ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
jugal
ಕಾವ್ಯಯಾನ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

Read Post »

ಕಾವ್ಯಯಾನ

ಕವಿತೆಯ ಸಾವು

ಕವಿತೆ ಕವಿತೆಯ ಸಾವು ಅಬ್ಳಿ,ಹೆಗಡೆ ಸಖೀ,,,ಜೊತೆಗಾತಿ,,,,!ನೀ,,ಅಳುವಾಗ,ನಾ,,ನಗುತ್ತಿರುವೆ.ನಾ,,ಅಳುವಾಗ,ನೀ,,ನಗುತ್ತಿರುವೆ.ನಾ ಆತ್ಮರತಿಯಾದರೂನನ್ನ-ನಿನ್ನ ನಡುವೆ-ಕೊನೆಯಿರದ,ವಿಲಕ಼ಣ,, ನಂಟು.ಬಿಡಿಸಲಾಗದ,ಸುಭದ್ರ ಅಂಟು.ನಗು-ಅಳುವಿನ ಮಧ್ಯೆ,ವೈರುದ್ಧದ ಕತ್ತಲಲ್ಲಿಬಚ್ಚಿಟ್ಟುಕಾಯುತ್ತಿವೆ–ನೂರೆಂಟು ದೇವರು-ಧರ್ಮ,ಕಟ್ಟುಪಾಡುಗಳುನೋಡಲು,–ಕವಿತೆ ಸಾಯುವದನ್ನು.ನೋವಿದ್ದರೂ ಮನದಿ,ಹಚ್ಚಿಬಿಡು ಕತ್ತಲಲ್ಲಿಒಂದು ಸಣ್ಣ ಹಣತೆ,ಸಾಯುವ ಕ಼ಣವನ್ನುಬೆಳಕಲ್ಲಿ ಆಸ್ವಾದಿಸಲು.ಆನಂದಿಸಲು. **********

ಕವಿತೆಯ ಸಾವು Read Post »

ಕಾವ್ಯಯಾನ, ಗಝಲ್

ಕಾಡಿದ ಗಜಲ್ ಹಿಂದಿನ ಕಥನ

ಯಾತಕ್ಕೆ ಈ ದಿನಗಳು ಬಂದವೋ..ಮುಂಚಿನ ಆರೋಗ್ಯಯುತ ಸದಾ ಚೆಂದನೆಯ ದುಡಿದುಣ್ಣೋ ದಿನಗಳು ಮತ್ತೆ ಮರಳಲಿ. ಆ ಸೃಷ್ಟಿಕರ್ತನೇ ಇದನ್ನು ಇರುವ ವ್ಯವಸ್ಥೆಯ ಮೂಲಕ ನಿಯಂತ್ರಿಸಲಿ ಎಂದು ಇಲ್ಲಿಯ ಜನಪರ ಕವಿಯಾದವ ಕೇಳಿಕೊಂಡು ಎಲ್ಲರಿಗೂ ಒಳ್ಳೆಯ ಆರೋಗ್ಯ, ಜೀವ ಇದ್ದರೆ ಜೀವನ ಅದು ಕಾಪಾಡಿಕೊಳ್ಳಿ ಅಂತ ಕೋರಿಕೊಂಡು ಇದನ್ನು ಚಿಂತಿಸಿ ಬರೆಯಲು ಹಚ್ಚಿದ ಮಿತ್ರರಿಗೂ, ಓದಿದ ನಿಮಗೆಲ್ಲಾ ವಂದಿಸಿ ಮುಗಿಸುವೆ.

ಕಾಡಿದ ಗಜಲ್ ಹಿಂದಿನ ಕಥನ Read Post »

ಕಾವ್ಯಯಾನ

ಅಪ್ಪನೆಂಬೋ ಆಗಸ

ಕವಿತೆ ಅಪ್ಪನೆಂಬೋ ಆಗಸ ಯಾಕೊಳ್ಳಿ.ಯ.ಮಾ ಊರ ದೇವಿಯ ಆವಾಹಣೆಮೈಮೇಲೆ ಬಂದ ದಿನ ಊರಗೌಡರಿಗೆ,.ಯಜಮಾನರಿಗೆ,ಅಪ್ಪ‘ಏನರಲೆ ಮಕ್ಕಳ್ರಾ’ ಅಂತಿದ್ದದಿನವೆಲ್ಲಾ ಅವರ ಮುಂದೆಕೈಕಟ್ಟಿ ನಿಲ್ಲುತ್ತಿದ್ದ ಅಪ್ಪನ ,ದೇಹದೊಳಗೆಖಾಯಮ್ಮಾಗಿ ದೇವಿ ಬರಬಾರದೇಅಂದುಕೊಳ್ಳುತ್ತಿದ್ದೆ. ವಾದ್ಯಗ಼ಳ ಸಾಥು‌ ನಡುವೆರಾಗ ತಗೆದು‌ಹಾಡುತ್ತಿದ್ದಅಪ್ಪ, ಥೇಟ್ದೇವಲೋಕದ ಗಂಧರರ್ವನಂತೆಕಾಣಿಸುತ್ತಿದ್ದ ವರುಷವೆಲ್ಲಾ ಜೀತದಾಳಾಗಿದುಡಿವ ಅಪ್ಪ ಮನೆಗೆ ಬಂದೊಡನೆಮೈಮೇಲಿನ ಅರಿವೆಹೊರಗೆ ಕಳೆದು ನೀರಲ್ಲಿತೊಯ್ಯಿಸಿ ಒಳಗೆ ಬರುತ್ತಿದ್ದಆವರೆಗೆ ನಮ್ಮನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲಅರಿವೆ ಕಳೆದ ನಂತರ ನಮ್ಮಅಪ್ಪ ಅನಿಸುತ್ತಿತ್ತು ಕಾಣದೂರಿಗೆ ಅಕ್ಷರದ ಬಿಕ್ಷೆಎತ್ತಲು ನನ್ನ ಕಳಿಸಿ ಮಗಸಾಹೆಬನಾಗಿ ಬರುವಕನಸು ಕಾಣುತ್ತಿದ್ದ ಅಪ್ಪ ನನ್ನ ವಿದ್ಯೆಯ ಚಂದಾ ಕಟ್ಟಲು‌ಕಂಡವರನ್ನೆಲ್ಲ ಹಣಕೇಳುತ್ತಿದ್ದುದನೆನಪಾಗಿ ಈಗ ಜೀವಜಲ್ಲೆನ್ನುತ್ತದೆ ನಾನು ಅಕ್ಷರದ ಅನ್ನ ಕಾಣು‌ವಮೊದಲೇನಮ್ಮನ್ನು ಅನಾಥರನ್ನಾಗಿಸಿಅಪಗಪಕಾಣದೂರಿಗೆ ಪಯಣ ಬೆಳೆಸಿದುದುನೆನಪಾಗಿ ಕಣ್ಣುಹನಿಯೊಡೆಯುತ್ತವೆ

ಅಪ್ಪನೆಂಬೋ ಆಗಸ Read Post »

ಕಾವ್ಯಯಾನ

“ಬರಿಯ ಬಯಲು” ……ನೆನೆದು…..!!

ಮಣ್ಣಿನ ಮನೆ ಅಜ್ಜನದ್ದಾಗಿದ್ದರೂ
ಅದರ ‘ರೂಪ ಲಾವಣ್ಯ’ ನೀನೇ
ಹೊಲ ಯಾರದ್ದೋ ಖರೀದಿ ಮಾಡಿದ್ದರೂ
ಅದರ ಮಣ್ಣಿನ ‘ನಿಲುವು ‘ ನೀನೇ

“ಬರಿಯ ಬಯಲು” ……ನೆನೆದು…..!! Read Post »

ಕಾವ್ಯಯಾನ

ನನ್ನ ಅಪ್ಪನ ಬಗ್ಗೆ

ಕವಿತೆ ನನ್ನ ಅಪ್ಪನ ಬಗ್ಗೆ ಮಂಜೇಶ್ ದೇವಗಳ್ಳಿ ಆತ ಎಂದೂ ಅಳೆತ ಮಾಡಿ ಏನೂ ನೀಡಿಲ್ಲಆತ ಬೊಗಸೆ ಮೊಗಸೆ ತುಂಬಿ ನೀಡಿದಆತನ ಮನದ ಬಲ ಛಲದಕಳೆ ಮೊಗದಿಆತ ನುಡಿ ನಡೆ ನಾಜುಕಿಗೆ ನೆಲದ ಬಲಆತನ ಬವಣೆ ಬದುಕೆ ನಮ್ಮ ಆಧಾರಆತನ ಹಸಿಗೂಸಿನ ನಗುವಲಿ ನಾವಿನ್ನೂ ಮಗು. ಮತ್ತೆಷ್ಟು ಮೃಷ್ಟಾನ್ನ ಮೊಗದಿ ಮುಂಗುರುಳ ನಗುಏರಿ ಮೇಲ ಕಳೆಯನು ಪಸಲನು ಹದನಾಗಿಸಿರುವೆ,ಇನ್ನೆಷ್ಟು ಇರುಳ ಕದ್ದ ಕನಸಿನ ಬಲವು ನಮ್ಮೊಲವಿಗೆಇಂತಿಷ್ಟು ಸಾಲಾದೆ ತೀರದ ಹಿಂಗಿತಗಳಿಗೆ ಇಂಧನವು,ಮನ್ನಣೆಯ ಹೊಣೆ ನಿನ್ನೆಗಲಿಗೇಕೆ ತುಸು ವಿರಮಿಸುನೀ ತೆತ್ತ ಹಗಲುಗಳು ತರಲಿವೆ ಸಮೃದ್ಧ ಬೆಳಕನು,ನಾಳೆಯ ಬಾಳಿಗೆ ದಾರಿಯು ದಿಟದ ನಿನ್ನೆಜ್ಜೆಗಳು. ಇರುಳಲಿ ಕೈ ಹಿಡಿದು ನಡೆವ ಅಂಬೆಗಾಲ ನಡಿಗೆಯಂತೆಭುಜಕೆ ಭುಜ ಒರಗಿ ಕುಳಿತು ತುಸು ಹೊತ್ತು ಕಳೆವಎದೆಗೊರಗಿ ನೆನೆವ ಮರೆತಂತಿರುವ ಆ ದಿನಗಳನುಹಸಿವ ನೀಗುವಷ್ಟು ಕೈ ತುತ್ತನುಣಿಸಿ ದಣಿವ ತಣಿಸುತಿಳಿಸು ಕಣ್ಣಿದ್ದರು ಕಾಣದ ಕಥೆಯ ತೊಡೆಗೊರಗಿ ಮಲಗುವೆನೆತ್ತಿಯ ಸವರಿ ಮುತ್ತನೊಂದಿತ್ತು ಬಿಡು ಬತ್ತದಿರುವಾಗೇಸಹಿಸಿ ಗೆದ್ದವ ನೀ ನಿನ್ನಂತಾಗ ಬೇಕೆಂದೆ ನನ್ನ ಕುಡಿ ಜೀವ ನಕ್ಕಾಗ. *******************

ನನ್ನ ಅಪ್ಪನ ಬಗ್ಗೆ Read Post »

ಕಾವ್ಯಯಾನ

ಅಪ್ಪ ಮೌನವಾಗಿದ್ದಾನೆ !!!

ಕವಿತೆ ಅಪ್ಪ ಮೌನವಾಗಿದ್ದಾನೆ !!! ಕಾಡಜ್ಜಿ ಮಂಜುನಾಥ ಅಪ್ಪ ಮೌನವಾಗಿದ್ದಾನೆಈಗೀಗ ಮಾತು ಕಮ್ಮೀಮುಂಚೆಯಾದರೂ ಬೈಯುತ್ತಿದ್ದಕೆಲಸ ಮಾಡು ಎನ್ನುತ್ತಿದ್ದದಾರಿ ತಪ್ಪಿದರೆಬೆದರಿಸುತ್ತಿದ್ದಕನಸಿನ ಗೋಪುರ ಮಗನಲಿಕಟ್ಟಿ ನೀರೆಯುತ್ತಿದ್ದಅನಾರೋಗ್ಯಕ್ಕೆ ತಪ್ಪದೆಬೆಟ್ಟದಂತೆ ಜೊತೆ ನಿಲ್ಲುತ್ತಿದ್ದಬೆನ್ನು ತಟ್ಟಿ ಧೈರ್ಯ ತುಂಬುತ್ತಿದ್ಧಎಂದು ಓದಲೇಬೇಕು ಎಂದುಗದರಲಿಲ್ಲಚಾಡಿಕೋರರರಿಗೆ ಕಿವಿಯಾಗಲಿಲ್ಲನಂಬಿಕೆಯ ಗೋಡೆ ಮಗನಲ್ಲಿನಿರ್ಮಿಸಿದಅರಮನೆಯಂತಹ ಸೌಧವಾಗಿಸಿದಬದುಕು ಕಲಿಸಿಬೆವರಲಿ ರಕ್ತ ಹರಿಸಿಸಾಧನೆಗೆ ಬೆನ್ನೆಲುಬಾಗಿ ನಿಂತಕನಸು ನನಸಾಗಿದ್ದಕ್ಕೆಅಪ್ಪ ಮೌನಿಯಾಗಿಖುಷಿ ಪಟ್ಟಿದ್ದಾನೆಭಾರತರತ್ನ ಪಡೆದಂತೆಕಂಬನಿ ಮಿಡಿದಿದ್ದಾನೆಆದರೆಅವನು ಆಡಿದ ಪ್ರತಿ ಮಾತುಕಿವಿಯ ತಮಟೆಯಲ್ಲಿಬಿಜಾಪುರದ ಗೋಲ ಗುಮ್ಮಟದಂತೆಪಿಸುಗುಡುತ್ತಸದಾ ಎಚ್ಚರಿಸುತ್ತಿದೆ…………..

ಅಪ್ಪ ಮೌನವಾಗಿದ್ದಾನೆ !!! Read Post »

You cannot copy content of this page

Scroll to Top