ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಝಲ್

ಗಝಲ್ ಗಝಲ್ ಕೆ.ಸುನಂದಾ. ಸುಂದರ ವದನಕೆ ಕುಂದಾಗುವ ಬಣ್ಣ ಬಳಿಯಬೇಡ ಗೆಳೆಯಅದೆಷ್ಟೋ ಅಂದದ ಕನಸುಗಳಿಗೆ ಕಲ್ಲು ಹೊಡೆಯಬೇಡ ಗೆಳೆಯ ಸಾಧಿಸಬೇಕೆಂಬ ಹಂಬಲದಿ ಆಸರೆಯ ಎಳೆ ಹಿಡಿದಿರುವೆನುಕಷ್ಟಗಳಮೆಟ್ಟಿ ಕಟ್ಟಿರುವ ಭಾವಗಳ ಭವನಕೆ ಕಿಚ್ಚಾಗಬೇಡ ಗೆಳೆಯ ಹೆಣ್ಮನ ಮೃದುವೆಂದು ಮಧುರವಾಗಿ ನುಡಿದುಮೋಸ ಮಾಡಿದಿರು ಹೃದಯ ಗೆದ್ದೆನೆಂಬ ಹಮ್ಮಿಂದ ಹದವಾದಮೇಲೆ ಒದೆಯಬೇಡ ಗೆಳೆಯ ಮುನಿಯುವ ಮೊದಲು ಒಲಿದು ಬರುವಳು ಹೆಣ್ಣು ಘಾಸಿಗೊಳಿಸದಿರುಕೂಸಿನಂತಾಕೆ ಪೊರೆದಿಹಳು ನಿನ್ನಾಸೆಗಳನು ಮನ ನೋಯಿಸಬೇಡ ಗೆಳೆಯ ತುಸು ಕಣ್ಣಲ್ಲಿ ಕಣ್ಣಾಗಿ ನೋಡು ಮಮತೆ ಹರಿದೀತು ನಿನ್ನೊಡಲೊಳುನಂದೆಯ ಆನಂದಕೆ ಮಂದಸ್ಮಿತ ಸಾಕು ನಕ್ಕು ಹಂಗಿಸಬೇಡ ಗೆಳೆಯ *********************************** ಕೆ.ಸುನಂದಾ

ಗಝಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ರತ್ನರಾಯಮಲ್ಲ ಅಳಬೇಕು ಎಂದಾಗಲೆಲ್ಲ ಕನ್ನಡಿಯ ಮುಂದೆ ನಿಲ್ಲುವೆನಗಬೇಕು ಅನಿಸಿದಾಗಲೆಲ್ಲ ಸಮಾಧಿಯ ಮುಂದೆ ನಿಲ್ಲುವೆ ಎಲ್ಲರೂ ಬೇಕೆನಿಸಿದಾಗಲೆ ಯಾರೂ ಬೇಡವೆನಿಸುತ್ತಾರೆಶಾಂತಿ ಬಯಸಿದಾಗಲೆಲ್ಲ ಮಸಂಟಿಗೆಯ ಮುಂದೆ ನಿಲ್ಲುವೆ ಬದುಕು ಆಟವಾಡುತಿದೆ ಹೆಜ್ಜೆ ಹೆಜ್ಜೆಗೂ ನನ್ನ ಜೊತೆಯಲ್ಲಿಬಾಳು ಬೇಡವೆನಿಸಿದಾಗಲೆಲ್ಲ ಗೋರಿಯ ಮುಂದೆ ನಿಲ್ಲುವೆ ಉಸಿರಾಡಲು ನನ್ನ ಗಾಳಿಗಾಗಿ ನಾನು ಹುಡುಕುತಿರುವೆ ಇಲ್ಲಿಪ್ರೀತಿ ಬೇಕೆನಿಸಿದಾಗಲೆಲ್ಲ ನಿನ್ನ ಮನೆಯ ಮುಂದೆ ನಿಲ್ಲುವೆ ಜೀವನವು ತೂಗುಯ್ಯಾಲೆಯಲ್ಲಿ ಕಣ್ಣಾಮುಚ್ಚಾಲೆ ಆಡುತಿದೆಸಾಯಬೇಕು ಎನಿಸಿದಾಗಲೆಲ್ಲ ‘ಮಲ್ಲಿ’ಯ ಮುಂದೆ ನಿಲ್ಲುವೆ ************************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜ಼ಲ್

ಗಜ಼ಲ್ ಎ . ಹೇಮಗಂಗಾ ಗುರಿಯತ್ತ ದಿಟ್ಟಿ ನೆಟ್ಟ ಕಂಗಳನು ಇಷ್ಟು ಬೇಗ ಮುಚ್ಚುವುದು ಬೇಕಿರಲಿಲ್ಲ‘ ಸರಿ ‘ ಎಂದು ಗಟ್ಟಿ ಮನದಲಿ ಇಷ್ಟು ಬೇಗ ಮರೆಯಾಗುವುದು ಬೇಕಿರಲಿಲ್ಲ ನೆತ್ತರೊಸರಿದ ಹಾದಿಯಲಿ ಸಾಗಬೇಕಿತ್ತು ಚುಚ್ಚಿದ ಮುಳ್ಳ ಕಿತ್ತೊಗೆಯುತಾಸಮಸ್ಯೆಗಳ ಬಲೆ ತುಂಡರಿಸದೇ ಇಷ್ಟು ಬೇಗ ಹೊರಡುವುದು ಬೇಕಿರಲಿಲ್ಲ ನಿನಗಿಂತ ಅದೃಷ್ಟಹೀನರ ದುಸ್ಥಿತಿ ಕೊಂಚವೂ ಕಾಣದಾಗಿ ಹೋಯಿತೇಕೆಸಾವೇ ಎಲ್ಲಕೂ ಪರಿಹಾರವೆಂದು ಇಷ್ಟು ಬೇಗ ದೂರಾಗುವುದು ಬೇಕಿರಲಿಲ್ಲ ಬಾಳ ನಾಟಕ ನಿಲ್ಲದೇ ನಡೆವುದು ವಿಧಿಯೆಂಬ ಸೂತ್ರಧಾರಿ ಆಡಿಸಿದಂತೆನ್ಯಾಯ ಸಲ್ಲಿಸದೇ ಪಾತ್ರಕೆ ಇಷ್ಟು ಬೇಗ ನಿರ್ಗಮಿಸುವುದು ಬೇಕಿರಲಿಲ್ಲ ಎದುರಾಗುವ ಪ್ರತೀ ಕಷ್ಟ ,ಸುಖವನು ಅನುಭವಿಸಲೇಬೇಕು ಹೇಮಮಸಣದ ಮನೆ ನೀನೇ ಬಯಸಿ ಇಷ್ಟು ಬೇಗ ಸೇರುವುದು ಬೇಕಿರಲಿಲ್ಲ ************************* ಮೊನ್ನೆ ಯುವ ಬರಹಗಾರ್ತಿಯೊಬ್ಬರ ಆತ್ಮಹತ್ಯೆ ನನ್ನ ಮನಸ್ಸಿಗೆ ಅಪಾರ ಆಘಾತವನ್ನು ನೀಡಿತು ಮಧುಸೂದನ್ ಅವರೇ……ಆ ನೋವಿನಲ್ಲಿ ಬರೆದ ಗಜಲ್ ಇದು

ಗಜ಼ಲ್ Read Post »

You cannot copy content of this page

Scroll to Top