ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾಂತರಾಜು ಕನಕಪುರ ಅವರ ಕವಿತೆಗಳು

ಕಾಂತರಾಜು ಕನಕಪುರ ಅವರ ಕವಿತೆಗಳು ಜಾತಿ ಹೇವರಿಕೆ ಹುಟ್ಟಿಸುವವಿಕಾರ ವೃಕ್ಷಎಲ್ಲಿರುವುದೋ ಬೇರುಯಾರೂ ಅರಿಯರು…ರೆಂಬೆ-ಕೊಂಬೆಗಳು ಲೆಕ್ಕಕ್ಕೆಸಾವಿರಾರು…! ಅವರವರ ಅನುಕೂಲಕೆಯಾರೋ ನೆಟ್ಟರು…ಯಾರೋ ನೀರಿಟ್ಟರು…ಯಾರೋ ಗೊಬ್ಬರ ಕೊಟ್ಟರು…ಹಲವರು ಕಣ್ಣೀರಿಟ್ಟರು…ಅಂತು ಬೆಳೆದು ನಿಂತಿದೆಉದ್ದಂಡ ವಿಷ ವೃಕ್ಷ…! ಈ ಮರದ ನೆರಳು ನೆರಳಲ್ಲ ಅದುಅನುನಯದಿ ನೇಯ್ದ ಉರುಳುಅನುಕೂಲ ಪಡೆದಿಹರು ಕೆಲವರುಸಿಕ್ಕಿಬಿದ್ದು ನರಳುತ್ತಿರುವರು ಹಲವರು ಇನ್ನಾದರೂ…ನಾವು ಹಿಡಿಯಬೇಕಿದೆಅರಿವಿನಿಂದ ಮಸೆದ ಸಮಾನತೆಯ ಅಸ್ತ್ರವನುಕಡಿದುರುಳಿಸಲು ಜಾತಿಯ ವಿಷ ವೃಕ್ಷವನುಆಗ ಮಾತ್ರ ಆಗಬಹುದು ದೇಶದ ಏಳಿಗೆತಪ್ಪಿದರೆ ನಮ್ಮನ್ನು ಕ್ಷಮಿಸದೆಂದೆಂದೂಮುಂಬರುವ ಪೀಳಿಗೆ… ———————– ನಿನ್ನ ಹಾಗೆಯೇ ಇದೆ ಮನದಣಿಯೆ ನೋಡಿ ಮಣಿದೆತುಟಿ ತಲುಪಿದ ಮಾತುಗಳುಅಲ್ಲಿಯೇ ದಸ್ತಗಿರಿಯಾದವುಆಹಾ…! ಎಷ್ಟೊಂದು ಚೆಲುವು? ಇಬ್ಬನಿಯ ಹನಿಗಳು ನೆತ್ತಿಯಮೇಲೆ ಮುತ್ತಿನಂದದಿ ನಿಂದಿಹವುಕದಪುಗಳಲಿ ರಾತ್ರಿ ಕಂಡ ಕನಸಿನಎಳೆಗಳು ಹಸಿಹಸಿಯಾಗಿಹವು…! ತೀಡುತಲಿದ್ದ ತಂಗಾಳಿಗೆ ಗಂಧವುಬೆರೆತು ಸುತ್ತಲೂ ಹರಡುತಲಿತ್ತುಸೂರ್ಯರಶ್ಮಿಗೆ ಸವಾಲೊಡ್ಡುತಿರುವಪಕಳೆಗಳು ಬೆಳಕಿಗೆ ಬಣ್ಣ ಬಳಿಯುತಲಿದ್ದವು…! ಗಾಳಿಯಲ್ಲಿ ಬೆರತ ಗಂಧವುಬಟ್ಟೆಗಳಲ್ಲಿ ಸಿಕ್ಕಿಬಿದ್ದಿತ್ತುಬೆಳಕಿಗೆ ತೀಡಿದ್ದ ಬಣ್ಣಕಂಗಳಿಗೆ ಮೆತ್ತಿಕೊಂಡಿತ್ತು…! ಮುಟ್ಟಬೇಕೆಂಬ ತುಡಿತವನುಕಷ್ಟಪಟ್ಟು ತಡೆದುಕೊಂಡೆನುಕಣ್ಣಿಗೆ ಮೆತ್ತಿದ ಬಣ್ಣ, ಬಟ್ಟೆಗೆ ಅಂಟಿದ ಗಂಧಮನದೊಳಗಿಳಿದು ಮನೆವರೆಗೂ ಬಂದಿವೆ..! ಥೇಟ್ ನಿನ್ನ ಹಾಗೆಯೇ ಇದೆಅದೋ ಅಲ್ಲಿ ಅರಳಿ ನಿಂತಬೇಲಿ ಮೇಲಿನ ಒಂಟಿ ಹೂ…! ————————— ಗತ ಎಂದೋ ಮೀಟಿದ ಶ್ರುತಿಯ ಜಾಡು ಹಿಡಿದುಇಂದು ವೀಣೆಯೊಂದು ಮಿಡಿಯುತಿರುವುದುಹಳೆಯ ಶ್ರುತಿಯ ಹಾಡಿನ ಮೊನೆಯಿದುಕರುಣೆ ಇರದೆ ಎದೆಯನು ಇರಿಯುತಿರುವುದು ಮರೆತ ನೋವನು ಬಿಡದೆ ಕೆದಕುತಿರುವಹಳೆಯ ಗುರುತಿನ ಹಾಡಿದುಕಾಣದಾವುದೋ ಕೈಯ್ಯಿ ಎಡೆಬಿಡದೆಎದೆಯುರಿಗೆ ತಿದಿಯನು ಒತ್ತುತಿರುವುದು ಇರುವ ಸಂತಸದ ಬನವನುಎದೆಯ ಬೆಂಕಿಯು ದಹಿಸುತಲಿರುವುದುಗತದ ಮೇಲೆನ ಪರದೆ ಸರಿಸಿಕೊಳೆತ ನೆನಪುಗಳ ಕಾಡುತಿರುವುದು ಸತ್ತುಹೋದ ಆತ್ಮದ ಹಾಡಿದುಧುತ್ತನೆದ್ದು ಕಾಡುತಿರುವುದುಗತದ ನೆನಪುಗಳು ಗತಿಸುವವರೆಗೂಕಣ್ಣೀರಿನ ಮಳೆಯನು ಸುರಿಸುವುದನುತಪ್ಪದೆ ಜಾರಿ ಇರಿಸಿರುವುದು *******

ಕಾಂತರಾಜು ಕನಕಪುರ ಅವರ ಕವಿತೆಗಳು Read Post »

ಕಾವ್ಯಯಾನ

ಪುಷ್ಪಾ ಮಾಳ್ಕೊಪ್ಪ ಮಿತ – ಹಿತ ಜಗವ ಬೆಳಗುವ ಬಂದುಬಾಲ ಭಾನುವು ಎಂದುಮುತ್ತಿಕ್ಕಲಪ್ಪುದೇನೊ |ತಮವ ಸರಿಸುವುದೆಂದುಜ್ವಲಿಪ ದೀಪವನೆಂದುಮುಟ್ಟಲಪ್ಪುದೇನೊ || ಗಂಗೆ ಯಮುನೆರನ್ನುಕೊಳೆಯ ತೊಳೆಯುವರೆಂದುಅಂಗಳಕೆ ತಪ್ಪುದೇನೊ |ತಪವು ನೇಮಾದಿಗಳುಸನ್ಯಾಸಿಗಲ್ಲದೆಸಂಸಾರಿಗಪ್ಪುದೇನೊ || ಮೈಗೆ ವ್ಯಾಧಿಯು ಎಂದುಮನೆಯ ಮದ್ದೆಂದುಮದ್ದಿಂದೆ ಮರವ ಮಾಡ್ಪುದೇನೊ |ಹಸೆಯು ಹಿತವೆಂದುಹಗಲು ಇರುಳೆರಡುಮಲಗಲಪ್ಪುದೇನೊ || ಮನೆಯ ಮಾಳಿಗೆಯುಸೋರುತಿಹುದೆಂದುಬಂಧುಗಳನೊಡನಿಪ್ಪುದೇನೊ |ಮಮತೆ ಇಹುದೆಂದುಮನುಜ ಮಡಿದರೂಮಡಗಲಪ್ಪುದೇನೊ ||

Read Post »

ಕಾವ್ಯಯಾನ

ಯಕ್ಷ ಪ್ರಶ್ನೆ

ಕಾವ್ಯಯಾನ ಯಕ್ಷ ಪ್ರಶ್ನೆ ನೇತ್ರ ಪ್ರಕಾಶ್ ಹಲಗೇರಿ ದಿನೇ ದಿನೇ ನನ್ನಸಾವಿರಾರು ಪ್ರಶ್ನೆಬೆಳೆಸಿದ ಪರಿಯೇಬೇರೆ ನನ್ನಮ್ಮ ಇಂದಿನ ನನ್ನ ಬದುಕೇಬೇರೆ ಭಿನ್ನಾವಿಭಿನ್ನ !ಸಂಸ್ಕೃತಿ ಸಂಸ್ಕಾರಗಳೇಮೌಢ್ಯಗಳಿಲ್ಲಿ ಕೇಳಿನ್ನ ಸರಿ ತಪ್ಪು ನೈತಿಕ ನೈಮಿತ್ತಿಕನೆಲೆಗಟ್ಟನ್ನು ಕಲಿಸಿದೆ ನೀನುತಿಳಿ ಹೇಳಿದ್ದನ್ನು ಕಲಿತೆ ನಾನುಪೂಜೆ ಪುನಸ್ಕಾರ ಬೇಡವೇನು!? ದೇವರು ದಿಂಡರು ಶಾಸ್ತ್ರಸಂಪ್ರದಾಯಗಳೆಲ್ಲ ಗೊಡ್ಡುಈ ಜನರಂತೆ ಬದುಕಲಾಗುತ್ತಿಲ್ಲಏಕೆ ಹೀಗೆ ಪ್ರಪಂಚ ಅರ್ಥವಾಗುತ್ತಿಲ್ಲ! ನೇರಕ್ಕೆ ನೇರ ಖಾರಕ್ಕೆ ಖಾರಸರಿ ಕಾಣದ ವರ್ತನೆಗಳ ಖಂಡನೆಸಹಿಸಲಾಗದ ಮನ ಮಂಡನೆಹೊಂದಿಕೆ ಎಷ್ಟು ಕಷ್ಟವಮ್ಮ!? ನಿನ್ನ ಮತ್ತು ನೀ ಕಲಿಸಿದಮಾನ ಮರ್ಯಾದೆಯೇ ಬೇರೆಲೋಕದ ಅಪಾರ ನಿದಿಯಲ್ಲಿ ಅಡಗಿದೆಯೆ? ಗೌರವಧಾರೆ? ಇನ್ನೂ ಮಿಕ್ಕಿದೆ ನನ್ನಮ್ಮನಲ್ಲಿಕೇಳುವ ಯಕ್ಷ ಪ್ರಶ್ನೆ ಮಂಡಲಪ್ರಶ್ನೆಗೆ ಪ್ರಶ್ನೆಯೇ ಉತ್ತರಗಳೇ ಹೌಹಾರಿ ಬದುಕುತ್ತಿರುವೆ ಅಮ್ಮ ನೀ ಹೇಳು ಉತ್ತರ ನನ್ನ ಯಕ್ಷಾತೀತ ಪ್ರಶ್ನೆಗಳಿಗೆ ಕಾತರ!? ***************************

ಯಕ್ಷ ಪ್ರಶ್ನೆ Read Post »

You cannot copy content of this page

Scroll to Top