ವ್ಯಾಲಂಟೈನ್ ವಿಶೇಷ
ಗಜಲ್
ರತ್ನರಾಯಮಲ್ಲ
ವ್ಯಾಲಂಟೈನ್ ವಿಶೇಷ ಗಜಲ್ ಭಾರತಿ ರವೀಂದ್ರ ಕವಿತೆ ಬರೆಯಲು ಹೊರಟುಕಥೆಯಾಗಿ ಬಂದೆಯಲ್ಲ ನೀನುಮಮತೆ ಮೆರೆಯಲು ಪ್ರೀತಿಯಸನಿಹಕೆ ತಂದೆಯಲ್ಲ ನೀನು ಚಳಿಯ ಗಾಳಿ ಬೀಸಲುಬಿಸಿ ಅಪ್ಪುಗೆ ಬೇಕಾಯಿತೆ ಹೇಳುಸ್ನೇಹದ ಛಾಯೆ ಆವರಿಸಿಮನದಲ್ಲಿ ಬೆಂದೆಯಲ್ಲ ನೀನು ರವಿಯು ಕಾಣುವ ಕನಸಿಗೆಮೋಡ ಅಡ್ಡಿಯಾಯಿತು ನೋಡುಕವಿಯ ಅಂತರಂಗದ ನಗೆಅರಳಿಸಿ ನಿಂದೆಯಲ್ಲ ನೀನು ಸಿಹಿ ಮಾತಿನ ಮೋಡಿಯುನೋವ ಹಗುರವಾಗಿಸಿದೆ ಗೆಳೆಯಹೊಸ ಆಸೆಯಗಳ ಹೊತ್ತುಕಹಿ ಕ್ಷಣವ ಕೊಂದೆಯಲ್ಲ ನೀನು ಸೂರ್ಯ ರಶ್ಮಿಯು ಹೊಂಬೆಳಕನುಮೂಡಿಸಿದೆ ನವ ಬಾಳಿಗೆಆರ್ಯ ಪುತ್ರನ ನೆನಪಿನಲ್ಲಿದಿನವೂ ಮಿಂದೆಯಲ್ಲ ನೀನು.
You cannot copy content of this page