ಶಾಂತಲಿಂಗ ಪಾಟೀಲ ಕವಿತೆ
ಕಾವ್ಯ ಸಂಗಾತಿ
ಶಾಂತಲಿಂಗ ಪಾಟೀಲ
ಶಾಂತಲಿಂಗ ಪಾಟೀಲ ಕವಿತೆ Read Post »
ಕಾವ್ಯ ಸಂಗಾತಿ ಅನಿತಾ ಮಾಲಗತ್ತಿ ಕಟ್ಟೆ ಪುರಾಣ ಎಷ್ಟು ಚೆಂದವಿತ್ತು ಆ ಕಾಲಇಡೀ ದಿನ ಶ್ರಮ ಮರೆತುಕಳೆಯುತ್ತಿದ್ದೆವು ಕಟ್ಟಿಯ ಮೇಲೆಮಿತಿಯಿರದೇ ವಯಸ್ಸಿಗೆ : ಗಡಿಯಾರಕೂಹರಟವುದೊಂದೇ ಗೊತ್ತು ಕಟ್ಟೆ ಪುರಾಣಕೆ! ಅತ್ತೆ ಸೊಸೆಯ ಆಡಿಕೊಂಡರೆಸೊಸೆಯ ಬಾಯಲ್ಲಿ ಅತ್ತೆಯ ಗುಣಗಾನಅತ್ತೆ – ಸೊಸೆಯರ ಜಟಾಪಟಿಯ ಚಿತ್ರಜಯಕ್ಕನ ಬೊಂಬಾಯಿ ಬಾಯಲ್ಲಿ! ಮದುವೆಯಾಗದೇ ಉಳಿದ ಮಗಳ ಸುದ್ಧಿಮದುವೆ ಆಗಿ ಮಕ್ಕಳಿಲ್ಲದವರ ವ್ಯಥೆಮದುವೆ ಬೇಡವೆಂದುಳಿದವರ ಅಳಲುಮದುವೆಗೆ ಸೀರೆ ಕುಪ್ಪಸದ ಚಿಂತೆಗಳು! ಸವತೆ ಬೀಜದ ಹಿಟ್ಟಿನಂತೆ ಕರಗುವಸಾವಂತ್ರಮ್ಮನ ಚಂಚಿಯೊಳಗಿನ ಕಥೆಗಳುಚವಳೇಯೊಳಗಿನ ನರ್ಸ ತೆಗೆದಂತೆಮಾದಮ್ಮನ ನೀತಿ ಮಾತುಗಳು! ಬಂಜೆ ಬಂಗಾರಮ್ಮನ ಹೊಗಳಿಕೆಸಂಜೆ ಕುಡಿದು ಬರುವವರ ತೆಗಳಿಕೆಗಂಜಿ ಕುಡಿದು ಬದುಕಿದವರ ಕಥೆಎಂಜಲು ತಿನ್ನುವ ಭಂಡರ ಬಾಳ್ವೆಗಾಥೆ ಬಿಡಿಸಿಟ್ಟ ಸೊಪ್ಪಿನಂತೆ ನಿಚ್ಚಳಹೆಣ್ಮಕ್ಕಳ ಸಮಸ್ಯೆಗೆ ಪರಿಹಾರಸಂತೆ ಮಾಲುಗಳ ದರಗಳ ಚರ್ಚೆಗುಟ್ಟುಗಳ ಗಟ್ಟಿಮೇಳ ಗಂಗಿಬಾಯಿಂದ ಆಯಾ ವಾರಗಳಲಿ ಸತ್ತವರ ಸುತ್ತಬಿಚ್ಚುವ ಪಾಪ – ಪುಣ್ಯಗಳ ಸುರುಳಿಗಳುಸಾಯದೆ ಉಳಿದವರ ಸುತ್ತಲೂಹಿಡಿ ಶಾಪದ ಸರಮಾಲೆಗಳು!! ಸೆಖೆಎಂಬುದು ನೆಪ ಮಾತ್ರಕೆಮಿಕ್ಕಿಯೇ ಬಿಡುತ್ತಿತ್ತು ನಿತ್ಯದ ಪುರಾಣಬದಲಾದರೇನು ಮಳೆ ಚಳಿ ಬಿಸಿಲು ಕಾಲಗಳುಬರವಿರದೇ ಬೀಸಿ ಬರುವ ಬಿಸಿ ಸುದ್ದಿಗಳು! ಕಳೆದುಕೊಂಡೆವೇ ಕಟ್ಟಿಯ ಮನೆಗಳ!ಬಾಳ ಹೊರಟು ಸ್ವಾರ್ಥದ ಬದುಕಮರೆಯಾಗಿ ಹೋದವೇ ಕಟ್ಟೆಗಳು?ಹುದುಗಿ ಹೋದವೇ ಗಾರೆಗಳ ಮಧ್ಯೆಕಟ್ಟೆ ಪುರಾಣಗಳು!!——————————– ಅನಿತಾ ಮಾಲಗತ್ತಿ
ಅನಿತಾ ಮಾಲಗತ್ತಿ ಕವಿತೆ-ಕಟ್ಟೆ ಪುರಾಣ Read Post »
ಕಾವ್ಯ ಸಂಗಾತಿ
ಗುಣಾಜೆ ರಾಮಚಂದ್ರ ಭಟ್
ಬದುಕು ಕಹಿ
ಗುಣಾಜೆ ರಾಮಚಂದ್ರ ಭಟ್ ಕವಿತೆ-ಬದುಕು ಕಹಿ Read Post »
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಮೊದಲ ಮಳೆ
ಇಂದಿರಾ ಮೋಟೆಬೆನ್ನೂರ ಕವಿತೆ-ಮೊದಲ ಮಳೆ Read Post »
ಕಾವ್ಯ ಸಂಗಾತಿ
ಯೋಗೇಂದ್ರಾಚಾರ್ ಎ ಎನ್
ಕಪ್ಪು ಚಾಳೀಸು
ಯೋಗೇಂದ್ರಾಚಾರ್ ಎ ಎನ್ ಕವಿತೆ-ಕಪ್ಪು ಚಾಳೀಸು Read Post »
ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ
ಮಾತ್ಸರ್ಯ.!
ಎ.ಎನ್.ರಮೇಶ್. ಗುಬ್ಬಿಕವಿತೆ-ಮಾತ್ಸರ್ಯ.! Read Post »
ಕಾವ್ಯ ಸಂಗಾತಿ
ನಾಗರತ್ನ. ಎಚ್ ಗಂಗಾವತಿ.
ಮೆರವಣಿಗೆಯ ಮೆರಗು
ನಾಗರತ್ನ. ಎಚ್ ಗಂಗಾವತಿ ಕವಿತೆ-ಮೆರವಣಿಗೆಯ ಮೆರಗು. Read Post »
ಕಾವ್ಯ ಸಂಗಾತಿ
ಸುಧಾ ಪಾಟೀಲ್
ಹುಡುಕುತ್ತಿ್ದ್ದಾರೆ
ಸುಧಾ ಪಾಟೀಲ್ ಕವಿತೆ-ಹುಡುಕುತ್ತಿದ್ದಾರೆ Read Post »
ಕಾವ್ಯ ಸಂಗಾತಿ ಜಾರುವ ಮುನ್ನ ಅಂದ ಕಂಗಳು ಹುಡುಕುತ್ತಿವೆಬದುಕಿನ ಬೇಗೆಯ ದಾಟುವುದೆಂತುಬಳಲಿ ಮುದುಡಿವೆ ಮೈ ಮನ ಬೇನೆಯಲಿಮೌನವಾಗಿ ಕಾಣದ ಲೋಕದಪರದೆಯ ದಿಟ್ಟಿಸುತ್ತಾ ಹುಟ್ಟುವ ಆ ಗಳಿಗೆ ಕಣ್ಣೀರೆ ಉಸಿರುನಲಿವಿನ ಸಿಂಚನ ಸುತ್ತಲೂ ಹರಿಸಿಹಸಿರ ನೀವುದು ಹೆತ್ತೊಡಲ ಕನಸುಒಂದಷ್ಟುಪ್ರೀತಿ ಎದೆಯಾಳದಿ ಎದೆಗವಚಿಬಂದು ಬಾಂಧವರ ಕಳಚಿ ಸಾಗುವ ಹೊತ್ತು… ಅಂತ್ಯ ಅರಿಯದ ಖಗ ಮೃಗ ಅಂತ್ಯ ಅರಿಯದ ಖಗ ಮೃಗಹಸಿರಲ್ಲೇ ಉಸಿರ ನೀವ ಮಲೆಕೊನೆ ಕ್ಷಣಕ್ಕೂ ಬದುಕ ಸವಿದುವಿಷವಿಕ್ಕದ ಗಿಡಮರ ಬಳ್ಳಿಯಂತೆತೆರಳು ನೀ ಇಹಲೋಕವ ಬಾಳ ಪಯಣದಿ ಹುಟ್ಟಿಗೇ ಸಾವು ನಿಶ್ಚಿತಅವಿತುಕೊಳ್ಳಲಾಗದು ಈ ಬಂಧದಿನಗ ನಾಣ್ಯ ಹೊನ್ನು ಮಣ್ಣಲಿಪಡೆಯಲಾಗದು ಮರುಜನ್ಮಕರ್ಮದಲಿ ಬೆರೆತು ಧರೆಗೆ ನೀ ಋಣಿಯಾಗು ಸ್ಮಶಾನದಿ ಚಿರನಿದ್ರೆಗೆ ಜಾರುವ ಮುನ್ನರಾಡಿಯಾದ ಮನದಿ ಅನುರಾಗ ಬೆಸೆದುದೀಪ್ತಿಯಾಗು ಆಸರೆಯ ಬದುಕಿಗೆನೂರಾರು ಮನಕೆ ಸ್ಫೂರ್ತಿ ನೀನಾಗು
ವಿಮಲಾರುಣ ಪಡ್ಡoಬೈಲು ಕವಿತೆ-ಜಾರುವ ಮುನ್ನ Read Post »
You cannot copy content of this page