ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯ ಸಂಗಾತಿ ಮಿಲನ ಹೃದಯ ಹೃದಯಗಳಮಿಲನಕ್ಕೆ ಸ್ನೇಹವೇಸೇತುವೆ ಬೇರೆ ಮಾತಿನಜೋಡಣೆ ಇಲ್ಲ ಸ್ವಾರ್ಥ ನಿಸ್ವಾರ್ಥ ಬೇಕುಮುನಿಸು ರಮಿಸುವಮಿಲನದ ಅಮೃತರಸಾನುಭಾವ ಅರಿತ ಮನಕ್ಕೆ ಶಂಕೆ ಬೇಡಹತ್ತಿರ ದೂರದ ಅಂತರ ಏಕೆದೇಹಕ್ಕೆ ದೂರವಾಗಿರುವುದೇನಗು ಅಳುವಿನ ನೆರಳು ನಿನ್ನದೇ ಬಾಳಿನ ಪಯಣದಲ್ಲಿ ಜೊತೆಯಾದ ಸಂಗಾತಿ ನೀಅಗಲಿ ಹುಡುಕುವ ಅಳುಕು ಏಕೆಪ್ರೀತಿಯ ಬೆಳಕಿಗೆ ಕೊನೆಯಿಲ್ಲ! **** ಹಸಿವು ಹಸಿವಿನ ನರಳಾಟದಲ್ಲಿತುಳಿತಕ್ಕೆ ಒಳಗಾಗುವೆವು ನಾವುಸಂಕಟದಲ್ಲಿ ಒದರಾಡಿದರೆಮೂರಡಿಯಲ್ಲಿ ಹೂಳುವರು ಹಸಿವಿನ ಚೀಲ ಬೆನ್ನು ತಟ್ಟಿದೆಶಾಂತಿ ನೆಮ್ಮದಿಯ ವೇದಾಂತಕಿವಿಯಲ್ಲಿ ಗುಣುಗುಟ್ಟಿದೆಮೋಸ ವಂಚನೆ ಕೊರಳ ಉರುಳಾಗಿದೆ ಮಾಯೆ ಎಂಬುವರು ಬಾಳುಆಸೆ ದುಃಖಕ್ಕೆ ಮೂಲ ಎನ್ನುವರುಕಡಿವಾಣ ಇಲ್ಲದೆ ಹಸಿವುಮೆರೆಯುತ್ತಿದೆ ಏಕೆ ಎಲುಬಿಲ್ಲದ ನಾಲಿಗೆಬಯಸುತ್ತಿದೆ ರುಚಿಹಸಿವು ತಣಿಯುವ ಮಂತ್ರವೇದಾಂತ ಇದೆಯೇ ಮನವೇ…. ಮಾಜಾನ್ ಮಸ್ಕಿ

Read Post »

ಕಾವ್ಯಯಾನ

ಕಾವ್ಯ ಸಂಗಾತಿ ಎದೆಗೊಳದ ಸ್ಪೂರ್ತಿ ಪುಷ್ಪಾ ಮಾಳ್ಕೊಪ್ಪ ಎದೆಗೊಳದಿ ತುಂತುಂಬಿತುಳುಕಿರಲು ಗೈವಛಲಚಿಮ್ಮದಿಹುದೇ ಸ್ಪೂರ್ತಿ ಚಿಲುಮೆಯಾಗಿ |ಧೈರ್ಯವೂ ಜೊತೆಗಿರಲುಗೆಲುವು ಬೆಂಬಿಡದಿಲ್ಲಿಹಿಂದೆ ಸರಿಯುವುದು ಹಿನ್ನಡೆಯು ಇಲ್ಲಿ || ಮೂಡಿರಲು ಮನದಲ್ಲಿಕನಸ ಕಾಮನಬಿಲ್ಲುಮುದ ನೀಡಿಹುದು ಬಾನ ಚಿತ್ತಾರ ನೋಡಾ |ಶಕ್ತಿ ಯುಕ್ತಿಯು ನರನ ನಾಡಿಯಲಿ ಹರಿದಿರಲುಸರಿದಿಹುದು ಪಕ್ಕದಲಿ ಕಪ್ಪು ಮೋಡಾ || ಓಟದಲಿ ಸರಿಸಮಕೆ ಯಾರಿಲ್ಲ ಮೀರಿಸಲುಮೇಘಾಳಿಗಳೆ ನಾಚಿ ಸ್ಥಬ್ಧವಾಗಿಹವು |ವಿಕಲಾಂಗನಲ್ಲನಿವ ಸಕಲ ಬಲ ಸಂಪೂರ್ಣಮಾದರಿಯು ಮನುಜಕುಲಕೆ ಚಣಚಣವು || ಆಂತರ್ಯದಾಶಯವೆಲ್ಲಹೊಮ್ಮಿಹೊರಪುಟಿದಿಹುದುಬಿಂಬಬಿಂಬದ ತುಂಬಅಚ್ಚಳಿಯದೆ |ನಾ ಮುಂದೆ ತಾಮುಂದೆನುವ ಪಾದಗಳೋಟಗುರಿಯ ರೇಖೆಯು ಸನಿಸನಿಹಬರದೆ ||

Read Post »

ಕಾವ್ಯಯಾನ, ಗಝಲ್

ಕಾವ್ಯ ಸಂಗಾತಿ ಗಜಲ್ ಪ್ರಕಾಶಸಿಂಗ್ ರಜಪೂತ್ ಜೀವಿಗೆ ನೋವಿನಾ ಅಭ್ಯಾಸ ಬೇಕುಜೀವನಕ್ಕೆ ತನ್ನದೇ ಇತಿಹಾಸ ಬೇಕು ಊಟದಾ ಅತಿರೇಕ ರೋಗಕ್ಕೆ ಮೂಲವೋದೇಹಕ್ಕೆ ಅದಕ್ಕಾಗಿ ಉಪವಾಸ ಬೇಕು ಕಣ್ಣಲ್ಲಿ ಹೊಸತನದ ಬಯಕೆ ನಿತ್ಯವಿಲ್ಲಿದೇಹಕ್ಕೆ ಆಕರ್ಷಿಸುವ ವಿನ್ಯಾಸ ಬೇಕು ನಿತ್ಯವೆ ಜಗದಿ ಬದಲಾವಣೆಯ ಬಯಕೆಅರಳಲು ಮನ ಹೂವಿಗೆ ಮಧುಮಾಸ ಬೇಕು ಬಿಸಿಲುಗಾಳಿಯ ಮಧ್ಯೆ ತೃಷೆಯು ತಣಿಸಲುಮಳೆಯಲಿ ಮನ ನೆನೆಯುವ ಉಲ್ಲಾಸ ಬೇಕು ಆಶಾ ಚಕ್ರದಿ ತಿರುಗಿ ಸೋತಿದ ಚಾಂಚಲ್ಯಕೆ“ಪ್ರಕಾಶ”ಕೊನೆಯ ಘಟ್ಟಲಿ ಸನ್ಯಾಸ ಬೇಕು

Read Post »

ಕಾವ್ಯಯಾನ

ಕಾವ್ಯ ಸಂಗಾತಿ ನಮ್ಮಮ್ಮ ಹೀಗಿದ್ದಳು ಡಾ.ಸುರೇಖಾ ರಾಠೋಡ್ ಯಾವ ಭೂಮಿಗೆಯಾವ ಬೆಳೆ ಬರುತ್ತದೆಂದುಯಾವ ಬೀಜ ಬಿತ್ತಬೇಕೆಂದುನೆಲ ಎಷ್ಟುಹಸಿಯಾಗಿರಬೇಕೆಂದುತಿಳಿದಿರುವನಮ್ಮಮ್ಮ ಭೂವಿಜ್ಞಾನಿ ಏನಲ್ಲ ಯಾವ ಸಮಯಕ್ಕೆಯಾವ ಮಳೆಗೆಯಾವ ಬೆಳೆಬಿತ್ತಬೇಕೆಂದು,ಎಷ್ಟು ಗೊಬ್ಬರ,ಯಾವ ಗೊಬ್ಬರಹಾಕಬೇಕೆಂದುತಿಳಿದಿರುವನಮ್ಮಮ್ಮ ಬೆಳೆ ವಿಜ್ಞಾನಿಯಾಗಿರಲಿಲ್ಲ ಯಾವ ಬೀಜಎಷ್ಟು ದಿನಕ್ಕೆಮೊಳಕೆ ಒಡೆಯುವುದೆಂದು,ಯಾವ ಸಮಯಕ್ಕೆಕಳೆ ತಗೆಯಬೇಕೆಂದು,ಯಾವ ಸಮಯಕ್ಕೆನೀರು ಹಾಯಿಸಬೇಕೆಂದುತಿಳಿದಿರುವನಮ್ಮಮ್ಮ ಸಹಜ ಮನುಷ್ಯಳಾಗಿದ್ದಳು ಯಾವಾಗ ಮಳೆ ಬಂದರೆಬೆಳೆ ಚೆನ್ನಾಗಿಬೆಳೆಯತ್ತ,ಯಾವಾಗ ಮಳೆ ಬಂದರೆಬೆಳೆ ಹಾಳಾಗತ್ತೆ,ಯಾವಾಗ ಬೆಳೆಗೆರೋಗ ಬರತ್ತೆಂದು,ರೋಗಕ್ಕೆ ಯಾವಔಷಧಿಸಿಂಪಡಿಸಬೇಕೆಂದುತಿಳಿದಿರುವನಮ್ಮಮ್ಮ ಪದವೀಧರೆಯಾಗಿರಲಿಲ್ಲ ನಮ್ಮಮ್ಮ ಅಕ್ಷರಕಲಿಯದೇಕೃಷಿ ಕಲಿತಿರುವಭೂಮಿಯೇ ಆಗಿದ್ದಳು…..————————–

Read Post »

You cannot copy content of this page

Scroll to Top