ರಶ್ಮಿ ಶಮಂತ್ ಅವರ ಕವಿತೆ, “ಅತ್ಯಾಚಾರ”
ಕಾವ್ಯ ಸಂಗಾತಿ ರಶ್ಮಿ ಶಮಂತ್ “ಅತ್ಯಾಚಾರ” ಮುಗಿಯದ ಕಥೆಯಿದುಸುಡುತ್ತೇವೆನೂರಾರು ಮೇಣದಬತ್ತಿಯನ್ನುಬಿಗಿಯುತ್ತೇವೆ ಭಾಷಣದುಃಖಿಸುತ್ತೇವೆ, ಕೊರಗುತ್ತೇವೆನೆನೆ ನೆನೆದು‘ಅಯ್ಯೋ ಸಣ್ಣ ಮಗುವಂತೆ’ಉದ್ಘರಿಸುತ್ತೇವೆ,ಚೆಲ್ಲುವೆವು ನಿಟ್ಟುಸಿರಚಿಂತಿಸುವೆವು ಮುಂದೇನೆಂದುಹೆಣ್ಣೇಕೆ ಹುಟ್ಟಿತೆಂದುಕೊಡುತ್ತೇವೆ ನೂರಾರು ಸಲಹೆಗಳನ್ನುಮರೆತು ಬಿಡುತ್ತೇವೆಆಕ್ಷಣವನ್ನು ನಡೆಯುತ್ತದೆ? ——- ಏನು?ಮತ್ತೊಮ್ಮೆ ಮಗದೊಮ್ಮೆ ಅಲ್ಲೆಲ್ಲೋ ಇನ್ನೆಲ್ಲೋ ಮತ್ತೆಲ್ಲೋಕೊನೆಗೊಮ್ಮೆ ನಡೆದರೂ ನಮ್ಮ ಪಕ್ಕದಲ್ಲಿದಿವ್ಯ ನಿರ್ಲಕ್ಷ್ಯ ನಮ್ಮದುಅದೇ ಪುನರಾವರ್ತನೆದೂಷಿಸುತ್ತೇವೆ , ಮರುಗುತ್ತೇವೆಹಾಗೆಯೇ ತೇಲಿಬಿಡುತ್ತೇವೆ ವಿಷಯವನು ಹೊಣೆಯಾಗಿಸುತ್ತೇವೆಪಕ್ಷಗಳನ್ನು , ಜಾತಿಗಳನ್ನು, ಧರ್ಮಗಳನ್ನುತಿಳಿಯಲಾರೆವು ಮೂಲ ಕಾರಣವನಿಂದಿಸಿ, ಆರೋಪಿಸಿ, ನಡೆಸಿ ಜಾಥಾ,ಮಾಧ್ಯಮಗಳಲ್ಲಿ ಕುಳಿತುನಡೆಸುವಾಗ ವಿತಂಡವಾದವಟಿ ಆರ್ ಪಿ ಯ ಸರಕಾಗುತ್ತದೆ ಅವಳ ಕಣ್ಣೀರುಮರೆಯುತ್ತೇವೆ ಮತ್ತೆತಣ್ಣಗಾಗುತ್ತೇವೆ ಎಂದಿನಂತೆಏನೂ ಆಗದಂತೆ ಬಳಸುತ್ತವೆಪಕ್ಷಗಳು ತಮ್ಮ ಬೇಳೆಯ ಬೇಯುವಿಕೆಗೆಹಳಿಯುತ್ತದೆ ವಿರೋಧ ಪಕ್ಷವುಆಡಳಿತ ಪಕ್ಷವನುಕೊನೆಗೊಮ್ಮೆ ನೀಡುತ್ತಾರೆ ಧರ್ಮ ಜಾತಿಯಹಣೆ ಪಟ್ಟಿಯನುನಗು ನಗುತ್ತಾ ಚರ್ಚಿಸುವರು ಸದನದಲಿಘೋಷವಾಕ್ಯವೊಂದು ತಯಾರಾಗುತ್ತದೆ‘ಮಲಗಿ ಆನಂದಿಸಿ’ ಬಿಸಿ ತಟ್ಟುತ್ತದೆ ಒಮ್ಮೆಸಂತ್ರಸ್ತೆ ನಮ್ಮದೇ ಮನೆಯ ಮಗಳಾದಾಗಎಚ್ಚರವಿರಲಿ ಮೊದಲಾಗಲಿ ಬದಲಾವಣೆ ನಮ್ಮಿಂದಲೇತಡೆಯೋಣ ಮುಂದಾಗದಂತೆ ಅತ್ಯಾಚಾರಗಳುನಿರೂಪಿಸೋಣ ಅಬಲೆಯಲ್ಲ ಅವಳು ಸಬಲಳುಬಲಹೀನತೆಯ ತೊರೆದುನನಸಾಗಿಸೋಣ ಸ್ವಸ್ಥ ಸಮಾಜದ ನಮ್ಮ ಕನಸು ರಶ್ಮಿ ಶಮಂತ್
ರಶ್ಮಿ ಶಮಂತ್ ಅವರ ಕವಿತೆ, “ಅತ್ಯಾಚಾರ” Read Post »









