ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಮಕ್ಕಳ ಹಾಡು

ನಮ್ಮಯ ಬದುಕು ಮಲಿಕಜಾನ ಶೇಖ ಹಂಸಮ್ಮಾ ಬಂದಳು ಹಂಸಮ್ಮಾ ಕ್ವ್ಯಾಕ್ -ಕ್ವ್ಯಾಕ್ ಕ್ವ್ಯಾಕ್-ಕ್ವ್ಯಾಕ್ ನುಡಿಯುತ್ತಾ ಶ್ವೇತ ಬಣ್ಣ ನನ್ನದು ಹಾಲು-ಮೀನು ಕಂಡರೆ ನಾನು ಕರಿವೆ ಎಂದಳು ಮಕ್ಕಳ-ಮರಿಯನ್ನು. ಹುಂಜಪ್ಪಾ ಬಂದನು ಹುಂಜಪ್ಪಾ ಕುಕ್ಕು-ಕೂ ಕುಕ್ಕು- ಕೂ ಕೂಗುತ್ತಾ ತೆಲೆಯಲಿ ಫುಂಜ ನನ್ನದು ಹುಳವ-ಗಿಳವ ಕಂಡರೆ ನಾನು ಕರಿವೆ ಎಂದನು, ಹೆಂಡತಿ ಮಕ್ಕಳನು. ಕಾಗಣ್ಣ ಬಂದ ಕಾಗಣ್ಣ ಕಾವ್-ಕಾವ್ ಕಾವ್-ಕಾವ್ ಕಿರಚುತ್ತಾ ಕಪ್ಪು ಬಣ್ಣದು ನನ್ನದು ಅನ್ನದ ಅಗಳ ಕಂಡರೆ ನಾನು ಕರಿವೆ ಎಂದನು, ಬಂಧು-ಬಳಗವನು. ಗುಬ್ಬಕ್ಕಾ ಬಂದಳು ಗುಬ್ಬಕ್ಕಾ ಚಿಂವ್-ಚಿಂವ್ ಚಿಂವ್-ಚಿಂವ್ ಎನ್ನುತ್ತಾ ಗುಬ್ಬಿ ಗೂಡು ನನ್ನದು ವೈರಿ-ಗಿರಿಯ ಕಂಡರೆ ನಾನು ಕರಿವೆ ಎಂದಳು ಎಲ್ಲರನು. ಬೇಡಣ್ಣಾ ಬಂದಾ ಬೇಡಣ್ಣಾ ಕೂಗುತ್ತಾ ಬೈಯುತ್ತಾ ಹೊಡೆಯುತ್ತಾ ಮೋಸದ ಬಲೆಯು ನನ್ನದು ಕಾಳನು ತಿನ್ನುತ್ತಾ ಕಂಡರೆ ನಾನು ತಿನ್ನುವೆ ಬೇಯಿಸಿ ನಿಮ್ಮನ್ನು. ಹಾರುತ ಬಂದವು ಹಕ್ಕಿಗಳು ಕರಕರ ಕೊಕ್ಕನ್ನು ಕೆರೆಯುತ್ತಾ ನಮ್ಮಯ ಬದುಕು ನಮಗೆ ಬೀಡು ಸುಮ್ಮನೆ ಹೋಗೊ ಬೇಡಣ್ಣಾ ಇಲ್ಲದಿರೆ…..? ಕರಿವೆವು ನಾವು ಕೊರೋನಾ .. ಕೊರೋನಾ… *******

ಮಕ್ಕಳ ಹಾಡು Read Post »

ಇತರೆ

ಅಂತಿಮ ನಮನ

ಟಿ.ಎಲ್.ರಾಮಸ್ವಾಮಿ ಅಪರೂಪದ ಕ್ರಿಯಾಶೀಲ, ಸೃಜನಶೀಲ ಪತ್ರಿಕಾ ಛಾಯಾಗ್ರಾಹಕ ಟಿ.ಎಲ್‌.ರಾಮಸ್ವಾಮಿಯವರು..! ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತಿದೆ. ಅದರಂತೆ ಕ್ರಿಯಾಶೀಲ ಮತ್ತು ಸೃಜನಶೀಲ ಪತ್ರಿಕಾ ಛಾಯಾಚಿತ್ರ ಗ್ರಾಹಕ ಟಿ.ಎಲ್. ರಾಮಸ್ವಾಮಿಯವರು ತೀರಿದ್ದಾರೆ. ಅವರು ಆರು ದಶಕಗಳಿಗೂ ಹೆಚ್ಚು ಕಾಲದಿಂದ ಪತ್ರಿಕಾ ಛಾಯಾಗ್ರಾಹಕರಾಗಿ ಸಾವಿರಾರು ಚಿತ್ರಗಳ ಮೂಲಕ ಕರ್ನಾಟಕದ ಆಗುಹೋಗುಗಳನ್ನು ಸೆರೆಹಿಡಿದವರು. ಅವರು ಪತ್ರಿಕಾ ಛಾಯಾಚಿತ್ರ ಕಲೆಯಲ್ಲಿ ವಿಶಿಷ್ಟ ಪ್ರತಿಭೆಯನ್ನೂ ತೋರಿ ದೇಶ ವಿದೇಶಗಳ ಪತ್ರಿಕೆಗಳ ಗೌರವಾದರ ಪಡೆದವರು… 1950 ರಿಂದ 1985 ರವರೆಗೆ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪತ್ರಿಕಾ ಬಳಗದಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿ ಅನುಭವ ಗಳಿಸಿದವರು. ನಂತರ ಮುಕ್ತ ಪತ್ರಿಕಾ ಛಾಯಾಚಿತ್ರ ವರದಿಗಾರರಾದರೂ ಆದವರು… ಭಾರತದ ಪ್ರಮುಖ ಪತ್ರಿಕೆಗಳ ಸಂಪರ್ಕ ಪಡೆದಿದವರು. ಫೈನಾನ್ಶಿಯಲ್ ಟೈಮ್ಸ್ ಆಫ್ ಲಂಡನ್ ಸಹ ಇವರು ತೆಗೆದಿರುವ ಛಾಯಾಚಿತ್ರಗಳನ್ನು ಪ್ರಕಟಿಸಿದೆ… ಪ್ರಜಾವಾಣಿ, ಮಯೂರ, ಟೈಮ್ಸ್‌ ಆಫ್ ಇಂಡಿಯಾ ಸೇರಿದಂತೆ ಹಲವು ಪತ್ರಿಕೆ– ನಿಯತಕಾಲಿಕೆಗಳಲ್ಲಿ ಛಾಯಾಚಿತ್ರ ಅಂಕಣಕಾರರಾಗಿ ಜನಪ್ರಿಯತೆ ಗಳಿಸಿದವರು… ಜಪಾನ್‌ ನ ನಿಹಾನ್ ಸಿನ್ಬುನ್ ಕ್ಯೊಕಾಯಿ ಸಂಸ್ಥೆ ಮತ್ತು ಲಂಡನ್‌ ನ ಥಾಮ್ಸನ್ ಪ್ರತಿಷ್ಠಾನದಿಂದ ಪತ್ರಿಕಾ ಛಾಯಾಚಿತ್ರ ಕಲೆಯಲ್ಲಿ ಡಿಪ್ಲೊಮಾ ಪಡೆದಿದವರು. ಜಪಾನ್‌ ನ ಅಸಾಹಿ ಶಿನ್‍ಬುನ್, ಮೈನಿಚಿ ಶಿನ್‍ಬುನ್, ಯೊಮಿಯುರಿ ಮತ್ತು ಕ್ಯೋಟೋ ಶಿನ್‍ಬುನ್ ಪತ್ರಿಕೆಗಳಲ್ಲಿ ದುಡಿದು ಅನುಭವ ಪಡೆದವರು. ಫ್ಲೀಟ್ ಸ್ಟ್ರೀಟ್‌ ನ ಲಂಡನ್ ಟೈಮ್ಸ್, ಡೈಲಿ ಮಿರರ್ ಪತ್ರಿಕೆಗಳಲ್ಲೂ ಅನುಭವ ಗಳಿಸಿದ ಹೆಗ್ಗಳಿಕೆ ಟಿ.ಎಲ್‌. ರಾಮಸ್ವಾಮಿಯರದು… ಟಿ.ಎಲ್. ರಾಮಸ್ವಾಮಿ ಅವರು ಜಮ್ಮು ಮತ್ತು ಪಂಜಾಬ್ ಗಡಿಗಳಲ್ಲಿ ಸಮವಸ್ತ್ರ ಧರಿಸಿ ಯುದ್ಧ ವರದಿಯ ತರಬೇತಿ ಪಡೆದಿದ್ದವರು. ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ. ರೋಟರಿ, ಲಯನ್ಸ್ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿ ಗೌರವಗಳೂ ಅವರಿಗೆ ಸಂದಿವೆ… ಕ್ರೀಡಾ ಕ್ಷೇತ್ರದ ಅವರ ಸೇವೆ ಮತ್ತು ಸಾಧನೆಯನ್ನು ಗೌರವಿಸಿ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಆಜೀವ ಸದಸ್ಯತ್ವ ನೀಡಿ ಗೌರವಿಸಿದೆ. ಈ ಎಂಭತ್ತರ ಹರೆಯದಲ್ಲಿಯೂ ಯಾವುದೇ ಕಾರ್ಯಕ್ರಮಕ್ಕೆ ಹಾಜರಾದರೂ ಹೆಗಲ ಮೇಲೆ ಕ್ಯಾಮೆರಾ ಹೊತ್ತು ಹಾಜರಾಗುವ ಪರಿಪಾಠವನ್ನು ಮುಂದುವರೆಸಿದ್ದರು. ಅಪರೂಪದ ಚಿತ್ರಗಳ ಮೂಲಕ ಈಗಲೂ ಇತಿಹಾಸದ ಪುಟಗಳನ್ನು ಸಂಪದ್ಭರಿತವಾಗಿಸುತ್ತಿದ್ದವರು ಟಿ.ಎಲ್.ರಾಮಸ್ವಾಮಿವರು… ಇಂತಹ ಟಿ.ಎಲ್. ರಾಮಸ್ವಾಮಿಯವರು ಈಗ ತೀರಿಕೊಂಡಿದ್ದಾರೆ. ಅವರಿಗಿದೋ ನಮನಗಳು… *************************************************************** ಕೆ.ಶಿವು.ಲಕ್ಕಣ್ಣವರ ‌

ಅಂತಿಮ ನಮನ Read Post »

ಇತರೆ

ಪ್ರಸ್ತುತ

ಪರೀಕ್ಷೆಗಳತ್ತ ಚಿತ್ತ ವನಜಾ ಸುರೇಶ್ ಪರೀಕ್ಷೆಗೆ  ದಿನಗಣನೆ  ಆರಂಭವಾಗಿದೆ  . ಕೆಲವು  ಮಕ್ಕಳಿಗೆ.  ಪರೀಕ್ಷೆ  ಮುಗಿದರೆ ಸಾಕೆಂಬ ಮನೋಭಾವವು ಇದೆ . ಕೆಲವರಲ್ಲಿ ಭಯವೂ ಇದೆ. 2019 ಜೂನ್ ನಿಂದು ಪ್ರಾರಂಬಿದ  ಪರೀಕ್ಷಾ ತಯಾರಿ  ಅಂತಿಮ ಹಂತಕ್ಕೆ ಬಂದು ನಿಂತಿದೆ.   ಡಿಸೆಂಬರ್ ಗೆ ಬೋದಿಸಬೇಕಾದ ಪಠ್ಯಭಾಗವನ್ನು  ಮುಗಿಸಿ  ಜನವರಿಯಿಂದ  ಪುನರಾವರ್ತನೆ ಮಾಡಲಾಗಿದೆ  ಫೆಬ್ರವರಿಯಿಂದ  ಸಾಕಷ್ಟು ಸರಣಿ ಪರೀಕ್ಷೆಗಳನ್ನು ಮಾಡಿ  ಬರವಣಿಗೆ ದೋಷವನ್ನು ಸರಿಪಡಿಸಿಕೊಳಲು ತಿಳುವಳಿಕೆ ಹೇಳಲಾಗಿದೆ ಕ್ಲಿಷ್ಟಕರಕರವೆನಿಸಿದ  ಪಠ್ಯಭಾಗವನ್ನು  ಪುನಃ ಪುನಃ ಬೋಧನೆ ಮಾಡಿ ಪರೀಕ್ಷೆ ಗಳನ್ನು ಮಾಡಿ  ತಿಳಿಸಲಾಗಿದೆ. ನಂತರ ವಿದ್ಯಾರ್ಥಿಗಳು ಕಲಿಕೆಯ ಹಾಗೂ ಅಭಿವ್ಯಕ್ತಿಯ  ಮಾನದಂಡದಂತೆ  ಎ  ಶ್ರೇಣಿ ಬಿ  ಶ್ರೇಣಿ  ಹಾಗೂ ಸಿ.  ಶ್ರೇಣಿಗಳಾಗಿ  ವಿಭಾಗಿಸಿ  ಕೊಂಡು ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಬೋದಿಸಲಾಗಿದೆ . C ಶ್ರೇಣಿಯಲ್ಲಿ ಗೆ ಕೆಲವು ಆಯ್ದ ಪಠ್ಯಭಾಗಗಳನ್ನೇ ಬೋಧಿಸಿ ನಿತ್ಯ ಬರೆಸಿ  ಮೌಖಿಕವಾಗಿ  ಹೇಳಿಸಿ  ಡ್ರಿಲ್  ವರ್ಕ್     ಮಾಡಿಸಿ,  ಅವರಿಗೂ ನಾವು ಬರೆಯಬಲ್ಲೆ ವೆಂಬ  ವಿಶ್ವಾಸ  ಮೂಡಿಸಲಾಗಿದೆ. A. ಶ್ರೇಣಿ ಯ ವಿದ್ಯಾರ್ಥಿ ಗಳಿಗೆ ಇಡೀ  ಪಠ್ಯಭಾಗವನ್ನು  ಓದಿಕೊಂಡು  ಹೇಗೆ ಪ್ರಬುದ್ಧತೆ ಯಿಂದ ಉತ್ತರ ಬರೆಯಬೇಕೆಂಬ. ಬಗೆಗೆ ತಿಳುವಳಿಕೆ ಜೊತೆ ಜೊತೆಗೆ ಹಲವು ಸುತ್ತಿನ ಬರವಣಿಗೆ ಮೂಲಕ,   ಸರಣಿ ಪರೀಕ್ಷೆ ಗಳು ಮೂಲಕ ತಯಾರಿ  ಮಾಡಿಸಲಾಗಿದೆ . ನಿಮಗೆ ಸಾಮರ್ಥ್ಯವಿದೆ  ನೂರಕ್ಕೆ , ನೂರೂ ತಗೊಂಡು ಅಚೀವ್ ಮಾಡಿರೆಂದೂ ,  ಪ್ರೋತ್ಸಾಹಿಸಿದ್ದೇವೆ . ಮಕ್ಕಳೂ ಈ ನಿಟ್ಟಿನಲ್ಲಿ ಸಿದ್ಧತಾ ಪರೀಕ್ಷೆ ಬರೆದು , ಖಾತ್ರಿಮಾಡಿಕೊಂಡಿದ್ದಾರೆ.   ಇನ್ನು ಇಡೀ ವರ್ಷವವೆಲ್ಲ  ತರಬೇತಿಗೊಳಿಸಿದ  ಶಿಕ್ಷಕರು, ಕ್ರಿಕೆಟ್  ,ತರಬೇತುದಾರ,   ಗ್ಯಾಲರಿಯಲ್ಲಿ ಕುಳಿತು  ತಮ್ಮ ಶಿಷ್ಯರ  ಅದ್ಬುತ ಪ್ರದರ್ಶನಕ್ಕೆ  ,  ಕ್ರಿಕೆಟಿಗ ಚೆಂಡನ್ನು ಎದುರಿಸಿ , ಸಿಕ್ಸರ್ ಬಾರಿಸಿ ,  ನೆರೆದ ಸಭಿಕರಿಗೆ  , ಕೋಚ್ ಗಳಿಗೆ ಸಂತಸ  ತರುವನೋ,  ಎಂದು    ಆಸೆ  ಕಾತರದಿಂದ  ಕಾಯುವಂತೆ ,  ಶಿಕ್ಷಕರಾದ  ನಾವುಗಳೂ , ಆಸೆ , ಆತಂಕ , ಕುತೂಹಲದಿಂದ ಗಳಿಂದ ಎದುರು  ನೋಡುತ್ತಿದ್ದೇವೆ .     ಪ್ರತಿಯೊಬ್ಬ ವಿದ್ಯಾರ್ಥಿಯೂ  ಒಂದೊಂದು ಪ್ರಶ್ನೆ ಯನ್ನು  ಹೇಗೇಗೆ   ಉತ್ತರಿಸಬಲ್ಲ  ಎಷ್ಟು   ಉತ್ತರಿಸ ಬಲ್ಲ ಎಷ್ಟು ಜನ ವಿದ್ಯಾರ್ಥಿಗಳು  ಯಾವ ಯಾವ ಪ್ರಶ್ನೆ ಗಳಿಗೆ  ಉತ್ತರಿಸುತ್ತಾರೆಂಬ  ಅಂಕಿ ಅಂಶವೂ  ನಮಗೀಗ  ದೃಢವಾಗಿದೆ. , ಆದರೂ ಬದಲಾದ ಪರೀಕ್ಷಾ ಪದ್ಧತಿ  ಎಂಬ. ಮಾಹಿತಿ ಗೇ ಹಲವು ಮಕ್ಕಳು  ಅಧೀರರಾಗುವುದನ್ನು , ಗಮನಿಸಿ  ಸಾಕಷ್ಟು   ಆತ್ಮವಿಶ್ವಾಸ ದ. , ಮಾತುಗಳು ಮೂಲಕ ದೈರ್ಯ ತುಂಬಿದ್ದೇವೆ .   ಮಕ್ಕಳೇ  ಮುಂದಿನ  ಪರೀಕ್ಷೆಯು  ನಿಮ್ಮ ನಿಮ್ಮ ಶಾಲೆಗಳಲ್ಲಿ  ನಡೆಯುವುದಿಲ್ಲ. , ಹಾಗೇ. ನಿಮ್ಮ ಶಿಕ್ಷಕರಿರುವುದಿಲ್ಲಾ  ಎಂಬ ಬಗ್ಗೆ  ಗಾಬರಿ  ಬೇಡ . ಅಂಜಿಕೆಯೂ ಬೇಡ .    ಯಾರಾದರೂ ಎಲ್ಲರೂ ಶಿಕ್ಷಕರೇ. ಎಲ್ಲರಿಗೂ  ವಿದ್ಯಾರ್ಥಿಗಳ ಬಗ್ಗೆ  ಪ್ರೀತಿಪೂರ್ವಕ. ಕಾಳಜಿ  ಇದ್ದೇ  ಇರುತ್ತದೆ . ಆದ್ದರಿಂದ ಎಲ್ಲರೂ ದೈರ್ಯವಾಗಿ  ಪರೀಕ್ಷಾ ಕೇಂದ್ರಗಳಿಗೆ  ತೆರಳಿ ರಿ.  ನಿಮ್ಮ ಬರವಣಿಗೆಗೆ ಯಾರೂ ಅಡ್ಡಿ ಮಾಡುವುದಿಲ್ಲಾ. ಪರೀಕ್ಷಾ ದಿನದಂದು ಅರ್ಧ ಗಂಟೆ ಮೊದಲು ಕೇಂದ್ರಕ್ಕೆ ತೆರಳಿ ರಿ  , ನಿಮ್ಮ ಹಾಜರಿ ಸಂಖ್ಯೆಗಳನ್ನು ಖಾತ್ರಿ ಮಾಡಿಕೋಳ್ಳಿರಿ ,. ಶಾಂತ ಚಿತ್ತದಿಂದ  ಪ್ರಶ್ನೆ ಪತ್ರಿಕೆ ಪೂರ್ಣ ಓದೆಕೊಂಡು ನಂತರ  ಬರೆಯಲು ಪ್ರಾರಂಭಿಸಿ .  ನಿಮಗೆ ಚೆನ್ನಾಗಿ ಬರುವೆ ಪ್ರಶ್ನೆಗಳಿಗೆ  ಮೊದಲು ಉತ್ತರಿಸಿರಿ     ಪ್ರಶ್ನೆಗಳಿಗೆ ಎಷ್ಟು  ಉತ್ತರಿಸಬೇಕು , ಒಂದು ವಾಕ್ಯ, ಎರಡು ವಾಕ್ಯ ,  ಎಂಟು ಹತ್ತು ವಾಕ್ಯ , ಇದನ್ನು ಗಮನಿಸಿಕೊಂಡು , ಉತ್ತರಿಸಿರಿ .    ಉತ್ತರ ತಿಳಿದಿದೆ ಎಂಬ ಕಾರಣಕ್ಕೆ ,  ಅನವಶ್ಯಕವಾಗಿ  , ಹೆಚ್ಚು ಬರೆದು  ಸಮಯ ವ್ಯರ್ಥಮಾಡಿಕೊಳ್ಳದಿರಿ .      ಚನ್ನಾಗಿ ಗೊತ್ತಿರುವ ಪ್ರಶ್ನೆ ಗಳನ್ನು ಮೊದಲು ಬರೆಯಿರಿ. ಆಯಾಯ ಕ್ರಮಾಕ್ಷರ  ಪ್ರಶ್ನೆ ಸಂಖ್ಯೆ ಯನ್ನು  ಮರೆಯದೆ ಬರೆಯಿರಿ, ಹಾಗೂ ಬರೆದಾದ ಪ್ರಶ್ನೆ ಯನ್ನು  ರೈಟ್ ಮಾರ್ಕ್ ಮಾಡಿಕೊಳ್ಳಿ.   ಇದರಿಂದ  ನೀವು ಇನ್ನೂ ಉತ್ತರಿಸಬೇಕಾದ ಪ್ರಶ್ನೆ ಗಳೆಷ್ಟಿವೆ ಎಂದು  ತಿಳಿಯುತ್ತದೆ. ಸಮಯ ಹೊಂದಾಣಿಕೆ ಮಾಡಿಕೊಳಲೂ ಸಹಾಯಕವಾಗುತ್ತದೆ.      ಉತ್ತರ ಪತ್ರಿಕೆ ಕೊಟ್ಟಾಗ ಮೊದಲು ನಿಮ್ಮ ಹಾಜರಿ ಸಂಖ್ಯೆಯನ್ನು ಮೊದಲು ಬರೆಯಿರಿ ಹೆಚ್ಚುವರಿ ಹಾಳೆ ತೆಗೆದು ಕೊಂಡಾಗ ಲೂ ಹಾಜರಿ ಸಂಖ್ಯೆಹಾಕಲು  ಮರೆಯದಿರಿ. ಹೊಸಜಾಗ  ಜನಜಂಗುಳಿ , ಪೊಲೀಸ್ ವ್ಯವಸ್ಥೆ , ಪೋಷಕರು ದಂಡು  ನೋಡಿ ಗಾಬರಿಯಾಗಿ ದಿಲಿ.   ಪೋಷಕರೇ  ದಯಮಾಡಿ ಪರೀಕ್ಷಾ ಕೇಂದ್ರದ ವರೆಗೆ ಹೋಗಿ  ಅತಿ ಒತ್ತಡ ಹೇರುವುದು ಮೂಲಕ ಭಯಪಡಿಸದಿರಿ.  ಪರೀಕ್ಷಾ ಕೇಂದ್ರಗಳಿಗೆ ತೆರಳುವ   ಹಿಂದಿನ ದಿನವೇ  ಚೆನ್ನಾಗಿ ಬರೆಯುವ ಎರಡು, ಮೂರು ಪೆನ್ , ನಿಮ್ಮ ಪ್ರವೇಶಪತ್ರ, , ಪನೆಸಿಲ್ , ಎರಾಸರ್, ಇತ್ಯಾದಿಗಳನ್ನು  ರೆಡಿಯಾಗಿ ಇಟ್ಟುಕೊಂಡಿರಿ.    ಮಕ್ಕಳೇ ಯಾವುದೇ ರೀತಿಯ  ಕಾಪಿಗೆ ಮನಸ್ಸು ಮಾಡಿದಿರಿ, ನೀವು ಇದುವರೆಗೆ ಕಲಿತಿರುವುದು ನನ್ನು ಬರೆಯಿರಿ , ಬೇರೆಯವರು ಹೇಳುವ  ಉತ್ತರಗಳನ್ನು ನಂಬದಿರಿ.   ಯಾವುದೋ ಒಂದು ಪ್ರಶ್ನೆಗೆ  ಸರಿಯಾಗಿ  ಉತ್ತರಿಸಲಾಗಲಿಲ್ಲಾ , ಅಯ್ಯೋ ನನಗೆ , ಅಂಕ ಕಡಿಮೆಯಾಗುತ್ತದೆ ಎಂದು ಒತ್ತಡಕ್ಕೊಳಗಾಗಬೇಡಿ ಅಂಕ ಮುಖ್ಯವಲ್ಲಾ , ಜ್ನಾನಮುಖ್ಯ.  ಜೀವನ  ದೊಡ್ಡದಿದೆ.  ಮುಂದೆ  ಇನ್ನೂ ಉತ್ತಮವಾಗಿ ಮುಂದುವರಿಯಲು ಸಾಕಷ್ಟು ಅವಕಾಶಗಳಿವೆ .  ಒಂದು ವಿಷಯ ಮುಗಿದ ನಂತರ. ಮುಗಿದ ವಿಷಯದ. ಬಗೆಗೆ ಚಿಂತಿಸಿ  ಮುಂದಿನ ವಿಷಯಕ್ಕೆ   ತೊಂದರೆಮಾಡಿಕೊಳದಿರಿ ಮುಗಿದ ವಿಷಯದ ಬಗ್ಗೆ ಚರ್ಚಿಸಲು ಹೋಗದಿರಿ.   ಪೋಷಕರೇ  ನಮ್ಮ ಒತ್ತಡಗಳನ್ನು ಸಮಸ್ಯೆಗಳನ್ನು  ಮನೆಯಲ್ಲಿ , ಚರ್ಚೆ ಮಾಡುತ್ತಾ,  ಮಕ್ಕಳ ಮನಸಿಗೆ ಕಿರಿಕಿರಿಯಾಗದಂತೆ ನೋಡಿಕೊಳ್ಳಿರಿ. ಮಕ್ಕಳೇ. ಮತ್ತೊಂದು ಮಹಾಮಾರಿ ಕೊರೋನಾ  ಎಂಬ ವೈರಾಣು ಆರೋಗ್ಯ ದ ಮೇಲೆ ದುಷ್ಪರಿಣಾಮ ಬೀರುತ್ತಿದೆ .  ಇದರಿಂದ ಸಾರ್ವಜನಿಕ ಸಂಪರ್ಕದಿಂದ ಇರಿ ಮನೆಯಲ್ಲಿಯೇ ಇರಿ , ಹಾಗೂ ಆಗಾಗ ಸಾಬೂನಿನಿಂದ ಕೈಕಾಲು ತೊಳೆಯುತ್ತಾ ಇರಿ, .ರೋಗಿ ಹರಡದಂತೆ ತಡೆಯಲು ನೀವೂ ಸಹಕರಿಸುವುದರೊಂದಿಗೆ , ನಿಮ್ಮ ಹಾಗೂ ಕುಟುಂಬ ಸದಸ್ಯರ ಆರೋಗ್ಯ ಕಾಪಾಡಲು ಉತ್ತಮ ಸಹಕಾರ ಕೊಡಿ  ಹಾಗೆಯೇ ವಿಚಲಿತರಾಗದೆ ಮುಂಬರುವ ಪರೀಕ್ಷೆ ಯನ್ನು ಧೈರ್ಯದಿಂದ  ಎದುರಿಸುವ ತಯಾರಿ ಮಾಡಿಕೊಳ್ಳಲು ಸದಾವಕಾಶವಿದೆಂದು  ಭಾವಿಸಿರಿ . ಬೇಜವಾಬ್ದಾರಿ ಬೇಡ . ಭಯವೂ ಬೇಡ ಇನ್ನು ಪೋಷಕರೇ ಮಕ್ಕಳೊಂದಿಗೆ  ಪ್ರೀತಿಯಿಂದ  ವರ್ತಿಸುತ್ತಾ,  ಅವರ,  ಆರೋಗ್ಯನೋಡಿಕೊಂಡು  ಅವರೊಂದಿಗೆ  ಇರಲು. ಪ್ರಯತ್ನಿಸಿ , ಮಕ್ಕಳನ್ನು ಒಂಟಿಯಾಗಿ ಬಿಡದಿರಿ. ನೀನು. ಓದಿದೀಯಾ  ಚೆನ್ನಾಗಿ ಬರೀತೀಯಾ  ಅನ್ನೋ ನಂಬಿಕೆ ಇದೆ . ಬರೀ ಗಾಬರಿಯಾಗಬೇಡಿ ಎಂಬ ವಿಶ್ವಾಸದ   ಮಾತುಗಳ  ಮೂಲಕ  ಪ್ರೋತ್ಸಾಹಿಸಿ.   ಎಲ್ಲರಿಗೂ  ಶುಭವಾಗಲಿ .ನೀವೆಲ್ಲರೂ ಶುಭತರುವಿರೆಂಬ  ನಂಬಿಕೆಯಿಂದ ನಮಸ್ಕಾರಗಳೊಂದಿಗೆ    ******

ಪ್ರಸ್ತುತ Read Post »

ಇತರೆ

ಪ್ರಸ್ತುತ

ಹೊಸ ಮನ್ವಂತರ ಗಣೇಶಭಟ್ ಶಿರಸಿ ಹೊಸ ಮನ್ವಂತರ ದಾರಿ ತೋರಲಿರುವ ಕೊರೋನಾ ಪಿಡುಗು ಆಗಿದ್ದೆಲ್ಲ ಒಳ್ಳೆಯದಕ್ಕೇ, ಆಗುತ್ತಿರುವುದು ಒಳ್ಳೆಯದಕ್ಕೆ. ಮುಂದಾಗುವುದೂ ಒಳ್ಳೆಯದಕ್ಕೇ ಎಂಬುದು ಭಗವದ್ಗೀತೆಯ ಪಾಠ. ಕೊರೊನಾ ಪಿಡುಗಿನಿಂದ ಉಂಟಾಗಿರುವ ಆವಾಂತರವನ್ನು ಗಮನಸಿದಾಗ ಮುಂಬರುವ ದಿನಗಳಲ್ಲಿ ಆಗುವ ಒಳಿತನ್ನು ಸುಲಭದಲ್ಲಿ ಊಹಿಸಬಹುದು. ಕೊರೊನಾ ಕುರಿತು ಮಾಧ್ಯಮಗಳು ಬಿತ್ತರಿಸುವ ಸುದ್ದಿಗಳು ಭೀತಿಯನ್ನು ಹುಟ್ಟಿಸುತ್ತಿವೆ. ಕೊರೊನಾ ವೈರಾಣುವಿನಿಂದ ಸತ್ತವರ ಸಂಖ್ಯೆ ಮೂವತ್ತು ಸಾವಿರ ಮೀರಿದೆ. ಸೋಂಕಿತರ ಸಂಖ್ಯೆ ಐದು ಲಕ್ಷ ಮೀರುತ್ತಿದೆ ಇತ್ಯಾದಿ. ಯಾವುದೇ ರೋಗ ಇಡೀ ಪ್ರಪಂಚವನ್ನು ಕಾಡುತ್ತಿರುವದು ಇದು ಮೊದಲನೇ ಬಾರಿಯಂತೂ ಅಲ್ಲ. ಜನವರಿ ೧೯೧೮ ರಿಂದ ಡಿಸೆಂಬರ್ ೧೯೨೦ ರವರೆಗೆ ಇಡೀ ಜಗತ್ತನ್ನು ಆವರಿಸಿ, ಅಂದಿನ ಜನಸಂಖ್ಯೆಯ ಕಾಲು ಭಾಗದಷ್ಟು ಜನರಿಗೆ ತಗಲಿ, ಸುಮಾರು ಐದು ಕೋಟಿ ಜನರ ಮರಣಕ್ಕೆ ಕಾರಣವಾದ ಸ್ಪೇನ್‌ನ ಪ್ಲೂ ಎಂದೇ ಕರೆಯಲ್ಪಡುವ , ಪ್ಲೂ ಇತಿಹಾಸದಲ್ಲಿ ದಾಖಲಾದ ಭೀಕರ ಸಾಂಕ್ರಾಮಿಕ ರೋಗವೆಂದು ಹೇಳಲಾಗುತ್ತದೆ. ಪ್ಲೂ ವೈರಾಣುವಿನ ಆಕ್ರಮಣ ಶೀಲತೆಗಿಂತ ಅಪೌಷ್ಠಿಕತೆ , ವೈದ್ಯಕೀಯ ಸೌಲಭ್ಯಗಳ ಕೊರತೆ, ನೈರ್ಮಲ್ಯದ ಅಭಾವ ಮುಂತಾದವುಗಳೇ ಸಾವಿಗೆ ಕಾರಣವೆಂದು ನಂತರ ನಡೆಸಿದ ಅಧ್ಯಯನದಿಂದ ಬಹಿರಂಗವಾಯಿತು. ಇನ್‌ಪ್ಲೂಯೆಂಜಾ ಹಾಗೂ ಅಂತಹುದೇ ಜ್ವರಕ್ಕೆ ಕಾರಣವಾದ ವೈರಾಣುಗಳ ವಿವಿಧ ಪ್ರಬೇಧಗಳು ಮಾನವನನ್ನು ಕಾಡುತ್ತಲೇ ಇವೆ. ಇತ್ತೀಚಿನ ದಶಕಗಳಲ್ಲಿ ಜನರನ್ನು ಕಂಗೆಡಿಸುತ್ತಿರುವ ಮಂಗನಕಾಯಿಲೆ, ಚಿಕನ್‌ಗುನ್ಯ, ಸಾರ್ಸ್, ಹಂದಿಜ್ವರ ಮುಂತಾದ ಹಲವು ವಿಧದ ಅನಾರೋಗ್ಯವನ್ನುಂಟು ಮಾಡುವ ವೈರಾಣುಗಳಿಂದಲೇ ರೋಗಿಗಳ ಸಾವುಂಟಾಗುತ್ತದೆ ಎನ್ನುವುದಕ್ಕಿಂತ ಹೆಚ್ಚಾಗಿ ಇತರ ರೋಗಗಳಿಂದ ಪೀಡಿತರಾಗಿರುವವರೇ ಈ ಸೋಂಕು ತಗಲಿದ ನಂತರ ಮರಣ ಹೊಂದುವದು ಕಂಡು ಬಂದಿದೆ. ಮಾಧ್ಯಮಗಳ ಅಬ್ಬರದ ಪ್ರಚಾರಕ್ಕೆ ಕಂಗೆಟ್ಟಿರುವ ಜನರನ್ನು ಇನ್ನಷ್ಟು ಬೆದರಿಸುವಂತೆ ಸರ್ಕಾರದ ನಡೆಯಿದೆ. ಕೊರೊನಾ ವೈರಸ್ ಇಂದು ಪ್ರಚಾರ ಪಡೆಯುತ್ತಿರುವಷ್ಟು ಆಕ್ರಮಣಕಾರಿಯೇ ಎಂಬುದನ್ನು ಅರಿಯಲು ವೆಬ್‌ಸೈಟ್ ಮೊರೆ ಹೋಗುವುದು ಉತ್ತಮ. ಹಲವು ದೇಶಗಳ ಆರೋಗ್ಯ ಇಲಾಖೆಯ ಅಧಿಕೃತ ವೆಬ್ ಸೈಟ್‌ಗಳು ತಮ್ಮ ದೇಶದಲ್ಲಿ ವಿವಿಧ ಕಾರಣಗಳಿಂದ ಮೃತರಾದವ ಅಂಕಿಅಂಶಗಳನ್ನು ಪ್ರಕಟಿಸುತ್ತವೆ. ಪ್ಲೂ ಸಂಬಂಧಿತ ವೈರಾಣು ಪೀಡೆಯಿಂದ ಮರಣ ಹೊಂದಿದವರು (Deaths Due to Flue Related Diseases)ಎಂದು ಅಂತರ್ಜಾಲದಲ್ಲಿ ದೇಶವಾರು ಹುಡುಕಿದರೆ ಕೆಳಗಿನ ಮಾಹಿತಿ ಲಭ್ಯವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಶೀತಜ್ವರ ಸಂಬಂಧಿತ ರೋಗಗಳಿಂದ ಜಗತ್ತಿನಾದ್ಯಂತ ಪ್ರತಿ ವರ್ಷ ಆರರಿಂದ ಆರೂವರೆ ಲಕ್ಷ ಜನರು ಸಾಯುತ್ತಾರೆ. ಪೃಥ್ವಿಯ ಉತ್ತರ ಗೋಲಾಧದಲ್ಲಿ ಅಕ್ಟೋಬರ್ ಕೊನೆಯವಾರದಿಂದ ಎಪ್ರಿಲ್ ಕೊನೆಯವರೆಗೂ ಚಳಿಗಾಲ ಇರುವುದರಿಂದ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿರುತ್ತದೆ.ಹೀಗಾಗಿ ಆ ಸಮಯದಲ್ಲಿ ಪಾಶ್ಚಾತ್ಯ ದೇಶದಲ್ಲಿ ಶೀತಜ್ವರ ಸಂಬಂಧಿತ ವೈರಾಣುಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತದೆ. ಅಮೇರಿಕಾ ಸರ್ಕಾರದ ಪ್ರಕಟಣೆಯಂತೆ ೨೦೧೭ ರಲ್ಲಿ ಆ ದೇಶದಲ್ಲಿ ಮರಣಹೊಂದಿರುವ ಒಟ್ಟು ೨೮ ಲಕ್ಷ ಜನರಲ್ಲಿ ಪ್ಲೂ ಸಂಬಂಧಿತ ವೈರಾಣುವಿನಿಂದ ಸತ್ತವರ ಸಂಖ್ಯೆ ೫೫೬೭೨. ಈ ವಿಧದ ರೋಗಗಳಿಂದ ೨೦೧೯-೨೦ ರ ಸಾಲಿನಲ್ಲಿ ಸುಮಾರು ಎಂಬತ್ತು ಸಾವಿರ ಜನರು ಮರಣ ಹೊಂದಬಹುದೆಂದು ಅಲ್ಲಿನ ಸರ್ಕಾರ ಅಂದಾಜಿಸಿತ್ತು. ಭಾರತ ಸರ್ಕಾರದ ರಾಷ್ಟ್ರೀಯ ರೋಗನಿಯಂತ್ರಣ ಕೇಂದ್ರ (National Center For Disease Control) ಪ್ರಕಟಿಸಿರುವ ಮಾಹಿತಿಯಂತೆ ಶೀತಜ್ವರ ಸಂಬಂಧಿ ವೈರಾಣುಗಳಿಂದ ೨೦೧೯ ರಲ್ಲಿ ೨೮೭೯೮ ಜನರಿಗೆ ಸೋಂಕು ತಗುಲಿದ್ದು ೧೨೧೮ ಜನ ಸತ್ತಿದ್ದಾರೆ. ಅದೇ ವರ್ಷ ಕರ್ನಾಟಕ ದಲ್ಲಿ ೨೦೩೦ ಜನರಿಗೆ ಸೋಂಕು ತಗುಲಿದ್ದು ೯೬ ಜನರು ಮೃತ ಪಟ್ಟಿದ್ದರು. ೨೦೧೫ ರಲ್ಲಿ ಇಡೀ ದೇಶದಲ್ಲಿ ೪೨೫೯೨ ಸೋಂಕಿತರಲ್ಲಿ ೨೯೯೧ ಜನರ ಮರಣ ಹೊಂದಿದ್ದರೆ, ಕರ್ನಾಟಕದಲ್ಲಿ ಸೋಂಕಿತರು ೩೫೬೫ ಹಾಗೂ ೯೪ ಸಾವಿನ ಸಂಖ್ಯೆ. ೨೦೧೭ ರಲ್ಲಿ ದೇಶ ಹಾಗೂ ಕರ್ನಾಟಕದಲ್ಲಿ ಅನುಕ್ರಮವಾಗಿ ಸೋಂಕಿತರು ೩೮೮೧೧ ಮತ್ತು ೩೨೬೦, ಸಾವು ೨೨೭೦ ಮತ್ತು ೧೫. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೀತಜ್ವರ ವೈರಾಣುವಿನ ಕುಟುಂಬಕ್ಕೆ ಸೇರಿದ ಕೊರೊನಾದಿಂದ ಆಗುತ್ತಿರುವ ಅನಾಹುತಕ್ಕಿಂತ ಅದರ ವೈಭವೀಕರಣವೇ ಹೆಚ್ಚು ಎಂಬುದು ವೇದ್ಯವಾಗುತ್ತದೆ. 24×7 ರ ಸುದ್ದಿ ವಾಹಿನಿಗಳು, ಜಾಗತಿಕ ಆರ್ಥಿಕ ಷಡ್ಯಂತ್ರ, ಮಾಧ್ಯಮ ಪ್ರತಿನಿಧಿಗಳಲ್ಲಿ ಅಧ್ಯಯನದ ಕೊರತೆಗಳೇ ಇವಕ್ಕೆ ಮುಖ್ಯ ಕಾರಣಗಳು. ಕಳೆದ ವಾರ ಅಂದರೆ ೧೯-೦೩-೨೦೨೦ ರಂದು ಬ್ರಿಟನ್ ಸರ್ಕಾರ ಕೊರೊನಾ ವೈರಾಣುವಿನ ತೀವ್ರತೆಯ ಕುರಿತಾದ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿತು. ಅಲ್ಲಿನ ತಜ್ಞರ ತಂಡವು ಕೆಲವು ತಿಂಗಳುಗಳ ಹಿಂದೆ ನೀಡಿದ ತಮ್ಮ ಅಭಿಪ್ರಾಯವನ್ನು ಪುನರ್ವಿಮರ್ಶಿಸಿ , ಕೊರೊನಾ ವೈರಸ್ ತಾವು ಊಹಿಸಿದಷ್ಟು ಆಕ್ರಮಣಕಾರಿ ಮತ್ತು ಅಪಾಯಕಾರಿಯಲ್ಲವೆಂದು ಘೋಷಿಸಿತು. ಬ್ರಿಟನ್ ಪ್ರಧಾನಿಗೆ ಸೋಂಕು ತಗಲಿರುವುದನ್ನೇ ವೈಭವೀಕರಿಸುತ್ತಿರುವ ಮಾಧ್ಯಮದವರಿಗೆ ಈ ವರದಿ ಕಾಣಲೇ ಇಲ್ಲ. ದೇಶದಲ್ಲಿ ವಿಧಿಸಿರುವ ಲಾಕ್ ಡೌನ್ ನಿಂದ ಅತಿ ಹೆಚ್ಚು ತೊಂದರೆಗೊಳಗಾದವರೆಂದರೆ ದೈನಂದಿನ ದುಡಿಮೆಯಿಂದ ಬದುಕು ಸಾಗಿಸುವವರು. ನಿಲ್ಲಲು ನೆಲೆ ಇಲ್ಲದೆ, ದುಡಿಮೆಯ ಅವಕಾಶ ಸಿಗದೇ, ಊಟ, ತಿಂಡಿಗಾಗಿ ಪರದಾಡುವ ಬದಲು ನಗರಗಳಿಂದ ತಮ್ಮ ಗ್ರಾಮಗಳಿಗೆ ಮರು ವಲಸೆ ಹೊರಟಿದ್ದಾರೆ. ಕೊರೊನಾ ರೋಗದ ಭಯಕ್ಕಿಂತ ಹೆಚ್ಚಾಗಿ ಹಸಿವು ಅವರನ್ನು ಕಾಡುತ್ತಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ನೂರಾರು ಕಿ.ಲೋ ಮೀಟರ್ ನಡೆದು ತಮ್ಮ ಊರಿನತ್ತ ಸಾಗುತ್ತಿದ್ದಾರೆ. ದುಡಿಯಲು ಬಂದಿರುವ ಊರಿನಲ್ಲಿ ಇದ್ದು, ಹಸಿವೆಯಿಂದ ಸಾಯುವ ಬದಲಿಗೆ ತಮ್ಮ ಊರಿಗೆ ತಲ್ಪಿ ರೋಗದಿಂದ ಸತ್ತರೂ ಚಿಂತೆಯಿಲ್ಲವೆಂದೂ ಗೋಳಾಡುತ್ತಿರುವ ಜನಸಾಮಾನ್ಯರ ಸಂಕಷ್ಟ ಮಾಧ್ಯಮ ಸರ್ವಜ್ಞರಿಗೆ, ರಾಜಕಾರಣಿಗಳಿಗೆ ಅರ್ಥವಾಗುವುದಿಲ್ಲ. ಮನೆಯಲ್ಲಿ ಅಗತ್ಯ ವಸ್ತುಗಳಿಲ್ಲದೇ , ಮಾರುಕಟ್ಟೆಯಲ್ಲಿ ಲಭ್ಯವಾಗದಿರುವ ಪರಿಸ್ಥಿತಿಯಲ್ಲಿ ಜನರು ನಿಸ್ಸಹಾಯಕರಾಗಿ ಬಾಗಿಲು ಮುಚ್ಚಿರುವ ಮಾರುಕಟ್ಟೆಯಲ್ಲಿ ಕಾಣುವುದನ್ನು ನಮ್ಮ ಜನಕ್ಕೆ ಬುದ್ದಿಯೇ ಇಲ್ಲ ವೆಂದು ಕೂಗಾಡುತ್ತಿರುವ ಮಾಧ್ಯಮ ಪ್ರಭೃತಿಗಳು ಮನುಷ್ಯತ್ವವನ್ನು ಮರೆತಿದ್ದಾರೆಯೇ ಎಂದು ಎನಿಸುತ್ತದೆ. ದೇಶದ ಲಾಕ್ ಡೌನ್‌ಗೆ ಜನರು ಸ್ಪಂದಿಸುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ ಕೊರೊನಾದಿಂದ ಉಂಟಾಗಬಹುದಾದ ಸಾವಿನ ಭೀತಿ (ಈ ಭೀತಿ ಹುಟ್ಟ್ಟಿಸಲು ಮಾಧ್ಯಮಗಳೇ ಕಾರಣ) ಹಾಗೂ ಪೋಲೀಸ್ ಲಾಠಿಯ ಹೆದರಿಕೆ. ಬೀದಿಯಲ್ಲಿ ಜನರ ಸಂಚಾರ ವಿರಳವಾಗಿರುವುದನ್ನೇ ಲಾಕ್ ಡೌನ್ ಯಶಸ್ಸು ಎಂದು ಬಣ್ಣಿಸುವವರಿಗೆ ಕಟಾವಿಗೆ ಬಂದಿರುವ ಬೆಳೆ ಹೊಲದಲ್ಲೇ ಕೊಳೆಯುತ್ತಿರುವುದನ್ನು ಮೌನವಾಗಿ ಕಾಣುವ ರೈತನ ಹತಾಶೆ, ಅಂಗಡಿ ಬಾಗಿಲು ತೆರೆಯಲಾರದೇ ಪರಿತಪಿಸುತ್ತಿರುವ ಸಣ್ಣ ಪುಟ್ಟ ಅಂಗಡಿಕಾರರು ಹಾಗೂ ಉದ್ಯಮಿಗಳ ಹತಾಶೆ ಅರ್ಥವಾಗುವುದಿಲ್ಲ.. ಅಮೇರಿಕಾ ಮತ್ತು ಪಾಶ್ವಾತ್ಯ ದೇಶಗಳನ್ನು ಆರ್ಥಿಕವಾಗಿ ಮಣಿಸಿದ ಚೀನಾ ತೋಡಿದ ಖೆಡ್ಡಾಕ್ಕೆ ಆ ದೇಶಗಳು ಬಿದ್ದಿವೆ. ಪಾಶ್ಚಾತ್ಯ ದೇಶಗಳ ಅಂಧಾನುಕರಣೆ ಮಾಡಲು ಹೋಗಿ ಭಾರತದ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಕಬ್ಬಿಣದ ಪರದೆಯ ಹಿಂದೆ ಕಾರ್ಯನಿರ್ವಹಿಸುತ್ತಾ, ತನ್ನದೇ ಆದ ಅಂತರ್ಜಾಲ ವ್ಯವಸ್ಥೆಯನ್ನು ಹೊಂದಿರುವ ಚೀನಾ ದೇಶವು , ತನ್ನ ದೇಶದಲ್ಲಿ ಕೊರೊನಾ ಪೀಡಿತವಾದ ಪ್ರದೇಶವನ್ನು ಇಡೀ ಜಗತ್ತಿಗೆ ತೆರೆದು ತೋರಿಸಿತು. ಸರ್ಕಾರದ ನಡೆ ವಿರೋಧಿಸುವ ಸಾವಿರಾರು ಜನರನ್ನು ಪ್ರತಿದಿನ ಮಟ್ಟ ಹಾಕುತ್ತಿದ್ದರೂ ಬಾಹ್ಯ ಜಗತ್ತಿಗೆ ಗುಟ್ಟು ಬಿಟ್ಟು ಕೊಡದ ಚೀನಾ , ರೋಗಗ್ರಸ್ಥರ ಕೆಲವರ ಸಾವನ್ನು ಇಡೀ ಜಗತ್ತಿಗೆ ಪ್ರದರ್ಶಿಸತೊಡಗಿತು. ಕೊರೊನಾ ನಿಯಂತ್ರಣಕ್ಕಾಗಿ ಬಲಾತ್ಕಾರದ ಲಾಕ್ ಡೌನ್ ಮಾಡುತ್ತಿದ್ದೇವೆಂದು ಮಾಧ್ಯಮಗಳೆದುರು ಚೀನಾ ಬಿಂಬಿಸಿತು. ಮನೆಮನೆಗಳಲ್ಲೂ ಸಾಮಾಜಿಕ – ಅಂತರ ಕಾದುಕೊಳ್ಳಲು ಕೆಲವೆಡೆ ಪೋಲೀಸ್ ಬಲದಿಂದ ಪ್ರಯತ್ನಿಸುತ್ತಿರುವುದಾಗಿಯೂ ತೋರಿಸಲಾಯಿತು. ಇದಾದ ಕೆಲವೇ ವಾರಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆಯೆಂದು ಘೋಷಿಸಲಾಯಿತು. ಸಾಕಷ್ಟು ಪೂರ್ವತಯಾರಿಯಿಂದ ಚೀನಾ ನಡೆಸಿದ ಈ ನಾಟಕದ ಖೆಡ್ಡಾಕ್ಕೆ ಪಾಶ್ಚಾತ್ಯ ದೇಶಗಳು ಸುಲಭವಾಗಿ ಬಿದ್ದವು. ಅಷ್ಟರಲ್ಲಾಗಲೇ ಕೊರೊನಾ ಪಾಶ್ಚಾತ್ಯ ದೇಶಗಳಲ್ಲಿ ಹಬ್ಬಿದ್ದರಿಂದ ( ಪ್ರತಿ ವರ್ಷ ಚಳಿಗಾಲದಲ್ಲಿ ವ್ಯಾಪಕವಾಗುವ ಶೀತಜ್ವರ ರೀತಿಯ ರೋಗಗಳಂತೆ) ಅವು ಕೂಡಾ ಚೀನಾದ ನಾಟಕವನ್ನು ನಂಬಿ ಲಾಕ್ ಡೌನ್ ಘೋಷಿಸಿಕೊಂಡವು. ಇದರ ಪರಿಣಾಮದಿಂದ ಆರ್ಥಿಕ ಹಿನ್ನೆಡೆಯಾಗಿ ಶೇರು ಮಾರುಕಟ್ಟೆ ಕುಸಿಯತೊಡಗಿತು. ಈ ಸನ್ನಿವೇಶವನ್ನು ನಿರೀಕ್ಷಿಸಿದ್ದ ಚೀನಾ ತನ್ನ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಮುಖ ಬಹುರಾಷ್ಟ್ರಿಯ ಕಂಪನಿಗಳ ಶೇರನ್ನು ಖರೀದಿಸಿ ತನ್ನ ಹತೋಟಿಗೆ ತೆಗೆದುಕೊಂಡಿತು. ಸಾಮಾಜಿಕವಾಗಿ, ಆರ್ಥಿಕವಾಗಿ, ಪಾಶ್ಚಾತ್ಯ ದೇಶಗಳಿಂದ ತೀರಾ ಭಿನ್ನವಾಗಿರುವ ಭಾರತವೂ ಲಾಕ್ ಡೌನ್ ಘೋಷಿಸುವ ಪ್ರಮಾದ ಎಸಗಿ ಜನಸಾಮಾನ್ಯರನ್ನು ಹಾಗೂ ದೇಶದ ಅರ್ಥವ್ಯವಸ್ಥೆಯನ್ನು ಸಂಕಷ್ಟಕ್ಕೆ ದೂಡಿತು. ಇಲ್ಲಿ ಕೂಡಾ ಶೇರುಮಾರುಕಟ್ಟೆ ಕುಸಿತ ಕಂಡಿತು. ಬೆರಳೆಣಿಕೆಯ ಶ್ರೀಮಂತರು ಈ ಪರಿಸ್ಥಿತಿಯ ಲಾಭಪಡೆದು, ಸಾರ್ವಜನಿಕರ ಕೈ ಸೇರಿದ್ದ ತಮ್ಮದೇ ಕಂಪನಿಯ ಷೇರುಗಳನ್ನು ಅಗ್ಗದಲ್ಲಿ ಖರೀದಿ ಮಾಡಿ ತಮ್ಮ ಪಾರಮ್ಯ ಮತ್ತು ನಿಯಂತ್ರಣ ಹೆಚ್ಚಿಸಿಕೊಂಡಿದ್ದಾರೆ. ಕೊರೊನಾ ಭಯದಿಂದ ಹೊರಬಂದು ಪುನಃ ದೇಶದ ಹಾಗೂ ವೈಯಕ್ತಿಕ ಆರ್ಥಿಕತೆಯನ್ನು ಬಲಪಡಿಸುವುದು ಈಗ ಅನುಸರಿಸುತ್ತಿರುವ ಅಭಿವೃದ್ಧಿಯ ಮಾದರಿ ಎಂದರೆ ಬಂಡವಾಳವಾದ ಆಧಾರಿತ ಕೇಂದ್ರೀಕೃತ ಅರ್ಥನೀತಿಯನ್ವಯ ಸಾಧ್ಯವಾಗದ ಕೆಲಸ. ಈ ನಿರಾಶಾದಾಯಕ ಸ್ಥಿತಿಯಲ್ಲಿ ಅಭಿವ್ಯದ್ಧಿಯ ಪರ್ಯಾಯ ಮಾದರಿಗಳ ಕುರಿತು ಚಿಂತಿಸುವುದು ಅನಿವಾರ್ಯವಾಗಲಿದೆ. ಉದಾಹಣೆಗಾಗಿ ನಗರಗಳಿಂದ ಕಾರ್ಮಿಕರ ಮರು ವಲಸೆಯಿಂದಾಗಿ ಗ್ರಾಮೀಣ ಭಾಗದಲ್ಲಿ ನಿರುದ್ಯೋಗದ ಹೊಸ ಸಮಸ್ಯೆ ಎದುರಾಗಲಿದೆ. ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಗಳಿಂದ ಇದು ಪರಿಹಾರ ಕಾಣದು. ಪ್ರಾದೇಶಿಕ ಆರ್ಥಿಕ ಸ್ವಾವಲಂಬನೆ ಸೂತ್ರವೇ ಇದಕ್ಕೆ ಪರಿಹಾರ. ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಬಲ್ಲ ಪ್ರದೇಶವನ್ನು ಗುರ್ತಿಸಿ ( ಇದು ಒಂದಿಡೀ ರಾಜ್ಯವಾಗಬಹುದು ಅಥವಾ ಒಂದೇ ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚು ಘಟಕಗಳೂ ಆಗಬಹುದು) ಅಲ್ಲಿನ ಪ್ರತಿಯೋರ್ವ ವ್ಯಕ್ತಿಗೂ ಫಲಪ್ರದವಾದ ಉದ್ಯೋಗ ಸೃಷ್ಟಿಸುವ ಸಲುವಾಗಿ ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಉದ್ದಿಮೆ ಸ್ಥಾಪಿಸಲು ಪ್ರೋತ್ಸಾಹ ನೀಡುವ ಕಾರ್ಯವಾಗಬೇಕು. ದೆಹಲಿ, ಬೆಂಗಳೂರು, ಚೆನ್ನೈಗಳಲ್ಲಿ ಕೇಂದ್ರೀಕೃತವಾಗಿರುವ ಉದ್ದಿಮೆಗಳನ್ನು ದೇಶದ ಉದ್ದಗಲಕ್ಕೂ ವಿಸ್ತರಿಸುವ ಕುರಿತು ಯೋಚಿಸಿದಾಗ ಮಾತ್ರ ಸಮಸ್ಯೆಗೆ ಪರಿಹಾರ ದೊರಕುತ್ತದೆ. “ಕರ್ನಾಟಕದ ಉದ್ಯೋಗ ಕನ್ನಡಿಗರ ಹಕ್ಕು”, “ಕನ್ನಡಿಗರೆಲ್ಲರಿಗೂ ಕರ್ನಾಟಕದಲ್ಲೇ ಉದ್ಯೋಗ” ಎಂಬ ಈಗಾಗಲೇ ಪ್ರಾರಂಭವಾಗಿರುವ ಅಭಿಯಾನ ಇಡೀ ದೇಶವನ್ನು ವ್ಯಾಪಿಸಲಿದೆ. ಬಿಹಾರಿಗಳಿಗೆ ಬಿಹಾರದಲ್ಲೇ ಉದ್ಯೋಗ ಓಡಿಸ್ಸಿಗರಿಗೆ ಓಡಿಶಾದಲ್ಲೇ ಉದ್ಯೋಗ, ಮುಂತಾದ ಪ್ರಾದೇಶಿಕ ಆರ್ಥಿಕ ಸ್ವಾಯತ್ತತೆಯ ಚಳವಳಿಗಳು ಬಹುಬೇಗ ರೂಪುಗೊಳ್ಳಲಿವೆ. ಜಗತ್ತಿನ ಬಹಳಷ್ಟು ರಾಷ್ಟ್ರಗಳು ಲಾಕ್ ಡೌನ್ ಅನುಸರಸುತ್ತಿರುವುದರಿಂದಾಗಿ ಆಯಾತ ನಿರ್ಯಾತಗಳಿಗೆ ತಡೆ ಬಿದ್ದಿದೆ. ಉದಾಹರಣೆಗಾಗಿ ಭಾರತ ಮತ್ತು ವಿಯೇಟ್ನಾಂ ಅಕ್ಕಿಯ ನಿರ್ಯಾತಕ್ಕೆ ತಡೆ ಒಡ್ಡಿವೆ. ಆಹಾರ ಪದಾರ್ಥಗಳ ಆಯಾತವನ್ನೇ ಅವಲಂಬಿಸಿದ ದೇಶಗಳು ಇಂತಹ ಪರಿಸ್ಥಿತಿಯಲ್ಲಿ ಸಂಕಷ್ಟ ಎದುರಿಸಲಿವೆ. ಇದಕ್ಕೆ ಪರಿಹಾರವೆಂದರೆ , ಜೀವನದ ಕನಿಷ್ಠ ಅಗತ್ಯತೆಗಳಾದ ಆಹಾರ, ವಸ್ತ್ರ, ವಸತಿ, ಶಿಕ್ಷಣ, ಔಷದೋಪಚಾರಗಳ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸುವುದು. ಚಿಕ್ಕಪುಟ್ಟ ದೇಶಗಳು, ದೇಶದ ಹಂತದಲ್ಲಿ ಸ್ವಾವಲಂಬಿ ಯಾಗುವ ರೀತಿಯ ಯೋಜನೆಗಳನ್ನು ರೂಪಿಸಿಕೊಳ್ಳುತ್ತವೆ. ಆದರೆ ಭಾರತದಂತಹ ವೈವಿದ್ಯಮಯ ದೇಶದಲ್ಲಿ ಜೀವನದ ಕನಿಷ್ಠ ಅಗತ್ಯತೆಗಳ ಉತ್ಪಾದನೆಯ ಸ್ವಾವಲಂಬನೆಯನ್ನು ಪ್ರಾದೇಶಿಕ ಹಂತದಲ್ಲೇ ಸಾಧಿಸಬೇಕಾಗುತ್ತದೆ. ಪ್ರಕೃತಿ ಎಂದೂ ಪಕ್ಷಪಾತಿಯಲ್ಲ, ಪೃಥ್ವಿಯ ಎಲ್ಲೆಡೆಗೂ ಸಂಪನ್ಮೂಲಗಳನ್ನು ನೀಡಿದೆ ಹಾಗೂ ಅವುಗಳಲ್ಲಿ ವೈವಿಧತೆಯನ್ನು ತುಂಬಿದೆ. ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆಯನ್ನು ಗುರ್ತಿಸಿ, ಅವುಗಳನ್ನು ಸೂಕ್ತ ವಿಧಾನದಲ್ಲಿ ಬಳಸಿ, ಆ ಪ್ರದೇಶದ ವಾಸಿಗಳೆಲ್ಲರಿಗೂ ಉತ್ತಮವಾದ ಬದುಕು ಕಟ್ಟಿಕೊಳ್ಳುವ ರೀತಿಯನ್ನೂ ಕಂಡುಕೊಳ್ಳುವ ಬುದ್ಧಿಮತ್ತೆಯನ್ನು ಮಾನವನಿಗೆ ನೀಡಿದೆ. ನಿಸರ್ಗದ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಮಾನವನ ಅಹಂಕಾರ ಚಿಕ್ಕ ಅಣು ಕೊರೊನಾ ವೈರಸ್ ಮುಖೇನ ಧೂಳೀಪಟವಾಗಿದೆ. ಇನ್ನು ಮುಂದಾದರೂ ಪರಿಸರ ಪೂರಕ ಅಭಿವೃದ್ಧಿ ಪಥದಲ್ಲಿ ನಡೆಯುವಂತೆ ಎಚ್ಚರಿಕೆಯನ್ನು ನೀಡಿದೆ. ಕೊರೊನಾ ವೈರಾಣು ಹರಡುವುದು ಸಂಪರ್ಕ, ಸ್ಪರ್ಶ, ಗಾಳಿಯ ಮೂಲಕ ಅಂದರೆ ಸ್ಥೂಲ ವಾಹಕಗಳ ಮೂಲಕ. ಇದಕ್ಕಿಂತ ಭಿನ್ನವಾದ, ಶಬ್ದಗಳ ಮೂಲಕ ಹರಡಬಲ್ಲ, ವಿಚಾರಗಳ ಮುಖೇನ ಪ್ರಸಾರಗೊಳ್ಳಬಲ್ಲ, ಅಣುಗಳ ಕುರಿತು

ಪ್ರಸ್ತುತ Read Post »

ಇತರೆ

ಇತರೆ

ಸಂಸ್ಕೃತಿ ಉಳಿಸಿ  ಶೈಲಜಾ ಹಾಸನ ಮಕ್ಕಳಿಂದ ಸಂಸ್ಕೃತಿ ಉಳಿಸಿ ಬೆಳೆಸುವ ಪೋಷಕರ ಪಾತ್ರ        ಸಾಂಸ್ಕೃತಿಕವಾಗಿ ಶ್ರೀಮಂತವಾಗಿರೋ ಈ ದೇಶದಲ್ಲಿ  ಅದನ್ನು ಉಳಿಸಿ ಬೆಳೆಸುವ, ತಲೆಮಾರಿನಿಂದ ತಲೆಮಾರಿಗೆ ಅದನ್ನು ವರ್ಗಾಯಿಸುವ ಕಾರ್ಯಗಳು  ಇಂದು ಅಗತ್ಯ ವಾಗಿವೆ. ಇಂತಹ ಕಾರ್ಯಗಳನ್ನು ನಾವು ಮಕ್ಕಳಿಂದಲೇ ಪ್ರಾರಂಭ ಮಾಡುವದು ಸಂಸ್ಕೃತಿ ಯನ್ನು ಉಳಿಸುವ ದೃಷ್ಟಿಯಿಂದ ಹೆಚ್ಚು ಸೂಕ್ತ ಅನಿಸುತ್ತದೆ.ಆದರೆ ಅದು ಹೇಗೆ  ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಉದ್ಭವವಾಗುವುದು  ಸಹಜ.       ಮಕ್ಕಳು ತೋಟದಲ್ಲಿ ಅರಳಿ ನಗುತ್ತಿರುವ ಸುಂದರ ಹೂವುಗಳು .ಈ ಹೂಗಳು  ಸದಾ ನಳನಳಿಸುತ್ತಾ ಇರಬೇಕು .ಒಂದು ಪೀಳಿಗೆಯಿಂದ  ಮತ್ತೊಂದು ಪೀಳಿಗೆಗೆ ಸಂಸ್ಕೃತಿ ಯನ್ನು ಹೊತ್ತೊಯ್ಯ ಬೇಕು ಅನ್ನುವುದಾದರೆ   ಆ ಮಕ್ಕಳ ಪೋಷಕರು ಹಾಗೂ ಶಿಕ್ಷಕರು ಅತ್ಯಂತ ಹೆಚ್ಚಿನ ಜವಾಬ್ದಾರಿ ತಗೊಬೇಕಾಗುತ್ತದೆ .ಪೋಷಕರು ಎಲ್ಲಾ ಜವಾಬ್ದಾರಿಯನ್ನು ಶಿಕ್ಷಕರ ಮೇಲೆಯೇ ಹೇರಿ ತಮ್ಮ ಜವಾಬ್ದಾರಿಯನ್ನು ಹಗುರ ಮಾಡಿಕೊಳ್ಳುತ್ತಿದ್ದಾರೆ . ಆದರೆ ಮಗು ಶಿಕ್ಷಕ ಹಾಗೂ ಪೋಷಕರನ್ನು ಅನುಕರಣೆ ಮಾಡುತ್ತವೆ . ಇಲ್ಲಿ ಇಬ್ಬರ ಪಾತ್ರವೂ ಅಪಾರ .            ಒಮ್ಮೆ ಒಬ್ಬಾತ ಸೈಕಲ್ ಅಂಗಡಿಯಲ್ಲಿ ಇರುವ ಸುಂದರ ಸೈಕಲ್‌ಗಳನ್ನು ಕಂಡು ಅಂಗಡಿಯಾತನನ್ನು ಕೇಳುತ್ತಾನೆ . “ಈ ಸೈಕಲ್ ಹೊಡೆಯಲು ಬರುತ್ತವೆ ಯೇ, ನನ್ನ ಮಗ ಈ ಸೈಕಲ್ ಮೇಲೆ ಕುಳಿತು ಸುಲಭವಾಗಿ ಚಲಿಸಬಲ್ಲವೇ” ಎಂದು ಕೇಳುತ್ತಾನೆ . “ಇದು ಉತ್ತಮ ಗುಣಮಟ್ಟದ ಸೈಕಲ್ ಯಾರೂ ಬೇಕಾದರೂ ಇದನ್ನು ಸುಲಭವಾಗಿ ಹೊಡೆಯಬಹುದು, ಯಾವುದೇ ಸಂಶಯವಿಲ್ಲದೆ ಕೊಂಡುಕೊಳ್ಳಿ “ಎಂದು ಹೇಳುತ್ತಾನೆ  ಅಂಗಡಿಯಾತ.        ಅತ್ಯಂತ ಆಸಕ್ತಿಯಿಂದ ಸೋಕಲ್ಕೊಂಡು ಕೊಂಡು ಹೋದ ವ್ಯಕ್ತಿ ಎರಡೇ ದಿನದಲ್ಲಿ ವಾಪಸ್ಸು ಬಂದು “ಏನಯ್ಯ  ಸೈಕಲ ಚೆನ್ನಾಗಿ ಹೊಡಿಬಹುದು ಅಂತ ಹೇಳಿ ಮೋಸ ಮಾಡಿಬಿಟ್ಟೆ . ನನ್ನ ಮಗ ಈ ಸೈಕಲಿನಿಂದ ಕೈಕಾಲು ಮುರಿದುಕೊಂಡಿದ್ದಾನೆ. ಎಂತಹ ಸೈಕಲನ್ನು ಕೊಟ್ಟು ಬಿಟ್ಟೆ. ನಿನ್ನ ಮಾತು ಕೇಳಿ ನಾನು ಕೆಟ್ಟೆ “ಎಂದು ಆ ವ್ಯಕ್ತಿ ಜೋರು ಮಾಡುತ್ತಾನೆ.   ಆಗ ಅಂಗಡಿಯ ಮಾಲಿಕ ” ಅಲ್ಲಾ  ಸ್ವಾಮಿ ನಾನು ಉತ್ತಮವಾದ  ಸೈಕಲನ್ನು ಕೊಟ್ಟಿದ್ದಿನಿ, ಒಳ್ಳೆಯ ಸೈಕಲ್ ಮಾರೋಕೆ ಸಾಧ್ಯವೇ ವಿನಃ ಸೈಕಲ್ ಹೊಡೆಯೋಕೆ ಬೇಕಾದ ಬ್ಯಾಲನ್ಸನ್ನು ಮಾರೋಕೆ ಸಾಧ್ಯ ಎನ್ರಿ. ಮೊದಲು ಸೈಕಲ್ ಬ್ಯಾಲನ್ಸನ್ನು ಕಲಿಸಿ ಕೊಡಿ ಅಂತ ದಬಾಯಿಸಿ ಕಳುಹಿಸಿ ಕೊಡುತ್ತಾನೆ .ಹೀಗೆ ಉತ್ತಮವಾದ ವಾಹನಗಳನ್ನು ಮಾರಬಹುದೇ ವಿನಾಃ ಕಲಿಯುವಿಕೆಗೆ ಬೇಕಾದ ಆಸಕ್ತಿ ಪ್ರಾವಿಣ್ಯತೆಯನ್ನು ಮಾರೋಕೆ ಸಾಧ್ಯವಿಲ್ಲ . ಅದೇ ರೀತಿ ಒಬ್ಬ ಶಿಕ್ಷಕ ಮಗುವಿಗೆ ಉತ್ತಮವಾಗಿ ಬೋಧಿಸ ಬಲ್ಲ . ಕಲಿಕೆಗೆ ಬೇಕಾದ ಎಲ್ಲಾ ಸಹಾಯವನ್ನು ಮಾಡಬಲ್ಲ. ಆದರೆ ಕಲಿಕೆ ಮಾತ್ರ ಮಗುವಿನಿಂದಲೇ ಆಗಬೇಕು , ಆ ಮಗು ಸ್ವತಃ ಕಲಿತಾಗ ಮಾತ್ರ ಅಕ್ಷರ , ಜ್ಞಾನ ವೃದ್ಧಿಯಾಗೋಕೆ ಸಾಧ್ಯ . ಇದನ್ನು ಪೋಷಕರು ಅರ್ಥ ಮಾಡಿಕೊಂಡು ತಮ್ಮ ಜವಾಾರಿಯನ್ನುಕೂಡ ಅರಿಯಬೇಕು .ಸುಂದರವಾಗಿ ಅರಳಿ ನಗುತ್ತಾ ಇರೊ ಹೂವುಗಳು , ಬಾಡೊಕ ಕಾರಣ ಇರುತ್ತೆ , ಗಿಡಕ್ಕೆ ಬೇಕಾದ ನೀರು , ಗೊಬ್ಬರ ಕಡಿಮೆ ಆದರೂ ಗಿಡ ಬಾಗುತ್ತದೆ, ಹೆಚ್ಚು ಆದರೂ ಗಿಡ ಬಾಗುತ್ತದೆ . ಇದಕ್ಕೆ ಕೂಡಬೇಕಾದಷ್ಟು ಪ್ರಮಾಣದ ನೀರು, ಗೊಬ್ಬರ ಕೊಡಬೇಕು . ಈಗಂತು ಎಲ್ಲಾ ಮನೆಗಳಲ್ಲೂ ಒಂದೊ , ಎರಡೋ ಮಕ್ಕಳಿರುತ್ತದೆ . ಮಗು ಕೇಂದ್ರೀಕೃತ ಸಂಸಾರಗಳೇ ಹೆಚ್ಚು . ಮಗುವಿನ ಬಗ್ಗೆ ವಿಪರೀತ ಕಾಳಜಿ, ಪ್ರೀತಿ , ವಾತ್ಸಲ್ಯ . ಅದು ಏನು ಹೇಳುತ್ತೊ ಅದನ್ನು ಕೊಡಿಸಿಬಿಡಬೇಕು.ಅದೆಷ್ಟೆ ದುಡ್ಡಾದ್ರು ಚಿಂತೆ ಇಲ್ಲ . ಅದರಿಂದ ಏನೇ ಹಾನಿಯಾದ್ರೂ ಪರವಾಗಿ ನಮ್ಮ ಮಗು ಬೇಸರ ಮಾಡ್ಕೊಬಾರದು ಅನ್ನೋ ಮನೋಭಾವ , ಇಂದಿನ ಹೆತ್ತವರಲ್ಲಿ ಹೆಚ್ಚು ಕಾಣ್ತಾ ಇದ್ದೇವೆ . ನಮಗಂತೂ ನಾವು ಬಯಸಿದ ಎಲ್ಲವನ್ನು ಈಡೇರಿಸಿ ಕೊಡೋ ಹೆತ್ತವರಿರಲಿಲ್ಲ . ಆಗೆಲ್ಲ ತಮಗೆಷ್ಟು ನಿರಾಶೆ ಆಗ್ತಾ ಇತ್ತು . ಬೇಸರ ಆಗ್ತ ಇತ್ತು . ಅಂತಹ ಬೇಸರ ತಮ್ಮ ಮುದ್ದು ಕಂದಮ್ಮಗಳಿಗಾಗಬಾರದು ಅನ್ನೋ ಆಲೋಚನೆ ಒಂದೆಡೆ ಆದರೆ , ತಾವು ಏನಾಗಬೇಕು ಅಂತ ಅಂದುಕೊಂಡಿದ್ದರೋ , ಅದು ತಮ್ಮ ಮಕ್ಕಳಾದ್ರೂ ಆಗಲಿ ಅನ್ನೋ ಒತ್ತಡ ತರೋದು , ಆ ಮಕ್ಕಳಿಗೆ ಆಸಕ್ತಿ ಇರಲಿ , ಬಿಡಲಿ , ತನ್ನಾಸೆಯನ್ನು ಮಗು ಈಡೇರಿಸಲೇಬೇಕು . ಉದಾಹರಣೆಗೆ ತಾನು ಡಾಕ್ಟರಾಗಲಿಲ್ಲ ಅಂತ ತನ್ನ ಮಗನಾದರೂ ಡಾಕ್ಟರಾಗಲಿ , ಮಗಳು ಇಂಜಿನಿಯರ್ ಆಗಲಿ , ನೃತ್ಯಗಾತಿ ಆಗಲಿ ಅನ್ನೋ ಒತ್ತಡ ಹೇರಿ , ಆ ಮಕ್ಕಳಿಗೆ ಅದರಲ್ಲಿ ಆಸಕ್ತಿ ಇಲ್ಲದಿದ್ದಾಗ ಅವು ಓದಿನಲ್ಲಿ ಬದುಕಿನಲ್ಲಿ ಆಸಕ್ತಿ ಕಳೊಂಡು ಏನೇನೋ ಅನಾಹುತ ಗಳಿಗೆ ಕಾರಣಕರ್ತರಾಗುತ್ತಾರೆ . ಇಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಬೇಕು . ತಮ್ಮ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆ, ಆಸೆ ಇದೆ ಅದನ್ನೆ ಓದಲು ಬಿಡಬೇಕು.ಎಲ್ಲಾ ಮಕ್ಕಳು ಡಾಕ್ಟರ್, ಇಂಜಿನಿಯರುಗಳೇ ಆಗಬೇಕೆ. ಜಾಗತಿಕರಣದಿಂದಾಗಿ ಇಂದು ನಮ್ಮ ದೇಶ ತೆರೆದ ಕೈ ಗಳಿಂದ ವಿದೇಶಿ ಸಂಸ್ಕೃತಿಯನ್ನು ಸ್ವಾಗತಿಸುತಿದೆ. ಇದರ ಪರಿಣಾಮ ಕೂಡ ನತಮ್ಮ ಪುಟಾಣಿಗಳ ಮೇಲೆ ಆಗ್ತಾ ಇದೆ . ಯಾವುದೊ ಪಾನಿಯಾ ಕುಡಿದ ಮಾತ್ರಕ್ಕೆ ತಾನು ಸಚಿನ್ ಅಂತೆ ದೊಡ್ಡ ಕ್ರಿಕೆಟಿಗವಾಗಬಹುದು ಅನ್ನೋ ಕನಸುಗಳನ್ನು ಇಂದಿನ ಟಿವಿ ಸಂಸ್ಕೃತಿ ಜಾಹೀರಾತು ನಮ್ಮ ಕಂದಮ್ಮಗಳಿಗೆ ಮಾಡ್ತಾ ಇದೆ. ರ ಯಾವುದೋ ಕ್ರೀಮ್ ಹಚ್ಚಿದರೆ ತಾನು ಐಶ್ವರ್ಯ ರೈ ಯಂತೆ ಸುಂದರ ಹುಡುಗಿಯಾಗ ಬಹುದು ಅನ್ನೋ ಕಲ್ಪನೆ ಹುಡುಗಿಯರಿಗೆ ಇರುತ್ತೆ.ಇಂತಹ ಪೊಳ್ಳು ಕನಸುಗಳಿಗೆ ನಾವು ಮಕ್ಕಳನ್ನು ಬಿಟ್ಟು ಕೊಡುತ್ತಾ ಇದ್ದೆವೆ. ಮಕ್ಕಳು ಆಸೆ ಪಟ್ಟು ಕುಡಿಯುವ ತಂಪು ಪಾನೀಯಗಳು, ಟಾಯ್ಲೆಟ್ ತೊಳೆಯುವ ಕ್ರಿಮಿ ನಾಶಕಗಳಿಗೆ ಸಮನಾಗಿರುತ್ತವೆ ಅನ್ನೋ ಸತ್ಯವನ್ನು ನಾವೇಕೆ ಮಕ್ಕಳಿಗೆ ತಿಳಿಸೊಲ್ಲ. ಸದಾ ಕುಡಿಯುವ ಆ ಪಾನೀಯಗಳಿಂದ ದಂತಗಳು ಕರಗಿ ಹೋಗುತ್ತವೆ ಅನ್ನೋ ನೈಜ ಚಿತ್ರಣಗಳನ್ನೆಕೆ ನಾವು ಮಕ್ಕಳಿಗೆ ಕೊಡುತ್ತಿಲ್ಲ . ಮಕ್ಕಳು ಕೇಳಿದ ಕೂಡಲೇ ಪಾನೀಗಳನ್ನು ಕೊಡಿಸಿಬಿಡುತ್ತೇವೆ . ಇವತ್ತು ಎಷ್ಟೋ ಮಕ್ಕಳಿಗೆ ಎಳನೀರು ಬೇಡದ ವಸ್ತು. ಮಜ್ಜಿಗೆ ಬೇಕಾಗಿಯೇ ಇಲ್ಲಾ ಮಕ್ಕಳಿಗೆಲ್ಲಾ ಟಿ ವಿಯಲ್ಲಿ ಬರುವ ಸಚಿನ್ ಕುಡಿಯುವ, ಐಶ್ವರ್ಯ ಋತ್ವಿಕ್ ರೋಷನ್ ಕುಡಿಯುವ ಪಾನೀಯಗಳೇ ಬೇಕು .ಇಂಥ ಹವ್ಯಾಸಗಳನ್ನು ಬೆಳಿಸುತ್ತಾ ನಾವು ವಿದೇಶಿ ಕಂಪನಿಗಳಿಗೆ ಮಣೆ ಹಾಕುತ್ತಾ ಸ್ವದೇಶಿ ಮೂಲಕ್ಕೆ ಕಂಠಕಪ್ರಾಯರಾಗಿ , ರೈತನ ಆತ್ಮಹತ್ಯೆಗೆ ಪರೋಕ್ಷವಾಗಿ ಕಾರಣವಾಗುತ್ತಾ ಇದ್ದೇವೆ . ಬೆಳಿಗ್ಗೆ ಎದ್ದ ಕೂಡಲೇ ಮಕ್ಕಳಿಗೆ ಕಾರನ್ ಪ್ಲೇಕ್ಸ್ ಬೇಕು. ರೊಟ್ಟಿ ಬೇಡ , ದೊಸೆ ಬೇಡ , ಫಿಜ್ಜಾ ಬೇಕು . ನಾವು ಕೂಡ ಯಾವುದೋ ಆಮಿಷಕ್ಕೆ ಬಲಿ ಬಿದ್ದು ಮಕ್ಕಳಿಗೆ ತಮ್ಮತನವನ್ನು ಬೆಳೆಸುವಲ್ಲಿ ,ಸ್ವದೇಶದ ಪ್ರೇಮ ಸಂಸ್ಕೃತಿಯಲ್ಲಿನ ಆಸಕ್ತಿಯನ್ನು ತುಂಬುವಲ್ಲಿ ಹಿಂಜರಿಯುತ್ತಿದ್ದೇವೆ .ಈಗಲಾದರೂ ನಾವು ಬದಲಾಗಬೇಕು . ವಿದೇಶಿಯರಿಗೆ ನಮ್ಮ ಸಂಸ್ಕೃತಿಯ ಆಸಕ್ತಿ ಬೆಳೆಯುತ್ತದೆ . ಅವರು ಆಸೆಯಿಂದ ಯೋಗವನ್ನು ಕಲಿಯುತ್ತಿದ್ದಾರೆ . ನಮ್ಮ ಆಯುರ್ವೇದಿಕವನ್ನು ಆಸಕ್ತಿಯಿಂದ ನೋಡ್ತಾ ಇದಾರೆ . ನಮ್ಮ ಭರತನಾಟ ಯಕ್ಷಗಾನ , ಆವರಿಗೂ ಪ್ರಿಯ ಅನಿಸುತ್ತದೆ . ಆದರೆ ಇದ್ಯಾವುದೂ ನಮಗೆ ಬೇಡವಾಗ್ತಾ ಇದೆ .ಇಂದಿನ ಮಕ್ಕಳಿಗೆ ಶಿವರಾಮ ಕಾರಂತ ಯಾರು ಅಂತ ಗೊತ್ತಿಲ್ಲ .ಬೇಂದ್ರೆಯವರಿಗೆ ಯಾವ ಪ್ರಶಸ್ತಿ ಬಂತು ಆನೋದು ತಿಳಿದಿಲ್ಲ. ಸಾಹಿತ್ಯದ ಯಾವ ಕೃತಿ ಇದೆ ಅಂತಲೇ ಗೊತ್ತಿಲ್ಲ . ಎಷ್ಟೋ ಮಕ್ಕಳಿಗೆ ಕಥೆ ಅಂದ್ರನೇ ಗೊತ್ತಿಲ್ಲ ಕವನ ಅಂದ್ರೆ ತಿಳಿದಿಲ್ಲ .ಆದ್ರೆ ಕಾರ್ಟೂನ್ ಅಂದರೆ ಬಹಳ ಇಷ್ಟ. ಈ ಪುಟಾಣಿಗಳಿಗೆ ಯಾಕೆ ಹೀಗಾಗುತ್ತಿದೆ. ನಾವ್ಯಾಕೆ ಸಾಹಿತ್ಯಕ ವಾತಾವರಣವನ್ನು ಮಕ್ಕಳಿಗೆ ಕೊಡ್ತಾ ಇಲ್ಲ.ದೂರದರ್ಶನದ ವ್ಯಾಮೋಹದಲ್ಲಿ ಮುಳುಗಿದ ಮಕ್ಕಳನ್ನು ಸೃಜನಾತ್ಮಕತೆಗೆ ಯಾಕೆ ನಾವು ಎಳೆಯುತ್ತಾ ಇಲ್ಲಾ .ಈ ಪುಟಾಣಿಗಳ ಸಾಹಿತ್ಯದ ವಾತಾವರಣ ಸೃಷ್ಟಿ ಮಾಡಿ , ಅವರಿಗೆ ಸಾಹಿತ್ಯದ ಕೃತಿಗಳನ್ನು ಓದುವಲ್ಲಿ ಆಸಕ್ತಿ ಬೆಳೆಸಿ , ಕವಿತೆ ಎಂದರೇನು , ಅದನ್ನು ಹೇಗೆ ಬರೆಯಬಹುದು ಅನ್ನೋ ತಿಳಿವಳಿಕೆ ಕೊಟ್ಟರೆ ,ಈ ಮಕ್ಕಳಿಂದ ಒಬ್ಬ ಕಾರಂತ, ಒಬ್ಬ ಭೈರಪ್ಪ , ಒಬ್ಬ ಅನುಪಮಾ ನಿರಂಜನ , ಒಬ್ಬ ಬೇಂದ್ರೆಯವರನ್ನು ಸೃಷ್ಟಿಸೋಕೆ ಸಾಧ್ಯ.ನಮ್ಮ ನಾಡಿನ ಬಗ್ಗೆ , ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ತಿಳಿಸಿ,ಗೌರವ ಬೆಳೆಸಿಕೊಳ್ಳುವಂತೆ ಮಾಡುವ ಜವಾಬ್ದಾರಿ ಶಿಕ್ಷಕರ ಮತ್ತು ಪೋಷಕರ ಮೇಲಿದೆ.ಬದುಕಿನ ಮೌಲ್ಯಗಳು, ರೀತಿ ನೀತಿಗಳು, ಪರಂಪರೆ , ಆಚಾರ ವಿಚಾರಗಳು , ನಾಡ ಹಬ್ಬ . ರಾಷ್ಟ್ರೀಯ ಹಬ್ಬಗಳು , ಶಿಲ್ಪಕಲೆ ಮುಂತಾದ ವಿಚಾರಗಳನ್ನು ಮಕ್ಕಳ ಮನದಲ್ಲಿ ಬಿಂಬಿಸುತ್ತ ಬಂದಲ್ಲಿ ಸಂಸ್ಕೃತಿ ಯನ್ನು ಉಳಿಸಿ ಬೆಳೆಸಲು ಸಾಧ್ಯ . ********************************

ಇತರೆ Read Post »

ಇತರೆ

ಲಹರಿ

ನಿನಗಾಗಿ ಶಾಲಿನಿ ಆರ್. ಹೌದು, ಬೆಳಗ್ಗೆ ಬೆಳಗ್ಗೆ ಆ ಪ್ರಾಥಃ ಸ್ಪರ್ಶ ಇರತ್ತಲ್ಲ ಅದನ್ನ ಆಸ್ವಾದಿಸೋದೆ ಒಂದು ಹಬ್ಬ ನನಗೆ.ಇದನ್ನ ಬರಿವಾಗ ಕೋಗಿಲೆ ಹಾಡ್ತಿದೆ. ಜಸ್ಟ ವಾಕಿಂಗ್ ಮುಗ್ಸಿ ಬಂದೆ. ಬಂದ್ ಕೂಡ್ಲೆ ಮನದಲ್ಲಿ ಒಂದು ಆಲಾಪನೆ ಶುರುವಾಯಿತು. ಅದಕ್ಕೆ ಈ ನೂರಾರು ಪದಗಳ ಹರವನ್ನ ,ಬದುಕಿನ‌ ಹದಗಳನ್ನ ಹರಡಿಕೊಂಡು ಕುಳಿತೆ.    ಐದುವರಿಯಿಂದ ಆರು ಇಪ್ಪತ್ತು ರವರೆಗೆ  ವಾಕಿಂಗ್  ಹೋಗಿದ್ದೆ.ದಾರಿಲಿ, ಪಾರಿಜಾತದ ಪರಿಮಳ ,ಮಲ್ಲಿಗೆ ಸುವಾಸನೆ, ದೂರದಲ್ಲಿ ಕೂಗೋ ನವಿಲು, ಕೋಗಿಲೆಯ ಆ ಪಂಚಮಸ್ವರ ಜೊತೆಗೆ ನನ್ನ ಪುಟ್ಟ ಜಗತ್ತಿನ ಒಲವು ನೀ ನಿನ್ನ ಜೋಡಿ ಅದನ್ನೆಲ್ಲ ಮನಸ್ಸಿನಲ್ಲಿ ಅನುಭವಿಸುತ್ತ ಮನೆಗೆ ಬಂದೆ .ನೆನ್ನೆ ರಾತ್ರಿ ಮಾಡಿದ ಈ ಹಲ್ವನ ಡೈಮಂಡ್ ಶೇಪಲ್ಲಿ ಕಟ್ ಮಾಡಿ ಪಿಕ್ ತೆಗೆದು ಇವತ್ತಿನ ಶುಭೋದಯ ಕಳ್ಸಿದೀನಿ ನೋಡು. ಇವತ್ತಿನ ಈ ಬರಹ ಕೂಡ ಹಲ್ವಾ ನೆಪಾನೆ. ಅಷ್ಟು ಚೆಂದದ ಹದಾ ಬಂದಿದೆ. ಪ್ರತಿಭಾರಿನು ಬರತ್ತೆ. ಹಲ್ವಾ , ನೆನಸಿದ ರಾಗಿನ ರುಬ್ಬಿ ಅದರ ಹಾಲು ತೆಗೆದು ಸೋಸಿ ಎಕ್ದಂ ಪೈನ್ ಹಾಲ ಬರಬೇಕು ಹಾಗೆ. ಅದಕ್ಕೆ ಸರಿಯಾದ ಪ್ರಮಾಣದಲ್ಲಿ ಬೆಲ್ಲ ಬೆರೆಸಿ. ಅದನ್ನ ಕೈ ಬಿಡದ ಹಾಗೆ ಬೆರೆಸ್ತಾನೆ ಇರಬೇಕು ಸಣ್ಣ ಉರಿಯಲಿ. ಅದನ್ನ ಗುರಾಡ್ತಾನೆ ಇರಬೇಕು, ಕೈ ನೋವಾಗತ್ತೆ ಗೊತ್ತಾ. ಗುರಾಡ್ತಾ ಗುರಾಡ್ತ ಅದು ಗಟ್ಟಿಯಾಗ್ತಾ ಬೆಂದು ಬೆಂದು ಬರತ್ತೆ. ಆಗ ಒಂದು ಹದ ಬರತ್ತೆ. ಎಂಥ ಅನುಭವ ಗೊತ್ತಾ ಅದು. ಅದು ಜೀವನದ ಅನುಭಾವಾವೆ ಸರಿ. ಬದುಕು ಹೀಗೆ ಅಲ್ವ , ಶರಣಾಗತಿಯ ಸಮರ್ಪಣೆ. ಜೀವನದಲ್ಲಿ ಏನು ಅರಿದೇ ಇದ್ದಾಗ ಬೆಸೆವ ಸಂಬಂಧಗಳು ಒಂದು ಹದಕ್ಕೆ ನಿಲುಕಿ ಬೆಂದು ನೊಂದು ಗಟ್ಟಿಯಾಗಿ ನಮ್ಮನ್ನೆಲ್ಲ ಒಂದುಗೂಡಿಸೋದು.      ‌         ಒದ್ದಾಡ್ತ ಇರತ್ತೆ ಬೆಲ್ಲ ರಾಗಿ ಎರಡು ಬೆರೆಯೋಕೆ, ಆದರೆ ಬೆರೆತ ಮೇಲೆ ಅದಕ್ಕೆ ಒಂದು ಹಿಡಿತ ಸಿಕ್ಕತ್ತೆ. ಆಗ ನೋಡಬೇಕು ಅದರ ಬಣ್ಣ ಬದಲಾಗೋ ರೀತಿ,  ಅಲ್ಲಿ ಪ್ರೀತಿ ಮೇಳೈಸಿ ಒಂದು ಹೊಂಬಣ್ಣಬರತ್ತೆ. ನೋಡೋಕೆ ಚೆಂದ ಗೊತ್ತಾ. ರಾಗಿ, ಬೆಲ್ಲ ಎರಡೂ ಬೇರೆ ಬೇರೆ ಅಸ್ಮಿತೆ  ಹೊಂದಿದ್ದರು, ಎರಡು ಬೆರೆತು ಒಂದಾಗೋ ಪರಿನೆ ಅದ್ಭುತ. ಎರಡಕ್ಕೋ ಆದ ಬದಲಾವಣೆ ಈ ಹದ, ಚೆಲುವಿದ್ದರೇನು, ಸಿರಿಯಿದ್ದರೇನು ನಲವಿಲ್ಲದ ಬದುಕಿಗೆ . ಪ್ರೀತಿ ಅಂದರೇನೆ  ಬದಲಾವಣೆ , ಅದರಿಂದ ಸಿಗೋ ಈ ನಿರಾಳತೆ, ಸ್ವಭಾವಗಳ ರೂಪಾಂತರ, ಇದೇ ಅಲ್ವೆನೋ  ಮೂಲ ಖುಷಿಗೆ ಕಾರಣ. ನಿನ್ನ ಖುಷಿಗೆ ನಾ ಕಾರಣ , ನನ್ನ ಖುಷಿಗೆ ನೀ ಅನ್ನೋ ಮನೋಭಾವ ಸದ್ದಿಲ್ಲದೆ ಜಾಗ ಮಾಡಿ ಮನದ ಗುಡಿಸಲಲ್ಲಿ ಕೂರತ್ತಲ್ಲ. ಅದರ ಜೋಡಿ ತುಟಿಯಂಚಿನಲಿ ಕಂಡು ಕಾಣದ ಹಾಗೆ ಮೂಡಿ ಬರುವ ಈ ನಗು ಕೂಡ ಖುಷಿನೆ . ಇದೇ ಮುಂದೆ ಬರುವ ದಿನಗಳ ಭರವಸೆಗಳ ಬೆಳೆ.‌      ಈ ಹೊತ್ತಲ್ಲಿ  ಹಲ್ವಾ ಗಟ್ಟಿಯಾಗಿ ಮತ್ತಷ್ಟು ಗಟ್ಟಿಯಾಗತ್ತ ಹೋಗತ್ತೆ . ಈಗ ನಿಜವಾದ ಟೆನಷ್ಷನ್ , ಒಂದು ಕ್ಷಣ ಮೈಮರೆತರು.ಹಲ್ವ ಹಳ್ಳ ಹಿಡಿಯೋ ಹೊತ್ತು. ಗಂಟಾಗಿಲ್ಲ ಅನ್ನೋ ಮನದಟ್ಟು ಆಯ್ತಾ, ಆದರೂ, ಬಿಡದೆ ಕೈಯಾಡ್ಸತ್ತ , ಒಂದು ನೆಮ್ಮದಿಯ ನಿಟ್ಟುಸಿರು ಬಿಡ್ತಿನಿ. ಈಗ ಪರಿಪೂರ್ಣ ಬೆಂದಿದೆ ಅನ್ನೊ ಹೊತ್ತಿಗೆ ಅದನ್ನ ಮುಚ್ಚಿ ಮತ್ತಷ್ಟು ಹೊತ್ತು ಇಡೋದು. ನಂತರ ತಟ್ಟೆಗೆ ತುಪ್ಪ ಸವರಿ, ಬೆಂದ ಹಲ್ವಾ ಹಾಕಿ ಚೆನ್ನಾಗಿ ಸಮಮಾಡಿ ಇಡೋದು .ಆಗ್ಲೆ ಹಲ್ವಾ ಮಾಡಿದ ಅನುಭವ ಅನುಭಾವ ಆಗಿರುತ್ತೆ. ಹಲ್ವಾ ಮಸ್ತ ಬಂದಿದೆ.  ಆ ಖುಷಿ ನಿನ್ನೊಟ್ಟೊಗೆ  ಹಂಚ್ಕೋಬೇಕಿತ್ತು, ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ ಅನ್ನೋ ಹಾಡು ಕಿವಿಲಿ ಗುನುಗುಟ್ಟುತಿದೆ. ಅದೇ ಪ್ರೇಮ ಹಬ್ಬಿದ ಪರಿಲಿ ಈ ಬರಹ ನಿ‌ನಗಾಗಿ ಬರಿತಿದೀನಿ. ಮತ್ತೆ ಹಲ್ವಾ ನೋಡಿ ಮನಸ್ಸು  ಮತ್ತೆ ಜಪ ಮಾಡ್ತಿದೆ. ನಮ್ಮ ಪ್ರೀತಿ ಮತ್ತಷ್ಟು ಅದರ ಮೃದುತ್ವ ಪಡೆದು ಕೂಡಿ ಕೊಳ್ಳಲಿ ಅಂತ ಮನಸ್ಸು ಹೇಳ್ತಿದೆ. ಅನುಭವನೇ ಹಾಗೆ , ಅದು ಅಡಿಗೆ ಮನೆದಿರಲಿ ಅದರಾಚೆಗಿನ ಪ್ರಕೃತಿಯ ಎಲ್ಲ ಪ್ರಕಾರಗಳಲ್ಲೇ ಇರಲಿ, ಪ್ರತಿಯೊಂದರಲ್ಲೂ ನಾವು ಕಾಣೋ ಪ್ರೀತಿ , ಪ್ರೇಮದ ನಂಟು  ಹಬ್ಸೋ ರೀತಿಲಿ ನನ್ನ ನಾನು ನನ್ನತನ ಮಾತ್ರ ಉಳಿಸಿ ಮೆರೆಸೋ ತಂತ್ರ ಅದನ್ನ ಬಳಸೋ ಬಾಳು ಎಲ್ಲ ಸೋಜಿಗಾದ ಸೂಜುಮಲ್ಲಿಗೇನೆ ಅಲ್ವಾ…? *************

ಲಹರಿ Read Post »

ಇತರೆ

ಜ್ಞಾನಪೀಠ ವಿಜೇತರು

ಗಿರೀಶ್ ಕಾರ್ನಾಡ್ ಗಿರೀಶ್ ಕಾರ್ನಾಡ್ ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತ ನಾಟಕಕಾರ, ಸಾಹಿತಿ , ಚಿತ್ರ ನಟ ಮತ್ತು ನಿರ್ದೇಶಕ. ಕನ್ನಡ, ಹಿಂದಿ, ತೆಲಗು,ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತಮ್ಮ ಅಭಿನಯದಿಂದ ವಿಶಿಷ್ಠ ಮುದ್ರೆ ಒತ್ತಿರುವ ಇವರು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಏಳನೇ ಸಾಹಿತಿ. ಪ್ರಗತಿಶೀಲ ಸಮತಾವಾದ ಮತ್ತು ಜಾತ್ಯಾತೀತತೆಯನ್ನು ಪ್ರತಿಪಾದಿಸುವ ಇವರು ಕೆಲವು ಬಾರಿ ತಮ್ಮ ನೇರ ನುಡಿಗಳ ಮೂಲಕ ಹಲವು ವಿವಾದಗಳಲ್ಲಿ ಸಿಲುಕಿದ್ದುಂಟು… 1938 ಮೇ 19 ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಇವರು ಜನಿಸಿದರು. ಇವರ ತಂದೆ ರಘುನಾಥ ಕಾರ್ನಾಡ ಮುಂಬೈಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಯಿ ಕೃಷ್ಣಾಬಾಯಿ ಬಾಲ್ಯ ವಿವಾಹವಾಗಿ ಒಂದು ಮಗುವಾದ ನಂತರ ವಿಧವೆಯಾಗಿದ್ದರು. ರಘುನಾಥರ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೇ ಸಲ್ಲಿಸುವಾಗ ಪರಿಚಯವಾದ ಇವರನ್ನು ಆಗಿನ ಸಮಾಜಿಕ ಕಟ್ಟುಪಾಡುಗಳ ವಿರುದ್ಧವಾಗಿ ರಘುನಾಥರು ಕೈಹಿಡಿದರು. ನಂತರ ಈ ದಂಪತಿಗಳ ಮೂರನೇ ಮಗನಾಗಿ ಗಿರೀಶ್ ಜನಿಸಿದರು… ಬಾಲ್ಯದಲ್ಲಿ ಕೆಲಕಾಲ ಮರಾಠಿ ಶಿಕ್ಷಣ ಪಡೆದ ನಂತರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಧಾರವಾಡದ ಬಾಸೆಲ್ ಮಿಶನ್‌ನಲ್ಲಿ ಹೈಸ್ಕೂಲಿನಲ್ಲಿ ಓದಿದ ನಂತರ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮುಗಿಸಿದರು ಗಿರೀಶ್ ಕಾರ್ನಾಡ್ ರು. ನಂತರ ರ್ಹೋಡ್ಸ್ ಸ್ಕಾಲರ್‌ಶಿಪ್ ಪಡೆದುಕೊಂಡು ಆಕ್ಸ್‌ಫರ್ಡ್ ಯುನಿವರ್ಸಿಟಿಯಲ್ಲಿ ರಾಜಕೀಯಶಾಸ್ತ್ರ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1963 ರಲ್ಲಿ ಚರ್ಚಾಕೂಟದ ವೇದಿಕೆಯಾದ ಆಕ್ಸ್‌ಫರ್ಡ್ ಯುನಿಯನ್ ಆಧ್ಯಕ್ಷರಾದವರು… ಚೆನ್ನೈನಲ್ಲಿ ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್‌ನಲ್ಲಿ ಸುಮಾರು 7 ವರ್ಷ ಕೆಲಸ ಮಾಡಿದ ಇವರು ನಂತರ ಅಮೇರಿಕಾದ ಚಿಕಾಗೋ ಯುನಿವರ್ಸಿಟಿಯಲ್ಲಿ ಒಂದು ವರ್ಷ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಇವೆಲ್ಲರ ಮಧ್ಯೆಯೇ ನಾಟಕ ಬರಹದಲ್ಲಿ ತೊಡಗಿದ್ದರು. ಇವರು ಕೆಲಕಾಲ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಮತ್ತು ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ ಗಿರೀಶ್ ಕಾರ್ನಾಡ್ ರು… 1980 ರಲ್ಲಿ ಡಾ.ಸರಸ್ವತಿ ಗಣಪತಿಯವರನ್ನು ಮದುವೆಯಾದರು. ದಂಪತಿಗಳಿಗೆ ಒಬ್ಬ ಪುತ್ರ ಮತ್ತು ಪುತ್ರಿಯರುಂಟು. 2011 ರಲ್ಲಿ ತಮ್ಮ ಆತ್ಮಕಥೆಯಾದ `ಆಡಾಡತ ಆಯುಷ್ಯ’ ವನ್ನು ರಚಿಸಿದರು… ಇವರು ಬರೆದ `ನಾಗಮಂಡಲ’ ಒಂದು ಜನಪದ ಕಥೆಯಾಗಿದ್ದು, ಇವರಿಗೆ ಕರ್ನಾಟಕ ಸಾಹಿತ್ಯ ಪ್ರಶಸ್ತಿ ದೊರೆಕಿಸಿ ಕೊಟ್ಟಿತು. ಇದು ಮನು‍ಷ್ಯನ ಕಾಮವನ್ನು ಬಹುರೂಪಿ ಸರ್ಪದೊಂದಿಗೆ ಸಮೀಕರಿಸಿ ಬರೆದಂತ ನಾಟಕವಾಗಿತ್ತು. ಇದು ಮುಂದೆ 1997 ರಲ್ಲಿ ಟಿ.ಎಸ್.ನಾಗಭರಣರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಮೂಡಿತು… ಮಹಾಭಾರತದ ಪಾತ್ರ ‘ಯಯಾತಿ’ ಮೇಲೆ ಹೊರಬಂದ ನಾಟಕ ಯಯಾತಿ’ ವಿವಾಹಿತ ರಾಜನ ಅತೃಪ್ತ ಕಾಮ ವಾಸನೆ ಮತ್ತು ಅತಿಲೋಲುಪತೆಯ ಮೇಲೆ ಬೆಳುಕು ಚೆಲ್ಲಿತು. ನೆಹುರು ಕಾಲದ ಅತಿಯಾದ ಆದರ್ಶವಾದ ಮತ್ತು ಅದು ಹತಾಶೆಯಲ್ಲಿ ಪರ್ಯವಸಾನಗೊಂಡ ವ್ಯಥೆಯನ್ನು ‘ತುಘಲಕ್’‌ನೊಂದಿಗೆ ಸಮೀಕರಿಸಿ ಐತಿಹಾಸಿಕತುಘಲಕ್’ ನಾಟಕ ರಚಿಸಿದರು… ಕಥಾಸರಿತ್ಸಾಗರದ ಕಥೆಯಧಾರಿತ `ಹಯವದನ’ ಮನುಷ್ಯನ ಅಪೂರ್ಣತೆ , ಪೂರ್ಣತೆಯೆಡಗಿನ ಬಯಕೆಯ ಮೇಲೆ ಬೆಳಕು ಚೆಲ್ಲಿತು… ನಂತರ ಬಂದ ‘ತೆಲೆದಂಡ’ 12 ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ಬಸವಾದಿ ಪ್ರಮಥರ ಮೇಲೇ ನಡೆದಂತ ದಬ್ಬಾಳಿಕೆ, ಕಗ್ಗೋಲೆಗಳನ್ನು ತೆರೆದಿಟ್ಟಿತು. ಇವರ `ಅಂಜು ಮಲ್ಲಿಗೆ’ ನಾಟಕ ಸಹೋದರ- ಸಹೋದರಿಯ ನಡುವೆ ಮೂಡುವ ನಿಷಿದ್ಧ ಪ್ರೇಮದೆಡೆಗೆ ಬೆಳಕು ಚೆಲ್ಲಿತ್ತದೆ. ಹೀಗೆ ಕಾರ್ನಾಡರ ನಾಟಕ ಪ್ರಪಂಚ ಬದುಕಿನ ಮತ್ತು ಮನುಷ್ಯನ ಜೀವನ ಘಟ್ಟದ ಹಲವಾರು ಆಯಾಮಗಳ ಪರಿಚಯ ಮಾಡಿಸಿಕೊಡುತ್ತವೆ… 1970 ರಲ್ಲಿ ತೆರೆಕಂಡ ಯು.ಆರ್.ಅನಂತಮೂರ್ತಿ ಕಾದಂಬರಿ ಆಧಾರಿತ `ಸಂಸ್ಕಾರ’ ಚಿತ್ರದ ಮೂಲಕ ನಟನೆಗೆ ಇಳಿದರು. ಈ ಚಿತ್ರದಲ್ಲಿನ ಪ್ರಾಣೇಶಾಚಾರ್ಯ ಪಾತ್ರವನ್ನು ತುಂಬಾ ಪ್ರಬುದ್ಧರಾಗಿ ನಿಭಾಯಿಸಿದರು ಗಿರೀಶ್ ಕಾರ್ನಾಡ್. ಈ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಕೂಡ ಇವರೇ ಬರೆದಿದ್ದರು… ನಂತರ ಶಂಕರನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್‌’ ಕಿರುತೆರೆ ಧಾರಾವಾಹಿಯಲ್ಲಿ ನಟಸಿದರು. ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧಾರಿತ ವಂಶವೃಕ್ಷ’ ವನ್ನು ತೆರೆಗೆ ತರುವ ಮೂಲಕ ಚಿತ್ರ ನಿರ್ದೇಶನಕ್ಕೂ ಕಾಲಿಟ್ಟರು. ಈ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. ಕುವೆಂಪುರವರಕಾನೂರು ಹೆಗ್ಗಡತಿ’ ಕೃತಿಯನ್ನು ಪರದೆಗೆ ತಂದ ಕೀರ್ತಿ ಗಿರೀಶ್ ಕಾರ್ನಾಡರದು. ನಂತರ ಹಲವಾರು ಚಿತ್ರಗಳನ್ನು ಮತ್ತು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ ಇವರು. ತಮ್ಮ ನಟನೆಯಿಂದಲೂ ಪ್ರಸಿದ್ಧರಾಗಿರುವ ಇವರು ಹಲವು ಕನ್ನಡ,ತೆಲಗು ಮತ್ತು ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ… ಇಂತಹ ಗಿರೀಶ್ ಕಾರ್ನಾಡ್ ಜೂನ್ 10, 2019 ರಂದು ಬೆಂಗಳೂರಿನ ಲ್ಯಾವಲ್ಲೆ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು..! ******************** ಕೆ.ಶಿವು ಲಕ್ಕಣ್ಣವರ

ಜ್ಞಾನಪೀಠ ವಿಜೇತರು Read Post »

ಇತರೆ

ಕವಿ-ಪರಿಚಯ

ಕಮಲಾದಾಸ್ ಶೀಲ ಮತ್ತು ಅಶ್ಲೀಲ ನಡುವಿನ ಗೋಡೆಯನ್ನು ಕೆಡುವಿದ ವಿವಾದಿತ ಮಲಯಾಳಂ ಮತ್ತು ಇಂಗ್ಲೀಷ್ ಲೇಖಕಿ ಕಮಲಾದಾಸ್..! ಕಮಲಾದಾಸ್ ರೆಂದರೆ ನಮ್ಮ ಕನ್ನಡದ ಲೇಖಕಿ ಕಮಲಾ ಹೆಮ್ಮಿಗೆಯವರಿಗೆ ಅದೆಂತದೋ ಪ್ರೀತಿ. ಈ ಲೇಖಕಿ ಕಮಲಾ ಹೆಮ್ಮಿಗೆಯವರ ಬಹುತೇಕ ಕೃತಿಗಳಲ್ಲಿ ಇದೇ ಕಮಲಾದಾಸ್ ರ ನೆರಳನ್ನು ಕಾಣಬಹುದು ಎಂಬ ಅಭಿಪ್ರಾಯ ನನ್ನದು. ಈ ಕಮಲಾ ಹೆಮ್ಮಿಗೆಯವರ ಪ್ರತಿ ಕೃತಿಗಳಲ್ಲೂ ನಾನು ಇದೇ ಕಮಲಾದಾಸ್ ರ ಛಾಪನ್ನು ಕಂಡಿದ್ದೇನೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಹೀಗೆ ಹೇಳುತ್ತಲೇ ಈ ಕಮಲಾದಾಸ್ ರ ಜನ್ಮದಿನವಾದ ಮಾರ್ಚ್ 31‌ ರಂದು ಈ ಕಮಲಾದಾಸ್ ರ ಬಗೆಗೆ ಒಂದಿಷ್ಟು ಮಾಹಿತಿ ನೋಡೋಣ… ಕಮಲಾದಾಸ್ ಮಲಯಾಳಂ ಭಾಷೆಯ ಲೇಖಕಿ. ಸಾಹಿತ್ಯವನ್ನು ಬರೆಯಲು ಆರಂಭಿಸಿ ‘ಮಾಧವಿಕುಟ್ಟಿ’ ಎಂಬ ಕಾವ್ಯ ನಾಮದಿಂದ ಕಮಲಾದಾಸ್ ಕತೆಗಳನ್ನು, ಕಾದಂಬರಿಗಳನ್ನು ರಚಿಸಿದರು… ಮಲಯಾಳಂ ಸಾಹಿತ್ಯ ಜಗತ್ತಿನಲ್ಲಿ ಕತೆ, ಕಾದಂಬರಿಗಳ ಕ್ಷೇತ್ರ ಬಹಳ ವಿಶಾಲವಾದುದು. ಅತಿ ಭಾವುಕತೆಯತ್ತ ಕಿರುಗತೆಗಳು ಜಾರುತ್ತಿದ್ದ ಕಾಲದಲ್ಲಿ ಮಾಧವಿಕುಟ್ಟಿ ಎಂಬ ಕಾವ್ಯ ನಾಮದಿಂದ ಕಮಲಾದಾಸ್ ಕತೆಗಳನ್ನು ಕಾದಂಬರಿಗಳನ್ನು ರಚಿಸಿದರು. ವಿವಾದಗಳ ಅಗ್ನಿಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮನ್ನಣೆಯ ಗುರಿಯನ್ನು ತಲುಪುವಷ್ಟರಲ್ಲಿ ಕಮಲಾದಾಸ್ ಸಾಕಷ್ಟು ಮುಳ್ಳುಹಾದಿಗಳನ್ನು ತುಳಿಯಬೇಕಾಯಿತು. ಖ್ಯಾತ ಕತೆಗಾರರಾಗಿದ್ದ ವೈಕ್ಕಂಮಹಮ್ಮದ್ ಬಷೀರ್, ತಗಳಿ ಶಿವಶಂಕರ ಪಿಳ್ಳೈ, ಎಂ.ಟಿ.ವಾಸುದೇವನ್ ನಾಯರ್, ಟಿ. ಪದ್ಮನಾಭನ್ ರವರ ಜೊತೆ ಜೊತೆಗೆ ಕಮಲಾದಾಸ್ ರೂ ಬರೆಯತೊಡಗಿದರು… ಸೋದರಮಾವ, ತಂದೆ, ತಾಯಿ ಮುಂತಾದವರು ಹೇಳಿದ ದಟ್ಟವಾದ ಜೀವನಾನುಭವಗಳಿಗೆ ಅವರು ಅಕ್ಷರ ರೂಪವನ್ನು ಕೊಟ್ಟರು. ಪ್ರಣಯ, ಪ್ರೀತಿ, ಪ್ರೇಮ, ವಾತ್ಸಲ್ಯ ಹಾಗೂ ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳ ಕುರಿತಾದ ಅವರ ರಚನೆಗಳು ಈಗಲೂ ಪ್ರಸ್ತುತ. ಕೇರಳದ ಗ್ರಾಮೀಣ ಬದುಕಿನ ಮುಗ್ಧತೆಗಳನ್ನು ಅವರು ತಮ್ಮ ಕತೆಗಳಲ್ಲಿ ಹಿಡಿದಿಟ್ಟಿದ್ದಾರೆ. ನಗರದ ಸಂಘರ್ಷಯುಕ್ತ ಆತಂಕಕಾರಿ ಬದುಕನ್ನು ಮನುಷ್ಯ ಮನಸ್ಸುಗಳ ಸಂಕೀರ್ಣತೆಗಳನ್ನು ಅವರು ತೆರೆದಿಟ್ಟಿದ್ದಾರೆ… ಬಾಲ್ಯ ಕಾಲವನ್ನು ಕೇರಳ ಮತ್ತು ಕಲ್ಕತ್ತಾದಲ್ಲಿ ಅವರು ಕಳೆದರು. ಮಾತೃಭಾಷೆ ಮಲಯಾಳಂನ್ನು ಮಮೆಯಲ್ಲಿಯೇ ಕಲಿತರು. ಕಲ್ಕತ್ತಾದ ಬದುಕಿನ ಹಿನ್ನೆಲೆಯಲ್ಲಿ ಅವರು ರಚಿಸಿದ `ಸಮ್ಮರ್ ಇನ್ ಕಲ್ಕತ್ತಾ’ ಎಂಬ ಇಂಗ್ಗ್ಲಿಷ್ ಕವನ ಸಂಕಲನದಿಂದ ಅವರು ಜಗತ್ತಿನ ಸಾಹಿತ್ಯಾಸಕ್ತರ ಗಮನ ಸೆಳೆದರು. ಲೈಂಗಿಕತೆಯನ್ನು ಮತ್ತು ಸಲಿಂಗ ಕಾಮವನ್ನು ಹಸಿಹಸಿಯಾಗಿ ಬರೆದ ಆಧುನಿಕ ಲೇಖಕಿಯರಲ್ಲಿ ಕಮಲಾದಾಸ್ ಮೊದಲಿಗರೆಂದು ಸಾಹಿತ್ಯ ತಜ್ಞರ ಅಭಿಪ್ರಾಯವಾಗಿದೆ… ಅವರು ಬರೆದ ‘ಎಂಡೆಕತ’ (ನನ್ನ ಕತೆ) ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಾಗ ಕೇರಳದ ಸಾಹಿತ್ಯ ಪ್ರಪಂಚ ಅವರನ್ನು ಕಟು ಮಾತುಗಳಿಂದ ಟೀಕಿಸಿತ್ತು. ಅದು ಇಂಗ್ಲಿಷ್ ನಲ್ಲಿ ಬರೆದಾಗ ಪುನಃ ವಿವಾದಗಳಿಗೆ ಸಿಲುಕಿದ್ದರು. ಇವೆರಡು ಪುಸ್ತಕ ರೂಪದಲ್ಲಿ ಹೊರಬಂದಾಗ ಪ್ರತಿಭಟಿಸಿದ ಮಡಿವಂತರೇ ಅದನ್ನು ಕೊಳ್ಳಲು ಮುಗಿಬಿದ್ದರಂತೆ… ಇವರ ಮೈಸ್ಟೋರಿ’ ಕೃತಿಯು ಹದಿನೈದು ವಿದೇಶಿ ಭಾಷೆಗಳಿಗೆ ಅನುವಾದಗೊಂಡಿದೆ. ಈ ಕೃತಿ ತನ್ನ ಆತ್ಮ ಕತೆಯೆಂದು ಹೇಳಿ ಕಮಲಾದಾಸ್ ಅದರ ಮಾರಾಟವನ್ನು ಹೆಚ್ಚಿಸಿಕೊಂಡಿದ್ದರು. ಬಹಳ ವರ್ಷಗಳ ನಂತರಮೈಸ್ಟೋರಿ’ ತನ್ನ ಕಲ್ಪನೆಯ ಕೂಸೆಂದೂ, ಹಣಕ್ಕಾಗಿ ಬರೆದೆನೆಂದೂ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದರು‌ ಕಮಲಾದಾಸ್ ರು… ಇಂಗ್ಲಿಷ್ ನಲ್ಲಿ ಕವಿತೆಗಳನ್ನು ಬರೆದು ಹೊಸತೊಂದು ತರಂಗವನ್ನೇ ಜಗತ್ತಿನಾದ್ಯಂತ ಸೃಷ್ಟಿಸಿದ್ದ ಕವಯತ್ರಿ ಕಮಲಾದಾಸ್. `ಕನ್ ಫೆಷನಲ್ ಪೋಯೆಟ್ರಿ’ ಎಂಬ ನವೀನ ಮಾದರಿಯ ಪದ ಸಂಕುಲ, ಶೈಲಿಗಳು, ಹೆಣ್ಣಿನ ಮನಸ್ಸಿನ ಒಳತೋಟಿಯನ್ನು ಅನಾವರಣಗೊಳಿಸಿದೆ.. ಶೀಲ ಮತ್ತು ಅಶ್ಲೀಲಗಳ ನಡುವಿನ ಗೋಡೆಯನ್ನು ಅವರು ತಮ್ಮ ಬರಹಗಳಿಂದ ಕೆಡವಿ ಹಾಕಿದ್ದಾರೆ.`ಕವಿತೆಯೆಂದರೆ ಹಸುಗೂಸಿನಂತೆ’ ಎಂದು ಅವರು ಟಿ ವಿ ಸಂದರ್ಶನದಲ್ಲಿ ಹೇಳಿದ್ದರು… ಕವಿತೆಗಳನ್ನು ಅವರು ಸತ್ಯಕ್ಕೆ ಹೋಲಿಸುತ್ತಿದ್ದರು. ಸತ್ಯವನ್ನು ತಡೆಯುವುದು ಎಂದರೆ ಹೆರಿಗೆ ನೋವಿನಿಂದ ಬಳಲುತ್ತಿರುವ ಹೆಂಗಸಿಗೆ,`ನೀನು ಹಡೆಯಬಾರದು’ಎನ್ನುವಂತಿರುತ್ತದೆ ಎಂಬುದು ಅವರ ನಿಷ್ಟುರ ಅಭಿಪ್ರಾಯವಾಗಿತ್ತು… ೧೯೯೯ರ ಅಂತ್ಯದಲ್ಲಿ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು. ಗುರುವಾಯೂರ್ ಕೃಷ್ಣನ ಪರಮ ಭಕ್ತೆಯಾಗಿದ್ದ ಕಮಲಾದಾಸ್ ರವರು ಮತಾಂತರಗೊಂಡ ಕೂಡಲೆ ಕಮಲಾದಾಸ್ ‘ಸುರೈಯಾ’ (ನಸುಕಿನ್ ನಕ್ಷತ್ರ) ಎಂದು ಹೆಸರನ್ನು ಬದಲಾಯಿಸಿಕೊಂಡರು… ನನ್ನ ಕೃಷ್ಣ ನನ್ನ ಜೊತೆಯಲ್ಲೇ ಬಂದು ಮಹಮ್ಮದನಾಗಿದ್ದಾನೆ. ‘ಗುರುವಾಯೂರಿನಲ್ಲಿ ಈಗ ಕೃಷ್ಣ ಇಲ್ಲ.’ ಎಂದು ಹೇಳಿ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದರು. ಕೇವಲ ಬರವಣಿಗೆಯಲ್ಲಷ್ಟ್ರೇ ಅಲ್ಲ ಸಾರ್ವಜನಿಕ ಬದುಕಿನಲ್ಲಿಯೂ ಅವರು ಹೊಸ ಹಾದಿಯನ್ನು ಹುಡುಕಿದ್ದರು. ೧೯೮೪ರ ಲೋಕಸಭಾ ಚುನಾವಣೆಯಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು… ಆದರೆ ಅವರ ಸಾಹಿತ್ಯದ ಜನಪ್ರಿಯತೆ ಲೋಕಸಭೆ ಪ್ರವೇಶಿಸುವುದಕ್ಕೆ ಸಹಕಾರಿಯಾಗಲಿಲ್ಲ. ತನ್ನ ಪಾಲಿಗೆ ಬಂದ ಕೌಟುಂಬಿಕ ಆಸ್ತಿಯನ್ನು ಅವರು ಕೇರಳ ಸಾಹಿತ್ಯ ಆಕಾಡೆಮಿಗೆ ಬಳುವಳಿಯಾಗಿ ನೀಡಿದ್ದರು. ದೀನದಲಿತರು, ಅನಾಥ ಮಕ್ಕಳೆಂದರೆ ಅವರಿಗೆ ಅತೀವ ಅಕ್ಕರೆ. ತಮ್ಮ ಮೂವರು ಮಕ್ಕಳ ಜೊತೆಯಲ್ಲಿ ಇಬ್ಬರು ಅನಾಥ ಮಕ್ಕಳನ್ನೂ ದತ್ತು ತೆಗೆದುಕೊಂಡು ಪ್ರೀತಿ, ವಾತ್ಸಲ್ಯಗಳಿಂದ ಬೆಳೆಸಿ ಬದುಕಿನಲ್ಲಿ ಒಳ್ಳೆಯ ಸ್ಥಾನ ದೊರಕಿಸಿಕೊಟ್ಟಿದ್ದರು… ಭಾರತ ಸರಕಾರ ನೋಬೆಲ್ ಪ್ರಶಸ್ತಿಗೆ ಕಮಲಾದಾಸ್ ಹೆಸರನ್ನು ಶಿಫಾರಸು ಮಾಡಿತ್ತು. ಹ್ಜೈಸ್ಕೂಲ್ ಶಿಕ್ಷಣವನ್ನು ಪೂರೈಸುವ ಮೊದಲೆ‌ (೧೫ನೆ ವಯಸ್ಸಿಗೆ) ಅವರಿಗೆ ಮದುವೆ ಮಾಡಲಾಗಿತ್ತು. ಮುಂಬಯಿ, ಕಲ್ಕತ್ತಾ, ದೆಹಲಿಗಳಲ್ಲಿ ಅವರು ಬದುಕು ಕಂಡಿದ್ದರು… ಯಾವುದೇ ವಿಶ್ವವಿದ್ಯಾ ಲಯದ ಪದವಿಯನ್ನು ಪಡೆಯದ ಕಮಲಾದಾಸ್ ರ ಕೃತಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪಠ್ಯ ಪುಸ್ತಕಗಳಾಗಿವೆ. ‘ಸಮ್ಮರ್ ಇನ್ ಕಲ್ಕತ್ತಾ’, ಆಲ್ಫಬೆಟ್ ಆಫ್ ಲಸ್ಟ್, `ದಿ ಡಿಸೆಂಡೆನ್ಸ್, ಓಲ್ಡ್ ಪ್ಲೇ ಹೌಸ್’ ಕಲೆಕ್ಟೆದ್ ಪೋಯಮ್ಸ್, ಓನ್ಲಿ ದಿ ಸೋಲ್ ನೋಸ್ ಹೌ ಟು ಸಿಂಗ್, ಮುಂತಾದವುಗಳು ಅವರ ಇಂಗ್ಲಿಷ್ ಕೃತಿಗಳು… ಮಲಯಾಳಂನಲ್ಲಿ ಅವರು ಒಟ್ಟೂ ೨೪೫ ಕತೆಗಳನ್ನೂ,೧೦೩ ಕವಿತೆಗಳನ್ನೂ, ೧೧ ಕಾದಂಬರಿಗಳನ್ನೂ, ೩ ನಾಟಕಗಳನ್ನೂ, ೨ ಆತ್ಮಕತೆಗಳನ್ನೂ, ೨ ಪ್ರವಾಸ ಕತೆಗಳನ್ನೂ, ೧೫೩ ಲೇಖನಗಳನ್ನೂ ಮತ್ತು ಎಂಟು ಟಿಪ್ಪಣಿಗಳನ್ನೂ ಕಮಲಾದಾಸ್ ಬರೆದಿದ್ದಾರೆ. ಅವರ ಅನೇಕ ಕತೆ, ಕಾದಂಬರಿಗಳು ಚಲನಚಿತ್ರಗಳಾಗಿ ಯಶಸ್ವಿ ಕಂಡಿವೆ… ಅವರಿಗೆ ದೊರೆತ ಪ್ರಶಸ್ತಿಗಳು ಅನೇಕ. ೧೯೬೩ರಲ್ಲಿ ಪೆನ್ ಅವಾರ್ಡ್, ೧೯೬೪ರಲ್ಲಿ ಏಷ್ಯನ್ ಪೋಯೆಟ್ರಿ ಪ್ರೈಸ್, ೧೯೬೫ರಲ್ಲಿ ಕೇಂಟ್ ಅವಾರ್ದ್, ೧೯೬೭ರಲ್ಲಿ ಕೇರಳ ಸಾಹಿತ್ಯ ಆಕಾಡೆಮಿ ಅವಾರ್ದ್, ೧೯೮೫ರಲ್ಲಿ ಆಶಾನ್ ವರ್ಲ್ಡ್ ಅವಾರ್ಡ್, ೧೯೮೫ರಲ್ಲಿ ಕೆಂದ್ರ ಸಾಹಿತ್ಯ ಆಕಡೆಮಿ ಅವಾರ್ಡ್, ೧೯೮೭ ವರ್ಲ್ಡ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ನಿಂದ ಡಾಕ್ಟರೇಟ್, ೨೦೦೧ರಲ್ಲಿ ಕೇರಳ ಆಕಾಡೆಮು ಫೆಲೊಶಿಪ್, ಇತ್ಯಾದಿಗಳು… ಇದರ ಜೊತೆಗೆ ರಾಜ್ಯ ಚಲನಚಿತ್ರ ಪ್ರಶಸ್ತಿ, ವಯಲಾರ್ ರಾಮವರ್ಮ ಪ್ರಶಸ್ತಿಗಳು ಅವರಿಗೆ ಸಂದಿವೆ… ಕಮಲಾದಾಸ್ ಅವರು ಕೇರಳ ಫೋರೆಸ್ಟ್ ಬೋರ್ಡ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕೇರಳ ಶಿಶು ಸಂರಕ್ಷಣಾ ಸಮೀತಿಯ ಸದಸ್ಯೆ, ಸಾಹಿತ್ಯ ಅಕಾದೆಮಿಯ ಉಪಾಧ್ಯಕ್ಷೆ, ಇಲ್ಲಸ್ತ್ರೇಟೆಡ್ ವೀಕ್ಲಿ ಪತ್ರಿಕೆಯ ಕವನ ವಿಭಾಗದ ಸಂಪಾದಕಿಯಾಗಿಯೂ ಸೇವೆ ಸಲ್ಲಿಸಿದ್ದರು… ಬದುಕಿನುದ್ದಕ್ಕೂ ವಿವಾದಿತ ಲೇಖಕಿಯಾಗಿದ್ದ ಕಮಲಾದಾಸ್ ಮತಾಂತರಗೊಂಡು ಕೇರಳದಲ್ಲಿ ನೆಲೆಸಿದಾಗ ಬಹಳ ವಿರೋಧವನ್ನು ಎದುರಿಸಬೇಕಾಯಿತು. ಇದರಿಂದ ಬೇಸತ್ತು ಕೇರಳ ತೊರೆದು ತನ್ನ ಕಿರಿಯ ಮಗನೊಂದಿಗೆ ಪೂನಾದಲ್ಲಿ ನೆಲೆಸಿದ್ದರು. ೩೧-೫-೨೦೦೯ರಲ್ಲಿ ಅವರು ನಿಧನರಾದಾಗ ಇಸ್ಲಾಂ ಧರ್ಮಕ್ಕೆ ಅನುಗುಣವಾಗಿ ಕೇರಳದಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಯಿತು… ಇಂತಹ ಮಹತ್ವದ ಲೇಖಕಿಯ ಸಮಗ್ರ ಕತೆಗಳೂ ಮತ್ತು ಸಮಗ್ರ ಕಾದಂಬರಿಗಳೂ ಪುಸ್ತಕ ರೂಪದಲ್ಲಿ ಈಗ ಕನ್ನಡಿಗರಿಗೆ ದೊರೆಯುತ್ತಿದೆ.‌ ಕನ್ನಡಕ್ಕೆ ಅನುವಾದಿಸಿದವರು ಕೆ.ಕೆ.ಗಂಗಾಧರರವರು ಕಮಲಾದಾಸ್ ರ ಸಮಗ್ರ ಕಾದಂಬರಿಗಳನ್ನು ಅನುವಾದಿಸಿದವರು… ಹೀಗಿದೆ ಕಮಲಾದಾಸ್ ರ ಬದುಕು ಮತ್ತು ಬರಹ‌ ಅಂಥ ಹೇಳುತ್ತಲೇ ನನ್ನ ಬರಹವನ್ನು ಮುಗಿಸುತ್ತೇನೆ… *********** ಕೆ.ಶಿವು.ಲಕ್ಕಣ್ಣವರ ‌‌‌‌‌ ‌ ‌‌‌‌ ‌‌‌ —

ಕವಿ-ಪರಿಚಯ Read Post »

ಇತರೆ

ಪ್ರಬಂಧ

ಕರೊನ-ನೆಗಡಿ ಜ್ಯೋತಿ ಡಿ.ಬೊಮ್ಮಾ ಈಗ ಎಲ್ಲರೂ ಅಸ್ಪೃಶ್ಯರೆ ,ಒಬ್ಬರಿಂದ ಒಬ್ಬರು ದೂರ ಇರುವ ಅಸಹಾಯಕತೆ ತಂದೊಡ್ಡಿದ ಆ ಒಂದು ಚಿಕ್ಕ ವೈರಾಣುವಿಗೆ ಇಡೀ ಮನುಕುಲವೇ ಅಂಜಿ ನಡುಗುತ್ತಿದೆ. ಆಪ್ತವಾಗಬೇಕಿದ್ದ ಬಾಂಧವ್ಯಗಳು ಸಂಬಂಧಗಳು ಕರಗುತ್ತಿವೆ.ದೈಹಿಕ ಅಂತರ ಮನದಂತರವನ್ನು ದೂರಗೊಳಿಸುತ್ತಿದೆ ಒಬ್ಬರನ್ನೊಬ್ಬರು ಅನುಮಾನದಿಂದ ನೋಡಿಕೊಳ್ಳುತ್ತ ,ತಮ್ಮವರೊಡನೆಯೂ ಆಗಂತುಕರಂತೆ ಬದುಕುವಂತೆ ಮಾಡಿದ ಈ ಸಂದರ್ಭ ಯಾತಾನಾಮಯವಾಗಿದೆ. ಮನೆಯಲ್ಲಿ ಎಲ್ಲರೊಡನೆ ಬೆರೆತು ಊಟ ತಿಂಡಿ ಮಾಡುತಿದ್ದರೂ ಒಳಗೆಲ್ಲ ಎಕಾಂಗಿ ಭಾವ ,ಎನೋ ತಳಮಳ ಹೇಳಿಕೊಳ್ಳಲಾಗದ ಅಸಹಾಯಕತೆ ,ಹಿಂದೆಂದೂ ಕಾಡಿರದ ಅನಿಶ್ಚಿತತೆ ಮನ ಕೊರೆಯುವಂತೆ ಮಾಡುತ್ತಿದೆ. ಇಡೀ ದೇಶವೆ ಒಂದು ಕಾರಾಗೃಹವಾಗಿ ಎಲ್ಲರ ಸ್ವಾತಂತ್ರ್ಯ ಹರಣವಾಗಿ ಈಗ ಅಕ್ಷರಶಃ ಎಲ್ಲರೂ ಕೈದಿಗಳೆ. ಆಪತ್ತು ತಮ್ಮ ಮೇಲೆ ಯಾವಾಗ ಎರಗುವದೋ ಎಂಬ ಭಿತಿಯಲ್ಲಿ ದಿನಗಳನ್ನು ದೂಡುತ್ತ ಮತ್ತೆ ಮೊದಲಿನಂತೆ ಬದುಕು ಬಂಡಿ ಸಾಗಿಸುವ ದಿನಗಳ ಕನಸು ಕಾಣುತ್ತ ,ಕ್ಷಣಕೊಮ್ಮೆ ಬಣ್ಣ ಬದಲಾಯಿಸುವ ಭಾವನೆಗಳೊಂದಿಗೆ ಬೆರೆಯುತ್ತ ಇನ್ನೆಷ್ಟು ದಿನ ಹೀಗೆ ಎಂದು ಉತ್ತರವಿರದ ಪ್ರಶ್ನೆಗಳನ್ನು ಒಬ್ಬರಿಗೊಬ್ಬರು ಕೇಳುತ್ತ ದಿನ ದೂಡುವಂತಾಗಿದೆ.ಹಾಗೆ ನೋಡಿದರೆ ರೋಗ ಯಾರಿಗೂ ಹೊಸದಲ್ಲ .ರೋಗ ಇರದ ಮನುಷ್ಯ ನಿರಲು ಸಾಧ್ಯವೇ ,! ಕೆಮ್ಮು ನೆಗಡಿಯಂತ ಸಾಮಾನ್ಯ ರೋಗವೆ ರೋಕ್ಷವಾಗಿ ಬೆಳೆದು ಕಂಗೆಡುವಂತಾಗಿದೆ. ನನಗೂ ನೆಗಡಿಗೂ ಅವಿನಾಭಾವ ಸಂಬಂಧ.ವರ್ಷದ ಎಲ್ಲಾ ದಿನಗಳು ಅದು ನನಗೆ ಆಪ್ತ.ಇಷ್ಟು ವರ್ಷಗಳ ಸಂಗಾತಿಯಾದ ಅದರ ಮೇಲಿನ ಮುನಿಸು ಮಾಯವಾಗಿ ಅದರ ಉಪದ್ರವ ಸಹಿಸಿಕೊಳ್ಳುವದು ಕಲಿತಿದ್ದೆನೆ.ಹತ್ತು ಹದಿನಾರು ವಸ್ತುಗಳ ಅಲರ್ಜಿ ಇರುವ ನನ್ನ ಶರಿರಕ್ಕೆ ಆ ವಸ್ತುವಿನ ಸಂಪರ್ಕಕ್ಕೆ ಬಂದ ತಕ್ಷಣ ಸೀನುಗಳು ಜ್ಞಾಪಿಸುತ್ತವೆ .ತಕ್ಷಣವೇ ಎಚ್ಚೆತ್ತುಕೊಂಡು ಆ ವಸ್ತುವಿನಿಂದ ದೂರವಿರುತ್ತೆನೆ .ಆದರೂ ನನ್ನ ಸೀನುಗಳು ಮುನಿದು ಆ ಮುನಿಸು ಹೊರಹಾಕದೆ ಬಿಡವು . ಮೊದಮೊದಲು ನನ್ನ ಅಲರ್ಜಿ ಸೀನುಗಳನ್ನು ಗಂಭಿರವಾಗಿ ಪರಿಗಣಿಸುತ್ತಿದ್ದ ಮನೆಯವರು ಈಗೀಗ ಅದೊಂದು ಸಾಮಾನ್ಯ ಪ್ರಕ್ರಿಯೆ ಎಂಬಂತೆ ಕಾಣತೊಡಗಿದ್ದಾರೆ ಹೀಗಾಗಿ ಸೀನುಗಳು ನನ್ನ ಉಸಿರಾಟದಷ್ಟೆ ಸಾಮಾನ್ಯವಾಗಿರುವವು ನನಗೆ. ಆದರೆ ನಮ್ಮೆಜಮಾನರು ಇದಕ್ಕೆ ತದ್ವಿರುದ್ಧ ,ಒಂದೇ ಒಂದು ಸೀನು ಬಂದರು ಆಕಾಶವೆ ತಲೆ ಮೇಲೆ ಬಿದ್ದಂತೆ ಮೈ ಮುಖಕ್ಕೆಲ್ಲ ವಿಕ್ಸ ಬಳಿದುಕೊಂಡು ಮುಸುಕೆಳೆದು ಮಲಗಿಬೀಡೋರು. ಆ ರಂಪಾಟ ಮುಲುಗಾಟ ,ಮಾತ್ರೆಗಳು ಸಿರಪ್ ಗಳು, ಬಂದ ನೆಗಡಿಯನ್ನು ಆದಷ್ಟೂ ಬೇಗ ಓಡಿಸುವ ಧಾವಂತ ಆದರೂ ಜಪ್ಪಯ್ಯ ಎಂದರೂ ಜಗ್ಗದ ನೆಗಡಿ ಬಂದು ನಾಲ್ಕೈದು ದಿನ ಇದ್ದು ಆತಿಥ್ಯ ಸ್ವೀಕರಿಸಿಯೇ ಹೊಗುವದು.ಅದು ಇರುವವರೆಗೂ ಮನೆ ಒಂದು ಜಾತ್ರಯೇ ,ಬಿಸಿ ನೀರು ಕುಡಿಯುವದು ,ವಿಕ್ಸ ಹಾಕಿ ಹಬೆ ತೆಗೆದುಕೊಂಡು ಮುಖವೆಲ್ಲ ಕೆಂಪಗೆ ಮಾಡಿಕೊಂಡು ಹೋಂಕರಿಸುತ್ತ ,ಸೂರು ಹಾರಿಹೋಗುವಂತೆ ಸೀನುತ್ತ ಪರದಾಡುವದು ನೋಡಿದರೆ ನನಗೆ ಬರುವ ಸೀನುಗಳು ನಿರುಪದ್ರವಿಗಳೊ ಅಥವಾ ನಾನೇ ಅವುಗಳಿಗೆ ಒಗ್ಗಿಕೊಂಡಿರುವೆನೊ ತಿಳಿಯದು. ನೆಗಡಿ ಯಾವಾಗಲೂ ಆಪ್ತ ಕಾಯಿಲೆ ,ಒಬ್ಬರಿಗೆ ಬಂದರೆ ಮತ್ತೊಬ್ಬರನ್ನು ಸೆಳೆಯುತ್ತದೆ.ಕಣ್ಣು ಮೂಗಿನಲ್ಲಿ ಸುರಿಯುವ ನೀರನ್ನು ಸೊರ್ ಸಿರ್ ಎಂದೆನಿಸುತ್ತ ಕೆಂಪೇರಿದ ಮುಖವನ್ನು ನೋಡಿದವರು ಅಯ್ಯೊ ಎಂದು ಅನುಕಂಪ ತೊರಿಸಿ ನಮಗಾಗಿ ಮರಗುವರು ,ಅಂತಹ ಸಂದರ್ಭದಲ್ಲಿ ನಮ್ಮ ಕೆಲಸ ಕಾರ್ಯ ಗಳಿಗೂ ವಿನಾಯ್ತಿ ದೊರಕಿಸಿ ಕೊಡುವರು.ಎದುರಿನವರ ಪ್ರೀತಿಯ ಸ್ಪಂದನೆಗೆ ಮುದವಾದ ಮನ ನೆಗಡಿಯನ್ನು ಅಪಾಯ್ಯಮಾನವಾಗಿ ಅಪ್ಪಿಕೊಳ್ಳುವದು. ಕೆಲವರು ನೆಗಡಿ ಬಂದರೆ ಊಟ ತಿಂಡಿ ಬಿಟ್ಟು ಮುಷ್ಕರ ಹೂಡಿದಂತೆ ಇದ್ದು ಬಿಡುವರು.ನನಗೋ ನೆಗಡಿ ಬಂದರೆ ಬೇರೆ ದಿನಗಳಿಗಿಂತ ಹೆಚ್ಚಾಗಿ ತಿನ್ನುವ ಚಪಲವಾಗುತ್ತದೆ.ನೆಗಡಿಯಿಂದ ರುಚಿ ವಾಸನೆ ಕಳೆದುಕೊಂಡ ಗ್ರಂಥಿಗಳ ಚಿಗುರುವಿಕೆಗೆ ಹೊಸ ಬಗೆಯ ಖಾದ್ಯಗಳ ಸಮಾರಾಧನೆಯಾಗಲೆಬೇಕು .ಬೇರೆಲ್ಲಾ ರೋಗಗಳಿಗೆ ಉಟದಲ್ಲಿ ಪಥ್ಯ ಅನುಸರಿಸಿದರೆ ನೆಗಡಿಗೆ ಪಥ್ಯವೆ ಇಲ್ಲ.ಬಾಯಿ ರುಚಿ ಕೆಟ್ಟಿದೆಯೆಂದು ಹೇರಳವಾಗಿ ಉಪ್ಪು ಹುಳಿ ಖಾರದ ಅಡುಗೆಗಳು ಸಿಹಿ ಪದಾರ್ಥಗಳು ಎಗ್ಗಿಲ್ಲದೆ ಸೇವಿಸುತ್ತ ಹಾಗೆ ಸೀನುತ್ತ ,ಎಲ್ಲರಿಗೂ ನೆಗಡಿಯಾಗಿದೆ ಆರಾಮಿಲ್ಲ ಎಂದು ಹೇಳುತ್ತಲೆ ನೆಗಡಿಯನ್ನು ಪ್ರೀತಿಸುವ ಪ್ರತಿಯೊಬ್ಬರು ಇಲ್ಲಿವರೆಗೆ ನೆಗಡಿ ಒಂದು ರೋಗ ಎಂದು ಪರಿಗಣಿಸಿದ್ದೆ ಇಲ್ಲ. ಯಾವಾಗಾ ಈ ಕರೋನ ಮಾರಿ ಕಾಲಿಟ್ಟಿತ್ತೊ ನನ್ನ ಪ್ರೀತಿ ಪಾತ್ರ ನೆಗಡಿ ಎಲ್ಲರ ಕಂಗೆಣ್ಣಿಗೆ ಗುರಿಯಾಯಿತು.ಈಗ ಪ್ರತಿಯೊಬ್ಬರ ಕೆಮ್ಮು ಸೀನುಗಳು ಅನುಮಾನದಿಂದ ನೋಡುವಂತಾಗಿದೆ.ಕೆಲವೊಮ್ಮೆ ಒಗ್ಗರಣೆಯಿಂದ ಬರುವ ಸೀನುಗಳನ್ನು ಪ್ರಯತ್ನ ಪೂರ್ವ ಕವಾಗಿ ತಡೆಹಿಡಿಯುವ ಮನಸ್ಸಾಗುತ್ತಿದೆ. ಯಾರಾದರೂ ಕೇಳಿದರೆ ಅನುಮಾನ ಪಟ್ಟುಕೊಳ್ಳುವರು ಎಂಬ ಭಯದಿಂದ. ಮೊದಲೆಲ್ಲ ನೆಗಡಿಯಾದರೆ ಮನೆಯವರ ಅನುಕಂಪಕ್ಕೆ ಪಾತ್ರಳಾಗುತಿದ್ದ ನಾನು ,ಈಗ ಒಂದೇ ಒಂದು ಸೀನಿದರು ಎದುರಿನವರ ಕಣ್ಣಲ್ಲಿ ನೂರೆಂಟು ಪ್ರಶ್ನೆಗಳು ! ಅಂತಹುದರಲ್ಲಿ ಉಪದೇಶ ಬೇರೆ ,ಜಾಸ್ತಿ ಸೀನಬೇಡ ,ಯಾರಾದರು ಅಕ್ಕ ಪಕ್ಕದವರು ಕಂಪ್ಲೆಂಟ ಮಾಡಿದರೆ ಹೋಂ ಕಾರೈಂಟೈನ ನಲ್ಲಿ ಇರಬೇಕಾಗುತ್ತೆ ಎಂಬ ಅನುಮಾನ ಬೇರೆ.ಜೀವನವೆಲ್ಲ ಮನೆಯಲ್ಲೇ ಕಳೆಯುವ ನಾವು ಗೃಹಿಣಿ ಯರಿಗೆ ಮನೆ ಎಂದೂ ಬಂಧನ ಎನಿಸಿದ್ದೆ ಇಲ್ಲ. ಈಗ ಗೃಹಬಂಧನದಲ್ಲಿರುವ ಪುರುಷರಿಗೆ ಸ್ವಲ್ಪ ವಾದರೂ ಅರ್ಥ ವಾಗಿರಬೇಕು ,ದಿನವೆಲ್ಲ ಮನೆಯಲ್ಲಿ ಏನು ಮಾಡುತ್ತಿ ಎಂಬ ಪ್ರಶ್ನೆಯ ಉತ್ತರ. ಇಲ್ಲಿಯವರೆಗ ನೆಗಡಿ ಕೆಮ್ಮಿಗೆ ಪ್ರತ್ಯಕವಾದ ಔಷಧ ಲಭ್ಯವಿಲ್ಲ.ಅದು ಸರದಿಯಂತೆ ಬರುತ್ತದೆ ನಿರ್ಗಮಿಸುತ್ತದೆ. ಸಭೆ ಸಮಾರಂಭ ಜಾತ್ರಗಳಲ್ಲಿ ಹಿಂಡು ಹಿಂಡಾಗಿ ಓಡಾಡುತ್ತ ಒಬ್ಬರ ಬೆನ್ನಿಂದ ಒಬ್ಬರು ಸೀನುತ್ತ ಸಂಚರಿಸುವ ನಾವು ,ಮತ್ತೊಬ್ಬರು ಸಮೀಪವಾಗಿರುವಾಗಲೂ ದೂರ ನಿಂತು ಸೀನಬೇಕೆಂಬ ಕಲ್ಪನೆಯು ಇರದೆ ಆಕ್ಷಿಇ ..ಎಂದು ಸೀನಿದಾಗಲೂ ಇದೊಂದು ಸಾಮನ್ಯ ಪ್ರಕ್ರಿಯೆ ಎಂಬಂತೆ ನೋಡಿದ ನಮಗೆ ಈಗಿನ ಸಾಮಾಜಿಕ ಅಂತರ ಅರಗಿಸಿಕೊಳ್ಳಲು ಹಿಂಸೆಯಾಗುತ್ತಿದೆ. ಅದರೂ ಈ ಮಹಾಮಾರಿಯನ್ನು ನಿರ್ಮೂಲನೆ ಮಾಡಲು ಇವುಗಳನ್ನು ಅನುಸರಿಸದೆ ಬೇರೆ ದಾರಿಯಿಲ್ಲ. ಮತ್ತೊಬ್ಬರಿಂದ ನಮಗೆ ರೋಗ ಅಂಟಬಾರದು ಎಂದು ತಗೆದುಕೊಳ್ಳುವ ಮುಂಜಾಗ್ರತೆಯೊಂದಿಗೆ ನಮಗೆ ಬಂದಿದ್ದನ್ನು ಮತ್ತೊಬ್ಬರಿಗೆ ಹರಡದಂತೆ ಎಚ್ಚರವಹಿಸುವದು ತುಂಬಾ ಮುಖ್ಯವಾಗಿದೆ. **********************

ಪ್ರಬಂಧ Read Post »

ಇತರೆ

ಭಯವೇ ಅಪಾಯಕಾರಿ

ಕೊರೋನಾ ಮತ್ತು ಭಯ ಗಣೇಶಭಟ್,ಶಿರಸಿ ಕೊರೊನಾಕ್ಕಿಂತ ಅದರ ಕುರಿತಾದ ಭಯವೇ ಅಪಾಯಕಾರಿ ಕೊರೊನಾ ವೈರಸ್ ಸೋಂಕಿನ ಅಪಾಯದಿಂದ ಪಾರಾಗುವ ಅತ್ಯುತ್ತಮ ವಿಧಾನವೆಂದರೆ ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ಬೆಳೆಸುವುದು. ಅನಾರೋಗ್ಯದಿಂದ ಬಳಲುತ್ತಿರುವವರು ಈ ಸೋಂಕಿಗೆ ಬಹುಬೇಗ ಬಲಿಯಾಗುತ್ತಾರೆ. ಕೊರೊನಾದಿಂದಾಗಿ ಮೃತಪಟ್ಟವರಲ್ಲಿ ಹೆಚ್ಚಿನವರಿಗೆ ಒಂದಿಲ್ಲೊಂದು ವಿಧದ ಅನಾರೋಗ್ಯ ಇದ್ದುದು ಕಂಡು ಬಂದಿದೆ ಹಾಗೂ ಅವರಲ್ಲಿ ಹೆಚ್ಚಿನವರು ಅರವತ್ತಕ್ಕಿಂತ ಹೆಚ್ಚಿನ ವಯಸ್ಸಾದವರು. ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ಪೌಷ್ಠಿಕ ಆಹಾರ, ವ್ಯಾಯಾಮ, ಕಾಲಕಾಲಕ್ಕೆ ನೀರು ಸೇವನೆ, ಒಳ್ಳೆಯ ನಿದ್ದೆ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಒತ್ತಡರಹಿತವಾಗಿರಬೇಕು. ಸಸ್ಯಾಹಾರಿಗಳಲ್ಲಿ ಮಾಂಸಾಹಾರಿಗಳಿಗಿಂತ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆಂದು ವೈದ್ಯ ವಿಜ್ಞಾನ ಹೇಳುತ್ತದೆ. ಭಯ, ಆತಂಕಗಳಿಂದ ಬಳಲುತ್ತಿರುವ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ವಿವಿಧ ಗ್ರಂಥಿರಸ ( ಹಾರ್ಮೋನ್) ಗಳ ಸ್ರವಿಸುವಿಕೆಯ ಪ್ರಮಾಣ ಹೆಚ್ಚುತ್ತದೆ. ಇದರಿಂದಾಗಿ ಜೀರ್ಣಾಂಗ ವ್ಯವಸ್ಥೆಯ ಮೇಲೂ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಉದ್ದಿಗ್ನತೆಯಿಂದಾಗಿ ಉಸಿರಾಟದ ವೇಗ ಹೆಚ್ಚಿ ಆಳವಾದ ಶ್ವಾಸೋಚ್ಛಾಸ ಕ್ರಿಯೆ ನಡೆಯದೇ ಪುಪ್ಪುಸದಲ್ಲಿ ತುಂಬಿಕೊಂಡ ಮಲಿನ ವಾಯು ಹೊರಹೋಗದೇ ಅಲ್ಲಿಯೇ ಉಳಿದು ವಿವಿಧ ಸೋಂಕುಗಳಿಗೆ ಅವಕಾಶ ಮಾಡಿಕೊಡುತ್ತದೆ. ಆಹಾರಕ್ಕಾಗಿ ಕೊಲ್ಲಲ್ಪಡುವಾಗ ಪ್ರಾಣಿಗೆ ಆಗುವ ಆತಂಕ, ಭಯಗಳಿಂದ ಅದರ ದೇಹದಲ್ಲಾಗುವ ರಾಸಾಯನಿಕ ಬದಲಾವಣೆಯೇ ಮಾಂಸಾಹಾರಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವ ಪ್ರಮುಖ ಕಾರಣಗಳಲ್ಲಿ ಒಂದು. ಅದರ ದೇಹದಲ್ಲಿ ಕೂಡಾ ವಿವಿಧ ಗ್ರಂಥಿರಸ ಹಾಗೂ ರಾಸಾಯನಿಕಗಳ ಸ್ರವಿಸುವಿಕೆಯಾಗಿ ಅವು ರಕ್ತ ಮತ್ತು ಮಾಂಸದಲ್ಲಿ ಸೇರಿಕೊಳ್ಳುತ್ತವೆ. ಮನುಷ್ಯ ಇಂತಹ ಮಾಂಸವನ್ನು ತಿಂದಾಗ ಈ ರಾಸಾಯನಿಕಗಳು ಅವನ ದೇಹವನ್ನು ಸೇರಿ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತವೆ. ಹಲ್ಲಿನ ರಚನೆ, ಬಾಯಿಯ ಲಾಲಾರಸ, ಜಠರದಲ್ಲಿ ಸ್ರವಿಸುವ ಆಮ್ಲ, ಕರುಳಿನ ಉದ್ದ ಮುಂತಾಗಿ ಮಾನವನ ಇಡೀ ಜೀರ್ಣಾಂಗ ವ್ಯವಸ್ಥೆ ಸಸ್ಯಾಹಾರ ಅದರಲ್ಲೂ ವಿಶೇಷವಾಗಿ ಹಣ್ಣು- ಹಂಪಲು – ತರಕಾರಿಗಳ ಸೇವನೆ ಮತ್ತು ಜೀರ್ಣಿಸಿಕೊಳ್ಳುವ ಸಲುವಾಗಿ ರೂಪುಗೊಂಡಿವೆ. ಇವ್ಯಾವವೂ ಮಾಂಸಾಹಾರವನ್ನು ಜೀರ್ಣಿಸಿಕೊಳ್ಳಲು ಪೂರಕವಾಗಿಲ್ಲ. ಆದರೂ ನಾಲಿಗೆಯ ಚಪಲದಿಂದ ಮಾಂಸಾಹಾರ ಸೇವಿಸುವ ಮಾನವರ ನಿಸರ್ಗ ವಿರೋಧಿ ಕ್ರಮವು ರೋಗನಿರೋಧಕ ಶಕ್ತಿ ಕುಗ್ಗಲು ಇನ್ನೊಂದು ಪ್ರಮುಖ ಕಾರಣ. ಜನರ ನಡುವೆ ಅಂತರವಿದ್ದಾಗ ಕೊರೊನಾ ವೈರಸ್ ಹರಡುವಿಕೆಗೆ ತಡೆ ಉಂಟಾಗುತ್ತದೆಂಬ ಕಾರಣದಿಂದಾಗಿ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಇದೊಂದು ಕ್ರಮದಿಂದಲೇ ಕೊರೊನಾ ಪ್ರಸರಣ ತಡೆಗಟ್ಟಲು ಸಾಧ್ಯವಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಹೇಳುತ್ತಿದ್ದಾರೆ. ಆದರೂ ಪಾಶ್ವಾತ್ಯ ದೇಶಗಳಲ್ಲಿ ಈ ರೀತಿ ಮಾಡುತ್ತಿದ್ದಾರೆಂಬ ಕಾರಣಕ್ಕಾಗಿ ಭಾರತದಲ್ಲೂ ಸಾಮಾಜಿಕ ಅಂತರ ಕಾಪಾಡುವದಕ್ಕಾಗಿ ಸಾರ್ವಜನಿಕ ಬದುಕನ್ನು ಸ್ಥಬ್ಧಗೊಳಿಸುವ ಯತ್ನ ನಡೆದಿದೆ. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ವಿಮಾನ, ರೈಲು, ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಂಗಡಿ, ಮುಂಗಟ್ಟುಗಳನ್ನು ಮುಚ್ಚಲಾಗಿದೆ. ವ್ಯಾಪಾರ- ವಹಿವಾಟು , ಉದ್ಯಮ ಕಾರ್ಖಾನೆಗಳನ್ನು ಮುಚ್ಚಿಸಲಾಗಿದೆ. ಸಮೂಹ ಮತ್ತು ದೃಶ್ಯ ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಿರುವ ವಿಧಾನಗಳಿಂದಾಗಿ ಸಾಮಾಜಿಕ ಅಂತರವನ್ನು ಕಾದುಕೊಳ್ಳಲು ಕೈಗೊಂಡ ಕ್ರಮಗಳಿಂದ ಸಿಗಬಹುದಾದ ಅಲ್ಪಸ್ವಲ್ಪ ಪ್ರಯೋಜನವೂ ನಿರರ್ಥಕವಾಗುತ್ತಿದೆ. ಯಾಕೆಂದರೆ ಕನ್ನಡದ ಸುದ್ದಿ ವಾಹಿನಿಗಳು ಜನರಲ್ಲಿ ಭಯಭೀತಿ ಬಿತ್ತುವ ಕಾರ್ಯ ಮಾಡುತ್ತಿವೆ. ಇಂತಹ ಸಂದರ್ಭಗಳಲ್ಲಿ ಧನಾತ್ಮಕವಾದ ಸುದ್ದಿಗಳಿಗೆ ಮಹತ್ವ ನೀಡುವ ಬದಲು ನಕಾರಾತ್ಮಕ ಸುದ್ದಿಗಳಿಗೇ ಮಹತ್ವ ನೀಡಲಾಗುತ್ತಿದೆ. ಲಾಕ್‍ಡೌನ್ ಮಾಡುವುದರಿಂದಲೇ ಕೊರೊನಾ ವೈರಸ್‍ನ್ನು ನಿಯಂತ್ರಿಸಲು ಸಾಧ್ಯವೆಂಬುದಾಗಿ ಕನ್ನಡ ಸುದ್ದಿ ವಾಹಿನಿಗಳು ಎರಡು ದಿನಗಳಿಡೀ ಪ್ರಚಾರ ಮಾಡಿದವು. ಸರ್ಕಾರಕ್ಕೆ ಸಲಹೆ ನೀಡಲು ಪೈಪೋಟಿ ನಡೆಸಿ, ಬೆಳಿಗ್ಗೆಯಿಂದ ಸಂಜೆಯವರೆಗೂ ಕೂಗಾಡಿ ಮುಖ್ಯಮಂತ್ರಿಯವರು ಅನಿವಾರ್ಯವಾಗಿ ಲಾಕ್‍ಡೌನ್ ಘೋಷಿಸುವಂತೆ ಮಾಡಲಾಗಿದೆ. ಈ ಸುದ್ದಿವಾಹಿನಿಗಳು ನಡೆಸಿದ ಚರ್ಚೆಗಳಲ್ಲಿ ನಿರ್ವಹಣಾಕಾರರು ತಮ್ಮ ಅಭಿಪ್ರಾಯಗಳನ್ನು ಹೇರುತ್ತಿದ್ದ ರೀತಿ, ಅವರು ಕೂಗಾಡುತ್ತಿದ್ದ ಪರಿ ಅಸಹ್ಯ ಹುಟ್ಟಿಸುತ್ತಿದ್ದವು. ಇವರೆಲ್ಲರೂ ಹಿಂದಿ ವಾಹಿನಿಯ ನಿರ್ವಹಣಾಕಾರರೊಬ್ಬರಿಂದ ಪ್ರೇರಿತವಾಗಿದ್ದುದು ಸ್ಪಷ್ಟವಾಗಿ ಗೋಚÀರಿಸುತ್ತಿತ್ತು. ತಮ್ಮ ಟಿಆರ್‍ಪಿ ಹೆಚ್ಚಿಸಿಕೊಳ್ಳುವ ಭರದಲ್ಲಿ ಹಲವು ಸಕಾರಾತ್ಮಕ ಸಂಗತಿಗಳನ್ನು ಇವರು ಉಪೇಕ್ಷಿಸಿದ್ದು ಎದ್ದು ಕಾಣುತ್ತಿತ್ತು. ಕನ್ನಡ ಸುದ್ದಿವಾಹಿನಿಗಳ ಅಧ್ವಾನದಿಂದಾಗಿ ತಾವು ಮನೆಯಲ್ಲೇ ಕೂಡಿ ಹಾಕಿಕೊಂಡಿರಬೇಕಾಗುತ್ತದೆ. ಅಗತ್ಯದ ವಸ್ತುಗಳು ಸಿಗುವಂತೆ ಇಲ್ಲವೇನೋ ಎಂಬ ಆತಂಕ ಜನರಲ್ಲಿ ಸೃಷ್ಟಿಯಾಗಿ 23 ರ ಸಾಯಂಕಾಲ ದಿನಸಿ, ತರಕಾರಿ ಮುಂತಾದ ಅಗತ್ಯ ವಸ್ತುಗಳ ಖರೀದಿಗಾಗಿ ಜನರು ಅಂಗಡಿಗಳೆದುರು ಮುಗಿ ಬೀಳುವ ಪರಿಸ್ಥಿತಿ ಕರ್ನಾಟಕದ ತುಂಬ ಕಂಡು ಬಂದಿತು. ಅನಗತ್ಯವಾಗಿ ಸೃಷ್ಟಿಯಾದ, ತಪ್ಪಿಸಬಹುದಾಗಿದ್ದ ಇಂತಹ ಜನದಟ್ಟಣೆಯಿಂದಾಗಿ ಸಾಮಾಜಿಕ ಅಂತರ ಕಾದುಕೊಳ್ಳುವ ಉದ್ದೇಶವೇ ವಿಫಲಗೊಂಡಿತ್ತು. ಕೊರೊನಾ ಸೋಂಕಿತರೆಲ್ಲರೂ ಸತ್ತೇ ಹೋಗುತ್ತಾರೆಂಬ ರೀತಿಯಲ್ಲಿ ಕನ್ನಡ ಸುದ್ದಿವಾಹಿನಿಗಳು ಪ್ರಸ್ತುತಪಡಿಸುತ್ತಿದ್ದಾರೆ. ಅತಿ ಹೆಚ್ಚು ಸಾವು ಸಂಭವಿಸಿದ ಇಟಲಿ ಮತ್ತು ಚೀನಾಗಳಲ್ಲಿ ಕೂಡಾ ಮರಣ ಹೊಂದಿದ ಸೋಂಕಿತರ ಪ್ರಮಾಣ ಶೇಕಡಾ 4 ನ್ನು ಮೀರಿಲ್ಲ. ಭಾರತದಲ್ಲಿ ಕೊರೊನಾದಿಂದ ಸಂಭವಿಸಿದ ಮರಣಗಳ ಸಂಖ್ಯೆಯನ್ನು ಬಿತ್ತರಿಸುವುದರ ಜೊತೆಗೇ ಗುಣಮುಖರಾದವರ ಸಂಖ್ಯೆ ಎಷ್ಟೊ ಪಟ್ಟು ಹೆಚ್ಚಿಗೆ ಇದ್ದರೂ ಕೂಡಾ ಅದನ್ನು ಹೇಳುವುದಿಲ್ಲ. ಮರಣ ಹೊಂದಿದವರಿಗೆ ತೀವ್ರ ಸ್ವರೂಪದ ಬೇರೆ ಯಾವುದಾದರೂ ಕಾಯಿಲೆ ಇತ್ತೇ ಎಂಬ ಕುರಿತಾಗಿ ಕೂಡಾ ಇವರು ಮಾಹಿತಿ ನೀಡದೇ ಜನರಲ್ಲಿ ಅನಗತ್ಯ ಭಯ ಹುಟ್ಟಿಸುತ್ತಿದ್ದಾರೆ. ವೈರಸ್ ಸೋಂಕಿತ ದೇಶಗಳ ಮಾಹಿತಿ ನೀಡುವಾಗ ಈ ಪೀಡೆ ನಿಯಂತ್ರಿಸಿರುವ ರಷಿಯಾ, ಉತ್ತರಕೋರಿಯಾ ಮುಂತಾದ ದೇಶಗಳ ಸಕಾರಾತ್ಮಕ ವಿಷಯಗಳನ್ನು ಉಲ್ಲೇಖಿಸುವ ಬದ್ಧತೆ ಈ ವಾಹಿನಿಗಳಿಗೆ ಇಲ್ಲವಾಗಿದೆ. ಇಡೀ ರಾಜ್ಯದ ಲಾಕ್‍ಡೌನ್‍ಗಾಗಿ ಪ್ರತಿಪಾದಿಸುವ ಟಿವಿ ವಾಹಿನಿಗಳಿಗೆ, ದಿನನಿತ್ಯ ದುಡಿದು ಉಣ್ಣ ಬೇಕಾದವರ ಸಂಕಷ್ಟದ ಕುರಿತು ಯೋಚಿಸಲೂ ಪುರುಷೊತ್ತಿಲ್ಲ. ಬೆಳೆದ ತರಕಾರಿ, ಹಣ್ಣು- ಹಂಪಲು, ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗದೇ ಹಾನಿ ಅನುಭವಿಸುತ್ತಿರುವ ರೈತರ ಭವಣೆ ಕಾಣುವುದಿಲ್ಲ. ಅನಿವಾರ್ಯವಾಗಿ ವ್ಯವಹಾರ– ವಹಿವಾಟುಗಳನ್ನು ಬಂದ್ ಮಾಡುವ ಚಿಕ್ಕಪುಟ್ಟ ವ್ಯಾಪಾರಿಗಳು, ರಸ್ತೆ ಬದಿ ವ್ಯಾಪಾರಿಗಳು, ಚಿಲ್ಲರೆ ಮಾರುಕಟ್ಟೆಯ ವರ್ತಕರು, ಸಣ್ಣ ಉದ್ದಿಮೆಗಳ ಮಾಲೀಕರ ಸಂಕಷ್ಟ ಇವರಿಗೆ ಅರ್ಥವಾಗುವುದಿಲ್ಲ. ಪ್ರತಿ ತಿಂಗಳು ಸಂಬಳ ಪಡೆಯುವ ಅಥವಾ ನಿಶ್ಚಿತ ಆದಾಯವಿರುವ ವರ್ಗದವರನ್ನು ಮನೆಯಲ್ಲೇ ಕೂಡಿ ಹಾಕುವುದರಿಂದ ಅವರಿಗೆ ಆರ್ಥಿಕ ತಲೆಬಿಸಿ ಇರದು.. ಈ ಸೌಲಭ್ಯ ಭಾರತದ 80% ಗೂ ಹೆಚ್ಚಿನ ಜನರಿಗೆ ಇಲ್ಲ. ಆದರೆ ಸಾಲದ ಕಂತು ಕಟ್ಟಲೇಬೇಕಾದ ರಿಕ್ಷಾ, ಟ್ಯಾಕ್ಸಿ ಮಾಲಿಕರಿಗೆ ದುಡಿಮೆಯ ಅವಕಾಶವನ್ನೇ ರದ್ದುಪಡಿಸಿದರೆ ಅವರ ಸಂಕಷ್ಟಕ್ಕೆ ಯಾವ ರೀತಿಯ ಪರಿಹಾರ ಸಿಗುವಂತೆ ಮಾಡಬಹುದೆಂಬ ಕುರಿತು ಈ ಸುದ್ದಿವಾಹಿನಿಗಳು ಚಿಂತನೆ ನಡೆಸುವುದಿಲ್ಲ. ಮಾರ್ಚ್ 31 ರೊಳಗೆ ಸಾಲದ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುತ್ತೇವೆಂಬ ಸರ್ಕಾರದ ಘೋಷಣೆಯ ಲಾಭ ಕೃಷಿಕರಿಗೆ ದೊರಕಬೇಕೆಂದರೆ, ಅವರು ಬೆಳೆದ ಮಹಸೂಲು ಮಾರಾಟವಾಗಬೇಕು. ಇಡೀ ದೇಶದಲ್ಲಿ ಲಾಕ್‍ಡೌನ್ ಇರುವ ಇಂದಿನ ಪರಿಸ್ಥಿತಿಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕೃತ್ರಿಮವಾಗಿ ಇಳಿಕೆ ಕಾಣುತ್ತಿರುವಾಗ ಸಾಲ ಮರುಪಾವತಿಯ ದಿನಾಂಕವನ್ನು ಮುಂದೂಡುವುದು ಅನಿವಾರ್ಯ. ಈ ಕುರಿತಾಗಿ ಈ ಸುದ್ದಿವಾಹಿನಿಗಳು ಅಭಿಯಾನವನ್ನೇಕೆ ನಡೆಸುತ್ತಿಲ್ಲ ? ಜನತಾ ಕಫ್ರ್ಯೂ ಹೆಸರಿನಲ್ಲಿ ನಡೆದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ರಾಜ್ಯಗಳು ಅಧಿಕಾರದ ದುರ್ಬಳಕೆ ಮಾಡಿದ್ದನ್ನು ಎತ್ತಿ ಹೇಳುವ ಬದಲಿಗೆ ಪೋಲೀಸರ ಹೇಳಿಕೆಗೆ ಮಹತ್ವ ನೀಡಲಾಯಿತು. ಸ್ವಯಂ ಪ್ರೇರಿತರಾಗಿ ಬಂದ್‍ನಲ್ಲಿ ಪಾಲ್ಗೊಳ್ಳಿ, ಇಲ್ಲವಾದಲ್ಲಿ ನಿಮ್ಮ ಮೇಲೆ ಕೇಸ್ ಹಾಕಲಾಗುವುದು ಎಂಬ ರಾಜ್ಯ ಪೋಲೀಸ್ ಮುಖ್ಯಸ್ಥರು, ಜಿಲ್ಲಾಪೋಲೀಸ್ ವರಿಷ್ಠಾಧಿಕಾರಿಗಳ ಹೇಳಿಕೆಗಳೇ ಮಹತ್ವ ಪಡೆದವು. ಇದೇ ರೀತಿಯ ಹೇಳಿಕೆಗಳನ್ನು ಕೆಲವೆಡೆ ಪೋಲೀಸರು ಮೈಕ್ ಮೂಲಕ ಪ್ರಚಾರ ನಡೆಸಿದರು. ಒಂದೆಡೆ ಸುದ್ದಿ ವಾಹಿನಿಗಳಿಂದ ಬಿತ್ತರವಾಗುವ, ಭಯ ಹುಟ್ಟಿಸುವ ಅರ್ಧಂಬದ್ಧ ಮಾಹಿತಿಗಳು, ಇನ್ನೊಂದೆಡೆ ಅಧಿಕಾರಿಗಳ ದಬಾವಣೆಯಿಂದಾಗಿ ಕಳೆದ ರವಿವಾರದ ಜನತಾ ಕಫ್ರ್ಯೂ ಯಶಸ್ವಿಯಾದಂತೆ ಕಂಡೀತೇ ಹೊರತೂ ನೈಜವಾದ ಸ್ವಪ್ರೇರಣೆಯಿಂದಲ್ಲ. ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ ವೈದ್ಯರು, ಪೋಲೀಸರು, ಮಾಧ್ಯಮದವರು, ಸೈನಿಕರು, ಸ್ವಯಂ ಸೇವಕರು, ಮುಂತಾದವರಿಗಾಗಿ ಕೃತಜ್ಞತೆ ಸಲ್ಲಿಸಲು ರವಿವಾರ ಸಂಜೆ 5 ಗಂಟೆಗೆ ನಡೆಸಿದ ಚಪ್ಪಾಳೆ ಮತ್ತು ಘಂಟನಾದ ಅಭಿಯಾನದ ಭಾವುಕತೆಗೆ ಒಳಗಾದ ಜನತೆ ವಾಸ್ತವವನ್ನು ಗಮನಿಸಲೇ ಇಲ್ಲ. ಮದ್ಯಪ್ರದೇಶದ ಸರ್ಕಾರವನ್ನು ಪತನಗೊಳಿಸಲು ಸಾವಿರಾರು ಕೋಟಿ ರೂಪಾಯಿ ಖರ್ಚುಮಾಡಿ ಅನೈತಿಕ ವಿಧಾನದಿಂದ ತಮ್ಮ ಪಕ್ಷದ ಸರ್ಕಾರ ಸ್ಥಾಪಿಸಲು ಶ್ರಮಿಸಿದ ಪ್ರಧಾನಿಯವರ ಸ್ವಾರ್ಥ ಜನರಿಗೆ ಕಾಣಲೇ ಇಲ್ಲ. ದೇಶೀಯ ಪರಿಸ್ಥಿತಿಗೆ ಅನುಗುಣವಾಗಿ ಕೊರೊನಾ ವಿರುದ್ಧದ ಹೋರಾಟ ಕೈಗೊಳ್ಳದೇ, ಪಾಶ್ಚಾತ್ಯ ದೇಶಗಳ ಪದ್ಧತಿಯನ್ನು ಇಲ್ಲಿಯೂ ಅಳವಡಿಸಿ ಅಂತರಾಷ್ಟ್ರೀಯ ಮನ್ನಣೆಗಾಗಿ ನಡೆಸುವ ಪ್ರಯತ್ನವನ್ನು ಜನರು ಗಮನಿಸಲೇ ಇಲ್ಲ. ಕೇಂದ್ರ ಸರ್ಕಾರದ ಆಪ್ತವಲಯದವರು ಸಾಲಮರುಪಾವತಿ, ಮಾಡದಿರುವ ಕಾರಣಕ್ಕಾಗಿ ಸಮಸ್ಯೆಗೊಳಗಾದ ಯಸ್ ಬ್ಯಾಂಕ್‍ನ ಪುನಶ್ಚೇತನಕ್ಕಾಗಿ ಸರ್ಕಾರಿ ಸ್ವಾಮ್ಯದ ಎಸ್ ಬಿಐನ ನಿಧಿಯನ್ನು ಬಳಸಿದ್ದು ಜನರಿಗೆ ಅರ್ಥವೇ ಆಗಲಿಲ್ಲ. ಖಾಸಗಿ ಬ್ಯಾಂಕ್ ರಕ್ಷಣೆಗಾಗಿ ಒಂದೇ ವಾರದಲ್ಲಿ ಧಾವಿಸಿ ಬಂದ ಕೇಂದ್ರ ಸರ್ಕಾರಕ್ಕೆ ಆರು ತಿಂಗಳಿನಿಂದಲೂ ಪರಿತಪಿಸುತ್ತಿರುವ ಸಹಕಾರಿ ರಂಗದ ಪಿ.ಎಮ್.ಸಿ ಬ್ಯಾಂಕ್‍ನ ಗ್ರಾಹಕರು ಕಾಣುವುದೇ ಇಲ್ಲ. ಕುಸಿಯುತ್ತಿರುವ ಅರ್ಥವ್ಯವಸ್ಥೆಯಿಂದ ಸಂಕಷ್ಠಕ್ಕೊಳಗಾಗಿರುವ ಜನಸಾಮಾನ್ಯರ ಮನಸ್ಸನ್ನು ಬೇರೆಡೆ ತಿರುಗಿಸುವ ಕ್ರಮವಾಗಿ ನಡೆಸುವ ಚಪ್ಪಾಳೆ ಅಭಿಯಾನದಂತಹ ಜನಪ್ರಿಯ ಕಾರ್ಯಕ್ರಮಗಳಿಗೆ ಸುದ್ದಿ ಮಾದ್ಯಮಗಳೂ ಬೆಂಬಲ ನೀಡುತ್ತಿವೆ. ಯಾಕೆಂದರೆ ಅದರ ಮಾಲೀಕರುಗಳು ಮೊದಲ ಗುಂಪಿಗೆ ಸೇರಿದವರು. ಜನರು ಗುಂಪುಗುಂಪಾಗಿ ಸೇರಿ ಚಪ್ಪಾಳೆ, ಜಾಗಟೆ ಬಡಿಯುತ್ತಾ ಮೆರವಣಿಗೆ ಹೋಗಲು ಮಾಧ್ಯಮಗಳ ಕ್ಯಾಮರಾಗಳು ಪ್ರೇರಣೆ ನೀಡಿ, ಸಾಮಾಜಿಕ ಅಂತರ ಕಾಪಾಡುವ ಮೂಲ ಉದ್ದೇಶವನ್ನೇ ಮರೆಸಿವೆ. ವ್ಯಕ್ತಿ ಪೂಜೆ ಮತ್ತು ನಾಯಕರ ಕುರಿತು ಅಂಧಾಭಿಮಾನ , ಚಮಾಚಾಗಿರಿ ಮತ್ತು ನಾಯಕರ ಕುರಿತು ಚಪ್ಪಾಳೆ, ಶಂಖ ಧ್ವನಿ ಮುಂತಾದವುಗಳಿಂದ ಕೊರೊನಾ ಭೂತವನ್ನು (?) ದೂರ ಓಡಿಸಲು ಸಾಧ್ಯ. ಅಂಥವರಿಗೆ ಮಾರ್ಚ್ 22 ಅಮವಾಸ್ಯೆಯಾಗಿ ಕಾಣುತ್ತದೆ. (ಇನ್ನೂ 2 ದಿನ ತಡವಿದ್ದರೂ ಸಹ) ಸೋಂಕು ತಡೆಗಾಗಿ ಮುಖಕ್ಕೆ ಗವಸು ಧರಿಸಲು ಮಾಧ್ಯಮಗಳ ಪ್ರೇರಣೆಯೂ ಕಾರಣ. ಸೋಂಕಿತ ವ್ಯಕ್ತಿಯು ಸೀನಿದಾಗ, ಕೆಮ್ಮಿದಾಗ ವೈರಸ್ ಗಾಳಿಯಲ್ಲಿ ಸೇರಬಾರದೆಂಬ ಕಾರಣಕ್ಕೆ ಮುಖಕ್ಕೆ ಗೌಸ್ ಧರಿಸಬೇಕು. ಆದರೆ, ಆರೋಗ್ಯವಂತರು ಮುಖದ ಗವಸು ಧರಿಸಿ ಓಡಾಡುತ್ತಾರೆ. ಇದು ಗೊಡ್ಡು ಕಂದಾಚಾರಿಗಳ ಮಡಿಧಾರಣೆಯಂತಿದೆ. ಪೂಜೆ ಮತ್ತು ಊಟದ ಸಮಯದಲ್ಲಿ ರೇಷ್ಮೆ ಬಟ್ಟೆ ಧಾರಣೆ ಒಳಿತೆಂಬ ಕಾರಣಕ್ಕೆ , ತಿಂಗಳುಗಟ್ಟಲೇ ತೊಳೆಯದೇ ಇದ್ದರೂ ಅದೇ ವಸ್ತ್ರವನ್ನು ಮಡಿ ಎಂದು ಭಾವಿಸಿ ಬಳಸುವ ರೀತಿಯಿದು. ಸೋಂಕು ತಡೆಯಲು ಮೂಗು, ಬಾಯಿ ಕಣ್ಣನ್ನು ಪದೇ ಪದೇ ಕೈ ತೊಳೆಯದೇ ಮುಟ್ಟಬಾರದು ಎಂಬುದು ಸರಿ. ಮುಖಕ್ಕೆ ಗವಸು ಧರಿಸಿದಾಗ ಆಗುವ ಅಲವರಿಕೆಯಿಂದ ಅಥವಾ ಅದನ್ನು ಸರಿಪಡಿಸಲು ಕೈ ಪದೇಪದೇ ಅಲ್ಲಿಗೇ ಹೋಗುತ್ತದೆ. ಮುಖಗೌಸನ್ನು ಪ್ರತಿಬಾರಿ ಧರಿಸುವಾಗಲೂ ಅದನ್ನು ಶುಚಿಗೊಳಿಸಲು ಸಾಧ್ಯವೇ? ಭಾರತೀಯರಲ್ಲಿ ರೋಗನಿರೋಧಕ ಶಕ್ತಿ ಪಾಶ್ಚಾತ್ಯರಿಗೆ ಹೋಲಿಸಿದರೆ ತುಂಬಾ ಹೆಚ್ಚು. ನಮ್ಮ ಜೀವನದ ರೀತಿ, ನೀತಿಗಳು, ವಿಧಿ- ವಿಧಾನಗಳು ಆರೋಗ್ಯ ರಕ್ಷಣೆಗೆ ಪೂರಕ. ಉದಾಹರಣೆಗಾಗಿ ಕೈ ಕುಲುಕುವ ಬದಲಿಗೆ ನಮಸ್ಕಾರ. ಊಟಕ್ಕೂ ಮೊದಲು ಕೈಕಾಲು ತೊಳೆಯುವುದು, ಹೊರಗಿನಿಂದ ಬಂದು ಮನೆ ಸೇರಿದೊಡನೆ ಬಟ್ಟೆ ಬದಲಾಯಿಸುವುದು . ಪ್ರಾರ್ಥನೆ, ಪೂಜೆ ಇತ್ಯಾದಿ. ಕೊರೊನಾ ವೈರಾಣುವಿಗೆ ನೀಡುತ್ತಿರುವ ಪ್ರಚಾರದಷ್ಟು ಅದು ಪ್ರಬಲವಲ್ಲ. ಈ ಸೋಂಕನ್ನು ಸಮರ್ಥವಾಗಿ ಎದುರಿಸುವ ಸಾಮಥ್ರ್ಯ ಸಾಮಾನ್ಯ ಭಾರತೀಯರ ದೇಹದಲ್ಲಿ, ಬದುಕಿನ ರೀತಿಯಲ್ಲಿ ಅಂತರ್ಗತವಾಗಿದೆ. ಸರ್ಕಾರ ಮತ್ತು ಮಾಧ್ಯಮಗಳು ಮಾಡಬೇಕಾದ ಮೊದಲ ಕ್ರಮವೆಂದರೆ ಜನರಲ್ಲಿ ಅನಗತ್ಯವಾದ ಭಯ ಮೂಡಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ಕೈಗೊಳ್ಳುತ್ತಿರುವ ಪಾಶ್ಚಾತ್ಯ ದೇಶಗಳ ಅಂಧಾನುಕರಣೆಯ ಕ್ರಮಗಳು ಹಾಗೂ ಇವು ಮಾಧ್ಯಮಗಳಲ್ಲಿ ಅತಿಯಾಗಿ ವಿಜೃಂಭಿತವಾಗಿರುವುದರಿಂದ ಜನರು ಭಯಭೀತರಾಗಿದ್ದಾರೆ, ಆತಂಕಗೊಂಡಿದ್ದಾರೆ. ಆದ್ದರಿಂದಲೇ ಬೆಂಗಳೂರಿನಿಂದ

ಭಯವೇ ಅಪಾಯಕಾರಿ Read Post »

You cannot copy content of this page

Scroll to Top