ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಮಹಿಳಾದಿನದ ವಿಶೇಷ

ನಮ್ಮೊಳಗಿನ ಬೆಳಕು ಬಿದಲೋಟಿರಂಗನಾಥ್ ಹೆಣ್ಣೆಂದರೇ ನಮ್ಮೊಳಗಿನ ಬೆಳಕು ಹೆಣ್ಣೆಂದರೆ ಭೂಮಿ ತೂಕ.ಆಕೆಯು ಸಕಲವನ್ನು ಹೊತ್ತು ಸಾಗುತ ಬದುಕನ್ನು ನೀಸಿದವಳು.ಮನೆಯೆಂದರೆ ಅವಳು ತೊಲೆ ಕಂಬ.ಅದಿಲ್ಲದೆ ಛಾವಣಿ ಎಲ್ಲಿ ನಿಂತಿತು.ಹೆಣ್ಣು ಕುಟುಂಬದ ಕಣ್ಣು.ಎಲ್ಲರನ್ನು ನೋಡುತ್ತಾ ಪೊರೆಯುತ್ತಾ,ಅವರ ಸೇವೆಗಳನ್ನು ಮಾಡುತ್ತಾ ಬದುಕನ್ನು ಏಗಿದವಳು ಎಂದರೆ ತಪ್ಪಾಗಲಾರದು.ಒಂದು ಹೆಣ್ಣು ಮಗಳಾಗಿ ,ಹೆಂಡತಿಯಾಗಿ ಅತ್ತೆಯಾಗಿ ಸೊಸೆಯಾಗಿ ಸಕಲ ಪಾತ್ರಗಳನ್ನು ನಿರ್ವಹಿಸುತ್ತಾ ಸೈ ಎನಿಸಿಕೊಂಡವಳು.ಅವಳಿಲ್ಲದೆ ಬದುಕೇ ಶೂನ್ಯ.ಅವಳನ್ನು ಸಮಾಜ ನೋಡುವ ದೃಷ್ಠಿ ಬದಲಾಗಬೇಕು.ಗಾಂಧೀಜಿಯ ಆಸೆಯಂತೆ ಒಂದು ಹೆಣ್ಣು ನಡುರಾತ್ರಿಯಲ್ಲಿ ನಿರ್ಭಿಡೆಯಾಗಿ ಓಡಾಡುವಂತಹ ಸಮಾಜ ನಿರ್ಮಾಣ ಆಗಬೇಕು. ಆಗ ನಮ್ಮ ದೇಶಕ್ಕೆ ಸ್ವತಂತ್ರ ಸಿಕ್ಕಾಂತಾಗುತ್ತದೆ.ಹೆಣ್ಣು ಕೇವಲ ಕಾಮದ ವಸ್ತುವಲ್ಲ.ಅವಳನ್ನು ಕಂಡರೆ ಪೂಜ್ಯಭಾವನೆ ಬರುವಂತಾಗಬೇಕು. ಕಾಲ ಬದಲಾಗಿದೆ ಇವತ್ತು ಹೆಣ್ಣು ಮಕ್ಕಳು ಎಲ್ಲಾ ರಂಗದಲ್ಲೂ ಇದ್ದಾರೆ.ಪೈಲೆಟ್ ,ಪೊಲೀಸ್,ಡ್ರೈವರ್ ಕಂಡಕ್ಟರ್ ,ನ್ಯಾಯವಾದಿ,ನ್ಯಾಯಾಧೀಶರು ಎಲ್ಲಾ ಹುದ್ದೆಗಳನ್ನು ಅಲಂಕರಿಸಿದ್ದಾರೆ.ಗಂಡಿಗೆ ಸಮಾನವಾಗಿ ಸ್ಪರ್ಧೆಗಿಳಿದಿದ್ದಾಳೆ.ಎಂಬುದು ಸಂತೋಷದಾಯಕ ವಿಷಯ. ಒಂದು ವಿಷಯ ಪ್ರಸ್ಥಾಪಿಸಲು ಇಷ್ಟಪಡುತ್ತೇನೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತನ್ನ ಹೆಂಡತಿಯರನ್ನು ನಿಲ್ಲಿಸುವ ಮೂಲಕ ಹುದ್ದೆಯ ಸಕಲ ಜವಬ್ಧಾರಿಯನ್ನು ಪುರುಷಮಾಡುತ್ತಿರುವುದು ನೋವಿನ ಸಂಗತಿ.ಅದರಲ್ಲು ಗ್ರಹಚಾರ ತಪ್ಪಿ ಪಂಚಾಯಿತಿ ಅಧ್ಯಕ್ಷೆಯಾದರೇ ಮುಗಿದೇ ಹೋಯಿತು.ಆ ಚೇರಿನ ಮೇಲೆ ಗಂಡನ ದರ್ಬಾರು.ಯಾಕೆ ಅವಳ ಕೆಲಸ ಅವಳಿಗೆ ಮಾಡಲು ಬಿಡಲ್ಲ ಎಂಬುದು ವರ್ತಮಾನದ ದುಸ್ತಿತಿ ಎಂದು ನಾನದರೂ ಭಾವಿಸುತ್ತೇನೆ. ತನ್ನ ಅಧಿಕಾರದ ಹಕ್ಕನ್ನು ಸುಖವನ್ನು ಅವಳೂ ಅನುಭವಿಸಲಿ ಬಿಡಿ.ಅಲ್ಲ ಒಂದು ಚೆಕ್ ಗೆ ಸಹಿ ಹಾಕಲು ತನ್ನ ಗಂಡನ ಅನುಮತಿಬೇಕು ಎಂದ ಮೇಲೆ.ಅಧಿಕಾರ ಯಾತಕ್ಕೆ ಅವಳಿಗೆ ಎಂಬ ಪ್ರಶೆ ಮೂಡುತ್ತದೆ.ಈ ತರಹ ತನ್ನ ಕೈ ಗೊಂಬೆಯಾಗಿ ಮಾಡಿಕೊಳ್ಳುವ ಮನಸ್ತಿತಿಗಳು ಬದಲಾಗಬೇಕು.ಸಮಾನತೆಯಿಂದ ಕಾಣುವ ಮುಖೇನ ನವ ಸಮಾಜ ನಿರ್ಮಾಣದತ್ತ ಸಮಾಜ ಸಾಗಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಇನ್ನು ಮಕ್ಕಳು ವಿಷಯಕ್ಕೆ ಬಂದರೆ ಗಂಡಾದರೇನು ಹೆಣ್ಣಾದರೇನು?ಎರಡೂ ಒಂದೇ ಅಲ್ಲವೆ.?ಹೆಣ್ಣಿಲ್ಲದೆ ಗಂಡು ಮಗುವಿನ ಜನನ ಸಾಧ್ಯವೆ ? ನೋಡುವ ದೃಷ್ಠಿಕೋನ ಬದಲಾಗಬೇಕು.ಆಗಂತ ಹೆಣ್ಣುಮಕ್ಕಳು ಅರ್ಥಮಾಡಿಕೊಳ್ಳಬೇಕು ಕೊಟ್ಟ ಅಧಿಕಾರವನ್ನು ಸ್ವತಂತ್ರವನ್ನು ಸುಮ್ನೆ ದೂರುವ ಮೂಲಕ ಹಾಳು ಮಾಡಿಕೊಳ್ಳಬಾರದುಮಕ್ಕಳಿಗೆಶಿಕ್ಷಣ ಕೊಡಿಸುವಾಗಲು ಅಷ್ಟೆ ,ಈಗಲೂ ಹಳ್ಳಿಗಳಲ್ಲಿ “ಗಂಡು ಮಕ್ಕಳಲ್ಲವೆ ಓದಿಸು ಎಷ್ಟಾದರೂ ಓದಲಿ”ಎನ್ನುತ್ತ .ಹೆಣ್ಣೋ ಬಿಡಿಸಿ ಮದುವೆ ಮಾಡುವ ದುರಂತಗಳು ನಮ್ಕಾಮ ಕಣ್ಣುಮುಂದೆ ಇವೆ. ಮಡ್ಲಲ್ಲಿ ಬೆಂಕಿಕಟ್ಕಂಡು ಎಷ್ಟಂತ ತಿರುಗುತ್ತಿ” .ಎಂಬ ಉಡಾಫೆಯ ಮನೋಭಾವ ಬದಲಾಗುವ ಮೂಲಕ ಅವಳಿಗೆ ಗೌರವ ಕೊಡಬೇಕು ಆಗ ಭೂಮಿ ಮೇಲೆ ಹುಟ್ಟಿದ್ದಕ್ಕೂ ಸಾರ್ಥಕ್ಯ. ಹೆಣ್ಣಿಗೂ ಮನಸ್ಸಿದೆ ಅಂತಃಕರಣವಿದೆ ಅವಳೂ ಮನುಷ್ಯಳು ಎಂಬ ಮನೋಭಾವ ಬಂದಾಗ ಮಾತ್ರ ಬದುಕು ಹಸನಾಗುವುದು. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಹಪಾ ಹಪಿ ಬದಲಾಗಬೇಕು.ಹೆಣ್ಣಿಲ್ಲದ ಮನೆ ,ಬದುಕಿನಲ್ಲಿ ಬೆಳಕು ಕಂಡಿದ್ದು ಇಲ್ಲವೇ ಇಲ್ಲ.ಅವಳನ್ನು ಗೌರವಿಸುವ ಮೂಲಕ ಮಹಿಳಾ ದಿನಾಚಾರಣೆಗೆ ಇಂಬು ನಿಡೋಣ. ************************************

ಮಹಿಳಾದಿನದ ವಿಶೇಷ Read Post »

ಇತರೆ

ಮಹಿಳಾದಿನದ ವಿಶೇಷ

ಮಹಿಳಾ ಸಾಹಿತ್ಯ ಅಂದು ಇಂದು ಸುಜಾತಾ ರವೀಶ್ ಮಹಿಳಾ ಸಾಹಿತ್ಯ ಅಂದು ಇಂದು ಕವಿ ಮಹಾಲಿಂಗರು ಹೇಳುತ್ತಾರೆ “ಸುಲಿದ ಬಾಳೆಯ ಹಣ್ಣಿನಂದದ ಕಳೆದ ಸಿಗುರಿನ ಕಬ್ಬಿನಂದದ ಅಳಿದ ಉಷ್ಣದ ಹಾಲಿನಂದದ ಕನ್ನಡ ಸಾಹಿತ್ಯ”ಎಂದು. ನಿಜ ಮಧುರಕ್ಕೆ ಮಧುರವೂ ಸವಿಗೆ ಸವಿಯೂ ಆದ ನಮ್ಮ ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಕಡೆಗಣಿಸುವಂತಹದ್ದಲ್ಲ. ಪ್ರಚಲಿತವಿದ್ದ ಸ್ತ್ರೀಯರ ಸ್ಥಾನಮಾನ ನೆಲೆ ಬೆಲೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದಾಗ ಈ ಪಾಲು ಕಡಿಮೆಯೇ. ಮಹಿಳಾ ಸಾಹಿತ್ಯವನ್ನು ಕಾಲಘಟ್ಟದ ಮಾಪನದಲ್ಲಿಟ್ಟು ಅಳೆದು ನೋಡುವಾಗ ಈ ರೀತಿ ವಿಂಗಡಿಸಬಹುದು ೧. ವೇದಕಾಲದಲ್ಲಿ ಮಹಿಳಾ ಸಾಹಿತ್ಯ ೨. ಜಾನಪದ ಸಾಹಿತ್ಯ ೩. ರಾಜಾಸ್ಥಾನಗಳಲ್ಲಿ ಕನ್ನಡ ಕವಿಯತ್ರಿಯರು ೪. ಜೈನ ಸಾಹಿತ್ಯ ೫. ವಚನ ಸಾಹಿತ್ಯ ೬. ದಾಸ ಸಾಹಿತ್ಯ ೭. ಹತ್ತೊಂಬತ್ತನೇ ಶತಮಾನದ ಸ್ತ್ರೀ ಸಾಹಿತ್ಯ ೮. ದಲಿತ ಬಂಡಾಯ ಸಾಹಿತ್ಯ ೯. ಇಪ್ಪತ್ತನೇ ಶತಮಾನದ ಮಹಿಳಾ ಸಾಹಿತ್ಯ ೧೦. ಪ್ರಸಕ್ತ ಅಂತರ್ಜಾಲ ಸಾಹಿತ್ಯ ವೇದ ಕಾಲದಲ್ಲಿ ಮಹಿಳಾ ಸಾಹಿತ್ಯ ಮಹಿಳೆಯರಿಗೆ ಉಪನಯನದ ಅರ್ಹತೆಯೂ ಇದ್ದಂತಹ ವೇದ ಕಾಲದಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ಅವಕಾಶಗಳಿದ್ದವೆಂದು ತಿಳಿದುಬರುತ್ತದೆ. ಗಾರ್ಗಿ ಮೈತ್ರೇಯಿಯರಂತಹ ಪ್ರಕಾಂಡ ಪಂಡಿತರು ಸ್ವತಃ ಯಾಜ್ಞವಲ್ಕರಂತಹ ಜ್ಞಾನಿಗಳ ಮೆಚ್ಚುಗೆ ಗಳಿಸಿದ್ದರು. ಕನ್ನಡ ಸಾಹಿತ್ಯಕ್ಕೆ ನೇರ ಸಂಬಂಧವಿರದಿದ್ದರೂ ಈ ಸಂಸ್ಕೃತ ಮಹಿಳಾ ವಾಗ್ಮಿಗಳೇ ಇಂದಿನ ಸ್ತ್ರೀಯರಿಗೆ ಮೊದಲ ಪಂಕ್ತಿ ಹಾಕಿ ಕೊಟ್ಟವರೆಂದು ನೆನಪಿನಲ್ಲಿಡ ತಕ್ಕಂತಹ ಅಂಶ. ಜಾನಪದ ಸಾಹಿತ್ಯ ಕನ್ನಡ ಜಾನಪದ ಸಾಹಿತ್ಯವಂತೂ ಸ್ತ್ರೀಯರದ್ದೇ ಏಕಸ್ವಾಮ್ಯತೆ ಅನ್ನಬಹುದು. ಬೀಸುವ ಕಲ್ಲಿನ ಪದಗಳು, ಸಂಪ್ರದಾಯದ ಹಾಡುಗಳು, ಲಾಲಿ ಜೋಗುಳದ ಹಾಡುಗಳು ,ಆರತಿ ಹಾಡುಗಳು, ವ್ರತಗಳ ಹಾಡುಗಳು ಒಂದೇ ಎರಡೇ? ಈ ವಿಫುಲ ಜನಪದ ಸಾಹಿತ್ಯ ಮೌಖಿಕವಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಂತಹವು ಸಂಗ್ರಹಿತವಾಗದೆ ಅಚ್ಚಾಗದೆ ಕಾಲನ ದಾಳಿಯಲ್ಲಿ ಎಷ್ಟೋ ನಾಶವಾಗಿದೆ .ಲೇಖಕಿಯರ ಹೆಸರಿರದ ಸಮೃದ್ಧ ಜಾನಪದ ಸಂಪತ್ತು ನಮ್ಮದು. ಯಶೋದಾ ಬಾಯಿ ಅವರ ಸೀತಾ ಪರಿತ್ಯಾಗ ರುಕ್ಮಿಣಿ ಕಲ್ಯಾಣ ಚಂದ್ರಾವಳಿ ,ಭಾಗೀರಥಮ್ಮ ಅವರ ಜನಪದ ಛಂದಸ್ಸಿನ ಕೀರ್ತನ ರಾಮಾಯಣ ಇದೇ ಮುಂತಾದವು ಸದ್ಯಕ್ಕೆ ಲಭ್ಯ ಸಂಗ್ರಹಿತ ಕೃತಿಗಳಲ್ಲಿ ಮುಖ್ಯವಾದವು. ಜಾನಪದ ಕಾವ್ಯದಲ್ಲಿ ಗಂಡಿನ ದಬ್ಬಾಳಿಕೆಯನ್ನು ಬರೀ ಸಹಿಸಿಕೊಳ್ಳದೆ ಅದರ ವಿರುದ್ಧ ದನಿ ಎತ್ತಿರುವುದು ಸ್ತ್ರೀ ಜನಮಾನಸದಲ್ಲಿ ವ್ಯವಸ್ಥೆಯ ಅಸಮಾನತೆಯ ವಿರುದ್ಧದ ಆಕ್ರೋಶ ಸಣ್ಣಗೆ ಹೊಗೆಯಾಡುವುದು ಗಮನಿಸಬಹುದು. ರಾಜಾ ಆಸ್ಥಾನಗಳಲ್ಲಿ ಕನ್ನಡ ಕವಿಯತ್ರಿಯರು ಶಾತವಾಹನರ ಕಾಲದಲ್ಲಿ ಇಮ್ಮಡಿ ಪುಲಿಕೇಶಿಯ ರಾಣಿ ವಿಜಯ ಮಹಾದೇವಿ (ವಿಜ್ಜಿಕೆ) ಕೌಮುದಿ ಮಹೋತ್ಸವ ಎಂಬ ಕಾವ್ಯವನ್ನು ರಚಿಸಿದ್ದಳು .ವಿಜಯನಗರದ ಸುವರ್ಣ ಯುಗದಲ್ಲಿ ಕೃಷ್ಣದೇವರಾಯರ ಪಟ್ಟದರಸಿ ತಿರುಮಲಾಂಬ ತನ್ನ ಪತಿಯ ಎರಡನೆಯ ಮದುವೆಯ ವಿಷಯವನ್ನು ಆಧರಿಸಿ ವರದಾಂಬಿಕಾ ಪರಿಣಯ ಎಂಬ ಕೃತಿಯನ್ನು ರಚಿಸಿದ್ದು ಗಂಗಾದೇವಿ ಎಂಬ ಕವಿಯತ್ರಿಯಿಂದ ವೀರ ಕಂಪಣರಾಯ ಚರಿತ ಎಂಬ ಗ್ರಂಥ ರಚಿಸಲ್ಪಟ್ಟಿತು. ಮೈಸೂರು ಅರಸರ ಕಾಲದಲ್ಲಿ ದೊಡ್ಡ ಕೃಷ್ಣರಾಜ ಒಡೆಯರ ರಾಣಿ ಚೆಲುವಾಂಬಯವರು ನಂದಿ ಕಲ್ಯಾಣ ಎಂಬ ಗ್ರಂಥವನ್ನು, ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ಸಂಚಿಯ ಹೊನ್ನಮ್ಮ ಹದಿಬದೆಯ ಧರ್ಮ ,ಶೃಂಗಾರಮ್ಮ ಪದ್ಮಿನಿ ಕಲ್ಯಾಣವನ್ನು ರಚಿಸಿದರು. ಈ ಕಾಲದ ರಾಜಾಶ್ರಯದ ವನಿತೆಯರು ಧಾರ್ಮಿಕ ಆಧ್ಯಾತ್ಮದ ಬಗ್ಗೆ ಬರೆದರೆ ಹೊರತು ವ್ಯವಸ್ಥೆಗೆ ವಿರೋಧವಾಗಿಲ್ಲ. ಪುರುಷನ ಜೊತೆ ಸಮಾನತೆಗೆ ಧ್ವನಿ ಗೂಡಿಸಿಲ್ಲ. ಏನಿದ್ದರೂ ಅವರದ್ದು ತಣ್ಣಗಿನ ಮೆಲುದನಿಯ ಪ್ರತಿರೋಧ . ಜೈನ ಸಾಹಿತ್ಯ ಜೈನ ಸಾಮಾಜಿಕ ವ್ಯವಸ್ಥೆಯಲ್ಲಿದ್ದ ಸ್ತ್ರೀ ಸಮಾನತೆ ಹಾಗೂ ಪ್ರಾಮುಖ್ಯತೆ ಎತ್ತಿ ಕಾಣುವ ಅಂಶವಾದರೂ ಜೈನ ಕವಿಯತ್ರಿಯರು ಬೆರಳೆಣಿಕೆಯಷ್ಟು ಮಾತ್ರ. ಅತ್ತಿಮಬ್ಬೆ ಕಾವ್ಯ ರಚನೆಗೆ ಸಹಕಾರ ಕೊಟ್ಟು ದಾನ ಚಿಂತಾಮಣಿ ಎನಿಸಿದಳು. ಅದೇ ಕಾಲದ ಕಂತಿ ಕನ್ನಡದ ಪ್ರಥಮ ಕವಿಯತ್ರಿ ಅಭಿನವ ವಾಗ್ದೇವಿ ಆದಿಕವೀಶ್ವರಿ ಎಂದೆಲ್ಲ ಬಿರುದಾಂಕಿತಳಾಗಿ ಕಂತಿ ಹಂಪನ ಸಮಸ್ಯೆಗಳು ಎಂಬ ಕೃತಿ ರಚಿಸಿದ್ದಾಳೆ. ಈ ಕಾಲದ ಕವಿಯತ್ರಿಯರು ಅಷ್ಟೇ ವ್ಯವಸ್ಥೆಗೆ ಹೊಂದಿ ನಡೆದರೆ ವಿನಃ ವಿರುದ್ಧ ಧ್ವನಿ ಎತ್ತಲಿಲ್ಲ ಎನ್ನುವುದು ಪರಿಗಣಿಸಬೇಕಾದ ಅಂಶ. ವಚನ ಸಾಹಿತ್ಯ (೧೨ ನೇ ಶತಮಾನ) ವಚನ ಸಾಹಿತ್ಯದ ಯುಗವನ್ನು ಕನ್ನಡ ಮಹಿಳಾ ಸಾಹಿತ್ಯದ ಸುವರ್ಣಯುಗ ಎನ್ನಬಹುದು. ಸಾಮಾಜಿಕ ಅನಿಷ್ಟ ವ್ಯವಸ್ಥೆಗಳ ವಿರುದ್ಧ ಸ್ತ್ರೀ ಬಂಡಾಯದ ಕಿಡಿ ಕೆದರಿದ್ದು ಆಗಲೇ .ಅಕ್ಕಮಹಾದೇವಿ ಅಕ್ಕಮ್ಮ ರೆಮ್ಮವ್ವೆ ಗಂಗಮ್ಮ ಲಕ್ಷಮ್ಮ ಇವುಗಳನ್ನು ಸ್ತ್ರೀ ಸಮಾನತೆಯ ಕೂಗಿನ ಪ್ರವಾದಿಗಳೆಂದರೆ ತಪ್ಪಾಗಲಾರದು .ಇನ್ನು ದಲಿತ ಕವಿಯತ್ರಿಯರು ಬಂಡಾಯದ ಕಹಳೆ ಊದಿದವರಲ್ಲಿ ಪ್ರಮುಖರೆಂದರೆ ಸೂಳೆ ಸಂಕವ್ವೆ ಹೊಲತಿ ಗುಡ್ಡವ್ವೆ, ಉರಿಲಿಂಗಪೆದ್ದಿಯ ಪತ್ನಿ ಕಾಳವ್ವೆ ,ಕುಂಬಾರ ಕೇತಲಾದೇವಿ ಲಕ್ಕವ್ವ ಇವರುಗಳು ಮುಖ್ಯರು . ವಚನ ಸಾಹಿತ್ಯ ಕಾಲ ಸ್ತ್ರೀ ಶೋಷಣೆಯತ್ತ ಬರಿ ಬರವಣಿಗೆಯಲ್ಲಿ ಮಾತ್ರವಲ್ಲದೆ ಆಚರಣೆಯಲ್ಲೂ ಧ್ವನಿ ಎತ್ತಿ ಬದಲಾವಣೆಗೆ ನಾಂದಿ ಹಾಡಿತ್ತು . ಒಂದು ಸಾಮಾಜಿಕ ಕ್ರಾಂತಿಯತ್ತ ನಡೆದಿದ್ದ ವಚನ ಸಾಹಿತ್ಯದ ಹರಿವು ಕಲ್ಯಾಣ ಕ್ರಾಂತಿಯ ದಮನದೊಂದಿಗೆ ಅವಸಾನ ಹೊಂದಿ ಸ್ತ್ರೀವಾದ ಮತ್ತೆ ಮಾಯವಾದದ್ದು ಒಂದು ಸಾಮಾಜಿಕ ದುರಂತವಷ್ಟೇ ಅಲ್ಲದೇ ಮಹಿಳಾ ಸಾಹಿತ್ಯಕ್ಕೆ ತುಂಬಲಾರದ ನಷ್ಟವೆಂದರೆ ಅತಿಶಯೋಕ್ತಿಯಾಗಲಾರದು. ದಾಸ ಸಾಹಿತ್ಯ ದಾಸ ಸಾಹಿತ್ಯವೆಂದರೆ ಸಾಮಾನ್ಯ ಪುರುಷರಿಂದ ರಚನೆಯಾದ್ದದು ಎಂದುಕೊಳ್ಳುತ್ತೇವೆ ಆದರೆ ಸ್ತ್ರೀಯರ ಕೊಡುಗೆಯೂ ದಾಸ ಸಾಹಿತ್ಯಕ್ಕೆ ಸಂದಿದೆ. ಇಲ್ಲಿಯೂ ಸಹ ಸಂಗ್ರಹಿತವಾಗದೆ ಹೋದದ್ದು ಬಹಳಷ್ಟಿರಬಹುದು.. ಇವರಲ್ಲಿ ಪ್ರಮುಖರೆಂದರೆ ಚಿತ್ರದುರ್ಗದ ಅಂಬಾಬಾಯಿ ಗೋಪಾಲಕೃಷ್ಣ ವಿಠಲ ಅಂಕಿತ ನಾಮದಲ್ಲಿ ದ್ವಿಪದಿ ಛಂದಸ್ಸಿನಲ್ಲಿ ರಾಮಾಯಣ ರಚಿಸಿದ್ದಾರೆ. ಗಂಗಲಿಯ ಅವ್ವ , ಹರಪನಹಳ್ಳಿ ಭೀಮವ್ವ ನಾಡಿಗರ ಶಾಂತಾಬಾಯಿ ತುಳಸಾಬಾಯಿ ಹೆಳವನಕಟ್ಟೆ ಗಿರಿಯಮ್ಮ (ಇವರ ರಚನೆಗಳು ಚಂದ್ರಹಾಸ ಕತೆ ಸೀತಾ ಕಲ್ಯಾಣ ಉದ್ದಾಲಕ ಕಥೆ ಬ್ರಹ್ಮ ಕೊರವಂಜಿ ಮುಂತಾದ ಹಾಡು ಹಬ್ಬಗಳು) ವಿಧವೆಯರೇ ಹೆಚ್ಚಾಗಿ ಈ ದಾಸ ಸಾಹಿತ್ಯ ರಚನೆಗೆ ಮುಂದಾಗಿದ್ದು ಬರೀ ಆಧ್ಯಾತ್ಮಿಕದ ಕಡೆಗೆ ಒಲವು ಹೆಚ್ಚಾಗಿ ಕಂಡು ಬರುತ್ತದೆ. ೧೯ನೇ ಶತಮಾನದ ಸ್ತ್ರೀ ಸಾಹಿತ್ಯ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಸ್ವಾತಂತ್ರ್ಯಾನಂತರದ ಕಾಲಮಾನ ಘಟ್ಟದಲ್ಲಿ ಸ್ತ್ರೀ ಸ್ವಾತಂತ್ರ್ಯದ ಹೊಸ ರೂಪು ರೇಷೆಗಳು ಮೂಡಿ ಸಾಮಾಜಿಕವಾಗಿ ಸಾಹಿತ್ಯ ರಚನೆಯು ಆರಂಭವಾಯಿತು. ಪತ್ರಿಕೆಗಳಲ್ಲಿ ಸ್ತ್ರೀಯರಿಂದ ಲೇಖನ ಪ್ರಬಂಧ ಕಥೆಗಳು ಪ್ರಕಟವಾಗಿರುವುದು ಮುಖ್ಯ ಅಂಶ. ಶಾಂತಾಬಾಯಿ ನೀಲಗಾರ ಅವರ ಉತ್ತಮ ಗೃಹಿಣಿ ಕನ್ನಡದ ಮೊದಲ ಮಹಿಳಾ ಕಾದಂಬರಿ ಎಂದು ಗುರುತಿಸಲಾಗಿದೆ. ತಿರುಮಲೆ ರಾಜಮ್ಮ ತಿರುಮಲಾಂಬಾ ಬೆಳಗೆರೆ ಜಾನಕಮ್ಮ ಕೊಡಗಿನ ಗೌರಮ್ಮ ಆರ್ ಕಲ್ಯಾಣಮ್ಮ ಜಯದೇವಿ ತಾಯಿ ಲಿಗಾಡೆ ಮುಂತಾದವರು ಈ ಅವಧಿಯ ಪ್ರಮುಖ ಲೇಖಕಿಯರು. ಪ್ರಚಲಿತ ಸ್ತ್ರೀ ಸಮಸ್ಯೆಗಳು ಸಾಮಾಜಿಕ ಸಮಸ್ಯೆಗಳು ಮುಂತಾದವುಗಳ ವಿರುದ್ಧ ದನಿ ಎತ್ತಿರುವುದು ಈ ಕಾಲದ ಲೇಖಕಿಯರ ವೈಶಿಷ್ಟ್ಯ . ದಲಿತ ಬಂಡಾಯ ಸಾಹಿತ್ಯ ನಂತರದ ದಿನಗಳಲ್ಲಿ ಅಸ್ತಿತ್ವ ಕಂಡುಕೊಂಡ ದಲಿತ ಹಾಗೂ ಬಂಡಾಯ ಸಾಹಿತ್ಯದಲ್ಲಿ ಪುರುಷರಂತೆ ಸ್ತ್ರೀಯರ ಕೊಡುಗೆಯೂ ಅಪಾರ ಗೀತಾ ನಾಗಭೂಷಣ, ಬಿಟಿ ಲಲಿತಾ ನಾಯಕ್, ವೈದೇಹಿ ,ಅನುಪಮ ನಿರಂಜನ್ ಸಾರಾ ಅಬೂಬಕ್ಕರ್ ಇನ್ನೂ ಮುಂತಾದ ಅನೇಕ ಲೇಖಕಿಯರು ಈ ಮುಂಚೂಣಿಯಲ್ಲಿ ಗುರುತಿಸಲ್ಪಡುವ ಕೆಲವರು . ಅಸ್ಪೃಶ್ಯತೆ ಸ್ತ್ರೀ ಶೋಷಣೆ ಬೆತ್ತಲೆ ಸೇವೆ ಮೊದಲಾದ ಸ್ತ್ರೀ ಸಂಬಂಧಿ ಹಾಗೂ ದಲಿತ ಸಂಬಂಧಿ ಸಮಸ್ಯೆಗಳಂತ ಜ್ವಲಂತ ಸಮಸ್ಯೆಗಳ ವಿರುದ್ಧ ಮಾತನಾಡಿ ಸುಧಾರಣೆಗೆ ಮುಂದಾದದ್ದು ವಿಶೇಷ . ೨೦ನೇ ಶತಮಾನದ ಮಹಿಳಾ ಸಾಹಿತ್ಯ ಇದು ಸಹ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೇರು ಕಾಲವೆನ್ನಬಹುದು .ಸಣ್ಣಕಥೆ ಕಾದಂಬರಿಗಳ ಹೊಳೆಯೇ ಹರಿದು ಹೊಸ ಓದುಗರನ್ನು ಓದಿನ ಅಲೆಯನ್ನು ಸೃಷ್ಟಿಸಿತ್ತು. ತ್ರಿವೇಣಿ, ಉಷಾ ನವರತ್ನರಾಂ, ಎಂಕೆ ಇಂದಿರಾ, ಸಾಯಿಸುತೆ ,ಎಚ್ ಜಿ ರಾಧಾದೇವಿ ಅವರ ಕಾದಂಬರಿಗಳು ಹೊಸ ಸಂಚಲನವನ್ನೇ ಸೃಷ್ಟಿಸಿ ಕನ್ನಡ ಪ್ರೀತಿಗೆ ಕಾರಣವಾದವು .ಪ್ರತಿಭಾ ನಂದಕುಮಾರ್ ಹೇಮಾ ಪಟ್ಟಣಶೆಟ್ಟಿ ಮಾಲತಿ ಸವಿತಾ ನಾಗಭೂಷಣ ಮುಕ್ತಾಯಕ್ಕ ಸುನಂದಮ್ಮ ಮುಂತಾದವರು ಈ ಕಾಲದ ಹೆಸರಿಸಬೇಕಾದ ಲೇಖಕಿಯರ ಪಟ್ಟಿಗೆ ಸೇರುತ್ತಾರೆ . ಸಾಮಾಜಿಕವಾಗಿ ಆಗುತ್ತಿದ್ದ ಬದಲಾವಣೆಗಳು ಹಾಗೂ ಶೋಷಣೆಯು ಇನ್ನೊಂದು ರೂಪದಲ್ಲಿ ಮುಂದುವರಿದ ದ್ದನ್ನು ಎತ್ತಿ ಹೇಳುವ ಪ್ರಯತ್ನ ಈ ಕಾಲದಲ್ಲಾಯಿತು. ಪ್ರಸಕ್ತ ಅಂತರ್ಜಾಲ ಸಾಹಿತ್ಯ ಇಂದಿನ ಯುಗದ ಮುಖ್ಯ ಆಕರ್ಷಣೆ ಸಾಮಾಜಿಕ ಜಾಲ ತಾಣಗಳು. ಇವು ಬರಹಗಾರರ ಒಂದು ದೊಡ್ಡ ಪಡೆಯನ್ನೆ ಕಟ್ಟಿದೆ ಬೆಳೆಸುತ್ತಿದೆ .ಒಂದು ಸೀಮಿತ ಓದುಗರ ವರ್ಗವೇ ಹುಟ್ಟಿದೆ .ವಾಟ್ಸಾಪ್ ಫೇಸ್ ಬುಕ್ ನಲ್ಲಿನ ಸಾಹಿತ್ಯಿಕ ಗುಂಪುಗಳು ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ರೀತಿಯ ಸೇವೆಯನ್ನು ಸಲ್ಲಿಸುತ್ತಿದೆ ಮನೆಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಓದುಗರ ಜೊತೆ ಸಂಭವಿಸಬಹುದಾದಂಥ ಚಿನ್ನದಂತಹ ಅವಕಾಶ ಕೊಡುವ ಈ ಸಾಹಿತ್ಯ ಪ್ರವರ್ಗ ಪ್ರಸಕ್ತ ಜನಪ್ರಿಯವಾಗಿರುವ ಮಾಧ್ಯಮ ಅದರದೇ ಆದಂತಹ ಕೆಲವು ಅಡೆತಡೆ ಇತಿಮಿತಿಗಳಿದ್ದರೂ ವೃತ್ತಿ ಗೃಹಕೃತ್ಯಗಳ ನಡುವೆ ಕಿಂಚಿತ್ತಾದರೂ ಬರೆಯುವ ಓದುವ ಹವ್ಯಾಸಕ್ಕೆ ನೀರೆರೆಯುತ್ತಿವೆ ಎಂದರೆ ತಪ್ಪಲ್ಲ . ೧೯೬೯ರಲ್ಲಿ ಸ್ಥಾಪಿತವಾದ ಶ್ರೀಮತಿ ಸರೋಜಿನಿ ಮಹಿಷಿ ಯವರನ್ನು ಪ್ರಥಮ ಅಧ್ಯಕ್ಷರನ್ನಾಗಿ ಮಾಡಿ ಸಮ್ಮೇಳನ ನಡೆಸಿದ ಕರ್ನಾಟಕ ಲೇಖಕಿಯರ ಸಂಘದ ಕಾಣಿಕೆಯೂ ಈ ನಿಟ್ಟಿನಲ್ಲಿ ಸ್ಮರಣಾರ್ಹ. ಶ್ರೀಮತಿ ಚಿ .ನಾ ಮಂಗಳ ಅವರ ಕಾಲೇಜಿನಲ್ಲಿ ೧೯೮೬ ರಿಂದ ಮಹಿಳಾ ಅಧ್ಯಯನ ಎಂಬ ಕೋರ್ಸ್ ಪ್ರಾರಂಭ ಮಾಡಿದ್ದು ಮಹಿಳಾ ಸಾಹಿತ್ಯದಲ್ಲಿನ ಮೈಲಿಗಲ್ಲು. ಮಹಿಳೆಯರ ಬದುಕಿನ ವಿವಿಧ ಬರಹ ಕುರಿತು ಮಹಿಳೆಯರೇ ರಚಿಸಿರುವ ಇಪ್ಪತ್ತ್ಮೂರು ಕೃತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ೧೯೭೫ರಲ್ಲಿ ಪ್ರಕಟವಾದವು. ಇದು ಸಹ ಮಹಿಳೆಯರಲ್ಲಿ ಬರೆಯುವ ಆಸಕ್ತಿಗೆ ನೀರೆರೆದವು . ಇಷ್ಟೆಲ್ಲಾ ಆದರೂ ಕನ್ನಡ ಮಹಿಳಾ ಸಾಹಿತ್ಯದಲ್ಲಿ ಸ್ತ್ರೀ ತನ್ನ ಅಸ್ತಿತ್ವದ ಛಾಪನ್ನು ಮೂಡಿಸಿ ಅಸ್ಮಿತೆಯನ್ನು ಉಳಿಸಿಕೊಂಡಿದ್ದಾಳೆಯೇ ಎಂದರೆ ಇಲ್ಲ ಎಂದು ವಿಷಾದದಿಂದಲೇ ಹೇಳಬೇಕಾಗುತ್ತದೆ .ಗಟ್ಟಿ ಅಧ್ಯಯನ ನಡೆಸಿ ಮೇರು ಕೃತಿಗಳನ್ನು ರಚಿಸುವಲ್ಲಿ ಮಹಿಳೆಯರು ಮುಂದಾಗಿಲ್ಲ. ಅದಕ್ಕೆ ಅವರದೇ ಆದ ಇತಿಮಿತಿಗಳ ರಬಹುದು .ಇರಲಿ ಅದು ಬೇರೆಯ ವಿಚಾರ. ಇಂದಿನ ಕಾಲದಲ್ಲಿ ಸ್ತ್ರೀ ಪುರುಷರಿಗೆ ಸಮಾನ ಅವಕಾಶವಿರುವ ಸಂದರ್ಭದಲ್ಲಿ ಸಮಾನತೆಗೆ ಹೊಡೆದಾಡುವ ಬೇಡುವ ಸಂದರ್ಭಗಳಿಲ್ಲ ಆದರೂ ಅಭೀಷ್ಟ ರೀತಿಯಲ್ಲಿ ಮಹಿಳಾ ಸಾಹಿತಿಗಳು ಮುಂದೆ ಬಂದಿಲ್ಲ ಬೇರೆಲ್ಲ ರಂಗದಲ್ಲೂ ಬೆಳವಣಿಗೆ ಹೊಂದಿರುವ ಸ್ತ್ರೀ ತನ್ನ ಅನುಭವ ಸಾರವನ್ನು ಬರವಣಿಗೆಯಲ್ಲಿ ಹಿಡಿದಿಡುವ ಸಮರ್ಥ ಪ್ರಯತ್ನಕ್ಕೆ ಮುಂದಾಗುತ್ತಿಲ್ಲ ಅಲ್ಲೊಂದು ಇಲ್ಲೊಂದು ಸುಧಾ ಮೂರ್ತಿ ಅವರಂತಹ ಉದಾಹರಣೆ ಹೊರತುಪಡಿಸಿ. ಒಟ್ಟಿನಲ್ಲಿ ಹೇಳಬೇಕೆಂದರೆ ಮಹಿಳಾ ಸಾಹಿತ್ಯ ಪ್ರಗತಿಯತ್ತ ಸಾಗುತ್ತಿದ್ದರೂ ಸಂಖ್ಯಾತ್ಮಕವಾಗಿ ವೃದ್ಧಿ ಹೊಂದಿದ್ದರೂ ಗುಣಾತ್ಮಕ ಹಾಗೂ ವಿಶೇಷ ಹರಿವುಗಳ ಅಭಿವ್ಯಕ್ತಿಗಳ ಬಗ್ಗೆ ಗಮನ ಹರಿಸಬೇಕಿದೆ .ಭಿಡೆ ಬಿಟ್ಟು ಬರೆಯುವ ಮನೋಭಾವ ಹೆಚ್ಚಿಸಿಕೊಳ್ಳಬೇಕಾಗಿದೆ. ಸಾಮಾಜಿಕವಾಗಿ ಹೊಂದಿದಂತಹ ಸಮಾನತೆ ಗೆಲುವು ಅವಕಾಶಗಳನ್ನು ಸಾಹಿತ್ಯಿಕವಾಗಿಯೂ ಪ್ರಾತಿನಿಧಿ ಸಬೇಕಾಗಿದೆ. ಕನ್ನಡಕ್ಕೆ ಬಂದ ಎಂಟೂ ಜ್ಞಾನಪೀಠ ಪ್ರಶಸ್ತಿಗಳೂ ಮಹನೀಯರಿಗೇ. ಮುಂದಾದರೂ ಕನ್ನಡ ಮಹಿಳಾ ಸಾಹಿತಿಗಳಿಗೆ ಜ್ಞಾನಪೀಠ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಎಲ್ಲಾ ಬರಲಿ ಎಂದು ಆಶಿಸೋಣ ಅಲ್ಲವೇ ? *******

ಮಹಿಳಾದಿನದ ವಿಶೇಷ Read Post »

ಇತರೆ

ಮಹಿಳಾದಿನದ ವಿಶೇಷ

ವ್ಯಾಖ್ಯಾನ ಬೇಕೇ? ಪದ್ಮಜಾ ಜೋಯಿಸ್ ಯತ್ರ ನಾರ್ಯಾಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಹೆಣ್ಣಿಗೊಂದು ವ್ಯಾಖ್ಯಾನ ಬೇಕಾಗಿಲ್ಲ, ಹೆಣ್ಣೆಂದರೆ ಹೆಣ್ಣಷ್ಟೇ.. ಕೋಪ, ಅಸೂಯೆ, ಜಗಳ ಎಲ್ಲದರ ಹಿಂದೆಯೂ ಆಕೆಗಿರುವುದು ತನ್ನವರಿಗಾಗಿ ತಾನೆರೆವ ಮತ್ತು ತನಗಾಗಿ ತಾನು ಬಯಸುವ ನೈಜ ಪ್ರೀತಿ ಅಷ್ಟೇ… ಹೆಣ್ಣಾಗಿ ಹುಟ್ಟಿದ್ದೇ ನಮ್ಮ ಹಿರಿಮೆ ಇದೇ ನಮ್ಮ ಹೆಮ್ಮೆ… ವಿಶ್ವ ಮಹಿಳಾ ದಿನಾಚರಣೆಯ ಶುಭಕಾಮನೆಗಳು.. ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನ .. ಒಂದಿಷ್ಟು ಅಂತರಂಗದ ಆತ್ಮಾವಲೋಕನ… ಇನ್ನೊಬ್ಬರನ್ನು ಮುಕ್ತರಾಗಿಸಲು ಹಂಬಲಿಸುವ ನಾವೆಷ್ಟು ಮುಕ್ತರು ??? ಹೆಜ್ಜೆಜ್ಜೆಗೂ ಇದಿರಾಗುವ ಹಿತಶತೃಗಳು .. ಪ್ರತಿಷ್ಠೆಗಾಗಿ ಹೆಂಗಸರ ಸ್ವಂತಿಕೆ, ನೈತಿಕ ಸ್ಥೈರ್ಯ, ಆತ್ಮಾಭಿಮಾನ , ಪುಡಿರೌಡಿಗಳಿಗೆ ಬಲಿಯಿಟ್ಟು ದರ್ಪ ದೌರ್ಜನ್ಯ ಮೆರೆಯುವವರ ನಡುವಲ್ಲಿ ಈ ವ್ಯವಸ್ಥೆಯ ಚೌಕಟ್ಟಿನಲ್ಲಿ ಬದುಕುವ ನಾವೆಷ್ಟು ಸ್ವತಂತ್ರರು ??? ಹೆಣ್ಣಿಗೆ ಹೆಣ್ಣೇ ಶತೃ ಇದೂ ಬಹುಭಾಗ ಯಾಕೆ ನಿಜವಾಗತ್ತೆ… ಇವರುಗಳಿಗಿಂತ ಪ್ರಾಣಿಗಳು ಮೇಲಲ್ಲವೇ ?? “ಶ್ರೀಲಕ್ಷ್ಮೀ ಅವತಾರ ಎಂದೇ ಕರೆಸಿಕೊಳ್ಳುವ ತನ್ನ ಜನ್ಮ ರಹಸ್ಯವೇ ಯಾರರರಿವಿಗೂ ಬಾರದ಼ಂತೆ ಕಾಪಿಟ್ಟುಕೊಂಡು ಬೆಳೆದ ಮನೆಯಲ್ಲೂ ಪರಕೀಯಳಾಗಿ ಕಟ್ಟಿಕೊಂಡವನಿಂದ ಸದಾ ಒಂದಲ್ಲೊಂದು ಕಾರಣಕ್ಕೆ ದೂರವಾಗಿಯೇ ಕಾಲ ಹಾಕುವ ಸೀತಾಮಾತೆ , ಬೀದಿ ಬಸವನೊಬ್ಬನ ಅಯೋಗ್ಯ ಮಾತುಗಳಿಗೆ ಬಲಿಯಾಗಿ ಸ್ವಪ್ರತಿಷ್ಠೆಗಾಗಿ ವ಼ಂಶದ ಕುಡಿ ಹೊತ್ತ ತುಂಬು ಗರ್ಭಿಣಿ ಧರ್ಮಪತ್ನಿಯ ಹೇಳದೇ ಕೇಳದೇ ಗಡಿಪಾರು ಮಾಡಿ ಕಾಡುಪಾಲು ಮಾಡುವ ರಾಮಚಂದ್ರನ ಆದರ್ಶವಾಗಿ ಮಾಡುವ ಈ ಸಮಾಜ ಈ ಸಂಬಂಧಗಳಿಂದ ಏನನ್ನ ತಾನೆ ನಿರೀಕ್ಷಿಸಬಹುದು ??? ಬೇಲಿಯೇ ಎದ್ದು ಹೊಲ ಮೇಯ್ದಂತಲ್ಲವಾ ?? ಇಂದಿಗೂ ಈ ಪರಿಪಾಠ ಬದಲಾಗೋಲ್ಲ ಎಲ್ಲ ಸಂಬಂಧಗಳಲ್ಲೂ.. ಹಚ್ಚಿಹಾಕೋ ಮನೆಹಾಳರಿದ್ದಷ್ಟು ಕಾಲ ಹೊರಹಾಕೋ ಮನೆಮ಼಼ಂದಿಯಿರ್ತಾರೆ, “ಪದೇ ಪದೇ ಅವಮಾನಿಸಿ ಹೊರಹಾಕುವ ಮತ್ತೆ ಕರೆಯುವ ಶ್ರೀರಾಮನ ನಡೆಯಿಂದ ಬೇಸತ್ತು ತಾಯ ಒಡಲಿಗೆ ಮರಳುವ ಸೀತೆಯೇ ನಮಗೆ ಆದರ್ಶವಾದರೇ…. ಮೊನ್ನೆ ಯಾರೋ ಕೇಳಿದ್ರು ಅದೇನು ಆಶ್ರಮ ?? ಅಬಲಾಶ್ರಮ ಮಾಡ್ತೀರಾ ?? ಯಾವುದೋ ಕಾಲದಲ್ಲಿ ಇದ್ದಿರಬಹುದು ಅಬಲೆ ಎಂಬ ಅನ್ವರ್ಥನಾಮದ ಹೆಣ್ಣು.. ಕಾಲಮಾನಕ್ಕೆ ತಕ್ಕಂತೆ ಪರಿಸ್ಥಿತಿಗನುಗುಣವಾಗಿ ಇಂದು ಹೆಣ್ಣು ತನ್ನ ದುಡಿಮೆ ತನ್ನ ಬದುಕು ತಾನೇ ನೋಡ್ಕೊಂಡು. ಬೇರೊಬ್ಬರ ಬದುಕಿಗೂ ಊರುಗೋಲಾಗಿದ್ದಾಳೆ.. ತಾನೂ ದುಡಿದು ನಾಲ್ವರ ದುಡಿಮೆಗೆ ದಾರಿಯಾಗೋ ಲಕ್ಷಾಂತರ ಮ಼ಂದಿ ಹೆಣ್ಮಕ್ಕಳು ನಮ್ಮ ನಡುವಿದ್ದಾರೆ… ಇಂಥವರು ಕಟ್ಟುವ ಸಂಸ್ಥೆಯಾಗಲೀ ಅದು ನೀಡುವ ನೆಲೆಯಾಗಲೀ ಅಬಲಾಶ್ರಮವಲ್ಲ ಸಬಲಾಶ್ರಮ ಅಲ್ಲವೆ ?? ನಂಗೆ ಕೆಲವರು ಯಾವಾಗಲೂ ಹೇಳ್ತಿದ್ರು ನೀನು ಧಿಕ್ಕರಿಸಿ ನಿಂತಂದು ನಿನ್ನ ಬದುಕು ನಿನ್ನದು… ಹೌದು ಬದುಕಿನಲ್ಲಿ ಇದುವರೆಗೂ ಮಾಡಬಾರದೆಂದುಕೊಂಡ ಒ಼ಂದು ಕೆಲಸ .. ಅದೇ ಕಾರಣಕ್ಕೆ ಪದೇ ಪದೇ ಶೋಷಣೆ ಅವಮಾನಕ್ಕೊಳಗಾಗುವ ಹಿಂಸೆ …. ನೋವು ನುಂಗಿ ನಗುವ ಯತ್ನ …. ಇಂದು ಮಗ ಹದಿನೆಂಟರ ಹೊಸ್ತಿಲಲ್ಲಿ ನಿಂತಿದ್ದಾನೆ.. ಬದುಕಿನುದ್ದಕ್ಕೂ ಉರಿದ ಹೆತ್ತ ತಾಯಿಯ ನೋವಿಗೆ ಅವಮಾನಕ್ಕೆ ಪ್ರತಿರೋಧಿಸುವ ಹಂತ ತಲುಪಿದ್ದಾನೆ… ಇದನ್ನು ಸರಿಯೆನ್ನಲಾ ತಪ್ಪೆನ್ನಲಾ ?? ಒಂದು ವೇಳೆ ಅಲ್ಲಗೆಳೆದರೇ ಶೋಷಣೆಯ ಒಪ್ಪಿಕೊಂಡಂತಾಗುವುದಿಲ್ಲವೆ ?? ಸ್ವಾವಲಂಬನೆಯ ಸ್ವಂತಿಕೆಯ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲೆತ್ನಿಸುವ ಸಾವಿರಾರು ತಾಯಂದಿರಿಗೆ ಇದು ಅವಮಾನವಲ್ಲವೆ ?? ಈ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಈ ಮಾನಸಿಕ ನೋವಿನಿಂದ ಮುಕ್ತಳಾಗಲು ಏಕಾಂತದ ಬದುಕನ್ನಾಯ್ದುಕೊಂಡು ನಂಗೂ ತನ್ನ ನಡವಳಿಕೆಯಿಂದ ನಿನ್ನ ಪಾಡಿಗೆ ನೀ ಬದುಕು ಎಂದು ತೋರಿಸಿದ , ತನ್ನ ಗಂಡನ ಆಸ್ತಿಯಲ್ಲಿ ತನಗೆ ಬಂದದ್ದರಲ್ಲಿ ನನಗೂ ಹಂಚಿ ನನ್ನ ಸ್ವಂತಿಕೆ ಸ್ವಾಭಿಮಾನದ ಬದುಕಿಗೆ ಊರುಗೋಲಾದ ನನ್ನ ಹೆತ್ತಮ್ಮ ಸ್ವರ್ಣರಿಗೆ ಮೊತ್ತ ಮೊದಲ ಮಹಿಳಾ ದಿನಾಚರಣೆಯ ಹಾರ್ಧಿಕ ಶುಭಾಶಯಗಳು… ಇಂದಿಗೆ ಈ ಹಿತಶತೃವಿನಂಥ ಸಾಮಾಜಿಕ ವ್ಯವಸ್ಥೆಯಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ನನ್ನಮ್ಮನ ಭಿಕ್ಷೆ.. ಅಲ್ಲದೇ ಬೇರೇನೂ ಅಲ್ಲ… ಪ್ರತೀ ಹಂತದಲ್ಲೂ ನನ್ನನ್ನು ಇದರಿಂದ ವಿಮುಖಳಾಗಿಸುವ ಸಂಚು ನಡೀತಾನೇ ಇದೆ.. ಸಾಮಾಜಿಕವಾಗಿ ಅವಮಾನಿಸುವ ಕಂಗೆಡಿಸುವ ತುಳಿಯುವ ಕಾರಣಗಳಿಗಾಗಿ ಕಾದಿರುವ ಕೆಲವರು ಹೋದಲ್ಲಿ ಬಂದಲ್ಲಿ ನಿರಂತರ ಕಿರುಕುಳ ನೀಡುತ್ತಿದ್ದಾರೆ… ನಾನು ಬೇಸತ್ತು ಬೆನ್ನು ಹಾಕಲೀ ಎಂಬುದೇ ಅವರ ಉದ್ದೇಶ , ಇದು ತಾವೇನನ್ನೂ ಮಾಡಲು ಯೋಗ್ಯತೆಯಿಲ್ಲದ ಹೆಂಗಸರ ಜಾತಿಗೆ ಅಪವಾದವಾದವರು ಇಂಥವರನ್ನು ಚಮಚಾಗಳಾಗಿಸಿಕೊಂಡು ವ್ಯವಸ್ಥಿತ ಬಲೆ ಹಣೆಯಲು ಪ್ರೇರೇಪಿಸುತ್ತಿದ್ದಾರೆ.. ರೋಸಿ ದೂರ ಹೋಗುತ್ತೇನೋ ಧಿಕ್ಕರಿಸಿ ಬದುಕುತ್ತೇನೋ ಭಗವಂತನಿಗೇ ಗೊತ್ತು.. ಆದರೇ ., ಇದು ಅಂತ್ಯವಲ್ಲ ಆರಂಭ ನಾನಲ್ಲದಿದ್ದರೂ ಇನ್ನೊಬ್ಬ ಮಹಿಳೆ ತಲೆ ಎತ್ತುತ್ತಾಳೆ .. ಸಾವಿರಾರು ಹೆಂಗಸರು ಜೊತೆಯಾಗುತ್ತಾರೆ ಪ್ರಬಲ ರಾಜಕಾರಣದ ಬೆಂಬಲದ ತಗೊಂಡು ಮೆರೆಯುವವರನ್ನೂ ಮಣ್ಣುಮುಕ್ಕಿಸುತ್ತಾರೆ… ಅಪ್ಪನನ್ನ ಕಳಕೊಂಡಾಗಲೇ ಅನಾಥತೆಯ ತೀವ್ರ ಅನುಭವ ಕಂಡುಂಡ ಜೀವಕ್ಕೀಗ ಬೀದಿಗೆ ಬೀಳುವ ತಿರುಪೆ ಎತ್ತುವ ಭಯವಿಲ್ಲ , ಯಾಕಂದರೇ ದುಡ್ಡಿಲ್ಲದೇ ಯಾರದೇ ಕೃಪಾಶ್ರಯವಿಲ್ಲದೇ ಸ್ವಂತ ಶ್ರಮದಿಂದ ಬದುಕುವ ಕಲೆ ಕರಗತವಾಗಿದೆ.. ಹೆತ್ತಮ್ಮನ ಕೃಪಾಶೀರ್ವಾದವಿದೆ…. ದಣಿವಾದರೇ ಒರಗಲು ಹೆತ್ತ ಮಗನ ಹೆಗಲಿದೆ… ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ ಎಂದು ಹೇಳುವ ಎಡೆಯಲ್ಲಿಯೇ ನಿರ಼ಂತರ ಕಣ್ಣೀರಿಟ್ಟ ಕಂಗಳೀಗ ಕಂಬನಿಯಿಲ್ಲದೇ ಬರಡಾಗಿದೆ… ಸಂಸ್ಕಾರದ ಹೆಸರಲ್ಲಿ ಸದಾ ಅವಮಾನ ಶೋಷಣೆಯ ದಬ್ಬಾಳಿಕೆಗೊಳಗಾದ ಮನವೀಗ ಹೊಸ ಹಾದಿಯತ್ತ ಹೆಜ್ಜೆಯೆತ್ತಿದೆ , ಸಹಿಸಿದಷ್ಟೂ ತುಳಿಯುವ… ಸುಮ್ಮನಿದ್ದಷ್ಟೂ ಶೋಷಿಸುವ ಪರಿಧಿಯಾಚೆಗೆ ಬದುಕಿದೆ… ಇದು ಬಹುಶಃ ಸಾವಿರಾರು ಮಹಿಳೆಯರ ಮಾತಾಗಲಾರದ ಧ್ವನಿ ಇರಬಹುದು…. ಬನ್ನಿ ನಮ್ಮ ಬದುಕ ಸ್ವಾಭಿಮಾನದಿಂದ ಬದುಕೋಣ ಸ್ವಾವಲಂಬಿಯಾಗೋಣ… ಕೊಲ್ಲುವವನೊಬ್ಬನಿದ್ದರೇ ಕಾಯೋನೊಬ್ಬನಿರುತ್ತಾನೆ.. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಾರ್ಧಿಕ ಶುಭಾಶಯಗಳು.ನಿಷ್ಕಲ್ಮಷತೆಯಿಂದ ಏನನ್ನಾದರೂ ಒಳ್ಳೇದ ಬಯಸೋ ಹೆಣ್ಮನಗಳಿಗೆ ವರ್ಷಪೂರ್ತಿ ಮಹಿಳಾ ದಿನಾಚರಣೆ.. ನನ್ನಬದುಕು #ನನ್ನಆದರ್ಶ #ನನ್ನಅಮ್ಮ ಅಂತರ ರಾಷ್ಟೀಯ ಮಹಿಳಾ ದಿನಾಚರಣೆಯ ಹಾರ್ಧಿಕ ಶುಭಾಶಯಗಳು, ******************************

ಮಹಿಳಾದಿನದ ವಿಶೇಷ Read Post »

ಇತರೆ

ಮಹಿಳಾದಿನದ ವಿಶೇಷ

ಮಹಿಳಾ ದಿನಾಚರಣೆ ಕೆ.ಶಿವುಲಕ್ಕಣ್ಣವರ ಅಂತರಾಷ್ಟ್ರೀಯ ಮಹಿಳೆಯರ ದಿನಾಚರಣೆ– ಪ್ರತಿ ವರ್ಷ ಮಾರ್ಚ್ ೮ ರಂದು ವಿಶ್ವದೆಲ್ಲೆಡೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ… ಈ ಮಹಿಳಾ ದಿನಾಚರಣೆಯ ಇತಿಹಾಸ ಮತ್ತು ಮಹತ್ವ– ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ “ಅಂತರಾಷ್ಟ್ರೀಯ ಮಹಿಳೆಯರ ದಿನ”ವನ್ನು ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ , ಅದು ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲು ತಮ್ಮದೆ ಆದ ಛಾಪನ್ನು ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನು ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. ೧೯೭೫ರ “ಅಂತರಾಷ್ಟ್ರೀಯ ಮಹಿಳೆಯರ ದಿನ”ದ ಸಮಯದಲ್ಲಿ, ಮಾರ್ಚ್ ೮ ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನು ಆಚರಿಸಲು ಆರಂಭಿಸಿದವು… ಎರಡು ವರ್ಷದ ನಂತರ,೧೯೭೭ರಲ್ಲಿ, “ದಿ ಜನರಲ್ ಅಸ್ಸೆಂಬ್ಲಿ” ಮಹಿಳೆಯರ ಹಕ್ಕು ಮತ್ತು ಶಾಂತಿ ಸ್ಥಾಪನೆಯನ್ನು ಆಯಾ ದೇಶದ ಸದಸ್ಯರು ಗಮನಿಸಿ ತಮ್ಮ ದೇಶದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವಂತೆ ಕರೆ ನೀಡಿತು. ಹೀಗೆ ಕರೆನೀಡುವಾಗ ಮಹಿಳೆಯ ಪಾತ್ರ ಹಾಗೂ ಅವರ ಮೇಲೆ ನಡೆಯುತ್ತಿರುವ ಪಕ್ಷಪಾತವನ್ನು ಗಮನಿಸಿ ಅವರಿಗೆ ಸ್ಪರ್ಧಿಸುವ ಪೂರ್ತಿ ಅವಕಾಶವನ್ನು ನೀಡುವಂತೆ ಘೋಷಿಸಿತು… “ಅಂತರಾಷ್ಟ್ರೀಯ ಮಹಿಳೆಯರ ದಿನ” ಮೊದಲ ಬಾರಿಗೆ ಹೊರಹೊಮ್ಮಿದ್ದು ಕೂಲಿ ಚಳುವಳಿ(ಲೇಬರ್ ಮೊವ್ಮೆಂಟ್ಸ್) ಚಟುವಟಿಕೆ ಉತ್ತರ ಅಮೆರಿಕ ಮತ್ತು ಯೂರೋಪ್ ಪ್ರದೇಶಗಳಲ್ಲಿ ನಡೆದಾಗ. ೧೯೦೯ರಲ್ಲಿ ಸಂಯುಕ್ತ ಸಂಸ್ಥಾನಗಳಲ್ಲಿ ಮೊದಲ “ಅಂತ ರಾಷ್ಟ್ರೀಯ ಮಹಿಳೆಯರ ದಿನ”ಫೆಬ್ರವರಿ ೨೮ ರಂದು ಕಂಡು ಬಂತು… ಅಮೇರಿಕಾದ ಸಮಾಜವಾದಿ ಪಕ್ಷ ಈ ದಿನವನ್ನು ಕೆಲಸದ ಪರಿಸ್ಥಿತಿಯನ್ನು ವಿರೋಧಿಸಿ ನ್ಯುಯಾರ್ಕ್ ನಗರದಲ್ಲಿ ನಡೆದ “ಸರ್ಕಾರಿ ಕಾರ್ಮಿಕರ ಚಳುವಳಿ”ಯಲ್ಲಿ ಪ್ರತಿಭಟಿಸಿದ ಮಹಿಳೆಯರಿಗೆ ಅರ್ಪಿಸಲಾರಿತು. ೧೯೧೦ರಲ್ಲಿ ಅಂತರಾಷ್ಟ್ರೀಯ ಸಮಾಜವಾದಿ ಕೊಪೆಂಹಗೆನ್ ನಲ್ಲಿ ನಡೆದ ಚರ್ಚೆಯಲ್ಲಿ ಅದಿಷ್ಟಿತಗೊಳಿಸಲಾಯಿತು. ಈ ಪ್ರಸ್ಥಾಪವನ್ನು ಅವಿರೋಧವಾಗಿ ೧೦೦ ಮಹಿಳೆಯರು ೧೭ ದೇಶಗಳಿಂದ ಸಹಕರಿಸಿದರು, ಇದು ಫಿನ್ನಿಷ್ ಪಾರ್ಲಿಮೆಂಟ್ ಗೆ ಆಯ್ಕೆಯಾದ ಮೊದಲ ಮೂವರು ಮಹಿಳೆಯರನ್ನೂ ಸಹ ಒಳಗೊಂಡಿತ್ತು… ೧೯೧೧ರಲ್ಲಿ ಕೊಪೆಂಹಗೆನ್ ನ ಮೊದಲ ಹೆಜ್ಜೆಯ ಫಲಿತಾಂಶವಾಗಿ, ಅಂತರಾಷ್ಟ್ರೀಯ ಮಹಿಳೆಯರ ದಿನವನ್ನ ಮೊದಲ ಬಾರಿಗೆ ಮಾರ್ಚ್ ೧೯ ರಂದು ಆಸ್ಟ್ರೇಲಿಯ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಡ್ಜರ್ಲ್ಯಾಂಡ್ ದೇಶಗಳು ಗುರುತಿಸಿದವು… ಅಂದು ಒಂದು ಮಿಲಿಯನ್ ಗಿಂತಲೂ ಹೆಚ್ಹು ಮಹಿಳೆಯರು ಹಾಗೂ ಪುರುಷರು ಈ ಚಳುವಳಿಯಲ್ಲಿ ಭಾಗವಹಿಸಿದರು… ಇದಲ್ಲದೇ ಮತಚಲಾಯಿಸುವ ಹಕ್ಕು, ಸಾರ್ವಜನಿಕ ಕಛೇರಿ, ಮಹಿಳೆಯರಿಗೆ ಕೆಲಸ ಮಾಡುವ ಹಕ್ಕು ಹಾಗೂ ಉದ್ಯೋಗ ತರಬೇತಿಯನ್ನು ಜಾರಿಗೆ ತರಲು ಬೇಡಿಕೆಯಿಟ್ಟಿದ್ದಲ್ಲದೇ ಕೆಲಸದಲ್ಲಿನ ತಾರತಮ್ಯವನ್ನು ವಿರೋಧಿಸಿ ಪ್ರತಿಭಟಿಸಿದರು… ೧೯೧೩-೧೯೧೪ರಲ್ಲಿ ಅಂತರಾಷ್ಟ್ರೀಯ ಮಹಿಳೆಯರ ದಿನದ ಆಚರಣೆ “೧ನೇ ವಿಶ್ವ ಯುದ್ಧ”ವನ್ನು ತಡೆಗಟ್ಟುವ ಯಾಂತ್ರಿಕ ಕೌಶಲ್ಯವಾಗಿ ಮಾರ್ಪಟ್ಟಿತು… ಇದೇ ವೇಳೆಯಲ್ಲಿ ಶಾಂತಿ ಚಳುವಳಿಯ ಅಂಗವಾಗಿ ರಷ್ಯಾದ ಮಹಿಳೆಯರು ಫೆಬ್ರವರಿಯ ಕೊನೆಯವಾರದಲ್ಲಿ ವಿಶ್ವ ಮಹಿಳಾ ದಿನವನ್ನು ಆಚರಿಸಿ ಗಮನಸೆಳೆದರು. ಅತ್ತ ಯುರೋಪಿನಲ್ಲಿ ಅದೇ ಸಾಲಿನ ಮಾರ್ಚಿ ೮ ರಂದು ಮಹಿಳೆಯರು ಯುದ್ಧನೀತಿಯನ್ನು ವಿರೋಧಿಸಿ, ಐಕ್ಯಮತವನ್ನು ಸಹಕರಿಸಿ ಬೃಹತ್ ಚಳುವಳಿ ನಡೆಸಿದರು… ೧೯೧೭ರಲ್ಲಿ ಮತ್ತೆ ಯುದ್ಧ ನೀತಿಯನ್ನು ವಿರೋಧಿಸಿ ರಷ್ಯಾದ ಮಹಿಳೆಯರು ಊಟ ಮತ್ತು ಶಾಂತಿ ಚಳುವಳಿಯನ್ನು ಫೆಬ್ರವರಿ ತಿಂಗಳ ಕೊನೆಯ ಭಾನುವಾರದಲ್ಲಿ. ಇದು ಗ್ರೆಗೊರಿಯನ್ ಕ್ಯಾಲೆಂಡರಿನ ಪ್ರಕಾರ ಮಾರ್ಚಿ ೮) ನಡೆಸಿದರು… ನಾಲ್ಕು ವಾರಗಳ ನಂತರ ರಾಜ ಮನೆತನದ ಆಳ್ವಿಕೆಯನ್ನು ನಿಲ್ಲಿಸಿ ಮತಚಲಾಯಿಸುವ ಅಧಿಕಾರವನ್ನು ಸರ್ಕಾರ ನೀಡಿತು. ಅಂದಿನ ದಿನಗಳಲ್ಲಿ ಮಹಿಳಾ ದಿನಾಚರಣೆ ಮುಂದುವರೆದ ಮತ್ತು ಮುಂದುವರೆಯುತ್ತಿರುವ ದೇಶಗಳಲ್ಲಿ ಹೊಸ ಆಯಾಮವನ್ನು ಪಡೆಯಿತು… ಬೆಳೆಯುತ್ತಿದ್ದ ಅಂತರಾಷ್ಟ್ರೀಯ ಮಹಿಳಾ ಚಳುವಳಿ, ಅವುಗಳ ಸಾಮರ್ಥ್ಯವನ್ನು ಹೆಚ್ಹಿಸಿದ ನಾಲ್ಕು “ಜಾಗತಿಕ ಸಂಯುಕ್ತ ರಾಷ್ಟ್ರೀಯ ಮಹಿಳಾ ಸಮಾಲೋಚನೆ”, ಮಹಿಳಾ ಹಕ್ಕು, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಭಾಗವಹಿಸುವ ಹಕ್ಕನ್ನು ಪಡೆಯಲು ಪೋಷಿಸಿದವು. ದಿನಕಳೆದಂತೆ ಅಂತರಾಷ್ಟ್ರೀಯ ಮಹಿಳೆಯರ ದಿನ ಬೆಳವಣಿಗೆಯ ಪ್ರತಿಬಿಂಬದ ಜೊತೆಗೆ ಸಾಧರಣ ಮಹಿಳೆಯ ಧೀರತನ ಮತ್ತು ಧೃಡತೆ, ದೇಶ ಹಾಗೂ ಸಮುದಾಯದ ಇತಿಹಾಸದಲ್ಲಿ ವಹಿಸಿದ ಅಸಾಧಾರಣ ಪಾತ್ರವನ್ನು ಬಿಂಬಿಸುತ್ತಾ ಬದಲಾವಣೆಯ ಕರೆಯನ್ನು ನೀಡುತ್ತದೆ… ಸಂಯುಕ್ತ ರಾಷ್ರಗಳು ಮತ್ತು ಲಿಂಗ ಸಮಾನತೆಗಾಗಿ– ೧೯೪೫ ರಲ್ಲಿ ಸಹಿ ಮಾಡಿದ ಸಂಯುಕ್ತ ರಾಷ್ಟ್ರಗಳ ಅಂತರಾಷ್ಟ್ರೀಯ “ಲಿಂಗ ಸಮಾನತಾ ತತ್ವ” ಅಂಗೀಕಾರಕ್ಕೆ ಬಂತು. ಅಲ್ಲಿಯ ನಂತರ ವಿಶ್ವವ್ಯಾಪ್ಯ ಒಪ್ಪಂದ ನೀತಿ, ನಿರ್ದಿಷ್ಟಮಾನ, ಮಹಿಳಾಭಿವ್ರುದ್ದಿ ಕಾರ್ಯಕ್ರಮ ಹಾಗೂ ಯೋಜನೆಗಳು ಕಾರ್ಯರೂಪಕ್ಕೆ ಬಂದವು. ಕೆಲವರ್ಷಗಳ ನಂತರ ಸಂಯುಕ್ತ ರಾಷ್ರಗಳು ಮತ್ತು ಅದರ ತಾಂತ್ರಿಕ ಏಜೆನ್ಸ್ಸಿಗಳು ಮಾನವ ಹಕ್ಕುಗಳನ್ನು ಅಭಿನಂದಿಸಿ ಮಹಿಳೆಯರು ಭಾಗವಹಿಸುವುದನ್ನು ಪ್ರೋತ್ಸಾಹಿಸಿದವು. ಮಹಿಳೆಯರನ್ನು ಪ್ರಭಲಗೊಳಿಸುವ ಸಂಯುಕ್ತ ರಾಷ್ರಗಳ ಕಾರ್ಯ ವಿಶ್ವದಾದ್ಯಂತ ಇಂದು ಮುಂದುವರೆಯುತ್ತದೆ..! ಇದಿಷ್ಟು ಮಹಿಳಾ ದಿನದ ಇತಿಹಾಸ ಮತ್ತು ಮಹತ್ವ… ‌‌ ***************************

ಮಹಿಳಾದಿನದ ವಿಶೇಷ Read Post »

ಇತರೆ

ಪರಿಚಯ

ಕೇಶವರೆಡ್ಡಿ ಹಂದ್ರಾಳ ಕೆ.ಶಿವು ಲಕ್ಕಣ್ಣವರ ಕೇಶವರೆಡ್ಡಿ ಹಂದ್ರಾಳರವರು ಅಗ್ನಿ ಶ್ರೀಧರರ ವಾರಪತ್ರಿಕೆಯಾದ ‘ಅಗ್ನಿ’ಯಲ್ಲಿ ‘ಒಕ್ಕಲ ಒನಪು’ ಅಂಕಣ ಬರೆಯುತ್ತಿದ್ದರು. ಇವರು ‘ಅಗ್ನಿ’ಗೆ ಬರೆಯಲು ಪ್ರಾರಂಭಿಸಿದ್ದು ‘ಅಗ್ನಿ’ಯ ಎರಡನೇ ಕಚೇರಿ ಶುರುವಾದ ಮೇಲೆ. ಒಟ್ಟಾರೆ ಆಗಿ ‘ಅಗ್ನಿ’ಯಲ್ಲಿಯ ಇವರ ಅಂಕಣವಾದ ‘ಒಕ್ಕಲ-ಒನಪು’ ಆ ಹೊತ್ತಿಗೆ ಭಾರಿ ಪ್ರಚಾರ ಪಡೆದುಕೊಂಡಿತ್ತು. ಅಂದರೆ ಅಷ್ಟು ಸೊಗಸಾಗಿ ‘ಮಣ್ಣಿನ ಗುಣ’ ಪಡೆದುಕೊಂಡಿತ್ತು. ಇವರೊಂದಿಗಿದ್ದ ಅನೇಕರ ಅಂಕಣಗಳೂ ಸೊಗಸಾಗಿದ್ದವು. ಅವರ ಬಗೆಗೆ ನಂತರ ಬರೆಯುತ್ತೇನೆ. ಈಗ ಕೇಶವರೆಡ್ಡಿ‌ ಹಂದ್ರಾಳರ ಬಗೆಗೆ ಚಿಕ್ಕ ಲೇಖನದ ಮೂಲಕ ನೋಡೋಣ… ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾದ ಕೇಶವರೆಡ್ಡಿ ಹಂದ್ರಾಳ ಅವರು 22-07-1957 ರಲ್ಲಿ ಮಧುಗಿರಿ ತಾಲೂಕಿನ ಹಂದ್ರಾಳದಲ್ಲಿ ಜನಿಸಿದವರು… ಹಂದ್ರಾಳದಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು 7ನೇ ತರಗತಿಯಲ್ಲಿ ರ್ಯಾಂಕ್ ಪಡೆದವರು. ನಂತರ ಬೆಂಗಳೂರಿನ ಚಿಕ್ಕಪೇಟೆಯಲ್ಲಿದ್ದ ಭಾರತೀಯ ವಿದ್ಯಾಶಾಲೆಗೆ ಸೇರಿದರು… ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ ಅವರ ಪರಿಚಯವಾಗಿ, ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಮುಂದೆ ಆನಂದರಾವ್ ಸರ್ಕಲ್‍ನಲ್ಲಿದ್ದ ಎಸ್.ಜೆ.ಆರ್.ಸಿ.ಯಲ್ಲಿ ಪಿ.ಯು.ಸಿ.ಗೆ ಸೇರಿಕೊಂಡರು… ಆ ಸಮಯದಲ್ಲಿ ಜೆ.ಪಿ. ಚಳವಳಿಯಲ್ಲಿ ಭಾಗವಹಿಸಿದರು. ದಲಿತ, ರೈತ ಚಳವಳಿ ಹಾಗೂ ಗೋಕಾಕ್ ಚಳವಳಿಯಲ್ಲೂ ಭಾಗವಹಿಸಿದರು… 1981ರಲ್ಲಿ ಪ್ರಥಮ ದರ್ಜೆಯಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪಾಸಾದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಅವರು ಆರು ವರ್ಷಗಳ ಕಾಲ ಉಪನ್ಯಾಸಕ ವೃತ್ತಿಯಲ್ಲಿದ್ದರು. ಆನಂತರ 1987ರಲ್ಲಿ ಕೆ.ಎ.ಎಸ್. ಪಾಸು ಮಾಡುವ ಮೂಲಕ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಹಾಗೂ ಉಪ ಆಯುಕ್ತರಾಗಿ ಕೆಲಸ ಮಾಡಿದರು… ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕೇಶವರೆಡ್ಡಿ ಹಂದ್ರಾಳರವರ ಪ್ರಕಟಿತ ಕೃತಿಗಳೆಂದರೆ– ಹಂದ್ರಾಳ, ಅಂತಃಪುರ, ಬರದ ನಾಡಿನಲ್ಲಿ ಬೆಳದಿಂದಳು, ಜಡೆಗೆ ಗುಲ್ ಮೊಹರ್ ಕೈಗಳು, ಒಂದು ಹಿಡಿ ಮಣ್ಣು, ಬಾರಕ್ಕ ಬೆಳದಿಂಗಳೆ. ಈ ಕ್ಷಣದ ಬುದ್ಧ ಅವರ ಕೆಲವು ಕಥಾ ಸಂಗ್ರಹಗಳು. ಒಕ್ಕಲ ಒನಪು, ಮರೆತ ಭಾರತ- ಪ್ರಬಂಧ ಸಂಕಲನಗಳು, ಸಿನಿಮಾ, ಧಾರಾವಾಹಿಗಳಿಗೆ ಕಥೆ, ಸಂಭಾಷಣೆ ಬರೆದಿದ್ದಾರೆ, ನನ್ನ ಕ್ರಾಂತಿಯ ಹುಡುಗಿ ಅವರ ಕವನ ಸಂಗ್ರಹ… ಕೇಶವರೆಡ್ಡಿ ಹಂದ್ರಾಳರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಹಲವು ಗೌರವ, ಪ್ರಶಸ್ತಿಗಳು ಸಂದಿವೆ. ಅವುಗಳಲ್ಲಿ ಮಾಸ್ತಿ ಕಥಾ ಪುರಸ್ಕಾರ, ಪುಸ್ತಕ ಸೊಗಸು ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ ಲಭಿಸಿವೆ… ಕೇಶವರೆಡ್ಡಿ ಹಂದ್ರಾಳರವರ ಬಗೆಗೆ ಸಂಕ್ಷಿಪ್ತವಾಗಿ ಒಂದಷ್ಟು– ಕೇಶವರೆಡ್ಡಿ ಹಂದ್ರಾಳರವರು ಆರು ವರ್ಷ ಉಪನ್ಯಾಸಕರಾಗಿ ಕೆಲಸ ಮಾಡಿದರು. 1987ರಲ್ಲಿ ಕೆ.ಎ.ಎಸ್. ಪಾಸು ಮಾಢಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಹಾಗೂ ಉಪ ಆಯುಕ್ತರಾಗಿ ಕೆಲಸ ಮಾಡಿದರು… ಕೇಶವರೆಡ್ಡಿಯವರು ಮದ್ದೂರಿನ ಚಂದ್ರಕಲಾ ಅವರನ್ನು ಪ್ರೀತಿಸಿ ಸರಳವಾಗಿ ವಿವಾಹ ಮಾಡಿಕೊಂಡರು. ಅವರಿಗೆ ಕ್ರಾಂತಿ, ಸಿರಿವೆನ್ನೆಲು ಎಂಬ ಇಬ್ಬರು ಮಕ್ಕಳಿದ್ದಾರೆ… ಕೇಶವರೆಡ್ಡಿ ಹಂದ್ರಾಳರವರು ಸುಮಾರು 500 ಕಥೆಗಳನ್ನು ಬರೆದಿದ್ದಾರೆ… ಅವರ ಕವನ ಸಂಕಲನಗಳು ಹೀಗಿದೆ– ನನ್ನ ಕ್ರಾಂತಿಯ ಹುಡುಗಿ… ಪ್ರಬಂಧ ಸಂಕಲನಗಳು ಹೀಗಿವೆ– ಒಕ್ಕಲ ಒನಪು ರಾಜಧಾನಿಯ ರಸ್ತೆಗಳಲ್ಲಿ ಮರೆತ ಭಾರತ ನೆಲದ ಕಣ್ಣು ಅವರು ಪಡೆದ ಪ್ರಶಸ್ತಿಗಳು– ಮಾಸ್ತಿ ಕಥಾ ಪುರಸ್ಕಾರ ಪುಸ್ತಕ ಸೊಗಸು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2005, 2006)..! ಒಟ್ಟಾರೆಯಾಗಿ ಕೇಶವರೆಡ್ಡಿ ಹಂದ್ರಾಳರ ‘ಮಣ್ಣಿನ ಗುಣ’ದ ‘ಒಕ್ಕಲ-ಒನಪು’ ಅಂಕಣ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಅದಕ್ಕೂ ಮಿಗಿಲಾಗಿ ‘ಅಗ್ನಿ’ ಬಳಗದ ಬಲು ಪ್ರೀತಿಯ ಅಂಕಣವಾಗಿತ್ತು ಎಂದು ಹೇಳುತ್ತಾ ಈ ಬರಹ‌ ಮುಗಿಸುತ್ತೇನೆ… **********

ಪರಿಚಯ Read Post »

ಇತರೆ

ಲಲಿತ ಪ್ರಬಂಧ

ನಮ್ಮೂರ ಜಾತ್ರೆಲಿ.. ಜ್ಯೋತಿ ಡಿ.ಬೊಮ್ಮಾ. ನಮ್ಮೂರ ಜಾತ್ರೆಲಿ.. ಬಹಳ ದಿನಗಳಿಂದ ನನ್ನೂರ ಜಾತ್ರೆಗೆ ಬರಲು ಅಪ್ಪ,ಅಮ್ಮ,ಗೆಳೆಯರೆಲ್ಲ ಒತ್ತಾಯಿಸುತ್ತಲೆ ಇದ್ದರು.ಸದಾ ಜನಜಂಗುಳಿಯಿಂದ ದೂರ ಇರಬಯಸುವ ನನಗೆ ಜಾತ್ರೆ ,ಸಮ್ಮೆಳನಗಳು ದಿಗುಲುಹುಟ್ಟಿಸುತ್ತವೆ.ಚಿಕ್ಕಂದಿನ ಜಾತ್ರೆಯ ನೆನಪು ಮುಸುಕಾಗಿತ್ತು.ಮತ್ತೆ ಎಲ್ಲರನ್ನೂ ಭೆಟಿಯಾಗುವ ಸೆಳೆತದಿಂದ ಜಾತ್ರೆಯ ನೆಪದಿಂದ ಊರಿಗೆ ಹೋದೆ.ಊರಿನಲ್ಲಿ ಎಲ್ಲರ ಮನೆಗಳಲ್ಲೂ ಸಂಬಂಧಿಕರು.ದೂರ ದೂರದ ಊರುಗಳಿಂದ ಜಾತ್ರೆಯ ನೆಪದಿಂದ ಬಂದವರು. ಜಾತ್ರೆಯಂತಹ ಊರ ಹಬ್ಬಗಳು ಮತ್ತೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವದರ ಹಿಂದಿನ ಕಾರಣಗಳು ಹುಡುಕಿದರೆ,ಮುಖ್ಯವಾಗಿ , ಪರಸ್ಪರರ ಭೇಟಿ.ಮತ್ತು ಊರಿನಲ್ಲಿನ ಸೌಹಾರ್ದಯುತ ವಾತಾವರಣ ಬಿಂಬಿಸುವದು. ಹೆಜ್ಜೆ ಹೆಜ್ಜೆಗೂ ಕಟೌಟಗಳು.ಸ್ವಾಗತ ಕೋರುವ ನೆಪದಿಂದ ತಮ್ಮ ತಮ್ಮ photo ಗಳನ್ನು ಬೀದಿ ಬೀದಿಗಳಲ್ಲಿ ನಿಲ್ಲಿಸಿ ಹೆಮ್ಮೆ ಪಡುವ ಊರಿನವರು, ರಸ್ತೆಗಳನ್ನು ಅಲಂಕರಿಸಿ ತಳಿರು ತೊರಣ,ಹೂಗಳಿಂದ ಮಾಡಿದ ಸ್ವಾಗತ ಕಮಾನುಗಳು,ಊರವರನ್ನೂ ರಂಜಿಸಲು ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು, ತಹರೆವಾರಿ ಅಂಗಡಿಗಳು,ಬಾಯಲ್ಲಿ ನೀರೂರಿಸುವ ತಿನಿಸಿನ ಬಂಡಿಗಳು, ಮತ್ತು ಎಲ್ಲೆಲ್ಲೂ ಜನ ಜನ ಜನ ಜಾತ್ರೆಯ ಪ್ರಮುಖ ಘಟ್ಟವೆ ರಥೋತ್ಸವ ,ಅದಕ್ಕೂ ಮುನ್ನಾದಿನ ಅಗ್ಗಿ ತುಳಿಯುವದು ಇರುತ್ತದೆ.ಈ ಶಬ್ದದ ಅರ್ಥ ಎನೇನು ಹೊಂದಿಕೆಯಾಗದು.ಅಗ್ನಿಗೆ ಪ್ರದಕ್ಷಿಣೆ ಹಾಕುವದನ್ನೆ ಅಗ್ನಿ ತುಳಿಯುವದು ಎನ್ನ್ನುತ್ತಾರೆ.ಕೆಲವೊಂದು ಕಡೆ ಕೆಂಡದ ಮೇಲೂ ನಡೆಯುತ್ತಾರಂತೆ. ಕಾಡು ಉಳಿಸಿ ಎಂದು ಸಾರುವರೆಲ್ಲರೂ ಕೈಯಲ್ಲಿ ಕಟ್ಟಿಗೆ ತುಂಡುಗಳನ್ನಿಡಿದು ಅಗ್ನಿ ಕುಂಡಕ್ಕೆ ಎಸೆದು ದಿಗಂತಕ್ಕೆ ಮುಖಮಾಡಿ ಉರಿಯುವ ಬೆಂಕಿಗೆ ಪ್ರದಕ್ಷಿಣೆ ಹಾಕುತ್ತ, ತೆಂಗಿನ ಕಾಯಿ ಒಡೆಯುತ್ತ ,ಮನೆಯಿಂದ ತಂದ ನೈವೇದ್ಯ ತೋರುತ್ತ (ಎಸೆಯುತ್ತ ) ಸಾಗುವರು.ನನ್ನ ಕೈಗೂ ಕೊಟ್ಟ ಕಟ್ಟಿಗೆ ಚೂರುಗಳು ಅಗ್ನಿಗೆ ಎಸೆಯಬೇಕೋ ಬೇಡವೋ ಎಂಬ ಸಂದಿಗ್ಧ ದಲ್ಲಿ ಯಾಕೋ ಎಸೆಯಲು ಮನಸ್ಸು ಒಪ್ಪದೆ ಹಾಗೆ ಕೈಯಲ್ಲಿ ಹಿಡಿದುಕೊಂಡು ಬಂದು ಅಮ್ಮನಿಂದ ಬೈಸಿಕೊಂಡಾಯಿತು.ರಸ್ತೆ ಮೇಲೆಲ್ಲ ಕಟ್ಟಿಗೆ ಮಾರುವವರದೆ ಜಾತ್ರೆ .ದುಡ್ಡು ಕೊಟ್ಟು ಕೊಂಡು ಬೆಂಕಿಗೆ ಎಸೆದು ಭಕ್ತಿಯಿಂದ ಪರವಶವಾಗುವವರ ದಂಡು ಹೆಚ್ಚುತ್ತ ಹೋಯಿತು. ಜಾತ್ರೆಗೆ ಹೋದಮೇಲೆ ದೇವಸ್ಥಾನ ಕ್ಕೆ ಹೋಗದೆ ಇ ರಕಾಗುತ್ತೆಯೆ .ಅಲ್ಲಿ ಜನರ ದಂಡು ,ಎಲ್ಲರಿಗೂ ದೇವರಿಗೆ ಬಟ್ಟೆ (ಹೊದಿಕೆ) ಮಾಡುವ ಸಂಭ್ರಮ.ಬಟ್ಟೆ ಕೊಳ್ಳಲು ಹೋದ ಅಮ್ಮನನ್ನು ಹಿಂಬಾಲಿಸಿದೆ.ಬಟ್ಟೆ ಮರುವವರು ಬಂಡಿಗಳ ಮೇಲೆ ಎರಡು ವಿಧದ ಬಟ್ಟೆಗಳನ್ನಿಟ್ಟಿದ್ದರು ಬೆಲೆ ಕೆಳಲಾಗಿ ಒಂದರ ಬೆಲೆ ನೂರೂ ರೂ.ಮತ್ತೊಂದರ ಬೆಲೆ ನೂರೈವತ್ತು ರೂಗಳು.ವ್ಯತ್ಯಾಸ ಕೇಳಿದಾಗ ನೂರೈವತ್ತು ಬೆಲೆಯ ವಸ್ತ್ರಗಳು ಹೊಚ್ಚಹೊಸದು.ನೂರು ರೂ ಬೆಲೆಯ ವಸ್ತ್ರಗಳು ದೇವರಿಗೆ ಉಡಿಸಿ ಮತ್ತೆ ತಂದವುಗಳು.ಅದೇ ಕೆರೆಯ ನೀರನ್ನು ಕೆರೆಗೆ ಚಲ್ಲಿ ಎಂಬಂತೆ.ಅಮ್ಮ ನೂರೈವತ್ತು ಕೊಟ್ಟು ಹೋಸ ವಸ್ತ್ರ ಗಳನ್ನೆ ಕೊಂಡಳು ಅವು ಮತ್ತೆ ಇಲ್ಲಿಗೆ ಬರುತ್ತೆ ಎಂದು ತಿಳಿಸಿ ಹೇಳುವ ನನ್ನ ಪ್ರಯತ್ನ ಗೊರ್ಕಲ್ಲ ಮೇಲೆ ನೀರು ಸುರಿದಂತೆ ,ವ್ಯರ್ಥ. ದೇವಸ್ಥಾನ ದಲ್ಲಿ ಒಂದು ಕಿ ಮಿ ವರೆಗೆ ದೇವರಿಗೆ ಬಟ್ಟೆ ಮಾಡುವವರ ಕ್ಯೂ , ನಾನು ಮೆಲ್ಲನೆ ಅಮ್ಮನಿಂದ ತಪ್ಪಿಸಿಕೊಂಡು ದೂರದಲ್ಲಿ ಪರಿಚಿತರೊಂದಿಗೆ ಮಾತಾಡುತ್ತ ಕುಳಿತೆ. ಸುಮಾರು ಸಮಯದ ನಂತರ ನನ್ನನ್ನೂ ಹುಡುಕುತ್ತ ಬಂದ ಅಮ್ಮನ ಕೈಯಲ್ಲಿ ವಸ್ತ್ರಗಳು ಹಾಗೆ ಇದ್ದವು. ದೇವರಿಗೆ ಬಟ್ಟೆ ಮಾಡಿಲ್ಲವೆ ಎಂದು ಕೇಳಿದಕ್ಕೆ ಬಂದ ಉತ್ತರದಿಂದ ಅವಕ್ಕಾದೆ. ” ಗುಡಿಯಲ್ಲಿ ದೇವರಿಲ್ಲವಂತೆ ” ಉತ್ಸವ ಮೂರ್ತಿಯನ್ನು ಊರಲ್ಲಿ ಮೆರವಣಿಗೆ ಮಾಡಲು ಒಯ್ದಿದ್ದರು.ದೇವರು ಬರುವವರೆಗೂ ದೇವರಿಲ್ಲದ ಗುಡಿಯಲ್ಲಿ ಕಾಯುತ್ತ ಕುಳಿತೆವು .ದೇವರು ಬಂದರು , ಎಲ್ಲರೂ ಕೈಯಲ್ಲಿರುವ ವಸ್ತ್ರಗಳನ್ನೂ ಲಗುಬಗೆಯಿಂದ ದೇವರ ಮುಂದೆ ಇಡತೊಡಗಿದರು ದೂರ ಇದ್ದವರು ದೇವರ ಸಮೀಪ ಇರುವವರಿಗೆ ಮಾಡಲು ಕೊಟ್ಟು ದೂರದಿಂದಲೆ ಹರಕ ತೀರಿಸಿ ನಡೆದರು. ದೇವರ ಮುಂದೆ ವಸ್ತ್ರ ಗಳ ರಾಶಿ ಹೆಚ್ಚಾದಂತೆ ಸ್ವಯಂ ಸೇವಕರು ಅವುಗಳನ್ನು ತೆರವುಗೊಳಿಸಿ ಹೊರಗೆ ಮಾರುವವರ ಬಂಡಿಗಳಿಗೆ ವರ್ಗಾಯಿಸುತಿದ್ದರು ಕೊಳ್ಳುವವರು ಮತ್ತೆವೆ ಕೊಂಡು ದೇವರಿಗೆ ಎರಿಸುತಿದ್ದರು.ಒಟ್ಟಿನಲ್ಲಿ ಈ ರೀತಿಯ ಆಚರಣೆ ಗಳಿಂದ ಅನೇಕರ ಬದುಕಿನ ಬಂಡಿ ಸಾಗುತ್ತದೆ. ಆಚರಿಸುವರಿಗೆ ಮನಶ್ಯಾಂತಿ ದೊರೆಯಬಹುದು. ಹರಕೆಯ ಬೇರೆ ಬೇರೆ ಬಗೆಗಳು ಪ್ರಕಟವಾದವು. ಸಕ್ಕರೆ ಹಂಚುವ ಹರಕೆಯವರು.ಪೇಡೆ ಹಂಚುವ ಹರಕೆಯವರು ಎಲ್ಲರ ಕೈಗೂ ಸಕ್ಕರೆ ಪೇಡೆಗಳನ್ನು ತುಂಬ ತೊಡಗಿದರು ತಿನ್ನಲೂ ಆಗದೆ ಬಿಸಾಡಲೂ ಆಗದೆ ಪ್ರತಿಯೊಬ್ಬರು ತಮ್ಮ ಕೈಯಲ್ಲಿರುವದನ್ನೂ ಮತ್ತೊಬ್ಬರಿಗೆ ಹಂಚತೊಡಗಿದರು ಹಂಚುವ ಪ್ರಕ್ರಿಯೆ ಮುಂದುವರೆಯುತಿತ್ತು.ಮನೆಗೆ ಹೋಗಿ ಎಲ್ಲರೊಂದಿಗೆ ಕುಳಿತು ಹೋಳಿಗೆ ಊಟಮಾಡಿದ್ದು ಸಂತೋಷದಾಯಕವಾಗಿತ್ತು. ಮರದಿನ ಸಂಜೆ ಬಾಲ್ಯದ ಗೆಳತಿಯರೊಡನೆ ಜಾತ್ರೆಗೆ ಹೋದ ಸಂದರ್ಬ ಮನಸ್ಸನ್ನು ಉಲ್ಲಾಸ ಗೊಳಿಸಿತು. ಸಂಜೆಯ ತಂಪಿನಲ್ಲಿ ಜನರೆಲ್ಲ ಏಳುವ ಧೂಳನ್ನು ಲೆಕ್ಕಿಸದೆ ,ತಾಯಂದಿರು ಅಜ್ಜ ಅಜ್ಜಿಯರು ಚಿಕ್ಕ ಮಕ್ಕಳ ಕೈಹಿಡಿದು ಅವು ಕೇಳುವ ವಸ್ತುಗಳೆಲ್ಲ ಗದರುತ್ತಲೆ ಚೌಕಾಶಿ ಮಾಡಿ ಕೊಡಿಸುತ್ತ ,ಜಾತ್ರೆಯ ಸವಿಯನ್ನು ಮಕ್ಕಳಿಗಿಂತ ಹೆಚ್ಚು ಅನುಭವಿಸುತ್ತ ಒಡಾಡುವದನ್ನು ನೋಡುವದೆ ಚಂದ. ಏನು ಕೊಳ್ಳಬೇಕು ,ಎಲ್ಲಿ ಹೋಗಬೇಕೆಂಬ ನಿರ್ದಿಷ್ಟ ಗುರಿಇರದೆ ಗೆಳತಿಯರೆಲ್ಲ ಕಾಲು ಹೋದ ಕಡೆ ಹೋಗುತ್ತ ,ಹಳೆ ನೆನಪುಗಳು ಮೆಲುಕುಹಾಕುತ್ತ ,ಅಂಗಡಿಗಳಲ್ಲಿರುವ ವಸ್ತುಗಳನ್ನು ಸುಮ್ಮನೆ ನೋಡುತ್ತ , ಮನೆಯಲ್ಲಿ ಹೆಚ್ಚಾಗಿ ಬಿದ್ದಿರುವ ಬಳೆ ಪಿನ್ನು ಟಿಕಳಿಗಳನ್ನೆ ಮತ್ತೆ ಮತ್ತೆ ಕೊಳ್ಳುತ್ತ ಆಟದ ಯಂತ್ರಗಳಿರುವ ಮೈದಾನಕ್ಕೆ ಬಂದಾಯಿತು.ಅಲ್ಲಿರುವ ಜೋಕಾಲಿ ತಿರುಗುಣಿಗಳಲ್ಲಿ ಕುಳಿತು ತಲೆ ತಿರುಗಿದರು ಬಿಡದೆ ಮತ್ತೆ ಮತ್ತೆ ಗಿರಕಿ ಹೊಡೆಯುತ್ತ ಅಕ್ಷರಶ ಮಕ್ಕಳಾದೆವು ,ಎದೆಯುದ್ದ ಬೆಳೆದ ಮಕ್ಕಳಿದ್ದಾರೆಂಬುದು ಮರೆತು. ಹರೆಯದಲ್ಲಿ ಹಿಂದಿಂದೆ ಅಲೆದ ಹುಡುಗರೆಲ್ಲ ಈಗ ಪ್ರೌಢರಾಗಿ ಎದುರಿಗೆ ಸಿಕ್ಕರೂ ಎಕವಚನದಲ್ಲಿ ಮಾತಾಡಬೇಕೊ ಬಹುವಚನದಲ್ಲಿ ಮಾತಾಡಬೇಕೋ ತೋಚದೆ ತಡವರಿಸತೊಡಗಿದಾಗ ಅವರ ಪರಿಪಾಟಲು ಕಂಡು ನಗುತ್ತ ಮತ್ತದೆ ಹಳೆ ಆತ್ಮಿಯತೆಯಿಂದ ಮಾತಾಡಿದಾಗ ನಾವೆಲ್ಲ ಮತ್ತೆ ಇಪ್ಪತೈದು ವರ್ಷ ಹಿಂದೆ ಹಾರಿದ್ದಾಯಿತು. ಜಾತ್ರೆಯು ತುಂಬಾ ನಾವೆಲ್ಲ ಗೆಳೆಯ ಗೆಳತಿಯರು ಒಡಾಡಿದ್ದೆ ಒಡಾಡಿದ್ದು.ಜೀಲೆಬಿ ಮಿರ್ಚಿ ಭಜಿ ಚೂಡವಾಗಳನ್ನು ತಿನ್ನುತ್ತ ಈಗಿನ ಮತ್ತು ಹಳೆಯ ವಿಷಯಗಳು ಮಾತಾಡುತ್ತ ಜಾತ್ರೆ ಎಂಬ ಮಾಯಾಲೋಕದಲ್ಲಿ ಮುಳುಗಿದೋದೆವು. ಇಷ್ಟರಲ್ಲೆ ಅನೇಕ ವರ್ಷಗಳಿಂದ ಮರೆಯಾದವರ ಮುಖದರ್ಶನವಾಗಿ ,ಒಂದು ಆತ್ಮಿಯ ನಗುವಿನಿಂದ ,ಆರಾಮ ,ಆರಾಮ ,ಎಂಬ ಕುಶಲೋಪರಿಯಿಂದ ಮರೆಯಾದ ಎಷ್ಟೊ ಸಂಬಂಧಗಳು ಗೆಳೆತನಗಳು ಮತ್ತೆ ಚಿಗುರಿದವು.ಕೆಲವು ನಿಮಿಷದ ಮಾತಿನಿಂದ ಮರೆಯಾದ ಬಾಂಧವ್ಯ ಮತ್ತೆ ಬೆಸೆಯಿತು.ಮನದಿಂದ ಮರೆಯಾದವರು ಮತ್ತೆ ಮನದಲ್ಲಿ ನಿಂದರು. ನನ್ನೂರಿನ ಜಾತ್ರೆ ನನ್ನೂರಿನ ಜನರೊಡನೆ ಬಾಂಧವ್ಯ ಬೆಸೆದಿಡುವ ಹಂದರವಾಯಿತು. ******

ಲಲಿತ ಪ್ರಬಂಧ Read Post »

ಇತರೆ

ಪ್ರಸ್ತುತ

ಕೇಜ್ರಿವಾಲಾರವರ ಕ್ರೇಝಿವಾಲಾಗಳಿಗಾಗಿ………. ಗಣೇಶಭಟ್,ಶಿರಸಿ ಕೇಜ್ರಿವಾಲಾರವರ ಕ್ರೇಝಿವಾಲಾಗಳಿಗಾಗಿ………. ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಪಡೆದ ದೊಡ್ಡ ಗೆಲುವು, ಆ ಪಕ್ಷದ ನೇತಾರ ಅರವಿಂದ ಕೇಜ್ರಿವಾಲಾರ ಅಭಿಮಾನಿಗಳ, ಅವರ ಕ್ರೇಝಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಕೇಜ್ರಿವಾಲಾರವರೇ ದೇಶದ ಸಮಸ್ಯೆಗಳನ್ನು ಪರಿಹರಿಸುವ ಸಾಮಥ್ರ್ಯ ಹೊಂದಿದ್ದಾರೆ ಎಂಬ ಭಾವನೆ ಇಂಥವರಲ್ಲಿ ಬಲಿಯುತ್ತಿದೆ. ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲೂ ಗೆದ್ದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಸೋಲಿಸಿದ್ದು ದೊಡ್ಡ ಸಾಧನೆ ಎಂದೇ ಕೊಂಡಾಡಲಾಗುತ್ತಿದೆ. ಆಮ್ ಆದ್ಮಿ ಪಕ್ಷದ ಗೆಲುವಿಗೆ ಹಲವು ಕಾರಣಗಳನ್ನು ಮಾಧ್ಯಮ ತಜ್ಞರು ನೀಡಿದ್ದಾರೆ. ಈ ಸುದ್ದಿಯನ್ನು ಬಿತ್ತರಿಸುವಾಗ, ಸೋತ ಪಕ್ಷದ ವಿರುದ್ಧ ಮಾಧ್ಯಮದವರು ಬಳಸಿದ ಭಾಷೆಯಲ್ಲಿ ಆದ ಮಹತ್ತರ ಬದಲಾವಣೆಯನ್ನು ಎಷ್ಟು ಜನ ಗಮನಿಸಿದ್ದಾರೋ ಗೊತ್ತಿಲ್ಲ. ಅಧಿಕಾರ ಹೊಂದಿರುವ ಪಕ್ಷ ಸೋತಾಗ ಮಖಾಡೆಯಾಗಿ ಮಲಗಿತು , ನೆಲಕಚ್ಚಿತು , ಹೀನಾಯ ಸೋಲು ಮುಂತಾಗಿ ಬಳಕೆಯಾಗುತ್ತಿದ್ದ ಮಾಮೂಲಿ ಶಬ್ದಗಳು ಬಿಜೆಪಿಯ ಕುರಿತು ಬಳಕೆಯಾಗಲಿಲ್ಲ. ಕಾಂಗ್ರೆಸ್ ಕುರಿತು ಕೆಲವರು ಈ ಶಬ್ದಗಳನ್ನು ಬಳಸಿದರಾದರೂ ಚುನಾವಣಾ ಪರಿಣಾಮದ ವಿಶ್ಲೇಷಣೆಯಲ್ಲಿ ಗೆಲುವಿನ ಕಾರಣಗಳ ಕುರಿತೇ ಹೆಚ್ಚಿನ ಒತ್ತು ನೀಡಲಾಗಿತ್ತು. ಇಂತಹ ಸಂದರ್ಭಗಳಲ್ಲಿ ಬಳಕೆಯಾಗುವ ಇನ್ನೊಂದು ನುಡಿಗಟ್ಟೆಂದರೆ ಮತದಾರ ಬುದ್ದಿವಂತನಾಗಿದ್ದಾನೆÀ ಎಂಬುದು. ಇದು ಕೂಡಾ ಅಷ್ಟಾಗಿ ಬಳಕೆಯಾಗಲಿಲ್ಲ. ಮಾಧ್ಯಮದವರ ಈ ಬದಲಾವಣೆಯನ್ನು ಧನಾತ್ಮಕ ಪರಿವರ್ತನೆ ಎಂದು ಭಾವಿಸುವುದು ತಪ್ಪಾಗುತ್ತದೆ. ನಮ್ಮ ದೇಶದ ಸಮೂಹ ಮಾಧ್ಯಮಗಳು ಬಂಡವಾಳಶಾಹಿಗಳ ನಿಯಂತ್ರಣದಲ್ಲಿರುವುದು ವಾಸ್ತವ. ಬಂಡವಾಳವಾದಿಗಳಿಗೆ ಬಿಜೆಪಿ ಅತ್ಯಂತ ಅಪ್ಯಾಯಮಾನ ಪಕ್ಷ. ಆದ್ದರಿಂದಲೇ ಆ ಪಕ್ಷದ ಸೋಲಿನ ಕುರಿತು ಹೆಚ್ಚಿನ ಟೀಕೆ ಮಾಡಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಮಾಧ್ಯಮ ದೊರೆಗಳು ಇಷ್ಟ ಪಡುವುದಿಲ್ಲ. ಕಾಂಗ್ರೆಸ್ ಕೂಡಾ ಬಂಡವಾಳಶಾಹಿಗಳ ಪರವಾಗಿಯೇ ಇರುವ ಪಕ್ಷ. ಕಾಂಗ್ರೆಸ್ ಮತ್ತು ಬಿಜೆಪಿಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಖಾಸಗೀಕರಣವನ್ನು ನಡೆಸುತ್ತಿರುವ ವೇಗ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಾರಂಭವಾದ ಖಾಸಗೀಕರಣದ ವೇಗ ನಿಧಾನ ( ಗಂಟೆಗೆ 10 ಕಿ.ಮೀ ವೇಗ ಎನ್ನೋಣ) ಆದರೆ ಬಿಜೆಪಿ ಖಾಸಗೀಕರಣದ್ದು ಅತಿ ವೇಗ ( ಗಂಟೆಗೆ 110 ಕಿ.ಮೀ). ಈ ಪಕ್ಷಗಳ ನಡುವೆ ಅರವಿಂದ ಕೇಜ್ರಿವಾಲಾರವರ ಆಮ್ ಆದ್ಮಿ ಪಕ್ಷದ ವೇಗ ಇನ್ನೂ ಸ್ಪಷ್ಟವಾಗಬೇಕಿದೆಯಾದರೂ ಅದು ಕೂಡ ಖಾಸಗೀಕರಣದ ಪರವಾಗಿಯೇ ಇರುವ ಪಕ್ಷ ಎಂಬುದು ಸ್ಪಷ್ಟ. ದೆಹಲಿಯ ಚುನಾವಣೆಯಲ್ಲಿ ಆಮ್‍ಆದ್ಮಿ ಪಕ್ಷದ ಗೆಲುವಿಗೆ ಸೂಚಿತವಾಗಿರುವ ಕಾರಣಗಳಲ್ಲಿ ದೆಹಲಿಯ ಸರ್ಕಾರಿ ಶಾಲೆಗಳ ಸುಧಾರಣೆ ಪ್ರಮುಖವಾದದ್ದು. ಸರ್ಕಾರಿ ಶಾಲೆಗಳ ಮಟ್ಟವನ್ನು ಏರಿಸಲು ಸಾಧ್ಯ. ಖಾಸಗಿ ಕ್ಷೇತ್ರದ ಶಾಲೆಗಳ ಸಮಾನಕ್ಕೇರಿಸಲೂ ಬಹುದೆಂಬುದನ್ನು ಸಾಧಿಸಿರುವುದನ್ನು ಗಮನಿಸದಿರಲು ಸಾಧ್ಯವೇ ಇಲ್ಲ. ಅಮೇರಿಕಾದ ಅಧ್ಯಕ್ಷರ ಶ್ರೀಮತಿಯವರು ಸರ್ಕಾರಿ ಶಾಲೆಗೆ ಭೇಟಿ ನೀಡಿರುವುದು ಗಣನೀಯವೇ ಸರಿ. ಆದರೂ, ಈ ವಿಷಯದಲ್ಲಿ ಎರಡು ಸಂಗತಿಗಳು ಎದ್ದು ಕಾಡುತ್ತವೆ. ಮೊದಲನೆಯದಾಗಿ ಖಾಸಗಿ ಶಾಲೆಗಳು ನಡೆಸುತ್ತಿರುವ ಶೋಷಣೆಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದು. ಅತಿ ಎನ್ನುವಷ್ಟು ಶುಲ್ಕ ಆಕರಣೆ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ಸಂಸ್ಥೆಗಳು ದೆಹಲಿ ಸರ್ಕಾರ ಲೀಸ್ ಮೇಲೆ ನೀಡಿರುವ ಭೂಮಿಯನ್ನೇ ಬಳಕೆ ಮಾಡಿಕೊಳ್ಳುತ್ತಿವೆ. ಈ ಅಂಶವನ್ನೂ ಗಮನದಲ್ಲಿರಿಸಿಕೊಂಡು ಶೋಷಕ ಶಿಕ್ಷಣ ಸಂಸ್ಥೆಗಳ ಮೇಲೆ ನಿಯಂತ್ರಣ ಕ್ರಮ ಕೈಗೊಳ್ಳಲು ಸಾಧ್ಯವೆಂದು ದೆಹಲಿಯ ಹಲವು ನಾಗರಿಕರು ಅಭಿಪ್ರಾಯ ಪಡುತ್ತಾರೆ. ಎರಡನೇಯದೆಂದರೆ ಶಿಕ್ಷಣದ ಗುಣಮಟ್ಟದಲ್ಲಿ ಆಗಬೇಕಾದ ಮೂಲಭೂತ ಬದಲಾವಣೆ. ಖಾಸಗಿ ಶಿಕ್ಷಣ ಸಂಸ್ಥೆಗಳು, ಕಾರ್ಪೋರೇಟ್ ವಲಯಕ್ಕೆ ಬೇಕಾಗುವ ಮಾನವ ಸಂಪನ್ಮೂಲವನ್ನು ಸಿದ್ಧಪಡಿಸುವ ಕಾರ್ಖಾನೆಗಳಾಗಿವೆ. ಈ ಪ್ರಕ್ರಿಯೆಯಲ್ಲಿ ತಾವೂ ಕೂಡ ಹಣ ಗಳಿಸುತ್ತವೆ. ಅಂತಹ ಶಾಲಾ, ಕಾಲೇಜುಗಳಲ್ಲಿ ಕೂಡಾ ಯೋಗ, ಧ್ಯಾನ ಮುಂತಾದವುಗಳನ್ನು ಕಲಿಸಲಾಗುತ್ತದೆ. ಆದರೆ, ಅವುಗಳ ಉದ್ದೇಶ ವಿದ್ಯಾರ್ಥಿಗಳ ಮನಸ್ಸನ್ನು ಶಾಂತಗೊಳಿಸಿ, ಅವರಲ್ಲಿ ಗುಲಾಮಗಿರಿ ಭಾವವನ್ನು ತುಂಬುವುದೇ ಆಗಿದೆ. ತಾನು ಶಿಕ್ಷಣ ಪಡೆದು, ಯಾವುದೋ ಕಂಪನಿಯಲ್ಲಿ ಕೆಲಸ ಪಡೆದು, ಹೆಚ್ಚೆಚ್ಚು ಸಂಬಳ ಪಡೆಯುತ್ತ ಕಂಪನಿಯನ್ನು (ಅಂದರೆ ಖಾಸಗೀಕರಣವನ್ನು) ಗಟ್ಟಿಗೊಳಿಸಬೇಕೆಂಬ ಭಾವವನ್ನು ಪರೋಕ್ಷವಾಗಿ ಬೆಳೆಸಲಾಗುತ್ತಿದೆ. ಇದರ ಪರಿಣಾಮವೆಂದರೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಕೊರತೆ, ಸಮಾಜದ ಇತರರೊಂದಿಗೆ ಸಹಜವಾಗಿ ಬೆರೆಯಲಾರದ ಮೇಲರಿಮೆ, ಅನಗತ್ಯವಾದ ಸ್ಪರ್ಧಾತ್ಮಕ ಮನೋಭಾವದ ಬೆಳವಣಿಗೆಯಿಂದಾಗಿ ಇತರರನ್ನು ಪ್ರೀತಿಸಲಾರದ, ಸಹಿಸಲಾರದ , ವೈರಿಗಳೋಪಾದಿಯಲ್ಲಿ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಬ್ರಿಟಿಷರ ಬಳುವಳಿಯ ಶಿಕ್ಷಣ ಪದ್ಧತಿಯ ಮುಂದುವರಿಕೆಯಾದ ಇಂದಿನ ಶಿಕ್ಷಣ ಪದ್ಧತಿಯನ್ನು ಖಾಸಗಿ ಕ್ಷೇತ್ರದವರು ಒಂದು ಉದ್ಯಮವನ್ನಾಗಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕೂಡಾ ಇದೇ ವಿಧದ ಶಿಕ್ಷಣ ನೀಡುವ ಬದಲಿಗೆ ಭಾರತೀಯ ಶಿಕ್ಷಣ ಪದ್ಧತಿಯನ್ನು ಅನುಷ್ಠಾನಗೊಳಿಸಲು ಕೇಜ್ರಿವಾಲರವರು ಪ್ರಯತ್ನಿಸಲಿಲ್ಲವೆಂಬ ಆಕ್ಷೇಪ ಹಲವರದು. ಆತ್ಮವಿಶ್ವಾಸದಿಂದ ಬದುಕನ್ನು ರೂಢಿಸಿಕೊಳ್ಳುವ ಶಿಕ್ಷಣ ಪದ್ಧತಿಯನ್ನು ದೆಹಲಿಯ ಮುಖ್ಯಮಂತ್ರಿಯವರು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ತರುತ್ತಾರೆಂದು ನಿರೀಕ್ಷಿಸುವ ಯಾವ ಸೂಚನೆಯೂ ಅವರ ಕಾರ್ಯಸೂಚಿಯಲ್ಲಿ ಕಂಡು ಬರುತ್ತಿಲ್ಲ. ಯಾಕೆಂದರೆ, ಕೇಜ್ರಿವಾಲಾರವರ ಆಮ್ ಆದ್ಮಿ ಪಕ್ಷವು ಬಂಡವಾಳವಾದಿ ಚೌಕಟ್ಟಿನಾಚೆಗೆ ಚಿಂತಿಸುತ್ತಿಲ್ಲ. ಅಪರಾಧ ಹಿನ್ನೆಲೆಯ ಎಮ್ಮೆಲ್ಲೆಗಳು, ಪಕ್ಷಾಂತರಿಗಳಿಗೆ ಟಿಕೆಟ್ ನೀಡಿಕೆ ಮುಂತಾದ ವಿಷಯಗಳಲ್ಲಿ ಇತರ ರಾಜಕೀಯ ಪಕ್ಷಗಳ ರೀತಿಯಲ್ಲೇ ಆಪ್‍ನ ವರ್ತನೆಯಿದೆ. ಚುನಾವಣೆಯಲ್ಲಿ ಹರಿದ ಹಣದ ಮೂಲ ಕೂಡಾ ಅವೇ ಆಗಿವೆ. ನಗರವಾಸಿಗಳ ನಿರೀಕ್ಷೆಗಳನ್ನು ಗುರ್ತಿಸುವಲ್ಲಿ ಕೇಜ್ರಿವಾಲಾರವರು ಯಶಸ್ವಿಯಾಗಿರುವುದು ಚುನಾವಣೆಯಲ್ಲಿ ಅವರ ಸಫಲತೆಗೆ ಕಾರಣ. ಒಂದು ಹಂತದವರೆಗೆ ಉಚಿತ ವಿದ್ಯುತ್, ಉಚಿತ ನೀರು ಮುಂತಾದ ಜನಪ್ರಿಯ ಕಾರ್ಯಕ್ರಮಗಳ ಅನುಷ್ಠಾನದಿಂದ ಮತದಾರರ ಮನ ಗೆಲ್ಲಲು ಆಪ್ ಯಶಸ್ವಿಯಾಗಿದೆಯೆಂಬುದು ನಿಚ್ಚಳ. ಆದರೆ ಇಂತಹ ಕಾರ್ಯಕ್ರಮಗಳು ದೀರ್ಘಾವಧಿಯಲ್ಲಿ ಸಮಾಜಕ್ಕೆ ಹಿತಕಾರಿಯೇ ಎಂಬ ಕುರಿತು ಯೋಚಿಸಲೇಬೇಕಾಗಿದೆ. ಸಮ ಮತ್ತು ಬೆಸ ಸಂಖ್ಯೆಯ ನೋಂದಾಯಿತ ವಾಹನಗಳ ಬಳಕೆಯನ್ನು ವಾರದ ನಿರ್ದಿಷ್ಟ ದಿನಗಳಿಗೆ ಮಿತಗೊಳಿಸಿ ದೆಹಲಿಯ ವಾಯುಮಾಲಿನ್ಯವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದೇವೆಂಬ ಕೇಜ್ರಿವಾಲಾರವರ ಹೇಳಿಕೆಯನ್ನು ಬಡಾಯಿ ಎನ್ನುವುದೇ ಸೂಕ್ತವೆಂಬುದು, ದೆಹಲಿಯ ವಾಯುಮಾಲಿನ್ಯವನ್ನು ಗಮನಿಸುವವರಿಗೆ ಅರ್ಥವಾಗುತ್ತದೆ. ಮುಖ್ಯ ರಸ್ತೆಗಳು ಚೆನ್ನಾಗಿದ್ದರೂ ನಗರದ ಒಳ ರಸ್ತೆಗಳ ಪರಿಸ್ಥಿತಿ, ಬಿದ್ದಿರುವ ಕಸದ ರಾಶಿಗಳನ್ನು ನೋಡಿದವರಿಗೆ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಬಹಳಷ್ಟಿದೆಯೆಂಬುದರ ಅರಿವಾಗುತ್ತದೆ. ದೆಹಲಿ ಬೆಳೆಯುತ್ತಿದೆ, ಪಕ್ಕದ ರಾಜ್ಯಗಳ ಗಡಿರೇಖೆಗಳನ್ನು ದಾಟಿಯೂ ದೆಹಲಿ ಬೆಳೆಯುತ್ತಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಸ್ವತಂತ್ರವಾಗಿ ಹೊಂದಿರದ ರಾಜ್ಯವಾದ ದೆಹಲಿಗೆ ಕೃಷಿಯ ಚಿಂತೆಯಿಲ್ಲ. ಗ್ರಾಮೀಣ ಅಭಿವೃದ್ಧಿಯ ಹೊಣೆಗಾರಿಕೆಯಿಲ್ಲ, ಆದರೂ ಉದ್ಯೋಗ ಸೃಷ್ಟಿಯ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ. ಒಂದರ್ಥದಲ್ಲಿ ದೆಹಲಿ ರಾಜ್ಯವೆಂದರೆ ಮಹಾನಗರ ಪಾಲಿಕೆಯ ಮುಂದಿನ ಹಂತವೇ ಆಗಿದೆ. ಕೆಲವು ರಾಜ್ಯಗಳಲ್ಲಿ ಆಪ್‍ನ ಅಸ್ತಿತ್ವವಿದೆ. ಸರ್ಕಾರದ ಉನ್ನತ ಹುದ್ದೆಗೆ ರಾಜೀನಾಮೆ ನೀಡಿ, ಭ್ರಷ್ಟಾಚಾರ ವಿರೋಧಿ ಅಲೆಯಲ್ಲಿ ಅಧಿಕಾರಕ್ಕೇರಿದ ಅರವಿಂದ ಕೇಜ್ರೀವಾಲರ ಆಪ್ ಏಕವ್ಯಕ್ತಿ ಪಕ್ಷವಾಗುತ್ತಿದೆ. ಕೇಜ್ರಿವಾಲಾರವರ ವರ್ಚಸ್ಸೊಂದನ್ನೇ ಅವಲಂಬಿಸಿ, ರಾಜ್ಯದ, ದೇಶದ ಅಭಿವೃದ್ಧಿ ಸಾಧಿಸುತ್ತೇವೆಂದು ನಂಬುವುದು ವ್ಯಾವಹಾರಿಕವಾಗಲಾರದು. ದುಡಿಯುವ ಸಾಮಥ್ರ್ಯ ಇರುವ ಪ್ರತಿಯೋರ್ವ ವ್ಯಕ್ತಿಗೂ ದುಡಿಮೆಯ ಅವಕಾಶ ಸೃಷ್ಟಿಸುವ , ದುಡಿಮೆಯ ಪ್ರತಿಫಲದಿಂದ ದುಡಿಮೆಗಾರ ಮತ್ತು ಅವರ ಅವಲಂಬಿತರ ಜೀವನದ ಕನಿಷ್ಠ ಅಗತ್ಯತೆಗಳಾದ ಆಹಾರ, ಬಟ್ಟೆ, ವಸತಿ, ಶಿಕ್ಷಣ , ಔಷಧೋಪಚಾರಗಳನ್ನು ಪಡೆಯುವ ಅವಕಾಶ ನಿರ್ಮಿಸಬೇಕಾದುದು ಸರ್ಕಾರದ ಕರ್ತವ್ಯ. ಈ ಸೌಲಭ್ಯವನ್ನು ಪಡೆಯುವುದು ಪ್ರತಿಯೋರ್ವ ನಾಗರಿಕನ ನೈಸರ್ಗಿಕ ಹಕ್ಕು. ಆದರೆ, ತಮ್ಮ ಈ ಹಕ್ಕಿನ ಅರಿವು ಹೆಚ್ಚಿನವರಿಗೆ ಇಲ್ಲದಿರುವ ಕಾರಣದಿಂದ ಸರ್ಕಾರ ನೀಡುವ ದಯಾಭಿಕ್ಷೆಯಿಂದಲೇ ಅವರು ತೃಪ್ತರು. ಈ ಕುರಿತಾಗಿ ಆಪ್ ಪಕ್ಷಕ್ಕೆ ಸ್ಪಷ್ಟ ವಿಚಾರ ಅಥವಾ ಕಾರ್ಯಕ್ರಮವಿಲ್ಲ. ಕೃಷಿರಂಗದ ಸಮಸ್ಯೆಗಳು, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಿಸಲು ಬೇಕಾದ ಕಾರ್ಯಸಾಧ್ಯ ಯೋಜನೆಗಳು ಆಪ್ ಬಳಿ ಇಲ್ಲ. ಕೃಷಿ ರಂಗದ ಮೇಲಿನ ಅತಿಯಾದ ಅವಲಂಬನೆಯನ್ನು ತಗ್ಗಿಸಿ, ಪರ್ಯಾಯ ಉದ್ಯೋಗ ಕಲ್ಪಿಸುವ ಯೋಜನೆಗಳು ಆಪ್‍ನಲ್ಲಿ ಇಲ್ಲ. ಮೊಹಲ್ಲಾ ಕ್ಲಿನಿಕ್‍ಗಳು ಉಪಯುಕ್ತವೆಂಬುದು ನಿಜ. ಆದರೆ ಔಷಧ ತಯಾರಿಕರ ಪ್ರಬಲ ಲಾಭಿಯನ್ನು ಹಿಮ್ಮೆಟ್ಟಿಸುವ ಸಾಮಥ್ರ್ಯ ಅವಕ್ಕಿಲ್ಲ. ಜನರನ್ನು ಶೋಷಿಸುತ್ತಿರುವ ಔಷದೋಪಚಾರ ಕ್ಷೇತ್ರದ ಹೈಟೆಕ್ ಲಾಬಿಗಳನ್ನು ಮಣಿಸಿ ಜನಪರವಾಗಿಸುವ ಚಿಂತನೆಯನ್ನು ಆಪ್ ಹೊಂದಿಲ್ಲ. ಸ್ಥಳೀಯರಿಗೇ ಉದ್ಯೋಗಾವಕಾಶಗಳ ಮೀಸಲಾತಿಯೆಂಬ ವಿಚಾರ ಇಂದು ಜನಪ್ರಿಯವಾಗುತ್ತಿದೆ; ಪ್ರಾದೇಶಿಕವಾದ ಬೆಳೆಯುತ್ತಿದೆ. ಈ ಜನಾಂದೋಲನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅರ್ಥವ್ಯವಸ್ಥೆಯನ್ನು ಬಲಪಡಿಸುವ , ಈ ಭಾವನೆಗಳು ಸಂಕುಚಿತವಾಗದೇ ವಿಶಾಲ ಮನೋಭಾವ ತಳೆಯುವಂತೆ ಪರಿವರ್ತಿಸುವ ಕುರಿತು ಆಪ್ ಬಳಿ ವಿಚಾರಧಾರೆಯಿಲ್ಲ. ಭ್ರಷ್ಟಾಚಾರದ ವಿರೋಧಿ ಅಲೆಯನ್ನೇರಿ ಅಧಿಕಾರಕ್ಕೆ ಬಂದಿರುವ ಆಪ್ ಭ್ರಷ್ಟಾಚಾರವನ್ನು ತಡೆಗಟ್ಟುವ , ನಿಯಂತ್ರಿಸುವ ದೀರ್ಘಕಾಲೀನ ಕಾರ್ಯಕ್ರಮಗಳನ್ನು ಪ್ರಾರಂಭಿಸಿಲ್ಲ. ಆ ಕುರಿತು ಅವರ ಬಳಿ ಸಿದ್ಧಾಂತವೂ ಇಲ್ಲ. ಬಿಜೆಪಿಯ ಹುಸಿ ರಾಷ್ಟ್ರೀಯವಾದ, ಮತೀಯ ದ್ವೇಷಗಳನ್ನು ಎದುರಿಸುವ ಧನಾತ್ಮಕ ಚಿಂತನೆ, ಕಾರ್ಯಯೋಜನೆಗಳು ಅರವಿಂದರ ಬಳಿ ಇಲ್ಲದಿರುವುದರಿಂದಲೇ ಈ ಕುರಿತು ಅವರು ಮೌನವಹಿಸಿದ್ದಾರೆ. ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಅಥವಾ ಅವಕ್ಕೆ ಪ್ರತಿಕ್ರಿಯಿಸದಿರುವುದೇ ಪರಿಹಾರವಲ್ಲ. ನಗರವಾಸಿಗಳ ನಾಡಿ ಮಿಡಿತವನ್ನು ಸರಿಯಾಗಿ ಗ್ರಹಿಸಿ, ಚುನಾವಣೆಯಲ್ಲಿ ಗೆದ್ದು ದೆಹಲಿ ಗದ್ದುಗೆಯನ್ನು ಮೂರನೇ ಬಾರಿ ಏರಿರುವ ಅರವಿಂದ ಕೇಜ್ರಿವಾಲಾರವರ ಕುರಿತು ಕ್ರೇಝಿಗಳಾಗಿರುವವರು ಪ್ರತಿಪಾದಿಸುತ್ತಿರುವಂತೆ , ಭಾರತದ ಸಮಸ್ಯೆಗಳನ್ನು ಪರಿಹರಿಸುವ ಸಾಮಥ್ರ್ಯ ಆಪ್‍ಗೆ ಇದೆಯೇ ಎಂಬುದನ್ನು ವಸ್ತುನಿಷ್ಟವಾಗಿ ವಿಶ್ಲೇಷಿಸುವುದು ಇಂದಿನ ಅವಶ್ಯಕತೆ. *******************************

ಪ್ರಸ್ತುತ Read Post »

ಇತರೆ

ಶಿಕ್ಷಣ

ಮೌಲ್ಯಯುತ ಜೀವನಕ್ಕೆ ಶಿಸ್ತು ರಮೇಶ ಇಟಗೋಣಿ ಮೌಲ್ಯಯುತ ಜೀವನಕ್ಕೆ ಶಿಸ್ತು : ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಮುಂದೆ ಗುರಿ ಹಿಂದೆ ಗುರು ಇರಬೇಕು. ವಿದ್ಯೆಯನ್ನು ಅರ್ಥೈಸಿಕೊಂಡು ಕಲಿಯುವ, ಗ್ರಹಿಸುವ ಸಾಮರ್ಥ್ಯ ಸಂಪಾದಿಸುವವನೇ ವಿದ್ಯಾರ್ಥಿ. ಕಲಿಕಾರ್ಥಿಗೆ ಏಕಲವ್ಯನಂತಹ ಉತ್ಕಟವಾದ ಕಲಿಕೆಯ ಹಸಿವು ಇದ್ದಲ್ಲಿ ವಿದ್ಯೆಯನ್ನು ಒಲಿಸಿಕೊಳ್ಳುವುದು ಕಷ್ಟ ಆಗಲಾರದು. ಮಕ್ಕಳಾಗಿ ಕಲಿಯುವುದು ಎಷ್ಟು ಚಂದವೋ ಅಷ್ಟೇ ಗುರುವಾಗಿ ಕಲಿಸೋದು ಅಷ್ಟೇ ಅಂದವಾಗಿದೆ. ಸಾವಿರಾರೂ ಕಲ್ಲುಗಳನ್ನು ಸುಂದರವಾದ ಮೂರ್ತಿ ಮಾಡುವ ಬ್ರಹ್ಮ ಶಿಕ್ಷಕ. ಸ್ಟುಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ಆದರೆ ಟೀಚರ್ ಲೈಫ್ ಇಸ್ ಡೈಮಂಡ್ ಲೈಫ್. ಮಕ್ಕಳಲ್ಲಿ ಶಿಸ್ತನ್ನು ರೂಢಿಸುವ ಕಾರ್ಯ ಮನೆಯಿಂದಲೇ ಆರಂಭವಾಗಬೇಕು “ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು” ಎಂಬಂತೆ ಶಿಸ್ತಿನ ಪಾಲನೆ ಕೆವಲ ವಿದ್ಯಾರ್ಥಿ ಜೀವನದ ಭಾಗವಲ್ಲ ಈಡೀ ಜೀವನದುದ್ದಕ್ಕೂ ಶಿಸ್ತು ಒಂದು ಅವಿಭಾಜ್ಯ ಅಂಗ. “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ಮಕ್ಕಳಿಗೆ ಶಿಸ್ತನ್ನು ಕಾದುಕೊಳ್ಳಲು ತಿಳಿ ಹೇಳುವುದು ಪಾಲಕರ ಕರ್ತವ್ಯವಾಗಿದೆ. ಶಿಕ್ಷಣದಿಂದ ಒಳ್ಳೆಯ ನಡತೆಯನ್ನು ಅಳವಡಿಸಿಕೊಳ್ಳುವುದೇ ಶಿಸ್ತು, ಶಿಕ್ಷೆಯೇ ಶಿಸ್ತಲ್ಲ ಶಿಕ್ಷೆಯಿಂದ ಮಾತ್ರ ಶಿಸ್ತು ರೂಢಿಸಿಕೊಳ್ಳಲು ಸಾಧ್ಯವಿಲ್ಲ. ಜೀವನದಲ್ಲಿ ಯಾವ ವಿದ್ಯಾರ್ಥಿ ಶಿಸ್ತು ಅಳವಡಿಸಿಕೊಳ್ಳುತ್ತಾನೆಯೋ, ಯಾರು ಶಿಸ್ತಿನ ಶಿಪಾಯಿಗಳಾಗಿ ಓದುತ್ತಾರೆಯೋ ಅಂತಹ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚುತ್ತದೆ ಅಂತವರು ಮಾತ್ರ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯ. ಶಿಕ್ಷಣ ಎಂದರೆ ಓದಿ ಉದ್ಯೋಗ ಗಿಟ್ಟಿಸಿಕೊಳ್ಳುವುದಲ್ಲ ನಿಮ್ಮಲ್ಲಿ ವ್ಯಕ್ತಿತ್ವವನ್ನು, ಮನುಷ್ಯತ್ವವನ್ನು, ಸಂಸ್ಕಾರವನ್ನು, ಉತ್ತಮ ಗುಣಗಳನ್ನು ಪಡೆಯುವುದೇ ಶಿಕ್ಷಣವಾಗಿದೆ. ವಿದ್ಯಾರ್ಥಿ ತನ್ನ ಜೀವನದಲ್ಲಿ ಗುರಿ ಸಾಧಿಸಬೇಕಾದರೆ ಕೆಲವೊಂದು ನಿಯಮ ಪಾಲಿಸಬೇಕಾಗುತ್ತದೆ. ಅದರಲ್ಲೂ ಶಿಸ್ತು ಮತ್ತು ಸಮಯಪ್ರಜ್ಞೆ, ಹಿರಿಯರನ್ನು ಗೌರವಿಸುವ ಗುಣ, ಸಂಯಮದ ನಡವಳಿಕೆಗಳು ಹೆಚ್ಚಾಗಬೇಕು ಇವುಗಳನ್ನು ಯಾರು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಾರೋ ಅಂತವರು ಜೀವನದಲ್ಲಿ ಏನಾದರೂ ಸಾಧನೆ ಮಾಡುತ್ತಾರೆ ಇಲ್ಲವಾದರೆ “ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ” ಎಂಬಂತೆ ಜೀವನದುದ್ದಕ್ಕೂ ಗೊಂದಲದಲ್ಲಿ ಉಳಿಯುತ್ತಾರೆ. “ಒಡೆದ ಮುತ್ತು ಕಳೆದ ಹೊತ್ತು” ಯಾವತ್ತೂ ತಿರುಗಿ ಬಾರದು ಎಂಬ ಮಾತಿನಂತೆ ಸಿಕ್ಕಂತ ಸಮಯವನ್ನು ಬಳಸಿಕೊಂಡು ಅವಕಾಶಗಳನ್ನು ಸೃಷ್ಟಿಸುತ್ತಾ ಹೋಗಬೇಕು. ಸಮಯ ಎಲ್ಲರಿಗೂ ಒಂದೇ ಅದನ್ನು ಅರಿತು ಹೆಜ್ಜೆ ಇಡುವುದು ಸಮಂಜಸ. ವಿದ್ಯಾರ್ಥಿಗಳಿಗೆ ಒಂದು ವರ್ಷದ ಮಹತ್ವ ತಿಳಿಯುವುದು ಪರೀಕ್ಷೆಯಲ್ಲಿ ಉತ್ತಿರ್ಣರಾದಾಗ ಮಾತ್ರ, ಸಿಕ್ಕ ಅವಕಾಶವನ್ನು ಆಯಾ ಸಮಯದಲ್ಲಿ ಸರಿಯಾಗಿ ಬೆಳೆಸಿಕೊಳ್ಳುತ್ತಾ ಶಿಸ್ತಿನ ಜೊತೆಗೆ ಸಾಧನೆಯು ನಿಮ್ಮನ್ನು ಬೆನ್ನಟ್ಟಿ ಬರುತ್ತದೆ. ಶಿಸ್ತು ಎಂದರೆ ಕೆಲವರ ಮನಸ್ಸಿಗೆ ನಿಯಂತ್ರಣ ಹಾಕಿಕೊಳ್ಳುತ್ತಾರೆ ಬದುಕಿನ ಇತಿಮಿತಿಗಳನ್ನು, ಎಲ್ಲೆಯನ್ನು ಹಾಕಿಕೊಳ್ಳುತ್ತಾರೆ ಸಂತೋಷದ ಎಲ್ಲ ವಿಚಾರಗಳಿಂದ ದೂರ ಇರುತ್ತಾರೆ ಇದು ಶಿಸ್ತು ಅಲ್ಲ. ಬದುಕಿನೊಂದಿಗೆ ಶಿಸ್ತು ರೂಢಿಸಿಕೊಳ್ಳುವುದೆಂದರೆ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಏಕಾಗ್ರತೆಯಿಂದ ತಮ್ಮೊಳಗಿನ ಶಕ್ತಿಯನ್ನು ಹರಿಬಿಡುವುದರ ಜೊತೆಗೆ ಇತರರ ಮಾತುಗಳಿಗೆ ಒಳಗಾಗದೇ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗದೆ ಸರಿಯಾದ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದೇ ಶಿಸ್ತು. ಎಲ್ಲ ವಿದ್ಯಾರ್ಥಿಗಳ ಜೀವನದಲ್ಲಿ ಗುರುವಿನ ಪಾತ್ರ ಅಮೂಲ್ಯವಾದದ್ದು ಶಿಕ್ಷಕರು ಕೂಡಾ ಒಬ್ಬ ನಿರಂತರ ವಿದ್ಯಾರ್ಥಿಯಾಗಿ ಬಹಳ ವಿಚಾರಗಳನ್ನು ವಿದ್ಯಾರ್ಥಿಗಳಿಂದ ಕಲಿತುಕೊಳ್ಳುತ್ತಾರೆ. ತಮ್ಮಲ್ಲಿರುವ ಎಲ್ಲ ಒಳ್ಳೆಯ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಬಿತ್ತರಿಸಿ ಮೌಲ್ಯಯುತ ಮೂರ್ತಿಯನ್ನಾಗಿ ರೂಪಿಸುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಪ್ರೀತಿಸಿ, ಬೋಧಿಸಿ ಒಳ್ಳೆಯ ಮೌಲ್ಯ ತುಂಬಿ ನಿಸ್ವಾರ್ಥ ಸೇವೆ ಸಲ್ಲಿಸುವಲ್ಲಿ ಶಿಕ್ಷಕರದು ಒಂದು ಕೈ ಮೇಲೆ ಇರುತ್ತದೆ. “ಹರ ಮುನಿದರೂ ಗುರು ಮುನಿಯಲಾರ” ಎಂಬ ಮಾತಿನಂತೆ ಅಂತಹ ಪ್ರತಿಯೊಬ್ಬ ಗುರುವಿಗೂ ನನ್ನ ಅನಂತಕೋಟಿ ನಮನಗಳು. *****************************

ಶಿಕ್ಷಣ Read Post »

You cannot copy content of this page

Scroll to Top