ಎಷ್ಟೊಂದು ಚಂದದ ಭಾವಚಿತ್ರಗಳು
ಅನುಭವದಿ ಗಟ್ಟಿಗೊಳ್ಳುತ್ತಾ ನಿಂತ ನೆಲದಲ್ಲೇ ಬೇರು ಬಿಡುತ್ತಾ
ಇನ್ನರ್ಧ ವಯಸ್ಸನ್ನು ಸಾಧನೆಗೆ ಮುಡಿಪಿಡಬೇಕಾಗಿದ್ದ ವಯಸ್ಕರು
ಎಷ್ಟೊಂದು ಚಂದದ ಭಾವಚಿತ್ರಗಳು Read Post »
ಅನುಭವದಿ ಗಟ್ಟಿಗೊಳ್ಳುತ್ತಾ ನಿಂತ ನೆಲದಲ್ಲೇ ಬೇರು ಬಿಡುತ್ತಾ
ಇನ್ನರ್ಧ ವಯಸ್ಸನ್ನು ಸಾಧನೆಗೆ ಮುಡಿಪಿಡಬೇಕಾಗಿದ್ದ ವಯಸ್ಕರು
ಎಷ್ಟೊಂದು ಚಂದದ ಭಾವಚಿತ್ರಗಳು Read Post »
ಗಜಲ್ ಎ . ಹೇಮಗಂಗಾ ರೋಗಿಗಳ ಶುಶ್ರೂಷೆಯಲಿ ನಿರತರಾಗಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟುನಿರೋಗಿಯಾಗಲೆಂದು ಶ್ರಮಿಸುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ನಮಗೂ ಬದುಕಿದೆ ಎಂಬುದನೇ ಮರೆತು ಬದುಕಬೇಕಿದೆ ಇಂದುಹಗಲಿರುಳು ನಿರುತ ದುಡಿಯುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ಕಡುವೈರಿ ವೈರಾಣು ಮಹಾಮಾರಿಯಾಗಿ ಪಂಥಾಹ್ವಾನ ನೀಡಿದೆರಣಕಲಿಯಂತೆ ಹೋರಾಡುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ಸಾವಿನ ಕಬಂಧಬಾಹು ಉಸಿರುಗಟ್ಟಿಸಿದೆ ವಯೋಭೇದವಿಲ್ಲದೇಪಾರಾಗುವ ದಾರಿಯ ಅರಸುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ತೂಗುಗತ್ತಿ ಎಂದು ಬೀಳುವುದೋ ಭಯ ಬೇರೂರಿದೆ ಎದೆಯಲ್ಲಿಜೀವಗಳ ಉಳಿಸಲು ಪಣ ತೊಟ್ಟಿದ್ಧೇವೆ ಪ್ರಾಣವನ್ನು ಪಣಕ್ಕಿಟ್ಟು **************************
ಕವಿತೆ ಬಾಗಿಲನ್ನು ತೆರೆದಿಡಿ ವಿಶ್ವನಾಥ ಎನ್ ನೇರಳಕಟ್ಟೆ ಬಾಗಿಲನ್ನು ತೆರೆದಿಡಿತುಸು ಗಾಳಿಯಾಡಲಿಬರಿಯ ಕಿಟಕಿಸಾಲುವುದಿಲ್ಲ ಈ ಕಾಲಕ್ಕೆಎದೆಯುರಿಯ ಆರುವಿಕೆಗೆಹಿರಿದು ಗಾಳಿಯ ಸಹಕಾರವಿರಲಿ ಬಿಸಿಲ ಝಳಕ್ಕೆ ಬಳಲಿದ ಪಕ್ಷಿಗಳುಬರಲಿ ಒಳಕ್ಕೆವಿರಮಿಸಲಿ ತುಸು ಹೊತ್ತುಪ್ರಣಯನಾದದ ಕೇಕೆಅನುರಣಿಸಲಿ ಭಿತ್ತಿಗಳಲಿ ಮನೆಯೊಳಗೆ ಮುತ್ತಿರುವ ಕತ್ತಲುಕಣಕಣವಾಗಿ ಕಡಿದುಹೋಗಲಿಹೊರಗಿನ ಬೆಳಕಿನಲ್ಲಿಕಣ್ಣ ದೃಷ್ಟಿ ಸೂಕ್ಷ್ಮವಾಗಲಿ ಬಾಗಿಲನ್ನು ತೆರೆದಿಡಿ ಎದೆಯ ಕವಾಟಗಳಲ್ಲಿಸಾಮರಸ್ಯದ ಗಾಳಿಯಾಡಲಿ
ಬಾಗಿಲನ್ನು ತೆರೆದಿಡಿ Read Post »
ಗಜಲ್ ಸಿದ್ಧರಾಮ ಹೊನ್ಕಲ್ ಏಳು ದಶಕಗಳೇ ಕಳೆದವು ಹೊಸ ಮಳೆಯು ಸುರಿಯಲಿಲ್ಲ ನೋಡು ಸಾಕಿಭೂತಾಯಿ ಮಕ್ಕಳ ಬಂಜೆತನ ಹಿಂಗಲೇಯಿಲ್ಲ ನೋಡು ಸಾಕಿ ದುಡಿ ದುಡಿದು ನೊಂದ ರೈತನ ಮುಖದಲ್ಲಿ ನಗೆಯು ಅರಳಲಿಲ್ಲಜಗಕೆ ಅನ್ನ ಹಾಕುವವರ ಬಾಯಿಯೇ ಸಿಹಿಯಾಗಲಿಲ್ಲ ನೋಡು ಸಾಕಿ ಗಾಂಧಿ ಕಂಡ ಗ್ರಾಮೀಣ ಭಾರತದ ಕನಸುಗಳೆಲ್ಲ ಜಾರಿ ಕಡಲ ಪಾಲಾದವು ಈ ಮಣ್ಣಲಿಹಳ್ಳಿ ಹಳ್ಳಿಗಳೆಲ್ಲ ಗುಳೇ ಎದ್ದು ಹೋಗಿ ಸುಖವೆಂಬುದೇ ಸುಳಿಯಲಿಲ್ಲ ನೋಡು ಸಾಕಿ ಕುರ್ಚಿಯ ಕನಸಿನಲಿ ಸ್ವಾರ್ಥದ ಸೆಳವಿನಲಿ ದೇಶ ನಮ್ಮ ನಮ್ಮವರಲ್ಲಿಯೇಹರಾಜಾಯಿತುಅಧಿಕಾರದ ಅಮಲಿನಲ್ಲಿ ರೈತರ ನೆಮ್ಮದಿಗೆ ಯಾರು ಪೂರ್ಣ ಚಿಂತಿಸಲಿಲ್ಲ ನೋಡು ಸಾಕಿ ‘ಹೊನ್ನಸಿರಿ’ ಭೂತಾಯಿ ಮಕ್ಕಳ ಆಶೋತ್ತರಗಳಿಗೆ ಉತ್ತರ ಎಲ್ಲಿಹದುಸ್ವಾರ್ಥದ ಈ ಪಡಿಪಾಟಲಿಗೆ ಬಂಡೆಳದೇ ಫಲ ದೊರಕುವದಿಲ್ಲ ನೋಡು ಸಾಕಿ ***************************************************
ಕವಿತೆ ಅಮ್ಮ ಸಂತೋಷ್ ಹೆಚ್ ಈ ಈ ಜೀವಕ್ಕೆ ಗರ್ಭದಿ ನೆಲೆ ಕೊಟ್ಟುಹೃದಯದಲಿ ಪ್ರೀತಿಯ ಬಚ್ಚಿಟ್ಟುಭವಿಷ್ಯದ ಕನಸಿನ ಗಿಡನೆಟ್ಟುನವಮಾಸ ಕಳೆದಳು ಅಮ್ಮ ನನ್ನ ಒಡಲಿಗೆ ಮಡಿಲಾದೆ ನೀನುಹಾಲನ್ನು ಎರೆದ ತಾಯಿಯು ನೀನುಈ ದೇಹಕ್ಕೆ ಉಸಿರನ್ನು ನೀಡಿದವಳು ನೀನುಆ ಋಣವ ತೀರಿಸಲಾಗದ ಮಗನಾದೆ ನಾನು ಮನೆಯೆಂಬ ಗುಡಿಗೆ ದೇವರು ನೀನುಹಸಿವನ್ನು ನೀಗಿಸೋ ಕರುಣಾಮಯಿ ನೀನುಬಿಸಿಲಲ್ಲೂ ಕೂಡ ನೆರಳಾದೆ ನೀನುಆ ಮರಕ್ಕೆ ನೀರೆರೆಯುವ ಮಗನಾದೆ ನಾನು ಅಜ್ಞಾನವೆಂಬ ಇರುಳನ್ನು ಸರಿದುಅರಿವೆಂಬ ಬೆಳಕನ್ನು ನೀಡಿದೆ ನೀನುಈ ಬಾಳಿಗೊಂದು ದೀಪವು ನೀನುಆ ದೀಪ ಕಾಯೋ ಮಗನಾದೆ ನಾನು ಎಲ್ಲ ಜೀವಿಗಳಿಗೂ ಅಮ್ಮನೇ ಮೂಲಹುಡುಕಿದರು ಸಿಗದು ಅದರ ಮೂಲಅಮ್ಮನ ಒಡಲು ಪ್ರೀತಿಯ ಕಡಲುಅಳಿವಿಲ್ಲದ-ಹುಳುಕಿಲ್ಲದ ಪ್ರೀತಿಯು ನಿನ್ನದು ********
ಗಜಲ್ ಅರುಣಾ ನರೇಂದ್ರ ಇಲ್ಲಿ ಉಸಿರಿಗಾಗಿ ಒದ್ದಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿಅಲ್ಲಿ ಬದುಕಿಗಾಗಿ ಹುಡುಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಚಂದ್ರಮನ ಮುಖ ನೋಡಿ ತಿಂಗಳ ಪೂರ್ತಿ ರೋಜಾ ಮಾಡಿರುವೆಇವರು ನೋಟುಗಳ ಮುದ್ದಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಶಹರಿ ಹೊತ್ತಲ್ಲಿ ಸತ್ತವರು ನೆನಪಾಗಿ ಕಣ್ಣು ತುಂಬಿಕೊಳ್ಳುತ್ತವೆಇಫ್ತಾರ್ ಮಾಡುತ್ತ ಮಿಡುಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಹಗಲೆನ್ನದೆ ಇರುಳೆನ್ನದೆ ನಮಾಜು ಮಾಡಿ ದುವಾ ಬೇಡಿದ್ದೇನೆದೇಶದ ದಳ್ಳುರಿ ತಣ್ಣಗಾಗದೆ ತಡಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಕೆಂಪಾದ ಮೆಹಂದಿಯ ರಂಗು ಕಣ್ಣ ಸುರುಮಾವನ್ನೇ ಇರಿಯುತ್ತಿದೆಕಾಣದ ಕೈಗಳಿಗೆ ಜೀವಗಳನ್ನೇ ಜಕಾತ್ ನೀಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಹಬ್ಬಕ್ಕೆ ಕೊಂಡ ಹೊಸ ಬಟ್ಟೆ ಕಫನ್ ಆಗುತ್ತದೆಂದು ನನಗೆ ಗೊತ್ತಿರಲಿಲ್ಲಮುಳುಗಿದ ಚಾಂದ್ ಗಾಗಿ ಇಂತಜಾರ್ ಮಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಕತ್ತಲಲ್ಲಿ ತಡವರಿಸುವ ಅರುಣಾ ಗೆ ಶಮೆಯ ಬೆಳಕು ಕಾಣುತ್ತಿದೆಕೈಚೆಲ್ಲಿದ ಅಲ್ಲಾಹುವಿಗೆ ಇನ್ನೂ ಬೇಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ********
ಬಸವ ಜಯಂತಿಯ ವಿಶೇಷ ಕವಿತೆ ಗುರು ಬಸವ ಕೆ.ಶಶಿಕಾಂತ ಪೀಠ-ಪಟ್ಟವೇರಲಿಲ್ಲ,ಬಿರುದು-ಬಾವಲಿಗೆಳಸಲಿಲ್ಲಸಗ್ಗದ ದೇವತೆಯಂತೂ ಅಲ್ಲಪೂಜೆ-ಪರಾಕು ಬೇಕೇ ಇಲ್ಲಜಗದ ಸೇವೆಗೊಲಿದು ಬಂದಭಕ್ತನೀತ ಬಸವ…. ಭುವಿಯ ಮೇಲೆ ಗುರುಗಳಿಲ್ಲದೀವತೆಗಳಂತೂ ಸಾಧ್ಯವಿಲ್ಲಎಲ್ಲ ಎಲ್ಲ ನಾವೇ ಎಲ್ಲಎನುವ ಡೊಂಬರನುಡಿಯನಳಿದುನೆಲದ ಮೇಲೆ ಭಕ್ತರಿಲ್ಲಜಗವು ಜಂಗಮವಾಗಿಹುದಲ್ಲಇದ್ದರಹುದು ನಾನೇ ಒಬ್ಬಭಕ್ತನೆಂದ ಭೃತ್ಯನೀತ ಬಸವ… ಜಗದ ಕುರುಹನರಿಯದೆಯೂಜಗದ ಗುರು ತಾನೇ ಎಂದುಒರಲಿ ಒರಲಿ ತಮಟೆ ಹೊಡೆವಕೂಗುಮಾರಿ ಕೂಟದಿಗೊಡ್ಡುತನದ ಗಡ್ಡ ಬಿಸುಟುದೊಡ್ಡತನದ ಹಮ್ಮು ಹೊಸೆದುಕಿರಿಯ ತಾನು, ಹಿರಿಯರೆಲ್ಲರೆಂದುನಮಿಪ ಶಿವ ಭಕ್ತ ಪ್ರೇಮಿ ಬಸವ. ಹೆಣ್ಣು,ಹೊನ್ನು,ಮಣ್ಣಿಗೆಳಸಿಹಿರಿಯ ದೈವ ತಾವೇ ಎನಿಸಿಗರುವದಿಂದ ಅಳಿದು ಹೋದಹಿರಿಯನಲ್ಲ ಬಸವ. ಮೂರನಳಿದು,ಆರು ತಿಳಿದುಅಂಗವಳಿದು ಲಿಂಗವಾಗಿಎಲ್ಲರೊಳು ಜಂಗಮವ ಕಾಣ್ವಸಂಗನ ನಿಲುವು ಬಸವಸಕಲ ಜೀವದ ಕುಶಲ ಬಯಸಿಅನ್ಯವನವನಳಿದು ತನ್ನತನಕೆ ಎಳಸಿಇಹದ ಸುಖಕೆ ದಾಸೋಹಿಯಾದಜಗದ ಗುರು ಬಸವ. ದೇವಗಿಂತ ಭಕ್ತ ಮಿಗಿಲುಪದವಿಗಿಂತ ಸೇವೆ ಮಿಗಿಲುಓದಿ ಜಾಣನಾಗೋ ಬದಲುಅರಿದು ಶರಣನಾಗುವದೇ ಮೇಲುಎಂದು ಅರುಹಿ ಜಗವ ಪೊರೆದಆದಿ ಗುರುವು ಬಸವನಮಗೆ ಜಗದ ಗುರು ಬಸವ **************
ಬಸವ ಜಯಂತಿಯ ವಿಶೇಷ ಕವಿತೆ ಜ್ಞಾನ ಜ್ಯೋತಿಗೆ ಶರಣು ಪ್ರಭಾವತಿ ಎಸ್ ದೇಸಾಯಿ ಹುಟ್ಟು ಸೂತಕದ ಕುರುಹು ತ್ಯಜಿಸಿದಾತಅರಿವಿನ ಲಿಂಗವ ಕರದೊಳು ಕೊಟ್ಟಾತನರಜನ್ಮಕೆ ಹರಜನ್ಮದ ಅರಿವು ಮೂಡಿಸಿದಾತಭವ ಬಂಧನವ ಬಿಡಿಸಿದಾತಂಗೆ ಶರಣು ಜ್ಞಾನದ ಬೀಜ ಬಿತ್ತಿ,ಅಜ್ಞಾನದ ಕಳೆ ಕಳೆದಾತಲಿಂಗ ಭೇದವ ಅಳಿಸಿ ಸಮಾನತೆ ಹಕ್ಕು ನೀಡಿದಾತಜಾತಿಯ ಅಳಿಸಿ ಜಾತ್ಯಾತೀತ ರಾಷ್ಟ್ರ ನಿಮಿ೯ಸಿದಾತಶೋಷಣೆಯ ಧಿಕ್ಕರಿಸಿದಾತಂಗೆ ಶರಣು ನೊಂದ ಹೃದಯಗಳ ಒಂದು ಗೂಡಿಸಿದಾತಕಾಯಕದಿ ಆಥಿ೯ಕ ಸಮಾನತೆ ಸಾರಿದಾತವೇದ ಉಪನಿಷತ್ತುಗಳ ಭಾಷ್ಯವ ತ್ಯಜಿದಾತವಚನಾನುಭವಾಮೃತವ ಉಣಿಸಿದಾದಂಗೆ ಶರಣು ದೇಹವೇ ದೇವಾಲಯ,ಶಿರವೇ ಹೊನ್ನಕಳಸವೆಂದಾತದಯವೇ ಧರ್ಮದ ಮೂಲವೆಂದಾತಗುರು ಲಿಂಗ ಜಂಗಮ ಗಳ ತ್ರಿಕೂಟ ನಿಮಿ೯ಸಿದಾತದಾಸೋಹವೇ ಸಹ ಬಾಳ್ವೆ ಎಂದಾತಂಗೆ ಶರಣು ಭವದ ವ್ಯವಹಾರಕೆ ದಂಡಾಧೀಶನಾದಾತನುಡಿದಂತೆ ನಡೆದು ಕಾಯಕ ನಿಷ್ಠೆ ತೋರಿಸಿದಾತಶರಣ ಸತಿ ಲಿಂಗಪತಿ ಎಂದು ಭವದಲಿ ಬಾಳಿದಾತಭಕ್ತಿ ಭಂಡಾರಿಯಾದ ಅಣ್ಣ ಬಸವಂಗೆ ಶರಣು ಕಲ್ಯಾಣದಲಿ ಅನುಭವ ಮಂಟಪ ಸ್ಥಾಪಿದಾತಜಗಕೆ ಪ್ರಜಾ ಪ್ರಭುತ್ವದ ಕಲ್ಪನೆ ಹುಟ್ಟಿಸಿದಾತಬಿಜ್ಜಳನ ಅಮಾತ್ಯ ಪದವಿಯ ತ್ಯಜಿಸಿದಾತಭವದಲಿ ಜ್ಞಾನ ಜ್ಯೋತಿ ಬೆಳಗಿಸಿದಾತಂಗೆ ಶರಣು. ****************
ಜ್ಞಾನ ಜ್ಯೋತಿಗೆ ಶರಣು Read Post »
ಸೋಪು, ಸ್ಯಾನಿಟೈಜರ್, ಉಪ್ಪು, ಲಿಂಬೆಹಣ್ಣು
ಇತ್ಯಾದಿಗಳಿಂದ ತೊಳೆಸಿಕೊಂಡು
ಶುಭ್ರವಾಗುತ್ತಿವೆ
ಎಷ್ಟೆಂದರೂ ಜೀವ ಭಯ ಸ್ವಾಮಿ!
You cannot copy content of this page