ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪ್ರಬಂಧ

ಮಠದ ಆನೆ ರೇಶ್ಮಾ ಗುಳೇದಗುಡ್ಡಾಕರ್ ಆನೆ ಎಂದರೆ ಸಂಭ್ರಮ, ಸಡಗರ  ದೈವೀಕತೆ ಆಶ್ಚರ್ಯ ಹತ್ತು ಹಲವು ಉದ್ಗಾರ. ಊರಿನಲ್ಲಿ ಕಂಡರೆ .ಅದೆ ಆನೆ ಅಚಾನಕ್ ಅಗಿ ನಾವು ಹೋಗುವ ದಾರಿಯಲ್ಲಿ ,ಕಾಡಿನಲ್ಲಿ ಊರ ಬಯಲಿನಲ್ಲಿ ಕಂಡರೆ !!!! ಹೃದಯ ವೇ ಬಾಯಿಗೆ ಬಂದಂತಾಗುತ್ತದೆ .  ಅಲ್ಲವೇ ಅದನ್ನು ದೈರ್ಯ ವಾಗಿ ಸ್ವಾಗತಿಸುವರು ಸ್ವಲ್ಪ ಕಡಿಮೆಯೇ .     ಆನೆ ಎಂದರೆ ನೆನಪಾಗುವದು ಅದರ  ಗಾತ್ರ  ಗತ್ತು ರಾಜಗಾಂಭಿರ್ಯ ನಡಿಗೆ ಅದರ ತೊಕದಷ್ಟೇ ಇರುವ ಸಂಮಯಮ .ಆನೆ ಒಂದು ಅದರೆ ಅದು ತಿಳಿಸುವ ನೀತಿ ಪಾಠ ಹಲವು ತಿಳಿದರೆ!ಇಂತಹ ಆನೆ ನಮ್ಮೊರಿಗೊ ಬರುತ್ತದೆ ವರ್ಷಕ್ಕೆ ೨ ಬಾರಿ ಅದು ಮಠದಿಂದ  ಅದೇ ರಾಜಗಾಂಭೀರ್ಯ ಗತ್ತು  ಅದೇ ಸಂಮಯಮದಿಂದ ಮಾವುತನನ್ನು ತನ್ನ ಮೇಲೆ ಹೊತ್ತುಕೊಂಡು ತನ್ನ ಬಹುಗಾತ್ರ ದೇಹವನ್ನು ಲೆಕ್ಕಿಸದೆ ಅವನ ಆಣತಿಗೆ ತಲೆಬಾಗುತ್ತಾ!   ಆಗ ಊರಲ್ಲಿರುವ ಶ್ವಾನ ಬಳಗವೇ ಅದನ್ನು ಮೊದಲು ಸ್ವಾಗತಿಸುವದು!  ತಮ್ಮ ಅಸಹನೆಯನ್ನು ಹೊಳಿಡುವದರ ಮೂಲಕ ಹೊರಹಾಕುತ್ತಾ .ಆ ಗಜರಾಜನನ್ನು ಕಂಡರೆ ಈ ಶ್ವಾನ ಪಡೆಗೆ ಎಕೆ ಅಂತಹ ಕೋಪವೋ ನಾ ಅರಿಯೆ ಮಾರುದೊರದಲ್ಲಿ ನಿಂತು ಒಂದೇ ಉಸಿರಿನಲ್ಲಿ ಹೊಳಿಡುತ್ತವೆ !? ಇದ್ಯಾವುದನ್ನೊ ಗಜರಾಜ ಗಮನಿಸುವದಿಲ್ಲ ತನ್ನ ಶಕ್ತಿಯನ್ನೊ  ಆ ತೃಣಮಾತ್ರಗಳ ಮೇಲೆ ಪ್ರಯೋಗಿಸುವ ಗೋಜಿಗೊ ಹೊಗುವದಿಲ್ಲ     ಗಜರಾಜ ಬೀದಿಯಲ್ಲಿ ಬರುತ್ತಿದ್ದರೆ ಅದನ್ನು ನೋಡುವದೇ ಒಂದು ಸೊಬಗು . ಎಂದಿನಂತೆ ನಿಧಾನವಾಗಿ ಸಾಗುತ್ತದೆ ಅವನ ನಡಿಗೆಗೆ ಅವನ ಕೊರಳಲ್ಲಿ ರುವ ಗಂಟೆಯ ನಾದವೋ ಜೊತೆಯಾಗಿರುತ್ತದೆ ತಲೆ ಬಾಗಿದವರಿಗೆ ಆಶಿರ್ವದಿಸುತ್ತಾ.ಹಣ್ಣು ,ಬೆಲ್ಲ ನೀಡಿದರೆ ವಿನಮ್ರವಾಗಿ ಸ್ವೀಕರಿಸುತ್ತಾ  ಹಣ ನೀಡಿದರೆ ತನ್ನ ಒಡೆಯನಿಗೆ ಕೊಡುತ್ತಾ !      ಎಂತಹ ಗುಣ ಮನುಜರು ಕಲಿಯಬೇಕು ಎನಿಸುತ್ತದೆ ಇರಲಿ  ಮಠದ ಆನೆ ಬಂತೆದರೆ ನನ್ನ ಪುತ್ರನಿಗೊ ಎಲ್ಲಿಲ್ಲದ ಹರ್ಷ .ಪಟಪಟನೆ ಓಡಿಹೊಗಿ ನನ್ನ ಪುಟಾಣಿ ಅದರ ಮುಂದೆ ನಿಲ್ಲುತ್ತಾನೆ ನನ್ನೊ ಕೆರೆದ್ಯೊಯಿದು “ಮಮ್ಮಿ ಬಾಹುಬಲಿ ,ಮಮ್ಮಿ ಬಾ ಬಾಹುಬಲಿ ” ಎನ್ನುತ್ತಾ   ಬಾಹುಬಲಿ ೨ ಚಿತ್ರದಲ್ಲಿ ನಾಯಕ ಆನೆಯನ್ನು  ಅದರ ಸೊಂಡಿಲಿನ ಮೂಲಕ ಎರುತ್ತಾನೆ ಇದು ಪ್ರತಿ ಬಾರಿ ಆನೆ ಬಂದಾಗಲೂ ಅವನು ಅದರ ಸೊಂಡಿಲನ್ನು ಗಮನಿಸುತ್ತಾ ನಿಲ್ಲುತ್ತಾನೆ …!!ನನ್ನ ಬಾಹುಬಲಿ ಆನೆಯನ್ನು ಮುಟ್ಟಲು ,ಅವನಿಗೆ ಕುತೊಹಲ ನನಗೊ ಅಷ್ಟು ದೈತ್ಯಾಕಾವನ್ನು ಹತ್ತಿರದಿಂದ ನೋಡಿ ತಳಮಳ ಟಿ.ವಿ ಯಲ್ಲಿ ನೋಡುವದು ಬೇರೆ  ಈಗ real zoom ಅಲ್ಲಿ ನೋಡುವದೇ ಬೇರೆ.              ಗಜರಾಜ ಮಾತ್ರ ಯಾವುದನ್ನು ಗಮನಿಸದೆ  ವಿನಮ್ರತೆಯಿಂದ ನಿಂತಿರುತ್ತಾನೆ  ಹಣ್ಣನ್ನು ಸ್ವೀಕರಿಸಿ, ಆಶೀರ್ವದಿಸುತ್ತಾನೆ  ಅವನಿಗಾಗಿ ಕಾಯುತ್ತಿರುವವರ ಬಳಿಸಾಗುತ್ತಾನೆ    ಭಕ್ತಗಣ ಎಷ್ಟೇ ದೊಡ್ಡ ದಿದ್ದರೂ ಎಂತಹ ವಾದ್ಯಗಳ ಘೋಷ ಮೊಳಗಿದ್ದರೊ ,ತನ್ನ ಆಗಾಧ ಶಕ್ತಿಯನ್ನು ಮರೆತು,ಮೃಗತ್ವ ತೊರೆದು , ಜನಮಾನಸದಲ್ಲಿ ಬೇರೆಯುತ್ತಾನೆ..‌!!            ಗಜರಾಜ ಹಲವು ಮಾತುಗಳನ್ನು ತನ್ನ ಮೌನದಿಂದಲೇ ಹೇಳುತ್ತಾನೆ ಅನಿಸುತ್ತದೆ  ನನಗೆ .ನಮ್ಮಲ್ಲಿ ಒಂದು ಮಾತು ಇದೆ “ಆನೆ ಹೊಗುತ್ತಿರುತ್ತದೆ,ಶ್ವಾನ ಬೊಗಳುತ್ತಿರುತ್ತದೆ” ಅಂತ ಇದು ಬಹಳ ಅರ್ಥ ಗರ್ಭಿತ ಮಾತು ಅಲ್ಲವೆ? .ಲೋಕದಲ್ಲಿ    ಟೀಕೆ-ಹೊಗಳಿಕೆ, ವಿಮರ್ಶೆ ,ನಿಂದನೆ , ಸಹಜ ಅದಕ್ಕೆ ನಮ್ಮ ಗುರಿಯನ್ನು ಬಿಟ್ಟು ಶಕ್ತಿ ,ಅಥವಾ ಯುಕ್ತಿ ಪ್ರದರ್ಶನ ಎಕೆ ಮಾಡಬೇಕು ? ನಿಂದಿಸುವರು ,ತೆಗಳುವರು ಇರಲಿ ನಾವು ನಮ್ಮ ಗಮನ ನಮ್ಮ ಸಾಧನೆತ್ತ  ಹಾಗೊ ನಮ್ಮ ಕೆಲಸದತ್ತ ಇರಬೇಕು .                ಆನೆ ಅಷ್ಟು ಶಕ್ತಿ ಶಾಲಿಯಾದರೂ ಶ್ವಾನಗಳ ವಿರುದ್ದ ನಿಲ್ಲುವದಿಲ್ಲ .ಮಾವುತನ ಆಣತಿ ಮೀರುವದಿಲ್ಲ ….ಅದರ ತಾಳ್ಮೆ ಕೆಟ್ಟಿತೆಂದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ …!! ಇದು ನಮ್ಮೆಲ್ಲರಿಗೊ ಗೊತ್ತು ಅಂತಹ ಗಜರಾಜ ಶಾಂತ ಮೂರ್ತಿ ಯಾಗಿ ನಮ್ಮೆದರು ನಿಂತಾಗ ….. ಆ ದೈವವೇ ಬಂದತೆ ಭಾಸವಾಗುತ್ತದೆ .ಪ್ರಾಣಿ ಯಾದರೊ ಹೃದಯದ  ಭಾಷೆ ಅರಿಯುತ್ತದೆ ….!!! ಅದರೆ ನಾವು ಒಮ್ಮೊಮ್ಮೆ  ಮನುಷ್ಯತ್ವ ಮರೆತು ಬದುಕುತ್ತೆವೆ ….!!?? ನಮ್ಮವರ ಮರೆಯುತ್ತೆವೆ …ಜವಾಬ್ದಾರಿ ಯಿಂದ ನುಣುಚಿಕೊಳ್ಳುತ್ತೆವೆ … ಪ್ರಾಣಿ ಪಕ್ಷಿ ಗಳಲ್ಲಿ ಇರುವ ಪ್ರೀತಿ ಬಾಂಧವ್ಯ ನಮ್ಮಲ್ಲಿ    ನೇಪಥ್ಯಕ್ಕೆ ಸರಿಯುತ್ತಿದೆ ದಿನ ಕಳೆದಂತೆ  ಹಣ ಅಧಿಕಾರ ದಿಂದ ಸ್ನೇಹ ,ಸಂಬಂಧ ಅಳೆಯುತ್ತೆವೆ ,ನಮ್ಮ ನಮ್ಮಲ್ಲೆ ಕೋಟೆ ಕಟ್ಟಿಕೊಳ್ಳುತ್ತೇವೆ ಮಾನವೀಯತೆ ತೊರೆದು ಜೀವಿಸುತ್ತಿದ್ದೆವೆ ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳತ್ತೆವೆ …..ನಮಗೆ ಬದುಕಲು ಹಲವು ಅಯಾಮಗಳಿವೆ ಪ್ರಣಿಗಳಿಗೆ ನಮ್ಮಂತೆ ಯಾವ ಸೌಲಭ್ಯ ಇಲ್ಲ ಹಣ ,ಆಸ್ತಿ, ಮೊಬೈಲ್, ಸಾಮಾಜಿಕ ಜಾಲತಾಣ , ಯಾವುದೊ ಇಲ್ಲ …!! ಅದರೊ ಅವು ಬದುಕುತ್ತವೆ ನಾವು ಸಾಯುತ್ತೆವೆ ಇಲ್ಲ ಸೋಲುತ್ತೇವೆ .ಸೋಲು ಗೆಲುವಿನ ಮೆಟ್ಟಿಲು ಎಂಬು ಅರಿಯಲು ವಿಫಲವಾಗುತ್ತೇವೆ           “ಇದು ಮಾನವ ಜನ್ಮ ಹಾಳುಮಾಡಿಕೊಳ್ಳ ಬೇಡಿ ಹುಚ್ಚಪ್ಪಗಳಿರಾ ” ಎಂಬ ದಾಸರ ನಾಣ್ಣುಡಿಯನ್ನು ಗಜರಾಜ ನಮಗೆ ಹೇಳಿಹೋದಂತೆ  ಅನಿಸುತ್ತದೆ. ಪ್ರಾಣಿ ಗಳಿಂದ ಜನರಿಗೆ ಅಗಾಗ , ತೊಂದರೆ ಅದರೆ ಅದರೆ ನಮ್ಮಲ್ಲೆ ಬೇಕಾದಷ್ಟೊ ನಿತ್ಯ ನಡೆಯುತ್ತವೆ ಹಲವು ರೊಪದಲ್ಲಿ ….!!ಯಾವ ಪ್ರಾಣಿ ಪಕ್ಷಿ ಯನ್ನು ಅನ್ಯಥಾ  ಕೆಣಕುವದು ತಪ್ಪು ಅವಕ್ಕೊ ನಮ್ಮಂತೆ ಬದುಕಲು ಹಕ್ಕಿದೆ ಈ ಜೀವ ಜಗತ್ತಲ್ಲಿ ಅದರದ್ದೇ ಆದ ನಿರ್ದಿಷ್ಟ ಜವಾಬ್ದಾರಿ ಇದೆ .ಎಂಬುದನ್ನು ನಾವು ಮನದಟ್ಟು ಮಾಡಿ ಕೊಳ್ಳಬೇಕು .                      ಗಜರಾಜನ  ಆಗಮನ ಕ್ಕಾಗಿ ಅವನ ಘಂಟೆಯ ನಾದವನ್ನು ನನ್ನ ಪೋರ ಮತ್ತೆ  ಕಾಯುತ್ತಿರುತ್ತಾನೆ .ನನಗೆ ಗಜರಾಜನ ಮಾತುಗಳು ಅವನು ಹೊದ ದಾರಿಯಲ್ಲೆಲ್ಲಾ ಮಾರ್ದನಿಸುತ್ತಿದೆ ಎನಿಸುತ್ತದೆ *******                                           

ಪ್ರಬಂಧ Read Post »

ಇತರೆ

ನೆನಪು

ಜ್ಯೋತಿಬಾ ಫುಲೆಯವರ ಜಯಂತಿ “ಜ್ಯೋತಿ ಬೆಳಗೋಣ ಬನ್ನಿ”          ಏಪ್ರೀಲ ತಿಂಗಳು ನಿಜಕ್ಕೂ ಭಾರತ ದೇಶಕ್ಕೆ ಎರಡು ತಾರೆ ನೀಡಿತು. ಒಬ್ಬರು ಮಹಾಮಾನವ ಬಾಬಾಸಾಹೇಬ ಅಂಬೇಡ್ಕರರು ಮತ್ತು ಇನ್ನೊಬ್ಬರು ಕ್ರಾಂತಿಜ್ಯೋತಿ ಮಹಾತ್ಮಾ ಜ್ಯೋತಿಭಾ ಫುಲೆ. ಜ್ಯೋತಿರಾವರು ಹುಟ್ಟಿದ್ದು ೧೧ ಏಪ್ರೀಲ ಮತ್ತು ಅಂಬೇಡ್ಕರರು ಹುಟ್ಟಿದ್ದು ೧೪ ಏಪ್ರೀಲ. ದಮನಿತ ಮತ್ತು ಶೋಷಿತ ಸಮಾಜದ ಏಳಿಗೆಗೆ ಶ್ರಮಿಸಿ, ಅಂಧಕಾರವನ್ನು ಹೋಗಲಾಡಿಸಿ, ದೇಶದ ಆಂತರಿಕ ಸ್ವಾತಂತ್ರö್ಯ ಮತ್ತು ಸಾತ್ವಿಕ ಸ್ವಾತಂತ್ರಕ್ಕೆ ಹೋರಾಡಿದ ಇರ್ವರೂ ತಾರೆಗೆ ಸಮಾನರು. ಅಂಬೇಡ್ಕರರಿಗೆ ಆದರ್ಶರಾದ ಜ್ಯೋತಿರಾವರು ಭಾರತದ ಆಧುನಿಕತೆಗೆ ಹಾಕಿದ ಬದ್ರ ಬುನಾದಿ ಇಂದು ದೇಶವನ್ನು ಜಗತ್ತಿನಲ್ಲಿ ಮಿನುಗುವಂತೆ ಮಾಡಿದೆ.                        ಫುಲೆಯವರು ೧೧ ಏಪ್ರೀಲ್ ೧೮೨೭ ರಂದು ಮಹಾರಾಷ್ಟದ ಸಾತಾರಾ ಜಿಲ್ಲೆಯ ‘ಕಟ್ಗುಣ’ ಹಳ್ಳಿಯಲ್ಲಿ ತರಕಾರಿ ಮಾರುವವನ ಮನೆಯಲ್ಲಿ ಜನಿಸಿದರು. ಸಮಾನತೆ ಬೋಧಿಸಿದ ಸಂತ ತುಕಾರಾಮ, ಸಮಾನತೆಯ ತತ್ವದಡಿಯಲ್ಲಿ ರಾಜ್ಯ ಸ್ಥಾಪಿಸಿದ ಶಿವಾಜಿ ಮಹಾರಾಜರು, ಅನ್ಯಾಯದ ವಿರುದ್ಧ ಹೋರಾಡಿದ ಮಾರ್ಟಿನ್-ಲೂಥರ್-ಕಿಂಗ್ ಮತ್ತು ಮಾನವ ಹಕ್ಕು ಹೋರಾಟಗಾರ ಲೇಖಕ ಥಾಮಸ್ ಪೇನ್‌ರ ಪ್ರಭಾವಕ್ಕೆ ಒಳಗಾಗಿ ಭಾರತ ದೇಶದಲ್ಲಿ ದಮನಿತ ಮತ್ತು ಶೋಷಿತ ವರ್ಗದ ದಂಡನಾಯಕನಾಗಿ ಒಂಟಿ ಸಲಗದಂತೆ ಕಾದಾಡಿದ ವೀರ. ಕುಟುಂಬದ ಮತ್ತು ಸಮಾಜದ ಎಷ್ಟೆ ಒತ್ತಡ ಇದ್ದರೂ ಅತ್ಯಂತ ಜಿದ್ದಿನಿಂದ ಶಿಕ್ಷಣ ಪಡೆದರು. ನೌಕರಿ ಮಾಡುತ್ತಾ ಆರಾಮಾಗಿ ಇರಬಹುದಿತ್ತು. ಆದರೆ ಹಾಗೆ ಮಾಡದೆ ಸಮಾಜ ಸೇವೆಗೆ ತಮ್ಮನ್ನು ತಾವು ಮುಡುಪಾಗಿಟ್ಟರು.                ೧೮೪೮ರಲ್ಲಿ ಜ್ಯೋತಿರಾವರು ತಮ್ಮ ಮೇಲ್ವವರ್ಗದ ಆತ್ಮೀಯ ಸ್ನೇಹಿತನ ಮದುವೆಗೆ ಹೋದಾಗ ಸಂಭವಿಸಿದ ಅವಮಾನವು ಅವರ ಕಣ್ಣು ತೆರೆಸಿತು. ಈ ಅನಿಷ್ಠ ರೂಢಿ-ಪರಂಪರೆ ಮತ್ತು ಜಾತಿವ್ಯವಸ್ಥೆ ಮಣ್ಣುಗೂಡದೆ ಸಮಾಜದ ಮತ್ತು ದೇಶದ ಏಳಿಗೆ ಸಾಧ್ಯವಿಲ್ಲ. ಇದಕೆಲ್ಲಾ ಕಾರಣ ಅಜ್ಞಾನ. ಅಜ್ಞಾನ ತೊಲಗಬೇಕಾದರೆ ವಿದ್ಯೆಯೆ ಬಹುದೊಡ್ಡ ಅಸ್ತç ಎಂದು ತಿಳಿದು ಸಮಾಜದ ಪ್ರತಿಯೊಂದು ವರ್ಗಕ್ಕೆ ಶಿಕ್ಷಣ ಸಿಗುವಂತೆ ಪಣ ತೋಡುತ್ತಾರೆ.   “ವಿದ್ಯೆಯಿಲ್ಲದೆ ಮತಿ ಹೋಯಿತು ಮತಿ ಇಲ್ಲದೆ ನೀತಿ ಹೋಯಿತು ನೀತಿ ಇಲ್ಲದೆ ಗತಿ ಹೋಯಿತು ಗತಿ ಇಲ್ಲದೆ ವಿತ್ತ ಹೋಯಿತು ವಿತ್ತವಿಲ್ಲದೆ ಶೂದ್ರನು ಕುಸಿದ.             ಇಷ್ಟೆಲ್ಲಾ ಒಂದು ಅವಿದ್ಯೆ ಮಾಡಿತೆಂದು ಅವರು ಆ ವರ್ಷವೆ ಅಗಸ್ಟ ೧೮೪೮ ರಲ್ಲಿ ಪುಣೆಯಲ್ಲಿ ಶಾಲೆಯನ್ನು ತೆರೆಯುತ್ತಾರೆ. ಶಾಲೆಯಲ್ಲಿ ಪಾಠಕ್ಕೆ ಪತ್ನಿ ಸಾವಿತ್ರಿಬಾಯಿ ಫುಲೆಯವರಿಗೆ ಸ್ವತಃ ವಿದ್ಯೆ ಕಲಿಸಿ ದೇಶದ ಪ್ರಥಮ ಶಿಕ್ಷಕಿಯನ್ನಾಗಿ ಮಾಡುತ್ತಾರೆ. ಶಾಲೆಯ ಮುಖ ನೋಡದ ಸಾವಿತ್ರಿ ಪತಿಯ ವಿಚಾರಗಳಿಗಾಗಿ ತನ್ನ ಜೀವನವನ್ನೆ ಮುಡುಪಾಗಿಟ್ಟ ಧೀಮಂತ ಮಹಿಳೆ. ಶಾಲೆ ಕಲಿಸಲು ಹೋರಟಾಗ ಮೇಲ್ವರ್ಗದ ಕಿಡಗೇಡಿತನಕ್ಕೆ ಭಯಪಡದೆ ತಮ್ಮ ಕಾಯಕ ಚಾಲ್ತಿಯಿಟ್ಟರು. ಈ ಕಾರಣಕ್ಕೆ ಅವರಿಗೆ ಕುಟುಂಬದಿಂದ ಬಹಿಷ್ಕಾರಕ್ಕೆ ಒಳಗಾಗಬೇಕಾಯಿತು. ಅದಕ್ಕೂ ಅಂಜದ ಅವರು ಮುಂದೆ ೧೮೫೧ ರಲ್ಲಿ ಹೆಣ್ಣು ಮಕ್ಕಳಿಗಾಗಿ ಮತ್ತೊಂದು ಶಾಲೆಯನ್ನು ಪ್ರಾರಂಭ ಮಾಡಿದರು. ಮೊದಲಿಗೆ ಸಮಾಜದ ಭಯದಿಂದ ಕೇವಲ ೮ ಹೆಣ್ಣು ಮಕ್ಕಳು ಮಾತ್ರ ಶಾಲೆಗೆ ಬರುತಿದ್ದರು. ಆದರೆ ಇಂದು ದೇಶದಲ್ಲಿ ಕೋಟ್ಯಾವಧಿ ಹೆಣ್ಣು ಮಕ್ಕಳು ವಿದ್ಯೆ ಪಡೆದುಕೊಳ್ಳುತಿದ್ದಾರೆ, ಇದರ ಶ್ರೇಯ ನಿಜಕ್ಕೂ ಈ ದಂಪತಿಗಳಿಗೆ ಸಲ್ಲಬೇಕು.                       ಜ್ಯೋತಿರಾವ ಇಷ್ಟಕ್ಕೆ ನಿಲ್ಲದೆ ೧೮೫೨ ರಲ್ಲಿ ಅಸ್ಪೃಶ್ಯ ಜಾತಿಗಳಾದ ಮಹಾರ ಮತ್ತು ಮಾಂಗ ಮಕ್ಕಳಿಗೆ ಶಾಲೆಯನ್ನು ತೆರೆದರು. ದಾರಿದ್ರ್ಯ, ಬಡತನ, ಮೇಲು-ಕೀಳು, ಮೂಡನಂಬಿಕೆ ನಿರ್ಮೂಲನೆ ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಕೃಷಿಕ ಮತ್ತು ಕಾರ್ಮಿಕ ವರ್ಗದವರಿಗೂ ಜ್ಞಾನದ ಬಾಗಿಲನ್ನು ತೆರೆದರು. ಏಕೆಂದರೆ ಬ್ರಿಟೀಷ ಸರಕಾರವು ಕೃಷಿಕ ಮತ್ತು ಕಾರ್ಮಿಕರ ಅಜ್ಞಾನದ ಲಾಭ ಪಡೆದುಕೊಂಡು ವಿಪರಿತ ಕಂದಾಯ ವಸೂಲಿ ಮಾಡುತ್ತಿತ್ತು. ಕಷ್ಟ ಮಾಡುವದು ಇವರು ಆದರೆ ವಸೂಲಿ ಮಾಡುವ ಅಧಿಕಾರಿಗಳು ಮಾತ್ರ ಮೇಲ್ವರ್ಗದವರು. ಅದಕ್ಕಾಗಿ ಫುಲೆಯವರು ಪ್ರಥಮ ಬಾರಿಗೆ ಬ್ರಿಟಿಷರ ವಿರುದ್ಧ ಈ ಬಗ್ಗೆ ಧ್ವನಿ ಎತ್ತಿದರು. ಜಮೀನ್ದಾರ ಪದ್ಧತಿ, ಸಾಮಂತಶಾಹಿ, ಸಾಹುಕಾರ ಪದ್ಧತಿ ಹೋಗಲಾಡಿಸಬೇಕು ಮತ್ತು ಕೃಷಿಕರಿಗೆ ಅತ್ಯಾಧುನಿಕ ಸಲಕರಣೆ ಕೊಡಬೇಕು ಎಂದು ನೇರ ಶಬ್ದಗಳಲ್ಲಿ ಕೇಳಿಕೊಂಡರು.                    ಜ್ಞಾನ ಮುಚ್ಚಿಟ್ಟು ಉಳಿದ ಸಮಾಜದ ಕತ್ತು ಹಿಸುಕುವ ಮೇಲ್ವರ್ಗದ ಜೊತೆ ಬಹಿರಂಗ ಸಮರ ಸಾರಿದ್ದರು. ಪ್ರಥಮ ಬಾರಿಗೆ ಪುರೋಹಿತನಿಲ್ಲದ ಮದುವೆಯನ್ನು ಮಾಡಿಸಿ ತಮ್ಮ ಸಮಾಜದಿಂದ ಬಹಿಸ್ಕೃತಗೊಂಡರು. ಬಾಲ್ಯವಿವಾಹದ ನಿರ್ಭಂದನೆಗೆ ಹೋರಾಡಿದರು. ಬಾಲ್ಯವಿವಾಹ ಪರಿಣಾಮವೆಂದರೆ ಸಮಾಜದಲ್ಲಿ ವಿಧವೆಯರ ಸಂಖ್ಯೆ ಹೆಚ್ಚಾಗಿತ್ತು. ಅಂದಿನ ಸಮಾಜವು ಈ ವಿಧವೆಯರಿಗೆ ಅತ್ಯಂತ ಹೀನವಾಗಿ ನೋಡಿಕೊಳ್ಳುತಿತ್ತು. ಅವರನ್ನು ಕೇಶಮುಂಡನೆ ಮಾಡಿಸಿ ಕತ್ತಲೆ ಕೋಣೆಯಲ್ಲಿ ಇಡಲಾಗುತಿತ್ತು. ಯೌವನದಲ್ಲಿಯೆ ವಿಧವೆಯರಾಗಿ ಅನೈತಿಕ ಮಾರ್ಗದಿಂದ ಗರ್ಭೀಣಿಯಾದರೆ ನವಜಾತ ಮಕ್ಕಳನ್ನು ಬಿಸಾಕಬೇಕಾಗುತ್ತಿತ್ತು ಇಲ್ಲದಿದ್ದರೆ ಎಲ್ಲಾದರು ಬಿಡಬೇಕಾಗುತ್ತಿತ್ತು. ಫುಲೆಯವರು ಇವರಿಗಾಗಿ ಮುಂದೆ ಬಂದು ವಿಧವೆ ಮತ್ತು ಮಕ್ಕಳ ಸಲುವಾಗಿ ೧೮೬೩ರಲ್ಲಿ ಅನಾಥಾಲಯ ತೆರೆದರು. ೧೮೭೩ ರಲ್ಲಿ ಬ್ರಾಹ್ಮಣ ವಿಧವೆಗೆ ಅನೈತಿಕ ಮಾರ್ಗದಿಂದ ಜನಿಸಿದ ಮಗುವನ್ನು ದತ್ತು ತೆಗೆದುಕೊಂಡು ಸಮಮಾಜದಲ್ಲಿ ಹೊಸ ಆದರ್ಶ ನಿರ್ಮಾಣ ಮಾಡಿದರು.                     ಸಮಾಜಕ್ಕೆ ಸತ್ಯದ ಅರಿವಾಗಬೇಕೆಂದು ೧೮೭೩ ರಲ್ಲಿ ‘ಸತ್ಯಶೋಧಕ ಸಮಾಜ’ ದ ಸ್ಥಾಪನೆ ಮಾಡುತ್ತಾರೆ. ಈ ಮೂಲಕ ಸಮಾಜದಲ್ಲಿಯ ಅನಿಷ್ಠ ಪದ್ಧತಿಗಳನ್ನು ಮೊಟಕುಗೊಳಿಸಿ ಸುಧಾರಣೆ ಮಾಡುವಂತೆ ಬ್ರಿಟೀಷ ಸರಕಾರಕ್ಕೆ ಶಿಪಾರಸು ಮಾಡಿದಾಗ ಸರಕಾರವು ‘ಎಗ್ರಿಮೆಂಟ್ ಆಕ್ಟ’ ಪಾಸು ಮಾಡುತ್ತದೆ. ೧೮೮೮ ರಲ್ಲಿ ಇಂಗ್ಲೇಂಡ್ ರಾಣಿಯ ಪುತ್ರ ಭಾರತ ಭೇಟಿಗೆ ಬಂದಿದ್ದರು. ಅವರ ಕಾರ್ಯಕ್ರಮದಲ್ಲಿ ಫುಲೆಯವರು ಒಕ್ಕಲಿಗರ ಪಾರಂಪರಿಕ ವೇಷ-ಭೂಷದಲ್ಲಿ ಹೋಗಿ ದೇಶದ ಪರಿಸ್ಥಿತಿಯ ಬಗ್ಗೆ ರಾಣಿಯವರಿಗೆ ಮನವರಿಕೆ ಮಾಡಿಕೊಟ್ಟರು.                         ‘ರಾಷ್ಟಿçಯ ಕಾಂಗ್ರೇಸ್’ ಪಕ್ಷವು ೧೮೮೯ರ ತನ್ನ ಸಮಾವೇಶ ಮುಂಬಯಿಯಲ್ಲಿ ಇಟ್ಟಿಕೊಂಡಿತು. ಅಲ್ಲಿ ಕೂಡ ಫುಲೆಯವರು ರೈತನ ಭೆತ್ತ ಮತ್ತು ಹುಲ್ಲಿನ ಗಂಟಿನ ಜೊತೆ ಹೋಗಿ ವಿರೋಧ ವ್ಯಕ್ತ ಪಡಿಸಿದ್ದರು. ರಾಷ್ಟಿçಯ ಕಾಂಗ್ರೇಸ ಪಕ್ಷವನ್ನು ವಿರೋಧ ಮಾಡಿದವರು ಮೊದಲಿಗರೆಂದು ಹೇಳಬಹುದು. ಏಕೆಂದರೆ ಇದರಲ್ಲಿ ಇರುವವರೆಲ್ಲಾ ಮೇಲ್ವರ್ಗದದವರು, ಸಮಾಜದ ಆಂತರಿಕ ಸ್ವಾತಂತ್ರದ ವಿಷಯ ಇರಲಿಲ್ಲ. ಅದಕ್ಕಾಗಿ ಇವರು ಈ ಪಕ್ಷದ ದೇಶಕ್ಕೆ  ಯಾವ ಅವಶ್ಯಕತೆ ಇಲ್ಲವೆಂದು ಹೇಳಿದ್ದರು.                   ಈಶ್ವರ ಒಬ್ಬನೆ ಇದ್ದಾನೆ ಅವನಿಗಾಗಿ ದಲ್ಲಾಲಿಗಳ ಅವಶ್ಯಕತೆ ಇಲ್ಲ. ಅದಕ್ಕಾಗಿ ಸಮಯ ಮತ್ತು ದುಡ್ಡು ವ್ಯರ್ಥ ಮಾಡದೆ, ವಿದ್ಯೆಯ ಉನ್ನತಿಗಾಗಿ ಶ್ರಮಿಸಿರಿ ಅದುವೆ ಶಾಂತಿ ನೆಲೆಸಲು ಸಹಕಾರಿ ಆಗುತ್ತದೆ ಎಂದು ಹೇಳಿದ್ದರು. ಸಮಾಜದ ಉನ್ನತಿಯ ಜೊತೆಗೆ ಇವರ ಸಾಹಿತ್ಯ-ಕೃಷಿಯು ಅತ್ಯಂತ ಮಹತ್ವದ್ದಾಗಿದೆ. ಅವರು ಬರೆದ ಶಿವಾಜಿ ಪುವಾಡ, ಬ್ರಾಹ್ಮಣರ ಕುಯುಕ್ತಿ, ದಾಸ್ಯ, ರೈತನ ಚಾಟ, ಸಾರ್ವಜನಿಕ ಸತ್ಯ-ಧರ್ಮ ಇಂತಹ ಹಲವಾರು ಮಹತ್ವದ ಕೃತಿಗಳು ಇಂದಿಗೂ ಅದೆಷ್ಟೋ ಸಲ ವಿಮರ್ಶೆಗೆ ಬರುತ್ತಿವೆ. ಬದುಕಿನ ಕೊನೆಗೆ ಇವರು ಪಾರ್ಶ್ವವಾಯಿವಿನ ಆಘಾತದಿಂದ ತಮ್ಮ ಬಲಗೈ ಶಕ್ತಿ ಹೀನವಾದಾಗ ಎಡಗೈಯಿಂದ ಸಮಾಜ ಪ್ರಬೋಧನೆ ಕುರಿತು ಬರೆದ ಮಹಾನುಭಾವರು. ಇಂತಹ ಮಹಾನ್ ಚೇತನ  ೨೮ ನವ್ಹೆಂಬರ ೧೮೯೦ಕ್ಕೆ ನಮ್ಮನ್ನು ಅಗಲಿದರು.                  ಇವರ ಆದರ್ಶ ಮುಂದೆ ಮಹಾರಾಷ್ಟç ಸಾಮಾಜಿಕ ಚಳುವಳಿಯ ಮುಖ್ಯ ಕೇಂದ್ರಬಿಂದು ಆಗುತ್ತದೆ. ಮಹಾತ್ಮಾ ಗಾಂಧೀಜಿ, ಶಾಹೂ ಮಹಾರಾಜ, ಇಂದಿನ ಛಗನ್ ಭುಜಬಳದ ವರೆಗೆ ಅನೇಕ ನಾಯಕರು ಇವರ ಕಾರ್ಯದ ಪ್ರೇರಣೆ ಪಡೆದಿದ್ದಾರೆ. ಕೆಲವರ ಅಭಿಪ್ರಾಯದಂತೆ ಮಹಾತ್ಮಾ ಗಾಂಧೀಜಿಯವರೆ ಇವರಿಗೆ ಪ್ರಥಮಬಾರಿಗೆ ‘ಮಹಾತ್ಮಾ’ ಎಂದು ಕರೆದರು. ಆದರೆ ೧೮೮೦ರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನೋಡಿ ಮುಂಬಯಿ ಸರಕಾರ ಮತ್ತು ಜನರು ಇವರಿಗೆ ‘ಮಹಾತ್ಮಾ’ ಎಂದು ಕರೆಯುತ್ತಾರೆ.                     ಪ್ಲೇಟೋ ಹೇಳಿದಂತೆ ‘ಅಜ್ಞಾನವು ಎಲ್ಲ ಕೆಡಕುಗಳ ಮೂಲ ಮತ್ತು ಮಹಾಮಾರಿ.’ ಆ ಅಜ್ಞಾನವನ್ನೆ ಕಿತ್ತೊಗೆಯಲು ಪ್ರಯತ್ನಸಿದ ಫುಲೆಯವರ ವಿಚಾರಗಳು ಇಂದು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬಂದಿವೆ ನಾವು ಭಾರತಿಯರು ಕೇಳಿಕೊಳ್ಳುವದು ಅವಶ್ಯಕವಾಗಿದೆ. ಸುಮಾರು ೧೭೫ ವರ್ಷಗಳ ಹಿಂದೆ ದೇಶಕ್ಕೆ ಬೆಳಕಿನ ಮಾರ್ಗ ತೋರಿಸಿದ ಜ್ಯೋತಿರಾವರ ಜ್ಯೋತಿಯನ್ನು ಇಂದಿಗೂ ಅದೆಷ್ಟೋ ಹುಳಗಳು ಆರಿಸುವ ಪ್ರಯತ್ನ ಮಾಡುತ್ತಿವೆ. ಅದಕ್ಕಾಗಿ ನಾವು ಭಾರತಿಯರು ಸತ್ಯವನ್ನು ಅರಿತುಕೊಂಡು ಅವರ ಜ್ಯೋತಿಯನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡಬೇಕಿದೆ. ಅವರು ಒಂದು ಮಾತನ್ನು ಸದಾ ಹೇಳುತ್ತಿದ್ದರು, “ಒಂದು ವೇಳೆ ಜನರು ನೀವು ಮಾಡುವ ಸಂಘರ್ಷದಲ್ಲಿ ಬಂದರೆ, ದಯವಿಟ್ಟು ಅವರ ಜಾತಿ ಕೇಳಬೇಡಿ.” ಆದರೆ ಇಂದು ನಾವು ಮುಂಜಾನೆ ‘ವಾಕಿಂಗ್’ ಹೋಗುವಾಗ ಸಹ ಜಾತಿ ನೋಡುತ್ತೇವೆ. ದೇಶದ ರಾಜಕಾರಣವಂತು ಹೇಳಲಿಕ್ಕೆ ಬಾರದಷ್ಷು ಹದಗೆಡುತ್ತಿದೆ. ಪ್ರತಿಯೊಂದನ್ನು ನಾವು ಜಾತಿ-ಧರ್ಮದ ಆಧಾರದ ಮೇಲೆ ನೋಡುತ್ತೇವೆ.              ಅಂದಶೃದ್ಧೆ ಎಷ್ಟರ ಮಟ್ಟಿಗೆ ನಮ್ಮಲ್ಲಿ ಹೂತಿದೆ ಅಂದರೆ ಮುಂಜಾನೆ ಎರಡು ಗಂಟೆಗಳ ಕಾಲ ಎಲ್ಲ ವಾಹಿನಿಗಳ ಭವಿಷ್ಯ ನೋಡದೆ ಹೊರಗೆ ಬರುವದಿಲ್ಲ. ಇಂದು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾದ ಯುವಕ ಬಂಧುಗಳು ಇಲ್ಲದ-ಸಲ್ಲದ ವಿಚಾರಗಳನ್ನು ಚರ್ಚೆ ಮಾಡುವದಕ್ಕಿಂತ, ನಾವು ನಿಜಕ್ಕೂ  ದಾಸ್ಯದಿಂದ ಮುಕ್ತರಾ..? ನಮಗೆ ಸ್ವತಂತ್ರ ಇದೆಯಾ..? ಸ್ತಿçಯರು ಮುಕ್ತರಾಗಿದ್ದಾರಾ..? ಬಾಲ್ಯವಿವಾಹ ಪದ್ಧತಿ ಕೊನೆ ಆಯಿತಾ..? ದೇಶ ಬಡತನ ಮುಕ್ತ ಆಗಿದೆಯೆ..? ದಾರಿದ್ರ್ಯ ಅಂದರೇನು..? ದೇಶದಲ್ಲಿ ಸಮಾನತೆಯೆ ಇದೆಯಾ..? ಯಾರಾದರೂ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರಾ? ನಿಜವಾದ ಧರ್ಮ ಮತ್ತು ದೇವರು ಯಾರು..? ಈ ಪ್ರಶ್ನೆಗಳನ್ನು ಕೇಳಿಕೊಂಡು ಅದಕ್ಕೆ ಉತ್ತರ ಕಂಡುಕೊಳ್ಳುವದು ಒಳ್ಳೆಯದೆಂದು ಅನಿಸುತ್ತದೆ. ಬಹುತೇಕ ಇಂದು ಕೊರೋನಾ ಮಹಾಮಾರಿ ಈ ಎಲ್ಲ ಪ್ರಶ್ನೆಗಳನ್ನು ಕೇಳುವಂತೆ ಮಾಡುತ್ತದೆ ಎಂಬುದು ನನ್ನ ಭಾವನೆ. ***************************************************   ಮಲಿಕಜಾನ ಶೇಖ                                                                                                                 

ನೆನಪು Read Post »

ಇತರೆ

ಪ್ರಸ್ತುತ

ಮೈಕ್ರೋವೈಟಾ ಸಿದ್ಧಾಂತ ಮತ್ತು ವೈರಸ್ ನಿಯಂತ್ರಣ ಗಣೇಶ್ ಭಟ್,ಶಿರಸಿ ಮೈಕ್ರೋವೈಟಾ ಸಿದ್ಧಾಂತ ಮತ್ತು ವೈರಸ್ ನಿಯಂತ್ರಣ ಒಂದು ಚಿಕ್ಕ ವೈರಾಣು ಜಗತ್ತನ್ನು ನಡುಗಿಸುತ್ತಿದೆ. ಪ್ರಕೃತಿಯನ್ನು ಜಯಿಸಿದ್ದೇನೆಂಬ ಮಾನವನ ಅಹಂಕಾರದ ಗುಳ್ಳೆಯನ್ನು ಒಡೆದಿದೆ. ಬಡವ, ಶ್ರೀಮಂತ, ಜಾತಿ, ಮತಗಳೆಂಬ ಮಾನವ ನಿರ್ಮಿತ ಕೃತಕ ಗೋಡೆಗಳು ವೈರಾಣುವಿನ ಅಬ್ಬರಕ್ಕೆ ನೆಲಕಚ್ಚಿವೆ. ಒಂದು ಶತಮಾನದ ಹಿಂದೆ ಮಾನವ ಕುಲವನ್ನು ಇನ್ಫ್ಲುಯೆಂಝಾ ರೋಗದ ಮೂಲಕ ಮಣಿಸಿದ್ದ ವೈರಾಣು ಕಲಿಸಿದ ಪಾಠವನ್ನು ಮರೆತಿದ್ದರಿಂದ ಬಹುಶಃ ಕಳೆದ ಎರಡು ದಶಕಗಳಿಂದೀಚೆಗೆ ಹೊಸ ಹೊಸ ರೂಪ ತಾಳಿ ವೈರಾಣು ದಾಳಿ ಇಡುತ್ತಿದೆ. ಸಾರ್ಸ್, ಎಬೋಲಾ, ಹಕ್ಕಿಜ್ವರ, ಹಂದಿಜ್ವರ, ಡೆಂಗ್ಯೂ, ಚಿಕನ್ಗುನ್ಯಾ ಇತ್ಯಾದಿ ರೋಗಗಳ ನಂತರ ಈಗ ಕೊರೊನಾ. ವೈರಸ್ನ ಒಂದು ರೂಪವನ್ನು ನಿಯಂತ್ರಿಸಿದ್ದೇವೆಂದು ಹೆಮ್ಮೆಪಡುವಷ್ಟರಲ್ಲಿ ಮತ್ತೊಂದು ಪ್ರಭೇದ ಕಾಣಿಸಿಕೊಳ್ಳುತ್ತಿದೆ. ರಾಜ್ಯಗಳ ನಡುವಿನ ಗಡಿ, ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿರೇಖೆಗಳು ಮಾನವರ ಓಡಾಟವನ್ನು ನಿಯಂತ್ರಿಸಬಹುದೇ ಹೊರತು ವೈರಾಣುಗಳ ಚಲನೆಯನ್ನಲ್ಲ. ಕೊರೊನಾ ವೈರಸ್ ಚೀನಾದಿಂದ ಹಬ್ಬಿತು ಎಂದು ಹೇಳಲಾಗುತ್ತದೆ. ಅಲ್ಲಿಯ ಬಾವಲಿಗಳಲ್ಲಿ ಈ ವೈರಸ್ ಇತ್ತು, ಮಾನವನ ದೇಹದಲ್ಲಿ ಸೇರಿಕೊಂಡ ನಂತರ ಅದರ ಪ್ರಕೋಪ ಹೆಚ್ಚಾಯಿತೆಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಬಾವಲಿಯಲ್ಲಿ ಎಂದಿನಿಂದ ಈ ವೈರಸ್ ಇತ್ತು? ಎಲ್ಲಿಂದ ಬಂತು? ಯಾಕೆ ಬಂತು ಇತ್ಯಾದಿಗಳಿಗೆ ಉತ್ತರ ಸಿಗುತ್ತಿಲ್ಲ. ಇಷ್ಟಾಗಿಯೂ ಈ ವೈರಸ್ಗಳಿಗೆ ಜೀವ ಇದೆಯೇ? ಪೃಥ್ವಿಯ ಮೇಲೆ ವಿಕಾಸಹೊಂದಿರುವ ಜೀವಜಾಲದಲ್ಲಿ ವೈರಸ್ನ ಸ್ಥಾನ ಎಲ್ಲಿ ಎಂಬುದಕ್ಕೆ ಇನ್ನೂ ಉತ್ತರ ಕಂಡುಕೊಳ್ಳಬೇಕಿದೆ. ಬರಿಗಣ್ಣಿಗೆ ಕಾಣಿಸದ ವೈರಸ್ಗಳು ಏಕಕೋಶ ಜೀವಿಗಳೇ ಅಥವಾ ಬರೀ ಪ್ರೋಟೀನ್ ಕಣಗಳೇ ಎಂಬ ಕುರಿತು ಚರ್ಚೆ ನಡೆದೇ ಇದೆ. ಇಂತಹ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಮೈಕ್ರೋವೈಟಾ ಸಿದ್ಧಾಂತ ನೀಡುತ್ತದೆ. ದಾರ್ಶನಿಕ ಶ್ರೀ ಪ್ರಭಾತರಂಜನ್ ಸರ್ಕಾರರು ೧೯೮೬ರ ಡಿಸೆಂಬರ್ ೩೧ರಂದು ತಮ್ಮ ಪ್ರವಚನದಲ್ಲಿ ‘ಮೈಕ್ರೋವೈಟಮ್-ದಿ ಮಿಸ್ಟೀರಿಯಸ್ ಎಮನೇಶನ್ ಆಫ್ ಕೋಸ್ಮಿಕ್ ಫ್ಯಾಕ್ಟರ್’ (microvitum- The mysterious emanation of cosmic factor) ಅಂದರೆ ವಿಶ್ವಶಕ್ತಿಯ ನಿಗೂಢ ಉದ್ಭವ-ಮೈಕ್ರೋವೈಟಮ್ ಎಂಬ ವೈಜ್ಞಾನಿಕ ವಿಷಯವನ್ನು ಪ್ರಥಮ ಬಾರಿಗೆ ಪ್ರಸ್ತುತಪಡಿಸಿ, ನಂತರದ ಹಲವಾರು ಪ್ರವಚನಗಳಲ್ಲಿ ಇನ್ನಷ್ಟು ವಿವರ ನೀಡಿದರು. ಅಣು, ಪರಮಾಣುಗಳೇ ಅತೀ ಚಿಕ್ಕ ಅಸ್ತಿತ್ವವೆಂದು ಮೊದಲು ನಂಬಲಾಗಿತ್ತು. ಪ್ರೋಟಾನ್, ಇಲೆಕ್ಟ್ರಾನ್, ನ್ಯೂಟ್ರಾನ್ಗಳು ಅಣುವಿಗಿಂತ ಸೂಕ್ಷ್ಮವೆಂದು ಈಗ ಹೇಳಲಾಗುತ್ತದೆ. ಇವುಗಳಿಗಿಂತ ಸೂಕ್ಷ್ಮವಾದ ಅಸ್ತಿತ್ವ, ಭೌತಿಕ ಮತ್ತು ಮಾನಸಿಕ ಸ್ತರಗಳಲ್ಲಿ ಇರುವ ಅಸ್ತಿತ್ವವನ್ನು ‘ಮೈಕ್ರೋವೈಟಮ್’ ಎಂದು ಹೆಸರಿಸಿದ ಶ್ರೀ ಸರ್ಕಾರರು, ಅದರ ಬಹುವಚನ ಶಬ್ದವಾಗಿ ಮೈಕ್ರೊವೈಟಾ ಎಂಬ ಪದವನ್ನು ಬಳಸಿದರು. ಮೈಕ್ರೊವೈಟಾವು ಭೌತಿಕ ಸ್ತರದ ಎಲೆಕ್ಟ್ರಾನ್ ಅಲ್ಲ, ಜೀವಕೋಶದ ಬಾಹ್ಯದ್ರವವೂ (ectoplasm) ಅಲ್ಲ. ಇವೆರಡರ ನಡುವಿನ ಸ್ಥಾನ ಅವುಗಳದ್ದು. ಅವಕ್ಕೆ ಜೀವ ಇದ್ದರೂ ಕೂಡ ಅವು ಏಕಕೋಶ ಜೀವಿಗಳೂ (protozoic) ಅಲ್ಲ. ಅಥವಾ ಜೀವಕೋಶಗಳು ಅಂಗಗಳಾಗಿ ವಿಂಗಡಣೆಗೊಳ್ಳುವಂಥವೂ (metazoic) ಅಲ್ಲ. ಜೀವೋದ್ಭವವಾಗಲು ಇಂಗಾಲದ ಕಣ ಇರಲೇಬೇಕೆನ್ನುವ ನಿಯಮ ಅವುಗಳಿಗೆ ಅನ್ವಯವಾಗದು. ಬದಲಿಗೆ ಲಕ್ಷಾಂತರ ಮೈಕ್ರೋವೈಟಾಗಳು ಸೇರಿ ಇಂಗಾಲದ ಅಣುವಿನ ಸೃಷ್ಟಿಯಾಗುತ್ತದೆ. ಮೈಕ್ರೋವೈಟಾಗಳ ಅಸ್ತಿತ್ವವನ್ನು ಅರಿಯಲು ಮಾನವನಿಗೆ ಸಾಧ್ಯವಿದೆ. ಆದರೆ ಅವುಗಳ ಉತ್ಪತ್ತಿಯ ಮೂಲ ಕಾರಣವನ್ನು ಕಂಡುಕೊಳ್ಳುವುದು, ಅವುಗಳನ್ನು ಸೃಷ್ಟಿಸುವುದು ಮಾನವನಿಗೆ ಸಾಧ್ಯವಾಗದು. ಆ ಕಾರಣಕ್ಕಾಗಿಯೇ ಮೈಕ್ರೋವೈಟಾವನ್ನು ವಿಶ್ವಶಕ್ತಿಯ ನಿಗೂಢ ಉದ್ಬವವೆಂದು ಶ್ರೀ ಸರ್ಕಾರರು ಹೇಳುತ್ತಾರೆ. ಮೈಕ್ರೋವೈಟಾಗಳ ಸೂಕ್ಷ್ಮತೆಯನ್ನು ಮೂರು ಹಂತಗಳಲ್ಲಿ ಗುರುತಿಸಲಾಗಿದೆ. ಮೊದಲನೆಯ ಹಂತವೆಂದರೆ ಬರಿಗಣ್ಣಿಗೆ ಕಾಣದ ಆದರೆ ಶಕ್ತಿಯುತ ಸೂಕ್ಷ್ಮದರ್ಶಕಗಳ (ಮೈಕ್ರೊಸ್ಕೋಪ್) ಮೂಲಕ ನೋಡಬಹುದಾದವು. ಇವುಗಳನ್ನು ವೈರಸ್ಗಳೆಂದು ಹೇಳಲಾಗುತ್ತದೆ. ವೈರಸ್ ಎಂಬ ಪದವು ಸ್ಪಷ್ಟತೆಯನ್ನು ಹೊಂದಿಲ್ಲದ ಕಾರಣಕ್ಕಾಗಿ ಮೈಕ್ರೋವೈಟಾ ಎಂಬ ಪದವನ್ನು ಬಳಸುವುದು ಸೂಕ್ತವೆಂಬುದು ಶ್ರೀ ಸರ್ಕಾರರ ಅಭಿಪ್ರಾಯ. ಎರಡನೆಯ ಹಂತದ ಮೈಕ್ರೋವೈಟಾಗಳು ಕಾರ್ಯವೈಖರಿ ಅಥವಾ ಅವು ಉಂಟುಮಾಡುವ ಪರಿಣಾಮದಿಂದಾಗಿ ಮಾನವನ ಗ್ರಹಿಕೆಗೆ ಬರುವಂಥವು ಅಂದರೆ ಅನುಭವ ವೇದ್ಯವಾಗುವಂಥವು. ಮೂರನೆಯ ಹಂತದ ಅತಿ ಸೂಕ್ಷ್ಮ ಮೈಕ್ರೋವೈಟಾಗಳು ಕೂಡ ಮಾನವನ ಗ್ರಹಿಕೆಯ ವ್ಯಾಪ್ತಿಯಲ್ಲೇ ಇರುತ್ತವಾದರೂ ಅದಕ್ಕಾಗಿ ವಿಶೇಷ ಅರಿವಿನ ಅಗತ್ಯವಿರುತ್ತದೆ. ಆಧ್ಯಾತ್ಮ ಸಾಧನೆಯಿಂದ ಮನಸ್ಸನ್ನು ವಿಕಾಸಗೊಳಿಕೊಂಡವರ ಕಲ್ಪನಾ ಶಕ್ತಿಯ ಅರಿವಿಗೆ ಈ ಅತಿ ಸೂಕ್ಷ್ಮ ಮೈಕ್ರೋವೈಟಾಗಳು ಬರುತ್ತವೆ. ಸೃಷ್ಟಿಗೆ ಪಂಚಭೂತಗಳು ಕಾರಣವೆಂದು ಹೇಳುತ್ತಾರೆ.ಅವುಗಳಲ್ಲಿ ಅತಿ ಸೂಕ್ಷ್ಮವಾದುದು ಆಕಾಶತತ್ವ. ಅದಕ್ಕಿಂತ ಸೂಕ್ಷ್ಮವಾದುದು ವಿಶ್ವಮನ. ಮೈಕ್ರೋವೈಟಾಗಳ ಸ್ಥಾನ ಇವೆರಡರ ನಡುವೆ ಇರುವುದರಿಂದ ಅವು ವಿಶ್ವದೆಲ್ಲೆಡೆ ಸಂಚರಿಸಬಲ್ಲವು. ಅವುಗಳ ಚಲನೆ ಬರೀ ಪೃಥ್ವಿಗೆ ಮಾತ್ರ ಸೀಮಿತವಾಗಿಲ್ಲ, ವಿವಿಧ ಗ್ರಹ, ಆಕಾಶ ಕಾಯಗಳು, ನಕ್ಷತ್ರ ಮಂಡಲ, ನಿಹಾರಿಕೆ ಮುಂತಾಗಿ ಇಡೀ ಬ್ರಹ್ಮಾಂಡವೇ ಮೈಕ್ರೋವೈಟಾಗಳ ತಾಣಗಳಾಗಿವೆ. ಮೈಕ್ರೋವೈಟಾಗಳು ಜೀವಿಗಳೇ ಆಗಿರುವುದರಿಂದ ಅವುಗಳಿಗೂ ಅಸ್ತಿತ್ವ, ಸಂಖ್ಯಾವೃದ್ಧಿ ಹಾಗೂ ಮರಣವಿದೆ.ಅವುಗಳ ಚಲನೆಗೆ ವಾಹಕದ ಅವಶ್ಯಕತೆ ಇದ್ದೇ ಇದೆ.ಕೆಲವು ಮೈಕ್ರೋವೈಟಾಗಳು ಏಕಕಾಲಕ್ಕೆ ವಿವಿಧ ವಾಹಕಗಳ ಮೂಲಕ ಚಲಿಸಬಲ್ಲವು. ರೂಪ, ಗಂಧ (ವಾಸನೆ/ಪರಿಮಳ), ಸ್ಪರ್ಶ, ಶಬ್ದಗಳು ಅವುಗಳ ಸಾಮಾನ್ಯ ವಾಹಕಗಳು. ಅತೀ ಸೂಕ್ಷ್ಮವಾದ ಮೈಕ್ರೊವೈಟಾಗಳು ವಿಚಾರಗಳ ಮೂಲಕ ಕೂಡ ಹರಡಬಲ್ಲವು. ಅಂದರೆ ಪ್ರಬಲವಾದ ಮಾನಸಿಕ ಶಕ್ತಿಯನ್ನು ಹೊಂದಿರುವ ವ್ಯಕ್ತಿಯ ವಿಚಾರಗಳ ಮೂಲಕ ವಿಶ್ವದ ವಿವಿಧೆಡೆಗೆ ಮೈಕ್ರೋವೈಟಾ ಪಸರಿಸಬಲ್ಲದು. ವಿಶ್ವದಲ್ಲಿ ಜೀವೋದ್ಭವಕ್ಕೆ ಇಂಗಾಲದ ಕಣಗಳೇ ಕಾರಣ ಎಂದು ವಿಜ್ಞಾನ ಹೇಳುತ್ತದೆ. ಆದರೆ ಮೈಕ್ರೋವೈಟಾಗಳೇ ಪ್ರಾಣಶಕ್ತಿ ಹಾಗೂ ಜೀವವಿಕಾಸದ ಮೂಲ ಕಾರಣವೆನ್ನುತ್ತಾರೆ ಶ್ರೀ ಸರ್ಕಾರ್. ದೇಹ ಮತ್ತು ಮನಸ್ಸಿನ ಸೃಷ್ಟಿಗೂ ಅವೇ ಕಾರಣವಾಗಿರುವುದರಿಂದ ವಿಶ್ವದ ಯಾವುದೇ ಭಾಗದಲ್ಲಿಯಾದರೂ ದೇಹ ಮತ್ತು ಮನಸ್ಸನ್ನು ನಾಶಪಡಿಸುವ ಶಕ್ತಿ ಅವಕ್ಕಿದೆ. ಮೈಕ್ರೋವೈಟಾಗಳು ಉಂಟುಮಾಡುವ ಪರಿಣಾಮಗಳನ್ನಾಧರಿಸಿ ಮೂರು ವಿಧಗಳು- ಋಣಾತ್ಮಕ, ಧನಾತ್ಮಕ ಹಾಗೂ ತಟಸ್ಥ. ಇವು ಮಾನವರ ಮೇಲೆ ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ಪರಿಣಾಮ ಬೀರಬಲ್ಲವು. ಸ್ಥೂಲ ಮೈಕ್ರೋವೈಟಾಗಳು ಭೌತಿಕ ಸ್ತರದಲ್ಲಿ ವಾಸಿಸುತ್ತವೆ. ಸೂಕ್ಷ್ಮವಾಗಿರುವವು ಮಾನಸಿಕ ಸ್ತರದಲ್ಲಿ ವಾಸಿಸಿದರೆ, ಸೂಕ್ಷ್ಮಾತಿಸೂಕ್ಷ್ಮವಾಗಿರುವವು ಮನಸ್ಸಿನ ಸೂಕ್ಷ್ಮ ಸ್ತರಗಳಲ್ಲಿ ವಾಸಿಸಬಲ್ಲವು. ಆದರೆ ಆಧ್ಯಾತ್ಮಿಕ ಸ್ತರದಲ್ಲಿ ಮೈಕ್ರೋವೈಟಾಗಳು ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಋಣಾತ್ಮಕ ಸ್ವಭಾವದ ಮೈಕ್ರೊವೈಟಾಗಳು ಮಾನವದೇಹವನ್ನು ಪ್ರವೇಶಿಸಿ ರೋಗಗ್ರಸ್ಥನನ್ನಾಗಿಸಬಲ್ಲವು. ಧನಾತ್ಮಕ ಸ್ವಭಾವದವುಗಳಿಂದ ಮಾನವನ ದೈಹಿಕ ಹಾಗೂ ಮಾನಸಿಕ ಉನ್ನತಿ ಸಾಧ್ಯವಾಗುತ್ತದೆ. ತಂತ್ರಶಾಸ್ತ್ರದನ್ವಯ ಮಾನವನ ದೇಹದಲ್ಲಿ ಇಡಾ, ಪಿಂಗಳ ಮತ್ತು ಸುಷುಮ್ನ ಎಂಬ ಮೂರು ನಾಡಿಗಳಿರುತ್ತವೆ. ಇವು ಪರಸ್ಪರವಾಗಿ ಸಂಧಿಸುವ ಸ್ಥಳವನ್ನು ಚಕ್ರ ಎನ್ನುತ್ತಾರೆ. ಹುಬ್ಬುಗಳ ನಡುವೆ ಇರುವ ಆಜ್ಞಾಚಕ್ರದ ಹೊರತಾಗಿ ಉಳಿದ ಚಕ್ರಗಳು ಕಶೇರುಕದಲ್ಲಿ ಇರುತ್ತವೆ. ತಂತ್ರಶಾಸ್ತ್ರದ ಈ ವಿಚಾರವನ್ನು ಆಧುನಿಕ ವೈದ್ಯಶಾಸ್ತ್ರ ಒಪ್ಪುವುದಿಲ್ಲ. ದೇಹಗಳನ್ನು ಕುಯ್ದು ವಿವಿಧ ಭಾಗಗಳನ್ನು ಪರೀಕ್ಷಿಸುವ ವೈದ್ಯರಿಗೆ ಅಂತಹ ಯಾವುದೇ ನಾಡಿಗಳು ಅಥವಾ ಚಕ್ರಗಳು ಕಂಡಿಲ್ಲ. ಅದರೆ ತಂತ್ರಸಾಧನೆಯ ಕುರಿತು ಅಭ್ಯಾಸ ಮಾಡುವವರು ಸೂಕ್ಷ್ಮರೂಪದಲ್ಲಿರುವ ಈ ಚಕ್ರ ಹಾಗೂ ನಾಡಿಗಳ ಅಸ್ತಿತ್ವ ತಮ್ಮ ದೇಹದಲ್ಲಿರುವುದನ್ನು ಅನುಭವಿಸಬಲ್ಲರು. ಮಾನವರಲ್ಲಿ ಪ್ರಮುಖವಾಗಿ ೫೦ ಪ್ರವೃತ್ತಿಗಳನ್ನು ಗುರುತಿಸಲಾಗಿದೆ. ಪ್ರತಿಚಕ್ರವೂ ನಿರ್ದಿಷ್ಟ ಪ್ರವೃತ್ತಿಯನ್ನು (ಉದಾ: ಧರ್ಮ, ಅರ್ಥ, ಕಾಮ, ಲಜ್ಜಾ, ಭಯ, ಈರ್ಷೆ, ಕ್ರೌರ್ಯ, ಆಸೆ, ಮಮತೆ, ಇತ್ಯಾದಿ) ನಿಯಂತ್ರಿಸುತ್ತದೆ. ನಕಾರಾತ್ಮಕ ಮೈಕ್ರೋವೈಟಾಗಳು ಆಜ್ಞಾಚಕ್ರಕ್ಕಿಂತ ಉನ್ನತ ಚಕ್ರಗಳ ಮೇಲೆ ಪರಿಣಾಮ ಬೀರಲಾರವು. ಅವುಗಳ ಪರಿಣಾಮವೇನಿದ್ದರೂ ಮೂಲಾಧಾರದಿಂದ ವಿಶುದ್ಧ ಚಕ್ರದವರೆಗಿನ ಐದು ಚಕ್ರಗಳ ಮೇಲೆ ಮಾತ್ರ. ಈ ಐದು ಚಕ್ರಗಳು ಪಂಚಭೂತ ತತ್ವಗಳನ್ನು ಪ್ರತಿನಿಧಿಸುವುದರಿಂದ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಇದರ ಪರಿಣಾಮದಿಂದಾಗಿ ಮನಸ್ಸಿಗೆ ಸಂಬಂಧಿಸಿದ ಆಜ್ಞಾ ಚಕ್ರವು ಅಪ್ರತ್ಯಕ್ಷವಾಗಿ ಪೀಡಿತವಾಗುವುದರಿಂದ ವ್ಯಕ್ತಿಯು ಹಲವು ವಿಧದ ಮಾನಸಿಕ ಖಾಯಿಲೆಗಳಿಗೆ ತುತ್ತಾಗುತ್ತಾನೆ. ಸಕಾರಾತ್ಮಕ ಮೈಕ್ರೋವೈಟಾಗಳು ಆಜ್ಞಾಚಕ್ರದ ಮೇಲೆ ಪರಿಣಾಮ ಬೀರುವುದರಿಂದಾಗಿ ಮಾನವರಲ್ಲಿ ಉನ್ನತ ವಿಚಾರಗಳು, ವಿಶಾಲ ಭಾವ, ಆಧ್ಯಾತ್ಮದಲ್ಲಿ ಆಸಕ್ತಿ ಮುಂತಾದವು ಮೂಡುತ್ತವೆ. ಈ ಧನಾತ್ಮಕತೆಯ ಪರಿಣಾಮದಿಂದಾಗಿ ದೇಹ ಕೂಡ ಆರೋಗ್ಯಪೂರ್ಣವಾಗಿರುತ್ತದೆ. ಮನುಷ್ಯನ ಭಾವನೆಗಳಿಗೆ ತಕ್ಕುದಾದ ಮೈಕ್ರೋವೈಟಾಗಳು ಆಕರ್ಷಿಸಲ್ಪಡುತ್ತವೆ. ಸ್ವಾರ್ಥ, ಸಂಕುಚಿತತೆ, ಅಸೂಯೆ, ನೀಚತನ, ಕ್ರೌರ್ಯ ಮುಂತಾದ ಹೀನ ಮನಸ್ಸಿನ ವ್ಯಕ್ತಿಯೆಡೆಗೆ ನಕಾರಾತ್ಮಕ ಮೈಕ್ರೋವೈಟಾ ಆಕರ್ಷಿಸಲ್ಪಡುತ್ತದೆ. ಇದೇ ತತ್ವ ಸಮುದಾಯಕ್ಕೆ ಕೂಡ ಅನ್ವಯವಾಗುತ್ತದೆ. ಇದರಿಂದಾಗಿ ಪರಸ್ಪರರಲ್ಲಿ ದ್ವೇಷ, ಅಪನಂಬಿಕೆ, ಶೋಷಣೆಗಳಿಗೆ ಕಾರಣವಾಗುತ್ತದೆ. ಧನಾತ್ಮಕ ಚಿಂತನೆಗಳು ಸಕಾರಾತ್ಮಕ ಮೈಕ್ರೋವೈಟಾಗಳನ್ನು ಆಕರ್ಷಿಸುತ್ತವೆ. ಇವು ವ್ಯಕ್ತಿ ಹಾಗೂ ಸಮಾಜವನ್ನು ಉನ್ನತಿಯತ್ತ ಕೊಂಡೊಯ್ಯುತ್ತವೆ. ಈ ಹಿನ್ನೆಲೆಯಲ್ಲಿ ಇಂದಿನ ಕರೊನಾ ಸಮಸ್ಯೆಗೆ ಪರಿಹಾರವನ್ನು ಕಾಣಲು ಸಾಧ್ಯ. ಮೈಕ್ರೋವೈಟಾದ ಅತ್ಯಂತ ಸ್ಥೂಲ ರೂಪವಾಗಿರುವ ವೈರಸ್ಸನ್ನು ಔಷಧಗಳಿಂದ ಕೊಲ್ಲಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ. ಔಷಧವು ದೇಹದ ನೋವನ್ನು ಕಡಿಮೆ ಮಾಡಬಲ್ಲದು ಅಷ್ಟೆ. ನಕಾರಾತ್ಮಕ ಮೈಕ್ರೋವೈಟಾಗಳ ನಿಯಂತ್ರಣದ ಒಂದು ವಿಧವೆಂದರೆ ಅವು ತಾನಾಗಿಯೇ ಸಾಯುವುದಕ್ಕಾಗಿ ಕಾಯುವುದು, ಇನ್ನೊಂದು ವಿಧವೆಂದರೆ ಸಕಾರಾತ್ಮಕ ಮೈಕ್ರೋವೈಟಾಗಳನ್ನು ಬಳಸುವುದು. ಮಾನವರಿಗೆ ಮೈಕ್ರೋವೈಟಾಗಳನ್ನು ಸೃಷ್ಟಿಸುವ ಶಕ್ತಿಯಿಲ್ಲ. ಆದರೆ ಅವುಗಳನ್ನು ಆಕರ್ಷಿಸುವ ಶಕ್ತಿಯಿದೆ. ಸಕಾರಾತ್ಮಕ ಹಾಗೂ ಆಧ್ಯಾತ್ಮಿಕ ಚಿಂತನೆಯಿಂದ ಮಾತ್ರ ಇದು ಸಾಧ್ಯ. ಸಾವಿನ ಭಯ ಬಿತ್ತುವ ಮಾಧ್ಯಮ ವರದಿಗಳು, ಜನರನ್ನು ಬಲವಂತವಾಗಿ ಪ್ರತ್ಯೇಕತೆಗೆ ತಳ್ಳುವ ಲಾಕ್ಡೌನ್ನಂತಹ ಕ್ರಮಗಳು, ಉದ್ಯೋಗವಿಲ್ಲದೇ; ಆಹಾರವೂ ಇಲ್ಲದೇ ನಾಳಿನ ಚಿಂತೆಯಿಂದ ಬಳಲುವಂತೆ ಮಾಡಿರುವುದರಿಂದ ಜನರಲ್ಲಿ ನಕಾರಾತ್ಮಕ ಭಾವನೆಯೇ ಹೆಚ್ಚಾಗುತ್ತದೆ. ಈಗಾಗಲೇ ಬೇರು ಬಿಟ್ಟಿರುವ ಸ್ವಾರ್ಥ ಅಸೂಯೆಗಳ ಜೊತೆಗೆ ಪರಿಸ್ಥಿತಿಯ ಪ್ರಭಾವವೂ ಸೇರಿ ಋಣಾತ್ಮಕ ಮೈಕ್ರೋವೈಟಾಗಳನ್ನು ಆಕರ್ಷಿಸುವುದು ಸಹಜ. ಇದರಿಂದಗಿ ವೈರಸ್ ಪ್ರಭಾವ ಇನ್ನಷ್ಟು ತೀವ್ರವಾಗಿ ಕಾಡಲಿದೆ. ಸ್ಪರ್ಶದಿಂದಲೇ ಪಸರಿಸುತ್ತದೆಂದು ನಂಬಲಾಗಿರುವ ಕೊರೊನಾ ವೈರಸ್, ಸೋಂಕಿತ ವ್ಯಕ್ತಿಗಳ ಸಂಪರ್ಕವೇ ಇಲ್ಲದವರಿಗೂ ತಗಲುತ್ತಿರುವುದು ಅವು ಹಲವು ಮಾಧ್ಯಮಗಳನ್ನು ಬಳಸಿ ಚಲಿಸಬಲ್ಲವು ಎಂಬ ವಿಚಾರಕ್ಕೆ ಪುಷ್ಠಿ ನೀಡುತ್ತದೆ. ಇಷ್ಟಕ್ಕೇ ತತ್ತರಿಸಿರುವ ಮಾನವ ಸಮಾಜ ಗಂಧ, ಶಬ್ಧ, ವಿಚಾರಗಳ ಮೂಲಕ ಪಸರಿಸಬಲ್ಲ ಮೈಕ್ರೋವೈಟಾಗಳಿಂದ ಪ್ರಭಾವಿತರಾಗುವ ಸಂದರ್ಭದ ಪರಿಣಾಮದ ಭೀಕರತೆ ಊಹೆಗೂ ನಿಲುಕದು. ಇದಕ್ಕೆಲ್ಲಾ ಪರಿಹಾರವೆಂದರೆ ಸಕಾರಾತ್ಮಕ ಚಿಂತನೆ. ನಾಳಿನ ಬದುಕಿನ ಭದ್ರತೆ ಹಾಗೂ ಭರವಸೆಯನ್ನು ಪ್ರತಿಯೋರ್ವ ವ್ಯಕ್ತಿಯಲ್ಲೂ ಮೂಡಿಸುವ ಸರ್ಕಾರದ ನಡೆ-ನುಡಿ- ಕಾರ್ಯಕ್ರಮಗಳು, ಭಯದ ವಾತಾವರಣವನ್ನು ದೂರ ಮಾಡುವುದು, ಸಕಾರಾತ್ಮಕ ಚಿಂತನೆಯ ಪ್ರೇರೇಪಣೆ ಆದ್ಯತೆ ಪಡೆಯಬೇಕು. ನಕಾರಾತ್ಮಕತೆ ಬೆಳೆಸುತ್ತಿರುವ ಹೊಣೆಗೇಡಿ ಮಾಧ್ಯಮಗಳ ಕಿವಿ ಹಿಂಡುವ ಕೆಲಸದ ಜೊತೆಗೆ, ಜನರಲ್ಲಿ ಅಂಧ ವಿಶ್ವಾಸ, ಮೂಢನಂಬಿಕೆ ಬೆಳೆಸುವ ಕಾರ್ಯಕ್ರಮಗಳಿಗೆ ತಡೆ ಹಾಕಿ; ಆತ್ಮವಿಶ್ವಾಸ ಬೆಳೆಸುವ, ಸಕಾರಾತ್ಮಕ ಚಿಂತನೆಗಳನ್ನು ಪ್ರೇರೇಪಿಸುವ ಕಾರ್ಯಕ್ರಮ ಬಿತ್ತರಿಸುವುದನ್ನು ಕಡ್ಡಾಯ ಮಾಡಬೇಕು. ಭಜನೆ, ಕೀರ್ತನೆ, ಜಪ, ಧ್ಯಾನಗಳಿಂದ ಸಕಾರಾತ್ಮಕ ಮೈಕ್ರೊವೈಟಾಗಳು ಆಕರ್ಷಿಸಲ್ಪಡುತ್ತವೆ. ಪಂಚವಟಿ (ಬೇವು, ಬಿಲ್ವ, ಶಾಲ್ಮಲಿ, ಆಲ, ಅಶ್ವಥ್ಥ, ಕೆಲವೊಮ್ಮೆ ನೆಲ್ಲಿ ಗಿಡಗಳ ಸಮೂಹ) ಯಲ್ಲಿ ಕೆಲ ಸಮಯ ಕಾಲ ಕಳೆಯುವುದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು; ಯಾಕೆಂದರೆ ಇವು ಸಕಾರಾತ್ಮಕ ಮೈಕ್ರೋವೈಟಾವನ್ನು ಆಕರ್ಷಿಸುತ್ತವೆ. ವಿಜ್ಞಾನದ ಮೂಲ ನಂಬಿಕೆಗಳಿಗೇ ಸವಾಲು ಎಸೆದಿರುವ, ವಿಜ್ಞಾನದ ಕ್ಷಿತಿಜವನ್ನು ವಿಸ್ತರಿಸುವ ಮೈಕ್ರೊವೈಟಾ ಕುರಿತಾದ ಸಂಶೋಧನೆಗಳಿಂದಾಗಿ ಇಂದಿನ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಮುಂತಾದವುಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಅರ್ಥಶಾಸ್ತ್ರದ ಸಂಪನ್ಮೂಲಗಳ ಕಲ್ಪನೆಯ ವಿಸ್ತಾರವು ಇಂದಿನ ತಜ್ಞರು ಊಹಿಸಲಾರದಷ್ಟು ಹಿಗ್ಗಲಿದೆ. ಇಡೀ ಮಾನವ ಸಮಾಜ ನೈಜ ಪ್ರಗತಿಯ ದಾರಿಯಲ್ಲಿ ಮುನ್ನಡೆಯಲಿದೆ. *********

ಪ್ರಸ್ತುತ Read Post »

ಇತರೆ

ನೆನಪು

ವಿ.ಕೆ.ಮೂರ್ತಿ ದಾದಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ   ಬೆಳಕು ನೆರಳುಗಳ ಚಮತ್ಕಾರಕ್ಕಾಗಿ ದಾದಸಾಹೇಬ್ ಫಾಲ್ಕೆ ಪ್ರಶಸ್ತಿ  _   ವಿ.ಕೆ.ಮೂರ್ತಿ         ಪ್ಯಾಸಾ, ಕಾಗಜ್ ಕೆ ಫೂಲ್, ಸಾಹಿಬ್ ಬೀಬಿ ಔರ್ ಗುಲಾಮ್, ಜುಗ್ನು, ಸೂರಜ್, ಲವ್ ಇನ್ ಟೋಕಿಯೊ, ಜಿದ್ದಿ, ಇನ್ನೂ ಅನೇಕ ಹಿಂದಿ ಚಲನಚಿತ್ರಗಳ ಛಾಯಾ ಗ್ರಾಹಕ ವಿ.ಕೆ ಮೂರ್ತಿಯವರ ಹೆಸರನ್ನು ಕೇಳದೆ ಇರುವವರು ಯಾರು ಇಲ್ಲ ಎಂದು ಖಂಡಿತವಾಗಿ ಹೇಳಬಹುದು. ಬಹಾರೋ ಫೂಲ್ ಬರ್ಸಾವೊ, ಚೌದವೀಂ ಕಾ ಚಾಂದ್  ಹೊ, ವಕ್ತ್ ನೇ ಕಿಯಾ,  ಸಾಯೊನಾರ, ಹಾಡುಗಳ ರಮ್ಯ ದೃಶ್ಯಗಳು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಮತ್ತೆ ಮತ್ತೆ ನೋಡಿದಷ್ಟೂ ಇನ್ನೂ ನೋಡಬೇಕೆಂಬ ಹಂಬಲ, ಇದರ ರಹಸ್ಯ ಗುರುದತ್ ಫಿಲಮ್ಸ್ .ವಿ.ಕೆ ಮೂರ್ತಿ ಯವರ ಅಧ್ಭುತ ಛಾಯಾಗ್ರಹಣ ಚಮತ್ಕಾರ.      ಇತ್ತೀಚೆಗೆ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ ಪಡೆದ ವಿ.ಕೆ. ಮೂರ್ತಿಯವರ ಪರಿಚಯ ಎಲ್ಲರಿಗೂ ಇರುವ ಸಂಗತಿ. ಇಷ್ಟು ಪ್ರಸಿದ್ದವಾದ ದೊಡ್ಡ ಪುರಸ್ಕಾರವನ್ನು ಗಳಿಸಿರುವ ಇವರಿಗೆ  ಸಿಂಗಾರಿ ಪರವಾಗಿ ನಮ್ಮ ಅಭಿನಂದನೆಗಳನ್ನು ಸಲ್ಲಿಸೋಣ.  ಈ ಸಣ್ಣ ಲೇಖನವನ್ನು ಬರೆಯುವ ಮುನ್ನ ವಿ.ಕೆ. ಮೂರ್ತಿಯವರ ಮನೋರಂಜಕ, ಸರಳ,  ಆದರ್ಶ ಜೀವನ ಚರಿತ್ರೆಯನ್ನು ಪುಸ್ತಕದ ರೂಪದಲ್ಲಿ ಕನ್ನಡಿಗರಿಗೆ ನೀಡಿರುವ ಶ್ರೀಮತಿ ಉಮಾರಾವ್ ಅವರಿಗೆ ವಂದನೆಗಳನ್ನು ಅರ್ಪಿಸೋಣ.  –ಬಿಸಿಲು ಕೋಲು– ಎಂಬ ಹೆಸರಿನಲ್ಲಿ ಪ್ರಕಟವಾಗಿರುವ ಈ ಪುಸ್ತಕವನ್ನು ವಿ.ಕೆ.ಮೂರ್ತಿಯವರ ಕೈನಿಂದಲೇ ಪಡೆದದ್ದು ನನ್ನ ಭಾಗ್ಯ.  “ಕುಟ್ಟಿ ” ಇದು ಬಂಧು ಮಿತ್ರರು ಇವರನ್ನು ಪ್ರೀತಿಯಿಂದ ಕರೆಯುವ ಹೆಸರು.  ಪಾರ್ಥನಾರಾಯಣ ಪಂಡಿತರ ಮಗಳಾದ ಸಂಧ್ಯ ಇವರ ಪತ್ನಿ, ನನ್ನ ಸೋದರತ್ತೆಯ ಮಗಳೆಂದು ಹೇಳಲು ಹೆಮ್ಮೆಯಾಗುತ್ತದೆ. ಇವರ ಏಕಮಾತ್ರ ಪುತ್ರಿ ಛಾಯಾ.    ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಹಾಗೆ ವಿ.ಕೆ. ಮೂರ್ತಿಯವರ ವ್ಯಕ್ತಿತ್ವ.  ಈ ಕೆಳಗಿನ ಸಾಲುಗಳು ಅವರ ಲೇಖನ ದಿಂದ ಸೃಷ್ಠಿಯಾಗಿರುವ  ಸರ್ವಜ್ಞನ ಶೈಲಿ ಯಲ್ಲಿ ಬರೆದಿರುವ ಪದ್ಯ, ಇದೇ ಅವರ ಜೀವನದ ಶೈಲಿ. ಈ ಅರ್ಥ ತುಂಬಿದ ಪದ್ಯ  ಅವರು ಕವಿಗಳೂ ಹೌದು ಎಂದು ಸಾರುತ್ತದೆ.           ಸಾರು ಸಾರೆಂದೇಕೆ ಸೊರಗುವೆ         ಸಾರಿದರೆ ಸಿರಿ ಸೊರಗುವುದೇ ಸರಿ         ಸಾರದೆಯೆ ಸಲ್ಲಿಸೊ ಸೇವೆ ಸರ್ವಗ್ನ    ನನಗೆ ಕುಟ್ಟಿಯವರ ಪರಿಚಯ ನಾನು ಮದುವೆ ಯಾದ ಮೇಲೆ ಮುಂಬಯಿಗೆ ಬಂದಾಗಿಂದ,  “ಸಿಂಪಲ್ ಲಿವಿಂಗ್ ಅಂಡ್  ಹೈ ಥಿಂಕಿಂಗ್” ,  ತತ್ವದ ನನ್ನ ಪತಿ ವೆಂಕಟೇಶ್ ಅವರು ಮುಂಬೈ ನಲ್ಲಿ ಕೆಲಸಕ್ಕೆ ಸೇರಿದಾಗಿನಿಂದ ಅಂದರೆ ೩೦ ವರ್ಷಗಳಿಂದ ಇವರ ಸಂಗದಲ್ಲೆ ಬೆಳೆದವರು. ಏಕೆಂದರೆ ಇಬ್ಬರೂ  ಒಂದೆ  ನಾವೆಯ ಪಯಣಿಕರು, ಹೆಚ್ಚು ಮಾತಿಲ್ಲದ, ಬೂದಿ ಮುಚ್ಚಿದ ಕೆಂಡದಂತಹ ಸ್ವಭಾವದವರು.  ಹೆಸರಾಂತ ನಟ ನಟಿಯರ, ಚಲನಚಿತ್ರ ರಂಗದ ಮಿತ್ರರ ಹುಟ್ಟಿದ ಹಬ್ಬಕ್ಕೆ ಕೊಡಬೇಕಾಗಿದ್ದ ಗಿಫ್ಟ್ ಪ್ಯಾಕೆಟ್ಗಳನ್ನು  ವೆಂಕಟೇಶ್ ಅವರು ತಯಾರಿಸಿದಾಗಲೆ ಕುಟ್ಟಿಗೆ ಸಮಾಧಾನವಾಗುತ್ತಿತ್ತಂತೆ!        ‘ದೇವಿನಿವಾಸ’ ಇವರ ಮುಂಬಯಿ ಮನೆ ಅತಿಥಿ ಸತ್ಕಾರ ಗಳ ದೇಗುಲವಾಗಿತ್ತೆಂದರೆ ಅತಿಶಯೋಕ್ತಿಯಲ್ಲ.  ೧೯೬೮ ರಲ್ಲಿ ನಾವು ಮದುವೆಯಾಗಿ ಮುಂಬಯಿಗೆ ಬಂದಾಗ ಮೈಸೂರಿನಲ್ಲಿ ಹುಟ್ಟಿ ಬೆಳೆದ  ನನಗಂತೂ ಎರಡು ಊರುಗಳ ಅಂತರ ಅಜಗಜಾಂತರವಾಗಿತ್ತು. ಮುಂಬಯಿಗೆ ಬಂದ ದಿನ ಮೊದಲು ನಾವು ಹೋಗಿದ್ದು ಸಂಧ್ಯ ಕುಟ್ಟಿ ಯವರ ಮನೆಗೆ . ಆಲ್ಲಿ ನಮಗೆ ದೊರಕಿದ ಅತಿಥಿ ಸತ್ಕಾರ ಇಂದಿಗೂ ಮರೆತಿಲ್ಲ.                               ಮುಂದೆ ಕೊಲಾಬ ಮನೆಯಲ್ಲಿ ಇದ್ದಾಗಲೂ ವಾರಕ್ಕೊಮ್ಮೆ ಕುಟ್ಟಿ, ಸಂಧ್ಯಾ ಅವರನ್ನು ನೋಡಲು ತಪ್ಪದೆ ಹೋಗುತ್ತಿದ್ದೆವು. ಕುಟ್ಟಿಯವರು ಸಂಗೀತ ಪ್ರಿಯರು,  ವಯಲಿನ್, ಸಿತಾರ್ ವಾದ್ಯಗಳನ್ನು ಲೀಲಾಜಾಲವಾಗಿ  ನುಡಿಸುತ್ತಾರೆ. ಸಂಗೀತ ಪ್ರೇಮಿ ಯಾದ ವೆಂಕಟೇಶ್, ಇವರು ನುಡಿಸುತ್ತಿದ್ದ ಸಿತಾರ್ ವಾದ್ಯದಿಂದ ಅಲೆಗಳಂತೆ  ಹೊರಬರುತ್ತಿದ್ದ  ಸ್ವರ, ಸಾಹಿತ್ಯವನ್ನು ಅವರ ಜೊತೆ ಆನಂದವಾಗಿ ಕೇಳುತ್ತಿದ್ದರು. ಛಾಯ, ಆಶ್ವಿನಿ, ಭಾರತಿ, ರಾಘು, ಮಾನಸ ಅವರ ವಿಶ್ವಾಸ ಪೂರ್ವಕ, ಹಾಸ್ಯದ ಹೊನಲ  ಮಾತುಕತೆಗಳೊಂದಿಗೆ, ಸಂಧ್ಯಾರವರ ರಸದೌತಣದ ಸವಿ ನೋಡುತ್ತಾ ಕಳೆದ ಗಳಿಗೆಗಳು ಇಂದಿಗೂ ಅಚ್ಚಿನಂತಿದೆ.                                 ಒಂದು ಸಾರಿ  ನಾನು ಶೂಟಿಂಗ್ ನೋಡಬೇಕೆಂದು ಆಸೆಪಟ್ಟಾಗ ಕುಟ್ಟಿ ನಮ್ಮನ್ನು ಸ್ಟುಡಿಯೊ ಗೆ ಕರೆದುಕೊಂಡು ಹೋದರು. ಶಿಕಾರ್ ಹಿಂದಿ ಚಿತ್ರಕ್ಕಾಗಿ ಇಡೀ ರಾತ್ರಿ ಚಿತ್ರೀಕರಣ. ಪ್ರಸಿದ್ಧ ನಟ ಧರ್ಮೇಂದ್ರ, ಪ್ರಸಿದ್ಧ ನಟಿ ಆಶಾಪರೇಖ್ ಅವರನ್ನು ನೋಡಿದ ನಾವೇ ಧನ್ಯರು. ಆಗಿನ ಕಾಲದಲ್ಲಿ ಧರ್ಮೇಂದ್ರ ಎಂದರೆ ನಮ್ಮ ಅಚ್ಚುಮೆಚ್ಚಿನ ನಟ.. ಅವರ ಸಿನಿಮಾ ಬಿಡುಗಡೆಯಾದ ಮೊದಲನೆ ದಿನ ನೋಡುವುದೆಂದರೆ ಜೇವನದಲ್ಲಿ ಏನನ್ನೊ ಸಾಧಿಸಿದಷ್ಟು ಸಂತೋಷ.  ಕಾಲೇಜ್ ತಪ್ಪಿಸಿ ಮಾರ್ನಿಂಗ್ ಶೋ ಗೆ ಓಡುತ್ತಿದ್ದುದು ಇಂದಿಗೂ ನೆನಪು.   ಶೂಟಿಂಗ್ ನೋಡಿದ ಮೇಲೆ  ಹತ್ತಿರ ನಟ ನಟಿಯರನ್ನು ನೋಡಿದ ಅವಕಾಶ, ಅಬ್ಬಾ ಯಾರಿಗುಂಟು ಯಾರಿಗಿಲ್ಲ, ಈ ಸುವರ್ಣಾವಕಾಶ  ಕಲ್ಪಿಸಿದ  ಕುಟ್ಟಿಯವರಿಗೆ ಇಂದಿಗೂ ಚಿರಋಣಿ.   ನನ್ನ ಅಭಿಮಾನ  ಕುಟ್ಟಿಯವರ ಜೀವನದ ಬಗ್ಗೆ, ಅವರ ಚಿತ್ರ ರಂಗದ ಪ್ರವೇಶ, ಕಡಲ ಉಬ್ಬರವಿಳಿತಗಳಂತೆ ಹಾಸು ಹೊಕ್ಕಾಗಿ ಬಂದ ಇವರ ಪ್ರವೃತ್ತಿಯ ಬಗ್ಗೆ ಬರೆಯಲು ಆಶಿಸುತ್ತಿದೆ. ಈ ಕೆಳಗಿನ ಸಾಲುಗಳನ್ನು ಬರೆಯಲು ಆಧಾರ ಉಮಾರಾವ್ ಅವರ ಬಿಸಿಲು ಕೋಲು ಪುಸ್ತಕ. ಶ್ರೀ ವೆಂಕಟರಾಮ್ ಪಂಡಿತ್ ಕೃಷ್ಣ ಮೂರ್ತಿಯವರ ಜನನ ೧೯೨೨ ನೇ ಇಸವಿ ನವೆಂಬರ್ ೨೬ ನೇ ತೇದಿ. ಹುಟ್ಟಿದ ಊರು ಗಂಧದ ಗುಡಿ ಮೈಸೂರು. ತಂದೆ ವೆಂಕಟರಾಮ ಪಂಡಿತ್ ಆಯುರ್ವೇದ ದ ವೈದ್ಯರಾಗಿದ್ದರು. ತಾಯಿಯವರ ಹೆಸರು ನಾಗಮ್ಮ.  ಐದು ಜನ ಮಕ್ಕಳ ಈ  ದಂಪತಿಗಳಿಗೆ ವಿ.ಕೆ. ಮೂರ್ತಿ ಯವರು ಮೂರನೆ ಮಗ. ಇವರ ಬಾಲ್ಯ ಸಂಪಿಗೆ ಮರಗಳ ನಡುವೆ ಇದ್ದ ಒಂದು ಸುಂದರ ಮನೆಯ ವಾತಾವರಣದಲ್ಲಿ. ಒಬ್ಬರು ಆಣ್ಣ ಮೂರು ಜನ ತಂಗಿಯರ ಜೊತೆ ತಂದೆ ತಾಯಿಯ ಅಕ್ಕರೆಯಲ್ಲಿ. ಬೆಳೆಯುತ್ತಿದ್ದಂತೆ ಬರಸಿಡಿಲು ಬಡಿದಂತೆ ಇವರ ತಾಯಿ ಚಿಕ್ಕವಯಸ್ಸಿನಲ್ಲೆ ಸಾವನ್ನೊಪ್ಪಿದರು. ಅವರ ತಂಗಿಯರು ದೊಡ್ಡಮ್ಮನ ಮನೆ ಸೇರಿದರು.  ಹೀಗಾಗಿ ಕುಟ್ಟಿ ತಂದೆಯ ಆಸರೆಯಲ್ಲೆ ಬೆಳೆದವರು. ಪುಟ್ಟ ಮೂರ್ತಿಯವರಿಗೆ ಮನೆಯಲ್ಲಿ ಹೆಂಗಸರಿಲ್ಲದಿದ್ದ ಕಾರಣ ದೊಡ್ಡ ಅಡುಗೆ ಜವಾಬ್ದಾರಿ. ಬೆಳೆಯುವ ಸಸಿ ಮೊಳಕೆಯಲ್ಲೆ ಎಂಬಂತೆ ತಾವೆ ಪ್ರೆಶರ್ ಕುಕರ್ ತಯಾರಿಸಿ ಕೊಂಡಿದ್ದರಂತೆ!   ಚಿತ್ರರಂಗದ ಕಡೆ ಮನಸ್ಸು ಹರಿಯಲು ಕಾರಣ ಅವರ ನೆಂಟರೊಬ್ಬರಾದ ಸುಬ್ಬರಾಮಯ್ಯ ಅನ್ನುವವರಿಂದ. ಆಗಿನ ಕಾಲದಲ್ಲಿ ಮೂಕಿ ಚಿತ್ರಗಳು ಇದ್ದಿದ್ದರಿಂದ ಸಿನಿಮ ಸನ್ನಿವೇಶಗಳಿಗೆ ಕಳೆ ತುಂಬಲು ತೆರೆಯ ಹಿಂದೆ ವಾದ್ಯ ಸಂಗೀತ ನುಡಿಸುತ್ತಿದ್ದರಂತೆ.  ಇದರಲ್ಲಿ ಸುಬ್ಬ ರಾಮಯ್ಯ ವಾದ್ಯಗಳನ್ನು ನುಡಿಸುತ್ತಿದ್ದವರು.  ಚಿತ್ರ ನೋಡಲು ಇವರ ಆಹ್ವಾನ ಕುಟ್ಟಿಯವರಿಗೆ ಬಹಳ ಸಂತಸದ ಸುದ್ದಿ. ಈ ಆಹ್ವಾನವೆ ಇವರ ಜೀವನದ ಹಾದಿಗೆ ನಾಂದಿಯಾಯಿತೇನೊ!  ಚಿತ್ರರಂಗ, ಮೂಕಿಯಿಂದ ಟಾಕಿಗೆ ಬದಲಾಯಿಸಿದಾಗ ರಾಜಕೀಯ, ಸಾಮಾಜಿಕ, ಆಕ್ಶನ್ ಸಿನಿಮಾಗಳನ್ನು ನೋಡುವ ಅವಕಾಶ ಬಾಲಕ ಕುಟ್ಟಿಯವರಿಗೆ ಲಭಿಸುತ್ತಿತ್ತಂತೆ.     ಇವರ ವಿದ್ಯಾಭ್ಯಾಸ ಬನುಮಯ್ಯ ಮಾಧ್ಯಮಿಕ ಶಾಲೆ ಮತ್ತೆ ಶಾರದಾವಿಲಾಸ ಹೈಸ್ಕೂಲಿನಲ್ಲಿ. ಕ್ರಿಕೆಟ್, ಫುಟ್ ಬಾಲ್, ಚಿಣ್ಣೀ ದಾಂಡು ಇವರ ಮೆಚ್ಚಿನ ಆಟಗಳು. ಜೊತೆಗೆ ಈಜು ಕೂಡ ಇವರಿಗೆ ಪ್ರಿಯ. ಹೆಂಗಸರ ಜೊತೆ ಮಾತಾಡುವುದಕ್ಕೆ ನಾಚುತ್ತಿದ್ದ ಮೂರ್ತಿ ಯವರು ಮುಂದೆ ಪ್ರಸಿದ್ಧ ಹೆಸರಾದ ನಟಿಯರ ಜೊತೆ ಕೆಲಸ, ಅಬ್ಬ ಇದಕ್ಕೆ ಹೇಳುವುದು –ಲೈಫ್ ಈಸ್ ಎ ಮಿಸ್ಟರಿ– ಅಂತ.   ಕಲಾವಿದ ಮೂರ್ತಿಯವರಿಗೆ ಸಂಗೀತ ಕಲಿಯಲು ಆಸೆ ಮೂಡಿದ್ದರಿಂದ ಪಿಟೀಲು ವಾದ್ಯ ಕಲಿಯಲು ಆರಂಭ, ಮತ್ತೆ ಸ್ನೇಹಿತರನ್ನೆಲ್ಲ ಕೂಡಿಸಿ ಆರ್ಕೆಸ್ಟ್ರಾ ಆರಂಭ ಮಾಡಿದರಂತೆ. ಒಂದು ಸಾರಿ ಪ್ರಸಿದ್ಧ ವಿಜ್ಞಾನಿ ಸರ್ ಸಿ.ವಿ. ರಾಮನ್ ಅವರ ಇರುವಿನಲ್ಲಿ ವಾದ್ಯ ಸಂಗೀತ ನುಡಿಸುವ ಅವಕಾಶ, ರಾಮನ್ ಅವರ ಹೊಗಳಿಕೆ ಇವರ ಸಂಗೀತದ ಆಸಕ್ತಿಯನ್ನು ಇಮ್ಮಡಿಸಿತ್ತು.   ಮುಂದೆ ಒಂದು ಪತ್ರಿಕೆಯ ಸಣ್ಣ ಜಾಹೀರಾತು ಇವರನ್ನು ಮುಂಬಯಿ ಕಡೆಗೆ ಸೆಳೆಯಿತಂತೆ.  ಆ ಜಾಹಿರಾತು ಅಲ್ಲಿ ಮೂವೀ ಟೋನ್ ಕಾಲೇಜಿನವರು ಛಾಯಾ ಗ್ರಹಣದಲ್ಲಿ ತರಬೇತು ನೀಡುತ್ತೇವೆ  ಎಂದು  ಸಾರಿದ್ದರಂತೆ. ಚಿತ್ರರಂಗದ ಆಕರ್ಷಣೆ  ಮುಂಚಿಂದಲೆ ಇದ್ದ ಕುಟ್ಟಿ ಯವರಿಗೆ ಇದು ಕಬ್ಬಿಣ ಅಯಸ್ಕಾಂತವನ್ನು ಆಕರ್ಷಿಸಿದಂತೆ  ಎಂದು ಬೇರೆ ಹೇಳಬೇಕಿಲ್ಲ. ಮುಂಬಯಿಗೆ ಅಣ್ಣಾ ಅತ್ತಿಗೆಯವರ ಉತ್ತೇಜನದಿಂದ ಹೊರಟರೆ ಅಲ್ಲಿ ಮುಂದೆ ಆಗಿದ್ದು ದೊಡ್ಡ ನಿರಾಸೆ, ಅದು ಒಂದು ಮೋಸದ ಜಾಹೀರಾತು. ಮುಂಬಯಿನಲ್ಲಿ ನೆಂಟರ ಮನೆಯಲ್ಲಿ ಮೂರು ತಿಂಗಳು ವಾಸದ ನಂತರ ಮೈಸೂರಿಗೆ ವಾಪಸ್ಸು ಬಂದಾಗ ಆಗಲೆ ಕ್ವಿಟ್ ಇಂಡಿಯ ಚಳುವಳಿ ಆರಂಭ. ದೇಶಪ್ರೇಮದಿಂದ ಚಳುವಳಿಯಲ್ಲಿ ಭಾಗವಹಿಸಿದಾಗ ಮೂರು ತಿಂಗಳು ಜೈಲು ವಾಸದ ಅನುಭವ. ಅಲ್ಲೂ ಕೂಡ ಲೀಡರ್ ಆಗಿ ಎಷ್ಥೋ ಖೈದಿಗಳಿಗೆ ಸಹಾಯ ಮಾಡುತ್ತಿದ್ದರಂತೆ.   ಇವರ ಮುಂದಿನ ಹೆಜ್ಜೆ ಜಯಚಾಮರಾಜೇಂದ್ರ ಆಕ್ಯುಪೇಷನಲ್ ಇನ್ಸ್ಟಿಟ್ಯೂಟ್ ಗೆ ಮೈಸೂರಿಂದ ಬೆಂಗಳೂರಿಗೆ ಪಯಣ, ಕಾರಣ ಅಲ್ಲಿ ಇವರಿಗೆ ಪ್ರಿಯವಾದ ಸಿನಿಮಟೋಗ್ರಫಿಯಲ್ಲಿ ತರಬೇತು ನೀಡುತ್ತಿದ್ದರು. ಒಂದು ಸಣ್ಣ ಕ್ಯಾಮರ ಮೂಲಕ ಪಾಠ ಹೇಳುತ್ತಿದ್ದರಂತೆ. ಆ ಕ್ಯಾಮರಾನ ವಿದ್ಯಾರ್ಥಿಗಳು ದೂರದಿಂದಲೆ ನೋಡಬೇಕಾಗಿತ್ತು ಅನ್ನುತ್ತಾರೆ  ಕುಟ್ಟಿಯವರು, ಆದರೆ ಮುಂದೆ ದೊಡ್ಡ ದೊಡ್ಡ ಕ್ಯಾಮರಾ ಗಳು ಕಪ್ಪು ಬಿಳುಪು ಗಳಿಂದ ಮುಂದೆ ಸೌಂದರ್ಯ ಬಣ್ಣ ಗಳಿಂದ ಅವರ ಕೈಚಳಕದಿಂದಲೇ ಮೆರೆದವು. ಆಬ್ಬ ಆ ಕ್ಯಾಮರಗಳ ಅದೃಷ್ಟ ಯಾರಿಗಿದೆ!.   ಇಲ್ಲಿಯ ಕೋರ್ಸ್ ಮುಗಿಯುತ್ತಿದ್ದಂತೆ ಸರ್ಟಿಫಿಕೇಟ್ ಪಡೆಯಲು ಟ್ರೈನಿಂಗ್ ಗಾಗಿ ಮುಂಬಯಿಗೆ ಪ್ರಯಾಣ. ಅಲ್ಲಿ ಕೆಲಸ ಕಲಿಯಲು ಸೇರಿದ್ದು  ಪ್ರಕಾಶ್ ಸ್ಟುಡಿಯೊ. ಅಲ್ಲಿಂದ ಮುಂದಿನ ಹೆಜ್ಜೆ ಫಲಿಮಿಸ್ತ್ರಿ ಗೆ ಸಹಾಯಕರಾಗಿ ಕೆಲಸ ಮಾಡಿದ್ದು.   ಚಿತ್ರರಂಗದ ಜೊತೆಯಲ್ಲಿ ರಂಗ ಭೂಮಿ ಆಕರ್ಷಣೆ ಕೂಡ! ಇದಕ್ಕೆ ನಾಂದಿ ಮೈಸೂರ್ ಅಸೊಸಿಯೇಶನ್ ನಲ್ಲಿ ಗಗ್ಗಯ್ಯನ ಗಡಿಬಿಡಿ ನಾಟಕ ನಿರ್ದೇಶಿಸಿದ್ದು. ಹಾಗೆಯೆ ಕನ್ನಡ ಗೀತೆಗಳನ್ನು ಹಾಡುವ ಆಸಕ್ತಿ. ಒಂದು ಸಾರಿ ದ.ರ. ಬೇಂದ್ರೆ ಯವರ ಸನ್ನಿಹದಲ್ಲಿ ಮುಂಬಯಿ ಪೋದಾರ್ ಕಾಲೇಜಿನಲ್ಲಿ, ಆ ಕವಿಯೇ ಬರೆದ ಕವಿತೆ ಮೂಡಲ ಮನೆಯ ಮುತ್ತಿನ ನೀರಿನ, ಹಾಡುವ ಅವಕಾಶ. ನಿಜಕ್ಕು ಕುಟ್ಟಿಯವರು ಜಾಕ್ ಆಫ್ ಆಲ್ ಟ್ರೇಡ್ಸ್ಲ್!   ನವೆಂಬರ್ ೨೬, ೧೯೬೧ ಇಸವಿಯಲ್ಲಿ ಪಾರ್ಥನಾರಾಯಣ ಪಂಡಿತ್, ನಮ್ಮ ತಂದೆಯವರ ಸಹೋದರಿ ರತ್ನಮ್ಮ ಅವರ ಮಗಳಾದ ಸಂಧ್ಯ ಅವರೊಡನೆ ತಿರುಪತಿಯಲ್ಲಿ ವಿವಾಹ, ಮತ್ತೆ ಮುಂಬಯಿ ಯ ಗಡಿ ಬಿಡಿ ಜೀವನ. ಕುಟ್ಟಿಯವರಷ್ಟೇ ಕಲೆಯಲ್ಲಿ ಆಸಕ್ತಿ ಇದ್ದ ಸಂಧ್ಯಾಗೆ ಅವರೇ ಹೇಳಿರುವಂತೆ ಯಾವ ತರಹ ಲಕ್ಶ್ಮಣ ರೇಖೆಗಳಿಲ್ಲದ ಕಲಾಜೀವನಕ್ಕೆ ಕುಟ್ಟಿಯವರ ಉತ್ತೇಜನ ಇತ್ತಂತೆ. ಬಂಧು ಮಿತ್ರರಿಗೆಲ್ಲಾ ಸಂಧ್ಯಾ  ಎಂದರೆ ಬಹಳ ಗೌರವ ಹಾಗೂ ಪ್ರೀತಿ, ನನ್ನ ಪತಿ ವೆಂಕಟೇಶ್ ಇವರನ್ನು ಪ್ರೀತಿ ಇಂದ ದೀದಿ ಎಂದೆ ಕರೆಯುತ್ತಿದ್ದರು. ಇಬ್ಬರೂ ಕಣ್ಮರೆಯಾಗಿದ್ದು  ನಮ್ಮ ದುರಾದೃಷ್ಟ.   ೧೯೫೦ ನೆ ಇಸವಿಯಲ್ಲಿ ಗುರುದತ್ ಮತ್ತು ಕುಟ್ಟಿ ಯವರ ಮೊದಲ ಭೇಟಿ, ಅದು ಅವರು ಅಫ್ಸರ್ ಅನ್ನುವ ಚಿತ್ರದಲ್ಲಿ ಕ್ಯಾಮರಾಮನ್ ಆಗಿ ಕೆಲಸ ಮಾಡುತ್ತಿದ್ದಾಗ, ಇವರಿಬ್ಬರ ಪರಿಚಯ ಮಾಡಿಸಿದವರು ಪ್ರಸಿದ್ಧ ನಟ ದೇವಾನಂದ್ ಅವರು, ಗುರುದತ್ ಮತ್ತು  ದೇವಾನಂದ್ ಮೆಚ್ಚಿನ ಗೆಳೆಯರಾಗಿದ್ದರಂತೆ. ಕುಟ್ಟಿಯವರ ಕೆಲಸ ಗಮನಿಸುತ್ತಿದ್ದ ಹಾಗೆ ಗುರುದತ್ ಹೇಳಿದರಂತೆ, -“ಮೂರ್ತಿ ನನ್ನ ಮುಂದಿನ ಚಿತ್ರದಲ್ಲಿ ನಾವಿಬ್ಬರೂ ಸೇರಿ ಒಟ್ಟಿಗೆ ಕೆಲಸ ಮಾಡೋಣ” ಎಂದು,  ಗುರುದತ್

ನೆನಪು Read Post »

ಇತರೆ

ಪ್ರಸ್ತುತ

ಕೆಲ ಪುರುಷರಿಗೆ ಕಪ್ಪು ಇರುವೆ ತುಂಬಾ ಇಷ್ಟ… ಇಂಗ್ಲೀಷ್ ಮೂಲ: ಅಜಿತ ಘೋರ್ಪಡೆ   ಕನ್ನಡಕ್ಕೆ: ಚಂದ್ರಪ್ರಭ ಬಿ. ಕೆಲ ಪುರುಷರಿಗೆ ಕಪ್ಪು ಇರುವೆ ತುಂಬಾ ಇಷ್ಟ… ಹೆಣ್ಣು ಮಕ್ಕಳನ್ನು ಕೆಂಪು ಇರುವೆಗೆ ಹೋಲಿಸುವ ಕೆಲವೇ ಕೆಲವು ಜನ ನಮ್ಮ ನಡುವಿದ್ದಾರೆ ಈ ವ್ಯಕ್ತಿಯಿಂದ ತನಗೆ ಅಪಾಯವಿದೆಯೆಂದು ಅರಿತಾಕ್ಷಣ ಆ ವ್ಯಕ್ತಿ ಯಾರೆಂಬುದನ್ನು ನೋಡದೆ ಅವರನ್ನು ಕೆಂಪು ಇರುವೆ ಕಚ್ಚಿಬಿಡುತ್ತದೆ. ಜನರೂ ಅಷ್ಟೇ, ಕೆಂಪು ಇರುವೆಯನ್ನು ಕಂಡೊಡನೆ ವ್ಯಗ್ರರಾಗಿ ಅದನ್ನು ಮುಗಿಸಿ ಬಿಡಲು ಹಾತೊರೆಯುತ್ತಾರೆ. ಅಷ್ಟೇ ಅಲ್ಲ ಅಕ್ಷರಶಃ ಅದನ್ನು ಹೊಸಕುವ ಮೂಲಕ ತಮ್ಮ ಶಕ್ತಿ, ಸಾಮರ್ಥ್ಯ ತೋರಿಸುವ ಪ್ರಯತ್ನ ಮಾಡುತ್ತಾರೆ. ಕೆಲವು ಪುರುಷರು ಹೀಗೂ ಇರುತ್ತಾರೆ, ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ,ಪ್ರತಿಕ್ರಿಯಿಸುವ ದಿಟ್ಟತನದಿಂದ ಎದೆಯೊಡ್ಡಿ ನಿಲ್ಲುವ ಹೆಣ್ಣು ಮಕ್ಕಳು ಅವರಿಗೆ ಇಷ್ಟವಾಗುವುದಿಲ್ಲ. ಇಂಥವರನ್ನು  ಅವರು ವ್ಯವಸ್ಥಿತವಾಗಿ ಹತ್ತಿಕ್ಕುವ ಪೂರ್ಣ ಪ್ರಯತ್ನ ಮಾಡುತ್ತಾರೆ. ಅದಕ್ಕಾಗಿ ಅವರು ಹೆಣ್ಣು ಮಕ್ಕಳೆಡೆಗಿನ ತಮ್ಮ ಪೂರ್ವಾಗ್ರಹ ಹಾಗೂ ತಿರಸ್ಕಾರಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ. ಥೇಟ್ ಕೆಂಪಿರುವೆಗಳನ್ನು ಹೊಸಕುವ ರೀತಿಯಲ್ಲೇ ಇವರನ್ನೂ ಹೊಸಕಬಯಸುತ್ತಾರೆ.  ಹಾಗಂತ ನಾನು ಹೆಣ್ಣು ಮಕ್ಕಳು ಅಶಕ್ತರು ಅಂತ ಹೇಳುತ್ತಿರುವೆ ಅಂದುಕೊಳ್ಳದಿರಿ. ಇದು ದೈಹಿಕ ಬಲಿಷ್ಠತನದ ಪ್ರಶ್ನೆಯೇ ಅಲ್ಲ‌. ಹೆಣ್ಣು – ಗಂಡು ಹುಟ್ಟುತ್ತಲೇ ದೈಹಿಕವಾಗಿ ವಿಭಿನ್ನತೆ ಪಡೆದು ಬಂದವರು. ಅದರಾಚೆಗಿನ ಕೌಶಲಗಳನ್ನೆಲ್ಲ ನಾವು ಹೇಗೆ ಗ್ರಹಿಸುತ್ತೇವೆ, ಅಳವಡಿಸಿಕೊಳ್ತೇವೆ ಎಂಬುದರ ಮೇಲೆ ಅವು ನಮಗೆ ಪ್ರಾಪ್ತವಾಗುತ್ತವೆ.. ಆದರೆ ಕೆಲವು ಗಂಡಸರು ಹೆಣ್ಣು ಮಕ್ಕಳು ಕಪ್ಪು ಇರುವೆಗಳಂತೆ ತಮ್ಮ ಅಧೀನತೆಗೆ ಒಳಗಾಗಿರಬೇಕೆಂದು ಬಯಸುತ್ತಾರೆ.‌ ತಮ್ಮನ್ನು ಹೊಸಕುವ ಪ್ರಯತ್ನ ನಡೆದಾಗಲೂ ಸಹ ಅವರು ಗಂಡಸರಿಗೆ ವಿಧೇಯರಾಗಿ ವಿನಮ್ರತೆಯಿಂದ ನಡೆದುಕೊಳ್ಳಬೇಕು ಎಂದು ಬಯಸುತ್ತಾರೆ. ನನಗೆ ಅತ್ಯಂತ ಆತ್ಮೀಯರಾಗಿರುವ ಒಬ್ಬರ ಉದಾಹರಣೆ ಮೂಲಕ ಇದನ್ನು ಹೇಳಬಯಸುವೆ. ನನ್ನ ಒಬ್ಬ ಗೆಳತಿಗೆ ಒಬ್ಬ ಆಪ್ತ ಮಿತ್ರನಿದ್ದ. ಅವ ತನಗೆ ಮೋಸ ಮಾಡುತ್ತಿದ್ದಾನೆ ಅಂತ ಅನ್ನಿಸಿದಾಗ ಆಕೆ ಅದನ್ನು ಪ್ರಶ್ನಿಸಿದಳು. ಅದಕ್ಕೆ ಆತ ತಪ್ಪೊಪ್ಪಿಕೊಂಡು ತಿದ್ದಿಕೊಳ್ಳಲು ಒಂದು ಅವಕಾಶ ಕೊಡಲು ಕೇಳಿದ. ಈಕೆ ಒಪ್ಪಿದಳು. ಆದರೆ ಅದಕ್ಕೆ ಮುನ್ನ ಆತ, ಆಕೆ ಸಕ್ರಿಯವಾಗಿದ್ದ ಎಲ್ಲಾ ಸಾಮಾಜಿಕ, ಜಾಲತಾಣಗಳ ಚಾಟ್ ಮಾಡುವ ಇನ್ ಬಾಕ್ಸುಗಳನ್ನು ಜಾಲಾಡಿ ನೋಡಿದ ಆಕೆ ತನಗೆ ‌ಮೋಸ ಮಾಡುತ್ತಿಲ್ಲವಷ್ಟೇ ಎಂದು ಖಾತ್ರಿ ಪಡಿಸಿಕೊಳ್ಳಲು. ಎಲ್ಲೂ ಅಂಥದು ಅವನಿಗೆ ಸಿಗಲಿಲ್ಲ. ಆದರೆ ಇನ್ನೊಬ್ಬ ಆಕೆಯ ಆಪ್ತ ಗೆಳೆಯ ಒಂದೆಡೆ ಆಕೆಯನ್ನು ಡಿಯರ್ ಅಂತ ಸಂಭೋಧಿಸಿದ್ದ. ಹಾಗೆ ಸಂಭೋಧಿಸಲು ಆಕೆ ಆ ಇನ್ನೊಬ್ಬನಿಗೆ ಅದ್ಹೇಗೆ ಅವಕಾಶ ಕೊಟ್ಟಳೆಂದು ಕೇಳಿದ. ಅಷ್ಟೇ ಅಲ್ಲ ಮತ್ತೆ ಮತ್ತೆ ಆಕೆಗೆ ವಿಶ್ವಾಸದ್ರೋಹ ಮಾಡಿದ. ಇಷ್ಟೆಲ್ಲಾ ಆದ ಬಳಿಕ ಆಕೆ ಇವನನ್ನು ತೊರೆದು ಇನ್ನೊಬ್ಬ ಗೆಳೆಯನೊಂದಿಗೆ ಆಪ್ತವಾದಳು. ಆದರೆ ಆಕೆಯ ಮಾಜಿ ಗೆಳೆಯನಿಗೆ ಇದನ್ನು ಸಹಿಸಿಕೊಳ್ಳಲಾಗಲಿಲ್ಲ. ಅವನೊಬ್ಬ ವಿಕೃತ ಮನಸ್ಸಿನವನಾಗಿದ್ದ. ಆಕೆಯ ಹೊಸ ಗೆಳೆಯನಿಗೆ ಅನಾಮಧೇಯವಾಗಿ ಬೇರೆ ಬೇರೆ ಮಾಧ್ಯಮಗಳ ಮೂಲಕ ಅವಳನ್ನು ಕುರಿತು ಸಂದೇಶ ಕಳಿಸಿದ. ಆಕೆ ಕನ್ಯತ್ವ ಕಳೆದುಕೊಂಡವಳೆಂಬ ಕೀಳು ಮಾತನ್ನು ಬರೆದ. ಆಕೆ ಕಳಂಕಿನಿ ಅಂದ. ಸಿಕ್ಕ ಸಿಕ್ಕ ಸಾರ್ವಜನಿಕ ಶೌಚಾಲಯಗಳ ಗೋಡೆಗಳ ಮೇಲೆ ಆಕೆಯ ಫೋನ್ ನಂಬರ್ ಬರೆಯುತ್ತೇನೆಂದು ಬೆದರಿಸಿದ. ಅವಳನ್ನು ಹೀನಾಯಗೊಳಿಸುವ ಎಲ್ಲ ಅವಕಾಶಗಳನ್ನೂ ಬಳಸಿಕೊಂಡ. ಇದಾವುದಕ್ಕೂ ಸೊಪ್ಪು ಹಾಕದ ಹುಡುಗಿ ತನ್ನ ದಾರಿಯಲ್ಲಿ ತಾ ಮುಂದೆ ಸಾಗಿದಳು. ಇಲ್ಲಿ ಹುಟ್ಟುವ ಪ್ರಶ್ನೆ ಏನೆಂದರೆ ತಾನು ಇನ್ನೊಬ್ಬ ಹುಡುಗಿ ಜೊತೆ ಹೋದ ಬಳಿಕ ಮೊದಲಿನ ತನ್ನ ಗೆಳತಿ ಯಾರೊಂದಿಗೆ ಹೋದರೆ ಇವನಿಗೆ ಏನಾಗಬೇಕು? ಅದನ್ನು ನೋಡಿ ಸಹಿಸುವುದು ಅವನಿಗೆ ಸಾಧ್ಯವಿರಲಿಲ್ಲ ಎಂಬುದು ಬಹು ಮುಖ್ಯ ಸಂಗತಿ.  ತನ್ನ ಗೆಳತಿ ಕೈಯಲ್ಲಿ ತಾನೇ ಪುರಾವೆ ಸಹಿತ ಸಿಕ್ಕಿ ಹಾಕಿಕೊಂಡ ಮೇಲೂ ಆತನ ವರ್ತನೆಯೇಕೆ ಹೀಗಿತ್ತು ಎಂಬುದು ಗಮನಿಸಬೇಕಾದ ಅಂಶ. ಹೆಣ್ಣಿರಲಿ ಗಂಡಿರಲಿ ಕೆಲವು ಸೂಕ್ಷ್ಮ ನಿಷೇಧ, ಬಹಿಷ್ಕಾರಗಳನ್ನು,ಲಿಂಗ ಸಮಾನತೆಯನ್ನು ಕುರಿತು ಅವರಿಗೆ ಕಡ್ಡಾಯವಾಗಿ ಒಂದಿಷ್ಟು ಶಿಕ್ಷಣವನ್ನು ಪಾಲಕರು, ಪೋಷಕರು, ಶಿಕ್ಷಕರು ಎಲ್ಲಕ್ಕಿಂತ ಹೆಚ್ಚಾಗಿ ಮಾಧ್ಯಮಗಳು, ಪುಸ್ತಕಗಳ ಮೂಲಕ ದೊರಕುವಂತಾಗಬೇಕು.  ಆ ಗೆಳೆಯನ ವಿಷಯದಲ್ಲಿ ಬಹುಶಃ ತಂದೆ ತಾಯಿ, ‌ಶಿಕ್ಷಕರು, ಸ್ನೇಹಿತರು, ಮಾಧ್ಯಮ, ಪುಸ್ತಕಗಳು ಯಾರೊಬ್ಬರಿಂದಲೂ ಆತನಿಗೆ ಇಂಥದೊಂದು ಶಿಕ್ಷಣ ಸಿಕ್ಕಿರಲಿಕ್ಕಿಲ್ಲ. ಅಂತೆಯೇ ಆತನ ವರ್ತನೆ‌ ದೋಷಪೂರಿತವಾಗಿದೆ. ಕೆಲವು ಗಂಡಸರು ಬಳಸುವ ದೈಹಿಕ ಬಲ ಪ್ರದರ್ಶನದ ಕುರಿತು ನಾನಿಲ್ಲಿ ಹೇಳುತ್ತಿಲ್ಲ. ಬದಲಾಗಿ ಮಾಧ್ಯಮಗಳಲ್ಲಿ ದಿನವೂ ಇಂಥ ಮೋಸ, ತಟವಟಗಳ ಕತೆಯನ್ನು ಪುಂಖಾನುಪುಂಖವಾಗಿ ನೋಡುತ್ತಲೇ ಇರುತ್ತೇವೆ. ಇವನಿಂದ ಮೋಸ ಹೋದಳು.. ಅವನಿಂದ ಮೋಸವಾಯಿತು ಇತ್ಯಾದಿ ಇತ್ಯಾದಿ. ಇಂತಹ ಸುದ್ದಿ ಬಿತ್ತರಗಳು ಸಾಧಿಸುವುದು ಏನನ್ನು!! ಮುಗಿಸುವ ಮುನ್ನ ನಾನು ಏನನ್ನೂ ಹೇಳಲು ಬಯಸುವುದಿಲ್ಲ. ಈ ಬರಹಕ್ಕೆ ಕೊಡುವ ಶೀರ್ಷಿಕೆ ಹೀಗಿರಲಿ ಎಂದು ಬಯಸುತ್ತೇನೆ ಅಷ್ಟೇ : ಕೆಲ ಪುರುಷರಿಗೆ ಕಪ್ಪು  ಇರುವೆ ಎಂದರೆ ತುಂಬಾ ಇಷ್ಟ ******************* .

ಪ್ರಸ್ತುತ Read Post »

ಇತರೆ

ಬದುಕು-ಬರಹ

ಅಮೃತಾ ಪ್ರೀತಮ್ ಜ್ಞಾನಪೀಠ ಪ್ರಶಸ್ತಿ ವಿಜೇತೆ, ಹೆಸರಾಂತ ಪಂಜಾಬಿ ಲೇಖಕಿ ಅಮೃತಾ ಪ್ರೀತಮ್..! ಅಮೃತಾ ಪ್ರೀತಮ್ ಹೆಸರಾಂತ ಪಂಜಾಬಿ ಲೇಖಕಿ, ಕವಯಿತ್ರಿ, ಕತೆಗಾರ್ತಿ, ಕಾದಂಬರಿಗಾರ್ತಿ. ಜ್ಞಾನಪೀಠ ಪ್ರಶಸ್ತಿ ವಿಜೇತೆ. ಅವಿಭಕ್ತ ಪಂಜಾಬಿನ ಲಾಹೋರಿನ ಬಳಿಯ ಗುಜರಾವಾಲೆಯಲ್ಲಿ 31ನೆಯ ಆಗಸ್ಟ್ 1919ರಂದು ಜನಿಸಿದರು. ಇವರ ತಂದೆ ಕರ್ತಾರಸಿಂಹ ‘ಹಿತಕಾರಿ’ ಸಹ ಅಂದಿನ ಪ್ರಸಿದ್ದ ಲೇಖಕರಲ್ಲೊಬ್ಬರು. ಪ್ರೀತಮ್ ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ ತಾಯಿ ರಾಜಕೌರ್ ಅವರನ್ನು ಕಳೆದುಕೊಂಡರು. ಅನಂತರ ತಂದೆಯ ಪೋಷಣೆಯಲ್ಲಿ ಬೆಳೆದು ಅವರ ಪ್ರೇರಣೆಯಿಂದಲೇ ಸಾಹಿತ್ಯ ರಚನೆಗೆ ತೊಡಗಿದವರು… ಇಪ್ಪತ್ತನೆಯ ವಯಸ್ಸಿನಲ್ಲಿ (ಡಿಸೆಂಬರ್ 1939) ಪ್ರೀತಮ್‍ಸಿಂಗ್ ಕವಾತಡಾ ಅವರೊಡನೆ ಇವರ ಮದುವೆಯಾಯಿತು. ನೂರಕ್ಕೂ ಹೆಚ್ಚು ಕವನಗಳನ್ನುಳ್ಳ ಇವರ ಮೊದಲ ಕೃತಿ ಅಮೃತಾ ಲಹರಾರಿ 1936ರಲ್ಲಿ ಹೊರಬಂತು. 1938ರಲ್ಲಿ ಇವರು ನವೀದುನಿಯಾ ಎಂಬ ಸಾಹಿತ್ಯ ಪತ್ರಿಕೆಯನ್ನು ನಡೆಸತೊಡಗಿದರು. ಲಾಹೋರಿನ ಆಕಾಶವಾಣಿಗೆ ಕವನಗಳನ್ನು ಬರೆಯಲಾರಂಭಿಸಿದರು. ಇವರ ಆರಂಭದ ಬರೆವಣಿಗೆಯ ಮೇಲೆ ಪಂಜಾಬಿನ ಖ್ಯಾತ ಕವಿ ಮೋಹಸಿಂಗ್ ಮತ್ತು ಪ್ರಸಿದ್ಧ ಲೇಖಕ ಗುರುಬಕ್ಷ್‍ಸಿಂಗ್ ಅವರ ಪ್ರಭಾವ ಸಾಕಷ್ಟು ಬಿದ್ದಿರುವುದಾಗಿ ತೋರುತ್ತದೆ… 1947ರಲ್ಲಿ ಭಾರತದ ವಿಭಜನೆಯಾದ ಅನಂತರ ಇವರು ಲಾಹೋರನ್ನು ತೊರೆದು ದೆಹಲಿಗೆ ಬಂದು ನೆಲೆಸಿದರು. ವಿಭಜನೆಯ ಸಮಯದಲ್ಲಿ ಅಲ್ಲಿಯ ಪ್ರಜೆಗಳಿಗೆ ಉಂಟಾದ ಆರ್ಥಿಕ ಹಾಗೂ ಮಾನಸಿಕ ಕಷ್ಟನಷ್ಟಗಳು ಇವರ ಮೇಲೆ ತುಂಬಾ ಪರಿಣಾಮ ಬೀರಿ ಇವರ ಅನೇಕ ಕೃತಿಗಳಲ್ಲಿ ಮಾರ್ದನಿ ಪಡೆದವು… ವಾರಸ್‍ಶಾಹ್ ಎಂಬ ಇವರ ಕವನ ಈ ನಿಟ್ಟಿನಲ್ಲಿ ತುಂಬಾ ಪ್ರಸಿದ್ಧವಾಗಿರುವ ಕೃತಿ. ಇವರ ಕೃತಿಗಳಲ್ಲಿ ಪಂಜಾಬಿನ ಜನಜೀವನದ ಹಲವಾರು ಮುಖಗಳ ಪರಿಚಯವಾಗುತ್ತದೆ. ಹಿಂದಿ ಸಾಹಿತ್ಯ ಕ್ಷೇತ್ರದಲ್ಲೂ ಇವರು ಜನಪ್ರಿಯ ಕಾದಂಬರಿಕಾರ್ತಿಯೆಂದು ಹೆಸರುವಾಸಿಯಾಗಿದ್ದಾರೆ. ಹೆಣ್ಣಿನ ಅಸಹಾಯಕತೆ, ಅವಳ ಮೇಲೆ ಸಮಾಜ ನಡೆಸುವ ದೌರ್ಜನ್ಯ, ಸಾಮಾಜಿಕ ಕಟ್ಟುಪಾಡುಗಳು ಇವರ ಆರಂಭಿಕ ಕಾದಂಬರಿಗಳ ತಿರುಳು. ಈಚಿನ ರಚನೆಗಳಲ್ಲಿ ಸಾಮಾಜಿಕ ಹಾಗೂ ಮನೋವೈಜ್ಞಾನಿಕ ಸಮಸ್ಯೆಗಳನ್ನು ಎತ್ತಿಕೊಂಡಿದ್ದಾರೆ… ಇವರ ಕೆಲವು ಕೃತಿಗಳು ಹೀಗಿವೆ– ಲಾಮಿಯಾವತನ್ (1948); ಸುನಹರ್ (1956) ಕವನ ಸಂಗ್ರಹಗಳು… ಪಿಂಜರ್ (1950), ಆಲನಾ (1952), ಬಂದ್ ದರ್‍ವಾಜಾ (1962), ರಂಗ್ ಕಾ ಪತ್ತಾ (1962), ವಾಕ್ ಥೀ ಅನೀತಾ (1963), ಧರತೀ, ಸಾಗರ್ ಔರ್ ಸೀಪಿಯಾಂ (1966), ದಿಲ್ಲೀ ಕಿ ಗಲಿಯಾಂ (1967), ಎಸ್ಕಿಮೋ ಸ್ಟೈಲ್ ತಥಾ ಏರಿಯಲ್ (1967), ಜಲಾವತನ್ (1969), ಜೇಬ್ ಕತರೇ (1970) ಕಾದಂಬರಿಗಳು… ಅಖರೀಖತ್ (1956). ಏಕ್ ಲಡಕೀ ಏಕ್ ಶಾಪ್ (1967) ಸಣ್ಣಕತೆಗಳ ಸಂಗ್ರಹ… ಇಕ್ಕೀಸ್ ಪತ್ತಿಯೋಂಕಾ ಗುಲಾಬ್ (1968) ಎಂಬುದು ಇವರ ಬಲ್ಗೇರಿಯ, ಸೋವಿಯತ್ ರಷ್ಯ, ಯುಗೋಸ್ಲಾವಿಯ, ಹಂಗೇರಿ, ರುಮೇನಿಯ ಮತ್ತು ಜರ್ಮನಿ ಪ್ರವಾಸದ ದಿನಚರಿ ಅತೀತ್ ಕೀ ಪರಛಾಯಿಯಾಂ (1962) ಕೃತಿಯಲ್ಲಿ ತಮ್ಮ ಬದುಕು ಹಾಗೂ ಸಾಹಿತ್ಯ, ದೇಶವಿದೇಶಗಳ ಬರಹಗಾರರ ಬದುಕು ಮತ್ತು ಸಾಹಿತ್ಯವನ್ನು ಕುರಿತಂತೆ ನೆನಪಿನ ಚಿತ್ರಗಳನ್ನು ಬಿಡಿಸಿದ್ದಾರೆ. ‘ರಸೀದಿ ಟಿಕೆಟ್’ ಇವರ ಆತ್ಮಕಥಾನಾತ್ಮಕ ಕೃತಿಯಾಗಿದೆ… ದೆಹಲಿಯ ಆಕಾಶವಾಣಿಯಲ್ಲಿ ಇವರು ಅನೇಕ ವರ್ಷ ಕೆಲಸ ಮಾಡಿದರು. ಮುಂಬಯಿಯ ಚಲನಚಿತ್ರ ಪ್ರಪಂಚಕ್ಕೂ ಹೆಜ್ಜೆಯಿಟ್ಟ ಇವರು ಆ ಕ್ಷೇತ್ರ ಒಗ್ಗದೇ ಮರಳಿದರು. ಇವರ ಅನೇಕ ಕೃತಿಗಳು ಭಾರತೀಯ ಭಾಷೆಗಳಲ್ಲೇ ಅಲ್ಲದೆ ಇಂಗ್ಲಿಷ್, ರಷ್ಯನ್, ಬಲ್ಗೇರಿಯನ್. ಹಂಗೇರಿಯನ್, ಜಪಾನಿ ಭಾಷೆಗಳಿಗೆ ಅನುವಾದಗೊಂಡಿವೆ… ಇವರ ಸಾಹಿತ್ಯ ಸೇವೆಯನ್ನು ಗಮನಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ 1956ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತು. ಅದನ್ನು ಪಡೆದ ಮಹಿಳೆಯರಲ್ಲಿ ಇವರೇ ಮೊದಲಿಗರು. 1969ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತು. ದೆಹಲಿ ವಿಶ್ವವಿದ್ಯಾಲಯ 1973ರಲ್ಲಿ ಗೌರವ ಡಿ.ಲಿಟ್ ಪ್ರಶಸ್ತಿ ನೀಡಿ ಗೌರವಿಸಿತು. ಬಲ್ಗೇರಿಯಾದ ಪ್ರಶಸ್ತಿಗೂ ಪಾತ್ರರಾದರು. 1966ರಿಂದೀಚೆಗೆ ಅಮೃತಾ ಪ್ರೀತಮ್ ಅವರು ನಾಗಮಣಿ ಎಂಬ ಪಂಜಾಬಿ ಪತ್ರಿಕೆಯ ಸಂಪಾದಕ ಪ್ರಕಾಶಕರಾಗಿದ್ದಾರೆ. ಇತ್ತೀಚೆಗೆ ಅಮೆರಿಕೆಯ ಮಿಚಿಗನ್ ವಿಶ್ವವಿದ್ಯಾಲಯದ ನಿಯತಕಾಲಿಕ ಮೆಹಫಿಲ್ ಇವರ ಕೃತಿಗಳನ್ನು ಕುರಿತಂತೆ ಒಂದು ಸಂಚಿಕೆಯನ್ನೂ ಹೊರತಂದಿದೆ… ಜ್ಞಾನಪೀಠ ಪ್ರಶಸ್ತಿ ಪಡೆದ ಇವರ ಕಾಗದ ಮತ್ತು ಕ್ಯಾನ್‍ವಾಸ್ ಕವನ ಸಂಗ್ರಹದಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿದ್ದಾರೆ. ಜನಪದ ಛಂದಸ್ಸು, ಲಾವಣೆಮಟ್ಟು, ಮುಕ್ತಛಂದಸ್ಸು ಇವುಗಳನ್ನು ವಿಧವಿಧವಾಗಿ ಬಳಸಿದ್ದಾರೆ. ಇವರ ಮೂಲಕ ಈ ಪ್ರಶಸ್ತಿ ಪಂಜಾಬಿಗೆ ಮೊದಲ ಸಲಕ್ಕೆ ಲಭಿಸಿದೆ. ಉನ್ನತ ಪ್ರಶಸ್ತಿ ಪಡೆದ ಮಹಿಳೆಯರಲ್ಲಿ ಈಕೆ ಎರಡನೆಯವರಾಗಿದ್ದಾರೆ. ಇಂತಹ ಅಮೃತಾ ಪ್ರೀತಮ್ ಅವರು ಅಕ್ಟೋಬರ್ 31, 2005ರಂದು ನಿಧನರಾದರು… ‌‌ ‌‌‌‌‌‌ ‌ ************* ಕೆ.ಶಿವು ಲಕ್ಕಣ್ಣವರ

ಬದುಕು-ಬರಹ Read Post »

ಇತರೆ

ಲಹರಿ

ಹೀಗೊಂದು ಕಾಲಕ್ಷೇಪ ರಾಮಸ್ವಾಮಿ ಡಿ.ಎಸ್. ಹೀಗೊಂದು ಕಾಲಕ್ಷೇಪ ಕಾಲ ಚಲಿಸುತ್ತಲೇ ಇದೆ. ಭೂಮಿ ಚಪ್ಪಟೆಯಾಗಿರದೆ ದುಂಡಗಿರುವ ಕಾರಣ, ಸಮಯ ಅನ್ನೋದು ಪೂರ್ವದಿಂದ ಸುರುವಾಗಿ ಪಶ್ಚಿಮಕ್ಕೆ ಹೋದ ಹಾಗೆ ಸೂರ್ಯನ ಚಲನೆಗೆ ತಕ್ಕಂತೆ ವ್ಯತ್ಯಾಸವಾಗುವುದು ಸಹಜ. ಪೂರ್ವದ ದೇಶಗಳನ್ನು ಬೆಳಗಿದ ಬೆಳಕಿನ ಎಂಜಲು ನಿಧಾನವಾಗಿ ಪಶ್ಚಿಮದ ದೇಶಗಳಿಗೆ ಬೀಳುತ್ತೆ. ಆದರೆ ಪಾಶ್ಚಿಮಾತ್ಯರ ಪ್ರಭಾವ ಅದ್ಯಾಕೋ ಪೂರ್ವದ ದೇಶಗಳ ಮೇಲೆ ಹೆಚ್ಚಾಗುತ್ತಿರುವ ಕಾರಣ ಪೂರ್ವದ ಕಾಲದಲ್ಲೇ ಹೊಳೆದ ಜ್ಞಾನವನ್ನು ಪೂರ್ವ ದೇಶದ ಜನ ಮರೆತು ಪಾಶ್ಚಿಮಾತ್ಯರ ರೀತಿ ರಿವಾಜು ಅನುಕರಿಸಿದ ಕಾರಣ ಅಪ್ಪ ಅಮ್ಮ ಬದುಕು ಜೀವನ ಮೌಲ್ಯ ಎಲ್ಲವೂ ಅರ್ಥಾಂತರ ಪಡೆಯುತ್ತಿವೆ. ಅಪ್ಪನನ್ನು ಕಳೆದುಕೊಂಡ ನಾನು, ಚಿಕ್ಕಂದಿನಲ್ಲೇ ಅಮ್ಮನನ್ನು ಕಳೆದುಕೊಂಡ ಶಶಾಂಕ ಆಗೀಗ ಜೊತೆ ಸೇರಿಕೊಂಡು ಜೀವನದ ಅರ್ಥ, ಪೂರ್ವ ಸೂರಿಗಳ ಬದುಕಿನ ರೀತಿ, ಆಧುನಿಕರ ಮನೋಭಾವ ಕುರಿತು ವಿಷಾದ ಪಡುತ್ತಲೇ ಇರುತ್ತೇವೆ. ನಮ್ಮ ಮಾತಿನ ನಡುವೆ ಗಾಂಧಿ, ಬುದ್ಧ, ಬಸವ, ಅಂಬೇಡ್ಕರ್, ಅಕ್ಕ ಮಹದೇವಿ, ಕುಂತಿ, ಸೀತೆ, ಅನಸೂಯೆ, ಅಹಲ್ಯೆಯರೂ ಹಾಜರಿ ಹಾಕುತ್ತಲೇ ಇರುತ್ತಾರೆ. ಮಾತಿನ ರೀತಿಯೂ ಅವತ್ತವತ್ತಿನ ರಾಜಕೀಯ, ಸಾಮಾಜಿಕ ಸನ್ನಿವೇಶಗಳ ಕಾರಣದಿಂದ ಬದಲಾಗುತ್ತಲೇ ಇರುತ್ತದೆ. ಈಗಂತೂ ಕೋವಿಡ್ ಕಾರಣ ಕಂಪ್ಲೀಟ್ ಲಾಕ್ ಡೌನ್. ಇದರ ಪರಿಣಾಮ ಮನೆ ಮನೆಯಲ್ಲೂ ಓದುವ, ಸಿನಿಮಾ ನೋಡುವ, ಹಳೆಯದನ್ನು ನೆನೆದು ಹೊಸದನ್ನು ತೂಕಕ್ಕೆ ಹಾಕುವ ಕೆಲಸ ನಡೆಯುತ್ತಲೇ ಇದೆ. ಬುದ್ಧನ ಮಗ ರಾಹುಲ, ಮತ್ತು ಹಿರಣ್ಯ ಕಶ್ಯಪುವಿನ ಮಗ ಪ್ರಹ್ಲಾದ ಇವತ್ತು ನಮ್ಮ ಮಾತಿನ ಮಧ್ಯೆ ಹೇಗೋ ಬಂದು ತೂರಿಕೊಂಡರು. ಪರಸ್ಪರ ಮಾತಿಗೆ ಕೂತರು. ಅವರವರ ಮನದಾಳದ ಸಮಸ್ಯೆಯನ್ನು ಹಂಚಿಕೊಂಡರು. *******************”********************** ಹರಿಯ ಧ್ಯಾನಕ್ಕೆ ಮನಸೋತು ಅಪ್ಪನನ್ನು ಅವನ ಹರನನ್ನೂ ವಿರೋಧಿಸಿ ಕಡೆಗೆ ಆ ಅಪ್ಪನನ್ನೇ ತಾನೇ ಸ್ವತಃ ಕೊಲ್ಲಿಸಿದ ಪ್ರಹ್ಲಾದ ಹಿರಣ್ಯಕಷಿಪುವಿನ ರಾಜ್ಯವನ್ನು ಆಳತೊಡಗಿದ ಮೇಲೂ ತನ್ನ ಹರಿಯ ಧ್ಯಾನದಲ್ಲೇ ಇದ್ದುಬಿಡುತ್ತಿದ್ದ. ಆಗೀಗ ಅಪರೂಪಕ್ಕೆ ರಾಜ್ಯದ ಜನತೆಯ ಕಷ್ಟ ಸುಖ ವಿಚಾರಿಸಿಕೊಳ್ಳಲು ತಾನೇ ಸ್ವತಃ ರಥ ಹತ್ತಿ ಊರೂರಿಗೆ ಹೋಗಿ ಜನರ ದೂರು ದುಮ್ಮಾನ ಕೇಳುತ್ತಿದ್ದ. ಹಾಗೆ ಒಮ್ಮೆ ದೂರದೂರಿಗೆ ಹೋಗಿ ಹಿಂತಿರುಗುತ್ತಿದ್ದಾಗ ರಥದ ಕುಲುಕಾಟದ ನಡುವೆಯೂ ನಿದ್ದೆಯ ಜೊಂಪಿನಲ್ಲಿದ್ದ ಪ್ರಹ್ಲಾದನನ್ನು ಕರೆದ ಸಾರಥಿ, “ಸ್ವಾಮಿ ಆಗಿನಿಂದ ಯಾರೋ ನಮ್ಮ ರಥವನ್ನು ಹಿಂಬಾಲಿಸುತ್ತಿದ್ದಾರೆ” ಎಂದ. ಪುರುಷ ಸಹಜ ಶೌರ್ಯದಿಂದ ಸಿಟ್ಟಾದ ಪ್ರಹ್ಲಾದ ರಥವನ್ನು ನಿಲ್ಲಿಸಲು ಹೇಳಿ, ತನ್ನ ಮೇಲೆ ದಾಳಿಗೆ ಬರುತ್ತಿರುವವನ ಮೇಲೆ ಪ್ರತಿ ದಾಳಿ ಮಾಡಲು ಸಿದ್ಧನಾದ. ರಥ ಹತ್ತಿರ ಬರುತ್ತಾ ಬರುತ್ತಾ ಇದು ಬುದ್ಧನ ಮಗ ರಾಹುಲ ಎನ್ನುವುದು ಅವನಿಗೆ ಖಾತ್ರಿಯಾಯಿತು. ತನ್ನ ಶಸ್ತ್ರಾಸ್ತ್ರಗಳನ್ನು ಸಡಿಲ ಮಾಡಿ ಆರಾಮದಲ್ಲಿ ಕೂತ ಪ್ರಹ್ಲಾದ.ಪ್ರಹ್ಲಾದನ ಬಳಿಗೆ ಬಂದ ರಾಹುಲ ” ನಿನ್ನ ರಥದಲ್ಲಿ ನಾನೂ ಬರಲಾ?” ಎಂದು ಕೇಳಿದ ತಕ್ಷಣ ಪ್ರಹ್ಲಾದನಿಗೆ ಏನು ಹೇಳಬೇಕೆಂಬುದೇ ತಿಳಿಯಲಿಲ್ಲ, ಇವನ ಈ ನಡೆಯಲ್ಲಿ ಯಾವುದಾದರೂ ಕುಟಿಲ ತಂತ್ರ ಇರಬಹುದೇನೋ ಎಂದು ಅನುಮಾನವಾಯಿತು. ಹುಬ್ಬು ಗಂಟಿಕ್ಕಿ ಯೋಚಿಸುವ ಹೊತ್ತಲ್ಲ. ರಾಹುಲನೇ ಮಾತು ಮುಂದುವರಿಸಿ “ಆಸೆಯೇ ದುಃಖಕ್ಕೆ ಮೂಲ ಎಂದವನ ಮಗ ನಾನು, ನಿನ್ನ ರಾಜ್ಯವನ್ನು ಪಡೆದುಕೊಂಡು ಏನು ಮಾಡಲಿ…….” ಎಂದು ಹೇಳುತ್ತಿದ್ದಾಗಲೇ ರಥದ ಬಾಗಿಲು ತೆರೆದ ಪ್ರಹ್ಲಾದ. ರಾಹುಲ ಕುಳಿತ ಪ್ರಹ್ಲಾದನ ರಥ ಮುಂದೆ ಹೋಗುತ್ತಿದ್ದರೆ, ರಾಹುಲ ಬಂದ ಅವನ ಸ್ವಂತದ ರಥ ಅದನ್ನು ಹಿಂಬಾಲಿಸುತ್ತಿತ್ತು. “ಹೇಗಿದ್ದೀಯಾ? , ಪ್ರಜೆಗಳು ಸೌಖ್ಯವೇ? ” ಎಂದಾಗ, ಹೌದು ಎನ್ನುವಂತೆ ತಲೆಯಾಡಿಸಿ, “ನಿನ್ನ ರಾಜ್ಯದ ಕಥೆ ಏನು ?” ಎಂದು ಕಣ್ಣಲ್ಲೇ ಪ್ರಶ್ನಿಸಿದ ಪ್ರಹ್ಲಾದ. “ಎಲ್ಲವೂ ಕ್ಷೇಮ” ಎಂದು ಕಣ್ಣಲೇ ಹೇಳಿದ ರಾಹುಲ ಒಂದೆರಡು ನಿಮಿಷದ ಮೌನದ ನಂತರ ” ಪ್ರಹ್ಲಾದ ನಿನಗೆ ಯಾವತ್ತೂ ಅನಾಥ ಪ್ರಜ್ಞೆ ಕಾಡಲಿಲ್ಲವಾ?” ಎಂದು ಕೇಳಿದ ರಾಹುಲ. ಇದಕ್ಕೆ ಏನು ಉತ್ತರ ನೀಡಬೇಕೆಂದೇ ಪ್ರಹ್ಲಾದನಿಗೆ ತಕ್ಷಣಕ್ಕೆ ಅರ್ಥವಾಗಲಿಲ್ಲ. ಒಂದೆರಡು ಕ್ಷಣದ ನಂತರ ಯೋಚಿಸಲು ಆರಂಭಿಸಿದ. ಅಪ್ಪ ಈಗ ಇಲ್ಲ, ನರಸಿಂಹ ಪ್ರತ್ಯಕ್ಷನಾಗಿ ಅಪ್ಪನನ್ನು ಕೊಲ್ಲುವುದಕ್ಕೆ ಮುನ್ನವೇ ಅಮ್ಮ ಪ್ರಾಣ ಬಿಟ್ಟಿದ್ದಳು. ಆದರೂ ತನಗೆ ಒಂದು ದಿನಕ್ಕೂ ಅನಾಥ ಪ್ರಜ್ಞೆ ಕಾಡಿರಲಿಲ್ಲ. ಸ್ವತಃ ಆತನ ಪತ್ನಿ ಲಕ್ಷ್ಮಿಯ ಮಾತಿನಿಂದಲೂ ಶಾಂತನಾಗದ ನರಸಿಂಹ, ನಾನು ಹೋಗಿ ಪ್ರಾರ್ಥಿಸಿದಾಗ ಶಾಂತ ಸ್ವರೂಪನಾದ. ಅದೇ ಕ್ಷಣಕ್ಕೆ ದೇವಾನು ದೇವತೆಗಳು ಹೂಮಳೆ ಸುರಿಸಿದ್ದರು. ಆ ಕ್ಷಣವನ್ನು ನೆನೆದಾಗಲೆಲ್ಲಾ ಪ್ರಹ್ಲಾದನಿಗೆ ಒಂಥರಾ ರೋಮಾಂಚನ. ಲಕ್ಷ ಲಕ್ಷ ವರ್ಷ ಜಪ ತಪಗಳನ್ನು ಮಾಡಿದವರಿಗೂ ದರ್ಶನ ನೀಡದ ಆ ಸ್ವಾಮಿ ತನ್ನ ಮುಂದೆ ಪ್ರತ್ಯಕ್ಷನಾದ ಕ್ಷಣವನ್ನು ಅವನ ನೆನಪಿನಲ್ಲಿ ಇಂದಿಗೂ ಹಸಿರಾಗಿತ್ತು. ಆದರೆ ಅಪ್ಪ ಅಮ್ಮ ಇಲ್ಲ ಎಂಬ ಅನಾಥ ಪ್ರಜ್ಞೆ ಯಾವತ್ತಿಗೂ ಕಾಡಿರಲಿಲ್ಲ. ಹರಿಯೇ ಅವನ ಪಾಲಿಗೆ ಸರ್ವಸ್ವವೂ ಆಗಿದ್ದ. ಹೀಗಿದ್ದೂ ರಾಹುಲ ಈ ಪ್ರಶ್ನೆ ಕೇಳಿದ ತಕ್ಷಣ ಅವನೊಳಗೆ ಸಾವಿರ ಪ್ರಶ್ನೆಗಳ ಅಲೆ ಒಮ್ಮೆಲೇ ಎದ್ದಿತು. ರಾಹುಲ ಮತ್ತೆ ಕೇಳಿದ ” ಪ್ರಹ್ಲಾದ ನಿನಗೆ ಅನಾಥ ಪ್ರಜ್ಞೆ ಯಾವತ್ತಿಗೂ ಕಾಡಲಿಲ್ಲವಾ ?” ಪ್ರಹ್ಲಾದ ಹೌದು ಇಲ್ಲ ಎಂಬ ಯಾವ ಉತ್ತರ ಕೊಡುವುದುಕ್ಕೂ ಸಾಧ್ಯವಾಗಲಿಲ್ಲ. ಆದರೆ ಪ್ರಹ್ಲಾದನ ಅಂತರಂಗಕ್ಕೆ ಮೊದಲಬಾರಿಗೆ ಗದೆಯಲ್ಲಿ ಬಲವಾಗಿ ಹೊಡೆದಂತೆ ಆಯಿತು. ” ನನ್ನಪ್ಪನಿಗೆ ನಡುರಾತ್ರಿಯಲ್ಲಿ ಜ್ಞಾನೋದಯವಾಗಿತ್ತು. ಹೆಂಡತಿ ಮಕ್ಕಳು ರಾಜ್ಯ ರತ್ನ ಎಲ್ಲವೂ ನಶ್ವರ ಎಂದು ಅರಿವಾಗಿತ್ತು. ಎಲ್ಲವನ್ನೂ ಬಿಟ್ಟು ಹೊರಟ. ಅವನಿಗೆ ಯಾರೂ ಬೇಡವಾಗಿತ್ತು. ನನಗೆ ಅಪ್ಪ ಬೇಕೆಂಬ ಆಸೆ, ಆದರೆ ಅಪ್ಪ ಆ ಆಸೆಯೇ ದುಃಖಕ್ಕೆ ಮೂಲ ಎನ್ನುತ್ತಾನೆ. ಅವನ ಎಲ್ಲ ಮಾತುಗಳು ನನಗೆ ಒಪ್ಪಿಗೆಯಾಗುವುದಿಲ್ಲ. ನಾನು ಯೋಚಿಸುವುದಕ್ಕೂ, ಅವನು ಯೋಚಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಅವನ ಅನುಭವ ನನಗಿಂತ ದೊಡ್ಡದು. ನಿಜ ಆದರೆ ಅವನ ವೈರಾಗ್ಯ ನನಗಿಲ್ಲ. ನನಗೆ ಎಲ್ಲವೂ ಬೇಕು. ಎಲ್ಲದೂ ಬೇಕು. ಆದರೆ ಅಪ್ಪ ಹೇಳುತ್ತಾನೆ ಆಸೆಯೇ ದುಃಖಕ್ಕೆ ಮೂಲ. ಎಲ್ಲ ಇದ್ದೂ ಏನೂ ಇಲ್ಲದ ಅನಾಥ ಪ್ರಜ್ಞೆ. ಬದುಕಿನ, ರಾಜ್ಯಾಡಳಿತದ ಕಠಿಣ ಸಮಸ್ಯೆ ಬಂದಾಗಲೆಲ್ಲಾ ಅಪ್ಪ ನೆನಪಾಗುತ್ತಾನೆ. ನನ್ನ ಬೆನ್ನಿಗೆ ನಿಂತು ಸಲಹೆ ನೀಡಿದರೆ ಹೇಗಿರುತ್ತಿತ್ತು ಎನಿಸುತ್ತದೆ. ಆದರೆ ಒಂದು ದಿನಕ್ಕೂ ನಾನು ಅಪ್ಪನೊಡನೆ ಹೀಗೆ ಕಾಲ ಕಳೆಯಲೇ ಇಲ್ಲ. ಅಪ್ಪ ಎಂದರೆ ಅದೇ ಪುರಾಣ, ಅದೇ ಗೊಡ್ಡು ವೇದಾಂತ” ಪ್ರಹ್ಲಾದ ಸುಮ್ಮನೆ ಕೇಳುತ್ತಿದ್ದ ” ನಿನಗೆ ಈ ಗಣಪತಿ ಕಥೆ ಗೊತ್ತಾ ?” ” ಯಾವುದು ?” ” ಅದೇ ನಾರದ ಮಹರ್ಷಿ ಪ್ರಪಂಚವನ್ನು ಸುತ್ತಿ ಬರಲು ಸ್ಪರ್ಧೆ ಇಟ್ಟಾಗ ಗಣೇಶ ಅಪ್ಪ , ಅಮ್ಮನ್ನನ್ನೇ ಸುತ್ತಿದ ಕಥೆ” ” ಗೊತ್ತು “ ” ನೀನ್ಯಾಕೆ ನಿಮ್ಮಪ್ಪನಲ್ಲೇ ದೇವರನ್ನು ಕಾಣಲಿಲ್ಲ “ ” ಅಪ್ಪ ನಾನೇ ದೇವರು ಎನ್ನುತ್ತಿದ್ದ, ಹರಿ ನನ್ನ ವೈರಿ ಎನ್ನುತ್ತಿದ್ದ. ಹರಿ ಧ್ಯಾನ ಮಾಡಿದಕ್ಕೆ ನನ್ನನ್ನು ಕೊಲ್ಲಲು ಹೊರಟಿದ್ದ” ” ಅದೆಲ್ಲವನ್ನೂ ಒಪ್ಪಿದೆ, ನೀನು ನಿನ್ನಪ್ಪನಲ್ಲಿ ಎಂದಾದರೂ ದೇವರನ್ನು ನೋಡಿದೆಯಾ ?” ” ನಾನು ನಮ್ಮಪ್ಪನಿಗೆ ಹರಿ ಧ್ಯಾನ ಮಾಡಲು ಹೇಳಿದೆ “ ” ನೀನು ನಿಮ್ಮಪ್ಪನಲ್ಲಿ ದೇವರನ್ನು ಕಂಡೆಯಾ ? ” ನನ್ನ ಪಾಲಿಗೆ ಹರಿಯೇ ಸಕಲವೂ ಆಗಿದ್ದ “ ” ನೀನು ನಿಮ್ಮಪ್ಪನಲ್ಲಿ ದೇವರನ್ನು ಕಂಡೆಯಾ ?” ಪ್ರಹ್ಲಾದನಿಗೆ ಇದಕ್ಕಿಂದಂತೆ ಸಿಟ್ಟು ಉಕ್ಕಿ ಬಂತು. ” ಇಲ್ಲ ನಾನು ಅಪ್ಪನನ್ನು ಎಂದೂ ದೇವರಂತೆ ಕಂಡಿಲ್ಲ, ಹರಿಯ ಸ್ಥಾನದಲ್ಲಿ ಅವನನ್ನಿಟ್ಟು ನೋಡುವುದು ನನಗೆ ಎಂದಿಗೂ ಸಾಧ್ಯವಿಲ್ಲಾ, ಹರಿಯನ್ನಷ್ಟೇ ನಾನು ದೇವರಾಗಿ ಕಂಡಿದ್ದು, ಬೇರೆಯವರು ಯಾರೂ ನನಗೆ ದೇವರಾಗಿ ಕಾಣಲಿಲ್ಲ “ ” ನಾನು ನಿನ್ನನ್ನು ಹುಡುಕಿ ಬಂದ ಕಾರಣ ಗೊತ್ತಾ?” ಪ್ರಶ್ನಿಸಿದ ರಾಹುಲ. ತನ್ನೊಳಗೆ ನೆಡೆಯುತ್ತಿದ್ದ ಕೋಲಾಹಲವನ್ನು ತಡೆದು “ಏಕೆ ?” ಎಂದು ಕಣ್ಣಿನಲ್ಲಿಯೇ ಪ್ರಶ್ನಿಸಿದ ಪ್ರಹ್ಲಾದ, ರಾಹುಲನನ್ನು. ” ನಿನ್ನ ಬಗ್ಗೆ ನನಗೆ ತಿಳಿದಾಗಿನಿಂದ ಒಂದು ರೀತಿಯ ವಿಚಿತ್ರ ಕುತೂಹಲ. ನಿನ್ನ ಹರಿ ನರಸಿಂಹನ ರೂಪದಲ್ಲಿ ಬಂದು ನಿನ್ನಪ್ಪನನ್ನು ಕೊಲ್ಲುತ್ತಿದ್ದಾಗ ಕೂಡಾ ಅಪ್ಪನನ್ನು ರಕ್ಷಿಸಿಕೊಳ್ಳುವ ಬದಲಿಗೆ ಹರಿ ಧ್ಯಾನವನ್ನೇ ಮಾಡುತ್ತಿದ್ದೆಯಂತೆ. ಅಂಥ ಗಟ್ಟಿ ಮನಸ್ಸು ನಿನಗೆ ಹೇಗೆ ಬಂದಿದ್ದು. ಸಾಕಷ್ಟು ಭಿನ್ನಾಭಿಪ್ರಾಯದ ನಡುವೆ, ಆಸೆಯೇ ದುಃಖಕ್ಕೆ ಮೂಲ ಎಂದು ಅಪ್ಪನೇ ಹೇಳಿದ ಬಳಿಕ ಕೂಡಾ ಅವನ ಆಸರೆಯ ಬಯಕೆಯಾಗುತ್ತದೆ. ಈ ಬಯಕೆ ಬಾಲ್ಯದಿಂದ ಇಂದಿನವರೆಗೂ ಬೆನ್ನು ಬಿಡದೇ ಕಾಡುತ್ತಿದೆ. ಅಪ್ಪನನ್ನು ಹರಿ ಕೊಲ್ಲುತ್ತಿದ್ದಾಗಲೂ ನೀನು ಅವನದೇ ಧ್ಯಾನ ಮಾಡುತ್ತಾ ನಿಂತಿದ್ದೆಯಲ್ಲ. ಇದು ಸಾಧ್ಯವಾಗಿದ್ದು ಹೇಗೆ ?. ಹೃದಯವನ್ನು ಆ ಮಟ್ಟಕ್ಕೆ ಗಟ್ಟಿ ಮಾಡಿಕೊಳ್ಳುವ ಬಗೆಯನ್ನು ನನಗೂ ಹೇಳಿಕೊಡು “, ಪ್ರಹ್ಲಾದನಿಗೆ ರಾಹುಲ ಕೇಳಿದ. ಪ್ರಹ್ಲಾದನ ಬಳಿ ಈ ಮಾತಿಗೆ ಉತ್ತರವೇ ಇರಲಿಲ್ಲ. ಕುದುರೆಯ ಖುರಪುಟದ ಸದ್ದಿನ ಹೊರತಾಗಿ ಉಳಿದೆಲ್ಲ ಕಡೆ ಬರೀ ನಿಶಬ್ದವೇ ತುಂಬಿತ್ತು. “ನಿನಗೆ ಅಪ್ಪನ ಮಾತಿನಂತೆ ತಾಯಿಯ ತಲೆ ಕಡಿದ ಪರುಶುರಾಮನ ಕಥೆ ಗೊತ್ತಾ ?” ಹೌದೆಂದು ತಲೆಯಾಡಿಸಿದ ಪ್ರಹ್ಲಾದ. ” ನಿನಗೆ ಏನು ಬೇಕು ಎಂದು ನಿನ್ನ ಹರಿ ಕೇಳಿದಾಗ ಏನು ವರ ಬೇಡಿದೆ ? “ ” ಈ ನಶ್ವರ ಜಗತ್ತಿನಲ್ಲಿ ಭಗವಂತನನ್ನು ಏನು ಕೇಳುವುದು, ನನಗೆ ಏನೂ ಕೇಳಬೇಕೆಂದೇ ಅನ್ನಿಸಲಿಲ್ಲ. ಅದಕ್ಕೆ ನನಗೆ ಏನೂ ಬೇಡ, ಆದರೆ ನಿನ್ನನ್ನು ಎಂದೂ ಏನನ್ನೂ ಕೇಳದಂಥ ಸ್ಥಿತಿಯಲ್ಲಿಡು” ಎಂದು ಕೇಳಿದೆ. ” ಪರುಶುರಾಮ ತನ್ನ ತಾಯಿಯನ್ನು ಬದುಕಿಸಿಕೊಡುವಂತೆ ಕೇಳಿದ ಹಾಗೆ ನೀನು ನಿನ್ನ ಹರಿ ಬಳಿ ನಿನ್ನ ತಂದೆಯನ್ನು ಬದುಕಿಸಿ ಕೊಡುವಂತೆ ಕೇಳಬಹುದಿತ್ತು. ನೀನೇಕೆ ಕೇಳಲಿಲ್ಲ ? “ ಪ್ರಹ್ಲಾದ ಏನೋ ಹೇಳಲು ಪ್ರಯತ್ನಿಸಿದ. ಏನೂ ಹೊಳೆಯದೇ ಸುಮ್ಮನಾದ. ************************************ ದಶಾವತಾರದ ಎಲ್ಲ ಕತೆಗಳೂ ಗೊತ್ತಿರುವ ನಿಮಗೆ ನರಸಿಂಹಾವತಾರದಲ್ಲಿ ಬರುವ ಪ್ರಹ್ಲಾದ , ಬೌದ್ಧಾವತಾರದಲ್ಲಿ ಬರುವ ಬುದ್ಧನ ಮಗ ರಾಹುಲ ಪರಿಚಿತರೇ. ಕತೆಗಳ ಮೂಲಕ ಪುರಾಣದ ಮೂಲಕ ಬದುಕಿನ ಹಲವು ಮಗ್ಗಲುಗಳನ್ನು ಶೋಧಿಸಿದ ಕಾಲಕ್ಕೆ ತಕ್ಕ ಉತ್ತರವನ್ನೂ ಕೊಟ್ಟ ನಮ್ಮ ಪೂರ್ವ ಸೂರಿಗಳ ಜ್ಞಾನ ಅರಿವು ಮತ್ತು ಬದುಕನ್ನು ಹೇಗೆ ಸ್ವೀಕರಿಸಬೇಕು ಎಂದು ತಿಳಿ ಹೇಳಿದ ಅವರನ್ನು ಮರೆತ ನಾವು ಈ ಕೋವಿಡ್ ಕೊಟ್ಟ ಬಿಗ್ ಬ್ರೇಕಲ್ಲಿ ಯುಟ್ಯೂಬಲ್ಲಿ ಅಥವ ಅಮೆಜಾನ್ ಪ್ರೈಮಲ್ಲಿ ಸಿನಿಮಾ ನೋಡುತ್ತ ಸೀರೆ ಉಟ್ಟು ಪಂಚೆ ಕಟ್ಟಿ ಪಟ ತೆಗೆದು ಫೇಸ್ಬುಕ್ಕಲ್ಲಿ ಹಾಕುತ್ತ ಇದ್ದೇವಲ್ಲ, ನಾವೆಲ್ಲ ನಮ್ಮ ಹಿರೀಕರು ಹೊತ್ತು ಹೊತ್ತಿನ ಹಿಟ್ಟಿಗೆ ಎಷ್ಟೆಲ್ಲ ಕಷ್ಟ ಪಡುತ್ತಿದ್ದರು ಅನ್ನೋದನ್ನು ಮರೆತಿದ್ದೇವೆ. ಎಷ್ಟೋ ಬಾರಿ ಅಡುಗೆ ಮನೆಯಲ್ಲಿ ಸಾರಿಸಿ ಇಟ್ಟ ಒಲೆಯ ರಂಗೋಲಿ ಅಳಿಸಿಲ್ಲ ಹೊಸ ಬೂದಿ ಆಗಿಲ್ಲ ಅಂದರೆ ಅವತ್ತು ಆ ಮನೆಯಲ್ಲಿ ಉಪವಾಸ ಇದ್ದಾರೆ ಅನ್ನೋದು ಗೊತ್ತಾಗುತ್ತಿತ್ತು. ಈ ಕಾಲದ ಮೈಕ್ರೋ ಓವನ್ ಗ್ಯಾಸ್ ಒಲೆ ಕಾಯಿಲ್ ಒಲೆಗಳಲ್ಲಿ ಬೇಯಿಸಿದ್ದು ಬೇಯಿಸದೇ ಇದ್ದದ್ದೂ ಗೊತ್ತಾಗಲ್ಲ. ಬೀದಿಯಲ್ಲಿ ಹೆಣ ಬಿದ್ದರೆ ಆ ಬೀದಿಯ ಯಾರ ಮನೇಲೂ ಊಟ ತಿಂಡಿ ಎಲ್ಲ ಬಂದ್ ಆಗ್ತಿತ್ತು. ಈಗ ಬಿಡಿ ಕೆಳಗಿನ ಮನೆಯಲ್ಲಿ ಹೆಣ ತಂದ ಅಂಬ್ಯುಲೆನ್ಸ್ ನಿಂತಿದ್ದರೆ ಮೇಲಿನ ಮನೆಯಲ್ಲಿ

ಲಹರಿ Read Post »

ಇತರೆ

ಮಕ್ಕಳ ಹಾಡು

ನಮ್ಮಯ ಬದುಕು ಮಲಿಕಜಾನ ಶೇಖ ಹಂಸಮ್ಮಾ ಬಂದಳು ಹಂಸಮ್ಮಾ ಕ್ವ್ಯಾಕ್ -ಕ್ವ್ಯಾಕ್ ಕ್ವ್ಯಾಕ್-ಕ್ವ್ಯಾಕ್ ನುಡಿಯುತ್ತಾ ಶ್ವೇತ ಬಣ್ಣ ನನ್ನದು ಹಾಲು-ಮೀನು ಕಂಡರೆ ನಾನು ಕರಿವೆ ಎಂದಳು ಮಕ್ಕಳ-ಮರಿಯನ್ನು. ಹುಂಜಪ್ಪಾ ಬಂದನು ಹುಂಜಪ್ಪಾ ಕುಕ್ಕು-ಕೂ ಕುಕ್ಕು- ಕೂ ಕೂಗುತ್ತಾ ತೆಲೆಯಲಿ ಫುಂಜ ನನ್ನದು ಹುಳವ-ಗಿಳವ ಕಂಡರೆ ನಾನು ಕರಿವೆ ಎಂದನು, ಹೆಂಡತಿ ಮಕ್ಕಳನು. ಕಾಗಣ್ಣ ಬಂದ ಕಾಗಣ್ಣ ಕಾವ್-ಕಾವ್ ಕಾವ್-ಕಾವ್ ಕಿರಚುತ್ತಾ ಕಪ್ಪು ಬಣ್ಣದು ನನ್ನದು ಅನ್ನದ ಅಗಳ ಕಂಡರೆ ನಾನು ಕರಿವೆ ಎಂದನು, ಬಂಧು-ಬಳಗವನು. ಗುಬ್ಬಕ್ಕಾ ಬಂದಳು ಗುಬ್ಬಕ್ಕಾ ಚಿಂವ್-ಚಿಂವ್ ಚಿಂವ್-ಚಿಂವ್ ಎನ್ನುತ್ತಾ ಗುಬ್ಬಿ ಗೂಡು ನನ್ನದು ವೈರಿ-ಗಿರಿಯ ಕಂಡರೆ ನಾನು ಕರಿವೆ ಎಂದಳು ಎಲ್ಲರನು. ಬೇಡಣ್ಣಾ ಬಂದಾ ಬೇಡಣ್ಣಾ ಕೂಗುತ್ತಾ ಬೈಯುತ್ತಾ ಹೊಡೆಯುತ್ತಾ ಮೋಸದ ಬಲೆಯು ನನ್ನದು ಕಾಳನು ತಿನ್ನುತ್ತಾ ಕಂಡರೆ ನಾನು ತಿನ್ನುವೆ ಬೇಯಿಸಿ ನಿಮ್ಮನ್ನು. ಹಾರುತ ಬಂದವು ಹಕ್ಕಿಗಳು ಕರಕರ ಕೊಕ್ಕನ್ನು ಕೆರೆಯುತ್ತಾ ನಮ್ಮಯ ಬದುಕು ನಮಗೆ ಬೀಡು ಸುಮ್ಮನೆ ಹೋಗೊ ಬೇಡಣ್ಣಾ ಇಲ್ಲದಿರೆ…..? ಕರಿವೆವು ನಾವು ಕೊರೋನಾ .. ಕೊರೋನಾ… *******

ಮಕ್ಕಳ ಹಾಡು Read Post »

ಇತರೆ

ಅಂತಿಮ ನಮನ

ಟಿ.ಎಲ್.ರಾಮಸ್ವಾಮಿ ಅಪರೂಪದ ಕ್ರಿಯಾಶೀಲ, ಸೃಜನಶೀಲ ಪತ್ರಿಕಾ ಛಾಯಾಗ್ರಾಹಕ ಟಿ.ಎಲ್‌.ರಾಮಸ್ವಾಮಿಯವರು..! ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತಿದೆ. ಅದರಂತೆ ಕ್ರಿಯಾಶೀಲ ಮತ್ತು ಸೃಜನಶೀಲ ಪತ್ರಿಕಾ ಛಾಯಾಚಿತ್ರ ಗ್ರಾಹಕ ಟಿ.ಎಲ್. ರಾಮಸ್ವಾಮಿಯವರು ತೀರಿದ್ದಾರೆ. ಅವರು ಆರು ದಶಕಗಳಿಗೂ ಹೆಚ್ಚು ಕಾಲದಿಂದ ಪತ್ರಿಕಾ ಛಾಯಾಗ್ರಾಹಕರಾಗಿ ಸಾವಿರಾರು ಚಿತ್ರಗಳ ಮೂಲಕ ಕರ್ನಾಟಕದ ಆಗುಹೋಗುಗಳನ್ನು ಸೆರೆಹಿಡಿದವರು. ಅವರು ಪತ್ರಿಕಾ ಛಾಯಾಚಿತ್ರ ಕಲೆಯಲ್ಲಿ ವಿಶಿಷ್ಟ ಪ್ರತಿಭೆಯನ್ನೂ ತೋರಿ ದೇಶ ವಿದೇಶಗಳ ಪತ್ರಿಕೆಗಳ ಗೌರವಾದರ ಪಡೆದವರು… 1950 ರಿಂದ 1985 ರವರೆಗೆ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪತ್ರಿಕಾ ಬಳಗದಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿ ಅನುಭವ ಗಳಿಸಿದವರು. ನಂತರ ಮುಕ್ತ ಪತ್ರಿಕಾ ಛಾಯಾಚಿತ್ರ ವರದಿಗಾರರಾದರೂ ಆದವರು… ಭಾರತದ ಪ್ರಮುಖ ಪತ್ರಿಕೆಗಳ ಸಂಪರ್ಕ ಪಡೆದಿದವರು. ಫೈನಾನ್ಶಿಯಲ್ ಟೈಮ್ಸ್ ಆಫ್ ಲಂಡನ್ ಸಹ ಇವರು ತೆಗೆದಿರುವ ಛಾಯಾಚಿತ್ರಗಳನ್ನು ಪ್ರಕಟಿಸಿದೆ… ಪ್ರಜಾವಾಣಿ, ಮಯೂರ, ಟೈಮ್ಸ್‌ ಆಫ್ ಇಂಡಿಯಾ ಸೇರಿದಂತೆ ಹಲವು ಪತ್ರಿಕೆ– ನಿಯತಕಾಲಿಕೆಗಳಲ್ಲಿ ಛಾಯಾಚಿತ್ರ ಅಂಕಣಕಾರರಾಗಿ ಜನಪ್ರಿಯತೆ ಗಳಿಸಿದವರು… ಜಪಾನ್‌ ನ ನಿಹಾನ್ ಸಿನ್ಬುನ್ ಕ್ಯೊಕಾಯಿ ಸಂಸ್ಥೆ ಮತ್ತು ಲಂಡನ್‌ ನ ಥಾಮ್ಸನ್ ಪ್ರತಿಷ್ಠಾನದಿಂದ ಪತ್ರಿಕಾ ಛಾಯಾಚಿತ್ರ ಕಲೆಯಲ್ಲಿ ಡಿಪ್ಲೊಮಾ ಪಡೆದಿದವರು. ಜಪಾನ್‌ ನ ಅಸಾಹಿ ಶಿನ್‍ಬುನ್, ಮೈನಿಚಿ ಶಿನ್‍ಬುನ್, ಯೊಮಿಯುರಿ ಮತ್ತು ಕ್ಯೋಟೋ ಶಿನ್‍ಬುನ್ ಪತ್ರಿಕೆಗಳಲ್ಲಿ ದುಡಿದು ಅನುಭವ ಪಡೆದವರು. ಫ್ಲೀಟ್ ಸ್ಟ್ರೀಟ್‌ ನ ಲಂಡನ್ ಟೈಮ್ಸ್, ಡೈಲಿ ಮಿರರ್ ಪತ್ರಿಕೆಗಳಲ್ಲೂ ಅನುಭವ ಗಳಿಸಿದ ಹೆಗ್ಗಳಿಕೆ ಟಿ.ಎಲ್‌. ರಾಮಸ್ವಾಮಿಯರದು… ಟಿ.ಎಲ್. ರಾಮಸ್ವಾಮಿ ಅವರು ಜಮ್ಮು ಮತ್ತು ಪಂಜಾಬ್ ಗಡಿಗಳಲ್ಲಿ ಸಮವಸ್ತ್ರ ಧರಿಸಿ ಯುದ್ಧ ವರದಿಯ ತರಬೇತಿ ಪಡೆದಿದ್ದವರು. ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ. ರೋಟರಿ, ಲಯನ್ಸ್ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿ ಗೌರವಗಳೂ ಅವರಿಗೆ ಸಂದಿವೆ… ಕ್ರೀಡಾ ಕ್ಷೇತ್ರದ ಅವರ ಸೇವೆ ಮತ್ತು ಸಾಧನೆಯನ್ನು ಗೌರವಿಸಿ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಆಜೀವ ಸದಸ್ಯತ್ವ ನೀಡಿ ಗೌರವಿಸಿದೆ. ಈ ಎಂಭತ್ತರ ಹರೆಯದಲ್ಲಿಯೂ ಯಾವುದೇ ಕಾರ್ಯಕ್ರಮಕ್ಕೆ ಹಾಜರಾದರೂ ಹೆಗಲ ಮೇಲೆ ಕ್ಯಾಮೆರಾ ಹೊತ್ತು ಹಾಜರಾಗುವ ಪರಿಪಾಠವನ್ನು ಮುಂದುವರೆಸಿದ್ದರು. ಅಪರೂಪದ ಚಿತ್ರಗಳ ಮೂಲಕ ಈಗಲೂ ಇತಿಹಾಸದ ಪುಟಗಳನ್ನು ಸಂಪದ್ಭರಿತವಾಗಿಸುತ್ತಿದ್ದವರು ಟಿ.ಎಲ್.ರಾಮಸ್ವಾಮಿವರು… ಇಂತಹ ಟಿ.ಎಲ್. ರಾಮಸ್ವಾಮಿಯವರು ಈಗ ತೀರಿಕೊಂಡಿದ್ದಾರೆ. ಅವರಿಗಿದೋ ನಮನಗಳು… *************************************************************** ಕೆ.ಶಿವು.ಲಕ್ಕಣ್ಣವರ ‌

ಅಂತಿಮ ನಮನ Read Post »

ಇತರೆ

ಪ್ರಸ್ತುತ

ಪರೀಕ್ಷೆಗಳತ್ತ ಚಿತ್ತ ವನಜಾ ಸುರೇಶ್ ಪರೀಕ್ಷೆಗೆ  ದಿನಗಣನೆ  ಆರಂಭವಾಗಿದೆ  . ಕೆಲವು  ಮಕ್ಕಳಿಗೆ.  ಪರೀಕ್ಷೆ  ಮುಗಿದರೆ ಸಾಕೆಂಬ ಮನೋಭಾವವು ಇದೆ . ಕೆಲವರಲ್ಲಿ ಭಯವೂ ಇದೆ. 2019 ಜೂನ್ ನಿಂದು ಪ್ರಾರಂಬಿದ  ಪರೀಕ್ಷಾ ತಯಾರಿ  ಅಂತಿಮ ಹಂತಕ್ಕೆ ಬಂದು ನಿಂತಿದೆ.   ಡಿಸೆಂಬರ್ ಗೆ ಬೋದಿಸಬೇಕಾದ ಪಠ್ಯಭಾಗವನ್ನು  ಮುಗಿಸಿ  ಜನವರಿಯಿಂದ  ಪುನರಾವರ್ತನೆ ಮಾಡಲಾಗಿದೆ  ಫೆಬ್ರವರಿಯಿಂದ  ಸಾಕಷ್ಟು ಸರಣಿ ಪರೀಕ್ಷೆಗಳನ್ನು ಮಾಡಿ  ಬರವಣಿಗೆ ದೋಷವನ್ನು ಸರಿಪಡಿಸಿಕೊಳಲು ತಿಳುವಳಿಕೆ ಹೇಳಲಾಗಿದೆ ಕ್ಲಿಷ್ಟಕರಕರವೆನಿಸಿದ  ಪಠ್ಯಭಾಗವನ್ನು  ಪುನಃ ಪುನಃ ಬೋಧನೆ ಮಾಡಿ ಪರೀಕ್ಷೆ ಗಳನ್ನು ಮಾಡಿ  ತಿಳಿಸಲಾಗಿದೆ. ನಂತರ ವಿದ್ಯಾರ್ಥಿಗಳು ಕಲಿಕೆಯ ಹಾಗೂ ಅಭಿವ್ಯಕ್ತಿಯ  ಮಾನದಂಡದಂತೆ  ಎ  ಶ್ರೇಣಿ ಬಿ  ಶ್ರೇಣಿ  ಹಾಗೂ ಸಿ.  ಶ್ರೇಣಿಗಳಾಗಿ  ವಿಭಾಗಿಸಿ  ಕೊಂಡು ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಬೋದಿಸಲಾಗಿದೆ . C ಶ್ರೇಣಿಯಲ್ಲಿ ಗೆ ಕೆಲವು ಆಯ್ದ ಪಠ್ಯಭಾಗಗಳನ್ನೇ ಬೋಧಿಸಿ ನಿತ್ಯ ಬರೆಸಿ  ಮೌಖಿಕವಾಗಿ  ಹೇಳಿಸಿ  ಡ್ರಿಲ್  ವರ್ಕ್     ಮಾಡಿಸಿ,  ಅವರಿಗೂ ನಾವು ಬರೆಯಬಲ್ಲೆ ವೆಂಬ  ವಿಶ್ವಾಸ  ಮೂಡಿಸಲಾಗಿದೆ. A. ಶ್ರೇಣಿ ಯ ವಿದ್ಯಾರ್ಥಿ ಗಳಿಗೆ ಇಡೀ  ಪಠ್ಯಭಾಗವನ್ನು  ಓದಿಕೊಂಡು  ಹೇಗೆ ಪ್ರಬುದ್ಧತೆ ಯಿಂದ ಉತ್ತರ ಬರೆಯಬೇಕೆಂಬ. ಬಗೆಗೆ ತಿಳುವಳಿಕೆ ಜೊತೆ ಜೊತೆಗೆ ಹಲವು ಸುತ್ತಿನ ಬರವಣಿಗೆ ಮೂಲಕ,   ಸರಣಿ ಪರೀಕ್ಷೆ ಗಳು ಮೂಲಕ ತಯಾರಿ  ಮಾಡಿಸಲಾಗಿದೆ . ನಿಮಗೆ ಸಾಮರ್ಥ್ಯವಿದೆ  ನೂರಕ್ಕೆ , ನೂರೂ ತಗೊಂಡು ಅಚೀವ್ ಮಾಡಿರೆಂದೂ ,  ಪ್ರೋತ್ಸಾಹಿಸಿದ್ದೇವೆ . ಮಕ್ಕಳೂ ಈ ನಿಟ್ಟಿನಲ್ಲಿ ಸಿದ್ಧತಾ ಪರೀಕ್ಷೆ ಬರೆದು , ಖಾತ್ರಿಮಾಡಿಕೊಂಡಿದ್ದಾರೆ.   ಇನ್ನು ಇಡೀ ವರ್ಷವವೆಲ್ಲ  ತರಬೇತಿಗೊಳಿಸಿದ  ಶಿಕ್ಷಕರು, ಕ್ರಿಕೆಟ್  ,ತರಬೇತುದಾರ,   ಗ್ಯಾಲರಿಯಲ್ಲಿ ಕುಳಿತು  ತಮ್ಮ ಶಿಷ್ಯರ  ಅದ್ಬುತ ಪ್ರದರ್ಶನಕ್ಕೆ  ,  ಕ್ರಿಕೆಟಿಗ ಚೆಂಡನ್ನು ಎದುರಿಸಿ , ಸಿಕ್ಸರ್ ಬಾರಿಸಿ ,  ನೆರೆದ ಸಭಿಕರಿಗೆ  , ಕೋಚ್ ಗಳಿಗೆ ಸಂತಸ  ತರುವನೋ,  ಎಂದು    ಆಸೆ  ಕಾತರದಿಂದ  ಕಾಯುವಂತೆ ,  ಶಿಕ್ಷಕರಾದ  ನಾವುಗಳೂ , ಆಸೆ , ಆತಂಕ , ಕುತೂಹಲದಿಂದ ಗಳಿಂದ ಎದುರು  ನೋಡುತ್ತಿದ್ದೇವೆ .     ಪ್ರತಿಯೊಬ್ಬ ವಿದ್ಯಾರ್ಥಿಯೂ  ಒಂದೊಂದು ಪ್ರಶ್ನೆ ಯನ್ನು  ಹೇಗೇಗೆ   ಉತ್ತರಿಸಬಲ್ಲ  ಎಷ್ಟು   ಉತ್ತರಿಸ ಬಲ್ಲ ಎಷ್ಟು ಜನ ವಿದ್ಯಾರ್ಥಿಗಳು  ಯಾವ ಯಾವ ಪ್ರಶ್ನೆ ಗಳಿಗೆ  ಉತ್ತರಿಸುತ್ತಾರೆಂಬ  ಅಂಕಿ ಅಂಶವೂ  ನಮಗೀಗ  ದೃಢವಾಗಿದೆ. , ಆದರೂ ಬದಲಾದ ಪರೀಕ್ಷಾ ಪದ್ಧತಿ  ಎಂಬ. ಮಾಹಿತಿ ಗೇ ಹಲವು ಮಕ್ಕಳು  ಅಧೀರರಾಗುವುದನ್ನು , ಗಮನಿಸಿ  ಸಾಕಷ್ಟು   ಆತ್ಮವಿಶ್ವಾಸ ದ. , ಮಾತುಗಳು ಮೂಲಕ ದೈರ್ಯ ತುಂಬಿದ್ದೇವೆ .   ಮಕ್ಕಳೇ  ಮುಂದಿನ  ಪರೀಕ್ಷೆಯು  ನಿಮ್ಮ ನಿಮ್ಮ ಶಾಲೆಗಳಲ್ಲಿ  ನಡೆಯುವುದಿಲ್ಲ. , ಹಾಗೇ. ನಿಮ್ಮ ಶಿಕ್ಷಕರಿರುವುದಿಲ್ಲಾ  ಎಂಬ ಬಗ್ಗೆ  ಗಾಬರಿ  ಬೇಡ . ಅಂಜಿಕೆಯೂ ಬೇಡ .    ಯಾರಾದರೂ ಎಲ್ಲರೂ ಶಿಕ್ಷಕರೇ. ಎಲ್ಲರಿಗೂ  ವಿದ್ಯಾರ್ಥಿಗಳ ಬಗ್ಗೆ  ಪ್ರೀತಿಪೂರ್ವಕ. ಕಾಳಜಿ  ಇದ್ದೇ  ಇರುತ್ತದೆ . ಆದ್ದರಿಂದ ಎಲ್ಲರೂ ದೈರ್ಯವಾಗಿ  ಪರೀಕ್ಷಾ ಕೇಂದ್ರಗಳಿಗೆ  ತೆರಳಿ ರಿ.  ನಿಮ್ಮ ಬರವಣಿಗೆಗೆ ಯಾರೂ ಅಡ್ಡಿ ಮಾಡುವುದಿಲ್ಲಾ. ಪರೀಕ್ಷಾ ದಿನದಂದು ಅರ್ಧ ಗಂಟೆ ಮೊದಲು ಕೇಂದ್ರಕ್ಕೆ ತೆರಳಿ ರಿ  , ನಿಮ್ಮ ಹಾಜರಿ ಸಂಖ್ಯೆಗಳನ್ನು ಖಾತ್ರಿ ಮಾಡಿಕೋಳ್ಳಿರಿ ,. ಶಾಂತ ಚಿತ್ತದಿಂದ  ಪ್ರಶ್ನೆ ಪತ್ರಿಕೆ ಪೂರ್ಣ ಓದೆಕೊಂಡು ನಂತರ  ಬರೆಯಲು ಪ್ರಾರಂಭಿಸಿ .  ನಿಮಗೆ ಚೆನ್ನಾಗಿ ಬರುವೆ ಪ್ರಶ್ನೆಗಳಿಗೆ  ಮೊದಲು ಉತ್ತರಿಸಿರಿ     ಪ್ರಶ್ನೆಗಳಿಗೆ ಎಷ್ಟು  ಉತ್ತರಿಸಬೇಕು , ಒಂದು ವಾಕ್ಯ, ಎರಡು ವಾಕ್ಯ ,  ಎಂಟು ಹತ್ತು ವಾಕ್ಯ , ಇದನ್ನು ಗಮನಿಸಿಕೊಂಡು , ಉತ್ತರಿಸಿರಿ .    ಉತ್ತರ ತಿಳಿದಿದೆ ಎಂಬ ಕಾರಣಕ್ಕೆ ,  ಅನವಶ್ಯಕವಾಗಿ  , ಹೆಚ್ಚು ಬರೆದು  ಸಮಯ ವ್ಯರ್ಥಮಾಡಿಕೊಳ್ಳದಿರಿ .      ಚನ್ನಾಗಿ ಗೊತ್ತಿರುವ ಪ್ರಶ್ನೆ ಗಳನ್ನು ಮೊದಲು ಬರೆಯಿರಿ. ಆಯಾಯ ಕ್ರಮಾಕ್ಷರ  ಪ್ರಶ್ನೆ ಸಂಖ್ಯೆ ಯನ್ನು  ಮರೆಯದೆ ಬರೆಯಿರಿ, ಹಾಗೂ ಬರೆದಾದ ಪ್ರಶ್ನೆ ಯನ್ನು  ರೈಟ್ ಮಾರ್ಕ್ ಮಾಡಿಕೊಳ್ಳಿ.   ಇದರಿಂದ  ನೀವು ಇನ್ನೂ ಉತ್ತರಿಸಬೇಕಾದ ಪ್ರಶ್ನೆ ಗಳೆಷ್ಟಿವೆ ಎಂದು  ತಿಳಿಯುತ್ತದೆ. ಸಮಯ ಹೊಂದಾಣಿಕೆ ಮಾಡಿಕೊಳಲೂ ಸಹಾಯಕವಾಗುತ್ತದೆ.      ಉತ್ತರ ಪತ್ರಿಕೆ ಕೊಟ್ಟಾಗ ಮೊದಲು ನಿಮ್ಮ ಹಾಜರಿ ಸಂಖ್ಯೆಯನ್ನು ಮೊದಲು ಬರೆಯಿರಿ ಹೆಚ್ಚುವರಿ ಹಾಳೆ ತೆಗೆದು ಕೊಂಡಾಗ ಲೂ ಹಾಜರಿ ಸಂಖ್ಯೆಹಾಕಲು  ಮರೆಯದಿರಿ. ಹೊಸಜಾಗ  ಜನಜಂಗುಳಿ , ಪೊಲೀಸ್ ವ್ಯವಸ್ಥೆ , ಪೋಷಕರು ದಂಡು  ನೋಡಿ ಗಾಬರಿಯಾಗಿ ದಿಲಿ.   ಪೋಷಕರೇ  ದಯಮಾಡಿ ಪರೀಕ್ಷಾ ಕೇಂದ್ರದ ವರೆಗೆ ಹೋಗಿ  ಅತಿ ಒತ್ತಡ ಹೇರುವುದು ಮೂಲಕ ಭಯಪಡಿಸದಿರಿ.  ಪರೀಕ್ಷಾ ಕೇಂದ್ರಗಳಿಗೆ ತೆರಳುವ   ಹಿಂದಿನ ದಿನವೇ  ಚೆನ್ನಾಗಿ ಬರೆಯುವ ಎರಡು, ಮೂರು ಪೆನ್ , ನಿಮ್ಮ ಪ್ರವೇಶಪತ್ರ, , ಪನೆಸಿಲ್ , ಎರಾಸರ್, ಇತ್ಯಾದಿಗಳನ್ನು  ರೆಡಿಯಾಗಿ ಇಟ್ಟುಕೊಂಡಿರಿ.    ಮಕ್ಕಳೇ ಯಾವುದೇ ರೀತಿಯ  ಕಾಪಿಗೆ ಮನಸ್ಸು ಮಾಡಿದಿರಿ, ನೀವು ಇದುವರೆಗೆ ಕಲಿತಿರುವುದು ನನ್ನು ಬರೆಯಿರಿ , ಬೇರೆಯವರು ಹೇಳುವ  ಉತ್ತರಗಳನ್ನು ನಂಬದಿರಿ.   ಯಾವುದೋ ಒಂದು ಪ್ರಶ್ನೆಗೆ  ಸರಿಯಾಗಿ  ಉತ್ತರಿಸಲಾಗಲಿಲ್ಲಾ , ಅಯ್ಯೋ ನನಗೆ , ಅಂಕ ಕಡಿಮೆಯಾಗುತ್ತದೆ ಎಂದು ಒತ್ತಡಕ್ಕೊಳಗಾಗಬೇಡಿ ಅಂಕ ಮುಖ್ಯವಲ್ಲಾ , ಜ್ನಾನಮುಖ್ಯ.  ಜೀವನ  ದೊಡ್ಡದಿದೆ.  ಮುಂದೆ  ಇನ್ನೂ ಉತ್ತಮವಾಗಿ ಮುಂದುವರಿಯಲು ಸಾಕಷ್ಟು ಅವಕಾಶಗಳಿವೆ .  ಒಂದು ವಿಷಯ ಮುಗಿದ ನಂತರ. ಮುಗಿದ ವಿಷಯದ. ಬಗೆಗೆ ಚಿಂತಿಸಿ  ಮುಂದಿನ ವಿಷಯಕ್ಕೆ   ತೊಂದರೆಮಾಡಿಕೊಳದಿರಿ ಮುಗಿದ ವಿಷಯದ ಬಗ್ಗೆ ಚರ್ಚಿಸಲು ಹೋಗದಿರಿ.   ಪೋಷಕರೇ  ನಮ್ಮ ಒತ್ತಡಗಳನ್ನು ಸಮಸ್ಯೆಗಳನ್ನು  ಮನೆಯಲ್ಲಿ , ಚರ್ಚೆ ಮಾಡುತ್ತಾ,  ಮಕ್ಕಳ ಮನಸಿಗೆ ಕಿರಿಕಿರಿಯಾಗದಂತೆ ನೋಡಿಕೊಳ್ಳಿರಿ. ಮಕ್ಕಳೇ. ಮತ್ತೊಂದು ಮಹಾಮಾರಿ ಕೊರೋನಾ  ಎಂಬ ವೈರಾಣು ಆರೋಗ್ಯ ದ ಮೇಲೆ ದುಷ್ಪರಿಣಾಮ ಬೀರುತ್ತಿದೆ .  ಇದರಿಂದ ಸಾರ್ವಜನಿಕ ಸಂಪರ್ಕದಿಂದ ಇರಿ ಮನೆಯಲ್ಲಿಯೇ ಇರಿ , ಹಾಗೂ ಆಗಾಗ ಸಾಬೂನಿನಿಂದ ಕೈಕಾಲು ತೊಳೆಯುತ್ತಾ ಇರಿ, .ರೋಗಿ ಹರಡದಂತೆ ತಡೆಯಲು ನೀವೂ ಸಹಕರಿಸುವುದರೊಂದಿಗೆ , ನಿಮ್ಮ ಹಾಗೂ ಕುಟುಂಬ ಸದಸ್ಯರ ಆರೋಗ್ಯ ಕಾಪಾಡಲು ಉತ್ತಮ ಸಹಕಾರ ಕೊಡಿ  ಹಾಗೆಯೇ ವಿಚಲಿತರಾಗದೆ ಮುಂಬರುವ ಪರೀಕ್ಷೆ ಯನ್ನು ಧೈರ್ಯದಿಂದ  ಎದುರಿಸುವ ತಯಾರಿ ಮಾಡಿಕೊಳ್ಳಲು ಸದಾವಕಾಶವಿದೆಂದು  ಭಾವಿಸಿರಿ . ಬೇಜವಾಬ್ದಾರಿ ಬೇಡ . ಭಯವೂ ಬೇಡ ಇನ್ನು ಪೋಷಕರೇ ಮಕ್ಕಳೊಂದಿಗೆ  ಪ್ರೀತಿಯಿಂದ  ವರ್ತಿಸುತ್ತಾ,  ಅವರ,  ಆರೋಗ್ಯನೋಡಿಕೊಂಡು  ಅವರೊಂದಿಗೆ  ಇರಲು. ಪ್ರಯತ್ನಿಸಿ , ಮಕ್ಕಳನ್ನು ಒಂಟಿಯಾಗಿ ಬಿಡದಿರಿ. ನೀನು. ಓದಿದೀಯಾ  ಚೆನ್ನಾಗಿ ಬರೀತೀಯಾ  ಅನ್ನೋ ನಂಬಿಕೆ ಇದೆ . ಬರೀ ಗಾಬರಿಯಾಗಬೇಡಿ ಎಂಬ ವಿಶ್ವಾಸದ   ಮಾತುಗಳ  ಮೂಲಕ  ಪ್ರೋತ್ಸಾಹಿಸಿ.   ಎಲ್ಲರಿಗೂ  ಶುಭವಾಗಲಿ .ನೀವೆಲ್ಲರೂ ಶುಭತರುವಿರೆಂಬ  ನಂಬಿಕೆಯಿಂದ ನಮಸ್ಕಾರಗಳೊಂದಿಗೆ    ******

ಪ್ರಸ್ತುತ Read Post »

You cannot copy content of this page

Scroll to Top