ಲಲಿತಾ ಪ್ರಭು ಅಂಗಡಿ ಕವಿತೆ-ಬುದ್ಧ ಅಂದು,ಇಂದು.
ಕಾವ್ಯ ಸಂಗಾತಿ ಲಲಿತಾ ಪ್ರಭು ಅಂಗಡಿ ಬುದ್ಧ ಅಂದು,ಇಂದು, ಸತಿ ಸುತರ ಬಳ್ಳಿಯ ಕಳಚಿಸಿರಿ ಸುಪ್ಪತ್ತಿಗೆ ದೂರ ಸರಿಸಿಸುಖ ಭೋಗವ ದಿಕ್ಕರಿಸಿಅಹಿಂಸಾ ಮಾರ್ಗ ಅನುಸರಿಸಿಭೋದಿ ವ್ರೃಕ್ಷದಡಿ ಧ್ಯಾನಿಸಿಶಾಂತಿ ಮಂತ್ರ ಬೋಧಿಸಿಪೂರ್ಣತೆಯ ಪುಣ್ಯ ಬೆಳಕನು ಬೆಳಗಿಸಿವಿಶ್ವಕೆ ಶಾಂತಿ ಸಮತೆಯ ತತ್ವ ಪಸರಿಸಿಸಹಾನುಭೂತಿಯ ಸಲಹೆ ಸೂಚಿಸಿದೆ ಬುದ್ಧ ನೀ ಅಂದು ಸತಿ ಸುತರ ವ್ಯಾಮೋಹಕೆಭೋದಿ ವ್ರೃಕ್ಷದಡಿಯಲಿ ನಿನ್ನ ಪೂಜಿಸಿಭೂಮಿಯಲಿರುವ ಎಲ್ಲವನು ಕಬಳಿಸುವ ಧ್ಯಾನಹಿಂಸೆ ಆದರೂ ಪರವಾಗಿಲ್ಲ ವೈಭೋಗದ ಸಿರಿಯ ಮೆರೆವ ಕನಸುನಿನ್ನ ಚಿತ್ರಕೆ ನಮಿಸಿಗುಂಗುರು ಕೂದಲಿನ ಉದ್ದ ಕಿವಿಯ ಕಲ್ಲು ಕಂಚು ದುಬಾರಿಯ ನಿನ್ನ ಮೂರ್ತಿ ಮಾಡಿ ಶೋಕೇಸಿನಲಿ ಬಂಧಿಯಾಗಿಟ್ಟಿರುವರು ಇಂದು ನಿನ್ನ ಬುದ್ಧಅಷ್ಟೇ ಅಲ್ಲ ಉಡುವ ಬಟ್ಟೆಗಳಲ್ಲಿ ನಿನ್ನ ಅಚ್ಚುಬಳಸಿಕೊಳ್ಳಲಿಲ್ಲ ನಿನ್ನ ಶಾಂತಿ ಮಂತ್ರಅಳವಡಿಸಿಕೊಳ್ಳಲಿಲ್ಲ ಅಹಿಂಸಾ ತತ್ವದ್ವೇಷದಾ ಬೇಗುದಿ,ಸೇಡಿನ ಸುರಿಮಳೆ ಮುಯ್ಯಿಗೆ ಮುಯ್ಯಿನಿನ್ನ ಹೆಸರಿನಲ್ಲಿ ಹುಣ್ಣಿಮೆ ಬೇರೆ ಬುದ್ಧಬದ್ಧತೆ ಇಲ್ಲದ ಬುದ್ಧಿಗೇಡಿಗಳು ಸೋಗಿನಲಾಂಛನ ಹಾಕಿನಿನ್ನ ಶಾಂತಿ ಮಂತ್ರವ ಬಾಯಲಿ ಜಪಿಸುವರುಒಳಗೊಳಗೆ ವೈರಿಯ ಕಸರತ್ತುಅನಿವಾರ್ಯ ಎಲ್ಲವನು ಕಣ್ಮುಚ್ಚಿ ನೋಡು ನೀ ಬುದ್ಧಆದರೆ ಬುದ್ಧಾ ಬುದ್ಧಾ ನೀಎಲ್ಲರೂ ಮಲಗಿರುವಾಗ ಸದ್ದಿಲ್ಲದೆ ಹೋದ ಹಾಗೆಎಲ್ಲರೂ ಮಲಗಿರುವಾಗ ಬಂದೊಮ್ಮೆ ಕವಿಗಳ ಬರೆದ ಕವನಗಳನು ಓದು ನೀ ಬುದ್ಧನಸುನಕ್ಕು ಮತ್ತೆ ತಪೋಸ್ಥಿಯಲಿ ಕಣ್ಮುಚ್ಚಿಕೋ ನೀ ಬುದ್ಧಬುದ್ದಂ ಶರಣಂ ಗಚ್ಛಾಮಿಸಂಗಮ್ ಶರಣಂ ಗಚ್ಛಾಮಿ. ಲಲಿತಾ ಪ್ರಭು ಅಂಗಡಿ.
ಲಲಿತಾ ಪ್ರಭು ಅಂಗಡಿ ಕವಿತೆ-ಬುದ್ಧ ಅಂದು,ಇಂದು. Read Post »









