಂಕ ಹೋಗುತ್ತಿಲ್ಲ!ಕ್ಷಮಿಸು ದೇವಾ ************************

“ದೇವರ ಪಾದ” Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ. ನಲ್ಲ ಮನದಂಗಳ :ನಲ್ಲನ ಹೆಸರಿನ,ಹಸೆ ಮೂಡಿದೆ. ಲಜ್ಜೆ ಹಸೆಗೂ ಲಜ್ಜೆಅವನ ನೆನಪಲ್ಲಿ,ನಲ್ಲೆ ನಗಲು. ದುಂಬಿ ಹೂವಿನಮಲು.ದುಂಬಿಗೆ ಹೊಸಗಾನ,ಶೃಂಗಾರ ಕಥೆ. ತಾರೆ ಮಿಂಚಿನ ನೋಟ :ತಾರೆಗೂ ಕಚಗುಳಿ,ಮುನಿದ ಚಂದ್ರ. ನಗು ನಲ್ಲೆ ನಗುವು :ತಪ್ಪಿದ ಎದೆ ತಾಳ,ಮಧುರ ಗಾನ. ಲಾಂದ್ರ ಬಾನಂಚ ಲಾಂದ್ರ :ಹತ್ತಿದಾಗೆಲ್ಲ, ನಲ್ಲೆಮೊಗ ಕೆಂಪಗೆ. ರವಿತೇಜ ಮಧುರ ಹಾಡು :ಹಕ್ಕಿಯ ಸ್ವಾಗತವು,ರವಿತೇಜಗೆ. *****************************

ಹಾಯ್ಕುಗಳು Read Post »

ಕಾವ್ಯಯಾನ

ಕವಿತೆ, ಬುದ್ಧ ಮತ್ತು ನಾನು

ಕವಿತೆ ಕವಿತೆ, ಬುದ್ಧ ಮತ್ತು ನಾನು ಟಿ.ಪಿ.ಉಮೇಶ್ ಬುದ್ಧ ಕವಿತೆಯನ್ನು ಬರೆಯಲಿಲ್ಲಬದುಕೆಲ್ಲವನ್ನೂ ಕವಿತೆಯಾಗಿಸಿದಜಗದೆಲ್ಲ ಕವಿತೆಗಳನ್ನು ಬದುಕಿಸಿದಕವಿತೆಗಳಿಗೆ ಬುದ್ಧನೆಂದು ಒಲಿಯಲಿಲ್ಲಕವಿತೆಗಳೇ ಬುದ್ಧನ ತಬ್ಬಿಕೊಂಡವು ತುಂಬಿಕೊಂಡವು ತಡೆದುಕೊಂಡವುಬುದ್ಧ ಬರೆಯಬೇಕೆಂದಿದ್ದರೆಬದುಕಿನ ಕಾವ್ಯವಾಗಿ ಬಂದಂತ ಹೆಂಡತಿಯ ಬರೆಯುತ್ತಿದ್ದಬಹುಶಃ ತನ್ನ ಮೊದಲ ಜೀವಂತ ಕವಿತೆಯಾದ ಮಗನ ಬರೆಯುತ್ತಾ ಬೆಳೆಸುತ್ತಿದ್ದಅವ ನಮ್ಮಂತೆ ಕತ್ತಲ ಮಿಣುಕು ಹುಳದ ಮಿಂಚಲಿಬೆಳದಿಂಗಳ ಅಂಚಲಿ ತೇಲ್ಗಣ್ಣಲಿ ಕೂತು ಬರೆಯಲಿಲ್ಲಇರುವವರೆಗೆ ಧ್ಯಾನದಲಿಹಗಲಿರುಳುಗಳ ಮಧ್ಯವ ಮಾಡಿ ಬತ್ತದಂತ ಬೆಳಕಿನಲ್ಲಿ ಬರೆಸಿದಲೋಕವನ್ನೇ ಭಾರವಿಲ್ಲದಂತ ಬುದ್ಧ ಬದ್ಧತ್ವದ ಕವಿತೆಗಳಾಗಿಸಿದ ಅರಮನೆಯ ಬಂಧನದ ಉದ್ಯಾನದ ಪರಿಮಳಗಳ ಬರೆಯುವುದ ಬಿಟ್ಟು ಪ್ರೀತಿಯ ಬೀಜಗಳ ಬಿತ್ತುತ್ತ ಕವಿತೆಗಳ ಕಾಡನ್ನು ಬೆಳೆಸಿದಭೂಮಿಯ ಆಸೆಗಳ ಬಿಡಿಸಲು ಹೆಣಗಿಅವನೇ ಒಂದು ಎಂದೆಂದೂ ತೀರದ ಮಹದಾಸೆಯ ಕವಿತೆಯಾದಭೂಮಿಯಷ್ಟೋ ಅರಳಿಯಷ್ಟೋ ಆಯಸ್ಸಿದ್ದಿದ್ದರೆ ಕಾಡ ಕೂಸುಗಳೆಲ್ಲ ಬುದ್ಧ ಕವಿತೆಗಳಾಗುತ್ತಿದ್ದರುಇರುವುದೊಂದೆ ಚೂರು ವಯಸ್ಸು ಕಾಡ ಮಕ್ಕಳೆಲ್ಲ ಆಡಿ ಕೂಡಿ ನಿಲ್ಲದ ಕಡಲಾದರುಬುದ್ಧನ ಆನಂದ ಕಾವ್ಯದ ಒಡಲಾದರು ಬುದ್ಧ ಸ್ವತಃ ಒಂದಷ್ಟು ಕವಿತೆಗಳ ಬರೆಯಬೇಕಿತ್ತುನಮ್ಮನೆಲ್ಲ ಈ ಕಾವ್ಯದ ಉರುಳಿನಿಂದ ಕಾಪಾಡಬೇಕಿತ್ತುನಮ್ಮಗೆಲ್ಲ ಅವನನ್ನ ತಿಳಿಸಬೇಕಿತ್ತುನಿಮ್ಮ ನೀವು ತಿಳಿಯಿರೆಂದು ಹೇಳಿ ಹೇಳಿತಡೆಯಿಲ್ಲದ ನಿಷ್ಕಲ್ಮಶ ರೋಹಿಣಿ ನದಿಯಂತೆ ಹರಿದು ಹೋದ ಭೂಮಂಡಲದಿ ಚೆಲ್ಲಿ ಹೋದಇನ್ನು ಯುಗ ಯುಗಗಳು ಕಳೆದರೂನಮ್ಮ ನಾವು ತಿಳಿಯಲಾರೆವುಅವನನ್ನಂತೂ ಎಷ್ಟು ಹಾಡಿದರೂ ಸಿಗಲಾರನುನಾವು ಸುಮ್ಮನಿರಲಾರೆವುಬುದ್ಧನ ಮೇಲಿನ ಕವಿತೆಗಳ ನಿಲ್ಲಿಸಲಾರೆವುಬುದ್ಧನಂತು ಕವಿತೆಯಾದಬರೆವ ನಾವೆಂದು ಬುದ್ಧನಾಗಲಿಲ್ಲಕವಿತೆಯ ಬಿಟ್ಟರೆ ಆಗಬಹುದೇನೋಹೆಂಡತಿಯಿರುವ ನಾನಂತೂ ಕವಿತೆ ಬಿಡಲಾರೆಕವಿತೆ ಬಿಡದ ನಾನಂತೂ ಸದ್ಯ ಈ ಜನ್ಮದಿ ಬುದ್ಧನಾಗಲಾರೆ **********************************************

ಕವಿತೆ, ಬುದ್ಧ ಮತ್ತು ನಾನು Read Post »

ಕಾವ್ಯಯಾನ

ಮಗಳೆ ನಿನಗಾಗಿ

ಕವಿತೆ ಮಗಳೆ ನಿನಗಾಗಿ ಶಾಲಿನಿ ಆರ್. ಎದೆಗೆ ಹಾಲ ಬಿತ್ತಿಒಡಲ ಗುಡಿಯಕದವ  ತಟ್ಟಿಬಳಿಗೆ ಕರೆದುಅಂತರಂಗದಾಧುನಿಗೆ ಬೆಸೆದ  ನೀ’ಬಾಳಗೀತೆ ಮುನ್ನುಡಿ, ಪಡೆದ ಸುಖಕೆಪ್ರೀತಿ ಬೆರೆಸಿಹಡೆದ ಋಣಕೆತಾಯ್ತನದಾನಂದಬಡಿಸಿ ಬೆಸೆದ,ಸೊಬಗಿನೈಸಿರಿ ನೀ’ಬಾಳಗೀತೆ ಮುನ್ನುಡಿ, ನಿತ್ಯ ಹಸಿರಿದುಬಾಳ ನಂದನತೊದಲ ಮಾತು,ತಪ್ಪು ಹೆಜ್ಜೆಗೊಂದುಹೂಬನ ಚುಂಬನ,ನಲಿವ ಗೊಂಚಲಿನಕಿರುಗೆಜ್ಜೆ ನೀ’ಬಾಳಗೀತೆ ಮುನ್ನುಡಿ, ಬಿಡದೆ ಹನಿಸುಹೊಕ್ಕಿಹ ಮಮತೆಯನಾನಲ್ಲ ತಾಯಿಯು,ಮರುಜನ್ಮವಿತ್ತೆನೀ ಎನಗೆ ತಾಯೆಒಡಲತುಂಬಿದಹೊನಲ ಜೇನು ನೀ’ಬಾಳಗೀತೆ ಮುನ್ನುಡಿ, ಕಣ್ಣಂಚಿನ ಹನಿಯುನಿಂತಲ್ಲೆ ಕಡಲಾಯಿತುಆನಂದದಂಗಳದಿಅಮ್ಮ’ ಎನುವ ಕರೆಗೆಜಗದ ಸುಖಸೊನ್ನೆಯಾಯ್ತುತಾಯ್ತನದ ಭಾಷ್ಯ ನೀ’ಬಾಳಗೀತೆ ಮುನ್ನುಡಿ, ಕರುಳಬಳ್ಳಿ ಬೆಸೆದುಒಲವ ಕಡಲ ಸುತ್ತಿಅವನ ಪ್ರೀತಿಮೋಹ ಮಂತ್ರಕೆಓ! ಗುಟ್ಟು, ಸುಧೆಯಹರಿಸಿದ ಧೇನು ನೀ’ಬಾಳಗೀತೆ ಮುನ್ನುಡಿ…

ಮಗಳೆ ನಿನಗಾಗಿ Read Post »

ಕಾವ್ಯಯಾನ

ತೆರೆದಿಟ್ಟ ದೀಪ

ಕಥೆ ತೆರೆದಿಟ್ಟ ದೀಪ ಯಮುನಾ.ಕಂಬಾರ ಅದು ಮಧ್ಯಾಹ್ನದ ಸಮಯ. ಸೂರ್ಯ ತನ್ನ ಕಿರಣಗಳನ್ನು ಭಗವತಿಯ ಮುಂದಿನ ಗಿಡದ ಮೇಲೆ ಚೆ ಲ್ಲಿದ್ದ. ಗಿಡದ ಮೇಲೊಂದು ಪಕ್ಷಿ ಅತ್ತ ಇತ್ತ ನೋಡುತ್ತಾ ಕುಳಿತುಕೊಂಡಿತ್ತು. ಪಕ್ಢಿಯನ್ನು ಗಿಡವನ್ನು ವೀಕ್ಷಿಸುತ್ತಾ ಇದ್ದ ಭಗವತಿಯ ಕಣ್ಣುಗಳು ಪಲ್ಲಟಗೊಂಡು   ದಾರಿಯತ್ತ ಹರಿದವು.ಅವಳು ದಾರಿಯಲ್ಲಿ ಬರುವ ಹೆಣ್ಣು ಮಗಳನ್ನು ನೋಡಿದೊಡನೆ ತನ್ನ ನೆನಪುಗಳನ್ನು ಒತ್ತಿ ನೋಡ ತೊಡಗಿದಳು. ಹೌದು ಅವಳು ಅವಳೇ……ಈಗ್ಯ ಹದಿನಾಲ್ಕು ವರ್ಷಗಳ ಹಿಂದೆ ತನ್ನ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದ ಮಾಬೂಬಿ.ಭಗವತಿಗೆ ಅವಳನ್ನು ನೋಡಿ ಮನಸ್ಸು ಹಬ್ಬವಾಯಿತು.          ಕೆಂಪು ತಿಳಿಯ ಶೀರೆ, ಸೆರಗನ್ನು ಉದ್ದವಾಗಿ ಬಿಟ್ಟು ತಲೆ ಮೇಲೆ ಹೊದ್ದು ಹೊಟ್ಟೆಯಲ್ಲಿ ಸಿಕ್ಕಿಸಿಕೊಂಡಿದ್ದಳು. ಭರ ಭರ ಬರುವಾಗ ನೆರಿಗೆ ಸಿಕ್ಕು ಬಿದ್ದೇನೆಂದು ಶೀರೆಯ  ನೆರಿಗೆಗಳನ್ನು ನಡದಲ್ಲಿ ತುರುಕಿದ್ದಳು. ಬಗಲಲ್ಲಿ ಒಂದು ಹಸಿರು ಹರಕು ಚೀಲ ಹಿಡಿದುಕೊಂಡು ದುಡುದುಡುನೇ ಬರುತ್ತಿದ್ದಳು.  ಭಗವತಿಯ ಮಿಂಚು ಕಣ್ಣುಗಳಿಗೆ ಸಿಕ್ಕುಕೊಂಡ ಮಾಬೂಬಿ ” ಯಾಕ್ರಿ….. ಊಟಾತ್ರ್ಯಾ…….? ಎಂದು ಭಗವತಿಯನ್ನು ಕೇಳಿದಳು. ಭಗವತಿ ಹೂಂ ಗುಟ್ಟುತ್ತಾ…” ಯಾಕ ….ಇಲ್ಲಿ ಮಾಡತ್ತೀ ಏನ …..ಕೆಲಸ ..” ಎಂದು ವಿಚಾರಿಸಿದಳು. “ಮಾಲಾ….. ಏನ ಮಾಡ್ತಾಳ …..? ” ಎಂದು ಮತ್ತೊಂದು ಪ್ರಶ್ನೆಯನ್ನೂ ಇಟ್ಟಳು.      ಮಾಲಾ ಮಾಬೂಬಿಗೆ  ಒಬ್ಬಳೇ ಮಗಳು.ಆಗ ಅವಳು ಇನ್ನೂ ಹೈಸ್ಕೂಲ ವಿಧ್ಯಾರ್ಥಿನಿ. ತಾಯಿ ಕೆಲಸಕ್ಕೆ ಚಕ್ಕರ ಕೊಟ್ಟಾಗಲೆಲ್ಲಾ ಮಗಳು ಮಾಲಾ ಬಂದು ಮುಸುರೆ ತಿಕ್ಕಿಕೊಟ್ಟು ಹೋಗುತ್ತಿದ್ದಳು. ಮಾಲಾ ಎಂಥಹ ಚೆಲುವೆ ನೀಳವಾದ ಮೂಗು ತೆಳ್ಳನೆಯ ಬಳುಕುವ ಮೈ ಕಪ್ಪಾಗಿದ್ದರೂ ಮೋಹಕಳಾಗಿದ್ದಳು. ಒಂದು ದಿನ  ಮಾಬೂಬಿ  ಬೋಗುಣಿ ತಿಕ್ಕುತ್ತಾ : ” ನಮ್ಮ ಮಾಲಾ ಬೆಂಗಳೂರಿಗೆ ಹೋದಳ್ರಿ ” ಅಂದಾಗ ಭಗವತಿಯ ಮೈ ಕಂಪಿಸಿತ್ತು. ಮಾಬೂಬಿಗೇನು ಹುಚ್ಚು ಹಿಡಿತಾ….! ? ಎಂದು ಗೊಣಗುಟ್ಟಿದಳು. ಅದನ್ನು ತೋರ್ಪಡಿಸಿಕೊಳ್ಳದೇ ಕೈಯಲ್ಲಿಯ ಪುಸ್ತಕವನ್ನು ಟಿ.ವಿ.ಮುಂದೆ ಇಟ್ಟು ಓಡಿ ಬಂದು  : “ಆಂ ……ಏನಂದೆ ಮಾಬೂಬಿ ನಿನ್ನ ಮಗಳು ಬೆಂಗಳೂರಿಗೆ ಹೋದ್ಳಾ……! ?” ಎಂದು ಭಗವತಿ ಕೇಳಿದಳು. ಹೂನ್ರಿ…..ಯಾಕ ಬಡುರ ಮಕ್ಕಳು ಹೋಗಬಾರ್ದಾ….” ಎಂದು ಭಗವತಿಗೆ ಸವಾಲನ್ನೇ ಎಸೆದಿದ್ದಳು. ಪಾಪ  ಮಾಬೂಬಿಗೆ ಗೊತ್ತಿಲ್ಲ….ಬೆಂಗಳೂರು . ಅವಳು ಎಷ್ಟಾದರೂ ಚಿಕ್ಕ ಪಟ್ಟಣದಲ್ಲಿ ಕಸ ಮುಸುರೆ ತಿಕ್ಕುತ್ತಾ ಬದುಕಿದವಳು. ” ಆಕಿಗೆ ಬೆಂಗಳೂರಾಗ   MB  ಅ~ಏನ ಅಂತಾರಲ್ರೀ ಅದು ಸಿಕ್ಕೈತ್ರಿ” ಎಂದು ಬೋಗುಣಿ ತಿಕ್ಕುತ್ತಾ ಭಗವತಿಯತ್ತ ನೋಡುತ್ತಾ ಹೇಳಿದಳು. ಭಗವತಿ ಬೆರಗುಗಣ್ಣಿನಿಂದ ಮಾಬೂಬಿಯನ್ನು ನೋಡಿದಳು. ಮಾಬೂಬಿಯ ಎದೆ ತುಂಬಿ ಬಂದಿತ್ತು. ಮುಖ ಕಳೆ ಏರಿ  ಗೆಲುವಾಗಿತ್ತು.ಕಣ್ಣುಗಳು ಕನಸುಗಳ ಮಿಂಚಿನಿಂದ ಹೊಳೆದಿದ್ದವು.ಅವಳ ಮೈ ಧಣಿವು ಕಳೆದುಕೊಂಡು ಹಗುರಾಗಿತ್ತು. “ಹೌದು, MBA ಕೋರ್ಸ್ಸನ್ನು ಸ್ವಲ್ಪು ಕಾಳಜಿಯಿಂದ ಮಾಲಾ ಕಲಿತರೆ ಸಾಕು ಅವಳಿಗೆ ಕಂಪನಿಯವರು ಕರೆದು ನೌಕರಿ ಕೊಡುವ  ಸಾಧ್ಯತೆ ಇತ್ತು. ಭಗವತಿ ಕಾಳಿಕಾ ಪ್ಗೋಟೋದ ಮುಂದೆ ಹಚ್ಚಿದ ದೀಪ ಕಾಂತಿ , ಶಾಂತಿಯಿಂದ ಉರಿಯುತ್ತಿದ್ದದ್ದು  ಒಮ್ಮೆಲೆ  ತೊಲಬಾಗಿಲಿನಿಂದ ಬರ್ರೆಂದು ಬಂದ ಗಾಳಿಗೆ  ಓಲಾಡತೊಡಗಿತು.ಭಗವತಿ ಕಂಪಿಸಿದಳು. ” ದೇವಿ , ಬಡವರ ಬಾಳ್ವೆ ಕಾಯವ್ವ ” ಎಂದು ದೀನ ಕಣ್ಣುಗಳಿಂದ  ದೇವಿ ಫೋಟೋವನ್ನು ದಿಟ್ಟಿಸಿದಳು. ಮಾಲಾ ತೆರೆದಿಟ್ಟ ದೀಪವಾಗಿದ್ದಳು. ಮೊಬೈಲ್ , ಇಂಟರನೆಟ್  ಫೇಸಬುಕ್ಕ , ವ್ಯಾಟ್ಸಾಪದಂತಹ ಬಿರುಗಾಳಿಗಳನ್ನು ಎದುರಿಸಿ ಗೆಲ್ಲುವ ಸವಾಲು ಅವಳ ಎದುರಿತ್ತು.        “ಏನೈತ್ರಿ……‌‌ಮಾಡುದು , ಅದೊಂದು ಫೋನಾಗೇತಿ  ಎದ್ದ್ರು ಕುಂತ್ರು ……ಅದೊಂದಿದ್ದ್ರ ಏನೂ ಬ್ಯಾಡ್ರಿ…..ನಾ ಅಲ್ಲಿ ಥೇಕುದ~ ಇಲ್ಲೀ ಥೇಕುದ್~ ~  ನನ್ನ ಹಣೆಬರಾ ಏನ ಬದಲ್ ಆಗಲಿಲ್ಲ… ” ಮಾಬೂಬಿಯ ಮುಖ ವಿಷದಿಂದ ನಂಜೇರಿದಂತಾಗಿತ್ತು.  ಅಂದ್ರ ಮಾಲಾಳ ಮೇಲೆ ಪರೋಕ್ಷವಾಗಿ ಆರೋಪ ಹೊರಿಸಿದಂತಿತ್ತು. ಅದನ್ನು ಗುರುತಿಸಿದ ಭಗವತಿ ” ಹೋಗ್ಲಿ ಬಿಡು , ನಾಳೆ ಗಂಡನ ಮನಿಯಾಗ ಮಾಡುದು ಇದ್ದ~ ಇರತೈತಿ , ಅಲ್ಲಿ ಅವ್ನ ಬಿಡಸವ್ವರ್ರು ಯಾರು……! ? ಹೊಟ್ಯಾಗ ಹಾಕ್ಕೊ…..ತಾಯಿ ಅಲ್ಲಾ…..ನೀನು…..,!! ” ಭಗವತಿ ಸಮಾಧಾನ ಹೇಳಿದಳು. ” ಯಾವದ …..ಯಾವದ   ಹೊಟ್ಯಾಗ ಹಾಕ್ಕೊಲಿ ಅವ್ವಾರ  ಹಾಕ್ಕೊಳ್ಳುದು ಹಾಕ್ಕೋತೇನಿ  ಹಾಕ್ಕೊಳ್ಳಾರದ್ದು ಹೆಂಗ ಹಕ್ಕೋಲಿ ……….!! ? ” ಮಾಬೂಬಿ ನೋವಿನಿಂದ ತತ್ತರಿಸಿದರೂ ಮಾತಿನ ಮೇಲೆ ಹಿಡಿತವಿಟ್ಟಿದ್ದಳು.ಭಗವತಿಗೆ ಮಾಬೂಬಿಯ  ಸ್ಥೈರ್ಯ ” ಅಬ್ಬಾ !!” ಎನಿಸಿತು. ಭಗವತಿ ಮತ್ತೆ ” ಅಂದರೆ …….ಮಾಬು……????” ಎನ್ನುತ್ತಾ ಅವಳ ಕಣ್ಣುಗಳಲ್ಲಿ ಇನುಕಿದಳು.ಅವಳ ಕಣ್ಣುಗಳು ಅಟ್ಲಾಂಟಿಕ್ ಸಾಗರದ ಭೋರ್ಗರೆವ ಪ್ರವಾಹವಾಗಿತ್ತು. “ಮದುವಿ ಮಾಡಿ ಬಿಡು , ತ್ರಾಸ ತಗೋಬ್ಯಾಡ  ” ಭಗವತಿ ಉಪಾಯ ಸೂಚಿಸಿದಳು. “ಯಾರಿಗೆ ಮಾಡ್ಲಿರಿ ಮದುವಿ ……!!!!!!!!???????? ” ಅವಳ ಕಣ್ಣಿನ ಕಟ್ಟೆಯೊಡದಿತ್ತು. ” ಮಾಲಾಗ ” ಭಗವತಿ ಅಂದಳು. “ಆಗುದಿಲ್ಲಂತ್ರಿ ಆಕಿ ……” ಮಾಬೂಬಿ ಉತ್ತರಿಸುತ್ತಿದ್ದಂತೆ …. ಗಿಡದಲ್ಲಿಯ ಪಕ್ಷಿ ಬರ್ರನೇ ಹಾರಿ ಬಂದು ನೆಲದ ಮೇಲೆ ಬಿದ್ದ ಅಕ್ಕಿಕಾಳುಗಳನ್ನು ಆಯತೊಡಗಿತು.  ಅದನ್ನು ನೋಡಿದ  ಭಗವತಿ ಮಾಬೂಬಿಯರ ಮೈಗಳು ಕಂಪಿಸತೊಡಗಿದವು. ***********************************

ತೆರೆದಿಟ್ಟ ದೀಪ Read Post »

ಕಾವ್ಯಯಾನ

ಕ್ಷಮಿಸು ಪ್ಲೀಸ್..

ಕವಿತೆ ಕ್ಷಮಿಸು ಪ್ಲೀಸ್.. ಮಧುಸೂದನ ಮದ್ದೂರು. ನೋವಿನಾಳದ ಕಿಸರು ಗಾಯಕೆ ನಿನ್ನನೆನಪುಗಳನೊಣಗಳ ದಾಳಿಝೇಂಕಾರಒಳಗೊಳಗೇಯಾತನೆ ವೇದನೆ ಒಬ್ಬನೇ ಇದ್ದೇನೆಹಾಯಿಯಲಿಸುತ್ತಲೂ ಅಳುವಿನಉಪ್ಪುಪ್ಪು ಕಡಲುನನ್ನುಳುವಿನ ಉಪ್ಪು ಜಾರಿಕಡಲು ಹೆಪ್ಪುಗಟ್ಟುತ್ತಿದೆ..ಮುಳುಗಬೇಕೆನ್ನುವ ಹಡಗು ಮುಳುಗುತ್ತಿಲ್ಲದೂರದೆಲ್ಲೆಲ್ಲೋಮಿಣುಕುಹುಳುದಂತಹ ಬೆಳಕುಕಣ್ಣಿಗಾನಿಸುತ್ತಿದ್ದಂತೆನೀನೆನಾದರೂಅದೇ ಹಸಿರು ನೆರಿಗೆ ಲಂಗ ತೊಟ್ಟು ಬಂದೆಯಾಎಂಬ ಹುಂಬತನದ ನಿರೀಕ್ಷೆಸಾಯಲು ಬಿಡುತ್ತಿಲ್ಲಬದುಕಲು ಬಿಡುತ್ತಿಲ್ಲಪ್ರೀತಿ ಅಂದರೆ ಹೀಗೇನಾ..ಗೊತ್ತಾಗುತ್ತಿಲ್ಲಕ್ಷಮಿಸು ಪ್ಲೀಸ್.. ****************************

ಕ್ಷಮಿಸು ಪ್ಲೀಸ್.. Read Post »

ಕಾವ್ಯಯಾನ

ಗುಂಗು

ಕವಿತೆ ಗುಂಗು ಮಾಲತಿ ಶಶಿಧರ್ ನಿನ್ನ ತೋಳಿನ ಚೌಕಟ್ಟುಬಿಟ್ಟು ಬಂದ ಮೇಲೂ ನನ್ನಕೊರಳು ಕೆನ್ನೆಗಳ ಮೂಲೆಯಲ್ಲಿನಿನ್ನ ಪರಿಮಳದ ಭಾಸ. ಬೆಚ್ಚಗಿನ ಉಣ್ಣೆ ಬಟ್ಟೆ ತೊಟ್ಟಿದ್ದರುಒಳಗೆ ಮಾಗಿ ಚಳಿಯ ಕೊರೆತನೀ ಗಿಲ್ಲಿ ಗುರುತು ಮಾಡಿದತೊಡೆಯ ಎದೆಗವುಚಿಕೊಂಡುಕಣ್ಮುಚ್ಚಿ ನಗುತ್ತೇನೆ. ಮುತ್ತನಿಟ್ಟು ಹೊತ್ತೇ ಕಳೆದುಹೋದರು ಮತ್ತು ಮಾತ್ರಹಳಸದೆ ತುಟಿಯಂಚಿನತೊಟ್ಟು ರಕ್ತದಲ್ಲಿ ಹೆಪ್ಪುಗಟ್ಟಿಕುಳಿತಿದೆ. ಅಮಾಸೆ ಹೆರಳ ಇಪ್ಪತ್ತುಬಾರಿ ಒಪ್ಪ ಮಾಡಿದರುಗಾಳಿಗೋಲಾಡೊ ಮುಂಗುರುಳಲಿನಿನ್ನದ್ದೇ ತುಂಟತನ ಕಂಡುಕನ್ನಡಿಯತ್ತ ಕೈಚಾಚುವೆಹುಚ್ಚಿಯಂತೆ.. ***************************************

ಗುಂಗು Read Post »

ಕಾವ್ಯಯಾನ

ಮುನ್ನುಡಿ ಬರೆಯುವೆ

ಕವಿತೆ ಮುನ್ನುಡಿ ಬರೆಯುವೆ ನಾಗರಾಜ್ ಹರಪನಹಳ್ಳಿ ಸೂರ್ಯ ದಿಕ್ಕು ಬದಲಿಸುತ್ತಾನೆಂತೆನಾನು ? ಪ್ರಕೃತಿ ಮೈಮುರಿದು ಮಗ್ಗಲು ಬದಲಿಸುತ್ತಿದೆನಾನು?ನಾನೇನು ಮಾಡಲಿ ?? ಆಧುನಿಕ ಕೌಶಿಕ, ಮುಖವಾಡದ ರಾಮ,ಹೊಸ ನಮೂನಿ ಪಂಜರದೊಳಗೆ ನನ್ನ ಬಂಧಿಸಿರುವಾಗನಾನೇಗೆ ಪಥ ಬದಲಿಸಲಿ ? ಸೂರ್ಯನೇ ನಿನ್ನ ಬೆಳಕುನನಗೆ ಬೆಳಕಾಗಲಿಲ್ಲನದಿಯೇ ನಿನ್ನ ಸ್ವಾತಂತ್ರ್ಯ ನನ್ನದಾಗಲಿಲ್ಲ ಸುಳಿದು ಬೀಸುವ ಗಾಳಿಯೇನಿನ್ನ ಮೈ ನನ್ನ ದಾಗಲಿಲ್ಲನದಿಯೇ ನಿನ್ನ ಕಾಲುಗಳುನನ್ನವಾಗಲಿಲ್ಲ ಆಗ್ನಿಯೇ ನಿನ್ನ ನಾಲಿಗೆಯುನನ್ನದಾಗಲಿಲ್ಲಪ್ರಕೃತಿಯೇ ನಿನ್ನಂತೆ ನಾನುಬದುಕಿ ಬಾಳಲಾಗಲಿಲ್ಲ ಕೊನೆಯ ಪಕ್ಷ ಮರದಂತೆಮೌನಿಯಾಗಲು ಬಿಡಲಿಲ್ಲಚಲಿಸುವ ಚಲನೆಗೂಬಂದ ಬಂಧನ ಬದುಕೇ ಬಂಧನವಾಗಿರಲುನದಿ, ಅಗ್ನಿ, ಗಾಳಿ, ಪ್ರಕೃತಿಯ ಎದುರು ಬೇಡಿಕೊಳ್ಳುವುದಷ್ಟೇ ಉಳಿದದ್ದು …ಹೇಳು ಸೂರ್ಯ ನಿನ್ನಂತೆ ಪಥ ಬದಲಿಸಲಿ ಯಾವಾಗ? ಹರಿವ ನದಿಯೇ ನಿನ್ನಂತೆಸ್ವಚ್ಚಂದವಾಗಿ ಹರಿಯಲಿ ಯಾವಾಗ? ಸುಳಿವ ಗಾಳಿಯೇ ಯಾವಾಗನಿನ್ನಂತೆ ಇತರರಿಗೆ ಕಿವಿಯಾಗಲಿ? ಹೇಳು ಬೆಳಕಿನ ಬೆಳಕೆಕತ್ತಲಿಗೆ ಯಾವಾಗ ದನಿಯಾಗಲಿ? ಪಥಬದಲಿಸಲು ಮನಸ್ಸಿತ್ತುಬಲವೂ ಇತ್ತುಬಂಧನದ ಬೇಲಿಯ ದಾಟಲುಬೇಕಾದ ಹಠ, ಛಲವಕಸಿದುಕೊಳ್ಳಲಾಗಿತ್ತು ; ವ್ಯವಸ್ಥೆಯಚಕ್ರವ್ಯೂಹದಲ್ಲಿ ಸಿಲುಕಿಸಲಾಗಿತ್ತು ;ನದಿಯಾಗಲು, ಗಾಳಿಯಾಗಲೂಕೊನೆಯ ಪಕ್ಷ ಬೆಂಕಿಯಾಗಲೂ ಬಿಡಲಿಲ್ಲ ನನ್ನ ದಾರಿಯೇ ವಿಷಮವಾದೊಡೆಹೇಗೆ ಬದಲಿಸಲಿ ಪಥವ ಸೂರ್ಯದೇವಾ ? ಆದರೂ ….ಕರುಣೆಯ ಆಶಾಕಿರಣ ತಬ್ಬುವ ಆಶಾವಾದ ಚಿಗುರೊಡೆದಿದೆ ನನ್ನೆದೆಯಲಿ *********************************************

ಮುನ್ನುಡಿ ಬರೆಯುವೆ Read Post »

ಕಾವ್ಯಯಾನ, ಗಝಲ್

ಕಾಫಿಯಾನ ಗಜಲ್

ಕಾಫಿಯಾನ ಗಜಲ್ ಅಮೃತ ಎಂ ಡಿ ಅಪ್ಯಾಯಮಾನ ಒಲವ ಹಂಚುವ ಸರದಿ ನನ್ನದುಅಭೂತಪೂರ್ವ ಸಾನಿಧ್ಯ ನೀಡುವ ಗುಣ ನಿನ್ನದು ತುಸು ತುಂಟಾಟವ ಮರೆಮಾಚು ಲಜ್ಜೆ ಆವರಿಸುತ್ತದೆನಡುವಿನ ಒನಪಿನಲ್ಲಿ ಕಾಡಿಸುವುದ ಯಾರು ಕಲಿಸಿದ್ದು.? ಅಧರದಲ್ಲಿ ಏನು ಮಧು ಬಟ್ಟಲು ಅಡಗಿ ಕುಳಿತಿದ್ಯ..?ಚುಂಬಿಸುವ ಪರಿಗೆ ಮೊಗವೆಲ್ಲ ಕೆಂಪೇರಿ ನಲಿಯುವುದು ಶರಾಬಿನ ರಸವ ಹೀರಿದಂತೆ ಒಷ್ಠದಲ್ಲಿಯೂ ಇರುವುದ..?ಪಾಪ ಮೊಗ್ಗಿನಂತೆ ಮೃದು ಆಕೆ, ಸೊರಗಿ ಬಿಟ್ಟಾದು. ಅಮ್ಮು ಈ ಹೈದನ್ಯಾಕೋ ಬಿಡುಗಡೆ ನೀಡುವಂತಿಲ್ಲಮನವು ಅವನ ಆಲಿಂಗನದಲ್ಲಿ ನಕ್ಕು ಕುಣಿಯುವುದು.. ****************************************************

ಕಾಫಿಯಾನ ಗಜಲ್ Read Post »

You cannot copy content of this page

Scroll to Top