ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಗಜಲ್ ನಯನ. ಜಿ. ಎಸ್ ನಗುತಿಹ ಕಂಗಳ ಹಿಂದಿಹುದು ಕಡು ನೋವುಗಳು ಬಲ್ಲವರು ಯಾರುಅರಳು ತುಟಿಗಳೊಡಲಿನ ನೊಂದ ಮಾತುಗಳ ಆಲಿಸುವವರು ಯಾರು ! ನಕ್ಕಾಗ ನಗುತ , ನೊಂದಾಗ ಮೌನದಿ ಅತ್ತು ದಣಿಯುತ್ತಿದೆ ಮನಸ್ಸುಮನವ ಹಿಂಡುತಿದೆ ವ್ಯಂಗ್ಯಗಳ ಹಿಂಸೆ ಇದ ಅಳೆಯುವವರು ಯಾರು ! ನಿಶೆಯ ನಶೆಗೂ ಮರೀಚಿಕೆ ಆದಂತಿದೆ ಸುಖ ಸ್ವಪ್ನಗಳ ಸಿಹಿಯಾದ ನಶೆನೀರವ ಕ್ಷಣಗಳನೂ ಭೀತಿಗೊಳಿಸುತಿದೆ ಅಳಲು ಅರಿಯುವವರು ಯಾರು ! ಆಶೆಗಳ ಕನಸು ಹುಸಿಯಾಗುತಿದೆ ಕಪಟಿಗರ ಕ್ರೌರ್ಯದಿ ನಲುಗಿ ಕೊರಗಿಮನದ ತುಮುಲಗಳು ತಾರಕಕ್ಕೇರಿದೆ ಅರಿತು ಸಂತೈಸುವವರು ಯಾರು ! ಬಾಳ್ವೆಯು ಕಂಡಂತಿಲ್ಲ , ಬುಡಮೇಲಾದೀತು ಕನಸುಗಳು ಎಚ್ಚರ ‘ನಯನ’ಬಣ್ಣ ಬಣ್ಣದ ಬೂಟಾಟಿಕೆಯ ಜನರಿಹರು ಜೊತೆ ಬರುವವರು ಯಾರು !

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್ ಜುಗಲ್ ಬಂದಿ

ಗಜಲ್ ಜುಗಲ್ ಬಂದಿ ಇರುಳು ಮಲ್ಲೆ ಮಾಲೆ ಹಿಡಿದು ಅಮಲೇರಿಸಲು ಇದಾರು ಬಂದರುತುಂಟ ಕಣ್ಣಲಿ ಮಿಂಚಿನ ಕನಸು ತೋರಿಸಲು ಇದಾರು ಬಂದರು ವಾರದ ಪೇಟೆಯಲ್ಲಿ ಅಲೆಯುತಿರುವೆ ಕಳೆದ ಹೃದಯ ಹುಡುಕುತಾಸಂತೆಯಾ ಗದ್ದಲದಲಿ ಸಂಪಿಗೆ ಮುಡಿಸಲು ಇದಾರು ಬಂದರು ಹೃದಯ ವೀಣೆಯ ಮೀಟಿ ದೂರಾದ ವೈಣಿಕನಿಗೆ ಹಂಬಲಿಸಿದೆಮುರಿದ ಎದೆ ತಂಬೂರಿಗೆ ಶ್ರುತಿ ಸೇರಿಸಲು ಇದಾರು ಬಂದರು ನೆನಪಿನ ಮೊಗ್ಗುಗಳು ಬಿರಿದು ಏನೋ ಹೇಳಿ ಜಗವ ಮರೆಸಿದವುಮೆಲು ಹೆಜ್ಜೆ ಇಡುತ ನಯನ ಮುಚ್ಚಿ ಕಾಡಿಸಲು ಇದಾರು ಬಂದರು ಬದುಕ ಬಂಡಿ ಪಯಣ ರಣ ಬಿಸಿಲಿಗೆ ಬಾಯಾರಿ ದಣಿಯಿತು ಜೀವಬಳಲಿದ ಮೈ ಮನಕೆ ಅಧರ ಜೇನು ಕುಡಿಸಲು ಇದಾರು ಬಂದರು ಕ್ರೂರ ಕಾಲಚಕ್ರ ಸುಳಿಗೆ ಸಿಲುಕಿ ಬಾಳ ನೌಕೆ ಹೊಯ್ದಾಡಿತುಅನುರಾಗದ ಬದುಕಿನ ಒಳ ಗುಟ್ಟನು ತಿಳಿಸಲು ಇದಾರು ಬಂದರು ಶಶಿ ಇಲ್ಲದ ಏಕಾಂತದ ನಿಶೆ ಧಗೆಯಲಿ ಜೀವನವು ಸವೆಯಿತು“ಪ್ರಭೆ” ಯ ತುಟಿ ಅಂಚಿನಲಿ ನಗೆ ಹೂ ಅರಳಿಸಲು ಇದಾರು ಬಂದರು ************** ಪ್ರಭಾವತಿ ಎಸ್ ದೇಸಾಯಿ ಕಂಗಳಲಿ ಪ್ರೀತಿಯ ಬಟ್ಟಲಿದೆ ಕುಡಿಸಲು ಇದಾರು ಬಂದರುಬಾಹುಗಳಲಿ ಪ್ರೀತಿಯ ಜೋಗುಳ ಹಾಡಲು ಇದಾರು ಬಂದರು ಹುಡುಕಲೇನಿದೆ ಈ ಹೃದಯ ನಿನ್ನ ಎದೆಯಲ್ಲಿ ಮಿಲನವಾಗಿದೆಏಕಾಂತದಿ ಅಧರಕ್ಕೆ ಅಧರ ಸೇರಿಸಲು ಇದಾರು ಬಂದರು ದೂರಾಗುವ ಮಾತು ಕನಸಲ್ಲೂ ಕನವರಿಸದಿರು ಮುದ್ದು ಮರಿಆಲಿಂಗನದ ಬಿಸಿ ಅಂಟನ್ನು ಲೇಪಿಸಲು ಇದಾರು ಬಂದರು ಮರೆತವನಿಗೆ ನೆನಪುಗಳು ಊರುಗೋಲು ಆಗಬಲ್ಲವು ಗೆಳತಿಹೆಜ್ಜೆ ಮೇಲೆಜ್ಜೆಯಿಟು ಸಪ್ತಪದಿ ತುಳಿಯಲು ಇದಾರು ಬಂದರು ನಿನ್ನ ಸಾಂಗತ್ಯದಿ ದಣಿವೆನ್ನುವ ಭಾವ ಚಿರ ನಿದ್ರೆಯಲ್ಲಿದೆಮೈ ಸೋಕದೆ ಮನದಿ ಪ್ರೇಮರಸ ಬೆರೆಸಲು ಇದಾರು ಬಂದರು ಒಲವಿನ ದಡ ಸೇರದೆಯೆ ಸಂಸಾರ ನೌಕೆ ಮುಳಗದು ಬೇಗಂಸುಮೆಯ ಕಂಪನು ನನ್ನಯ ಬದುಕಲಿ ಹರಡಲು ಇದಾರು ಬಂದರು ಬನದ ತುಂಬೆಲ್ಲ ಅನುರಾಗದ ಮಣ್ಣಿದೆ ಮಲ್ಲಿಗೆಯ ಸಸಿ ನೆಡು‘ಮಲ್ಲಿ’ಯ ಬಾಳಿನ ಉಯ್ಯಾಲೆಯನು ತೂಗಲು ಇದಾರು ಬಂದರು ****** ರತ್ನರಾಯ ಮಲ್ಲ

ಗಜಲ್ ಜುಗಲ್ ಬಂದಿ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಪ್ರಕಾಶಸಿಂಗ್ ರಜಪೂತ ಒಡೆಯನಾ ಸಂದೇಶ ಒಂದಾಗಿ ಬಾಳುಬೀದಿ ಗಳು ಹಂಚಿ ಆಗದಿರು ಹಾಳು ಬರುವಾಗ ತಂದಿ ಏನು ಜಗಳಾಡಲು ಬಂದಿ ಏನುನಿನ್ನ ಕಾಡುವದು ಇಲ್ಲಿ ನಿತ್ಯ ಈ ಸವಾಲು ಒಂದೇ ಕುಲ ಒಂದು ಮತ ಒಂದು ನಿನ್ನ ಜಾತಿಕರ್ಮವೇ ಪರಿಚಯ ತಿಳಿಕೋ ನಿನ ಪಾಲು ಗುಡಿಯಲ್ಲಿ ಹುಡುಕಿದರೆ ಸಿಗುವನಾ ಒಡೆಯಾಇಳಿಯಬೇಕು ಅದಕ್ಕೆ ನೀ ಮನದ ಆಳು ಜೊತೆಯಲ್ಲಿ ಬರುವದಿಲ್ಲ ನೀ ಮಾಡಿದ ಸಂಚಯದುಖ್ಖ ನೀಡತೈತಿ ಅಯ್ಯ ನೀ ಕಟ್ಟಿದ ಜಾಲು ನೆನಪಿನಲ್ಲಿ ಇರಲಿ”ಪ್ರಕಾಶ”ನಾ ಸದಾ ಮಾತುಜಾತಿ ಮತ ಬದಿಗಿಟ್ಟು ಅರಸಾಗಿ ಆಳು

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಪ್ರೊ.ರಾಜನಂದಾ ಘಾರ್ಗಿ ನಿನ್ನ ಮಡಿಲಿಗೆ ಜಾರಿ ಬಿದ್ದ ನನ್ನ ಹೃದಯವನ್ನು ಮರಳಿಸಿಬಿಡುನಿನ್ನ ಸುತ್ತ ಸುತ್ತಿರುವ ಕನಸುಗಳ ಜಾಲವನ್ನು ಮರಳಿಸಿಬಿಡು ಭಾವನೆಗಳ ಮತ್ತೇರಿ ಸುತ್ತಲ ಜಗವ ಮರೆಯುತ್ತಿರುವೆನನ್ನನೇ ಮರೆಯುವ ಮುನ್ನ ನನ್ನ ಅರಿವನ್ನು ಮರಳಿಸಿಬಿಡು ನಿನ್ನ ಮೋಹಕ ನಗೆಯ ಪಾಷದಲಿ ನರಳುತಿದೆ ನನ್ನ ಚೇತನಸಂವೇದನೆ ಸ್ಥಬ್ದವಾಗುವ ಮುನ್ನ ನನ್ನ ನಗುವನ್ನು ಮರಳಿಸಿಬಿಡು ಕಾಯುತಿರುವೆ ದೂರದ ದಾರಿಯಲಿ ಕಣ್ಣಿಟ್ಟು ಹಗಲಿರುಳುರಾತ್ರಿ ಕಳೆದು ಬೆಳಕಾಗುವ ಮುನ್ನ ಕಸಿದ ನಿದ್ರೆಯನ್ನು ಮರಳಿಸಿಬಿಡು ಕಳೆದುಕೊಂಡಿಹಳು ರಾಜಿ ತನ್ನನ್ನು ನಿನ್ನ ಅಂಧ ಪ್ರೀತಿಯಲಿಕಣ್ಣೀರು ಬತ್ತಿ ಕುರುಡಾಗುವ ಮುನ್ನ ಸುರಿದ ಪ್ರೀತಿಯನ್ನು ಮರಳಿಸಿಬಿಡು ನಿನ್ನ ಮಡಿಲಿಗೆ ಜಾರಿ ಬಿದ್ದ ನನ್ನ ಹೃದಯವನ್ನು ಮರಳಿಸಿಬಿಡುನಿನ್ನ ಸುತ್ತ ಸುತ್ತಿರುವ ಕನಸುಗಳ ಜಾಲವನ್ನು ಮರಳಿಸಿಬಿಡು ಭಾವನೆಗಳ ಮತ್ತೇರಿ ಸುತ್ತಲ ಜಗವ ಮರೆಯುತ್ತಿರುವೆನನ್ನನೇ ಮರೆಯುವ ಮುನ್ನ ನನ್ನ ಅರಿವನ್ನು ಮರಳಿಸಿಬಿಡು ನಿನ್ನ ಮೋಹಕ ನಗೆಯ ಪಾಷದಲಿ ನರಳುತಿದೆ ನನ್ನ ಚೇತನಸಂವೇದನೆ ಸ್ಥಬ್ದವಾಗುವ ಮುನ್ನ ನನ್ನ ನಗುವನ್ನು ಮರಳಿಸಿಬಿಡು ಕಾಯುತಿರುವೆ ದೂರದ ದಾರಿಯಲಿ ಕಣ್ಣಿಟ್ಟು ಹಗಲಿರುಳುರಾತ್ರಿ ಕಳೆದು ಬೆಳಕಾಗುವ ಮುನ್ನ ಕಸಿದ ನಿದ್ರೆಯನ್ನು ಮರಳಿಸಿಬಿಡು ಕಳೆದುಕೊಂಡಿಹಳು ರಾಜಿ ತನ್ನನ್ನು ನಿನ್ನ ಅಂಧ ಪ್ರೀತಿಯಲಿಕಣ್ಣೀರು ಬತ್ತಿ ಕುರುಡಾಗುವ ಮುನ್ನ ಸುರಿದ ಪ್ರೀತಿಯನ್ನು ಮರಳಿಸಿಬಿಡು

ಗಜಲ್ Read Post »

You cannot copy content of this page

Scroll to Top