ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗೆಳತಿ

ಕವಿತೆ ಗೆಳತಿ ಪ್ರೊ.ರಾಜನಂದಾ ಘಾರ್ಗಿ ಹಾಗೇ ಒಬ್ಬಳು ಸುಮ್ಮನೇಚಿಕ್ಕ ಪುಟ್ಟ ಗೆಳತಿದಾರಿಯಲಿ ಸಿಕ್ಕವಳುನಾಲ್ಕು ಹೆಜ್ಜೆ ನಡೆದವಳುಸುಮ್ಮನೇ ಮಾತಿಗೆ ಎಳೆದುಮನ ಸೆಳೆದವಳುಮಾತಿಗೆ ವೀಷಯವೇನಿಲ್ಲಸಮಯದ ಪರಿವೆಯಿಲ್ಲದಾರಿ ಸರಿದು ಹೋಗಿಕವಲುಗಳೊಡೆದಾಗಕಣ್ಮರೆಯಾದವಳುಮನದ ಮೂಲೆಯಲ್ಲಿಮನೆಮಾಡಿದ ಚದುರೆಇರುವಿಕೆಗೆ ಗುರುತಿಲ್ಲಭೇಟಿಯಾಗುವ ಬಯಕೆಯಿಲ್ಲಆದರೂ ಮರಿಚಿಕೆಯಂತೆಕನಸಲಿ ಕಾಡುವಳುಕಣ್ಣಿನ ನೀರಾಗುವಳು ***********************

ಗೆಳತಿ Read Post »

ಕಾವ್ಯಯಾನ

ದೊಂದಿ….

ಕವಿತೆ ದೊಂದಿ…. ಕಗ್ಗಲ್ಲನ್ನೂ ಮೃದುವಾಗಿಕೊರೆದು ಬೇರೂರಿ ನಿಂತುತೀಡುವ ತಂಗಾಳಿಯ ಸೆಳೆತಕೆಬಾಗಿ ಬಳುಕುವಬಳ್ಳಿಯ ಕುಡಿಯಲ್ಲಿನಿನ್ನ ನಡಿಗೆಯ ಸೆಳಕು ಕಂಡುನನ್ನ ಕಣ್ಣುಗಳು ಮಿನುಗುತ್ತವೆ…. ಬೆಳದಿಂಗಳಿಗೆ ಬೇಡವಾದಕಾಡಿಗೆ ಕಪ್ಪಿನ ರಾತ್ರಿಯಲಿದೂರದಿ ಮಿನುಗುವಕೋಟಿ ನಕ್ಷತ್ರಗಳ ವದನದಲಿನಿನ್ನ ನಗೆಯ ಬೆಳಕು ಚೆಲ್ಲಿದಂತಾಗಿನನ್ನ ಮನಸ್ಸು ಮುದಗೊಳ್ಳುತ್ತದೆ…. ಬಿಸಿಲ ಬೇಗೆಯಲಿಬಸವಳಿದವನಿಗೆ ಬಯಲಿನಲಿ ನಿಂತಒಂಟಿ ಮರದ ತಣ್ಣನೆಯ ನೆರಳಿನಂತೆಬಾಳ ಬೇಗೆಯಲಿ ಬಸವಳಿದವನಿಗೆನಿನ್ನ ಮಡಿಲು ನೆನಪಾಗಿನನ್ನ ಹೃದಯ ಪುಳಕಗೊಳ್ಳುತ್ತದೆ… ಹೀಗೇ….. ನೀ ಧಿಕ್ಕರಿಸಿಚೆಲ್ಲಿ ಹೋದ ಸುಡುಸುಡುವನೆನಪಿನ ಕಿಡಿಗಳನುಹೆಕ್ಕಿ ದೊಂದಿ ಮಾಡಿಕೊಳ್ಳುತ್ತಿದ್ದೇನೆಬದುಕಿನ ಕತ್ತಲೆಗಿರಲೆಂದು…! ಮತ್ತೆ ಕನಸು ಕಾಣುತ್ತಿರುವೆನಾವು ಅಪರಿಚಿತರಾಗಿದ್ದತಿರುವಿನಿಂದ ಯಾನ ಶುರುವಾದರೆಸುಂದರವಾಗಬಹುದು ಬದುಕು…! ಕಾಂತರಾಜು ಕನಕಪುರ

ದೊಂದಿ…. Read Post »

You cannot copy content of this page

Scroll to Top